Homeಮುಖಪುಟ’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

- Advertisement -
- Advertisement -

ಕೇಂದ್ರದ ಗೃಹ ಸಚಿವಾಲಯವು ದೇಶದ 5968 ಸರ್ಕಾರೇತರ ಸಂಸ್ಥೆ(ಎನ್‌ಜಿಓ)ಗಳ, ಅದರಲ್ಲೂ ವಿಶೇಷವಾಗಿ ಮದರ್ ತೆರೇಸಾ ಅವರ ’ಮಿಶನರೀಸ್ ಆಫ್ ಚಾರಿಟಿ’ ಸಂಸ್ಥೆಯ ವಿದೇಶಿ ದೇಣಿಗೆ ಲೈಸೆನ್ಸನ್ನು ರದ್ದು ಮಾಡಿದ ಸುದ್ದಿಯೊಂದಿಗೆ 2022ನೇ ವರ್ಷ ಆರಂಭವಾಯಿತು.

ಇವುಗಳಲ್ಲಿ ಅನೇಕವು ದಾನಧರ್ಮ (ಸೇವಾ ಕಾರ್ಯ – ಚಾರಿಟಿ), ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು. ಐಐಟಿ ದೆಹಲಿ, ಜಾಮಿಯಾ ಮಿಲಿಯ ಇಸ್ಲಾಮಿಯಾ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ, ಆಕ್ಸ್‌ಫ್ಯಾಮ್ ಇಂಡಿಯ, ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಇಂಡಿಯ ಹ್ಯಾಬಿಟೆಟ್ ಸೆಂಟರ್ ಹಾಗೂ ಲೇಡಿ ಶ್ರೀರಾಮ್ ಮಹಿಳಾ ಕಾಲೇಜು… ಹೀಗೆ ಸಾವಿರಾರು ಇತರ ಸಂಘಟನೆಗಳು ಇದರಲ್ಲಿ ಸೇರಿವೆ.

ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿಯನ್ನು ರದ್ದು ಮಾಡಿರುವುದರಲ್ಲಿ ಸಾಂವಿಧಾನಿಕ ಪರಿಣಾಮಗಳಿವೆ. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ನಮ್ಮ ಸಂವಿಧಾನ ಮಾನ್ಯ ಮಾಡಿದೆ. ಒಂದು ಸಂಸ್ಥೆ ಮಾಡಬಯಸುವ ಕೆಲಸಗಳಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ದೊರಕಿಸಿಕೊಳ್ಳುವುದೂ ಈ ಹಕ್ಕಿನ ಒಂದು ಮುಖ್ಯ ಭಾಗವಾಗಿದೆ. ಸಂಘಟನೆಯ ಹಣಕಾಸಿನ ಸಂಪನ್ಮೂಲಗಳನ್ನು ನಿರ್ಬಂಧಿಸಿದರೆ ಸಂಘಟನೆ ಕಟ್ಟಿಕೊಳ್ಳುವ ಹಕ್ಕಿಗೆ ಅರ್ಥವೇ ಇಲ್ಲವಾಗುತ್ತದೆ.

’ಮಾನವ ಹಕ್ಕುಗಳನ್ನು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಶಾಂತಿಯುತ ವಿಧಾನಗಳ ಮೂಲಕ ಪ್ರೋತ್ಸಾಹಿಸುವ, ರಕ್ಷಣೆ ಮಾಡುವ ಸ್ಪಷ್ಟ ಉದ್ದೇಶಕೊಸ್ಕರ ಸಂಪನ್ಮೂಲಗಳನ್ನು ಕೋರುವ, ಪಡೆಯುವ ಹಾಗೂ ಬಳಕೆ ಮಾಡುವ’ ಹಕ್ಕು ವ್ಯಕ್ತಿಗಳಿಗೂ ಸಂಘಟನೆಗಳಿಗೂ ಇದೆ ಎಂಬುದಾಗಿ ವಿಶ್ವಸಂಸ್ಥೆಯ ’ಮಾನವ ಹಕ್ಕುಗಳ ಸಂರಕ್ಷಕರ ಘೋಷಣೆ’ಯ ಆರ್ಟಿಕಲ್ 13 ಘೋಷಿಸುತ್ತದೆ. ವಿದೇಶಗಳಿಂದ ಹಣಕಾಸು ಪಡೆಯುವ ಹಕ್ಕನ್ನು ’ರಾಷ್ಟ್ರೀಯ ಸಾರ್ವಭೌಮತೆ’ ಮುಂತಾದ ಸಾಂವಿಧಾನಿಕವಾಗಿ ಮಾನ್ಯ ಮಾಡಲ್ಪಟ್ಟ ಕಾರಣಗಳಿಗಾಗಿ ನ್ಯಾಯಸಮ್ಮತವಾದ ನಿಯಂತ್ರಣಗಳಿಗೆ ಒಳಪಡಿಸುವುದು ತಪ್ಪಲ್ಲವಾದರೂ, ಅದು ಈ ಹಕ್ಕಿನ ಬೇಕಾಬಿಟ್ಟಿ ನಿರ್ಬಂಧವಾಗಕೂಡದು.

ಅಂತರರಾಷ್ಟ್ರೀಯವಾಗಿ ಗೌರವಿಸಲ್ಪಡುವ ’ಮಿಶನರೀಸ್ ಆಫ್ ಚಾರಿಟಿ’ಯ ಲೈಸೆನ್ಸನ್ನು ರದ್ದುಪಡಿಸಲು ಅದರ ’ಒಂದು ಕೇಂದ್ರದ ನಿರ್ದೇಶಕರು ಮತಾಂತರ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂಬ ’ಪ್ರತಿಕೂಲ ಮಾಹಿತಿ’ ಸರ್ಕಾರಕ್ಕೆ ಬಂದಿದ್ದು ಕಾರಣ ಎಂದು ಮಾಧ್ಯಮ ವರದಿಗಳು ತಿಳಿಸುತ್ತವೆ. ಈ ಆರೋಪದ ಸತ್ಯಾಸತ್ಯತೆ ಒತ್ತಟ್ಟಿಗಿರಲಿ; ದೇಶಾದ್ಯಂತ 60ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆಯ ಪರವಾನಗಿಯನ್ನು ರದ್ದುಪಡಿಸಿದ್ದನ್ನು ಸಂವಿಧಾನದ ಪ್ರಕಾರ ಸಂಘ ಸ್ಥಾಪಿಸುವ ಅದರ ಹಕ್ಕಿನ ಮೇಲಿನ ’ನ್ಯಾಯಸಮ್ಮತವಾದ ನಿರ್ಬಂಧ’ ಎಂಬುದಾಗಿ ಸಮರ್ಥಿಸಲು ಸಾಧ್ಯವಿಲ್ಲ.

ಭಾರತ ಸರ್ಕಾರದ ಈ ಕ್ರಮದ ವಿರುದ್ಧ ಅಂತಾರಾಷ್ಟ್ರೀಯವಾಗಿ ಅನೇಕ ಪ್ರತಿಕೂಲ ಪ್ರತಿಕ್ರಿಯೆಗಳು ಬಂದವು; ಆ ಪೈಕಿ ಬ್ರಿಟಿಷ್ ಸಂಸತ್ತಿನಲ್ಲಿ ಬಂದ ತೀಕ್ಷ್ಣ ವಿಮರ್ಶೆಯೂ ಒಂದು. ಬಹುಶಃ ಗೃಹ ಸಚಿವಾಲಯವು ತನ್ನ ಕ್ರಮವನ್ನು ತಣ್ಣಗೆ ಹಿಂತೆಗೆದುಕೊಂಡು, ಮಿಶನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ಮರುಸ್ಥಾಪಿಸಲು ಇದೂ ಕಾರಣವಿರಬೇಕು. ಇತರ ಸಂಸ್ಥೆಗಳ ಲೈಸೆನ್ಸನ್ನು ಹಿಂದಿರುಗಿಸದಿರುವ ತನ್ನ ನಿಲುವನ್ನು ಕೂಡ ಸಚಿವಾಲಯವು ಮರುವಿಮರ್ಶಿಸಲೆಂದು ಆಶಿಸೋಣ.

ಗೃಹ ಸಚಿವಾಲಯವು ಸೇವಾ ಕಾರ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರಿ ಮಾಡಿರುವುದು ಬಹಳ ಕಳವಳದ ವಿಷಯವಾಗಿದೆ. ಮಿಶನರೀಸ್ ಆಫ್ ಚಾರಿಟೀಸ್ ಸಂಸ್ಥೆಯ ಲೈಸೆನ್ಸನ್ನು ರದ್ದು ಮಾಡುವ ಮೂಲಕ ಗೃಹ ಸಚಿವಾಲಯವು ವಸತಿರಹಿತರು, ವಯೋವೃದ್ಧರು, ಕುಷ್ಠ ರೋಗಿಗಳು ಹಾಗೂ ಮರಣಾಸನ್ನ ವ್ಯಕ್ತಿಗಳಂತಹ ’ಬಡವರಲ್ಲಿ ಬಡವ’ರಾದ ನಿರ್ಗತಿಕರ ಸೇವೆಯ ವಿರುದ್ಧ ಖಡ್ಗ ಝಳಪಿಸಿದಂತಾಗಿದೆ. ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಉದ್ದೇಶ ’ಇಸ್ಲಾಂ ಧರ್ಮದ ಸಹಿಷ್ಣುತೆ, ಉದಾರತೆ, ಪ್ರಗತಿಪರತೆ ಮತ್ತು ವೈಚಾರಿಕತೆಯ ಧೋರಣೆಯನ್ನು ಪ್ರೋತ್ಸಾಹಿಸುವುದು’, ’ಈ ದೇಶದ ಜನರ ನಡುವೆ ಪರಸ್ಪರ ಸದ್ಭಾವನೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದು’. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯು ವಸಾಹತು ಮತ್ತು ಆಧುನಿಕ ಭಾರತ ಕುರಿತ ಸಂಶೋಧಕರ ಪಾಲಿಗೆ ಶ್ರೇಷ್ಠ ಆಕರ ಸಂಸ್ಥೆಯಾಗಿದೆ.

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಗಳನ್ನು ಗುರಿ ಮಾಡುವ ಮೂಲಕ ಗೃಹ ಸಚಿವಾಲಯವು ಭಾರತವನ್ನು ಅಕ್ಷರಶಃ ಬಡವಾಗಿಸುತ್ತಿದೆ; ಈ ಮಾತು ಒಂದು ರೂಪಕವಾಗಿಯೂ ನಿಜ. ಭಾರತದ ಪ್ರಭುತ್ವವು ಯಾವತ್ತೂ ಒಂದು ನಿಜವಾದ ಕಲ್ಯಾಣ ರಾಜ್ಯವಾಗದೆ ಇದ್ದ ಕಾರಣ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಿನ ಹಸ್ತ ಚಾಚುವ ಕೆಲಸವನ್ನು ಸೇವಾ ಸಂಸ್ಥೆಗಳೇ ಚರಿತ್ರೆಯುದ್ದಕ್ಕೂ ಮಾಡುತ್ತ ಬಂದಿವೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಬಿಕ್ಕಟ್ಟು ನಿರ್ವಹಣೆಯ ಮುಂಚೂಣಿಯಲ್ಲಿದ್ದುದು ಮುಸ್ಲಿಂ ಮತ್ತು ಕ್ರೈಸ್ತ ಸೇವಾ ಸಂಸ್ಥೆಗಳೇ. ಇಂತಹ ಸೇವಾ ಕಾರ್ಯಗಳಿಗೆ ಮತ್ತಷ್ಟು ಸಂಪನ್ಮೂಲಗಳನ್ನು ಒದಗಿಸಬೇಕೇ ಹೊರತು ಅವರ ಬಳಿ ಇದ್ದುದನ್ನೂ ಇಲ್ಲದಂತೆ ಮಾಡಬಾರದು. ವಾಸ್ತವವಾಗಿ ಮೊದಲ ಕೊರೊನಾ ಅಲೆಯಲ್ಲಿ ಪೂರ್ವಸಿದ್ಧತೆ ಇಲ್ಲದೆ ಅವೈಜ್ಞಾನಿಕವಾಗಿ ಲಾಕ್‌ಡೌನ್ ಮಾಡಿದಾಗ ಬಡಜನರು ದೊಡ್ಡ ಸಂಖ್ಯೆಯಲ್ಲಿ ಹಸಿವಿನಿಂದ ಸಾಯದಂತೆ ತಡೆದಿದ್ದು ಜನಸಾಮಾನ್ಯರ ಮತ್ತು ಸಂಘಟನೆಗಳ ಸೇವಾಕಾರ್ಯಗಳೇ. ಸಾವಿರಾರು ಮಂದಿ ಸಾಮಾನ್ಯ ವ್ಯಕ್ತಿಗಳು ಹಾಗೂ ಸಂಘಟನೆಗಳು ತೋರ್ಪಡಿಸಿದ ಅಮೋಘವಾದ ಸೇವಾ ಸ್ಫೂರ್ತಿಯಿಂದಾಗಿಯೇ ಭಾರತವು ಪೂರ್ಣ ಪ್ರಮಾಣದ ಬಿಕ್ಕಟ್ಟನ್ನು ಎದುರಿಸದೆ ಉಳಿದುಕೊಂಡಿತು ಎಂಬುದನ್ನು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.

ಇಂಡಿಯಾ ಇಸ್ಲಾಮಿಕ್ ಸೆಂಟರ್‌ಅನ್ನು ಗುರಿ ಮಾಡಿರುವುದೂ ಸಹ ಇಂಥದ್ದೇ ದೂರದೃಷ್ಟಿ ರಹಿತ ನಡೆಯಾಗಿದೆ. ಇಸ್ಲಾಮನ್ನು ಪ್ರಗತಿಪರವಾಗಿ ವ್ಯಾಖ್ಯಾನಿಸುವ ಗುರಿ ಹೊಂದಿರುವ ಈ ಪ್ರಗತಿಪರ ಗುಂಪಿಗೆ ತನ್ನ ಚಟುವಟಿಕೆಗಳನ್ನು ನಡೆಸಲು ಅಗತ್ಯವಿರುವ ಹಣಕಾಸನ್ನು ಒಗ್ಗೂಡಿಸಿಕೊಳ್ಳುವ ಹಕ್ಕನ್ನು ನಿರಾಕರಿಸಲಾಗಿದೆ. ಇಸ್ಲಾಮಿನ ಒಳಗಿನಿಂದಲೇ ಪ್ರಗತಿಪರ ಅಭಿಪ್ರಾಯ ರೂಪಿಸುವ ಒಂದು ಗುಂಪನ್ನು ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯನ್ನು ಗುರಿ ಮಾಡಿರುವುದು ಒಂದು ಜನಸಮುದಾಯದ ಬದುಕಿನಲ್ಲಿ ಚರಿತ್ರೆಯ ಪಾತ್ರವನ್ನು ಹಾಗೂ ಚರಿತ್ರೆಯ ಬಗೆಗಿನ ಸಂಶೋಧನೆಗೆ ಉತ್ತೇಜನ ನೀಡುವುದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲಾರದ ಸಂಕುಚಿತತೆಯಾಗಿದೆ.

ಯಾವುದೇ ರೂಪದ ವಿದೇಶಿ ನೆರವು ಆ ದೇಶದ ಅಜೆಂಡಾವನ್ನು ಈಡೇರಿಸುವುದರಿಂದ ಅದು ಒಳ್ಳೆಯದಲ್ಲ ಎಂದು ರ್‍ಯಾಡಿಕಲ್ ಬದಿಯ ಹಲವು ಗುಂಪುಗಳು ವಾದಿಸಬಹುದು. ಇದಕ್ಕೆ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡಬಹುದು.

ಮೊದಲನೆಯದಾಗಿ, ವಿದೇಶಿ ನೆರವನ್ನು ನಿರ್ಬಂಧಿಸುವುದು ಸಾಂವಿಧಾನಿಕ ನೆಲೆಯಲ್ಲಿರಬೇಕೇ ಹೊರತು ’ಅಜೆಂಡಾವನ್ನು ನಿಯಂತ್ರಿಸುವುದು’ ಮುಂತಾದ ಬರಿಯ ಊಹೆ-ಆತಂಕಗಳ ನೆಲೆಯಲ್ಲಲ್ಲ. ಆಧಾರರಹಿತ ಪೂರ್ವಗ್ರಹಗಳು ಮತ್ತು ಪಕ್ಷಪಾತಿ ಧೋರಣೆಗಳ ಕಾರಣಕ್ಕೆ (ಒಂದು ಕೇಂದ್ರದಲ್ಲಿ ಮತಾಂತರ ನಡೆಯುತ್ತಿದೆಯೆಂಬ ಆರೋಪದ ಮೇಲೆ ಮಿಶನರೀಸ್ ಆಫ್ ಚಾರಿಟೀಸ್‌ನ ಸಂಸ್ಥೆಯ ವಿರುದ್ಧ ಮಾಡಿದಂತೆ) ಹಣಕಾಸನ್ನು ನಿರಾಕರಿಸಿದರೆ ಅದು ಅಸಾಂವಿಧಾನಿಕವಾಗುತ್ತದೆ. ಇಂಥ ಯಾವುದೇ ನಿಷೇಧದ ಕಾರಣವು ಆರ್ಟಿಕಲ್ 19(4)ರಲ್ಲಿ ಹೇಳಿರುವ ’ನ್ಯಾಯಸಮ್ಮತವಾದ ನಿರ್ಬಂಧ’ದ ವ್ಯಾಪ್ತಿಯೊಳಗಿರಬೇಕು.

ಎರಡನೆಯದಾಗಿ, ಭಾರತದಲ್ಲಿ ಒಂದು ಜಾತ್ಯತೀತ/ಧರ್ಮನಿರಪೇಕ್ಷ ಸೇವಾ ಪರಂಪರೆ ಉತ್ತಮವಾಗಿ ಬೆಳೆದೇ ಇಲ್ಲ. ಇಲ್ಲಿ ಚಾರಿಟಿ ಎನ್ನುವುದು ಧರ್ಮ ಮತ್ತು ಜಾತಿಯನ್ನು ಅವಲಂಬಿಸಿದೆ. ಈಗಲೂ ಅತಿ ಹೆಚ್ಚಿನ ದೇಣಿಗೆಗಳು ದೇವಸ್ಥಾನಗಳಿಗೆ ಹರಿದುಬರುತ್ತವೆ; ’ಸಾಂಸ್ಕೃತಿಕ’, ’ಶೈಕ್ಷಣಿಕ’ ಅಥವಾ ’ಸೇವಾಸಂಸ್ಥೆ’ಯಲ್ಲದೆ, ಕೇವಲ ಧಾರ್ಮಿಕ ಕಾರಣಕ್ಕೆ ದೇಣಿಗೆ ಪಡೆಯುವುದರಲ್ಲಿ ತಿರುಪತಿ ದೇವಸ್ಥಾನವು ಮೊದಲನೆಯದಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಇಲ್ಲದಿರುವುದರ ಬಗ್ಗೆ ವ್ಯಥೆಪಟ್ಟಿದ್ದರು; ’ಯಾವುದೇ ತಪ್ಪಿನಿಂದ ಸಂಕಷ್ಟಕ್ಕೆ ಒಳಗಾಗುವವರು ಯಾರು ಬೇಕಾದರೂ ಆಗಿರಲಿ, ಪ್ರತಿಯೊಂದು ತಪ್ಪಿನ ಕುರಿತೂ ತಳಮಳಗೊಳ್ಳುವ ಸಾಕ್ಷಿಪ್ರಜ್ಞೆ’ಯನ್ನು ಅವರು ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಎಂದು ಹೆಸರಿಸಿದ್ದರು. ಭಾರತದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಧಾರ್ಮಿಕ ಅಥವಾ ಜಾತಿಯ ಪರಿಗಣನೆಯನ್ನು ಬದಿಗಿಟ್ಟು ಹಣಕಾಸಿನ ನೆರವು ನೀಡುವಂತಹ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಮೂಡುವವರೆಗೂ ಜಾತ್ಯತೀತ/ಧರ್ಮನಿರಪೇಕ್ಷ ಸಂಘಟನೆಗಳು ವಿದೇಶಿ ದೇಣಿಗೆಗಳತ್ತ ನೋಡದೆ ಬೇರೆ ದಾರಿಯಿರುವುದಿಲ್ಲ.

ಅನುವಾದ: ಸಿರಿಮನೆ ನಾಗರಾಜ್

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...