Homeಮುಖಪುಟಸಮಯ ನಿರ್ವಹಣೆಯ ಕಲೆ: ಹೀಗೆ ಮಾಡಿದರೆ ನಿಮ್ಮ ಸಮಯ ಉಳಿಸಬಹುದು ಗೊತ್ತೆ?

ಸಮಯ ನಿರ್ವಹಣೆಯ ಕಲೆ: ಹೀಗೆ ಮಾಡಿದರೆ ನಿಮ್ಮ ಸಮಯ ಉಳಿಸಬಹುದು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ-26

ಸಮಯ ನಿರ್ವಹಣೆಯ ಕಲೆ:

ದೇವರು ಪ್ರತಿಯೊಬ್ಬರಿಗೂ ಶಕ್ತಿ, ರೂಪ, ಗುಣ, ಸಂಪನ್ಮೂಲ, ಕಷ್ಟ, ಸುಖ, ಹಂಚುವಾಗ ತಾರತಮ್ಯ ತೋರಿರುವುದು ಎಲ್ಲೆಲ್ಲೂ ಎದ್ದು ಕಾಣುತ್ತದೆ. ಆದರೆ ಒಂದು ವಿಷಯದಲ್ಲಿ ಮಾತ್ರ, ಎಲ್ಲರಿಗೂ ಸರಿಸಮಾನವಾಗಿ, ದಿನಕ್ಕೆ 24 ಗಂಟೆಗಳನ್ನು ನೀಡಿರುತ್ತಾನೆ. ಯಾರಿಗೂ 25 ಗಂಟೆಯಾಗಲೀ, 23 ಗಂಟೆಯಾಗಲೀ ನೀಡಿಲ್ಲ. ಆದರಿಂದ ಸಮಯದ ಅಭಾವಕ್ಕೆ ಎಲ್ಲರೂ ತಮ್ಮನ್ನು ತಾವೇ ಹೊಣೆಗಾರರು ಎಂದು ಪರಿಗಣಿಸಬೇಕು.

ಕೆಲವರು ತಮ್ಮ ಎಲ್ಲಾ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಿ, ಹಾಯಾಗಿ ಹರಟೆ ಕೊಚ್ಚಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಬೇರೊಬ್ಬರ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದಕ್ಕೂ ಸಮಯ ತೆಗೆದರೆ ಇನ್ನು ಕೆಲವರಿಗೆ ಯಾವ ಕೆಲಸಕ್ಕೂ ಪುರುಸೊತ್ತು ಇರುವುದಿಲ್ಲ. ಏಕೆ ಹೀಗೆ ಎಂದು ಯೋಚಿಸಿದ್ದೀರಾ?

ಸಮಯ ಯಾವಾಗಲೂ ಒಂದೇ ಗತಿಯಲ್ಲಿ ಓಡುತ್ತದೆ. ನಿಮ್ಮ ಕೆಲಸದ ಗತಿ ಅಥವಾ ನಿಮ್ಮ ಬೇಕು-ಬೇಡದ ಪ್ರಕಾರ ಹೊತ್ತು ಹೋಗುವುದಿಲ್ಲ. ಆದ್ದರಿಂದ ನಿಮ್ಮ ಕೆಲಸ ಸಮಯದೊಳಗೆ ಮಾಡಿ ಮುಗಿಸುವುದನ್ನು ನೀವೇ ಕಲಿಯಬೇಕು. ಇದನ್ನೇ ಸಮಯ ನಿರ್ವಹಣೆ (ಟೈಂ ಮ್ಯಾನೇಜ್ಮೆಂಟ್) ಎನ್ನುತ್ತಾರೆ. ಜೀವನಾವಶ್ಯಕ ಕಲೆಗಳಲ್ಲಿ ಇದೂ ಒಂದು.

ನಮ್ಮ ಇನ್ನೊಂದು ಬಹು ದೊಡ್ಡ ಸಮಸ್ಯೆ ಕೆಲಸಗಳನ್ನು ಮುಂದೂಡುವುದು (ಪ್ರೊಕ್ರಾಸ್ಟಿನೇಷನ್). ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದೇ, ವಿನಾಕಾರಣ ಮುಂದೂಡುತ್ತ ಹೋಗುತ್ತೇವೆ. ಅದರಿಂದ ಅವು ಮುಂದೆ ಗಂಭೀರ ರೂಪ ತಳೆದು, ನಮ್ಮನ್ನು ತೊಂದರೆಗೀಡುಮಾಡುತ್ತವೆ. ನಿಮಿಷಗಳಲ್ಲಿ ಆಗುವ ಕೆಲಸ ಗಂಟೆಗಟ್ಟಲೆ ತೆಗೆದುಕೊಳ್ಳುತ್ತದೆ. ಬೇರೆಯವರಿಂದ ಮಾತೂ ಕೇಳಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಿ.

ನಿಮ್ಮ ದಿನಚರಿಯನ್ನು, ದೈನಂದಿನ ಎಲ್ಲಾ ಕೆಲಸಗಳ ಒಂದು ಉದ್ದನೆಯ ಪಟ್ಟಿ ತಯಾರಿಸಿ. ಯಾವುದನ್ನೂ, ಕೆಲಸ ಎಷ್ಟೇ ಸಣ್ಣದಾದರೂ ಸರಿ, ಬಿಡಬೇಡಿ, ಪಟ್ಟಿಯಲ್ಲಿ ಸೇರಿಸಿ. ನಿದ್ದೆ, ಊಟ, ಸ್ನಾನ, ಬಸ್ಸು-ರೈಲು-ಸಾರಿಗೆಗೆ ಕಾಯುವುದು, ಇತ್ಯಾದಿ ಎಲ್ಲಾ ಕೆಲಸಕ್ಕೂ ನೀವು ಎಷ್ಟು ಸಮಯ ಈಗ ತೆಗೆದುಕೊಳ್ಳುತ್ತೀರಿ ಎಂಬುದನ್ನೂ ಪಕ್ಕದಲ್ಲಿ ಗುರುತು ಹಾಕಿಕೊಳ್ಳಿ. ಒಟ್ಟು ಎಲ್ಲಾ ಸಮಯ ಸೇರಿ 24 ತಾಸಿಗಿಂತ ಹೆಚ್ಚಾದರೂ ಚಿಂತೆ ಇಲ್ಲ, ಯಾವುದನ್ನೂ ನಿರ್ಲಕ್ಷಿಸದೆ ಪಟ್ಟಿ ಮಾಡುತ್ತಾ ಹೋಗಿ. ಇದನ್ನು ಮಾಡಬೇಕಾದ ಕೆಲಸದ ಪಟ್ಟಿ (ಟು-ಡೂ-ಲಿಸ್ಟ್) ಎನ್ನೋಣ.

ನಮ್ಮ ಕೆಲಸಗಳಲ್ಲಿ ಕೆಲವು ಬಹಳ ಮುಖ್ಯ (ಇಂಪಾರ್ಟಂಟ್) ಕೆಲಸಗಳಾಗಿರುತ್ತವೆ, ಅದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ, ಮಾಡದಿದ್ದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ. ಕೆಲವು ಕೆಲಸಗಳು ಬಹಳ ತುರ್ತು (ಅರ್ಜೆಂಟ್) ಆಗಿರುತ್ತದೆ ಅವನ್ನು ಕೂಡಲೇ ಅಥವಾ ಸಮಯಕ್ಕೆ ಸರಿಯಾಗಿ ಮಾಡಬೇಕಾಗಿರುತ್ತದೆ. ಉದಾ: ನಿಮಗೆ ಶೌಚಾಲಯಕ್ಕೆ ಹೋಗಬೇಕಾದರೆ ಅದು ತುರ್ತು. ಕೆಲಸ ಮುಖ್ಯವೋ ಇಲ್ಲವೋ ಅದರ ಪ್ರಶ್ನೆ ಬರುವುದಿಲ್ಲ. ಕೆಲವು ಕೆಲಸಗಳು ಮುಖ್ಯ ಮತ್ತು ತುರ್ತು ಎರಡೂ ಆಗಿರುತ್ತದೆ. ಕೆಲವು ಕೇವಲ ಮುಖ್ಯ ಅಥವಾ ಕೇವಲ ತುರ್ತು ಆಗಿದ್ದರೆ ಮಿಕ್ಕ ಕೆಲಸಗಳು ಮುಖ್ಯವೂ ಅಲ್ಲ, ತುರ್ತು ಸಹ ಆಗಿರುವುದಿಲ್ಲ, ಅವನ್ನು ನಿದಾನವಾಗಿ, ಯಾವಾಗ ಬೇಕಾದರೂ ಮಾಡಬಹುದು.

ನಿಮ್ಮ ಎಲ್ಲಾ ಕೆಲಸಗಳ ಸಮಗ್ರ ಪಟ್ಟಿ ಮುಂದಿಟ್ಟುಕೊಂಡು. ಯಾವ ಕೆಲಸ “ಮುಖ್ಯ” (ಇಂಪಾರ್ಟೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ಮುಖ್ಯ” (ಇಂಪಾರ್ಟೆಂಟ್) ಎಂದು ಬರೆಯಿರಿ. ಯಾವುದು ಮುಖ್ಯವಲ್ಲವೋ ಅದಕ್ಕೆ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಕೊಡಿ. ಹೀಗೆ ಒಂದೊಂದಾಗಿ ಎಲ್ಲಾ ಕೆಲಸಗಳಿಗೂ “ಮುಖ್ಯ” (ಇಂಪಾರ್ಟೆಂಟ್) ಅಥವಾ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಬಿದ್ದಿರಬೇಕು. ಎರಡನೆಯದಾಗಿ ಅದೇ ಪಟ್ಟಿಯಲ್ಲಿ, (“ಮುಖ್ಯ” ಅಥವಾ “ಮುಖ್ಯವಲ್ಲ” ಎಂಬ ನಿರ್ಧಾರ ಈಗಾಗಲೇ ಆಗಿರುವ ಪಟ್ಟಿಯಲ್ಲಿ) ಯಾವ ಕೆಲಸ “ತುರ್ತು” (ಅರ್ಜೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ತುರ್ತು” (ಅರ್ಜೆಂಟ್) ಎಂದು ಬರೆಯಿರಿ. ಯಾವುದು ತುರ್ತು ಅಲ್ಲವೋ ಅದಕ್ಕೆ “ತುರ್ತು ಅಲ್ಲ” (ನಾಟ್ ಅರ್ಜೆಂಟ್)ಎಂಬ ಹಣೆಪಟ್ಟಿ ಕೊಡಿ. ಈಗ ನಿಮ್ಮ ಸಮಗ್ರ ಕೆಲಸದ ಪಟ್ಟಿಯಲ್ಲಿ ನಾಲ್ಕು ವಿಧವಾದ ಕೆಲಸಗಳಿವೆ, ಅಲ್ಲವೇ?.

1.      ಮುಖ್ಯ ಮತ್ತು ತುರ್ತು.

2.      ಮುಖ್ಯ ಆದರೆ ತುರ್ತು ಅಲ್ಲ.

3.      ಮುಖ್ಯ ಅಲ್ಲ ಆದರೆ ತುರ್ತು.

4.      ಮುಖ್ಯ ಅಲ್ಲ, ತುರ್ತು ಅಲ್ಲ.

ಈಗ, ನಿಮ್ಮ ಈ ನಾಲ್ಕು ಪಟ್ಟಿಯ ಕೆಲಸಗಳನ್ನು ಬೇರ್ಪಡಿಸಿ ಅದರಲ್ಲಿರುವ ಕೆಲಸಗಳನ್ನು ಆದ್ಯತೆಯ ಮೇಲೆ ಮರುಕ್ರಮಾಂಕ ನೀಡಿ. ಯಾವುದು ಬಹಳ ಮುಖ್ಯ ಮತ್ತು ಬಹಳ ತುರ್ತು ಅದಕ್ಕೆ ಕ್ರಮಾಂಕ 1, 2. 3. ಹೀಗೆ ಪ್ರತಿಯೊಂದು ಕೆಲಸಕ್ಕೂ ಕ್ರಮ ಸಂಖ್ಯೆ ನೀಡಿ, ನಾಲ್ಕೂ ಪಟ್ಟಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಇಂತಹ ಪಟ್ಟಿಯನ್ನು ಐಸನ್ಹೋವರ್ ಮ್ಯಾಟ್ರಿಕ್ಸ್ ಎಂದು ಕರೆಯುತ್ತಾರೆ.

ಈಗ ನಿಮ್ಮ ದಿನಚರಿಗೆ ಹೋಲಿಸಿಕೊಂಡು, ಬೆಳಿಗ್ಗೆ ಎದ್ದಾಗನಿಂದ ರಾತ್ರಿ ಮಲಗುವ ತನಕದ ಸಮಯ ಸಾರಣಿಗೆ ಜೋಡಿಸುತ್ತಾ, ಯಾವುದು ಮುಖ್ಯ ಮತ್ತು ತುರ್ತು ಅದನ್ನು ಮೊದಲು ಮಾಡಿ, ಯಾವುದು ತುರ್ತು ಆದರೆ ಮುಖ್ಯವಲ್ಲ ಅದನ್ನು ಕೂಡಲೇ ಮಾಡಿ, ಅದಕ್ಕೆ ಯೋಜನೆ ಹಾಕಿಕೊಳ್ಳಿ, ಸಮಯಾವಕಾಶ ಮಾಡಿಕೊಳ್ಳಿ. ಯಾವುದು ಮುಖ್ಯ ಆದರೆ ತುರ್ತು ಅಲ್ಲ, ಅದನ್ನು ಮರೆಯದೆ ಮಾಡಿ, ಅದನ್ನು ಇನ್ನೊಬ್ಬರಿಗೆ ವಹಿಸಬಹುದೇ ನೋಡಿ. ಯಾವುದು ಮುಖ್ಯವೂ ಅಲ್ಲ, ತುರ್ತೂ ಅಲ್ಲ. ಅದನ್ನು ಸಮಯ ಸಿಕ್ಕಾಗ ಮಾಡಿ, ಅಂತಹ ಕೆಲಸಗಳನ್ನು ದಿನಚರಿಯಿಂದ ಕಡಿಮೆ ಮಾಡಿಕೊಳ್ಳಿ.

ಉದಾ: ನಿಮಗೆ ಬೆಳಿಗ್ಗೆ ಕಚೇರಿಗೆ ತೆರಳಲು 9:05ರ ಮೆಟ್ರೋ ಹಿಡಿಯಬೇಕು, ಆದರೆ ಮನೆಯಿಂದ ಹೊರಡುವ ಮುನ್ನ ನಿಮ್ಮ ಸ್ನೇಹಿತ/ಸಹೋದ್ಯೋಗಿಯ ಮಿಸ್ಡ್ ಕಾಲ್ ಅಥವಾ ಮೆಸೇಜ್ ಬಂತು ಎಂದಿಟ್ಟುಕೊಳ್ಳಿ. ಅದನ್ನು ನೋಡಲು ಅಥವಾ ಅದಕ್ಕೆ ಉತ್ತರಿಸಲು ಹೋಗಿ, ನಿಮ್ಮ ಮೆಟ್ರೋ ತಪ್ಪಿಸಿಕೊಳ್ಳಬೇಡಿ. ಸ್ಟೇಷನ್ನಿಗೆ ಸಮಯಕ್ಕೆ ಸರಿಯಾಗಿ ತಲುಪಿ ಅಲ್ಲಿ ರೈಲಿಗೆ ಕಾಯುತ್ತಿರುವಾಗ ಸ್ನೇಹಿತ/ಸಹೋದ್ಯೋಗಿಯ ಸಂದೇಶಕ್ಕೆ ಗಮನಕೊಡಿ. ಅನಿರೀಕ್ಷಿತವಾಗಿ ಸಮಯ ಸಿಕ್ಕಾಗ “ಮುಖ್ಯ ಅಲ್ಲ, ತುರ್ತು ಅಲ್ಲ” ಎಂಬ ಕೆಲಸಗಳನ್ನು ನಿಪಟಾಯಿಸಿಕೊಳ್ಳಿ.

ಯಾವ ಕೆಲಸಗಳು ಅವಶ್ಯಕತೆಗಿಂತ ಹೆಚ್ಚಿನ ಸಮಯ/ಗಮನ ತೆಗೆದುಕೊಳ್ಳುತ್ತಿವೆ, ಅವನ್ನು ಮರು-ಪರಿಶೀಲಿಸಿ, ಅವನ್ನು ತ್ವರಿತವಾಗಿ/ಗಮನವಿಟ್ಟು ಮಾಡುವುದನ್ನು ಕಲಿಯಿರಿ. ತೀರಾ ಅವಶ್ಯಕವಾದಲ್ಲಿ ನಿಮ್ಮ ಅನುತ್ಪಾದನಾ ಕೆಲಸಗಳನ್ನು (4ನೆಯ ಪಟ್ಟಿಯ) ಅಥವಾ ನಿದ್ರೆಯ ಸಮಯವನ್ನು ಕತ್ತರಿಸಿ. ಮೊಬೈಲ್ ಬಳಕೆ ಕಡಿಮೆ ಮಾಡಿ, ಸಮಯದ ದುರುಪಯೋಗಕ್ಕೆ ಬಹು ದೊಡ್ದ ಕಾರಣ ಸ್ಮಾರ್ಟ್ ಫೋನ್. ಆರೋಗ್ಯಕ್ಕೆ ಧಕ್ಕೆ ಬರುವಂತಹ ಕೆಲಸ ಮಾಡಬೇಡಿ. ಅನಾರೋಗ್ಯದಿಂದ ಕೆಲಸದ ಗತಿ ಇನ್ನೂ ಕಡಿಮೆ ಆಗುತ್ತದೆ. ಹೀಗೆ ಎಲ್ಲಾ ಕೆಲಸಗಳು, ಮತ್ತು ಅದಕ್ಕೆ ತಗಲುವ ಸಮಯ ನಿಮ್ಮ ನಿಯಂತ್ರಣಕ್ಕೆ ಬರಲು ಪ್ರಾರಂಭವಾಗುತ್ತವೆ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...