Homeಮುಖಪುಟಇದ್ರೀಸ್ ಪಾಶ ಹತ್ಯೆ ಸಮರ್ಥಿಸಿಕೊಂಡ ಕೊಲೆ ಆರೋಪಿಗಳು: ಆಡಿಯೋ ವೈರಲ್

ಇದ್ರೀಸ್ ಪಾಶ ಹತ್ಯೆ ಸಮರ್ಥಿಸಿಕೊಂಡ ಕೊಲೆ ಆರೋಪಿಗಳು: ಆಡಿಯೋ ವೈರಲ್

ಒಂದಲ್ಲ, 10 ವರ್ಷ ಜೈಲಿಗೆ ಹಾಕಿದರೂ ಗೋವು ಕಡಿಯುವವರನ್ನು ಮತ್ತೆ ಕೊಲ್ತೀವಿ ಎಂದು ಇದ್ರೀಸ್ ಪಾಶ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಗೋಪಿಗೌಡ ಹೇಳಿದ್ದಾನೆ.

- Advertisement -
- Advertisement -

ದನ ಕುಯ್ಯೋದು ತಪ್ಪಲ್ವ? ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬರಲಿ, ಕಣ್ಮುಂದೆ ದನ ಕಡಿಯುವುದು ಕಂಡರೆ ಅವನನ್ನು ಮೊದಲು ಕಡಿತ್ತೀವಿ. ಒಂದಲ್ಲ 10 ವರ್ಷ ಜೈಲಿಗೆ ಹಾಕಿದರೂ ಗೋವು ಕಡಿಯುವವರನ್ನು ಮತ್ತೆ ಕೊಲ್ತೀವಿ ಎಂದು ಇದ್ರೀಸ್ ಪಾಶ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಗೋಪಿಗೌಡ ಎಂಬುವವನು ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದೆ.

ಹಿಂದುತ್ವ ಎನ್ನುವುದು ನಮ್ಮ ರಕ್ತದಲ್ಲಿ ಬಂದಿದೆ. ದನ ತಿನ್ನಬೇಡಿ, ಮುಸ್ಲಿಮರಿಗೆ ಸಪೋರ್ಟ್ ಮಾಡಬೇಡಿ. ನಮ್ಮಂತವರು ಸತ್ತರೆ ಸಾವಿರ ಜನ ಕೆಲಸ ಮಾಡುತ್ತಾರೆ ಎಂದು ಅಹೋರಾತ್ರ ಎಂಬುವವರಿಗೆ ಫೋನ್ ಮಾತನಾಡಿರುವ ಆಡಿಯೋವನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದ್ರೀಸ್ ಪಾಶನನ್ನು ಏಕೆ ಕೊಂದಿರಿ? ನೀವು ಪೊಲೀಸರಿಗೆ ಹಿಡಿದುಕೊಟ್ಟಿದ್ದರೆ ಸಾಕಿರಲಿಲ್ವ? ಕಾನೂನು ಮೀರಿದ್ದು ಏಕೆ ಎಂದು ಅಹೋರಾತ್ರ ಪ್ರಶ್ನಿಸಿದ್ದಕ್ಕೆ, “ದನ ಕಡಿಯೋದು ತಪ್ಪಲ್ವ? ದನ ಕಡಿಯುವವರನ್ನು ನಾವು ಕಡಿಯುತ್ತೇವೆ” ಎಂದು ಹೇಳುವ ಮೂಲಕ ಇದ್ರೀಸ್ ಪಾಶ ಹತ್ಯೆಯನ್ನು ಸಮರ್ಥಿಸಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಕಾಂಗ್ರೆಸ್‌ನವರು ಗೆದ್ದುಬಿಟ್ಟಿದ್ದಾರೆ, ಹಾಗಾಗಿ ನಾವು ಸುಮ್ಮನಾಗಿಬಿಟ್ಟಿದ್ದಾರೆ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ ನಾವು ಗೋವುಗಳ ರಕ್ಷಣೆ ಮಾಡಿಯೇ ಮಾಡುತ್ತೇವೆ ಎಂದು ಇದ್ರೀಸ್ ಪಾಶ ಹತ್ಯೆಯ ಆರೋಪಿಗಳಾದ ಪವನ್ ಮತ್ತು ಅಂಬಿಗಾರ್ ಎಂಬುವವರು ಮಾತನಾಡಿದ್ದಾರೆ.

ಫೋನ್ ಕರೆಯಲ್ಲಿ ಅಹೋರಾತ್ರ ಮಾತನಾಡಿ, “ಸೂಲಿಬೆಲೆ ನಿಮ್ಮನ್ನು ಹೊರಗೆ ಕರೆಸಿಕೊಂಡು, ನಿಮಗೆ ಊಟ ಹಾಕಿದ್ದು ಏಕೆ? ನಾಗರಕಟ್ಟೆಯ ಅಶ್ವಥ ಮರ ಕಡಿದಿದ್ದಕ್ಕೆ ಅನುಭವಿಸಿದರಿ. ಯಾರನ್ನು ಕೊಂದರು ಅಧರ್ಮ. ಜಗತ್ತಿನ ಯಾವ ಧರ್ಮವೂ ಕೊಲ್ಲು ಎಂದು ಹೇಳಿಕೊಡುವುದಿಲ್ಲ. ನೀವು ಇದ್ರೀಸ್ ಪಾಶನಿಗೆ ಏಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದು” ಎಂದು ಪ್ರಶ್ನಿಸಿದ್ದಾರೆ. ಆದರೆ ಆರೋಪಿಗಳು ಕೊಲ್ಲಲು ನೀನೆ ಹೇಳಿದ್ದು, ನೀನೆ ಮಾಡಿದ್ದು ಎಂದಿದ್ದಾರೆ. ಯಾರಾದರೂ ಸಾಬರು ನಿನಗೆ ಹೊಡೆಯಲು ಬಂದರೆ ನಮ್ಮನ್ನು ಕರಿ ಬರುತ್ತೇವೆ, ನಿನ್ನನ್ನು ಉಳಿಸುತ್ತೇವೆ ಎಂದಿದ್ದಾರೆ.

ನೀನು ನನಗೆ ಜಾಮೀನು ಕೊಡಿಸುತ್ತೀಯಾ? ಸಪೋರ್ಟ್ ಮಾಡ್ತೀಯ ಎಂದು ನಂಬಿದ್ದೇವು. ಆದರೆ ನೀನು ಮುಂಬೈಗೆ ಕರೆದು ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿಕೊಂಡೆ ಎಂದು ಅಹೋರಾತ್ರ ವಿರುದ್ಧ ಆರೋಪಿಸಿದ್ದಾರೆ.

ಆನಂತರ ಆಹೋರಾತ್ರ ಸಾತನೂರು ಪೊಲೀಸ್ ಠಾಣೆಗೆ ಫೋನ್ ಮಾಡಿ ಪುನೀತ್ ಕೆರೆಹಳ್ಳಿ ಜೊತೆಗಿದ್ದ ಆರೋಪಿಗಳು ಫೋನ್ ಮಾಡಿ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆನಂತರ ಕನಕಪುರ ಇನ್ಸ್‌ಪೆಕ್ಟರ್‌ರವರಿಗೆ ಫೋನ್ ಮಾಡಿ, “ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳು ಫೋನ್ ಮಾಡಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ. ಇನ್ಸ್‌ಪೆಕ್ಟರ್‌ ದೂರು ದಾಖಲಿಸಿ ಎಂದಾಗ ನಾನು ಬಾಂಬೆಯಲ್ಲಿದ್ದೇನೆ, ನಿಮಗೆ ವಾಟ್ಸಾಪ್‌ ಮೂಲಕ ಆಡಿಯೋ ಕಳಿಸುತ್ತೇವೆ” ಎಂದಿದ್ದಾರೆ. ಈ ವೇಳೆ ಪೊಲೀಸರು ನಾವು ಶೀಘ್ರದಲ್ಲಿಯೇ ಚಾರ್ಜ್‌ಶೀಟ್‌ ಸಲ್ಲಿಸುತ್ತೇವೆ ಎಂದು ಹೇಳಿರುವುದು ದಾಖಲಾಗಿದೆ.

ಇನ್ನೊಂದೆಡೆ ಇದ್ರೀಸ್ ಪಾಶ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ “ಇದ್ರೀಸ್ ಪಾಶ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಹೇಗೆ 25 ಲಕ್ಷ ಪರಿಹಾರ ನೀಡಿದ್ದೀರಿ” ಎಂದು ಮನಬಂದಂತೆ ಮಾತನಾಡಿದ್ದಾನೆ.

ಟ್ರಕ್ ಚಾಲಕ ಇದ್ರೀಸ್ ಪಾಶ ಹತ್ಯೆಯಲ್ಲಿ ಪೊಲೀಸರ ಕರ್ತವ್ಯ ಲೋಪ ಕಂಡುಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ನಕಲಿ ಗೋರಕ್ಷಕರಿಗೆ ಎಚ್ಚರಿಕೆ ನೀಡಿ, ವಶಕ್ಕೆ ಪಡೆದಿದ್ದಲ್ಲಿ ಹತ್ಯೆಯನ್ನು ತಡೆಗಟ್ಟಬಹುದಿತ್ತು ಎಂದು ಸತ್ಯ ಶೋಧನಾ ವರದಿ ತಿಳಿಸಿದೆ.

ವಕೀಲ ಶಿವಮಾನಿತನ್, ಸಿದ್ಧಾರ್ಥ್ ಕೆ.ಜಿ, ಡಾ. ಸಿಲ್ವಿಯಾ ಕರ್ಪಗಂ, ಖಾಸಿಂ ಶೋಯೆಬ್ ಖುರೇಷಿ ಮತ್ತು ಅಖಿಲ ಭಾರತ ಜಮೈತುಲ್ ಖುರೇಷ್ (ಕರ್ನಾಟಕ) ಸದಸ್ಯರ ಸತ್ಯಶೋಧನಾ ತಂಡವು ಇದ್ರೀಸ್ ಪಾಶ ಹತ್ಯೆ ಪ್ರಕರಣದ ಸತ್ಯಶೋಧನಾ ವರದಿಯನ್ನು ಪ್ರಕಟಿಸಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಶಿಫಾರಸ್ಸುಗಳನ್ನು ಸಲ್ಲಿಸಿದ್ದಾರೆ.

ಹಣ ಸುಲಿಗೆ ಮಾಡುವ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ದಾಳಿ ನಡೆಸುವ ಉದ್ದೇಶದಿಂದ ಸಮಾಜ-ವಿರೋಧಿ ಗುಂಪುಗಳು ಬಹಿರಂಗವಾಗಿ ಕಾನೂನನ್ನು ಕೈಗೆತ್ತಿಕೊಂಡಿವೆ. ಪೊಲೀಸರ ಯಾವುದೇ ಭಯವಿಲ್ಲದೆ ಪೊಲೀಸ್ ಠಾಣೆಯ ಹತ್ತಿರವೇ ಮೂರು ಜನ ನಾಗರೀಕರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರು ತಕ್ಷಣವೇ ಈ ದಾಳಿಕೋರರನ್ನು ಬಂಧಿಸುವ ಬದಲು ಇನ್ನುಳಿದ ಸಂತ್ರಸ್ಥರನ್ನು ಹುಡುಕಲು ದಾಳಿಕೋರರನ್ನು ಬಿಟ್ಟಿದ್ದಾರೆ. ಪೊಲೀಸ್ ಠಾಣೆಯ ಸಿಬ್ಬಂಧಿಯೊಬ್ಬರು ಸಂತ್ರಸ್ಥರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಕಣ್ಣಾರೆ ಕಂಡ ನಂತರ ಹಾಗೂ ಪೊಲೀಸ್ ಠಾಣೆ ಹೊರಗೆ ಸ್ವತಃ ದಾಳಿಕೋರರೇ ಫೇಸ್‌ಬುಕ್ ಲೈವ್ ಮಾಡಿದರೂ ಸಹ ದಾಳಿಕೋರರನ್ನು ಬಂಧಿಸಿರುವುದಿಲ್ಲ. ಇದರಿಂದಾಗಿಯೇ ಇದ್ರೀಸ್ ಪಾಶರವರ ಹತ್ಯೆಯಾಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ; ಇದ್ರೀಸ್ ಪಾಶ ಹತ್ಯೆಗೆ ಪೊಲೀಸರ ಕರ್ತವ್ಯ ಲೋಪವೂ ಕಾರಣ: ಸತ್ಯಶೋಧನಾ ವರದಿ ಬಿಡುಗಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...