Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿಚಳ್ಳೆ ಹಣ್ಣಿನ ಮರದ ಮಹಿಮೆ: ಚಳ್ಳೆ ಹಣ್ಣಿನ ಉಪಯೋಗಗಳು

ಚಳ್ಳೆ ಹಣ್ಣಿನ ಮರದ ಮಹಿಮೆ: ಚಳ್ಳೆ ಹಣ್ಣಿನ ಉಪಯೋಗಗಳು

ನಮ್ಮ ಹಳ್ಳಿಯವರು "ಸರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದೆ” ಎಂಬ ನುಡಿಗಟ್ಟು ಬಳಸುತ್ತಾರೆ. ನಾನು ಯಾರಿಗೂ ಚಳ್ಳೆಹಣ್ಣು ತಿನ್ನಿಸಿಲ್ಲ, ಆದರೆ ..

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ… ಭಾಗ-9 

ನಾವು ಈ ಮರವನ್ನು ಕಡಿಯದೆ ಉಳಿಸಿಕೊಂಡಿರುವುದಕ್ಕೆ ಜನ ನಗುತ್ತಾರೆ. ಈ ಮರವನ್ನು ಕಡಿಯದೆ ಯಾಕೆ ಮರವಾಗಲು ಬಿಟ್ಟಿದ್ದಾರೆ ಎಂಬುದು ಇವರ ನಗೆಗೆ ಕಾರಣ.  ಏಕೆಂದರೆ ಅವರ ಪ್ರಕಾರ ಇದು “ಹಣ್ಣಿಗೆ ಹಣ್ಣಿನ ಮರವಲ್ಲ, ಮುಟ್ಟಿಗೆ ಮುಟ್ಟಿನ ಮರವಲ್ಲ, ಹೀಗಿರುವಾಗ ಸುಮ್ಮನೆ ಜಾಗ ತಿನ್ನುವ ಈ ಮರ ವೇಸ್ಟ್”.‌

ಈ ಮರವೂ ನಾವು ನೆಟ್ಟು ನೀರುಣಿಸಿ ಬೆಳೆಸಿದ್ದಲ್ಲ, ಹಕ್ಕಿ ತನ್ನ ಹಿಕ್ಕೆಯ ಜೊತೆ ಬೀಜ ಉದುರಿಸಿ ಉತ್ಪತ್ತಿ ಮಾಡಿದ ಮರ. ಈ ಮರವೀಗ ನಮ್ಮ ಅಚ್ಚುಮೆಚ್ಚು. ಬೇರೆಲ್ಲ ಹಣ್ಣಿನ ಮರಗಳಿಗಿಂತಲೂ ವಿಶೇಷ ಗೌರವ.

ಈ ಚಳ್ಳೆ ಹಣ್ಣುಗಳನ್ನು ನಾವು ಸಣ್ಣ ಹುಡುಗರಾಗಿದ್ದಾಗ ಗೊಣ್ಣೆ ಹಣ್ಣಿನ ಹೆಸರಿನಲ್ಲಿ ನಲುಬಿಕೊಂಡು ತಿಂದ ನೆನಪು. ಗೊಣ್ಣೆ ಹಣ್ಣು, ಸೊಳ್ಳೆ ಹಣ್ಣು, ಚಳ್ಳೆ ಹಣ್ಣು ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಹಣ್ಣು ಹೆಚ್ಚು ಬಳಕೆಯ ಹಣ್ಣಲ್ಲ. ಉದಾಸೀನಕ್ಕೆ ಒಳಗಾಗಿರುವ ಅನೇಕ ಒಳ್ಳೆಯ ಹಣ್ಣುಗಳಲ್ಲಿ ಇದೂ ಒಂದು ಎನ್ನಬಹುದು.

ಒಗರು ಮಿಶ್ರಿತ, ಸಾಧಾರಣ ಸಿಹಿಯ, ತಿಳಿ ಕಂದು ಬಣ್ಣದ ಈ ಹಣ್ಣುನ್ನು ತಿನ್ನಲು ರೂಢಿ ಮಾಡಿಕೊಂಡರೆ, ಇಷ್ಟವಾಗತೊಡಗುತ್ತದೆ. ಗಟ್ಟಿ ಬೀಜವುಳ್ಳ, ಲೋಳೆಯಂತೆ ಬಾಯಿಗೆ ಅಂಟಿಕೊಂಡು ನಲುಬಲು ಒತ್ತಾಯಿಸುವ ಈ ಹಣ್ಣು ಹಣ್ಣುಗಳಲ್ಲೇ ವಿಶಿಷ್ಟವಾದುದು. ಅಪಾರ ಜೀವ ಸತ್ವದಿಂದ ಕೂಡಿರುವ ಈ ಹಣ್ಣನ್ನು ಮಕ್ಕಳಿಗೆ ರೂಢಿ ಮಾಡಿಸಿದರೆ ಬಬಲ್‌ ಗಮ್‌ ಕಾಯಿಲೆಯಿಂದ ಹುಷಾರು ಮಾಡಬಹುದು.

ದೊಡ್ಡ ಅಂದರೆ ದ್ರಾಕ್ಷಿ ಗಾತ್ರದ, ಸಣ್ಣ ಅಂದರೆ ಅವರೆ ಕಾಳು ಗಾತ್ರದ ಹೀಗೆ ಎರಡು ಬಗೆಯ ಪ್ರಭೇದಗಳಿವೆ. ಏಪ್ರಿಲ್‌ ಮೇ ತಿಂಗಳಲ್ಲಿ ಕಾಯಿ, ಜೂನ್‌ ಜುಲೈ ತಿಂಗಳಲ್ಲಿ ಹಣ್ಣು ಲಭ್ಯ.

ಒಮ್ಮೆ ನಾಟಕ ನೋಡಲೆಂದು ಸಾಣೆಹಳ್ಳಿಗೆ ಹೋಗಿದ್ದಾಗ ಮಠದಲ್ಲಿ ಊಟಕ್ಕೆ ಒಂದು ಬಗೆಯ ಉಪ್ಪಿನಕಾಯಿ ಇಟ್ಟರು. ನಮ್ಮ ತುಮಕೂರು ಸೀಮೆಯ ಜನಕ್ಕೆ ಗೊತ್ತಿಲ್ಲದ ಹೊಸರುಚಿಯ ಉಪ್ಪಿನಕಾಯಿ ಅದಾಗಿತ್ತು. ನನ್ನ ಹೆಂಡತಿ ಆ ಬಗೆಗೆ ವಿಚಾರಿಸಲಾಗಿ ಅದು “ಚಳ್ಳೆಕಾಯಿ” ಉಪ್ಪಿನಕಾಯಿ  ಎಂದು ಗೊತ್ತಾಯಿತು. ತಕ್ಷಣವೇ ನಮ್ಮ ತೋಟದ ಆ ಚಳ್ಳೆ ಹಣ್ಣಿನ ಮರ ನಮ್ಮ ಮನಸ್ಸಿನಲ್ಲಿ ಮಾವಿನ ಮರಕ್ಕಿಂತ ಎತ್ತರ ಬೆಳೆದು ನಿಂತಿತ್ತು. ಎಂಥ ವಿಶಿಷ್ಟ ರುಚಿ, ಏನು ಮಜವಾದ ಒಗರು. ಲೈಕ್‌ ಅಟ್‌ ಫಸ್ಟ್‌ ಟೇಸ್ಟ್‌ ಎನ್ನಬಹುದು. ನಾವೂ ಆ ಮರವನ್ನು ಕಡಿಯದೆ ಗೌರವದಿಂದ ಉಳಿಸಿಕೊಂಡದ್ದಕ್ಕೆ ಹೆಮ್ಮೆ ಎನಿಸಿತು.

ಊರಿಗೆ ಮರಳಿದ್ದೇ ತಡ ನಾವಿಬ್ಬರೂ ಆ ಮರದ ಬಳಿ ಹೋಗಿ, ಚಳ್ಳೆ ಹೀಚುಗಳಿಂದ ಜೋಲಾಡುತ್ತಿದ್ದ ಆ ಮರವನ್ನು ನೇವರಿಸಿ ಬಂದೆವು. ಅಂದಿನಿಂದ ಪ್ರತಿ ವರ್ಷ ಚಳ್ಳೆಕಾಯಿಯ ಉಪ್ಪಿನಕಾಯಿ ನಮ್ಮ ಮಾವು, ಅಮಟೆ, ನಿಂಬೆ, ಯಳ್ಳಿ, ಹುಣಿಸೆ ಮುಂತಾದ ಉಪ್ಪಿನಕಾಯಿಗಳ ಸಾಲಿನಲ್ಲಿ ಉನ್ನತ ಸ್ಥಾನ ಪಡೆಯಿತು. ಮನೆಗೆ ಬಂದವರಿಗೆಲ್ಲ ಇದರ ರುಚಿಯನ್ನು ತೋರಿಸುವ ಪರಿಪಾಠ ನಡೆದಿದೆ.

ಈ ಮಧ್ಯೆ ಮರದಲ್ಲಿ ಇನ್ನು ಉಳಿದಿದ್ದ ಹಣ್ಣುಗಳನ್ನು ಬಿಡಿಸಿ ಬೆಲ್ಲದೊಂದಿಗೆ ಬೆರಸಿ ವೈನ್‌ ತಯಾರಿಸುವ ಪ್ರಯತ್ನ ಮಾಡಿದೆ. ಮೊದಲು ಹಣ್ಣುಗಳನ್ನು ಒಂದು ಮಡಕೆಗೆ ಕಿವುಚಿ ಬೀಜ ಬೇರ್ಪಡಿಸಿ ಅದಕ್ಕೆ ಎರಡರಷ್ಟು ಪುಡಿಮಾಡಿಟ್ಟುಕೊಂಡ ಬೆಲ್ಲ ಸೇರಿಸಿದೆ. ಇದಕ್ಕೆ ಈಸ್ಟ್‌ ಬೆರೆಸುವ ಗೋಚಿಗೆ ಹೋಗಲಿಲ್ಲ. ಮಡಕೆಯ ಮುಚ್ಚಳ ಮುಚ್ಚಿ ಒಂದು ತಿಂಗಳವರೆಗೆ ಇಟ್ಟು ವಾರಕ್ಕೊಮ್ಮೆ ತಿರುವುತ್ತಾ ಬಂದೆ. ನಂತರ ಇಳಿದುಕೊಂಡಿದ್ದ ಚಳ್ಳೆ ಹಣ್ಣಿನ ರಸವನ್ನು ಸುರಿದುಕೊಂಡು ಬಾಟಲ್‌ನಲ್ಲಿ ಸಂಗ್ರಹಿಸಿದೆ. ಗಟ್ಟಿಯಾಗಿ ಜೇನುತುಪ್ಪದಂತಿರುವ ಈ ರಸವನ್ನು ಸ್ವಲ್ಪ ನೀರು ಬೆರೆಸಿಕೊಂಡು ಕುಡಿದರೆ ಒಳ್ಳೆಯದು. ಎಷ್ಟು ದಿನ ಇಟ್ಟರೂ ಕೆಡುವುದಿಲ್ಲ. ಮನೆಗೆ ಬಂದ ಗೆಳೆಯರಿಗೆ ಈ ಬಗೆಯ ಪೇಯವನ್ನು ಜೂಸ್‌ ಹೆಸರಿನಲ್ಲಿ ಕೊಟ್ಟು ಕುಡಿಸಿದ್ದೇವೆ. ನಮ್ಮ ಜನಪದರು ಯಾರನ್ನಾದರು ಪಿಗ್ಗಿ ಬೀಳಿಸುವುದಕ್ಕೆ ತಮಾಷೆಯಾಗಿ “ಸರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದೆ” ಎಂಬ ನುಡಿಗಟ್ಟು ಬಳಸುತ್ತಾರೆ. ನಾನು ಯಾರಿಗೂ ಚಳ್ಳೆಹಣ್ಣು ತಿನ್ನಿಸಿಲ್ಲ, ಆದರೆ …

ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಚಳ್ಳೆಹಣ್ಣಿನ ಉಪ್ಪಿನಕಾಯಿ ವಿಷಯ ಓದಿ ಆಶ್ಚರ್ಯವಾಯಿತು. ನಮಗೆ ಮಾವಿನಕಾಯಿ, ಮಿಡಿ ಮಾವಿನಕಾಯಿ, ನಿಂಬೆ ಉಪ್ಪಿನಕಾಯಿ ಗೊತ್ತು‌. ಚಳ್ಳೆಹಣ್ಣಿನ ಉಪ್ಪಿನಕಾಯಿ ಹೇಗಿರಬಹುದು ಅಂತಾ ಆಲೋಚಿಸುತ್ತಿದ್ದೇನೆ.
    ನನಗೆ ಅರ್ಧ ಕೆಜಿಯಷ್ಟು ಚಳ್ಳೆಹಣ್ಣಿನ ಉಪ್ಪಿನಕಾಯಿಯನ್ನ ಅಂಚೆ ಇಲ್ಲವೇ ಕೂರಿಯರ್ ಮೂಲಕ ಕಳುಹಿಸಿ ಜೊಡುವಿರಾ. ಪೋನ್ ಪೇ ಮೂಲಕ ಹಣ ಸಂದಾಯ ಮಾಡುತ್ತೇನೆ.
    ವ್ಯವಹಾರ ಅನ್ನಬೇಡಿ ಆಹಾರ ಸಂಸ್ಕೃತಿಗಳ ಪರಿಚಯಿಸುವಿಕೆ ಎಂದು ಭಾವಿಸಲು ಮನವಿ.
    ಮೊಬೈಲ್ ಸಂಖ್ಯೆ: 98869 40339.

  2. ಚಳ್ಳೆಹಣ್ಣು ನನಗೂ ಗೊತ್ತು ನಮ್ಮ ತೋಟದ ಮೂಲೆಯಲ್ಲಿ ಒಂದು ದೊಡ್ಡ ಮರವಿತ್ತು. ಗೊಂಚಲು ಗೊಂಚಲು ಕಾಯಿ ಇರುತ್ತಿದ್ದವು. ಕಾಯಿಯಲ್ಲಿ ತುಂಬಾ ಲೋಳೆ, ಹಣ್ಣಿನಲ್ಲಿ ಕಡಿಮೆ ಲೋಳೆಯಿದ್ದ ನೆನಪು. ಉಪ್ಪಿನಕಾಯಿಯಲ್ಲಿ ಲೋಳೆಯೆ ಇರುವುದಿಲ್ಲ, ಏಕೆಂದರೆ ಉಪ್ಪಿನ ನೀರಿನಲ್ಲಿ ವಾರ ಹದಿನೈದು ದಿನಗಳವರೆಗೂ ಕಾಯಿಗಳನ್ನ ಬಿಟ್ಟಿರುತ್ತಾರೆ. ಹಣ್ಣು ಮತ್ತು ಉಪ್ಪಿನಕಾಯಿ ತಿನ್ನಲು ತುಂಬಾ ಚನ್ನಾಗಿರುತ್ತವೆ.ಅ ಮರ ಈಗಲೂ ನಮ್ಮ ತೋಟದಲ್ಲಿದೆ.

  3. I have heard the name of that fruit and the idiom connected to it right from childhood
    Today knowing more about it I really felt happy
    Thanks a lot

  4. ಗುರುಗಳೇ ಈ ಸೊಳ್ಳೆಹಣ್ಣಿನ ಮರಗಳು ನಮ್ಮೂರಿನ ತೋಟದ ಸಾಲುಗಳು ಉದಿ ಬದುಗಳಲ್ಲಿ ಬಹಳಷ್ಟಿದ್ದವು ನಾವು ಚಿಕ್ಕವರಿದ್ದಾಗ ನವಳುತ್ತ ನವಳುತ್ತ ತಿಂದ ನೆನಪುಗಳು ಅಜರಾಮರ ಹಾಗೆ ನಮ್ಮ ಹರಿದ ಪುಸ್ತಕದ ಪುಟಗಳನ್ನು ಮತ್ತೆ ಜೋಡಿಸಲು ಈ ಗೊಣ್ಣೆಹಣ್ಣಿನ ಅಂಟು ಬಳಸುತ್ತಿದ್ದುದು ಸ್ಮರಣೆಯಾಗುತ್ತಿದೆ. ಹಾಗೆಯೇ ಬಹಳಷ್ಟು ಬಾರಿ ಕಾರಾಹುಣ್ಣಿಮೆಯ ದಿನ ಎತ್ತುಗಳ ಕೊಂಬುಗಳನ್ನು ಸಿಂಗರಿಸಲು ಹುಣಸೆ ಬೀಜದ ಸರಿ ಮಾಡಲಿಲ್ಲವಾದರೆ ಇದೇ ಸೊಳ್ಳೆಹಣ್ಣಿನ ಅಂಟಿನ ಮೊರೆ ಹೋದದ್ದೂ ಉಂಟು. ಆದರೆ ಇಂದು ಬಹುತೇಕ ಮರಗಳು ಅಡಕೆಯೆಂಬ ಅನಾಗರೀಕ ಬೆಳೆಯ ಹಿಂದೆ ಬೀಳಲು ತೋಟ ಹೊಲಗಳಲ್ಲಿ ಬದುವಿನಂಚಿನ ಗಿಡ ಮರಗಳು ಸಮ್ಮೂಲವಾಗಿ ನಾಶವಾಗುತ್ತಿವೆ..

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...