Homeಅಂಕಣಗಳುದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

ದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

| ಥೂತ್ತೇರಿ |

ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಎಡೂರಪ್ಪನ ಸರಕಾರ ಬೀಳಲು ಬಿಡುವುದಿಲ್ಲ ಎಂಬಂತಹ ಮಾತನಾಡಿದಂದಿನಿಂದ ಸರಿಯಾಗಿ ನಿದ್ರೆಯೇ ಬಾರದಾಗಿದೆಯಲ್ಲಾ. ಗೌಡರ ಮಾತು ನಿಜವೋ, ಕನಸೋ ಇದರ ಮರ್ಮವೇನೆಂದು ತಿಳಿದುಕೊಳ್ಳಲು ಅವರಿಗೇ ಫೋನ್ ಮಾಡಿದರೆ ಹೇಗೆ ಎಂದು ಯೋಚಿಸಿ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: ಸಿದ್ದಲಿಂಗೇಶಾ ಎಡೆಯೂರು ಸಿದ್ದಲಿಂಗೇಶಾ ಶ್ರೀ ಎಡೆಯೂರು ಸಿದ್ದಲಿಂ….. “ಹಲೋ….”
“ನಮಸ್ಕಾರ ಸಾರ್ ನಾನು ಯಾಹೂ.”
“ಏನ್ಹೇಳಿ ಯಾಹು ಅವುರೆ.”
“ಒಂದೆರಡು ಮಾತಿವೆ ಸಾರ್.”
“ಅದರಿಂದೇನು ಪ್ರಯೋಜನ.”
“ಪತ್ರಿಕೆಗೆ ಬರೀಬೇಕು ಸಾರ್.”
“ಗೌರಿ ಸಿಸ್ಟರ್ ಪತ್ರಿಕೆ ನಿಂತೋಗಲಿಲ್ಲವ.”
“ಇಲ್ಲ ಸಾರ್, ನ್ಯಾಯಪಥ ಅಂತ ಶುರುಮಾಡಿದ್ದೀವಿ.”
“ಹೌದಾ ಒಂದು ಕಳಿಸಿಕೊಡಿ.”
“ಆಯ್ತು ಸಾರ್, ಎಡೂರಪ್ಪನಿಗೆ ಬೆಂಬಲ ಘೋಷಣೆ ಮಾಡಿದ್ರಲ್ಲ ಸಾ.”
“ಯಾಕೆ ಅನ್ನೋ ವಿವರ ಹೇಳಿದ್ದೀನಿ.”
“ಅದು ಕೋಮುವಾದಿ ಪಾರ್ಟಿ ನೀವು ಜಾತ್ಯತೀತ ಜನತಾದಳ ಅಲ್ಲವ ಸಾರ್.”
“ಅದು ಸರಿ, ಈಗ ಚುನಾವಣೆ ಬಂದ್ರೇ ತಡಕಳೋ ಶಕ್ತಿಯಿಲ್ಲ.”
“ಹಾಗಿದ್ರೆ ಕಾಂಗ್ರೆಸ್‍ಗೆ ಸಪೋರ್ಟ್ ಮಾಡಿ ಮಲ್ಲಿಕಾರ್ಜುನ ಖರ್ಗೆನ ಮುಖ್ಯಮಂತ್ರಿ ಮಾಡಬಹುದಿತ್ತಲ್ಲ ಸಾರ್.”
“ಅಲ್ಲಿನ ಅಹಿಂದ ನಾಯಕರು ಅದಿಕ್ಕೆಲ್ಲ ಅವಕಾಶ ಕೊಡಲ್ಲ.”
“ಸಾರ್ ನಿಮ್ಮ ಮಾತಿನಿಂದ ಕರ್ನಾಟಕದ ಸಾಮಾನ್ಯ ಜನರ ಪ್ರಜ್ಞೆ ದಂಗುಬಡುದೋಗ್ಯದೆ ಸಾರ್.”
“ಯಾವ ಮಾತಿನಿಂದರೀ.”
“ಅದೇ ಎಡೂರಪ್ಪನ ಸರಕಾರಕ್ಕೆ ಸಪೋರ್ಟ್ ಮಾಡದ್ರ ಬಗ್ಗೆ.”
“ಅಯ್ಯೋ ರಾಮ ಆಗ್ಲೆ ಹೇಳಿದೆನಲ್ರೀ.”
“ಅದು ಸರಿ ಸರ್. ಕುಮಾರಣ್ಣ ಬಿಜೆಪಿ ಜೊತೆ ಸರಕಾರ ಮಾಡದೇ ಆದ್ರೆ ನನ್ನ ಹೆಣದ ಮೇಲೆ ಮಾಡಬೇಕು ಅಂದಿದ್ರಿ.”
“ಹೌದು ಹೇಳಿದ್ದೆ.”
“ನಾವೆಲ್ಲ ಹೆದರಿ ಪದ್ಮನಾಭನಗರದ ನಿಮ್ಮ ಮನೆ ಹತ್ರಕೆ ಓಡಿ ಬಂದಾಗ ನೀವು ದೆಹಲಿಯಿಂದ ಬಂದಿದ್ದ ಅಂಥೋನಿ, ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ ಇವರನ್ನ ಕೂರಿಸಿಕೊಂಡು ಅದೇ ಹೆಣದ ಮಾತೇಳತ ಇದ್ರಿ. ಅವುರು ನಿಜ ಅನ್ನಕಂಡು ಗಾಬರಿಯಾಗಿದ್ರು.”
“ನಿಜ ಅಲವೇನ್ರೀ.”
“ನಿಜ ಸಾರ್. ಆದ್ರು ಕುಮಾರಣ್ಣ ಎಡೂರಪ್ಪನ ಜೊತೆ ಸೇರಿಕೊಂಡು ಸರಕಾರ ಮಾಡೇಬುಟ್ರು.”
“ಎಲ್ಲವೂ ನಮ್ಮ ಕೈಮೀರಿ ಹೋಯ್ತಲ್ರೀ ಆಗ.”
“ಆದ್ರು ತಾವು ಕೆಲವೇ ದಿನದಲ್ಲಿ ಕುಮಾರಣ್ಣನ ಜೊತೆ ಸೇರಿಕಂಡ್ರಿ ಸಾರ್.”
“ಯಾಕೆ ಅಂದ್ರೆ, ಕುಮಾರಣ್ಣನ್ನ ಮುಗಸೋದಕ್ಕೆ ದುಷ್ಟ ಚತುಷ್ಟಯರುಗಳು ಕಾಯ್ತಾಯಿದ್ರು. ಅವರಿಂದ ಕುಮಾರಸ್ವಾಮಿನ ಉಳಿಸಿಕೊಬೇಕಾಗಿತ್ತು.”
“ಸರಿ ಸಾರ್, ತಂದೆಯಾದವನ ಕರ್ತವ್ಯ ಅದು. ಅದೇ ಟೈಮಲ್ಲಿ ಸಂಸತ್ತಲ್ಲಿ ನೀವು ಉತ್ತರ ಕೊಡ್ತ ನಾನಿಲ್ಲದ ಸಮಯದಲ್ಲಿ ನನ್ನ ಮಗನನ್ನ ಆರಿಸಿಕೊಂಡೋಗಿ ಸರಕಾರ ಮಾಡಿದ್ರು ಅಂದ್ರಿ ಸಂಸತ್ತು ಅದನ್ನ ನಂಬಿತ್ತು.”
“ಸಂಸತ್ತಲ್ಲಿ ಸುಳ್ಳು ಹೇಳಕ್ಕಾಗತ್ತೇನ್ರೀ.”
“ಹೇಳಬವುದು ಸಾರ್, ಈಗ ಇಡೀ ಬಿಜೆಪಿಗಳು ಸಂಸತ್ತಲ್ಲಿ ಬರೀ ಅದ್ನೇ ಹೇಳ್ತಾ ಅವುರೆ.”
“ಅವುರ ವಿಷಯ ಬಿಡಿ, ವಾಸ್ತವಾಂಶವನ್ನ ನಾನು ಹೇಳಿದೆ.”
“ಹೇಳಿದ್ರಿ, ಅದರಂಗೇ ನಡಕಂಡ್ರಿ ಸಾರ್, ಇಪ್ಪತ್ತು ತಿಂಗಳ ನಂತರ ಎಡೂರಪ್ಪನಿಗೆ ಅವಕಾಶ ಕೊಡಲಿಲ್ಲ. ಅಕಾಲಿಕ ಚುನಾವಣೆ ಬಂತು.”
“ಆ ಇತಿಹಾಸ ಎಲ್ಲ ಈಗೇಕೆ.”
“ಈಗೇಕೆ ಅಂದ್ರೇ, ಅಂದು ನೀವು ಬಿಜೆಪಿ ಜೊತೆ ಕುಮಾರಣ್ಣ ಸರಕಾರ ಮಾಡಕ್ಕೆ ಹೋದಾಗ ನಡಕೊಂಡ ಪ್ರಹಸನ ಡ್ರಾಮ ಅನ್ನದು, ಈಗಿನ ನಿಮ್ಮ ಹೇಳಿಕೆಯಿಂದ ಸಾಬೀತಾಗಿದೆಯಂತೆ.”
“ಯಾವ ಬೋಸುಡಿಮಗ ಅಂಗಂದೋನು.”
“ನಿಮ್ಮ ಪಾರ್ಟಿಯವರೆ ಅಂಗಂದ್ರು ಸಾ.”
“ಅದ್ಯಾವನು ಕರಕಂಡು ಬನ್ರಿ ಇಲ್ಲಿ.”
“ಬಿಜೆಪಿಗೆ ಸಪೋರ್ಟ್ ಅಂದ ನೀವು ಐದು ಕ್ಷೇತ್ರಕ್ಕೆ ಯಾಕೆ ಸಾರ್ ಕ್ಯಾಂಡೇಟಾಕ್ತಿರಿ.”
“ನಮ್ಮ ಶಕ್ತಿ ಇರ ಅಷ್ಟು.”
“ಐದರಲ್ಲಿ ಕಾಂಗ್ರೆಸ್ ಸೋಲಿಸಿ ಬಿಜೆಪಿಗೆ ಸಹಾಯ ಮಾಡದಕಿಂತ, 15 ಕ್ಷೇತ್ರಕ್ಕೂ ಅಭ್ಯರ್ಥಿ ನಿಲ್ಲಸದೇ ಇರದು ವಳ್ಳೆದಲವ.”
“ನಮ್ಮದು ಪ್ರಾದೇಶಿಕ ಪಾರ್ಟಿ, ನಮಗೆ ಕೆಲವು ಇತಿಮಿತಿಗಳಿರದರಿಂದ ಹಾಗೆ ಮಾಡಕ್ಕೆ ಬರಲ್ಲ.”
“ಐದು ಕ್ಷೇತ್ರದ ಚುನಾವಣೆ ಖರ್ಚು ಬಿಜೆಪಿ ಕೊಡ್ತದ ಸಾರ್.”
“ಅವುರ್ಯಾಕ್ ಕೊಡ್ತರ್ರೀ.”
“ಐದರಲ್ಲಿ ಕಾಂಗ್ರೆಸ್ ಸೋಲಸಬೇಕಲ್ಲವ ಅದಕ್ಕೆ.”
“ಅಷ್ಟು ಬಡತನ ನನ್ನ ಪಾರ್ಟಿಗೆ ಬಂದಿಲ್ಲ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...