Homeಬಹುಜನ ಭಾರತಬಹುಜನ ಭಾರತ; ಸಾರವನು ಧಿಕ್ಕರಿಸಿ ರೂಪವನು ಪೂಜಿಸುವ ಮೋಸ

ಬಹುಜನ ಭಾರತ; ಸಾರವನು ಧಿಕ್ಕರಿಸಿ ರೂಪವನು ಪೂಜಿಸುವ ಮೋಸ

- Advertisement -
- Advertisement -

ಮೊನ್ನೆ ಸರಿದು ಹೋದಸಂವಿಧಾನ ದಿನಾಚರಣೆಯಂದು ಮಾತನಾಡಿದ ಪ್ರಧಾನಮಂತ್ರಿಯವರು, “ನಾವು ಇಂದೇನಾದರೂ ಸಂವಿಧಾನವನ್ನು ಬರೆಯಬೇಕಾಗುವ ಪರಿಸ್ಥಿತಿ ಇದ್ದಿದ್ದರೆ, ಅದರ ಒಂದೇ ಒಂದು ಪುಟವನ್ನು ಕೂಡ ಬರೆಯಲಾಗುತ್ತಿರಲಿಲ್ಲ” ಎಂದರು.

ಆದರೆ ಸಂವಿಧಾನವನ್ನು ತಿದ್ದಿ ಬರೆಯುವ ಮಾತುಗಳನ್ನು ಅವರ ಪರಿವಾರ ಕಾಲಕಾಲಕ್ಕೆ ಆಡುತ್ತಲೇ ಬರುತ್ತಿದೆ. ಪ್ರಧಾನಿಯವರು ಒಂದೆಡೆ ಸಂವಿಧಾನವನ್ನು ಹೊಗಳುತ್ತ ಮತ್ತೊಂದೆಡೆ ಅದನ್ನು ಬೀಳುಗಳೆಯುವ ಹೆಜ್ಜೆಗಳನ್ನೇ ಇಡುತ್ತ ಬಂದಿದ್ದಾರೆ. ಅವರ ಪರಿವಾರ ಸಾವಿರ ಲಕ್ಷ ನಾಲಗೆಗಳಲ್ಲಿ ಸಂವಿಧಾನವನ್ನು ಹಳಿಯುತ್ತಲೇ ಬಂದಿದೆ.

ಧನಿಕರು-ದರಿದ್ರರು, ಬಲಾಢ್ಯ ಜಾತಿಗಳು-ತಳವರ್ಗಗಳ ನಡುವಣ ಅಂತರ ತಗ್ಗುವ ಬದಲು ಹೆಚ್ಚುತ್ತಲೇ ನಡೆದಿದೆ. ನೂರಾರು ವರ್ಷಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ದೊರೆತಿರುವ ಮೀಸಲಾತಿಯನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಿತ್ತುಕೊಳ್ಳುವ ಹುನ್ನಾರಗಳಿಗೆ ಹೆಚ್ಚು ಬಲ ಬಂದಿದೆ. ಕರುಬುವ ತೆಗಳುವ ಹಂಗಿಸುವ ದನಿಗಳಿಗೆ ಧಾರಾಳ ಧ್ವನಿವರ್ಧಕಗಳು ಒದಗಿವೆ. ಆದಿವಾಸಿಗಳು-ದಲಿತರ ಶೋಷಣೆಗೆ ಕೊನೆಯೇ ಕಾಣದಾಗಿದೆ. ದಲಿತರು, ದಮನಿತರು ಆದಿವಾಸಿಗಳು ಅಲ್ಪಸಂಖ್ಯಾತರು, ಪ್ರಗತಿಪರರು ಮಾತ್ರವೇ ಸಂವಿಧಾನವನ್ನು ಪ್ರಾಣಪದಕವೆಂದು ಬಗೆದು ಎದೆಗೆ ಅಪ್ಪಿ ಹಿಡಿದಿದ್ದಾರೆ.

ಸಂವಿಧಾನವು ಅದೆಷ್ಟೇ ಒಳ್ಳೆಯದಾಗಿರಲಿ, ಅದನ್ನು ಜಾರಿಗೆ ತರುವವರು ಒಳ್ಳೆಯವರಾಗಿರದಿದ್ದರೆ ಸಂವಿಧಾನವೂ ಕೆಟ್ಟದೆನಿಸಿಕೊಳ್ಳುತ್ತದೆ. ಸಂವಿಧಾನವು ಅದೆಷ್ಟೇ ಕೆಟ್ಟದಾಗಿದ್ದರೂ ಜಾರಿಗೆ ತರುವವರು ಒಳ್ಳೆಯವರಾಗಿದ್ದರೆ ಸಂವಿಧಾನ ಕೂಡ ಒಳ್ಳೆಯದೇ ಎನಿಸಿಕೊಳ್ಳುತ್ತದೆ ಎಂದಿದ್ದರು ಬಾಬಾಸಾಹೇಬರು.

ಆಳುವವರು ಟೀಕೆ ವಿಮರ್ಶೆಗಳಿಗೆ ಅಸಹನೆ ತೋರಿ ವಿಮರ್ಶಿಸುವವರನ್ನು ಜೈಲುಗಳಿಗೆ ತಳ್ಳುತ್ತಿರುವಾಗ, ಪ್ರಭುತ್ವದ ಮುಂದೆ ಪ್ರಜೆಗಳು ಮಂಡಿಯೂರಬೇಕೆಂದು ಬಯಸುವಾಗ, ಆಳುವವರ ನಡೆ ಮತ್ತು ನುಡಿಗೆ ಸಂಬಂಧವೇ ಇಲ್ಲದಿರುವಾಗ, ಸಮಾಜದ ಎಲ್ಲ ವರ್ಗಗಳನ್ನೂ ಜೊತೆಗೆ ಸೇರಿಸಿಕೊಂಡು ಮುನ್ನಡೆಯಬೇಕೆಂಬ ತತ್ವವನ್ನು ಧಿಕ್ಕರಿಸಿರುವಾಗ, ನಾಗರಿಕರ ಸ್ವಾತಂತ್ರ್ಯಗಳನ್ನು ಹಿಗ್ಗಿಸುವ ಬದಲು ಕುಗ್ಗಿಸುತ್ತಿರುವಾಗ – ಈಗ ಇದೀಗ ಸಂವಿಧಾನವನ್ನು ಬರೆಯಬೇಕಾಗಿ ಬಂದಿದ್ದರೆ.. ಊಹೆಗೂ ನಿಲುಕದ ಅನಾಹುತವಿದು.

ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಪಸರಿಸಲು ನವೆಂಬರ್ 26ರ ದಿನವನ್ನು ಸಂವಿಧಾನ ದಿವಸವೆಂದು ಆಚರಿಸುವುದಾಗಿ ಪ್ರಧಾನಿಯವರು 2015ರಲ್ಲಿ ಘೋಷಿಸಿದ್ದರು. ಸಂವಿಧಾನ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುವ ದಿನವಿದು. ಅವರ ಕನಸಿನ ಭಾರತವನ್ನು ಕಟ್ಟುವ ಕುರಿತ ನಮ್ಮ ಪ್ರತಿಬದ್ಧತೆಯನ್ನು ಪುನರುಚ್ಚರಿಸುವ ತೇದಿಯೂ ಹೌದು ಎಂದು ಸಾರಿದರು. 197 ಕೋಟಿ ರುಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವೂ ತಲೆಯೆತ್ತಿದೆ. ಒಳ್ಳೆಯ ನಡೆಗಳೇ ಹೌದು.

ದಲಿತರ ಮತಗಳನ್ನು ಸೆಳೆಯುವ ಪ್ರತಿಮೆ-ಪ್ರತೀಕ-ಸ್ಮಾರಕ ರೂಪಕಗಳಾಗಿ ಮಾತ್ರವೇ ಪಕ್ಷ ಪರಿವಾರಗಳು ಅಂಬೇಡ್ಕರ್ ಮತ್ತು ಸಂವಿಧಾನವನ್ನು ನೋಡುತ್ತಿವೆ. ನಿಜದ ಬಾಬಾಸಾಹೇಬರ, ಅವರ ಪ್ರಖರ ವಿಚಾರಗಳ, ಅವರು ಕೊಡಮಾಡಿದ ಸಂವಿಧಾನದ ಮೌಲ್ಯಗಳ ನಿತ್ಯ ನಿರಂತರ ಹತ್ಯೆ ನಡೆಯುತ್ತಿದೆ. ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದರೆ ಸಾಲದು, ಅದು ಎತ್ತಿ ಹಿಡಿದಿರುವ ಮೌಲ್ಯಗಳನ್ನು ಗೌರವಿಸಬೇಕು.

1949ರಲ್ಲಿ ಮದ್ರಾಸ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ಅಂದಿನ ಗೃಹಮಂತ್ರಿ ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ಪಟೇಲ್ ಅವರು ತೀವ್ರ ಎಡಪಂಥೀಯ ಶಕ್ತಿಗಳು ಮತ್ತು ಆರೆಸ್ಸೆಸ್ ಅಪಾಯಗಳ ಕುರಿತು ಮಾತಾಡಿದ್ದರು.

“ಹೈದರಾಬಾದ್ ಸರ್ಕಾರ ತನ್ನದೇ ಸ್ವಾರ್ಥಕ್ಕೆ ಬೆಳೆಯಲು ಬಿಟ್ಟ ಕಮ್ಯುನಿಸ್ಟರು, ತಮ್ಮ ಸೋದರರೇ ಆದ 200ಕ್ಕೂ ಹೆಚ್ಚು ಕಾಂಗ್ರೆಸ್ಸಿಗರನ್ನು ಕೊಂದಿದ್ದಾರೆ. ಈ ಭಯೋತ್ಪಾದಕರನ್ನು ಹೈದರಾಬಾದ್ ಪ್ರಾಂತ್ಯದಿಂದ ಹೊರದಬ್ಬಿದ ನಂತರ ಬೇರೆ ಗಡಿಗಳನ್ನು ಪ್ರವೇಶಿಸಿ ಅಂತಹುದೇ ಕೃತ್ಯಗಳಲ್ಲಿ ತೊಡಗುತ್ತಾರೆ.. ಇವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ನಾವು ತಯಾರಿದ್ದೇವೆ. ಆದರೆ ಅವರು ಭಯೋತ್ಪಾದನೆಯಲ್ಲೇ ತೊಡಗುವುದಾದರೆ ಹಿಡಿದು ಜೈಲಿಗೆ ತಳ್ಳಲು, ಭೂಗತರಾಗಿ ತಲೆ ಮರೆಸಿಕೊಳ್ಳುವಂತೆ ನಿಗ್ರಹಿಸಲು ನಾವು ಹಿಂಜರಿಯುವುದಿಲ್ಲ” ಎಂದು ಪಟೇಲ್ ಅವರು ಎಚ್ಚರಿಕೆ ನೀಡಿದ್ದರು.

“ನಿಮ್ಮ ಹಂಚಿಕೆಗಳನ್ನು ಕೈಬಿಡಿ, ಕೋಮುವಾದಿ ಘರ್ಷಣೆಗಳನ್ನು ದೂರವಿಡಿ, ಭಾರತದ ಸಂವಿಧಾನವನ್ನು ಗೌರವಿಸಿರಿ, ರಾಷ್ಟ್ರಧ್ವಜಕ್ಕೆ ನಿಷ್ಠೆ ತೋರಿರಿ. ನಿಮ್ಮ ಮಾತುಗಳ ನಂಬಬಹುದೆಂದು ನಮಗೆ ಮನವರಿಕೆ ಮಾಡಿಕೊಡಿರಿ, ಹೇಳುವುದೇ ಒಂದು, ಮಾಡುವುದು ಮತ್ತೊಂದು ಎಂಬ ಧೋರಣೆ ನಡೆಯುವುದಿಲ್ಲ” ಎಂಬುದು ಅವರು ಆರೆಸ್ಸೆಸ್‌ಗೆ ತಾಕೀತು ಮಾಡಿದ್ದರು.

ಪಟೇಲರು ತಿದ್ದಬಯಸಿದ ಈ ಧೋರಣೆಗಳು ಅಂತರಾಳದಿಂದ ಬದಲಾಗಿರುವ ಸೂಚನೆಗಳಿಲ್ಲ. ಬದಲಾಗಿ ಇನ್ನಷ್ಟು ಆಕ್ರಮಣಕಾರಿಯಾಗಿ ಪ್ರಕಟಗೊಳ್ಳತೊಡಗಿವೆ.

“ಹೊಸ ಸಂವಿಧಾನದ ಅತಿ ಕೇಡಿನ ಅಂಶವೆಂದರೆ ಅದರಲ್ಲಿ ಭಾರತೀಯ ಎಂಬುದು ಏನೇನೂ ಇಲ್ಲ….. ಪ್ರಾಚೀನ ಭಾರತದ ವಿಶಿಷ್ಟ ಸಾಂವಿಧಾನಿಕ ಬೆಳವಣಿಗೆಗಳ ಕುರಿತ ಪ್ರಸ್ತಾಪವೇ ಇಲ್ಲ. ಪ್ರಾಚೀನ ಗ್ರೀಸ್ ದೇಶದ ಕಾನೂನು ಬರೆದು ದಂತಕತೆಯೇ ಆಗಿಹೋದ ಲೈಕರ್ಗಸ್ ಮತ್ತು ಅಥೆನ್ಸಿನ ಸೋಲನ್ ಅವರಿಗಿಂತ ಬಹಳ ಮೊದಲೇ ಭಾರತದಲ್ಲಿ ಮನುಸ್ಮೃತಿಯ ರಚನೆಯಾಗಿತ್ತು. ಮನು ರಚಿಸಿದ ಕಾನೂನುಗಳು ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತದಲ್ಲಿ ಹಿಂದೂಗಳು ಅವುಗಳನ್ನು ಸ್ವಯಂಪ್ರೇರಣೆ ಮತ್ತು ವಿಧೇಯತೆಯಿಂದ ಪಾಲಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರ ಪಾಲಿಗೆ ಈ ಕಾನೂನುಗಳು ಲೆಕ್ಕಕ್ಕೇ ಇಲ್ಲ ಎಂದು 1949ರ ನವೆಂಬರ್ 30ರ ಆರೆಸ್ಸೆಸ್ ಮುಖವಾಣಿ ’ದಿ ಆರ್ಗನೈಸರ್’ನ ಸಂಚಿಕೆಯಲ್ಲಿ ಸಂಪಾದಕೀಯ ಬರೆಯಲಾಗಿತ್ತು.

ಇಂದಿಗೂ ಪರಿವಾರದಲ್ಲಿ ಪ್ರತಿಧ್ವನಿಸುವ ಸಂಪಾದಕೀಯವಿದು. ಕಾಲಕಾಲಕ್ಕೆ ಕೇಂದ್ರ ಮಂತ್ರಿಗಳು, ಪರಿವಾರದ ತಲೆಯಾಳುಗಳು- ಕಾಲಾಳುಗಳು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಹಾಕುವ ಗುಟುರುಗಳ ಮೂಲಸೆಲೆಯಿದು.

ನಾಗರಿಕರಿಗೆ ಸಂವಿಧಾನದತ್ತವಾಗಿ ದೊರಕಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಸರ್ಕಾರ ಹಲವಾರು ನೀತಿ ನಿರ್ಧಾರಗಳು ಕಾಯಿದೆ ಕಾನೂನುಗಳನ್ನು ಹೊರಡಿಸಿದೆ. ಇವುಗಳನ್ನು ಪ್ರಶ್ನಿಸಿರುವ ಅರ್ಜಿಗಳು ಅಹವಾಲುಗಳು ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನಲ್ಲಿ ಕೊಳೆಯುತ್ತಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೆಯ ಮತ್ತು 35ಎ ಕಲಮುಗಳನ್ನು 2019ರಲ್ಲಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಲಾಯಿತು. ಜಮ್ಮು-ಕಾಶ್ಮೀರಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಲ್ಲಿಸಲಾಗಿರುವ ಸುಮಾರು 25 ಅರ್ಜಿಗಳು ದೀರ್ಘ ಕಾಲದಿಂದ ವಿಚಾರಣೆಗೆ ಕಾದಿವೆ.

ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಮತ್ತು ನಿರಾಕರಿಸುವ ಪೌರತ್ವ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ಪೌರತ್ವ ರಿಜಿಸ್ಟರನ್ನು ಪ್ರಶ್ನಿಸಿರುವ 143 ರಿಟ್ ಅರ್ಜಿಗಳು, ರಾಜಕೀಯ ಪಕ್ಷಗಳು ಚುನಾವಣೆಗಳಿಗೆ ಅಜ್ಞಾತ ದೇಣಿಗೆದಾರರಿಂದ ಹಣ ಪಡೆಯುವ ಚುನಾವಣಾ ಬಾಂಡ್‌ಗಳ ವ್ಯವಸ್ಥೆ, ತನ್ನ ನೀತಿ ಸಿದ್ಧಾಂತಗಳನ್ನು ಒಪ್ಪದಿರುವ ಭಿನ್ನಮತವನ್ನು ಜೈಲಿಗೆ ತಳ್ಳುವ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ (ಯುಎಪಿಎ) ಮತ್ತು ರಾಜದ್ರೋಹದ ಕಾಯಿದೆ, ಅಂತರ್ಜಾಲ ಮಾಧ್ಯಮವನ್ನು ನಿಯಂತ್ರಿಸಲು ಮಿತಿಯಿಲ್ಲದ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯಿದೆ ಮುಂತಾದ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾಯಿದೆಗಳನ್ನು

ಈ ಬೆಳವಣಿಗೆ ಸಂವಿಧಾನದ ಅಡಿಪಾಯವನ್ನು ಕದಲಿಸಿದೆಯೇ ವಿನಾ ಗಟ್ಟಿ ಮಾಡಿಲ್ಲ.

“ಸಾಮಾಜಿಕ ಜನತಂತ್ರದ ಆಧಾರದ ವಿನಾ ರಾಜಕೀಯ ಜನತಂತ್ರ ಉಳಿದು ಬಾಳಲಾರದು. ಸಾಮಾಜಿಕ ಜನತಂತ್ರವೆಂದರೇನು? ಸ್ವಾತಂತ್ರ್ಯ ಸಮಾನತೆ ಹಾಗೂ ಸೋದರತೆಯ ತತ್ವಗಳು ಜೀವನಮೌಲ್ಯಗಳೇ ಆಗುವ ಬದುಕಿನ ವಿಧಾನವೇ ಸಾಮಾಜಿಕ ಜನತಂತ್ರ” ಎಂಬ ಬಾಬಾಸಾಹೇಬರ ನೀತಿ ಕಳೆದೇಹೋಗಿದೆ.


ಇದನ್ನೂ ಓದಿ: ಒಂದು ಪ್ರಕರಣಕ್ಕೆ ತಡೆ ಬೆನ್ನಲ್ಲೇ ಹಂಸಲೇಖರ ಹೊಸ ಸಂಯೋಜನೆ ‘ಸಂವಿಧಾನ ಗೀತೆ’ ವೈರಲ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...