ಉಡುಪಿ ಅಷ್ಟ ಮಠಗಳ ವಾರ್ಷಿಕ ಜಾತ್ರೋತ್ಸವ ‘ಸಪ್ತೋತ್ಸವ ಮತ್ತು ಚೂರ್ಣೋತ್ಸವ’ ಜನವರಿ 14ರ ಮಕರ ಸಂಕ್ರಾಂತಿ ರಾತ್ರಿ ಮತ್ತು ಜನವರಿ 15ರ ಬೆಳಿಗ್ಗೆ ಅಷ್ಟ ಯತಿಗಳ ಅದ್ವರ್ಯದಲ್ಲಿ ಸಾವಿರಾರು ಜನರ ಸೇರಿಸಿ ಅದ್ಧೂರಿಯಾಗಿ ನಡೆಸಲಾಯಿತು. ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಧಿಕ್ಕರಿಸಿ ಜನ ಜಾತ್ರೆ ಸೇರಿಸಿ ನಡೆಸಲಾಗಿರವ ಈ ಉತ್ಸವದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆಯೆದ್ದಿದೆ. ಇದೇ ಸಂದರ್ಭದಲ್ಲಿ ಕೋವಿಡ್ ಪ್ರೊಟೋಕಾಲ್ ಉಲ್ಲಂಘನೆಯಾಗಿರುವುದರ ಕುರಿತು ಮಠದ ಸದಸ್ಯರೊಂದಿಗೆ ಸಭೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರ್ರವರಿಗೆ ಉಡುಪಿ ಜಿಲ್ಲಾಧಿಕಾರಿ ಎಂ ಕುರ್ಮರಾವ್ ಆದೇಶಿಸಿದ್ದಾರೆ.
ಸುಮಾರು 800 ವರ್ಷಗಳ ಹಿಂದೆ ದ್ವೈತ ಮತ ಪ್ರತಿಪಾದಕ ಶ್ರೀ ಮದ್ವಾಚಾರ್ಯರು ಮಕರ ಸಂಕ್ರಾಂತಿ ದಿನವೆ ಉಡುಪಿಯಲ್ಲಿ ಶ್ರೀಕೃಷ್ಣ ಮೂರ್ತಿಯನ್ನು ಪ್ರತಿಷ್ಟಾಪಿಸಿದರೆಂಬ ಪ್ರತೀತಿಯಿದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಸಂಕ್ರಮಣದ ಮೊದಲಿನ ಒಂದು ವಾರ ಸಪ್ತೋತ್ಸವ ಆಚರಿಸಾಗುತ್ತದೆ. ಮಕರ ಸಂಕ್ರಾಂತಿ ದಿವಸ ರಾತ್ರಿ ಮೂರು ತೇರುಗಳ ಉತ್ಸವ ನಡೆಸಿ, ಮರುದಿನ ಹಗಲು ರಥೋತ್ಸವದೊಂದಿಗೆ ಮಠದ ವಾರ್ಷಿಕೋತ್ಸವ ಮುಕ್ತಾಯವಾಗುತ್ತದೆ.
ಈ ಚೂರ್ಣೋತ್ಸವದಲ್ಲಿ ಶ್ರೀಕ್ರಷ್ಣನ-ಮುಖ್ಯ ಪ್ರಾಣ ಮೂರ್ತಿಗಳನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು ಸ್ವಾಗತ ಗೋಪುರದ ಮುಂದಿರವ ಬ್ರಹ್ಮರಥದಲ್ಲಿ ಪ್ರತಿಷ್ಟಾಪಿಸಲಾಗುತ್ತದೆ. ಅಷ್ಟ ಯತಿಗಳು ರಥವೇರಿ ಆರತಿ ಬೆಳಗಿದ ನಂತರ ರಥವನ್ನು ರಥ ಬೀದಿಗೆ ಒಂದು ಸುತ್ತು ಹಾಕಲಾಗುತ್ತದೆ. ನಂತರ ಶ್ರೀಕೃಷ್ಣ-ಮುಖ್ಯ ಪ್ರಾಣ ಮೂರ್ತಿಗಳನ್ನು ಮಠಕ್ಕೆ ತಂದು ಮದ್ವಮಂಟಪದಲ್ಲಿ ತೊಟ್ಟಿಲು ಪೂಜೆ ಮಾಡಲಾಗುತ್ತದೆ. ಒಕುಳಿಯನ್ನು ಎಂಟು ಯತಿಗಳ ಜತೆ ನೂರಾರು ಭಕ್ತರು ಹಂಚಿಕೊಂಡು ಮದ್ವ ಸರೋವರದಲ್ಲಿ ಅಭವೃತ ಸ್ನಾನಮಾಡುತ್ತಾರೆ. ಬಳಿಕ ಅನ್ನ ಸಂತರ್ಪಣೆಗಾಗಿ ತಯಾರಿಸಲಾದ ಅನ್ನದ ರಾಶಿಗೆ ಪಲ್ಲ ಪೂಜೆ ನೆರವೇರಿಸಲಾಗುತ್ತದೆ. ಸಾವಿರಾರು ಮಂದಿ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಇದು ಚೂರ್ಣೋತ್ಸವದ ಸಂಪ್ರದಾಯವಾಗಿದ್ದು, ಇದೆಲ್ಲ ಈ ಸಲವೂ ಕೋವಿಡ್ ನಿರ್ಬಂಧದ ಕರ್ಫ್ಯೂ ಜಾರಿಲ್ಲಿರುವಾಲೇ ಯಾವುದೆ ಅಳುಕು-ಅಂಜಿಕೆಯಿಲ್ಲದೆ ಅಷ್ಟ ಯತಿಗಳ ಸಮ್ಮುಖದಲ್ಲೇ ನೆರವೇರಿಸಲಾಗಿದೆ. ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮಿ, ಇವರಿಂದ ಇದೇ ಜ.18ರಂದು ಪರ್ಯಾಯ ಪೋಜಾಧಿಕಾರ ವಹಿಸಿಕೊಳ್ಳಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಸ್ವಾಮಿ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮಿ, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮಿ, ಕಾಣಿಯೂರು ಮಠದ ಶೀವಿದ್ಯಾವಲ್ಲಿ ತೀರ್ಥ ಸ್ವಾಮಿ, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಸ್ವಾಮಿ, ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮಿ ಮತ್ತು ಶಿರೂರು ಮಥದ ಶ್ರೀವೇದವರ್ಧನತೀರ್ಥ ಸ್ವಾಮಿ ಚೂರ್ಣೋತ್ಸವದಲ್ಲ ಪಾಲ್ಗೊಂಡಿದ್ದರು.
ಕೋವಿಡ್ ಮೂರನ ಅಲೆ ವೇಗವಾಗಿ ವ್ಯಾಪಿಸುತ್ತಿರುವ ಜಿಲ್ಲೆಗಳಲ್ಲಿ ಉಡುಪಿಯೂ ಒಂದಾಗಿದ್ದು, ಇಂಥ ಸೂಕ್ಮ ಪ್ರದೇಶದಲ್ಲಿ ಅಷ್ಟಯತಿಗಳ ಸಮ್ಮುಖದಲ್ಲೆೆ ಸಾವಿರಾರು ಜನರನ್ನು ಸೇರಿಸಿ ಕೋವಿಡ್ ಶಿಚ್ಟಾಚಾರವನ್ನು ಪ್ರಜ್ಞಾರ್ಪೂಕವಾಗಿ ಉಲ್ಲಂಘಿಸಿ ಅದ್ಧೂರಿ ಉತ್ಸವ ನಡೆಸಿದರೂ ಜಿಲ್ಲಾಡಳಿತ ಮತ್ತು ಪೋಲೀಸ್ ವ್ಯವಸ್ಥೆ ಅಸಾಯಕವೆಂಬಂತೆ ಇದ್ದರು ಎಂಬ ಆರೋಪ ಕೇಳಿಬಂದಿದೆ.
ವಾರಾಂತ್ಯದ ಕರ್ಫ್ಯೂ ಇದ್ದುದರಿಂದ ಉಡುಪಿಯಲ್ಲಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿ, ಚಟುವಟಿಕೆ ಸ್ಥಬ್ಧಗೊಂಡಿತ್ತು. ಆದರೆ ಈ ನಿಯಮ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಅಷ್ಟ ಮಠದ ಉತ್ಸವ ಮಾಸ್ಕ್ ಧಾರಣೆ,ಸರಕ್ಷಿತ ಅಂತರ ನಿರ್ಬಂಧ ಕಡೆಗಣಿಸಿ ನಡೆದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದೇಕೆಂಬ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ಒಡಿಶಾ: ಜಿಂದಾಲ್ ಸ್ಟೀಲ್ ವರ್ಕ್ಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ- ಪೊಲೀಸರಿಂದ ಮಾರಣಾಂತಿಕ ಹಲ್ಲೆ



ಕೋವಿಡ್ ಪ್ರೊಟೋಕಾಲ್ ಉಲ್ಲಂಘನೆ ಆಗಿರುವಾಗ ಕೇಸ್ ಹಾಕಬೇಕು; ಅಷ್ಟಮಠಗಳೊಟ್ಟಿಗೆ ಚರ್ಚೆ ಯಾಕೆ?