Homeಮುಖಪುಟರಾಹುಲ್ ಗಾಂಧಿ ‘ಕಲ್ಲಿದ್ದಲು ಒಲೆ' ಹೇಳಿಕೆಯನ್ನು ಲೇವಡಿ ಮಾಡಿದ ಬಿಜೆಪಿಗರು; ವಾಸ್ತವ ಏನು?

ರಾಹುಲ್ ಗಾಂಧಿ ‘ಕಲ್ಲಿದ್ದಲು ಒಲೆ’ ಹೇಳಿಕೆಯನ್ನು ಲೇವಡಿ ಮಾಡಿದ ಬಿಜೆಪಿಗರು; ವಾಸ್ತವ ಏನು?

- Advertisement -
- Advertisement -

ಮಣಿಪುರದಿಂದ ಆರಂಭವಾಗಿರುವ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯು ಅಸ್ಸಾಂ ಪ್ರವೇಶಿಸಿದ ದಿನದಿಂದ ಈವರೆಗೆ, ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ಗಮನ ರಾಹುಲ್ ಗಾಂಧಿ ಮೇಲೆ ಕೇಂದ್ರೀಕೃತವಾದಂತೆ ಭಾಸವಾಗುತ್ತಿದೆ. ಏಕೆಂದರೆ, ರಾಹುಲ್ ಅವರ ಗುವಾಹಟಿ ನಗರ ಪ್ರವೇಶಕ್ಕೆ ಅನುಮತಿ ನಿರಾಕರಣೆಯಿಂದ ಹಿಡಿದು, ಅವರನ್ನು ರಾವಣ ಎಂದು ಟೀಕಿಸಿ, ಅವರ ಭಾಷಣದ ಕುರಿತು ಸಿಎಂ ಟ್ವೀಟ್ ಮಾಡುವ ಮೂಲಕ ತಮ್ಮ ಚಿತ್ತವನ್ನು ಕಾಂಗ್ರೆಸ್ ನಾಯಕನ ಮೇಲಿರಿಸಿದ್ದಾರೆ.

ಅಸ್ಸಾಂನ ಇದುಬ್ರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ‘ಕಲ್ಲಿದ್ದಲು ಒಲೆ’ ಬಳಕೆಯ ಕುರಿತು ಮಾತನಾಡಿದ್ದರು. ಅವರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಶರ್ಮಾ, ‘ಒಲೆಯಲ್ಲಿ ಕಲ್ಲಿದ್ದಲು? ಆಲೂಗಡ್ಡೆಯಿಂದ ಚಿನ್ನವನ್ನು ತಯಾರಿಸುವವಂತೆ, ನೀವು ಕಲ್ಲಿದ್ದಲನ್ನು ಒಲೆಗೆ ಹಾಕುವ ಕಲ್ಪನೆ ಪಡೆದುಕೊಂಡಿದ್ದೀರ. ನಿಮ್ಮ ಹೇಳಿಕೆ ನಮ್ಮನ್ನು ಗೊಂದಲಕ್ಕೀಡುಮಾಡಿದೆ. ನೀವು ಎಚ್ಚರವಾಗಿದ್ದೀರಾ?’ ಎಂದು ವ್ಯಂಗ್ಯ ಮಾಡಿದ್ದಾರೆ.

‘ಬೆಳಗ್ಗೆ ಎದ್ದು ಒಲೆಯ ಮೇಲೆ ಕಲ್ಲಿದ್ದಲನ್ನು ಹಾಕಿ ಚಹಾ ತಯಾರಿಸುವಾಗ ಕಲ್ಲಿದ್ದಲಿನ ಲಾಭ ನಿಮ್ಮ ಮುಖ್ಯಮಂತ್ರಿಯದ್ದು, ನೀವು ಕುಡಿಯುವ ಚಹಾ, ಅದರ ತೋಟಗಳು ನಿಮ್ಮ ಮುಖ್ಯಮಂತ್ರಿಯವರಿಗೆ ಸೇರಿದ್ದು. ನೀವು ಓದುವ ಪತ್ರಿಕೆ ಮತ್ತು ನೀವು ನೋಡುವ ದೂರದರ್ಶನ ಎರಡೂ ನಿಮ್ಮ ಮುಖ್ಯಮಂತ್ರಿಗಳ ಒಡೆತನದಲ್ಲಿದೆ’ ಎಂದು ರಾಹುಲ್ ಮಾತನಾಡಿದ್ದರು.

ಜನಸಾಮಾನ್ಯರ ಜೀವನದ ಭಾಗವಾಗಿರುವ ಎಲ್ಲ ವಸ್ತುಗಳಲ್ಲೂ ಹಿಮಂತ ಶರ್ಮಾ ಪಾಲನ್ನು ಹೊಂದಿದ್ದಾರೆ ಎಂದು ರಾಹುಲ್ ಆರೋಪಿಸಿದರು.

ಮಣಿಪುರದ ನಂತರ ರಾಹುಲ್ ನೇತೃತ್ವದ ಯಾತ್ರೆ ಅಸ್ಸಾಂಗೆ ಪ್ರವೇಶಿಸಿದಾಗಿನಿಂದಲೂ ಅಸ್ಸಾಂ ರಾಜ್ಯ ನಾಯಕತ್ವ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ವಿನಿಮಯ ನಡೆಯುತ್ತಲೆ ಇದೆ. ಸುಮಾರು ಎರಡು ತಿಂಗಳಲ್ಲಿ 14 ರಾಜ್ಯಗಳನ್ನು ಸುತ್ತುವ ಗುರಿಯನ್ನು ಹೊಂದಿರುವ ಯಾತ್ರೆಯು ಮಂಗಳವಾರ ಅಸ್ಸಾಂಗೆ ಮರುಪ್ರವೇಶಿಸುವ ಮೊದಲು ಅರುಣಾಚಲ ಪ್ರದೇಶದಲ್ಲಿ ಒಂದು ದಿನವನ್ನು ಕಳೆದಿದೆ. ಅಸ್ಸಾಂನಲ್ಲಿ ನಡೆದ ತಮ್ಮ ಯಾತ್ರೆಯ ಆರಂಭಿಕ ರ‍್ಯಾಲಿಗಳಲ್ಲಿ, ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಅಸ್ಸಾಂ ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದರು.

ಕಾಂಗ್ರೆಸ್ ಯಾತ್ರೆಯು ಪ್ರಸ್ತುತ ಅಸ್ಸಾಂನಲ್ಲಿದ್ದು, ಗುವಾಹಟಿ ನಗರದ ಪ್ರವೇಶ ನಿರಾಕರಣೆ ನಂತರ ಅಲ್ಲಿ ಪೊಲೀಸರೊಂದಿಗೆ ಘರ್ಷಣೆಗಳು, ಬ್ಯಾರಿಕೇಡ್‌ಗಳನ್ನು ಮುರಿಯುವ ಘಟನೆಗಳು ನಡೆದವು. ಹಿಂಸಾಚಾರವನ್ನು ಪ್ರಚೋದಿಸಿದ ಮತ್ತು ಅನುಮೋದಿಸಿದ ಮಾರ್ಗವನ್ನು ಅನುಸರಿಸದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಎಫ್ಐಆರ್ ದಾಖಲಿಸಿದೆ.

ಈ ಎಲ್ಲಾ ಬೆಳವಣಿಗೆಯ ನಂತರ ರಾಹುಲ್ ಗಾಂಧಿಯವರ ‘ಕಲ್ಲಿದ್ದಲು ಒಲೆ’ಯ ಕುರಿತು ನೀಡಿರುವ ಹೇಳಿಕೆಯನ್ನು ಹಿಮಂತ್ ಬಿಸ್ವಾ ಶರ್ಮಾ ಸೇರಿದಂತೆ ದೇಶದ ಹಲವು ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದಾರೆ. ‘ಒಲೆಯಲ್ಲಿ ಕಲ್ಲಿದ್ದಲು ಬಳಸುವ ಭೂಮಿಯ ಮೇಲಿನ ಏಕೈಕ ವ್ಯಕ್ತಿ ರಾಹುಲ್ ಗಾಂಧಿ. ಅವರು ಭಾರತದ ಪ್ರಧಾನಿಯಾಗಲು ಬಯಸುತ್ತಾರೆ’ ಎಂದು ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.

ಆದರೆ, ಕಾಂಗ್ರೆಸ್ ಬೆಂಬಲಿಗರು ಬಿಜೆಪಿಗರ ಟ್ರೋಲಿಗೆ ತಿರುಗೇಟು ಕೊಟ್ಟಿದ್ದಾರೆ. ದೇಶದಲ್ಲಿ ಹಲವು ಜನರು ಕಲ್ಲಿದ್ದಲು ಒಲೆ ಬಳಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮಾಹಿತಿ ಕೊರತೆ ಇದೆ ಎಂದು ಕಿಡಿಕಾರಿದ್ದಾರೆ.

‘ಮೊದಲನೆಯದಾಗಿ, ನೀವು (ಹಿಮಂತ್ ಬಿಸ್ವಾ ಶರ್ಮಾ) ಮುಖ್ಯಮಂತ್ರಿಯೋ ಅಥವಾ ಟ್ರೋಲ್ ಮಾಡುವವರೋ? ಎರಡನೆಯದಾಗಿ, ಕಲ್ಲಿದ್ದಲು ಒಲೆಯ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಅದು ತುಂಬಾ ಗಂಭೀರವಾದ ವಿಷಯವಾಗಿದೆ. ವಾಟ್ಸಾಪ್ ನಲ್ಲಿ ಬಂದದ್ದನ್ನು ಇಲ್ಲಿ ಪೇಸ್ಟ್ ಮಾಡಿದ್ದೀರಿ. ಕಲ್ಲಿದ್ದಲು ಒಲೆಯ ಫೋಟೋ ಕೆಳಗೆ ಇದೆ ಅದು ನಿಮ್ಮ ಜ್ಞಾನವನ್ನು ಸುಧಾರಿಸುತ್ತದೆ ಎಂದು ಭಾವಿಸುತ್ತೇವೆ. ಇನ್ನೊಂದು ವಿಷಯ, ರಾಹುಲ್ ಗಾಂಧಿಗೆ ನೀವು ಭಯಪಡುತ್ತೀರಿ ಯಾಕೆ’ ಎಂದು ಕರ್ನಾಟಕದ ಕಾಂಗ್ರೆಸ್ ಬೆಂಬಲಿಗರಾದ ಸ್ವಾತಿ ದೀಕ್ಷಿತ್ ಎಂಬುವವರು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಪ್ರತಿಕ್ರಿಯಿಸಿದ್ದಾರೆ.

ಕಲ್ಲಿದ್ದಲು ಒಲೆ ಬಳಕೆಯಲ್ಲಿ ಇಲ್ಲವಾ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಕಲ್ಲಿದ್ದಲು ಒಲೆ ವಿಚಾರವಾಗಿ ಬಿಜೆಪಿಗರು ಟ್ರೋಲ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಬೃಹತ್ ಕೈಗಾರಿಕೆ, ವಿದ್ಯುತ್ ಉತ್ಪಾದನಾ ಘಟಕಗಲ್ಲಿ ಹೆಚ್ಚಾಗಿ ಕಲ್ಲಿದ್ದಲು ಬಳಕೆ ಮಾಡಲಾಗುತ್ತದೆ. ಜತೆಗೆ, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಅಡುಗೆ ಮಾಡಲು ವಿಶೇಷ ಕಲ್ಲಿದ್ದಲು ಸ್ಟೋವ್‌ಗಳು ಬಳಕೆಯಲ್ಲಿವೆ.

ಭಾರತ ಸೇರಿದಂತೆ ಹಲವು ಶೀತ ಪ್ರದೇಶಗಳಲ್ಲಿ ಮತ್ತು ಅಭಿವೃದ್ಧಿಯಾಗದ ದೇಶಗಳಲ್ಲಿ ಕಲ್ಲಿದ್ದಲನ್ನು ಇನ್ನೂ ಅಡುಗೆಗೆ ಇಂಧನವಾಗಿ, ಶಾಖದ ಮೂಲವಾಗಿ ಬಳಸಲಾಗುತ್ತದೆ. ಕಟ್ಟಿಗೆಯಂತೆ ಕಲ್ಲಿದ್ದಲು ಬೇಗ ಧಹಿಸುವುದಿಲ್ಲ. ಒಂದು ಪೌಂಡ್ ಆಂಥ್ರಾಸೈಟ್ ಕಲ್ಲಿದ್ದಲು ಒಂದು ಪೌಂಡ್ ಮರಕ್ಕಿಂತ ಹೆಚ್ಚು ಶಾಕವನ್ನು ಉತ್ಪಾದಿಸುತ್ತದೆ. ಅಡುಗೆ ಅನಿಲಗಳ ಬೆಲೆ ಏರಿಕೆ, ಒಣ ಕಟ್ಟಿಗೆಗಳ ಅಲಭ್ಯತೆ ಕಾರಣಗಳಿಂದಾಗಿ ಭಾರತದಲ್ಲೂ ಕೆಲ ಪ್ರದೇಶಗಳಲ್ಲಿ ಕಲ್ಲಿದ್ದಲು ಒಲೆ ಬಳಕೆಯಲ್ಲಿವೆ. ಮುಖ್ಯವಾಗಿ, ಆನ್‌ಲೈನ್ ಮಾರಾಟ ಡೊಮೈನ್‌ಗಳಲ್ಲಿಯೂ ಕೂಡ ಕಲ್ಲಿದ್ದಲು ಒಲೆಗಳು ಲಭ್ಯವಿರುವದನ್ನು ನಾವು ಗಮನಿಸಬಹುದು.

ಬೆಲೆ ಏರಿಕೆಯಿಂದ ಕಟ್ಟಿಗೆ ಬಳಕೆ ಹೆಚ್ಚಳ:

ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು; ಅಂದರೆ, ಸುಮಾರು 2.4 ಶತಕೋಟಿ ಜನರು ಪ್ರಸ್ತುತ ಹೊಗೆರಹಿತ ಅನಿಲ ಬಳಕೆ ಸೌಲಭ್ಯವನ್ನು ಹೊಂದಿಲ್ಲ. ಕಲ್ಲಿದ್ದಲು ಮತ್ತು ಕಟ್ಟಿಗೆ ಬಳಕೆಯಿಂದ ಜಾಗತಿಕವಾಗಿ, ಪ್ರತಿ ವರ್ಷ ಸುಮಾರು 2.3 ಮಿಲಿಯನ್ ಜನರು ಅಕಾಲಿಕವಾಗಿ ಸಾಯುತ್ತಾರೆ.

ಅಡುಗೆ ಮನೆಯಲ್ಲಿ ಕಟ್ಟಿಗೆ ಬಳಸುವ ವಿಚಾರದಲ್ಲಿ ಭಾರತವು ಹಿಂದೆ ಉಳಿದಿಲ್ಲ. ಸರ್ಕಾರದ ಹಲವು ಪ್ರಯತ್ನಗಳ (ಪ್ರಚಾರ) ಹೊರತಾಗಿಯೂ ಗ್ರಾಮೀಣ ಭಾರತದ ಹೆಚ್ಚಿನ ಭಾಗಗಳು, ಅಡುಗೆ ಮಾಡಲು ಸಾಂಪ್ರದಾಯಿಕ ಒಲೆಗಳಿಗೆ ಹೆಚ್ಚು ಮಾಲಿನ್ಯಕಾರಕ ಇಂಧನಗಳನ್ನು ಸುಡುವುದನ್ನು ಮುಂದುವರಿಸಿದ್ದಾರೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ಪ್ರಕಾರ, ಗ್ರಾಮೀಣ ಭಾರತದಲ್ಲಿ 56 ಪ್ರತಿಶತದಷ್ಟು ಕುಟುಂಬಗಳು ಅಥವಾ ಸುಮಾರು 520 ಮಿಲಿಯನ್ ಜನರು ಇನ್ನೂ ಕೆಲವು ರೀತಿಯ ಮರ, ಇದ್ದಿಲು, ಸೀಮೆಎಣ್ಣೆ, ಕಲ್ಲಿದ್ದಲು, ಕೃಷಿ ಅವಶೇಷಗಳು, ಪ್ರಾಣಿಗಳ ತ್ಯಾಜ್ಯ ಅಥವಾ ಇತತೆ ಅಪಾಯಕಾರಿ ವಸ್ತುಗಳನ್ನು ಅಡುಗೆ ಮಾಡಲು ಬಳಸುತ್ತಾರೆ.

ದಿನಕ್ಕೆ ಮೂರು ಬಾರಿ ಅಪಾಯಕಾರಿ ಉರುವಲುಗಳನ್ನು ಬಳಸುವುದರಿಂದ ಮನೆಯ ಗಾಳಿಯ ಗುಣಮಟ್ಟವನ್ನು (ಪರಿಸರ ಮತ್ತು ಒಳಾಂಗಣ) ಹದಗೆಡಿಸಬಹುದು; ಇದರಿಂದ ಪ್ರತಿಕೂಲ ದೀರ್ಘಕಾಲೀನ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ.

2009 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿದ ರಾಜೀವ್ ಗಾಂಧಿ ಗ್ರಾಮ್ ಎಲ್‌ಪಿಜಿ ವಿತರಕ್ ಯೋಜನೆ (ಆರ್ಜಿಜಿಎಲ್ವಿ ಯೋಜನೆ ಎಂದೂ ಕರೆಯುತ್ತಾರೆ), ಈ ದಿಕ್ಕಿನಲ್ಲಿ ಭರವಸೆಯ ಹೆಜ್ಜೆಯಾಗಿತ್ತು. ಈ ಯೋಜನೆಯನ್ನು ನಂತರ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಎಂದು ಮರುಪ್ರಾರಂಭಿಸಲಾಯಿತು. ಇದು ಭಾರತದಲ್ಲಿನ ನಗರ ಮತ್ತು ಗ್ರಾಮೀಣ ಕುಟುಂಬಗಳಲ್ಲಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಯೊಂದಿಗೆ ಘನ ಮತ್ತು ಇತರ ಜೈವಿಕ-ಆಧಾರಿತ ಮಾಲಿನ್ಯಕಾರಕ ಅಡುಗೆ ಇಂಧನಗಳನ್ನು ಬದಲಿಸುವ ಗುರಿಯನ್ನು ಹೊಂದಿದೆ.

ಯೋಜನೆಯ ಮೂಲಕ, ಭಾರತದಲ್ಲಿ 96 ಮಿಲಿಯಲ್‌ಗಿಂತಲೂ ಹೆಚ್ಚು ಕುಟುಂಬಗಳು 2022ರ ಅಂತ್ಯದವರೆಗೆ ಎಲ್‌ಪಿಜಿ ಸಿಲಿಂಡರ್‍‌ಗಳನ್ನು ಪಡೆದಿವೆ. ಭಾರತವು ಒಟ್ಟು 310 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಎಲ್‌ಪಿಜಿ ಸಿಲಿಂಡರ್ ಗ್ರಾಹಕರನ್ನು ಹೊಂದಿದೆ, ಒಂದು ವರ್ಷದಲ್ಲಿ ಸರಿಸುಮಾರು 2,480 ಮಿಲಿಯನ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸಲಾಗುತ್ತಿದೆ. (ಸರಾಸರಿ ಒಂದು ವರ್ಷದಲ್ಲಿ ಪ್ರತಿ ಮನೆಗೆ ಎಂಟು ಸಿಲಿಂಡರ್‌ಗಳು).

ಸರ್ಕಾರದ ಯೋಜನೆಯ ಭಾಗವಾಗಿ ಹೊಸ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆದ ಶೇ.50ರಷ್ಟು ಕುಟುಂಬಗಳು ದುಬಾರಿ ಬೆಲೆ ಏರಿಕೆ ಕಾರಣಕ್ಕಾಗಿ ಮರುಪೂರಣ ಮಾಡಿಸಿಲ್ಲ. ಕೆಲವರಿಗೆ ಸಿಲಿಂಡರ್ ಬಳಕೆಯ ಬಗ್ಗೆ ಅಜ್ಞಾನದ ಜತೆಗೆ, ಭಯವೂ ಇದೆ. ಫೆಬ್ರವರಿ 2022ರ ಹೊತ್ತಿಗೆ, ಭಾರತದಾದ್ಯಂತ ಸಿಲಿಂಡರ್ ಮರುಪೂರಣದ (14.2 ಕೆಜಿ) ಸರಾಸರಿ ವೆಚ್ಚವು ಸರಿಸುಮಾರು 1,100 ರೂ. ಆಗಿತ್ತು. ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ ಕೇವಲ ಅಡುಗೆ ಮಾಡಲು ಅಂತಹ ಎಂಟು ಸಿಲಿಂಡರ್‌ಗಳು ಬೇಕಾಗುತ್ತವೆ, ಅಡುಗೆ ಇಂಧನಕ್ಕಾಗಿ ವಾರ್ಷಿಕವಾಗಿ ಸುಮಾರು 8,800 ರೂ. ಖರ್ಚು ಮಾಡಬೇಕಾಗಿರುತ್ತದೆ.

ಅಡುಗೆ ಅನಿಲ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಅನಿಯಂತ್ರಿತ ಬೆಲೆ ಏರಿಕೆಯ ಕಾರಣದಿಂದ ದೇಶದ ಗ್ರಾಮೀಣ ಭಾಗದ ಜನರು ಸಿಲಿಂಡರ್ ಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಕಲ್ಲಿದ್ದಲು ದೊರೆಯುವ ರಾಜ್ಯಗಳಲ್ಲಿ ಮತ್ತು ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ವಾಸಿಸುವ ಜನರು ಸಾಂಪ್ರದಾಯಿಕ ಅಡುಗೆ ಪದ್ಧತಿಗೆ ಮೊರೆ ಹೋಗಿದ್ದಾರೆ ಎನ್ನಲಾಗಿದ್ದು, ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಕಲ್ಲಿದ್ದಲು ಒಲೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಆದರೆ, ಅಸ್ಸಾಂ ಸಿಎಂ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಹುಲ್ ಮಾತಿನ ಗಂಭೀರತೆ ಅರಿಯದೆ ಟ್ರೋಲ್ ಮಾಡಿದ್ದಾರೆ.

ದನ್ನೂ ಓದಿ; ವಿಧಾನಸಭೆಯಲ್ಲೂ ಮುಂದುವರಿದ ಮುಸುಕಿನ ಗುದ್ದಾಟ; 2 ನಿಮಿಷಕ್ಕೆ ಭಾಷಣ ಮುಗಿಸಿದ ಕೇರಳ ರಾಜ್ಯಪಾಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...