Homeಮುಖಪುಟ’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

- Advertisement -
- Advertisement -

ಕೇಂದ್ರದ ಗೃಹ ಸಚಿವಾಲಯವು ದೇಶದ 5968 ಸರ್ಕಾರೇತರ ಸಂಸ್ಥೆ(ಎನ್‌ಜಿಓ)ಗಳ, ಅದರಲ್ಲೂ ವಿಶೇಷವಾಗಿ ಮದರ್ ತೆರೇಸಾ ಅವರ ’ಮಿಶನರೀಸ್ ಆಫ್ ಚಾರಿಟಿ’ ಸಂಸ್ಥೆಯ ವಿದೇಶಿ ದೇಣಿಗೆ ಲೈಸೆನ್ಸನ್ನು ರದ್ದು ಮಾಡಿದ ಸುದ್ದಿಯೊಂದಿಗೆ 2022ನೇ ವರ್ಷ ಆರಂಭವಾಯಿತು.

ಇವುಗಳಲ್ಲಿ ಅನೇಕವು ದಾನಧರ್ಮ (ಸೇವಾ ಕಾರ್ಯ – ಚಾರಿಟಿ), ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು. ಐಐಟಿ ದೆಹಲಿ, ಜಾಮಿಯಾ ಮಿಲಿಯ ಇಸ್ಲಾಮಿಯಾ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ, ಆಕ್ಸ್‌ಫ್ಯಾಮ್ ಇಂಡಿಯ, ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಇಂಡಿಯ ಹ್ಯಾಬಿಟೆಟ್ ಸೆಂಟರ್ ಹಾಗೂ ಲೇಡಿ ಶ್ರೀರಾಮ್ ಮಹಿಳಾ ಕಾಲೇಜು… ಹೀಗೆ ಸಾವಿರಾರು ಇತರ ಸಂಘಟನೆಗಳು ಇದರಲ್ಲಿ ಸೇರಿವೆ.

ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿಯನ್ನು ರದ್ದು ಮಾಡಿರುವುದರಲ್ಲಿ ಸಾಂವಿಧಾನಿಕ ಪರಿಣಾಮಗಳಿವೆ. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ನಮ್ಮ ಸಂವಿಧಾನ ಮಾನ್ಯ ಮಾಡಿದೆ. ಒಂದು ಸಂಸ್ಥೆ ಮಾಡಬಯಸುವ ಕೆಲಸಗಳಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ದೊರಕಿಸಿಕೊಳ್ಳುವುದೂ ಈ ಹಕ್ಕಿನ ಒಂದು ಮುಖ್ಯ ಭಾಗವಾಗಿದೆ. ಸಂಘಟನೆಯ ಹಣಕಾಸಿನ ಸಂಪನ್ಮೂಲಗಳನ್ನು ನಿರ್ಬಂಧಿಸಿದರೆ ಸಂಘಟನೆ ಕಟ್ಟಿಕೊಳ್ಳುವ ಹಕ್ಕಿಗೆ ಅರ್ಥವೇ ಇಲ್ಲವಾಗುತ್ತದೆ.

’ಮಾನವ ಹಕ್ಕುಗಳನ್ನು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಶಾಂತಿಯುತ ವಿಧಾನಗಳ ಮೂಲಕ ಪ್ರೋತ್ಸಾಹಿಸುವ, ರಕ್ಷಣೆ ಮಾಡುವ ಸ್ಪಷ್ಟ ಉದ್ದೇಶಕೊಸ್ಕರ ಸಂಪನ್ಮೂಲಗಳನ್ನು ಕೋರುವ, ಪಡೆಯುವ ಹಾಗೂ ಬಳಕೆ ಮಾಡುವ’ ಹಕ್ಕು ವ್ಯಕ್ತಿಗಳಿಗೂ ಸಂಘಟನೆಗಳಿಗೂ ಇದೆ ಎಂಬುದಾಗಿ ವಿಶ್ವಸಂಸ್ಥೆಯ ’ಮಾನವ ಹಕ್ಕುಗಳ ಸಂರಕ್ಷಕರ ಘೋಷಣೆ’ಯ ಆರ್ಟಿಕಲ್ 13 ಘೋಷಿಸುತ್ತದೆ. ವಿದೇಶಗಳಿಂದ ಹಣಕಾಸು ಪಡೆಯುವ ಹಕ್ಕನ್ನು ’ರಾಷ್ಟ್ರೀಯ ಸಾರ್ವಭೌಮತೆ’ ಮುಂತಾದ ಸಾಂವಿಧಾನಿಕವಾಗಿ ಮಾನ್ಯ ಮಾಡಲ್ಪಟ್ಟ ಕಾರಣಗಳಿಗಾಗಿ ನ್ಯಾಯಸಮ್ಮತವಾದ ನಿಯಂತ್ರಣಗಳಿಗೆ ಒಳಪಡಿಸುವುದು ತಪ್ಪಲ್ಲವಾದರೂ, ಅದು ಈ ಹಕ್ಕಿನ ಬೇಕಾಬಿಟ್ಟಿ ನಿರ್ಬಂಧವಾಗಕೂಡದು.

ಅಂತರರಾಷ್ಟ್ರೀಯವಾಗಿ ಗೌರವಿಸಲ್ಪಡುವ ’ಮಿಶನರೀಸ್ ಆಫ್ ಚಾರಿಟಿ’ಯ ಲೈಸೆನ್ಸನ್ನು ರದ್ದುಪಡಿಸಲು ಅದರ ’ಒಂದು ಕೇಂದ್ರದ ನಿರ್ದೇಶಕರು ಮತಾಂತರ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂಬ ’ಪ್ರತಿಕೂಲ ಮಾಹಿತಿ’ ಸರ್ಕಾರಕ್ಕೆ ಬಂದಿದ್ದು ಕಾರಣ ಎಂದು ಮಾಧ್ಯಮ ವರದಿಗಳು ತಿಳಿಸುತ್ತವೆ. ಈ ಆರೋಪದ ಸತ್ಯಾಸತ್ಯತೆ ಒತ್ತಟ್ಟಿಗಿರಲಿ; ದೇಶಾದ್ಯಂತ 60ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆಯ ಪರವಾನಗಿಯನ್ನು ರದ್ದುಪಡಿಸಿದ್ದನ್ನು ಸಂವಿಧಾನದ ಪ್ರಕಾರ ಸಂಘ ಸ್ಥಾಪಿಸುವ ಅದರ ಹಕ್ಕಿನ ಮೇಲಿನ ’ನ್ಯಾಯಸಮ್ಮತವಾದ ನಿರ್ಬಂಧ’ ಎಂಬುದಾಗಿ ಸಮರ್ಥಿಸಲು ಸಾಧ್ಯವಿಲ್ಲ.

ಭಾರತ ಸರ್ಕಾರದ ಈ ಕ್ರಮದ ವಿರುದ್ಧ ಅಂತಾರಾಷ್ಟ್ರೀಯವಾಗಿ ಅನೇಕ ಪ್ರತಿಕೂಲ ಪ್ರತಿಕ್ರಿಯೆಗಳು ಬಂದವು; ಆ ಪೈಕಿ ಬ್ರಿಟಿಷ್ ಸಂಸತ್ತಿನಲ್ಲಿ ಬಂದ ತೀಕ್ಷ್ಣ ವಿಮರ್ಶೆಯೂ ಒಂದು. ಬಹುಶಃ ಗೃಹ ಸಚಿವಾಲಯವು ತನ್ನ ಕ್ರಮವನ್ನು ತಣ್ಣಗೆ ಹಿಂತೆಗೆದುಕೊಂಡು, ಮಿಶನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ಮರುಸ್ಥಾಪಿಸಲು ಇದೂ ಕಾರಣವಿರಬೇಕು. ಇತರ ಸಂಸ್ಥೆಗಳ ಲೈಸೆನ್ಸನ್ನು ಹಿಂದಿರುಗಿಸದಿರುವ ತನ್ನ ನಿಲುವನ್ನು ಕೂಡ ಸಚಿವಾಲಯವು ಮರುವಿಮರ್ಶಿಸಲೆಂದು ಆಶಿಸೋಣ.

ಗೃಹ ಸಚಿವಾಲಯವು ಸೇವಾ ಕಾರ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರಿ ಮಾಡಿರುವುದು ಬಹಳ ಕಳವಳದ ವಿಷಯವಾಗಿದೆ. ಮಿಶನರೀಸ್ ಆಫ್ ಚಾರಿಟೀಸ್ ಸಂಸ್ಥೆಯ ಲೈಸೆನ್ಸನ್ನು ರದ್ದು ಮಾಡುವ ಮೂಲಕ ಗೃಹ ಸಚಿವಾಲಯವು ವಸತಿರಹಿತರು, ವಯೋವೃದ್ಧರು, ಕುಷ್ಠ ರೋಗಿಗಳು ಹಾಗೂ ಮರಣಾಸನ್ನ ವ್ಯಕ್ತಿಗಳಂತಹ ’ಬಡವರಲ್ಲಿ ಬಡವ’ರಾದ ನಿರ್ಗತಿಕರ ಸೇವೆಯ ವಿರುದ್ಧ ಖಡ್ಗ ಝಳಪಿಸಿದಂತಾಗಿದೆ. ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಉದ್ದೇಶ ’ಇಸ್ಲಾಂ ಧರ್ಮದ ಸಹಿಷ್ಣುತೆ, ಉದಾರತೆ, ಪ್ರಗತಿಪರತೆ ಮತ್ತು ವೈಚಾರಿಕತೆಯ ಧೋರಣೆಯನ್ನು ಪ್ರೋತ್ಸಾಹಿಸುವುದು’, ’ಈ ದೇಶದ ಜನರ ನಡುವೆ ಪರಸ್ಪರ ಸದ್ಭಾವನೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದು’. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯು ವಸಾಹತು ಮತ್ತು ಆಧುನಿಕ ಭಾರತ ಕುರಿತ ಸಂಶೋಧಕರ ಪಾಲಿಗೆ ಶ್ರೇಷ್ಠ ಆಕರ ಸಂಸ್ಥೆಯಾಗಿದೆ.

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಗಳನ್ನು ಗುರಿ ಮಾಡುವ ಮೂಲಕ ಗೃಹ ಸಚಿವಾಲಯವು ಭಾರತವನ್ನು ಅಕ್ಷರಶಃ ಬಡವಾಗಿಸುತ್ತಿದೆ; ಈ ಮಾತು ಒಂದು ರೂಪಕವಾಗಿಯೂ ನಿಜ. ಭಾರತದ ಪ್ರಭುತ್ವವು ಯಾವತ್ತೂ ಒಂದು ನಿಜವಾದ ಕಲ್ಯಾಣ ರಾಜ್ಯವಾಗದೆ ಇದ್ದ ಕಾರಣ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಿನ ಹಸ್ತ ಚಾಚುವ ಕೆಲಸವನ್ನು ಸೇವಾ ಸಂಸ್ಥೆಗಳೇ ಚರಿತ್ರೆಯುದ್ದಕ್ಕೂ ಮಾಡುತ್ತ ಬಂದಿವೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಬಿಕ್ಕಟ್ಟು ನಿರ್ವಹಣೆಯ ಮುಂಚೂಣಿಯಲ್ಲಿದ್ದುದು ಮುಸ್ಲಿಂ ಮತ್ತು ಕ್ರೈಸ್ತ ಸೇವಾ ಸಂಸ್ಥೆಗಳೇ. ಇಂತಹ ಸೇವಾ ಕಾರ್ಯಗಳಿಗೆ ಮತ್ತಷ್ಟು ಸಂಪನ್ಮೂಲಗಳನ್ನು ಒದಗಿಸಬೇಕೇ ಹೊರತು ಅವರ ಬಳಿ ಇದ್ದುದನ್ನೂ ಇಲ್ಲದಂತೆ ಮಾಡಬಾರದು. ವಾಸ್ತವವಾಗಿ ಮೊದಲ ಕೊರೊನಾ ಅಲೆಯಲ್ಲಿ ಪೂರ್ವಸಿದ್ಧತೆ ಇಲ್ಲದೆ ಅವೈಜ್ಞಾನಿಕವಾಗಿ ಲಾಕ್‌ಡೌನ್ ಮಾಡಿದಾಗ ಬಡಜನರು ದೊಡ್ಡ ಸಂಖ್ಯೆಯಲ್ಲಿ ಹಸಿವಿನಿಂದ ಸಾಯದಂತೆ ತಡೆದಿದ್ದು ಜನಸಾಮಾನ್ಯರ ಮತ್ತು ಸಂಘಟನೆಗಳ ಸೇವಾಕಾರ್ಯಗಳೇ. ಸಾವಿರಾರು ಮಂದಿ ಸಾಮಾನ್ಯ ವ್ಯಕ್ತಿಗಳು ಹಾಗೂ ಸಂಘಟನೆಗಳು ತೋರ್ಪಡಿಸಿದ ಅಮೋಘವಾದ ಸೇವಾ ಸ್ಫೂರ್ತಿಯಿಂದಾಗಿಯೇ ಭಾರತವು ಪೂರ್ಣ ಪ್ರಮಾಣದ ಬಿಕ್ಕಟ್ಟನ್ನು ಎದುರಿಸದೆ ಉಳಿದುಕೊಂಡಿತು ಎಂಬುದನ್ನು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.

ಇಂಡಿಯಾ ಇಸ್ಲಾಮಿಕ್ ಸೆಂಟರ್‌ಅನ್ನು ಗುರಿ ಮಾಡಿರುವುದೂ ಸಹ ಇಂಥದ್ದೇ ದೂರದೃಷ್ಟಿ ರಹಿತ ನಡೆಯಾಗಿದೆ. ಇಸ್ಲಾಮನ್ನು ಪ್ರಗತಿಪರವಾಗಿ ವ್ಯಾಖ್ಯಾನಿಸುವ ಗುರಿ ಹೊಂದಿರುವ ಈ ಪ್ರಗತಿಪರ ಗುಂಪಿಗೆ ತನ್ನ ಚಟುವಟಿಕೆಗಳನ್ನು ನಡೆಸಲು ಅಗತ್ಯವಿರುವ ಹಣಕಾಸನ್ನು ಒಗ್ಗೂಡಿಸಿಕೊಳ್ಳುವ ಹಕ್ಕನ್ನು ನಿರಾಕರಿಸಲಾಗಿದೆ. ಇಸ್ಲಾಮಿನ ಒಳಗಿನಿಂದಲೇ ಪ್ರಗತಿಪರ ಅಭಿಪ್ರಾಯ ರೂಪಿಸುವ ಒಂದು ಗುಂಪನ್ನು ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯನ್ನು ಗುರಿ ಮಾಡಿರುವುದು ಒಂದು ಜನಸಮುದಾಯದ ಬದುಕಿನಲ್ಲಿ ಚರಿತ್ರೆಯ ಪಾತ್ರವನ್ನು ಹಾಗೂ ಚರಿತ್ರೆಯ ಬಗೆಗಿನ ಸಂಶೋಧನೆಗೆ ಉತ್ತೇಜನ ನೀಡುವುದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲಾರದ ಸಂಕುಚಿತತೆಯಾಗಿದೆ.

ಯಾವುದೇ ರೂಪದ ವಿದೇಶಿ ನೆರವು ಆ ದೇಶದ ಅಜೆಂಡಾವನ್ನು ಈಡೇರಿಸುವುದರಿಂದ ಅದು ಒಳ್ಳೆಯದಲ್ಲ ಎಂದು ರ್‍ಯಾಡಿಕಲ್ ಬದಿಯ ಹಲವು ಗುಂಪುಗಳು ವಾದಿಸಬಹುದು. ಇದಕ್ಕೆ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡಬಹುದು.

ಮೊದಲನೆಯದಾಗಿ, ವಿದೇಶಿ ನೆರವನ್ನು ನಿರ್ಬಂಧಿಸುವುದು ಸಾಂವಿಧಾನಿಕ ನೆಲೆಯಲ್ಲಿರಬೇಕೇ ಹೊರತು ’ಅಜೆಂಡಾವನ್ನು ನಿಯಂತ್ರಿಸುವುದು’ ಮುಂತಾದ ಬರಿಯ ಊಹೆ-ಆತಂಕಗಳ ನೆಲೆಯಲ್ಲಲ್ಲ. ಆಧಾರರಹಿತ ಪೂರ್ವಗ್ರಹಗಳು ಮತ್ತು ಪಕ್ಷಪಾತಿ ಧೋರಣೆಗಳ ಕಾರಣಕ್ಕೆ (ಒಂದು ಕೇಂದ್ರದಲ್ಲಿ ಮತಾಂತರ ನಡೆಯುತ್ತಿದೆಯೆಂಬ ಆರೋಪದ ಮೇಲೆ ಮಿಶನರೀಸ್ ಆಫ್ ಚಾರಿಟೀಸ್‌ನ ಸಂಸ್ಥೆಯ ವಿರುದ್ಧ ಮಾಡಿದಂತೆ) ಹಣಕಾಸನ್ನು ನಿರಾಕರಿಸಿದರೆ ಅದು ಅಸಾಂವಿಧಾನಿಕವಾಗುತ್ತದೆ. ಇಂಥ ಯಾವುದೇ ನಿಷೇಧದ ಕಾರಣವು ಆರ್ಟಿಕಲ್ 19(4)ರಲ್ಲಿ ಹೇಳಿರುವ ’ನ್ಯಾಯಸಮ್ಮತವಾದ ನಿರ್ಬಂಧ’ದ ವ್ಯಾಪ್ತಿಯೊಳಗಿರಬೇಕು.

ಎರಡನೆಯದಾಗಿ, ಭಾರತದಲ್ಲಿ ಒಂದು ಜಾತ್ಯತೀತ/ಧರ್ಮನಿರಪೇಕ್ಷ ಸೇವಾ ಪರಂಪರೆ ಉತ್ತಮವಾಗಿ ಬೆಳೆದೇ ಇಲ್ಲ. ಇಲ್ಲಿ ಚಾರಿಟಿ ಎನ್ನುವುದು ಧರ್ಮ ಮತ್ತು ಜಾತಿಯನ್ನು ಅವಲಂಬಿಸಿದೆ. ಈಗಲೂ ಅತಿ ಹೆಚ್ಚಿನ ದೇಣಿಗೆಗಳು ದೇವಸ್ಥಾನಗಳಿಗೆ ಹರಿದುಬರುತ್ತವೆ; ’ಸಾಂಸ್ಕೃತಿಕ’, ’ಶೈಕ್ಷಣಿಕ’ ಅಥವಾ ’ಸೇವಾಸಂಸ್ಥೆ’ಯಲ್ಲದೆ, ಕೇವಲ ಧಾರ್ಮಿಕ ಕಾರಣಕ್ಕೆ ದೇಣಿಗೆ ಪಡೆಯುವುದರಲ್ಲಿ ತಿರುಪತಿ ದೇವಸ್ಥಾನವು ಮೊದಲನೆಯದಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಇಲ್ಲದಿರುವುದರ ಬಗ್ಗೆ ವ್ಯಥೆಪಟ್ಟಿದ್ದರು; ’ಯಾವುದೇ ತಪ್ಪಿನಿಂದ ಸಂಕಷ್ಟಕ್ಕೆ ಒಳಗಾಗುವವರು ಯಾರು ಬೇಕಾದರೂ ಆಗಿರಲಿ, ಪ್ರತಿಯೊಂದು ತಪ್ಪಿನ ಕುರಿತೂ ತಳಮಳಗೊಳ್ಳುವ ಸಾಕ್ಷಿಪ್ರಜ್ಞೆ’ಯನ್ನು ಅವರು ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಎಂದು ಹೆಸರಿಸಿದ್ದರು. ಭಾರತದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಧಾರ್ಮಿಕ ಅಥವಾ ಜಾತಿಯ ಪರಿಗಣನೆಯನ್ನು ಬದಿಗಿಟ್ಟು ಹಣಕಾಸಿನ ನೆರವು ನೀಡುವಂತಹ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಮೂಡುವವರೆಗೂ ಜಾತ್ಯತೀತ/ಧರ್ಮನಿರಪೇಕ್ಷ ಸಂಘಟನೆಗಳು ವಿದೇಶಿ ದೇಣಿಗೆಗಳತ್ತ ನೋಡದೆ ಬೇರೆ ದಾರಿಯಿರುವುದಿಲ್ಲ.

ಅನುವಾದ: ಸಿರಿಮನೆ ನಾಗರಾಜ್

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...