Homeಅಂತರಾಷ್ಟ್ರೀಯಟೇಪ್ ರೆಕಾರ್ಡರ್‌ನ ಕ್ಯಾಸೆಟ್ ಅನ್ವೇಷಕ ಲಾವೊ ಒಟೆನ್ಸ್ ನಿಧನ

ಟೇಪ್ ರೆಕಾರ್ಡರ್‌ನ ಕ್ಯಾಸೆಟ್ ಅನ್ವೇಷಕ ಲಾವೊ ಒಟೆನ್ಸ್ ನಿಧನ

ಲಾವೊ ಒಟೆನ್ಸ್ ಇನ್ನುಮುಂದೆ ಕ್ಯಾಸೆಟ್‌ನಂತೆಯೇ ನಮ್ಮ ನೆನಪಿನ ಸುರುಳಿಗಳಲ್ಲಿ ಮಾತ್ರ ಉಳಿಯುತ್ತಾರೆ

- Advertisement -
- Advertisement -

ಕ್ಯಾಸೆಟ್‌ಗಳು ಯಾರಿಗೆ ಗೊತ್ತಿಲ್ಲ. 90ರ ದಶಕದ ಪೀಳಿಗೆಯವರೆಗಿನ ಯಾರನ್ನು ಕೇಳಿದರೂ ಅವರ ಜೀವನದ ಒಂದಲ್ಲಾ ಒಂದು ಘಳಿಗೆಯಲ್ಲಿ ಕ್ಯಾಸೆಟ್‌ನೊಂದಿಗಿನ ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತವೆ; ಧ್ವನಿ ಸುರುಳಿಯ ಕ್ಯಾಸೆಟ್‌ನಂತೆಯೇ. ಟೇಪ್‌ ರೆಕಾರ್ಡರ್ ಒಳಗೆ ಈ ಕ್ಯಾಸೆಟ್ ಟೇಪ್ ಸಿಕ್ಕಿಕೊಂಡರೆ, ಅದನ್ನು ಹೊರತೆಗೆದು ಮತ್ತೆ ಸುತ್ತಿ ಕ್ಯಾಸೆಟ್‌ ಒಳಗೆ ಸೇರಿಸುವುದು ನಿಜಕ್ಕೂ ಧ್ಯಾನಸ್ಥ ಕೆಲಸವಾಗಿರುತ್ತಿತ್ತು. ಇನ್ನು ಅದು ತುಂಡಾಗಿಬಿಟ್ಟರಂತೂ, ಅದಕ್ಕೆ ಕಳ್ಳಿಹಾಲು ಹಾಕಿ ಅಂಟಿಸಿ, ನೆರಳಿನಲ್ಲಿಯೇ ಒಣಗಿಸಿ ಸುತ್ತುವುದು ಯಾವ ಕರಕುಶಲ ಕೆಲಸಕ್ಕೂ ಕಡಿಮೆಯಿಲ್ಲ. ಇನ್ನು ನಮ್ಮ ಅಚ್ಚುಮೆಚ್ಚಿನ ಚಲನಚಿತ್ರ ಗೀತೆಗಳು, ದೇವರ ಹಾಡುಗಳು, ಜನಪದ ಕಥನಗಳು, ಸಿನಿಮಾಗಳನ್ನು ಕ್ಯಾಸೆಟ್‌ಗಳಲ್ಲಿಯೇ ಕೇಳುತ್ತಿದ್ದೆವು. 1960ರ ದಶಕದಲ್ಲಿ ಅನ್ವೇಷಿಸಲಾದ ಈ ಕ್ಯಾಸೆಟ್ ಬಹುಪಾಲು ಜನರಿಗೆ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದುದರಲ್ಲಿ ಸಂದೇಹವಿಲ್ಲ.

ಇಂತಹ ನೆನಪಿನ ಸುರುಳಿ ನಮ್ಮೊಂದಿಗಿರಲು ಕಾರಣ ಈ ಕ್ಯಾಸೆಟ್‌ ಅನ್ನು ಅನ್ವೇಷಿಸಿದ ಲಾವೊ ಒಟೆನ್ಸ್. ಆದರೆ ಅವರೂ ಕೂಡ ಇನ್ನುಮುಂದೆ ಕ್ಯಾಸೆಟ್‌ನಂತೆಯೇ ನಮ್ಮ ನೆನಪಿನ ಸುರುಳಿಗಳಲ್ಲಿ ಮಾತ್ರ ಉಳಿಯುತ್ತಾರೆ. ಹೌದು, ಧ್ವನಿ ಸುರುಳಿಯ ಕ್ಯಾಸೆಟ್ (ಟೇಪ್) ಕಂಡುಹಿಡಿದಿದ್ದ ಲಾವೊ ಒಟೆನ್ಸ್ ಇತ್ತೀಚೆಗೆ ನಿಧನರಾಗಿದ್ದಾರೆ. ನೆದರ್ಲೆಂಡ್ ಮೂಲದವರಾದ 94 ವರ್ಷದ ಲಾವೊ ಒಟೆನ್ಸ್ ನಿಧನರಾಗಿದ್ದಾರೆ ಎಂದು ಫಿಲಿಪ್ಸ್‌ ಕಂಪನಿ ದೃಢಪಡಿಸಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಟಿಎಂಸಿ ಸೇರ್ಪಡೆ!

21, ಜೂನ್ 1926 ರಲ್ಲಿ ಜನಿಸಿದ ಲಾವೊ ಒಟೆನ್ಸ್ ಡೆಲ್ಫ್‌ನ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, 1952ರಲ್ಲಿ ಫಿಲಿಪ್ಸ್‌ ಕಂಪನಿ ಸೇರಿದ್ದರು. ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಆಗ ಟೇಪ್‌ ರೆಕಾರ್ಡರ್‌ಗೆ ಪರ್ಯಾಯವನ್ನು ಅನ್ವೇಷಿಸಲು ಹೆಚ್ಚಿನ ಒತ್ತು ನೀಡಿದ್ದರು. ಕಾಂಪ್ಯಾಕ್ಟ್‌ ಡಿಸ್ಕ್‌ ಅಭಿವೃದ್ಧಿಪಡಿಸಲು ಒಟೆನ್ಸ್‌ ಅವರು ಫಿಲಿಪ್ಸ್‌ ಕಂಪನಿಗೆ ನೆರವಾಗಿದ್ದರು. ಸಿಡಿ, ಡಿವಿಡಿ ಕ್ಯಾಸೆಟ್‌ಗಳ ಅನ್ವೇಷಣೆಗೂ ಲಾವೊ ಒಟೆನ್ಸ್ ಅವರ ಕೊಡುಗೆಯಿದೆ.

ಧ್ವನಿ ಸಂಗ್ರಹಣ ಟೇಪ್‌ ಮತ್ತು ಪ್ಲೇಯರ್‌ಗಳು ಸುಲಭವಾಗಿ ಬಳಸುವಂತೆ ಇರಬೇಕು ಮತ್ತು ದೊರೆಯಬೇಕು ಎಂಬುದು ಇವರ ಗುರಿಯಾಗಿತ್ತು.

ರೇಡಿಯೋ ನಂತರ ಮನುಷ್ಯನಿಗೆ ಅತಿ ಹೆಚ್ಚು ಮನರಂಜನೆ ನೀಡಿದ್ದು ಟೇಪ್‌ ರೇಕಾರ್ಡರ್‌ಗಳು. 20ನೇ ಶತಮಾನದ ಅಂತ್ಯದವರೆಗೂ ಜಗತ್ತಿನಾದ್ಯಂತ ಬಹುಪಾಲು ಸಂಗೀತ, ಸಿನಿಮಾಗಳನ್ನು ಧ್ವನಿಸುರುಳಿ ಮತ್ತು ಟೇಪ್‌ ರೆಕಾರ್ಡರ್‌ಗಳಲ್ಲಿಯೇ ಕೇಳಲಾಗುತ್ತಿತ್ತು. ಅದು ಅಂದಿನವರಿಗೆ ಬಹುಪ್ರಿಯವಾದ ಮಾಧ್ಯಮವಾಗಿತ್ತು. ಇಂದಿಗೂ ಕೂಡ ಹಲವರು ಕ್ಯಾಸೆಟ್‌ಗಳನ್ನು ಭಾವನಾತ್ಮವಾಗಿ ನೋಡುತ್ತಾ, ಅವುಗಳನ್ನು ಕಾಪಿಟ್ಟುಕೊಂಡಿದ್ದಾರೆ.


ಇದನ್ನೂ ಓದಿ: ವಿಧಾನಸಭೆಯಲ್ಲೇ ಸ್ಯಾನಿಟೈಸರ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...