Homeಕರ್ನಾಟಕನಟ ಚೇತನ್‌‌ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ

ನಟ ಚೇತನ್‌‌ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ

- Advertisement -
- Advertisement -

“ಚಿತ್ರರಂಗಕ್ಕೇಕೆ ರಾಜಕಾರಣ?” ಎಂಬ ಪ್ರಶ್ನೆ ಕೆಲವು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೇಳಿ ಬರತ್ತಾದರೂ ಇಂದು ಯಾವ ಕ್ಷೇತ್ರವೂ ರಾಜಕಾರಣದಿಂದ ಮುಕ್ತವಾಗಿಲ್ಲ ಎನ್ನುವುದು ದಿಟ. ರಾಜಕಾರಣವೆಂಬುದು ಕೇವಲ ಮತರಾಜಕಾರಣವಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ, ಸಮುದಾಯಗಳ ತಿಳಿವಿನ ಪ್ರಶ್ನೆಯೂ ಹೌದು. ಸಾಂಸ್ಕೃತಿಕ ರಾಜಕಾರಣವನ್ನು ಒಳಗೊಳ್ಳದೆ, ಸಂವಾದಕ್ಕೆ ತೆರೆದುಕೊಳ್ಳದ ಕ್ಷೇತ್ರದಿಂದ ಬರುವ ಕೊಡುಗೆಗೆ ಯಥಾಸ್ಥಿತಿಯನ್ನು ಮುಂದುವರಿಸುವ ಇರಾದೆ ಇರುತ್ತದೆ. ಇದು ಸಂವಿಧಾನದ ಆಶಯಗಳನ್ನು ಈಡೇರಿಸದಿರುವ ಅಪಾಯಕ್ಕೆ ಎಡೆಮಾಡಿಕೊಡುತ್ತದೆ.

ಕನ್ನಡ ನಾಡು, ನುಡಿ ಎಂದು ಉದ್ದುದ್ದನೆಯ ಸಂಭಾಷಣೆಗಳು ಕನ್ನಡ ಸಿನಿಮಾಗಳಲ್ಲಿ ಹೇರಳವಾಗಿ ಸಿಗುತ್ತವೆ. ಸಾಮುದಾಯಿಕ ಭಾವುಕತೆಯನ್ನು ಚಿತ್ರರಂಗ ಬಳಸಿಕೊಳ್ಳುವುದು ತಪ್ಪೇನಲ್ಲ. ಆದರೆ ಇದೇ ಚಿತ್ರರಂಗದಲ್ಲಿ ದೀರ್ಘ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಹೇಳಿಯೊಂದನ್ನು ನೀಡಿ, ಟ್ರೋಲ್‌ ಪಡೆಗೆ ಆಹಾರವಾದಾಗ, ಚಿತ್ರರಂಗದ ಇತರರು ನಿರ್ಭಾವುಕವಾಗಿ ನಿಲ್ಲುವುದು ಎಷ್ಟು ಸರಿ? ಈ ಪ್ರಶ್ನೆಯನ್ನೇ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ಕೇಳುತ್ತಿರುವುದು.

ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಮತ್ತು ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಚೇತನ್‌ ಅವರ ಮಾತುಗಳು ಕನ್ನಡ ಚಿತ್ರರಂಗದ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿವೆ.

ಚೇತನ್‌ ಅವರು ಹೇಳಿದಿಷ್ಟು:

“ನಮ್ಮ ಸಮಾಜದಲ್ಲಿ ಯಾರೂ ಕೂಡ ಪ್ರಶ್ನಾತೀತರಲ್ಲ. ಅದು ಸ್ವಾಮೀಜಿಯಾಗಿರಬಹುದು, ರಾಜಕಾರಣಿಯಾಗಿರಬಹುದು, ಸಿನಿಮಾ ಸ್ಟಾರ್‌ ಆಗಿರಬಹುದು. ಎಲ್ಲ ಸಂಗತಿಗಳನ್ನು ಪ್ರಶ್ನೆ ಮಾಡುವ ಹಕ್ಕಿದೆ. ನಾವು ಹೋರಾಟ ಮಾಡುತ್ತಿರುವುದು ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನಡುವೆ ಘರ್ಷಣೆ ತರಲು ಅಲ್ಲ. ನಮ್ಮನ್ನು ಜೈಲಿಗೆ ಹಾಕಲು ಯತ್ನಿಸುತ್ತಿರುವ ಬ್ರಾಹ್ಮಣ್ಯದ ವಿರುದ್ಧ ನಡೆಯುತ್ತಿರುವ ಹೋರಾಟ.”

“ಬ್ರಾಹ್ಮಣ್ಯ ಎಂದರೆ ಏನು? ಹುಟ್ಟಿದ ತಕ್ಷಣ ಕೆಲವರನ್ನು ಶ್ರೇಷ್ಠರು, ಕೆಲವರನ್ನು ಕನಿಷ್ಠರು ಎಂದು ಹೇಳುತ್ತದೆ. ಇದನ್ನು ನಾವು ಯಾವುದೇ ರೀತಿಯಲ್ಲೂ ಒಪ್ಪಲು ಆಗುವುದಿಲ್ಲ. ಜಾತಿ, ಧರ್ಮ, ಲಿಂಗ, ವರ್ಗ ಎಲ್ಲವನ್ನೂ ಮೀರಿ ನಾವೆಲ್ಲರೂ ಸರಿ ಸಮಾನರು. ವಿಚಾರದ ಶಕ್ತಿ ನಮ್ಮಲ್ಲಿ ಇರಬೇಕು. ಹಂಸಲೇಖ ಅವರು ಮೈಸೂರಿನಲ್ಲಿ ಕೆಲವು ಮಾತುಗಳನ್ನು ಆಡಿದರು. ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರಿಗೆ ಮಾತನಾಡಲು ಹಕ್ಕಿದೆ. ಮಾತನಾಡಿದ್ದಾರೆ. ಅದರ ಪರ, ವಿರೋಧದ ಚರ್ಚೆಗಳು ಆಗಲಿ. ನಮ್ಮ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ, ದೇಶಕ್ಕೆ ಚರ್ಚೆ ಒಳ್ಳೆಯದು.”


ಇದನ್ನೂ ಓದಿರಿ: ಇದು ಆಹಾರದ ಪ್ರಶ್ನೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ: ಹಂಸಲೇಖರ ಪರ ನಿಂತ ನಟ ಚೇತನ್‌


“ಹಂಸಲೇಖ ಅವರು ಕ್ಷಮೆ ಕೇಳಿದರು. ಅವರ ಮಾತಿಗೂ ಬೆಲೆ ಕೊಡೋಣ. ಕ್ಷಮೆ ಕೇಳುವ ಅವಶ್ಯಕತೆ ಇಲ್ಲವಾದರೂ ಕೇಳಿದ್ದಾರೆ, ಅದು ಅವರಿಷ್ಟ. ಆದರೆ ಕ್ಷಮೆ ಕೇಳಿದ ಬಳಿಕವೂ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದವರು ಬಂದು, ಆರು ತಿಂಗಳ ಹಿಂದೆ ನನ್ನನ್ನು ಜೈಲಿಗೆ ಹಾಕಲು ಹೇಗೆ ಯತ್ನಿಸಿದರೋ ಹಾಗೆಯೇ ಅದೇ ಬಸವನಗುಡಿ ಪೊಲೀಸ್ ಠಾಣೆಯಲ್ಲೇ, ಅದೇ ಸೆಕ್ಷನ್‌‌ 295 ಅಡಿಯಲ್ಲಿ, ಅದೇ ಸಂಘಟನೆ ದೂರು ನೀಡಿತು. ಹಂಸಲೇಖ ಅವರ ಅಭಿಪ್ರಾಯ ಹೇಳಲು ಬಿಡದೆ, ಧಮ್ಕಿ ಹಾಕಿದರು. ನೀವು ಬೃಂದಾವನಕ್ಕೆ ಬಂದು ಬಹಿರಂಗವಾಗಿ ಕ್ಷಮೆ ಕೇಳಿ, ಅಂಗಲಾಚಿ ಎಂದು ಒತ್ತಾಯಿಸಿದರು. ಹಂಸಲೇಖರು ಕ್ಷಮೆ ಕೇಳುವ ಅಗತ್ಯವಿಲ್ಲ. ನೀವು ಸಾವಿರಾರು ವರ್ಷಗಳಿಂದ ದಬ್ಬಾಳಿಕೆ ಮಾಡಿರುವವರು, ಫಲಾನುಭವಿಗಳು, ಬಹುಜನರ ಮೇಲೆ ದಬ್ಬಾಳಿಕೆ ಮಾಡಿದ್ದಕ್ಕೆ ಯಾವ ಕ್ಷಮೆ ಕೇಳುತ್ತೀರಿ?”

“ಬ್ರಾಹ್ಮಣ್ಯದ ವ್ಯವಸ್ಥೆ ಹೋರಾಟದಿಂದ ಗೆದ್ದಿಲ್ಲ. ಅವರು ಕುತಂತ್ರದಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಬಂದಿದ್ದಾರೆ. ಇವತ್ತು ಅದೇ ರೀತಿ ಮಾಡಿದ್ದಾರೆ. ಆಧುನಿಕ ಇತಿಹಾಸದಲ್ಲಿ ಮೇಲ್ವರ್ಗದ ಗಂಡಸರು ರಸ್ತೆಗೆ ಬಂದು ಹೋರಾಡಿದ್ದು ಮಂಡಲ್‌ ಕಮಿಷನ್‌ ಬಂದಾಗ ಮಾತ್ರ. ಮಂಡಲ್‌ ಕಮಿಷನ್‌ ಓಬಿಸಿಗಳಿಗೆ ಮೀಸಲಾತಿ ನೀಡಬೇಕು ಎಂದಿತ್ತು. ಆಗ ಬೀದಿಗೆ ಬಂದರು. ಈ ಬ್ರಾಹ್ಮಣ್ಯದ ವ್ಯವಸ್ಥೆ ಸಾಮಾಜಿಕ ನ್ಯಾಯಕ್ಕಾಗಿ ಏನೇ ಮಾಡಿದರೂ ವಿರೋಧಿಸುತ್ತದೆ. ಹಂಸಲೇಖ ಅವರಂಥವರು ಮಾತನಾಡುವುದನ್ನು ಕಸಿದುಕೊಳ್ಳಲು ನೋಡುತ್ತದೆ. ‌ಅವರು ಕುತಂತ್ರ ಮಾಡುತ್ತಾರೆ. ನಾವು ಎಚ್ಚರಿಕೆ ವಹಿಸಬೇಕು.”

“ನನಗೆ ಬಹಳ ಬೇಜಾರಾದ ಸಂಗತಿ ಏನೆಂದರೆ, ಹದಿನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೀನಿ. ಚಿತ್ರರಂಗದಲ್ಲಿ ಬದುಕಿರುವ ಹೀರೊ, ಡೈರೆಕ್ಷರ್‌ ಯಾರನ್ನೇ ಪರಿಗಣಿಸಿದರೂ ಎಲ್ಲರಿಗಿಂತ ಹೆಚ್ಚು ಸಾಧನೆ ಮಾಡಿದವರು ಹಂಸಲೇಖರೆಂದರೆ ಸುಳ್ಳಾಗುವುದಿಲ್ಲ. ಆದರೆ ಹಂಸಲೇಖ ಅವರಿಗೆ ಈ ರೀತಿ ಆದಾಗ ಎಲ್ಲಿದ್ದಾರೆ ಇವರು?”

“ನಾವೆಲ್ಲ ಒಂದು ಕುಟುಂಬ ಎಂದು ಕನ್ನಡ ಚಿತ್ರರಂಗ ದೊಡ್ಡದಾಗಿ ಮಾತನಾಡುತ್ತೆ. ಕುಟುಂಬದ ಹಿರಿಯ ಸದಸ್ಯನ ಮೇಲೆ ದಬ್ಬಾಳಿಕೆ ಆಗುತ್ತಿರುವಾಗ, ದಾಳಿ ನಡೆಯುತ್ತಿರುವಾಗ, ಮಾನಸಿಕ ಹಿಂಸೆ, ಕಿರುಕುಳ ಆಗುತ್ತಿರುವಾಗ ಎಲ್ಲಿದೆ ನಿಮ್ಮ ಧ್ವನಿ? ನಿಮಗೆ ಕಾಳಜಿ ಇಲ್ಲವಾ? ನಿಮಗೆ ಧೈರ್ಯ ಇಲ್ಲವಾ? ಹಂಸಲೇಖರ ಬಗ್ಗೆ ನಿಮಗೆ ಗೌರವ ಇಲ್ಲವಾ? ಇಲ್ಲ ಅಂತ ನಮಗೆ ಕಾಣುತ್ತೆ.”

“ಐದಾರು ತಿಂಗಳ ಹಿಂದೆ ಕೊರೊನಾ ಎರಡನೇ ಅಲೆ ಬರುವ ಮುಂಚೆ ಸರ್ಕಾರ ಶೇ.100ರಷ್ಟು ಚಿತ್ರಮಂದಿರ ಭರ್ತಿ ಮಾಡಲು ಆಗದು, ಶೇ. 50ರಷ್ಟು ಭರ್ತಿ ಮಾತ್ರ ಸಾಧ್ಯ ಎಂದು ನಿಯಮ ಮಾಡಿತು. ಆಗ ಈ ಸೋ ಕಾಲ್ಡ್‌ ತಾರೆಗಳು ದೊಡ್ಡದಾಗಿ ಮಾತನಾಡಲು ಶುರುಮಾಡಿದರು. ಅನ್ಯಾಯ, ಅನ್ಯಾಯ ಎಂದರು. ಈ ಸಿನಿಮಾ ತಾರೆಗಳಿಗೆ ಯಾವಾಗ ಅನ್ಯಾಯವಾಗುತ್ತದೆ ಗೊತ್ತಾ? ಅವರ ಬಂಡವಾಳಕ್ಕೆ, ಬ್ಯಾಂಕ್‌ ಬ್ಯಾಲೆನ್ಸ್‌ಗೆ ತೊಂದರೆಯಾದಾಗ ಮಾತ್ರ. ಹಂಸಲೇಖರ ವಾಕ್‌ ಸ್ವಾತಂತ್ರ್ಯ ಕಿತ್ತು ಹಾಕುತ್ತಿರುವುದು ಅನ್ಯಾಯ. ಈ ಅನ್ಯಾಯದಲ್ಲಿ ನಿಮ್ಮ ಧ್ವನಿ ಎಲ್ಲಿದೆ?”

“ಯಾರು ದ್ವೇಷ ಕಾರುತ್ತಾರೋ, ಅಸಮಾನತೆ ವಿರೋಧಿಸುತ್ತಾರೋ, ಸಂವಿಧಾನ ವಿರೋಧಿಸುತ್ತಾರೋ ಅವರು ಸಂಘಟನಾತ್ಮಕವಾಗಿ ಬಲವಾಗುತ್ತಿದ್ದಾರೆ. ಸಮಾನತೆ, ಪ್ರೀತಿ, ಸೌಹಾರ್ದತೆ ಎಂದು ಹೋರಾಡುವ ನಾವು ಹೆಚ್ಚು ಸಂಘಟಿತರಾಗಬೇಕು, ಹೆಚ್ಚು ಕೆಲಸ ಮಾಡಬೇಕು..”


ಇದನ್ನೂ ಓದಿರಿ: ಮನುವಾದಿಗಳಿಂದ ವಿರೋಧ ಇದ್ದೇ ಇರುತ್ತದೆ: ಹಂಸಲೇಖರ ಪರ ನಿಂತ ಪ್ರಿಯಾಂಕ್‌ ಖರ್ಗೆ


“ನನ್ನ ಬಳಿ ಬಹಳ ಜನ ಬಂದು ಹೇಳುತ್ತಾರೆ. ನೀವು ನಮ್ಮವರೇ ಎಂದು. ಅವರು ಯಾವ ರೀತಿ ಹೇಳುತ್ತಾರೆಂದು ಅರ್ಥವಾಗುವುದಿಲ್ಲ. ನಮ್ಮವರೇ ಎಂದರೆ ಹುಟ್ಟಿರುವ ಜಾತಿಯಿಂದ ನಮ್ಮವರಾಗಲ್ಲ. ಒಂದೇ ಧರ್ಮದಲ್ಲಿ ಹುಟ್ಟಿದ್ದರಿಂದ ನಮ್ಮವರಾಗಲ್ಲ. ಒಂದೇ ಊರಿನಿಂದ ನಮ್ಮವರಾಗಲ್ಲ. ಜೊತೆಯಲ್ಲಿ ಹುಟ್ಟಿದ ರಕ್ತಸಂಬಂಧದಿಂದ ನಮ್ಮವರಾಗಲ್ಲ. ನಮ್ಮಂಥ ಸಮಾಜದ ಬಗ್ಗೆ ಕಾಳಜಿ ಇರುವವರು, ಸಮಾನತೆಗಾಗಿ ಹೋರಾಟ ಮಾಡುವವರು ನಮ್ಮವರಾಗುತ್ತಾರೆ. ಈ ಸಿದ್ಧಾಂತವನ್ನು ಉಳಿಸುತ್ತೇವೆ, ಅದನ್ನು ಈ ದೇಶದಲ್ಲಿ ಕಟ್ಟುತ್ತೇವೆ..”

“ನೀವು ಬೇರೆ ದೇಶದವರು ಎಂದು ನನಗೆ ಹೇಳುತ್ತಾರೆ. ನಾನು ಅಪ್ಲಿಕೇಷನ್ ಹಾಕಿಕೊಂಡು ಅಮೆರಿಕದಲ್ಲಿ ಹುಟ್ಟಲಿಲ್ಲ. ಕರ್ನಾಟಕಕ್ಕಾಗಿ ಕೆಲಸ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ನಾವು ಸುಮಾರು 75 ,000 ಸಾವಿರ ವರ್ಷಗಳ ಮೂಲ ನಿವಾಸಿ ಪರಂಪರೆಯವರಾಗಿದ್ದೇವೆ. ನಮ್ಮ ತಂದೆ-ತಾಯಿಗಳು, ನಾನು ಈ ಕರ್ನಾಟದ ಫಲಾನುಭವಿಗಳು. ಅದಕ್ಕೆ ವಾಪಸ್ ಬಂದಿದ್ದೇನೆ. ಆದರೆ ಬ್ರಾಹ್ಮಣ್ಯ ಎಂಬುದು ಈ ನೆಲದ ಸಿದ್ಧಾಂತವಲ್ಲ. ಪರದೇಶದ ಸಿದ್ಧಾಂತ. ಈ ಬ್ರಾಹ್ಮಣ್ಯವನ್ನು ಆಚೆ ಹಾಕುವವರೇ ನಿಜವಾದ ದೇಶಭಕ್ತರು. ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಪೆರಿಯಾರ್‌‌, ಕುವೆಂಪು ಮಾರ್ಗದಲ್ಲಿ ನಡೆಯೋಣ. ವೈಜ್ಞಾನಿಕತೆ ಬೆಳೆಸೋಣ…”

-ಇಷ್ಟು ಚೇತನ್ ಅವರು ಆಡಿದ ಮಾತುಗಳು.

ಚೇತನ್‌ ಅವರು ನಟರಷ್ಟೇ ಅಲ್ಲ, ಸಾಮಾಜಿಕ ಕಾರ್ಯಕರ್ತರೂ ಹೌದು. ಹೀಗಾಗಿ ಇಷ್ಟು ನಿರ್ಭೀತವಾಗಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡಬಲ್ಲರು. ಎಲ್ಲ ನಟರೂ ಚೇತನ್‌ ರೀತಿ ದಿಟ್ಟವಾಗಿ ಮಾತನಾಡಬೇಕು ಎಂದು ನಿರೀಕ್ಷಿಸಲಾಗದು ಎಂಬುದೂ ವಾಸ್ತವವೇ. ಆದರೆ ಅವರು ಚಿತ್ರರಂಗದ ಕುರಿತು ಎತ್ತಿರುವ ಪ್ರಶ್ನೆಗಳು ಗಮನಾರ್ಹ. ಚೇತನ್‌ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಹಂಸಲೇಖರ ಪರ ದನಿ ಎತ್ತಿದ್ದಾರೆ. ಹಂಸಲೇಖರ ಪರ ಕೆಲವರು ಸಾರ್ವಜನಿಕವಾಗಿಯಲ್ಲದೆ, ವೈಯಕ್ತಿಕವಾಗಿ ಬೆಂಬಲಿಸಿರಬಹುದು. ಆದರೆ ಎಂದಿಗೂ ಬಹಿರಂಗವಾಗಿ ನೀಡುವ ಬೆಂಬಲಕ್ಕೆ ಹೆಚ್ಚು ಮಹತ್ವವಿರುತ್ತದೆ ಮತ್ತು ಅದಕ್ಕೆ ಟ್ರೋಲ್ ಪಡೆಗಳನ್ನು ಹಿಮ್ಮೆಟ್ಟಿಸಲು ಹೆಚ್ಚು ಶಕ್ತಿ ಇರುತ್ತದೆ.

ಹಂಸಲೇಖರ ಚಿತ್ರಸಾಹಿತ್ಯವನ್ನು ಗಂಭೀರವಾಗಿ ಗಮನಿಸಿದರೆ, ಹಂಸಲೇಖರು ಸಾಧ್ಯವಾದಲೆಲ್ಲ ಸಮ ಸಮಾಜದ ಆಶಯವನ್ನು, ಶೋಷಣೆ ವಿರುದ್ಧದ ದನಿಯನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಹಂಸಲೇಖ ಅವರು ದಶಕಗಳ ಕಾಲ ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆ ನೀಡಿದವರು. ತಮ್ಮ ಸಂಗೀತ ಹಾಗೂ ಸಾಹಿತ್ಯದ ಮೂಲಕ ಕನ್ನಡಿಗರ ಮನಗೆದ್ದವರು. ಇಂಥವರು ಇತ್ತೀಚಿನ ದಿನಗಳಲ್ಲಿ ಒಂದು ಸಾಮಾಜಿಕ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗದು ಎಂದರೆ ಏನರ್ಥ? ಅಸ್ಪೃಶ್ಯತೆ ನಿವಾರಣೆಗೆ ಒಂದು ಕಾರ್ಯಸೂಚಿಯನ್ನು, ಸಾಂವಿಧಾನಿಕ‌ ಆಶಯವನ್ನು ವ್ಯಕ್ತಪಡಿಸಿದ ಕೂಡಲೇ ಒತ್ತಡಗಳು, ಟ್ರೋಲ್ ಗಳು ಸೃಷ್ಟಿಯಾಗುತ್ತವೆ, ಮತ್ತೆ ಕ್ಷಮೆಯಾಚಿಸಲು ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದರೂ ಕನ್ನಡ ಚಿತ್ರರಂಗ ಮೌನವಾಗಿರುವುದು ಏಕೆ? ಹಂಸಲೇಖ ಅವರಂತಹ ಹಿರಿಯ ಜೀವದ ಕಥೆಯೇ ಹೀಗಾದರೆ ಕನ್ನಡ ಚಿತ್ರರಂಗದಿಂದ ಏನೋ ಬದಲಾವಣೆಯನ್ನು ತರಲು ಹೊರಟಿರುವವರ ಭವಿಷ್ಯದ ಕಥೆ ಏನು?

ಕನ್ನಡ ಚಿತ್ರರಂಗದಲ್ಲಿ ಕೆಲವು ಪ್ರಜ್ಞಾವಂತರಿದ್ದಾರೆ. ಅಂಥವರೆಲ್ಲ ಹಂಸಲೇಖರ ಪರ ನಿಂತು, ನೀವು ಹೇಳಿದ್ದು ಸರಿ ಇತ್ತು, ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಬಹಿರಂಗವಾಗಿ ಘೋಷಿಸುವ ಅಗತ್ಯ ಇಂದು ಹೆಚ್ಚಿದೆ. ಇನ್ನೂ ಕಾಲ ಮೀರಿಲ್ಲ. ಅಂತಹ ದಿನವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಬಹುದೇ?


ಇದನ್ನೂ ಓದಿರಿ: ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

8 COMMENTS

  1. ಈ ಚೇತನ್ ಒಬ್ಬ ಅಬ್ಬೇಪಾರಿ ಅಯೋಗ್ಯ, ಮುಠ್ಠಾಳ. ಇವನನ್ನು ಯಾರೂ ಇಷ್ಟ ಪಡಲ್ಲ. ತಾನೇ ದೊಡ್ಡ ವಿದ್ವಾಂಸ ಎಂದು ಭಾವಿಸಿದ್ದಾನೆ. ಬ್ರಾಹ್ಮಣ ದ್ವೇಶಿ ಈತ ಬದುಕಲು ಯೋಗ್ಯತೆ ಇಲ್ಲ

  2. ಬ್ರಾಹ್ಮಣ ್ಯ ದ ವಿರೋಧಿ,
    ಹುಟ್ಟಿನಿಂದ ಬ್ರಾಹ್ಮಣ(ಹಾರವ) ರನ್ನು ತೆಗಳಬೇಕಾಗಿಲ್ಲ.

  3. ಬೀದಿಯಲ್ಲಿ ಗಲಾಟೆ ಮಾಡಾದು ತಪ್ಪು , ಆದರೆ ಸಂವಿಧಾನಬದ್ದವಾಗಿ complaint ಕೊಡೋದು ಹೇಗೆ ತಪ್ಪು, ನಾವು ದೇವರಕೋಣೆಯಲ್ಲಿ ಪೂಜಿಸುವ ಯತಿಗಳು , ದೇವರ ಬಗೆಗೆ ಹೀಗೆ ಮಾತಾಡಬಾರದು, ಸ್ವತಃ ನೋವುಂಡಿರುವವರು ಬೇರೆಯವರ ನೋವಿನ ಬಗೆಗೂ ಸೂಕ್ಷವಾಗಬೇಕು ಅಲ್ಲವೇ ?

  4. Cinema illa baduk illa…. yaru kelsa kodthaella…. rajakiya ke… thayaeee….. rajakiya jasti bekalla vote bank ge thayaee….
    En janma evandhu…. America idha oogudhu ache hakidhare…elli bandhu… drama start madidhane

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...