ದಲಿತ ಸಮುದಾಯದ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ 17 ವರ್ಷದ ಬಾಲಕಿಯನ್ನು ಆಕೆಯ ತಂದೆಯೆ ಕತ್ತು ಹಿಸುಕಿ ಕೊಂದಿರುವ ಹೀನಾಯ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಸಂಭವಿಸಿದೆ. ಮಗಳನ್ನು ಕೊಂದ ಬಂತರ ಆರೋಪಿ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪಿರಿಯಾಪಟ್ಟಣದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಾಲಕಿ, ಪಕ್ಕದ ಮೆಳ್ಳಹಳ್ಳಿ ಗ್ರಾಮದ ದಲಿತ ಸಮುದಾಯದ ಮಂಜು ಎಂಬ ಹುಡುಗನನ್ನು ಪ್ರೀತಿಸುತ್ತಿದ್ದರು. ಆದರೆ ಈ ಸಂಬಂಧಕ್ಕೆ ಹುಡುಗಿಯ ಕುಟುಂಬವು ತೀವ್ರವಾಗಿ ವಿರೋಧಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹುಡುಗನೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಇಡಬಾರದು ಎಂದು ಕುಟುಂಬವು ಬಾಲಕಿಗೆ ಎಚ್ಚರಿಕೆ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಬಾಲಕಿಯು ಪೋಷಕರ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಪಿರಿಯಾಪಟ್ಟಣ ಪೊಲೀಸರು ಒಂದು ತಿಂಗಳ ಹಿಂದೆ ಮೈಸೂರಿನ ಸರ್ಕಾರಿ ಬಾಲಕಿಯರ ನಿಲಯಕ್ಕೆ ಬಾಲಕಿಯನ್ನು ಕಳುಹಿಸಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ: ಪಬ್ಜಿ ಆಡುವುದನ್ನು ತಡೆದ ತಾಯಿಯನ್ನು ಕೊಲೆ ಮಾಡಿದ ಬಾಲಕ
ಇದರ ನಂತರ ಪೋಷಕರು ಹದಿನೈದು ದಿನಗಳ ಹಿಂದೆಯಷ್ಟೆ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಬಾಲಕಿತೆ ತೊಂದರೆ ನೀಡುವುದಿಲ್ಲ ಮತ್ತು ಅವರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿ ಮನೆಗೆ ಕರೆತಂದಿದ್ದರು.
ಬಾಲಕಿಯನ್ನು ಮನೆಗೆ ಕರೆತಂದ ನಂತರ, ತಂದೆ ಸುರೇಶ್ ಮತ್ತು ತಾಯಿ ಬೇಬಿ ಸೇರಿದಂತೆ ಕುಟುಂಬ ಸದಸ್ಯರು ಹುಡುಗನೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಬಾಲಕಿಯು ಮತ್ತೆ ಹುಡುಗನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಮಂಗಳವಾರ ಮುಂಜಾನೆ ಬಾಲಕಿ ಮತ್ತು ತಂದೆಯ ನಡುವೆ ಘರ್ಷಣೆ ಸಂಭವಿಸಿ, 2.30-3.00 ಗಂಟೆಯ ಸುಮಾರಿಗೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಾಲಕಿಯ ತಾಯಿ ಆಕೆಯ ಮೇಲೆ ನೀರು ಚಿಮುಕಿಸಿ ಬದುಕಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ನಂತರ ಪೋಷಕರು ಆಕೆಯ ಶವವನ್ನು ದ್ವಿಚಕ್ರ ವಾಹನದಲ್ಲಿ ಕೊಂಡೊಯ್ದು ಪಕ್ಕದ ಮೆಳ್ಳಹಳ್ಳಿ ಗ್ರಾಮಕ್ಕೆ ತೆರಳಿ ಶವವನ್ನು ರಸ್ತೆಬದಿ ಇಟ್ಟು ಮನೆಗೆ ಮರಳಿದ್ದಾರೆ.
ಇದನ್ನೂ ಓದಿ: ಕಾನ್ಪುರ ಘರ್ಷಣೆಯ 4 ದಿನಗಳ ನಂತರ ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕನ ಬಂಧನ
ಈ ಘಟನೆಯ ನಂತರ ಬಾಲಕಿಯ ತಂದೆ ಸುರೇಶ್ ಪಿರಿಯಾಪಟ್ಟಣ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಪೊಲೀಸರು ಸುರೇಶ್ ಮತ್ತು ಆತನ ಪತ್ನಿ ಬೇಬಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ದಲಿತರು ಇನ್ನೆಷ್ಟು ದಿನ ರೋಗ ಪೀಡಿತ ಸಮಾಜದಲ್ಲಿ ನರಳಬೇಕೋ ಏನೋ, ಈ ಜನ ಮನುಷ್ಯರು ಅನ್ನಿಸಿಕೊಳ್ಳೋಕೆ ನಾಲಾಯಕ್ ಅನ್ನಿಸತ್ತೆ, ಒಬ್ಬರಿಗೆ ಜೀವ ಕೊಡಲು ಸಾಧ್ಯವಿಲ್ಲ ವೆಂದಮೇಲೆ ಇವರಿಗೆ ಜೀವ ತೆಗೆಯುವ ಅಧಿಕಾರವೆಲ್ಲಿದೇ? ಆ ಹೆಣ್ಣು ಮಗಳಿಗೆ ಅದ ಸಾವಿಗೆ ಕನಿಷ್ಠ ನ್ಯಾಯ ಅಂದರೆ ಆ ಪಾಪಿಯನ್ನು ಸಹ ಕತ್ತು ಹಿಸುಕಿ ಕೊಲ್ಲುವ ಶಿಕ್ಷೆ ವಿಧಿಸಬೇಕು.
Daliths are neither dog nor pig to accept by the upper caste society. They are such a creature belonged to nowhere.
ಎಂಥಾ ಪಾಪಿಗಳು ಇವರು. ಜಾತಿಯ ವಿಷ ಎಷ್ಟರಮಟ್ಟಿಗೆ ಇವರೊಳಗೆ ಹರಿಯುತ್ತಿದೆ ಎಂಬುದನ್ನು ಈ ಘಟನೆ ಸಾಕ್ಷಿಕರೀಸುತ್ತದೆ. ಹೆತ್ತವರು ಕೊಲೆ ಮಾಡುವ ನಿರ್ದಯಿ ಕಾರ್ಯಕ್ಕೆ ಎಂದೂ ಕೈಹಾಕಬಾರದು. ಆಯ್ಕೆ ಮಾಡಿರುವವರನ್ನ ಹರಸಿ ಸುಮ್ಮನಿದ್ದುಬಿಡಬೇಕು.
ಇಂತಹವರಿಗೆ ಧಿಕ್ಕಾರವಿರಲಿ 😪
ಈಗ ಮಗಳನ್ನ ಕಳೆದುಕೊಂಡ ದುಃಖ ಯಾರು ಅನುಭವಿಸಬೇಕು ???
ನೋವು ಹೆತ್ತ ತಾಯಿಗೆ ತಾನೇ ???