Homeನೂರರ ನೋಟಕ್ರಿಮಿನಲ್ ಎಂಪಿ, ಎಂಎಲ್‌ಎಗಳ ವಿರುದ್ಧ ನ್ಯಾಯಾಲಯ ಸೆಟೆದು ನಿಲ್ಲಲಿ: ಎಚ್.ಎಸ್ ದೊರೆಸ್ವಾಮಿ

ಕ್ರಿಮಿನಲ್ ಎಂಪಿ, ಎಂಎಲ್‌ಎಗಳ ವಿರುದ್ಧ ನ್ಯಾಯಾಲಯ ಸೆಟೆದು ನಿಲ್ಲಲಿ: ಎಚ್.ಎಸ್ ದೊರೆಸ್ವಾಮಿ

2009ರ ಲೋಕಸಭೆಯಲ್ಲಿ ಇದ್ದ 542 ಸದಸ್ಯರ ಪೈಕಿ 162 ಸದಸ್ಯರ ವಿರುದ್ಧ ಕೊಲೆ, ಕೊಲೆ ಪ್ರಯತ್ನ, ವ್ಯಕ್ತಿಗಳ ಅಪಹರಣ, ದರೋಡೆ ಮತ್ತು ಅತ್ಯಾಚಾರ ಕೇಸುಗಳು ಇವೆ.

- Advertisement -
- Advertisement -

2014 ರಲ್ಲಿ ಸರ್ವೋಚ್ಚ ನ್ಯಾಯಾಲಯ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಎಂಪಿಗಳು ಮತ್ತು ಎಂಎಲ್‌ಎಗಳ ಮೇಲೆ ಕೇಸುಗಳು ದಾಖಲಾದರೆ, ಅದರ ಚಾರ್ಜ್ ಶೀಟ್ ಹಾಕಿದ ನಂತರ, ವಿಚಾರಣೆಯನ್ನು ಒಂದು ವರ್ಷಗಳ ಒಳಗಾಗಿ ಪೂರೈಸಬೇಕೆಂದೂ, ಕೋರ್ಟ್ ಕಲಾಪಗಳನ್ನು ವಿಚಾರಣೆ ಮುಗಿಯುವವರೆಗೂ ಪ್ರತಿದಿನವೂ ನಡೆಸಬೇಕೆಂದು ಆಜ್ಞೆ ಮಾಡಿತು. ಈ ಆಜ್ಞೆ ದೂರಗಾಮಿ ಫಲವನ್ನು ನೀಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಮೂಲಕ ರಾಜಕೀಯ ಪಕ್ಷಗಳು ಕ್ರಿಮಿನಲ್‌ಗಳನ್ನು ಉಮೇದುದಾರರನ್ನಾಗಿ ನಿಲ್ಲಿಸುವ ದುಷ್ಟನೀತಿ ತಪ್ಪೀತೆಂದು ನ್ಯಾಯಾಲಯ ಆಶಿಸಿತು. ಯಾರಿಗೆ ನಂಬರ್‌ಗೇಮ್‌ನಲ್ಲಿ ಆಸಕ್ತಿ ಇದೆಯೋ ಯಾರಿಗೆ ಅಧಿಕಾರ ಹಿಡಿಯುವುದರಲ್ಲಿ ಆಸಕ್ತಿ ಇದೆಯೋ ಅಂತಹವರು ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುವುದಕ್ಕೆ ಹಿಂಜರಿಯಬಹುದು.

ಈ ಕೇಸು ದಾಖಲಿಸಿದ್ದ ಎನ್‌ಜಿಒ ಸಂಸ್ಥೆ 4 ಬೇಡಿಕೆಗಳನ್ನಿಟ್ಟಿದ್ದವು. 1) ದಾರುಣವಾದ ಕ್ರಿಮಿನಲ್ ಅಪರಾಧಗಳನ್ನು ಎಸಗಿದ ಚಾರ್ಜ್‌ಗಳನ್ನು ಎದುರಿಸುತ್ತಿರುವವರು ಚುನಾವಣೆಗೆ ನಿಲ್ಲದಂತೆ ಮಾರ್ಗಸೂಚಿಯನ್ನು ರೂಪಿಸಿ. 2) ಯಾವ ಕ್ರಿಮಿನಲ್‌ಗಳ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆಯೋ ಅಂತಹವನ ಬಗೆಗೆ ಆರು ತಿಂಗಳೊಳಗಾಗಿ ನ್ಯಾಯಾಲಯ ತನ್ನ ತೀರ್ಪನ್ನು ನೀಡಬೇಕು. 3) ಯಾರ ಮೇಲೆ ಗುರುತರವಾದ ಕ್ರಿಮಿನಲ್ ಅಪರಾಧಗಳನ್ನು ಹೊರಿಸಲಾಗಿದೆಯೋ ಅಂತಹವರನ್ನು ಲೋಕಸಭೆ, ವಿಧಾನಸಭೆಗಳ ಸದಸ್ಯತ್ವದಿಂದ ತೆಗೆದುಹಾಕುವ ಕಾನೂನುಗಳನ್ನು ರಚಿಸಬೇಕು. 4) 1951ರ Representation of the Peopleನ ಸೆಕ್ಷನ್ 8(4)ನ್ನು (ಟ್ರಯಲ್ ನ್ಯಾಯಾಲಯದಲ್ಲಿ ತಪ್ಪಿತಸ್ಥ ಎಂಬ ತೀರ್ಪು ನೀಡಲಾಗಿದ್ದರೂ, ಅದರ ವಿರುದ್ಧ ತಪ್ಪಿತಸ್ಥ ಎಂಪಿ, ಎಂಎಲ್‌ಎ ಅಥವಾ ಎಂಎಲ್‌ಸಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡುತ್ತದೆ) ರಾಜ್ಯಾಂಗ ವಿರೋಧಿ ಎಂದು ಘೋಷಿಸಬೇಕು.

ಚುನಾವಣಾ ಕಮಿಷನ್ ಈ ನಾಲ್ಕು ಸಲಹೆಗಳನ್ನು ಒಪ್ಪಿಕೊಂಡಿತಾದರೂ ಕೇಂದ್ರ ಸರ್ಕಾರ ಇದಕ್ಕೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಿತು. ಇದು policy matter ಆಗಿದ್ದೂ ಪಾರ್ಲಿಮೆಂಟ್‌ನಿಂದ ಕಾನೂನು ರಚನೆಯಾಗಬೇಕಾಗಿರುವುದರಿಂದ ಈ ಕುರಿತು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ಮಾಡುವಂತಿಲ್ಲ ಎಂದು ಮನವಿ ಮಾಡಿತು. ಆದರೆ ಸರ್ವೋಚ್ಚ ನ್ಯಾಯಾಲಯ ಸರ್ಕಾರದ ಈ ವಾದವನ್ನು ತಳ್ಳಿಹಾಕಿ ಈ ವಿಚಾರದಲ್ಲಿ ಲಾಕಮಿಷನ್‌ನ ಶಿಫಾರಸ್ಸು ಏನೆಂದು ಕೇಳಿತು.

2009ರ ಲೋಕಸಭೆಯಲ್ಲಿ ಇದ್ದ 542 ಸದಸ್ಯರ ಪೈಕಿ 162 ಸದಸ್ಯರ ವಿರುದ್ಧ ದಾರುಣವಾದ ಕ್ರಿಮಿನಲ್ ಕೇಸುಗಳಿದ್ದವು. ಕೊಲೆ, ಕೊಲೆ ಪ್ರಯತ್ನ, ವ್ಯಕ್ತಿಗಳ ಅಪಹರಣ, ದರೋಡೆ ಮತ್ತು ಅತ್ಯಾಚಾರ ಕೇಸುಗಳು ಅವರ ವಿರುದ್ಧ ಇವೆ. ಇವರ ವಿರುದ್ಧದ ಖಟ್ಳೆಗಳು 7 ವರ್ಷಗಳಷ್ಟು ಹಳೆಯದಾದರೂ ಇನ್ನೂ ಕೋರ್ಟ್ ವಿಚಾರಣೆ ಮುಗಿದಿಲ್ಲ ಎಂದು ಲಾಕಮಿಷನ್ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕೇಸುಗಳು ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವುದಕ್ಕೆ ಸಂಬಂಧಪಟ್ಟವು.

9 ಎಂಪಿಗಳ ಕೇಸುಗಳು 20 ವರ್ಷದಷ್ಟು ಹಳೆಯವಾದರೂ ಇನ್ನೂ ವಿಚಾರಣೆ ಮುಗಿದಿಲ್ಲ. ಹಣದ ಪ್ರಭಾವ, ಅಧಿಕಾರ ಪ್ರಭಾವ ಈ ಕ್ಯಾನ್ಸರ್ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಷ್ಟೆ ಅಲ್ಲದೆ ಕೇಸನ್ನು ಮುಂದಕ್ಕೆ ತಳ್ಳಲು ಇದೇ ಪ್ರಭಾವವನ್ನು ಬಳಸಲಾಗಿದೆ. 1951ರ ರಾಜ್ಯಾಂಗದ RPI Actನ ಸೆಕ್ಷನ್ 8(4), ಬೆಂಕಿಗೆ ತುಪ್ಪ ಸುರಿದಂತೆ ನ್ಯಾಯದಾನಕ್ಕೆ ಅಡ್ಡಗಾಲು ಹಾಕಿದೆ. 2013 ರಲ್ಲಿ ಸರ್ವೋಚ್ಚ ನ್ಯಾಯಾಲಯ ಸೆಕ್ಷನ್ 8(4)ನ್ನು ರಾಜ್ಯಾಂಗ ವಿರೋಧಿ ಸೆಕ್ಷನ್ ಎಂದು ತೀರ್ಪಿತ್ತಿತು. ಆದರೆ ಪಾರ್ಲಿಮೆಂಟ್ ಇದುವರೆಗೆ ರಾಜ್ಯಾಂಗದಿಂದ ಈ ಸೆಕ್ಷನ್ ತೆಗೆದುಹಾಕಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ವೋಚ್ಚ ನ್ಯಾಯಾಲಯ ರಾಜ್ಯಾಂಗ ವಿರೋಧಿ ಎಂದು ಹೇಳಿ ಕೇಂದ್ರ ಸರ್ಕಾರ ಪಾರ್ಲಿಮೆಂಟಿನಲ್ಲಿ ಈ ವಿಷಯವನ್ನು ಮಂಡಿಸಿ ಆ ಸೆಕ್ಷನ್ ಕಿತ್ತು ಹಾಕಲು ಮೀನಾಮೇಷ ಎಣಿಸುತ್ತಿದೆ. ಹತ್ತಾರು ವರ್ಷಗಳ ಹಿಂದೆ ಕೋರ್ಟು ಆ ಸೆಕ್ಷನ್ನುಗಳನ್ನು ಕಿತ್ತು ಹಾಕಲು ಸರ್ಕಾರಕ್ಕೆ ತಿಳಿಸಿದ್ದರೂ ಈ ಕ್ರಿಮಿನಲ್ ಎಂಪಿಗಳನ್ನು ರಕ್ಷಿಸಿಕೊಂಡೇ ಬಂದಿದೆ.

ಆದ್ದರಿಂದ ಸರ್ವೋಚ್ಚ ನ್ಯಾಯಾಲಯ ಸರ್ಕಾರಕ್ಕೆ ಇಂತಿಷ್ಟು ತಿಂಗಳುಗಳಲ್ಲಿ ರಾಜ್ಯಾಂಗದಲ್ಲಿ ತಿದ್ದುಪಡಿ ತಂದು ಹಾಲಿ ಇರುವ ಕಳಂಕಿತ ಎಂಪಿ, ಎಂಎಲ್‌ಎಗಳನ್ನು ಹೊರದೂಡಬೇಕೆಂದೂ, ಕಳಂಕಿತ ಮಾಜಿ ಎಂಪಿಗಳು, ಎಂಎಲ್‌ಎಗಳ ಮೇಲೂ ಕ್ರಿಮಿನಲ್ ಕೇಸುಗಳನ್ನು ಹಾಕಬೇಕೆಂದೂ ಆಜ್ಞೆ ಮಾಡಬೇಕು. ಇಂತಹ ಒತ್ತಡ ನ್ಯಾಯಾಲಯದಿಂದ ಬರದಿದ್ದರೆ ಈ ಭಂಡಸರ್ಕಾರ ತನ್ನ ದುರ್ನೀತಿಯನ್ನು ಮುಂದುವರೆಸುತ್ತಲೇ ಹೋಗುತ್ತದೆ.


ಇದನ್ನೂ ಓದಿ: ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...