Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಶಯ್ಯಾಗೃಹದ ಪಿಸುಮಾತುಗಳಿಗೆ ಕಿವುಡಾಗೇ ಇರುವ ಗಂಡು ಜಗತ್ತು!

ಪುಸ್ತಕ ಪರಿಚಯ; ಶಯ್ಯಾಗೃಹದ ಪಿಸುಮಾತುಗಳಿಗೆ ಕಿವುಡಾಗೇ ಇರುವ ಗಂಡು ಜಗತ್ತು!

- Advertisement -
- Advertisement -

ಡಾ. ಶೋಭಾ ನಾಯಕ ಅವರ ’ಶಯ್ಯಾಗೃಹದ ಸುದ್ದಿಗಳು’ ಕವನಸಂಕಲನ ಓದಿ ಮುಗಿಸಿದಾಗ ನನಗೆ ನೆನಪಾಗಿದ್ದು ಇಬ್ಬರು. ಒಬ್ಬ ಚಾರ್ಲ್ಸ್ ಬುಕೋಸ್ಕಿ ಮತ್ತೊಬ್ಬರು ಬೆಲ್ ಹುಕ್ಸ್.

ಚಾರ್ಲ್ಸ್ ಬುಕೋಸ್ಕಿ, ತನ್ನ ಮುಕ್ತ ಕಾವ್ಯದ ಮೂಲಕ ದಿಢೀರನೆ ಜನಪ್ರಿಯತೆ ಪಡೆದ ಅಮೆರಿಕದ ಕವಿ. ಆತನ ಜನಪ್ರಿಯತೆ ಕಾರಣ, ತನ್ನ ಕಾವ್ಯದ ಮುಕ್ತತೆ, ಸೋಗಿಲ್ಲದ ಮತ್ತು ಪ್ರಾಮಾಣಿಕ ಅಭಿವ್ಯಕ್ತಿ. ತನ್ನ ಹೆಣ್ಣುಬಾಕುತನ, ಆಷಾಢಭೂತಿನದ ಬಗ್ಗೆ ಇದ್ದ ತೀವ್ರ ಅಸಹನೆ, ಜನರ ಒಣಪ್ರತಿಷ್ಠೆಗಳ ಬಗ್ಗೆ ಮರ್ಮಾಘಾತವಾಗುವಂತೆ ಕವಿತೆಯಲ್ಲಿ ಕಾಲೆಳೆದು, ಟೀಕಿಸಿ, ಬರೆದಾತ. ತನ್ನ ತೀರಾ ಖಾಸಗಿಯದ್ದನ್ನು ನಿರ್ಭಿಡೆಯಿಂದ ಹೇಳುವಂತಹ ಬುಕೋಸ್ಕಿಯ ಕಾವ್ಯದಂತೆಯೇ, ಶೋಭಾ ನಾಯಕರ ಕಾವ್ಯದಲ್ಲಿರುವುದು, ಕೇಳುವವ ತನ್ನೊಳಗೆ ತಾನು ನೋಡಿಕೊಳ್ಳುವಂತೆ ಮಾಡುವ ಅಭಿವ್ಯಕ್ತಿಯ ವಿಧಾನ.

ಇನ್ನೊಂದು ಹೆಸರು ಬೆಲ್ ಹುಕ್ಸ್. ಸ್ತ್ರೀವಾದಕ್ಕೆ ಭಿನ್ನ ಒಳನೋಟಗಳನ್ನು ನೀಡಿದ ಲೇಖಕಿ ಇವರು. ಇವರ ’ಕಮ್ಯುನಿಯನ್: ದಿ ಫೀಮೇಲ್ ಸರ್ಚ್ ಫಾರ್ ಲವ್ ಕೃತಿಯಲ್ಲಿ ಒಂದೆಡೆ, “ಸತ್ಯ ಹೇಳುವ ಸಮಯ ಬಂದಿದೆ. ಮತ್ತೆ, ನ್ಯಾಯವಿಲ್ಲದ ಪ್ರೀತಿ ಇರಲಾರದು. ಹೆಣ್ಣು ಮತ್ತು ಗಂಡಿಗೆ, ತಾವು ಆತ್ಮೀಯವಾಗಿ ಬೆರೆಯುವ, ಎಲ್ಲರೊಂದಿಗೆ ಮತ್ತು ಪ್ರತಿಯೊಬ್ಬರೊಂದಿಗೂ ಪರಸ್ಪರರ ಪ್ರೀತಿಯನ್ನು ಅರಿಯುವ ಸ್ವಾತಂತ್ರ್ಯ ನಿರಾಕರಿಸಲಾಗುವುದಿಲ್ಲ. ಒಂದುವೇಳೆ ಪ್ರೀತಿಯನ್ನು ಒಂದು ಮಾಡುವ ನೀತಿಯನ್ನು ನಾವು ಗುರುತಿಸದೇ ಹೋದಲ್ಲಿ, ಅದು ಅಧಿಕಾರವನ್ನು ಅರಸುವಂತೆ ಮತ್ತು ಜಾಣ್ಮೆಯಿಂದ ಬಳಸುವಂತೆ ಮಾಡುತ್ತದೆ. ಹೀಗಾದರೆ ನಾವು ಸಾಂಸ್ಕೃತಿಕ ಯಜಮಾನಿಕೆಯೊಂದಿಗೆ ಬೆಸೆದುಕೊಳ್ಳುತ್ತೇವೆ, ಪ್ರೀತಿಯ ಬದಲು ಅಧಿಕಾರವನ್ನು ಆಯ್ಕೆಮಾಡಿಕೊಳ್ಳುತ್ತೇವೆ” ಎನ್ನುತ್ತಾರೆ. ಪಿತೃಪ್ರಧಾನ ಮನಸ್ಥಿತಿ ಹೇಗೆ ಗಂಡು-ಹೆಣ್ಣಿನ ಪ್ರೇಮ ಮತ್ತು ಕಾಮದ ಸಂಬಂಧವನ್ನು ನಿರ್ಧರಿಸುತ್ತದೆ, ಆಳುತ್ತದೆ ಎಂಬುದನ್ನು ಬೆಲ್ ಹುಕ್ಸ್ ತಮ್ಮ ಹಲವು ಕೃತಿಗಳಲ್ಲಿ ಚರ್ಚಿಸಿದ್ದಾರೆ, ವಿಶ್ಲೇಷಿಸಿದ್ದಾರೆ.

ಶೋಭಾ ನಾಯಕ ಅವರ ಕವಿತೆಗಳಲ್ಲಿ ತೀವ್ರವಾಗಿ ಆವರಿಸಿರುವ ’ಲಾಂಗಿಂಗ್’ (ಬಯಕೆ ತೀವ್ರತೆಯ ನಿರೀಕ್ಷೆ), ಅಕ್ಕ ಹೇಳುವ, ಸಾವಿಲ್ಲದ ಕೇಡಿಲ್ಲ, ರೂಹಿಲ್ಲದ ಚೆಲುವನಿಗೆ ಕಾತರಿಸುವಂತಹದ್ದು. ಅಂತಹ ಪ್ರೇಮಿಯೊಬ್ಬನ ಧ್ಯಾನ ಇಲ್ಲಿದೆ. ಅಡುಗೆ ಒಗ್ಗರಣೆಯ ಪಾತ್ರೆಗಳ ಸದ್ದಿನಲ್ಲಿ ಕಳೆದುಹೋಗುವ ಹೆಣ್ಣಿನ ಮನೋಲೋಕದ ಮಾತುಗಳನ್ನು ಗಂಡು-ಹೆಣ್ಣು ಮಲಗುವ ಕೋಣೆಯಲ್ಲಿ ಪಿಸುಮಾತಿನಲ್ಲಿ, ತುಸುಕೋಪದಲ್ಲಿ, ತುಸು ರಮಿಸುವಂತೆ ಹಂಚಿಕೊಳ್ಳಬೇಕು. ಗಂಡು ತಾನು ಗಂಡಾಗದೆ, ಹೆಣ್ಣು ತಾನು ಹೆಣ್ಣಾಗದೆ, ಗಂಡು ಹೆಣ್ಣಾಗುತ, ಹೆಣ್ಣು ಗಂಡಾಗುತ ಬೆರೆತು ಕಲೆತು ಹೋಗುವ ಏಕಾಂತವದು. ನಿಜಕ್ಕೂ ಮಲಗುವ ಕೋಣೆಯ ಏಕಾಂತ ಹಾಗಿರುತ್ತದೆಯೇ?

ಇಲ್ಲ, ಶೋಭಾ ನಾಯಕ್ ಅವರು ಅದನ್ನು ಪುರಾಣಕಾಲದಿಂದ ಕುರುಕ್ಷೇತ್ರದವರೆಗಿನ ಸ್ತ್ರೀಯರನ್ನು ನೆನಪಿಸುವ ಮೂಲಕ ಗಟ್ಟಿಯಾಗಿ ಹೇಳುತ್ತಾರೆ. ರಾಜ್ಯಕಾರಣ ಕವಿತೆಯಲ್ಲಿ ಸೀತೆ, ಮರಿಯಾ ಮ್ಯಾಗ್ಡಲೀನ್, ದ್ರೌಪದಿ, ರಾಧೆಯರನ್ನು ಅವರ ಪತಿ, ಪ್ರಿಯಕರರು ಅತಂತ್ರವಾಗಿಸಿದ್ದನ್ನು ಬಿಚ್ಚಿಡುತ್ತಾರೆ.

ಗಂಡಿನ ಅಹಂಕಾರವನ್ನು ’ಅಹಂ’ನಲ್ಲಿ ಅನಾವರಣ ಮಾಡುತ್ತಾರೆ. ’ಮಂಚವೆಂದರೆ ಸಮರಾಂಗಣ’ ಎಂದೂ, ’ನಾನು ನರಳುವಾಗ/ ನಿನಗೆ ಸಿಗುವ/ ಸುಖದ ಹೆಸರು: ಅಹಂ’ ಎಂದೂ ವ್ಯಾಖ್ಯಾನಿಸುತ್ತಾರೆ.

ಆದರೆ ಪ್ರೇಮ ಧ್ಯಾನದಲ್ಲಿ ತನ್ನ ನಿಜವಾದ ಸಂಗಾತಿಯನ್ನು ಹುಡುಕುವ ಕವಿ, ತನ್ನೊಳಗೆ ಪುಳಕವನ್ನು ಹುಟ್ಟಿಸಿದವನನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಹಂಬಲಿಸುತ್ತಾರೆ.

ಡಾ. ಶೋಭಾ ನಾಯಕ

ಆಡುವಾಗ ಜಡೆಯೆಳೆದವನು
ತರಗತಿಯಲ್ಲಿ ಲಂಗ ಜಗ್ಗಿದವನು
ಓಣಿ ಇಕ್ಕಟ್ಟಿನಲಿ ಜಾಲಿ ಮಾತ ಕಲಿಸಿದವನು
ಮುಗಳುನಗೆಯಲಿ ಕನಸು ಹುಟ್ಟಿಸಿದವನು
ಮೊದಲು ಚುಂಬಿಸಿದ ಅವನು
ಮೈಯರಳಿಸಿದ ಇವನು..

ಎಂದು ’ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ’ ಎಂದು ಘೋಷಿಸುತ್ತಾರೆ. ಈ ಎಚ್ಚರ ಮತ್ತು ಕಾಯುವಿಕೆಯ ನಿರಂತರ ಚಡಪಡಿಕೆಯ ಕುದಿಯನ್ನು ಅಷ್ಟೇ ತಣ್ಣಗೆ ದಾಟಿಸುತ್ತಾರೆ.

ಕಪ್ಪಿನ ಬಿಸಿ ಚ್ಹಾದೊಳಕ್ಕೆ
ಪ್ರತಿ ಅದ್ದಿಗೂ
ಇಷ್ಟಿಷ್ಟೇ ಕರಗಿಬೀಳುವ
ಬಿಸ್ಕೆಟಿನಂತೆ
ನಿನ್ನ ಪ್ರತಿ ಅಗಲಿಕೆಯಲೂ
ನರಕದಾಳಕ್ಕೆ
ಇಷ್ಟಿಷ್ಟೇ ಮುರಿದುಬೀಳುತ್ತೇನೆ.
ಆದರೆ,
ಈ ಕಪ್ಪಿನ ತಳ ಕಲಕಿ ಕುಡಿಯಲು ಬರುವ
ಯಾವನಿಗಾದರೂ ಕಾದಿರುತ್ತದೆ
ಮುರಿದು ಬಿದ್ದ
ಮರಣದ ಆ ತುತ್ತು.

ಹೀಗೆ ಧ್ಯಾನಿಸುವ ಕವಿ, ತಮ್ಮ ತೀವ್ರ ಅಭೀಪ್ಸೆಯನ್ನು ಹೆಣ್ಣಿನ ದೇಹ ಮತ್ತು ವಾಂಚೆಯ ರೂಪಕಗಳ ಮೂಲಕ ತಮ್ಮ ಪ್ರೇಮಾಂಕ್ಷೆ, ಸಾಂಗತ್ಯದ ಬಯಕೆಗಳನ್ನು ಕಟ್ಟಿಕೊಡುತ್ತಾರೆ. ಈ ಪ್ರತಿಮೆ-ರೂಪಕಗಳ ಹಸಿತನ ಹೆಣ್ಣಿನ ಅಭಿವ್ಯಕ್ತಿಗೆ ಈಗಲೂ ಇರುವ ಚೌಕಟ್ಟನ್ನು ಒಡೆಯುವ ಸಾಹಸ ಮಾಡುತ್ತವೆ. ಗಂಡಿನ ಅಹಂಕಾರವನ್ನು ಕೆಣುಕಲೆಂದೇ ಇಲ್ಲಿ ನಿರ್ಭಿಡೆಯಿಂದ ತನ್ನ ಮನದ ಮಾತುಗಳನ್ನು ಶಯ್ಯಾಗೃಹದ ಪಲ್ಲಂಗದ ಮೇಲೆ ಹರಡಿದಂತೆ ಹೊರಬಂದಿವೆ. ಈ ಪಿಸುಮಾತುಗಳನ್ನು ಕೇಳಿಸಿಕೊಳ್ಳುವ ಗಂಡಿಗೆ ಧ್ಯಾನಿಸುತ್ತವೆ.

ಶೃಂಗಾರ, ಪ್ರಣಯ, ಪ್ರೇಮದ ದಟ್ಟ ರೂಪಕಗಳು, ನುಡಿಗಟ್ಟು ಹೆಣ್ಣಿನ ಅತ್ಯಂತಿಕ ಭಾವಲೋಕವನ್ನು ಬೆಚ್ಚಿಬೀಳಿಸುವ ಉತ್ಕಟತೆಯೊಂದಿಗೆ ಹೊರಹೊಮ್ಮಿಸುತ್ತವೆ. ಶಯ್ಯಾಗೃಹದ ಸುದ್ದಿಗಳು, ಧ್ಯಾನಸ್ಥ ಶಿವ, ಯಯಾತಿಗೊಂದು ಪತ್ರ, ಹಾಲೆದೆ, ಚರಿತ್ರೆ ಮತ್ತು ಕವಿತೆ, ಕನ್ನಡಿಯ ಚೂರು, ಅನುಭವ ಮಂಟಪ, ಮಂಡೋದರಿ, ಸವರಾತ್ರಿಯ ಸಂಲಗ್ನ, ಶಯ್ಯಾಗೃಹದ ಎಲ್ಲಾ ರಾತ್ರಿಗಳು ಮುಗಿದ ಮೇಲೆ, ಕಲ್ಲಾದವರ ನೆತ್ತಿಯ ಮೇಲೆ, ನಾನು ನೀನು ಕವಿತೆಗಳು ಇಷ್ಟವಾಗುವ ಕವಿತೆಗಳು.

ಒಂದೆಡೆ ಗಂಡಿನ ಅಹಂಕಾರಕ್ಕೆ ಹೆಣ್ಣಿನ ಕನಿಷ್ಠ ಪ್ರತಿರೋಧದ ಅಗತ್ಯವನ್ನು ಹೇಳುತ್ತಾರೆ;

“ಕಲ್ಲಾದವರ ನೆತ್ತಿಯ ಮೇಲೆ
ಕಾಗೆ ಗೂಬೆ ಹೇತುಹೋಗುತ್ತವೆ.
ಮಿಸುಕಾಡಬೇಕು
ಮಾತಾಡಬೇಕು”

ಹಾಗೆಯೇ ಅರಿತು ಬೆರೆತು ಸಮಾನರೆನಿಸಿದಾಗ ಪೂರ್ಣತಯು ಎಂಬುದನ್ನೂ ಕವಿ ನೆನಪಿಸುತ್ತಾರೆ;

ಸುಖ
ಕೇವಲ ಒಂದು
ಹೊಂಗನಸಲ್ಲ
ನಾವಾಗೇ ಬರೆದು
ಪೂರ್ಣಗೊಳಿಸಬೇಕಾದ ವರ್ಣಚಿತ್ರ.

ಪ್ರೇಮಕ್ಕೆ ಮರಳಲು, ನಾವೆಂದೂ ಪಡೆಯದ, ಆದರೆ ಸದಾ ಹಂಬಲಿಸಿದ ಪ್ರೀತಿ ಪಡೆಯಲು, ನಾವು ಕೊಡಬೇಕಾದ ಪ್ರೀತಿಯನ್ನು ಹಂಚಿಕೊಳ್ಳಲು ಸಿದ್ಧರಾಗದ ನಾವು ರಮ್ಯ ಸಂಬಂಧಗಳತ್ತ ವಾಲುತ್ತೇವೆ. ಈ ಸಂಬಂಧಗಳು ಉಳಿದ ಯಾವುದೇ ಸಂಬಂಧಗಳಿಗಿಂತ ಹೆಚ್ಚಾಗಿ ನಮ್ಮನ್ನು ವಿಮೋಚನೆಯತ್ತ, ಬಿಡುಗಡೆಯತ್ತ ಕರೆದೊಯ್ಯುತ್ತವೆ ಎಂದು ನಂಬಿರುತ್ತೇವೆ. ಆದರೆ ನಿಜವಾದ ಪ್ರೀತಿ, ನಾವು ವಿಮೋಚನೆಗೆ ಸಿದ್ಧರಾಗಿದ್ದರಷ್ಟೆ, ಸ್ವತಂತ್ರಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ. ನಾವು ಉಳಿಯಬೇಕೆಂದಿದ್ದರೆ ಮಾತ್ರ ಪ್ರೀತಿ ನಮ್ಮನ್ನು ಉಳಿಸುತ್ತದೆ ಎಂದು ಬೆಲ್ ಹುಕ್ಸ್ ಹೇಳುತ್ತಾರೆ.

ಎಲ್ಲ ಅಹಮಿಕೆಯ ಪದರಗಳನ್ನು ಕಳಚಿದಾಗ ಮಾತ್ರ ಪ್ರೇಮ ಸಾಧ್ಯ. ಅದು ಬಿಡುಗಡೆಯ ಹಾದಿ. ಅಂತಹ ಧ್ಯಾನ ಶೋಭ ನಾಯ್ಕರ ಕವಿತೆಗಳಲ್ಲಿ ಇರುವುದರಿಂದಲೇ ಇವು ಇಲ್ಲಿರುವ ಶೃಂಗಾರದ ರೂಪಕಗಳಾಚೆಗೆ ಹಾರುತ್ತವೆ.

ಶಯ್ಯಾಗೃಹದ ಸುದ್ದಿಗಳು
ಡಾ. ಶೋಭಾ ನಾಯಕ
ಪುಟ: 92 | ಬೆಲೆ : 100/-
ಪ್ರಕಾಶನ: ಮನೋರಮಾ
ಬುಕ್ ಹೌಸ್, ಬೆಳಗಾವಿ

– ಎಸ್ ಕುಮಾರ್


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...