ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ನಾವು ಅವುಗಳ ರಕ್ಷಣೆಗೆ ಕಟಿಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.
ಇಂದು ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಹೋರಾಟದ ವೇಳೆ ಮಡಿದವರ ತ್ಯಾಗವನ್ನು ನೆನಪಿಸಿಕೊಂಡರು. ಅವರು ರಾಷ್ಟ್ರೀಯ ಚಳವಳಿಗೆ ಕೊಡುಗೆ ಕೊಟ್ಟರಲ್ಲದೆ, ದೇಶಕ್ಕೆ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟರು ಎಂದು ಹೇಳಿದರು.
”ಪ್ರಜಾಪ್ರಭುತ್ವ, ಹಾಗೂ ಸಂವಿಧಾನ ಈ ದೇಶದ ಆತ್ಮ, ಆದರೆ ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸ್ವಾಯತ್ತ ಸಂಸ್ಥೆಗಳು ಅಪಾಯದಲ್ಲಿವೆ ಎಂದು ಹೇಳಲು ನೋವಾಗುತ್ತಿದೆ. ಸ್ವಾತಂತ್ರ್ಯ ದಿನದ ಈ ಸ್ವಾತಂತ್ರ್ಯ ದಿನದಂದು, ನಾವು ಸಂವಿಧಾನ, ಪುಜಾಪುಭುತ್ಯ ಐಕ್ಯತೆ ಹಾಗೂ ಸಮಗ್ರತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡುತ್ತೇವೆ” ಎಂದರು.
ಈ ನಿರ್ಣಯದೊಂದಿಗೆ ಮತ್ತೊಮ್ಮೆ ಸ್ವಾತಂತ್ರ ದಿನಾಚರಣೆಯ ಶುಭಾಶಯ ಕೋರುತ್ತೇನೆ ಎಂದು ಹೇಳಿದ ಅವರು, ವಿಪಕ್ಷ ಒಕ್ಕೂಟದ ಘೋಷವಾಕ್ಯ ಭಾರತ್ ಜುಡೇಗಾ, ಇಂಡಿಯಾ ಜೀತೆಗಾ’ (ಭಾರತ ಒಂದಾಗಲಿದೆ, ಇಂಡಿಯಾ ಗೆಲ್ಲಲಿದೆ) ಎಂದು ಹೇಳಿದರು.
आप सभी को स्वतंत्रता दिवस की हार्दिक शुभकामनाएँ व बधाई।
लोकतंत्र और संविधान हमारी देश की आत्मा है।
हम यह प्रण लेते हैं कि हम देश की एकता और अखंडता के लिये, प्रेम और भाईचारे के लिए, सौहार्द और सद्भाव के लिए लोकतंत्र और संविधान की स्वतंत्रता क़ायम रखेंगे।
जय हिन्द 🇮🇳 pic.twitter.com/d5EurpcRNM
— Mallikarjun Kharge (@kharge) August 15, 2023