Homeಸಿನಿಮಾಕ್ರೀಡೆಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಫೀಲ್ಡಿಂಗ್ ನಿರ್ಬಂಧಗಳನ್ನು ಮೀರಿದ ಕಾರಣಕ್ಕಾಗಿಯೇ ಧೋನಿಯ ರನ್ ಔಟ್ ಆಯಿತೇ? ಇಲ್ಲಿದೆ...

ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಫೀಲ್ಡಿಂಗ್ ನಿರ್ಬಂಧಗಳನ್ನು ಮೀರಿದ ಕಾರಣಕ್ಕಾಗಿಯೇ ಧೋನಿಯ ರನ್ ಔಟ್ ಆಯಿತೇ? ಇಲ್ಲಿದೆ ಸತ್ಯ

- Advertisement -
- Advertisement -

ಮಹತ್ವದ ಸೆಮಿಫೈನಲ್ ನಲ್ಲಿ ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತವನ್ನು ನಾಲ್ಕನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ್ದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆ ಪಂದ್ಯದ ಸೋಲಿನಲ್ಲಿ ಮಹೇಂದ್ರ ಸಿಂಗ್ ಧೋನಿಯವರ ರನ್ ಔಟ್ ಪ್ರಮುಖ ಪಾತ್ರ ವಹಿಸಿತ್ತು. ರನ್ ಔಟ್ ಆದಾಗ ಧೋನಿ ಅಂಗಳದಲ್ಲಿಯೇ ಕಣ್ಣೀರಾಕಿದ್ದನ್ನು ಅಭಿಮಾನಿಗಳು ಮರೆತಿಲ್ಲ.

ಇದೇ ಸಂದರ್ಭದಲ್ಲಿ ಅಂಪೈರ್ ಗಳ ತಪ್ಪಿನಿಂದಾಗಿ ರನ್ ಔಟ್ ಆಗಿದೆ, 48ನೇ ಓವರ್ ನಲ್ಲಿ ಲಾಕೀ ಫರ್ಗೂಸನ್ ನ ಎಸೆತವನ್ನು ಧೋನಿ ಬಾರಿಸಿದ ಹೊಡೆತದಲ್ಲಿ ಎರಡನೇ ರನ್ ಗಾಗಿ ಧೋನಿ ಓಡುತ್ತಿದ್ದಾಗ ಮಾರ್ಟಿನ್ ಗುಪ್ಟಿಲ್ ನೇರವಾಗಿ ವಿಕೆಟ್ ಗೆ ಬಾಲ್ ಎಸೆದ ಕಾರಣ ಆದ ರನ್ ಔಟ್ ನ ಬಾಲ್ ಕ್ರಮಬದ್ಧವಾಗಿಲ್ಲ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೂರನೇ ಪವರ್ ಪ್ಲೆ (41-50 ಓವರ್) ನಲ್ಲಿ ಐದಕ್ಕಿಂತ ಹೆಚ್ಚು ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗೆ ನಿಲ್ಲುವಂತಿಲ್ಲ ಎಂಬ ಐಸಿಸಿ ನಿಯಮವಿದ್ದರೂ ಸಹ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಔಟಾದ 48.3ನೇ ಬಾಲ್ ನಲ್ಲಿ ಆರು ಜನ ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗಿದ್ದರು ಅಂಪೈರ್ ಗಮನಿಸಿಲ್ಲ ಎಂಬ ಸ್ಕ್ರೀನ್ ಶಾಟ್ ಎಲ್ಲಾ ಕಡೆ ಹರಿದಾಡಿದೆ.

ಸಿ.ಎನ್.ಎನ್ ನ್ಯೂಸ್18ನ ನಿರೂಪಕ ಆನಂದ್ ನರಸಿಂಹನ್ ರವರು ಆ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ “ಮೂರನೇ ಪವರ್ ಪ್ಲೆ ನಲ್ಲಿ 6 ಜನ ಫೀಲ್ಡರ್ ಗಳು ಸರ್ಕಲ್ ನಿಂದ ಹೊರಗಿರುವುದು ಹೇಗೆ? ಅಂಪೈರ್ ಗಳ ಈ ಮಹಾ ಅಪರಾಧಕ್ಕೆ ಶಿಕ್ಷೆ ಇಲ್ಲವೇ? ಸೆಮಿ ಫೈನಲ್ ನಲ್ಲೇ ಹೀಗಾದರೆ ಹೇಗೆ ಎಂದು ಬರೆದಿದ್ದರು.

ನೂರಾರು ಜನರು ಅಂಪೈರ್ ಗಳ ತಪ್ಪು ಎಂದು  ಈ ಸ್ಕ್ರೀನ್ ಶಾಟ್ ಅನ್ನು ಷೇರ್ ಮಾಡಿದ್ದರು. ಎಂ.ಎಸ್ ಧೋನಿ ಫ್ಯಾನ್ಸ್ ಅಫೀಶಿಯಲ್ ಎನ್ನು 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಟ್ವಿಟ್ಟರ್ ಖಾತೆಯಿಂದಲೂ ಪೋಸ್ಟ ಆಗಿದ್ದಲ್ಲದೇ, ಧೋನಿ ನಾಟ್ ಔಟ್ ಆಗಿದ್ದರೆಂಬ ಯೂಟ್ಯೂಬ್ ವಿಡಿಯೋವೊಂದು ಪೋಸ್ಟ್ ಆಗಿದ್ದು ಅದನ್ನು ಬರೋಬ್ಬರಿ 1 ಕೋಟಿ 30 ಲಕ್ಷ ಜನ ವೀಕ್ಷಿಸಿದ್ದಾರೆ.

ಬಹುಮುಖ್ಯ ಮಾಧ್ಯಮ ಸಂಸ್ಥೆಗಳಾದ ದಿ ಇಂಡಿಯನ್ ಎಕ್ಸ್ ಪ್ರೆಸ್, ಇಂಡಿಯಾ ಟುಡೆ, ಆಜ್ ತಕ್ ಮುಂತಾದವುಗಳು ಸಹ ಫೀಲ್ಡಿಂಗ್ ನಿರ್ಬಂಧದ ಅಂಪೈರ್ ಗಳ ತಪ್ಪಿನಿಂದಾಗಿ ಧೋನಿ ಔಟಾಗಿರುವ ಸಾಧ್ಯತೆಯಿದೆ ಎಂಬ ವರದಿಗಳನ್ನು ಪ್ರಕಟಿಸಿದ್ದವು.

ಹಾಗಾದರೆ ಆ 48ನೇ ಓವರ್ ನಲ್ಲಿ ಆಗಿದ್ದಾದರೂ ಏನು?

ಈ ಕುರಿತು ಸ್ವತಂತ್ರ ಮಾಧ್ಯಮ ಸಂಸ್ಥೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿದೆ. ಸ್ಕ್ರೀನ್ ಶಾಟ್ ನಲ್ಲಿ ಕಾಣುತ್ತಿರುವ ಫೀಲ್ಡರ್ ಗಳ ಗ್ರಾಫಿಕ್ ನಲ್ಲಿ ತಪ್ಪಾಗಿದೆಯೇ ಹೊರತು ಅಂಪೈರ್ ನಿಂದಲ್ಲ ಎಂದು ಕಂಡಬಂದಿದೆ. ಆ ಓವರ್ ನ ಮೂರು ಬಾಲ್ ಗಳಲ್ಲಿ ಏನಾಯಿತು, ಫೀಲ್ಡರ್ ಗಳು ಯಾವ ಯಾವ ಜಾಗದಲ್ಲಿ ನಿಂತಿದ್ದರು ಎಂಬುದನ್ನು ಒಂದೊಂದಾಗಿ ನೋಡೋಣ

ಮೊದಲ ಬಾಲ್ (48.1 ಓವರ್ಸ್)

ಈ ಎಸೆತದಲ್ಲಿ ಐದು ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗಿದ್ದರು. ಅಂದರೆ ಥರ್ಡ್ ಮ್ಯಾನ್, ಡೀಪ್ ಫೈನ್ ಲೆಗ್, ಡೀಪ್ ಪಾಯಿಂಟ್, ಡೀಪ್ ಸ್ಕೇರ್ ಲೆಗ್ ಮತ್ತು ಲಾಂಗ್ ಆನ್ ನಲ್ಲಿ ನಿಂತಿದ್ದರು. ಫರ್ಗೂಸನ್ ಎಸೆದ ಆ ಬಾಲ್ ಅನ್ನು ಧೋನಿ ಸಿಕ್ಸ್ ಸಿಡಿಸಿದ್ದರು.

ಎರಡನೇ ಬಾಲ್ (48.2 ಓವರ್ಸ್)

ಈ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿದ್ದ ಫೀಲ್ಡರ್ ಹಿಂದಕ್ಕೆ ಚಲಿಸಿದ್ದಾರೆ ಮತ್ತು ಡೀಪ್ ಫೈನ್ ಲೆಗ್ ನಲ್ಲಿದ್ದ ಫೀಲ್ಡರ್ ಸರ್ಕಲ್ ನ ಒಳಗೆ ಬಂದಿದ್ದಾರೆ. ಈ ಬಾಲ್ ನಲ್ಲಿ ಯಾವುದೇ ರನ್ ಬಂದಿಲ್ಲ.

ಮೂರನೇ ಬಾಲ್ (48.3 ಓವರ್ಸ್)

ಈ ಎಸೆತದಲ್ಲಿಯೇ ಆರು ಜನ ಹೊರಗಿರುವಂತೆ ಮೇಲಿನ ಸ್ಕ್ರೀನ್ ಶಾಟ್ ನಲ್ಲಿ ಆರೋಪಿಸಲಾಗಿದೆ. ಡೀಪ್ ಪಾಯಿಂಟ್, ಡೀಪ್ ಫೈನ್ ಲೆಗ್, ಡೀಪ್ ಸ್ಕ್ವೇರ್ ಲೆಗ್, ಡೀಪ್ ಮಿಡ್ ವಿಕೆಟ್, ಲಾಂಗ್ ಮತ್ತು ಥರ್ಡ್ ಮ್ಯಾನ್ ಎನ್ನಲಾಗಿದೆ.  ಆದರೆ ಆನಂತರ ಥರ್ಡ್ ಮ್ಯಾನ್ ಸರ್ಕಲ್ ಒಳಗೆ ಬಂದು ಶಾರ್ಟ್ ಥರ್ಡ್ ಮ್ಯಾನ್ ಜಾಗಕ್ಕೆ ನಿಂತಿದ್ದಾರೆ.

ಆದರೆ ಗ್ರಾಫಿಕ್ ನಲ್ಲಿ ಇದು ಅಪ್ ಡೇಟ್ ಆಗಿಲ್ಲ. ಹಾಗಾಗಿ ಇದು ಗ್ರಾಫಿಕ್ ಬ್ರಾಡ್ ಕಾಸ್ಟ್ ನ ಸಮಸ್ಯೆಯೇ ಹೊರತು ಅಂಪೈರ್ ದಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಚಿತ್ರದ ಎಡಭಾಗದ ಮೇಲುಭಾಗದಲ್ಲಿ ಶಾರ್ಟ್ ಥರ್ಡ್ ಮ್ಯಾನ್ ಜಾಗದಲ್ಲಿ ಸರ್ಕಲ್ ನ ಒಳಗೆ ಫೀಲ್ಡರ್ ಬಂದು ನಿಂತಿರುವುದನ್ನು ನೀವು ನೋಡಬಹದು. ಹಾಗಾಗಿ ಥರ್ಡ್ ಮ್ಯಾನ್ ಸರ್ಕಲ್ ಒಳಗೆ ಬಂದು ಶಾರ್ಟ್ ಥರ್ಡ್ ಮ್ಯಾನ್ ಜಾಗಕ್ಕೆ ನಿಂತಿರುವುದನ್ನು ಗ್ರಾಫಿಕ್ ಬ್ರಾಡ್ ಕಾಸ್ಟ್ ತೋರಿಸದಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಅಷ್ಟೇ. ಸರ್ಕಲ್ ನಿಂದ ಹೊರಗೆ 5 ಜನರು ಮಾತ್ರ ಇರುವುದು ಖಾತ್ರಿಯಾಗಿದೆ. ಆನಂತರ ಆನಂದ್ ನರಸಿಂಹನ್ ರವರು ಇನ್ನೊಂದು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

ಒಟ್ಟಿನಲ್ಲಿ ಲಕ್ಷಾಂತರ ಜನ ಸತ್ಯ ಗೊತ್ತಿಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದ ವಾಗ್ವಾದಗಳನ್ನು ನಡೆಸಿದ್ದರು ಎನ್ನುವುದು ಮಾತ್ರ ಸತ್ಯು. ಹಾಗಾಗಿ ಯಾವುದನ್ನು ಫ್ಯಾಕ್ಟ್ ಚೆಕ್ ಮಾಡದೇ ನಂಬಬಾರದು ಎಂಬುದು ಮತ್ತೆ ಸಾಬೀತಾಗಿದೆ.

ಕೃಪೆ: ಆಲ್ಟ್ ನ್ಯೂಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...