Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-10: "ನನ್ನ ವರ್ಗಾವಣೆ ಹಿಂದೆ ಮಸಲತ್ತದೆ. ನನಿಗೆ ತೊಂದ್ರೆ ಕೊಡ್ಲೇಬೇಕು ಅಂತ ಹಿಂಗೆ...

ಹಿಂಗಿದ್ದ ನಮ್ಮ ರಾಮಣ್ಣ-10: “ನನ್ನ ವರ್ಗಾವಣೆ ಹಿಂದೆ ಮಸಲತ್ತದೆ. ನನಿಗೆ ತೊಂದ್ರೆ ಕೊಡ್ಲೇಬೇಕು ಅಂತ ಹಿಂಗೆ ಮಾಡವುರೆ”

- Advertisement -
- Advertisement -

ರಾಮಣ್ಣ ಕೊಡಿಯಾಲದ ಪಿ.ಹೆಚ್.ಯು ಸೆಂಟರ್‌ಗೆ ವರ್ಗಾವಣೆ ಅದಾಗ ನಮಗ್ಯಲ್ಲ ಒಂಥರ ಬೇಜಾರಾಯ್ತು. ಅವನಲ್ಲಿಗೋಗಿ ಸೇರಿಕಂಡ ಮ್ಯಾಲೆ ನಾನೋದೆ. ಗದ್ದದ ಮ್ಯಾಲೆ ಕೈಯ್ಯಾಕ್ಕಂಡ್ ಸುಮ್ಮನೆ ಕೂತಿದ್ದ. ನನ್ನೋಡಿ “ಬಾಲ” ಅಂದ. “ನೀನೋದ ಕಡಿಕ್ಯಲ್ಲ ಬತ್ತಿನಿ ಅಂದ್ರೆ ಬಾಲವೆಯ ಬುಡು” ಅಂತ ನಗಾಡಿದೆ. ಕೊಡಿಯಾಲ ಅಪರಿಚಿತ ಜಾಗೇನು ಆಗಿರಲಿಲ್ಲ. ಅವುನೆಲ್ಲೆ ಹೋಗ್ಲಿ ವಸಬನಂಗೆ ಕಾಣ್ತಿರಲಿಲ್ಲ. ಅವುನಿಗೆ ಸಾಮಾಜಿಕವಾಗಿ ಒಳ್ಳೆ ಹೆಸರಿದ್ದದ್ದರಿಂದ ಯಲ್ಲ ಗೌರವಿಸೋರು. ಡಾಕ್ಟರ್ ಕೆಲಸದ ಜೊತೆಗೆ, ಆಸುಪತ್ರೆ ಸುತ್ತ ಮರಗಿಡ ನೆಟ್ಟಗಂಡು ಕೃಷಿ ಕೆಲಸನೂ ಶುರುಮಾಡಿದ. ಅವುನೊಬ್ಬ ಪರಿಸರ ಪ್ರೇಮಿ. ನಾನು ಹೋದಾಗ್ಯಲ್ಲ ಅವುನು ನೆಟ್ಟ ಗಿಡ ನೋಡದೆ ಆಗದು. ಮನುಸುನ ಕಾಯ್ಲೆಗೆ ಔಷಧೋಪಚಾರ ಯಂಗೊ ಪರಿಸರಕ್ಕೆ ಗಿಡಗ್ಯಂಟೆ ನೆಡದು ಅಷ್ಟೇ ಮುಖ್ಯ ಅಂತಿದ್ದ. ಅದ ಕೊಡಿಯಾಲದ ಆಸುಪತ್ರೆ ಆವರಣದಲ್ಲಿ ಮಾಡಿ ತೋರಿಸಿದ. ಇವತ್ತು ಕೊಡಿಯಾಲಕ್ಕೆ ಹೋಗಿ ನೋಡಿದ್ರೆ ಆಸುಪತ್ರೆ ಆವರಣ ನಾನಾ ಜಾತಿ ಮರಗಿಡಗಳಿಂದ ತುಂಬಿದೆ. ವಾತಾವರಣವೆ ತಂಪಗ್ಯದೆ. ರಾಮಣ್ಣ ಕೊಡಿಯಾಲದ ಆಸುಪತ್ರೆ ಆವರಣದಲ್ಲಿ ಗಿಡಗ್ಯಂಟೆ ನೆಡತ ಹೆಂಡತಿ ಮಕ್ಕಳ ಜೊತೆ ಆರಾಮಾಗಿರುವಾಗ, ಆಗಿನ ಸರಕಾರದ ಪಿತೂರಿಗಾರರು ಅವುನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರು. ಅದು ಎಮರ್ಜೆನ್ಸಿ ಕಾಲ. ರಾಮಣ್ಣ ಈ ಹಿಂದೆ ಲೋಹಿಯ, ಜೆ.ಪಿ ಬಗ್ಗೆ ಮಾತಾಡಿದ್ದು ಇದೆ. ಕಾಂಗ್ರೆಸ್‌ನ ಟೀಕಿಸಿದ್ದೂ ಇದೆ. ಜೆ.ಪಿ ಚಳವಳಿ ಜೋರಾಗಿದ್ದಾಗ್ಲೆ ಅಲಹಾಬಾದ್ ಹೈಕೋರ್ಟು ತೀರ್ಪು ಇಂದಿರಾಗಾಂಧಿ ವಿರುದ್ಧ ಬಂತು. ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿದ್ಲು. ರಾಮಣ್ಣ ಜೆ.ಪಿ ಅನುಯಾಯಿ ಆಗಿದ್ರಿಂದ ಆಗಿನ ಜನತಾ ಮಾಧ್ಯಮ ಪತ್ರಿಕೆಲಿ ಏನು ಬರೆದ್ನೋ ಏನೊ. ಬೋರೆಗೌಡರ ಹೆಂಡತಿ ದಮಯಂತಿ ರಾಮಣ್ಣನ ಮ್ಯಾಲೆ ಕ್ಯಂಗಣ್ಣು ಬೀರಿದ್ಲು. ಪರಿಣಾಮ ಏನಪ್ಪ ಅಂದ್ರೆ ರಾಮಣ್ಣನ್ನ ಹಳೇಬೀಡಿಗೆ ವರ್ಗ ಮಾಡ್ತು ಸರಕಾರ. ರಾಮಣ್ಣ ವರ್ಗಾವಣೆಗೆ ಹೆದರೋನಲ್ಲ. ಆದ್ರೆ ಅವುನ ವರ್ಗ ನ್ಯಾಯವಾದದ್ದಲ್ಲ. ಅದ್ಕೆ ಅವುನಿಗೆ ಸಿಟ್ಟು ಬಂದಿತ್ತು. ಅದರಲ್ಲೂ ಅವುನು ವಿರೋಧಿಸೋ ಸರಕಾರ ಅವುನ ಮ್ಯಾಲೆ ಸೇಡು ತೀರಿಸಿಗೊಂಡಿತ್ತು.

ನಾನಾಗ ನಿರುದ್ಯೋಗಿ. ಎಲ್ಲಿ ಅಂದ್ರಲ್ಲಿ ತಿರುಗಕ್ಕೆ ನನಿಗ್ಯಾವ ನಿಬಂಧನೂ ಇರಲಿಲ್ಲ. ಆದ್ರಿಂದ ರಾಮಣ್ಣನ್ನ ನೋಡಕ್ಕೆ ಹಳೆಬೀಡಿಗೋದೆ. ಅಲ್ಲವುನು ಮಂಕಾಗಿದ್ದ. ಹಳೆಬೀಡು ಶಿಲ್ಪಕಲೆ ಪ್ರವಾಸಿತಾಣ. ಅಂತ ಜಾಗದಲ್ಲಿದ್ರು ಡಲ್ಲಾಗಿರಕ್ಕೆ ಕಾರಣ ಸರಕಾರದ ಸೇಡಿನ ಕ್ರಮ ಅನ್ನದು ಗೊತ್ತಾಯ್ತು. ರಾಮಣ್ಣ ಅಂಗಿರದ ನಾನು ನೋಡಿದ್ದು ಅದೇ ಮೊದ್ಲು. ನಮ್ಮ ಮಾತುಕತೆಲಿ ಯಾವ ಉತ್ಸಾಹನೂ ಇರಲಿಲ್ಲ. ಏನೇ ಆಗ್ಲಿ ರಾಮಣ್ಣನಿಗೆ ನಮ್ಮ ಕಾಡೆ ಸರಿ ಅನ್ನಸ್ತು. ಊರಿಗೆ ಬಂದೆ. ಚುನಾವಣೆ ಘೋಷಣೆ ಆಯ್ತು. ನಮ್ಮಣ್ಣ ಆಗ್ಲೆ ಅರಸು ಜೊತೆ ಸೇರಿಕಂಡಿದ್ರು. ನಿರುದ್ಯೋಗಿಯಾದ ನಾನು ಚುನಾವಣೆ ಪ್ರಚಾರಕ್ಕೋದೆ. ಚುನಾವಣೆ ಮುಗಿದು ನಮ್ಮಣ್ಣ ಗೆದ್ದ. ಶ್ರೀಕಂಠಯ್ಯನೋರು ಗೆದ್ದಿದ್ರು. ಅವರಿಗೆ ನನ್ನ ನಿರುದ್ಯೋಗ ಗೊತ್ತಿತ್ತು. ಆದ್ರಿಂದ ಏನಾದ್ರು ಮಾಡಿ ಕಾರ್ಪೊರೇಷನ್ ಆರೋಗ್ಯಾಧಿಕಾರಿಯಾಗನ ಅಂತ ಪ್ಲಾನು ಮಾಡಿದ್ದೆ. ಅಣ್ಣ ಆಗ್ಲೆ ಜನರಲ್ ಹಾಸ್ಟಲಲ್ಲಿ ಇದ್ದಿದ್ರಿಂದ ನಾನು ಅಲ್ಲೆ ಇರಕ್ಕೆ ಶುರು ಮಾಡಿದೆ. ಆಗ ಮಾದಪ್ಪನ ಮುದ್ದೆ ಹೋಟ್ಲು ಭಾಳ ಪೇಮಸ್ಸು. ಯರಡು ರೂಪಾಯಿಗೆ ಮುದ್ದೆ ಊಟ ಕೊಡೋನು. ಸಾಯಂಕಾಲಾಯ್ತು ಅಂದ್ರೆ ಜನರಲ್ ಹಾಸ್ಟೆಲ್ ಉಸ್ತುವಾರಿಲಿದ್ದ ನಾಗರಾಜನಿಗೆ 20 ರುಪಾಯಿ ಕೊಟ್ರೆ ರೂಮು ಕೊಡೋನು. ನಮ್ಮಣ್ಣನ ರೂಮಲ್ಲಿ ಸಿ.ಎಂ ಇಬ್ರಾಹಿಮನೂ ಇದ್ದ. ಆಗವುನಿಗೆ ನಮ್ಮಣ್ಣನ ರೂಮು ಬುಟ್ರೆ ಬೇರೆ ಜಾಗವೇ ಇರಲಿಲ್ಲ. ಅವುನ ಅಣ್ಣನ ಜೊತೆ ಇದ್ದಿದ್ರಿಂದ ನಾನು ಬ್ಯಾರೆ ರೂಮು ಮಾಡಬೇಕಿತ್ತು. ಭಾಳ ದಿನ ಹಿಂಗೆ ಇದ್ದೆ. ಯಾರಾದ್ರು ಅಣ್ಣನಿಗೆ ಊಟ ತರೋರು. ಆ ಊಟ ಬಾಡಿನೆಸರಾದಗಿರಬೇಕಿತ್ತು. ಜತೆಗೆ ಯಣ್ಣೆ ಇರಲೇಬೇಕಿತ್ತು. ಅಣ್ಣನಿಗೆ ಈ ತರ ಆಂಜನೇಯನ ತಳಗೆ ಬಂದಾಗ ನಾನೂ ಪಾಲ್ದಾರಾಯ್ತಿದ್ದೆ. ಅದು ನನ್ನ ಅನಿವಾರ್ಯ ಸ್ಥಿತಿ. ಎಲ್ಯಾರ ಪೋಸ್ಟಿಂಗ್ ಸಿಗಗಂಟ ಅಲ್ಲೇ ಇರಬೇಕಾಗಿತ್ತು. ಈತರ ಯೋಚನೆ ಮಾಡ್ತಯಿದ್ದಾಗ, ಅಲ್ಲಿ ರಾಮಣ್ಣ ಕಾಣಿಸಿಗಂಡ.

“ಏನಪ್ಪ ಹಳೆಬೀಡು ವಿಶೇಷ” ಅಂದೆ.

“ಸುಮ್ಮನೆ ಕೂತಗಲ ಅಮಿಕ್ಕಂಡು. ಬೆಂಗಳೂರಿಗೆ ಬಂದು ಬ್ಯಣೆ ಪೆಟ್ಟಿಗಂದು ಕುಂತಿದ್ದಿಯಲ್ಲ. ನಿನಿಗೇನು ಗೊತ್ಲ ನಮ್ಮ ಕಷ್ಟ” ಅಂದ.

“ಅದೇನೇಳಪ್ಪ ನಿನ್ನ ಕಷ್ಟ” ಅಂದೆ.

“ವರ್ಗಾ ಮಾಡಿಸಬೇಕು ಕಲ. ನಾನಲ್ಲಿರದಿಲ್ಲ. ನಿಮ್ಮಣ್ಣನ ಕೇಳು” ಅಂದ.

“ಬರಹಗಾರ ನೀನು. ಕರ್ನಾಟಕದ ಯಾವ ಮೂಲೆಗಾಕಿದ್ರು ಹೋಗಬೇಕು ಅನುಭವ ಪಡ್ಕೊಬೇಕು. ಇದ್ದ ಜಾಗದಲ್ಲೆ ಇರಬಾರ್ದು” ಅಂದೆ.

“ಅದು ನನಿಗೂ ಗೊತ್ತು ಕಲ. ನನ್ನ ವರ್ಗಾವಣೆ ಹಿಂದೆ ಮಸಲತ್ತದೆ. ನನಿಗೆ ತೊಂದ್ರೆ ಕೊಡ್ಲೇಬೇಕು ಅಂತ ಹಿಂಗೆ ಮಾಡವುರೆ. ಅದಕೆ ಉತ್ತರ ಕೊಡಬೇಕು ಕಲ” ಅಂದ.

ಆದ್ರೆ ರಾಮಣ್ಣ ಸ್ವಾಭಿಮಾನಿ. ತನ್ನ ಸಮಸ್ಯೆಗೆ ಯಾವ ರಾಜಕಾರಣಿ ಹತ್ರನೂ ಹೇಳಿಕೊಳ್ಳೋಕೆ ಆಗದೆ ನನ್ನತ್ರಕೆ ಬಂದಿದ್ದ.

“ಸರಿಯಪ್ಪ ಸಿಚುಯೇಶನ್ ಅಂಗಿದಿಯಾ, ನಿಂದು ಗೆಜೆಟೆಡ್ ಪೋಸ್ಟು. ವರುಸಕ್ಕೆ ಮುಂಚೆಗೆ ವರ್ಗಮಾಡದಿಲ್ಲ. ಅಂಗೇನಾದ್ರು ಮಾಡಬೇಕಾದ್ರೆ ಮುಖ್ಯಮಂತ್ರಿಗೆ ಸಿಫಾರಸ್ ಮಾಡಬೇಕು. ನಿನಿಗೆಲ್ಲಿ ಬೇಕು ಹೇಳು” ಅಂದೆ.

“ನೀನೆ ವರ್ಗ ಮಾಡೋನಂಗೆ ಕೇಳ್ತಿಯಲ್ಲಾ. ಬೆಳ್ಳೂರಿಗೆ ಬೇಕು ಮಾಡುಸ್ತಿಯಾ” ಅಂದ. ಬೆಳ್ಳೂರು ಅಂದ್ರೆ ನಮ್ ತಾಲೂಕು. ಅಲ್ಲಿಗೆ ಮಾಡಿಸಬೇಕು ಅಂದ್ರೆ ನಮ್ಣಣ್ಣನ್ನೆ ಹಿಡಿಬೇಕು. ನಮ್ಮಣ್ಣನ ವಿಶೇಷ ಅಂದ್ರೆ ಅವುನು ಮನೆಲಿದ್ರು ಇಲ್ಲ ಅನ್ನಕಾಯ್ತಿರಲಿಲ್ಲ. ರೂಮಿನ ಗೊರಕೆ ನಡುಮನಿಗೆ ಕೇಳದು. ಅವುನು ಮಂತ್ರಿಯಾದಾಗ್ಲು ಗೊರಕೆ ಸೌಂಡ್ ನಿಲ್ಲೊಗಂಟ ಅಧಿಕಾರಿಗಳು ಕೂತಿರೋರು. ಈಗ್ಲು ಅಂಗೆ ಆಯ್ತು. ಅಣ್ಣನ ಗೊರಕೆ ನಿಂತ ಮ್ಯಾಲೆ ವಳಿಕೋಗಿ, “ಬೆಸಗರಳ್ಳಿ ರಾಮಣ್ಣ ಬಂದವುನೆ” ಅಂದೆ. “ವಳ್ಳೆದು ಭಾಳ ದಿನಾಗಿತ್ತು ನೋಡಿ” ಅಂದ್ರು. “ಅವುನದೊಂದು ಸಮಸ್ಯೆ ತಂದವುನೆ” ಅಂದೆ.

“ಏನಂತೆ” ಅಂದ್ರು.

“ಅವುನು ಹಳೆಬೀಡಲ್ಲಿರಕ್ಕಾಗಲ್ಲ ಟ್ರಾನ್ಸ್‌ಫರ್ ಆಗಬೇಕಂತೆ” ಅಂದೆ.

“ಎಲ್ಲಿಗೆ ಬೇಕಂತೆ” ಅಂದ್ರು.

“ಬೆಳ್ಳೂರಿಗೆ ಬೇಕಂತೆ” ಅಂದೆ.

“ಅಲ್ಯಾರವುರೆ?”

“ಜಿ ಮಾದೇಗೌಡ್ರ ಸಮಂದಿ ಅವುನೆ” ಅಂದ ನಾನು, ಇದೇ ಸರಿಯಾದ ಟೈಮು ಅಂತ, “ಆ ಹುಡುಗ ಪೇಶಂಟ್ ಸರಿಯಾಗಿ ನೋಡದಿಲ್ಲ. ಒಂಥರ ಉಡಾಫೆ. ಡಾಕ್ಟರಾದೋನು ಸಮಾಧಾನದಿಂದ ರೋಗಿ ನೋಡ್ಬೇಕು. ಸಾಂತ್ವನದ ಮಾತಾಡಬೇಕು. ಇದವುನಿಗಿಲ್ಲ. ರಾಮಣ್ಣ ನಮ್ಮ ಜನಗಳ ಜೊತೆ ಇದ್ದೋನು ಅವುನೆ ಸರಿ ಬೆಳ್ಳೂರಿಗೆ” ಅಂದೆ.

ಕೂಡ್ಲೆ “ಲೆಟರ್ ತಗೊ” ಅಂದ್ರು. ನಮಣ್ಣ ಡಿಕ್ಟೇಷನ್ ಹೇಳದ್ರಲ್ಲಿ ನಿಸ್ಸೀಮರು. ಅವರು ಭಾಷೆ ವಿನಂತಿಯಲ್ಲ. ಪರಿಣಾಮ ಬೀರಂಗೆ ಲೆಟರ್ ಬರಸತಿದ್ರು. ಅವತ್ತು ಮುಖ್ಯಮಂತ್ರಿ ದೇವರಾಜ ಅರಸುಗೆ ಬರಸಿದ್ರು. ಲೆಟರ್‌ನ ನಾನೆ ಮಡಿಕಂಡಿದ್ದೆ.

ಸಾಯಂಕಾಲಾಯ್ತಿದ್ದಂಗೆ ಹೆಚ್.ಎಲ್ ಕೇಶವಮೂರ್ತಿ ಅವುರ ಬ್ರದರು ರಾಮಣ್ಣನ ಫ್ರೆಂಡ್ಯಲ್ಲ ಬಂದ್ರು. ರಾಮಣ್ಣನ ನೋಡಿ ಓ ರಾಮಣ್ಣ ಬಂದವುನೆ ಅಂತ ಯಲ್ಲ ಖುಷಿಯಾದ್ರು. “ರಾಮಣ್ಣನಿಗೆ ಟ್ರಾನ್ಸ್‌ಫರ್ ಬೇಕಂತೆ ಹಳೆಬೀಡಿಂದ” ಅಂದೆ. ಕೇಶವಮೂರ್ತಿಯವರು ನಮ್ಮ ರಾಮಣ್ಣನಿಗೆ ಹಳೇಬೀಡಿಗಿಂತ ಬೇಲೂರಾಗಿದ್ರೆ ಶಿಲಾಬಾಲಿಕೆರು ನೋಡಿಕಂಡು ಕತೆ ಬರಿಯನು ಅಂದ್ರು.

“ಸುಮ್ಮನಿರಯ್ಯ ನಂದೆ ನನಿಗಾಗದೆ, ನೀವು ಸುಮಾನ ಆಡಬ್ಯಾಡಿ” ಅಂದ. ಯಲ್ರೂ ಅಲ್ಲೇ ಉಳುದ್ರು. ನಾಕು ರೂಮು ಮಾಡಿದೆ. “ರಾಮಣ್ಣ ಏನ್ನೊ ನ್ಯನಿಸಿಗಂಡೋನಂಗೆ ಹ್ವಂಟ. ವಾಕೊಯ್ತ ಯಿದ್ದಾಗ ಯಸ್ಕೇಪಾಗದ, ಜೊತೆಲಿದ್ದಾಗ ತಪ್ಪಿಸಿಗಳದು ಹ್ವಸದೇನಲ್ಲ ಅವನ್ಗೆ. ಅಂಗೆ ಹೋದೊನು ವಾಪಸು ಬಂದಾಗ ಡಲ್ಲಾಗಿದ್ದ. ಆಗ ಯಲ್ರು ಖುಷಿಯಾಗಿರಕ್ಕೆ ಏನು ಮಾಡಬೇಕೊ ಅದನ್ನ ಮಾಡಿದೊ!

ಅದು ದೇವರಾಜ ಅರಸು ಕಾಲ. ಅರಸು ನಿಜವಾಗ್ಲು ರಾಜನಂಗೆ ಮ್ಯರಿತಿದ್ರು. ಕರ್ನಾಟಕದ ಯರಡು ಪ್ರಬಲ ಜಾತಿ ಪ್ರಭಾವ ಹತ್ತಿಕ್ಕೆ ಹಿಂದುಳಿದ ವರ್ಗನ ಎತ್ತಿಕಟ್ಟಿದ್ರು. ಇಂದಿರಾಗಾಂಧಿ ಬೆಂಬಲ ಇತ್ತವುರಿಗೆ. ಮಂಡ್ಯ ಜಿಲ್ಲೆ ಲೀಡ್ರಗಳ ಪೈಕಿ ನಮ್ಮಣ್ಣನ ಕಂಡ್ರೆ ತುಂಬ ಅಭಿಮಾನ. “ಕೃಷ್ಣಪ್ಪಗೌಡ್ರೆ” ಅಂತ ಪ್ರೀತಿಯಿಂದ ಕರಿತಿದ್ರು. ನಮಿಗೆ ಮುಖ್ಯಮಂತ್ರಿ ಹತ್ರ ಹೋಗಕ್ಕೆ ಯಾವ ಅಂಜಿಕೆನೂ ಇರಲಿಲ್ಲ. ಆದ್ರು ಅರಸು ನೋಡಕೋಗದೆ, ಸಿಎಂ ಕಚೆರಿ ಸೆಕ್ರೆಟರಿ ಹತ್ರ ಹೋದೊ. ಆ ಸೆಕ್ರೆಟ್ರಿ ನಮ್ಮ ತಾಲೂಕಿನ ಹುಡುಗ. ನಿನಿಗಿನ್ನೊಂದು ವಿಷಯ ಗೊತ್ತಾ. ವಿಧಾನಸೌಧ ಮತ್ತೆ ಕೋರ್ಟು ಬಾಗಲಲ್ಲಿದ್ದೊರ್ಯಲ್ಲ ನಮ್ಮ ನಾಗಮಂಗಲದೋರೆಯ. ಮುಖ್ಯಮಂತ್ರಿ ಕಚೇರಿ ಬೀಗದ ಕೈ ಕೂಡ ನಾಗಮಂಗಲದೊರತ್ರ ಇತ್ತು. ಯಾಕೆ ಅಂದ್ರೆ ಆಗ ನಮ್ಮ ಜನಕೆ ವಿದ್ಯೆ ಇರಲಿಲ್ಲ, ಆದ್ದರಿಂದ ಕೋರ್ಟು ವಿಧಾನಸೌದ ಕಾಯೋ ಕ್ಯಲಸ ಸಿಕ್ಕಿದ್ವು. ಅದ್ನೆ ನಂಬಿಕೆಯಿಂದ ಮಾಡತಿದ್ವು. ಅಂಗಾಗಿ ನಮ್ಮಣ್ಣ ಕೊಟ್ಟ ಲ್ಯಟ್ರು ನಮ್ಮ ಹುಡುಗನಿಗೆ ಕೊಟ್ಟೊ. ಆ ಲೆಟ್ರು ಕ್ಯಲಸ ಮಾಡದ್ರಲ್ಲಿ ಯಾವ ಅನುಮಾನಾನೂ ಇರಲಿಲ್ಲ. ಆದ್ರು ಲೆಟ್ರು ಊರ್ಜಿತವಾಗಿ ಆರ್ಡರಾಗಬೇಕಾದ್ರೆ ನಾವೆಲ್ಲ ಇದ್ದು ಮೂವ್ ಮಾಡಿಸಬೇಕಾಗಿತ್ತು. ಇದನ್ನ ಚರ್ಚೆ ಮಾಡಿದ ಕೇಶವಮೂರ್ತಿ ಟೀಮು “ರಾಮಣ್ಣ ನೀನು ಹಳೆಬೀಡಿಂದ ಬಂದು ಹೋಗಿ ಲೆಟರ್ ಮೂವ್ ಮಾಡಸದಕ್ಕಿಂತ ಕಮಲಾಕ್ಷನೆ ಇಲ್ಲಿದ್ದು ಮಾಡ್ತನೆ ಬುಡು” ಅಂದ್ರು.

“ಮಾಡ್ಲಿ ಬುಡಿ. ಇಲ್ಲಿದ್ದಕಂಡು ಅವುನಿಗಿನ್ನೇನು ಕ್ಯಲಸ” ಅಂದ.

“ಅವುನು ಲೆಟ್ರು ಮೂವ್ ಮಾಡಸೊ ವಿಷಯದಲ್ಲಿ ಓಡಾಡಬೇಕಾದ್ರೆ ಖರ್ಚು ಬತ್ತದೆ ಅದ್ಕೆ ಒಂದ್ಯರಡು ಸಾವುರ ಕೊಡವುನ ಕೈಗೆ” ಅಂದ್ರು.

ರಾಮಣ್ಣ ಬಾಡು ಒಳ್ಳೆ ಡ್ರಿಂಕ್ಸ್ ವಿಷಯದಲ್ಲಿ ಸಡನ್ನಂತ ಜೇಬಿಗೆ ಕೈಯಾಕತಿದ್ದವ್ನು, ಈಗ್ಯಾಕೊ ತಡಮಾಡಿ ತಗಲ ಅಂತ ನೂರ್ರುಪಾಯಿ ನೋಟಗಳ ಎಣಿಸಿಕೊಟ್ಟ. ಯಲ್ಲ ವಾಪಸ್ ಹೋದ್ರು ನಾನು ಅಲ್ಲಿದ್ದಕಂಡು ಓಡಾಡಿದೆ. ಒಂದು ವಾರದಲ್ಲಿ ಆರ್ಡರ್ ಬಂತು. ದೇವರಾಜ ಅರಸು ಕೃಷ್ಣಪ್ಪನವರ ಮ್ಯಾಲಿಟ್ಟಿದ್ದ ನಂಬುಕೆ, ಆರ್ಡರ್ ನೋಡಿದ ಕೂಡ್ಲೆ ನಮಗೆ ಮನವರಕೆ ಆಯ್ತು.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...