Homeರಾಜಕೀಯಭಾರತದ ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? | ಸಂಕ್ಷಿಪ್ತ ವಿವರಣೆ

ಭಾರತದ ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? | ಸಂಕ್ಷಿಪ್ತ ವಿವರಣೆ

- Advertisement -
- Advertisement -

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾಗಿರುವ ಭಾರತವು ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುವ ರೀತಿಯೂ ಇತರ ದೇಶಗಳಿಗಿಂತಲೂ ಭಿನ್ನವಾಗಿದೆ. ಅಧ್ಯಕ್ಷೀಯ ಆಡಳಿತವಿರುವ ದೇಶಗಳಲ್ಲಿ ಅಲ್ಲಿನ ಪ್ರಜೆಗಳೇ ತನ್ನ ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುತ್ತಾರೆ. ಆದರೆ ಭಾರತದಲ್ಲಿ ಪರೋಕ್ಷವಾಗಿ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.

ದೇಶದ ಹಾಲಿ ರಾಷ್ಟ್ರಪತಿ ರಾಮ್ ನಾಥ್‌‌ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ 16ನೇ ರಾಷ್ಟ್ರಪತಿ ಆಯ್ಕೆ ಮಾಡುವ ‘ರಾಷ್ಟ್ರಪತಿ ಚುನಾವಣೆ’ ಜುಲೈ 18 ರಂದು ನಡೆಯಲಿದೆ. ಜುಲೈ 21 ರಂದು ಈ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತವು ತನ್ನ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗೆ, ಈ ಚುನಾವಣೆಯಲ್ಲಿ ಯಾರ್‍ಯಾರು ಮತ ಚಲಾಯಿಸಬಹುದು, ಮತದಾನದ ವಿಧಾನ ಮತ್ತು ಇತರ ಕಾರ್ಯವಿಧಾನಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಮತದಾನ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸಬಹುದು?

ಭಾರತೀಯ ಸಂವಿಧಾನದ 54 ನೇ ವಿಧಿಯು ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಬಹುದಾದ ಮತದಾರರಿಗೆ ನಿಬಂಧನೆಗಳನ್ನು ವಿವರಿಸುತ್ತದೆ. ಸಂಸತ್ತಿನ ಉಭಯ ಸದನಗಳ ಸಂಸದರು, ದೆಹಲಿ-ಪುದುಚೇರಿ (ಎರಡೂ ಕೇಂದ್ರಾಡಳಿತ ಪ್ರದೇಶಗಳು) ಸೇರಿದಂತೆ ಎಲ್ಲಾ ರಾಜ್ಯಗಳ ಶಾಸನ ಸಭೆಗಳ ‘ಚುನಾಯಿತ’ ಸದಸ್ಯರು (MLA) ಈ ಚುನಾವಣೆಯಲ್ಲಿ ಭಾಗವಹಿಸಬಹುದು.

ಈ ಚುನಾಯಿತ ಸದಸ್ಯರನ್ನು ‘ಚುನಾವಣಾ ಕಾಲೇಜ್‌’ನ ಸದಸ್ಯರು ಎಂದು ಹೇಳುತ್ತಾರೆ. ಈ ಚುನಾವಣಾ ಕಾಲೇಜ್‌ನ ಸದಸ್ಯರು ಮಾತ್ರ ಭಾರತದ ರಾಷ್ಟ್ರಪತಿಯನ್ನು ಚುನಾಯಿಸಬಹುದು ಎಂದು ಸಂವಿಧಾನ ಹೇಳುತ್ತದೆ.

“ಚುನಾಯಿತ ಸದಸ್ಯ” ಎಂಬ ಪದವು ಸಂಸತ್ತಿನ ಸದನ ಅಥವಾ ರಾಜ್ಯಗಳ ಶಾಸನ ಸಭೆಗಳಿಗೆ ನಾಮನಿರ್ದೇಶಗಳ ಮೂಲಕ ಆಯ್ಕೆಯಾದ ಸದಸ್ಯರು ಭಾಗವಹಿಸುವಂತಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಅದೇ ರೀತಿ, ರಾಜ್ಯಗಳ ವಿಧಾನ ಪರಿಷತ್ತಿನ ಸದಸ್ಯರು ಕೂಡಾ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಶರದ್‌ ಪವಾರ್‌‌ ಸಾಧ್ಯತೆ

ಲೋಕಸಭೆಯಲ್ಲಿ ಇಬ್ಬರು ಮತ್ತು ರಾಜ್ಯಸಭೆಯಲ್ಲಿ 12 ನಾಮನಿರ್ದೇಶಿತ ಸದಸ್ಯರು ಇದ್ದಾರೆ. ಹೀಗಾಗಿ ರಾಷ್ಟ್ರಪತಿ ಚುನಾವಣೆಗೆ ಮತಚಲಾಯಿಸುವ ಲೋಕಸಭೆ ಮತ್ತು ರಾಜ್ಯಸಭೆಯ ಮತದಾರರು ಕ್ರಮವಾಗಿ 543 ಮತ್ತು 233 ಆಗಿದ್ದು, ಒಟ್ಟು 776 ಮತದಾರರಿದ್ದಾರೆ.

ಇದರ ಜೊತೆಗೆ ಎಲ್ಲಾ ರಾಜ್ಯಗಳು, ದೆಹಲಿ ಮತ್ತು ಪುದುಚೇರಿಯ MLAಗಳು ಸೇರಿ ಒಟ್ಟು 4,033 ಮತದಾರರಿದ್ದಾರೆ. ಹೀಗಾಗಿ ರಾಷ್ಟ್ರಪತಿ ಚುನಾವಣಾ ಕಾಲೇಜಿನಲ್ಲಿ ಒಟ್ಟು 4,809 ಸದಸ್ಯರು ಅಥವಾ ಮತದಾರರು ಇದ್ದಾರೆ.

ಮತದಾರನ ‘ಮೌಲ್ಯ’ ಪ್ರಾಮುಖ್ಯತೆ ಪಡೆಯುತ್ತದೆ, ಮತದಾರನ ‘ಸಂಖ್ಯೆ’ ಅಲ್ಲ

ಚುನಾವಣೆಯಲ್ಲಿ ಸಂಸತ್ತಿನ ಸದಸ್ಯರು ಮತ್ತು ವಿಧಾನಸಭೆಯ ಸದಸ್ಯರಿಗೆ ವಿಭಿನ್ನ ಮೌಲ್ಯಗಳನ್ನು ನಿಗದಿಪಡಿಸಲಾಗಿದೆ. ಒಬ್ಬ ಸಂಸದನ ಮತದ ಮೌಲ್ಯವನ್ನು ‘700’ ಎಂದು ನಿಗದಿ ಪಡಿಸಲಾಗಿದೆ. ಈ ಮೌಲ್ಯವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತಗಳ ಮೌಲ್ಯವನ್ನು, ಒಟ್ಟು ಚುನಾಯಿತ ಸಂಸದರ ಸಂಖ್ಯೆಯಿಂದ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಸಂಸತ್ತಿನ ಒಟ್ಟು ಮತಗಳ ಸಂಖ್ಯೆ 5,43,200 ಮತ್ತು ಸಂಸದರ ಸಂಖ್ಯೆ 776 ಆಗಿರುವುದರಿಂದ, ಪ್ರತಿ ಸಂಸದರ ಮತದ ಮೌಲ್ಯ 700 ಆಗಿರುತ್ತದೆ.

2018 ಕ್ಕಿಂತ ಮೊದಲು ಪ್ರತೀ ಸಂಸದನ ಮೌಲ್ಯ 708 ಇತ್ತು. ಆದರೆ 2018 ರಲ್ಲಿ ಜಮ್ಮು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿದ ನಂತರ ಇದನ್ನು ಕಡಿಮೆಗೊಳಿಸಲಾಗಿದೆ. ಜಮ್ಮು ಕಾಶ್ಮೀರ ಒಟ್ಟು 6,264 ಮತಗಳ ಮೌಲ್ಯವನ್ನು ಹೊಂದಿರುವ 87 ಸದಸ್ಯರನ್ನು ಒಳಗೊಂಡಿದೆ.

ಇದನ್ನೂ ಓದಿ: ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ, 21ರಂದು ಮತ ಎಣಿಕೆ: ಚುನಾವಣಾ ಆಯೋಗ

ಶಾಸಕರ ಮತದ ಮೌಲ್ಯ ಲೆಕ್ಕಾಚಾರ

ಪ್ರತಿ ಶಾಸಕರ ಮತಗಳ ಮೌಲ್ಯವು ಅವರ ರಾಜ್ಯದ ಜನಸಂಖ್ಯೆ ಮತ್ತು ಆ ರಾಜ್ಯದ ಶಾಸಕಾಂಗ ಸಭೆಯ ಬಲವನ್ನು ಅವಲಂಬಿಸಿರುತ್ತದೆ. ಇಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು, ಮೌಲ್ಯವನ್ನು ನಿರ್ಧರಿಸಲು ಬಳಸಲಾಗುವ ಒಂದು ಸೂತ್ರ ಕೆಳಗಿನಂತಿದೆ:

ರಾಜ್ಯದ ಜನಸಂಖ್ಯೆಯನ್ನು ಅದರ ಶಾಸಕಾಂಗ ಸಭೆಯ ಸಂಖ್ಯೆಗೆ 1,000 ದಿಂದ ಭಾಗಿಸಲಾಗುತ್ತದೆ

ಜನಸಂಖ್ಯೆಯನ್ನು 1971 ರ ಜನಗಣತಿಯನ್ನು ಆಧರಿಸಿ ಲೆಕ್ಕ ಮಾಡಲಾಗುತ್ತದೆ. ಉದಾಹರಣೆಗೆ, ಕರ್ನಾಟಕದ ಒಬ್ಬ ಎಂಎಲ್ಎ ಹೊಂದಿರುವ ಮತದ ಮೌಲ್ಯವನ್ನು ಲೆಕ್ಕಾಚಾರ ಮಾಡಲು ನಾವು ಉದ್ದೇಶಿಸಿದ್ದರೆ, ನಾವು 1971 ರ ಜನಗಣತಿಯಿಂದ ಕರ್ನಾಟಕದ ಜನಸಂಖ್ಯೆಯ ಡೇಟಾವನ್ನು ಬಳಸಬೇಕು. 1971 ರ ಜನಗಣತಿಯ ಪ್ರಕಾರ 29,299,014 ರಾಜ್ಯದಲ್ಲಿ ಜನಸಂಖ್ಯೆಯಿತ್ತು. 224 ರಷ್ಟಿರುವ ಕರ್ನಾಟಕ ವಿಧಾನಸಭೆಯ ಸಂಖ್ಯಾಬಲವನ್ನು ಬಳಸಬೇಕು.

ಆದ್ದರಿಂದ, ರಾಜ್ಯದ ಶಾಸಕರೊಬ್ಬರ ಮತದ ಮೌಲ್ಯವನ್ನು 29,299,014 ÷ 224 x 100=130.7 ಎಂದು ಲೆಕ್ಕ ಹಾಕಬಹುದಾಗಿದೆ. ಅದನ್ನು 131 ಪೂರ್ಣಗೊಳಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದ ಶಾಸಕರ ಮತವು 131 ರ ಮೌಲ್ಯವನ್ನು ಹೊಂದಿರುತ್ತದೆ.

https://www.google.com/search?q=how+to+calculate+mla+vote+value+in+president+election&sxsrf=ALiCzsb61HnbWZqRU4hZOtNop-oc8iwAig:1655128326039&tbm=isch&source=iu&ictx=1&vet=1&fir=7P0L0AdQ1jw3QM%252CBnB_PFmmb7lOUM%252C_%253B5zK-dwY8eD0mRM%252CBnB_PFmmb7lOUM%252C_%253BuygfgqHCNv0ylM%252Ca42xA2l8ZufUFM%252C_%253B5b_ssRLNJkE8gM%252C3Kct3927MGYdpM%252C_%253BPwoF4eHY6uEw0M%252CCoBmTD__lj_EDM%252C_%253BLT4mIb_CRJDxTM%252Ca42xA2l8ZufUFM%252C_%253B1pvvhudaYR6-WM%252Cy1WoKv1CFbKKjM%252C_%253BIbfEqq6RILNqPM%252CEibRYrEu3GyvBM%252C_%253B2FCT0dqHXevN7M%252CWUKkY6nDVx8C_M%252C_%253BPWQhU-jycHWFsM%252CBnB_PFmmb7lOUM%252C_&usg=AI4_-kQhLML0UM86darodbhkfUeHYY42gA&sa=X&ved=2ahUKEwiTl7m_yar4AhUn-DgGHSKsCSAQ9QF6BAgiEAE#imgrc=7P0L0AdQ1jw3QM
ಕರ್ನಾಟಕದ ಶಾಸಕರೊಬ್ಬರ ಮತದ ಮೌಲ್ಯ ಕಂಡು ಹಿಡಿಯುವ ವಿಧಾನ

ಸಂವಿಧಾನದ 84 ನೇ ತಿದ್ದುಪಡಿಯು 2026 ರ ನಂತರ ನಡೆಸಿದ ರಾಷ್ಟ್ರೀಯ ಜನಗಣತಿಯನ್ನು ಪ್ರಕಟಿಸುವವರೆಗೆ ಕ್ಷೇತ್ರದ ಗಡಿಗಳಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಆದ್ದರಿಂದ 2031 ರ ಜನಗಣತಿ ಪ್ರಕಟವಾದ ನಂತರ ಮಾತ್ರ ಈ ಮೌಲ್ಯಗಳಲ್ಲಿ ಬದಲಾವಣೆ ಆಗುತ್ತದೆ.

ಇದನ್ನೂ ಓದಿ:  ಶಿಕ್ಷಣವನ್ನು ಕೇಸರಿಕರಣ ಮಾಡುವುದರಲ್ಲಿ ತಪ್ಪೇನಿದೆ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಪ್ರಸ್ತುತ, 208 ಮೌಲ್ಯಗಳ ಮೂಲಕ ಉತ್ತರ ಪ್ರದೇಶದ ಶಾಸಕರು ತಮ್ಮ ಮತಗಳಿಗೆ ಹೆಚ್ಚಿನ ಮೌಲ್ಯವನ್ನು ಹೊಂದಿದ್ದಾರೆ, ಸಿಕ್ಕಿಂ ಅತ್ಯಂತ ಕಡಿಮೆ ಮೌಲ್ಯವನ್ನು ಹೊಂದಿದ್ದು ಅಲ್ಲಿನ ಶಾಸಕರೊಬ್ಬರ ಮತದ ಮೌಲ್ಯ ಏಳು ಆಗಿದೆ.

ಗುರುವಾರ ಬಿಡುಗಡೆ ಮಾಡಿರುವ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಸಂಸದರ ಒಟ್ಟು ಮತಗಳ ಮೌಲ್ಯ 5,43,200 ಆಗಿದ್ದರೆ, ಶಾಸಕರ ಮತಗಳ ಮೌಲ್ಯ 5,43,231 ಆಗಿದೆ. ಹೀಗಾಗಿ ರಾಷ್ಟ್ರಪತಿ ಚುನಾವಣೆಗೆ ಒಟ್ಟು 10,86,431 ಮೌಲ್ಯಗಳ ಮತಗಳನ್ನು ಪರಿಗಣಿಸಲಾಗುತ್ತದೆ.

ಮತದಾನದ ವಿಧಾನ

ರಾಜ್ಯಸಭಾ ಚುನಾವಣೆಗಳಂತೆ, ರಾಷ್ಟ್ರಪತಿ ಚುನಾವಣೆಗಳು ಕೂಡ ಒಂದೇ ವರ್ಗಾವಣೆ ಮತದ ವ್ಯವಸ್ಥೆಯನ್ನು ಅನುಸರಿಸುತ್ತವೆ ಮತ್ತು ಪ್ರಮಾಣಾನುಗುಣ ಪ್ರಾತಿನಿಧ್ಯದ ತತ್ವವನ್ನು ಆಧರಿಸಿವೆ. ಒಂದೇ ವರ್ಗಾವಣೆ ಮಾಡಬಹುದಾದ ಮತವು ಮತದಾರರಿಗೆ ಆದ್ಯತೆಯ ಕ್ರಮದಲ್ಲಿ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

ಉದಾಹರಣೆಗೆ ಈ ಚುನಾವಣೆಯತಲ್ಲಿ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಮತದಾರರು ಅವರ ಆಯ್ಕೆಯ ಆಧಾರದ ಮೇಲೆ ಅವರನ್ನು 1,2,3,4 ಎಂದು ಗುರುತಿಸಬಹುದು.

ಇದನ್ನೂ ಓದಿ: ಧರ್ಮ ಆಚರಿಸಿ, ದ್ವೇಷ ಭಾಷಣವನ್ನಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಮತದಾರರಿಗೆ ನೀಡಲಾಗುವ ಮತಪತ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆಗಳು ಇರುವುದಿಲ್ಲ. ಅದರ ಹೊರತಾಗಿ ಮತಪತ್ರಗಳಲ್ಲಿ ಮೇಲೆ ಎರಡು ಕಾಲಂಗಳಿರುತ್ತವೆ. ಮೊದಲ ಕಾಲಂನಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರಿದ್ದರೆ, ಎರಡನೇ ಕಾಲಂನಲ್ಲಿ ಆದ್ಯತೆಯ ಕ್ರಮವಿದೆ. ಅಭ್ಯರ್ಥಿಗಳ ಹೆಸರಿನ ಮುಂದೆ ನೀಡಿರುವ ಜಾಗದಲ್ಲಿ ಮತದಾರರು ತಮ್ಮ ಆದ್ಯತೆಗಳನ್ನು ಗುರುತಿಸಬಹುದು.

ಗರಿಷ್ಠ ಸಂಖ್ಯೆಯ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಮತದಾರರು ತಮ್ಮ ಆದ್ಯತೆಯ ಅಭ್ಯರ್ಥಿಯನ್ನು ಗುರುತಿಸಲು ಚುನಾವಣಾ ಆಯೋಗ ಒದಗಿಸುವ ಪೆನ್ ಅನ್ನು ಬಳಸಬೇಕಾಗುತ್ತದೆ. ಒಂದು ವೇಳೆ ಮತದಾರರು ಬೇರೆ ಪೆನ್‌ ಅನ್ನು ಬಳಸಿದರೆ ಅವರ ಬ್ಯಾಲೆಟ್ ಪೇಪರ್ ಅನ್ನು ರದ್ದುಗೊಳಿಸುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇನ್‌ಪುಟ್‌: ಡೆಕ್ಕನ್‌ ಹೆರಾಲ್ಡ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...