Homeಅಂಕಣಗಳುದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

ದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

| ಥೂತ್ತೇರಿ |

ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಎಡೂರಪ್ಪನ ಸರಕಾರ ಬೀಳಲು ಬಿಡುವುದಿಲ್ಲ ಎಂಬಂತಹ ಮಾತನಾಡಿದಂದಿನಿಂದ ಸರಿಯಾಗಿ ನಿದ್ರೆಯೇ ಬಾರದಾಗಿದೆಯಲ್ಲಾ. ಗೌಡರ ಮಾತು ನಿಜವೋ, ಕನಸೋ ಇದರ ಮರ್ಮವೇನೆಂದು ತಿಳಿದುಕೊಳ್ಳಲು ಅವರಿಗೇ ಫೋನ್ ಮಾಡಿದರೆ ಹೇಗೆ ಎಂದು ಯೋಚಿಸಿ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: ಸಿದ್ದಲಿಂಗೇಶಾ ಎಡೆಯೂರು ಸಿದ್ದಲಿಂಗೇಶಾ ಶ್ರೀ ಎಡೆಯೂರು ಸಿದ್ದಲಿಂ….. “ಹಲೋ….”
“ನಮಸ್ಕಾರ ಸಾರ್ ನಾನು ಯಾಹೂ.”
“ಏನ್ಹೇಳಿ ಯಾಹು ಅವುರೆ.”
“ಒಂದೆರಡು ಮಾತಿವೆ ಸಾರ್.”
“ಅದರಿಂದೇನು ಪ್ರಯೋಜನ.”
“ಪತ್ರಿಕೆಗೆ ಬರೀಬೇಕು ಸಾರ್.”
“ಗೌರಿ ಸಿಸ್ಟರ್ ಪತ್ರಿಕೆ ನಿಂತೋಗಲಿಲ್ಲವ.”
“ಇಲ್ಲ ಸಾರ್, ನ್ಯಾಯಪಥ ಅಂತ ಶುರುಮಾಡಿದ್ದೀವಿ.”
“ಹೌದಾ ಒಂದು ಕಳಿಸಿಕೊಡಿ.”
“ಆಯ್ತು ಸಾರ್, ಎಡೂರಪ್ಪನಿಗೆ ಬೆಂಬಲ ಘೋಷಣೆ ಮಾಡಿದ್ರಲ್ಲ ಸಾ.”
“ಯಾಕೆ ಅನ್ನೋ ವಿವರ ಹೇಳಿದ್ದೀನಿ.”
“ಅದು ಕೋಮುವಾದಿ ಪಾರ್ಟಿ ನೀವು ಜಾತ್ಯತೀತ ಜನತಾದಳ ಅಲ್ಲವ ಸಾರ್.”
“ಅದು ಸರಿ, ಈಗ ಚುನಾವಣೆ ಬಂದ್ರೇ ತಡಕಳೋ ಶಕ್ತಿಯಿಲ್ಲ.”
“ಹಾಗಿದ್ರೆ ಕಾಂಗ್ರೆಸ್‍ಗೆ ಸಪೋರ್ಟ್ ಮಾಡಿ ಮಲ್ಲಿಕಾರ್ಜುನ ಖರ್ಗೆನ ಮುಖ್ಯಮಂತ್ರಿ ಮಾಡಬಹುದಿತ್ತಲ್ಲ ಸಾರ್.”
“ಅಲ್ಲಿನ ಅಹಿಂದ ನಾಯಕರು ಅದಿಕ್ಕೆಲ್ಲ ಅವಕಾಶ ಕೊಡಲ್ಲ.”
“ಸಾರ್ ನಿಮ್ಮ ಮಾತಿನಿಂದ ಕರ್ನಾಟಕದ ಸಾಮಾನ್ಯ ಜನರ ಪ್ರಜ್ಞೆ ದಂಗುಬಡುದೋಗ್ಯದೆ ಸಾರ್.”
“ಯಾವ ಮಾತಿನಿಂದರೀ.”
“ಅದೇ ಎಡೂರಪ್ಪನ ಸರಕಾರಕ್ಕೆ ಸಪೋರ್ಟ್ ಮಾಡದ್ರ ಬಗ್ಗೆ.”
“ಅಯ್ಯೋ ರಾಮ ಆಗ್ಲೆ ಹೇಳಿದೆನಲ್ರೀ.”
“ಅದು ಸರಿ ಸರ್. ಕುಮಾರಣ್ಣ ಬಿಜೆಪಿ ಜೊತೆ ಸರಕಾರ ಮಾಡದೇ ಆದ್ರೆ ನನ್ನ ಹೆಣದ ಮೇಲೆ ಮಾಡಬೇಕು ಅಂದಿದ್ರಿ.”
“ಹೌದು ಹೇಳಿದ್ದೆ.”
“ನಾವೆಲ್ಲ ಹೆದರಿ ಪದ್ಮನಾಭನಗರದ ನಿಮ್ಮ ಮನೆ ಹತ್ರಕೆ ಓಡಿ ಬಂದಾಗ ನೀವು ದೆಹಲಿಯಿಂದ ಬಂದಿದ್ದ ಅಂಥೋನಿ, ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ ಇವರನ್ನ ಕೂರಿಸಿಕೊಂಡು ಅದೇ ಹೆಣದ ಮಾತೇಳತ ಇದ್ರಿ. ಅವುರು ನಿಜ ಅನ್ನಕಂಡು ಗಾಬರಿಯಾಗಿದ್ರು.”
“ನಿಜ ಅಲವೇನ್ರೀ.”
“ನಿಜ ಸಾರ್. ಆದ್ರು ಕುಮಾರಣ್ಣ ಎಡೂರಪ್ಪನ ಜೊತೆ ಸೇರಿಕೊಂಡು ಸರಕಾರ ಮಾಡೇಬುಟ್ರು.”
“ಎಲ್ಲವೂ ನಮ್ಮ ಕೈಮೀರಿ ಹೋಯ್ತಲ್ರೀ ಆಗ.”
“ಆದ್ರು ತಾವು ಕೆಲವೇ ದಿನದಲ್ಲಿ ಕುಮಾರಣ್ಣನ ಜೊತೆ ಸೇರಿಕಂಡ್ರಿ ಸಾರ್.”
“ಯಾಕೆ ಅಂದ್ರೆ, ಕುಮಾರಣ್ಣನ್ನ ಮುಗಸೋದಕ್ಕೆ ದುಷ್ಟ ಚತುಷ್ಟಯರುಗಳು ಕಾಯ್ತಾಯಿದ್ರು. ಅವರಿಂದ ಕುಮಾರಸ್ವಾಮಿನ ಉಳಿಸಿಕೊಬೇಕಾಗಿತ್ತು.”
“ಸರಿ ಸಾರ್, ತಂದೆಯಾದವನ ಕರ್ತವ್ಯ ಅದು. ಅದೇ ಟೈಮಲ್ಲಿ ಸಂಸತ್ತಲ್ಲಿ ನೀವು ಉತ್ತರ ಕೊಡ್ತ ನಾನಿಲ್ಲದ ಸಮಯದಲ್ಲಿ ನನ್ನ ಮಗನನ್ನ ಆರಿಸಿಕೊಂಡೋಗಿ ಸರಕಾರ ಮಾಡಿದ್ರು ಅಂದ್ರಿ ಸಂಸತ್ತು ಅದನ್ನ ನಂಬಿತ್ತು.”
“ಸಂಸತ್ತಲ್ಲಿ ಸುಳ್ಳು ಹೇಳಕ್ಕಾಗತ್ತೇನ್ರೀ.”
“ಹೇಳಬವುದು ಸಾರ್, ಈಗ ಇಡೀ ಬಿಜೆಪಿಗಳು ಸಂಸತ್ತಲ್ಲಿ ಬರೀ ಅದ್ನೇ ಹೇಳ್ತಾ ಅವುರೆ.”
“ಅವುರ ವಿಷಯ ಬಿಡಿ, ವಾಸ್ತವಾಂಶವನ್ನ ನಾನು ಹೇಳಿದೆ.”
“ಹೇಳಿದ್ರಿ, ಅದರಂಗೇ ನಡಕಂಡ್ರಿ ಸಾರ್, ಇಪ್ಪತ್ತು ತಿಂಗಳ ನಂತರ ಎಡೂರಪ್ಪನಿಗೆ ಅವಕಾಶ ಕೊಡಲಿಲ್ಲ. ಅಕಾಲಿಕ ಚುನಾವಣೆ ಬಂತು.”
“ಆ ಇತಿಹಾಸ ಎಲ್ಲ ಈಗೇಕೆ.”
“ಈಗೇಕೆ ಅಂದ್ರೇ, ಅಂದು ನೀವು ಬಿಜೆಪಿ ಜೊತೆ ಕುಮಾರಣ್ಣ ಸರಕಾರ ಮಾಡಕ್ಕೆ ಹೋದಾಗ ನಡಕೊಂಡ ಪ್ರಹಸನ ಡ್ರಾಮ ಅನ್ನದು, ಈಗಿನ ನಿಮ್ಮ ಹೇಳಿಕೆಯಿಂದ ಸಾಬೀತಾಗಿದೆಯಂತೆ.”
“ಯಾವ ಬೋಸುಡಿಮಗ ಅಂಗಂದೋನು.”
“ನಿಮ್ಮ ಪಾರ್ಟಿಯವರೆ ಅಂಗಂದ್ರು ಸಾ.”
“ಅದ್ಯಾವನು ಕರಕಂಡು ಬನ್ರಿ ಇಲ್ಲಿ.”
“ಬಿಜೆಪಿಗೆ ಸಪೋರ್ಟ್ ಅಂದ ನೀವು ಐದು ಕ್ಷೇತ್ರಕ್ಕೆ ಯಾಕೆ ಸಾರ್ ಕ್ಯಾಂಡೇಟಾಕ್ತಿರಿ.”
“ನಮ್ಮ ಶಕ್ತಿ ಇರ ಅಷ್ಟು.”
“ಐದರಲ್ಲಿ ಕಾಂಗ್ರೆಸ್ ಸೋಲಿಸಿ ಬಿಜೆಪಿಗೆ ಸಹಾಯ ಮಾಡದಕಿಂತ, 15 ಕ್ಷೇತ್ರಕ್ಕೂ ಅಭ್ಯರ್ಥಿ ನಿಲ್ಲಸದೇ ಇರದು ವಳ್ಳೆದಲವ.”
“ನಮ್ಮದು ಪ್ರಾದೇಶಿಕ ಪಾರ್ಟಿ, ನಮಗೆ ಕೆಲವು ಇತಿಮಿತಿಗಳಿರದರಿಂದ ಹಾಗೆ ಮಾಡಕ್ಕೆ ಬರಲ್ಲ.”
“ಐದು ಕ್ಷೇತ್ರದ ಚುನಾವಣೆ ಖರ್ಚು ಬಿಜೆಪಿ ಕೊಡ್ತದ ಸಾರ್.”
“ಅವುರ್ಯಾಕ್ ಕೊಡ್ತರ್ರೀ.”
“ಐದರಲ್ಲಿ ಕಾಂಗ್ರೆಸ್ ಸೋಲಸಬೇಕಲ್ಲವ ಅದಕ್ಕೆ.”
“ಅಷ್ಟು ಬಡತನ ನನ್ನ ಪಾರ್ಟಿಗೆ ಬಂದಿಲ್ಲ.”

ಥೂತ್ತೇರಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...