HomeದಿಟನಾಗರFact Check: ಸದಾ ಜೈ ಶ್ರೀರಾಮ್ ಎನ್ನುವ ಹಿಂದೂಗಳ ಮೇಲೆ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ ಎಂಬುದು...

Fact Check: ಸದಾ ಜೈ ಶ್ರೀರಾಮ್ ಎನ್ನುವ ಹಿಂದೂಗಳ ಮೇಲೆ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ ಎಂಬುದು ಸುಳ್ಳು

- Advertisement -
- Advertisement -

“ಹಿಂದೂಗಳು ಸದಾ ಜೈ ಶ್ರೀರಾಮ್ ಎಂದು ಜಪಿಸುತ್ತಲೇ ಇರುತ್ತಾರೆ ಎಂದು ರಾಹುಲ ಕಿಡಿಕಾರುತಿದ್ದಾನೆ. ಇದರಿಂದ ಈ ಮನುಷ್ಯನಿಗೆ ಏನು ಸಮಸ್ಯೆ ಅಂತ ಗೊತ್ತಿಲ್ಲ” ಎಂದು ‘Sanju Appannavara’ಎಂಬ ಫೇಸ್‌ಬುಕ್ ಖಾತೆಯೊಂದರಲ್ಲಿ ಫೆ.16,2024ರಂದು ರಾತ್ರಿ 9 ಗಂಟೆ 58 ನಿಮಿಷಕ್ಕೆ ರಾಹುಲ್ ಗಾಂಧಿಯವರ ಭಾಷಣದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ

ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿಯವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬರ್ಥದಲ್ಲಿ ಹಂಚಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಪ್ರಯತ್ನವನ್ನು ನಾನುಗೌರಿ.ಕಾಂ ಮಾಡಿದೆ.

ಗೂಗಲ್ ಮೂಲಕ ಈ ವಿಡಿಯೋವನ್ನು ನಾವು ಹುಡುಕಾಡಿದಾಗ, ಇದು ಫೆ.13,2024ರಂದು ಚತ್ತೀಸ್‌ಗಢದ ಕೊರ್ಬಾದಲ್ಲಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಭಾಗವಾಗಿ ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾಡಿರುವ ಭಾಷಣದ ತುಣುಕು ಎಂದು ತಿಳಿದು ಬಂದಿದೆ.

ದಲಿತರು, ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ” ದೇಶದ ದೊಡ್ಡ ದೊಡ್ಡ ಸಂಸ್ಥೆಗಳು ಯಾವುದೂ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಮಾಲೀಕತ್ವದಲ್ಲಿ ಇಲ್ಲ. ಅಪೋಲೋ, ವೇದಾಂತ, ಮ್ಯಾಕ್ಸ್‌ನಂತ ಯಾವುದೇ ಸಂಸ್ಥೆಗಳ ಮಾಲೀಕರು ದಲಿತರು, ಆದಿವಾಸಿಗಳಲ್ಲ. ಕರ್ನಾಟಕದ ಪ್ರಸಿದ್ಧ ಖಾಸಗಿ ವಿಶ್ವವಿದ್ಯಾನಿಲಯ ಮಣಿಪಾಲ್‌ನಲ್ಲಿ ಓದುತ್ತಿರುವರನ್ನು ನೋಡಿದರೆ ಒಬ್ಬರೂ ದಲಿತರು ಸಿಗುವುದಿಲ್ಲ. ಈ ಕುರಿತು ನೀವು ಯಾಕೆ ನೀವು ಚಿಂತಿಸುತ್ತಿಲ್ಲ ಎಂದೇ ನನಗೆ ಅರ್ಥವಾಗುತ್ತಿಲ್ಲ. ನೀವು ಮಲಗಿದ್ದೀರಿ. ದಿನದ ಇಪ್ಪತ್ತನಾಲ್ಕು ಗಂಟೆ ಜೈ ಶ್ರೀ ರಾಮ್ ಜೈ ಶ್ರೀರಾಮ್ ಎಂದು ಹೇಳುತ್ತಿದ್ದೀರಿ. ನೀವು ಹೇಳಿ ನನಗೆ ತೊಂದರೆ ಇಲ್ಲ. ಆದರೆ, ನಿಮ್ಮ ಜೇಬಿನಿಂದ ಹಣ ಕೀಳುತ್ತಿದ್ದಾರೆ ಅದನ್ನು ಯೋಚಿಸಿ” ಎಂದಿದ್ದಾರೆ.

ಒಬಿಸಿ, ದಲಿತರು ಮತ್ತು ಆದಿವಾಸಿಗಳ ಸಮಸ್ಯೆಗಳನ್ನು ಧರ್ಮವನ್ನು ಮುಂದಿಟ್ಟು ಯಾವ ರೀತಿ ಮರೆಗೆ ಸರಿಲಾಗ್ತಿದೆ. ಹಿಂದುಳಿದ ವರ್ಗದ ಜನರು ಧರ್ಮದ ಅಮಲಿನಲ್ಲಿ ತಮ್ಮ ಅವಕಾಶಗಳನ್ನು ಯಾವ ರೀತಿ ಕಳೆದುಕೊಳ್ಳುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಸಂಪೂರ್ಣ ಭಾಷಣದ ವಿಡಿಯೋ ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ.


ಯೂಟ್ಯೂಬ್ ವಿಡಿಯೋ ಲಿಂಕ್ 

ಅಧಿಕೃತ ಮೂಲಗಳ ಮೂಲಕ ನಾವು ನಡೆಸಿದ ಪರಿಶೀಲನೆಯಲ್ಲಿ “ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ರಾಹುಲ್ ಗಾಂಧಿಯವರ ಭಾಷಣದ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾದ ರೀತಿಯಲ್ಲಿ ಹಂಚಿಕೊಳ್ಳಲಾಗ್ತಿದೆ. ಅಲ್ಲದೆ, ರಾಹುಲ್ ಗಾಂಧಿ ‘ಜೈ ಶ್ರೀರಾಮ್ ಜೈ ಶ್ರಿರಾಮ್’ ಎಂದು ಹೇಳುತ್ತಿದ್ದೀರಿ ಎಂದಿರುವುದು ತಮ್ಮ ಅವಕಾಶಗಳನ್ನು ಮತ್ತು ಹಕ್ಕುಗಳನ್ನು ಮರೆತು ಧರ್ಮದ ಅಮಲಿನಲ್ಲಿ ಮುಳುಗಿರುವ ಜನರಿಗೆ ಎಂಬುವುದು ಖಚಿತವಾಗಿದೆ.

ಇಲ್ಲಿ ‘ಹಿಂದೂಗಳು ಸದಾ ಜೈಶ್ರೀರಾಮ್ ಜೈ ಶ್ರೀರಾಮ್’ ಎಂದು ಹೇಳುತ್ತಿರುತ್ತಾರೆ’ ಎಂದು ರಾಹುಲ್ ಗಾಂಧಿ ಹಿಂದೂ ವಿರೋಧಿ ಹೇಳಿಕೆ ನೀಡಿಲ್ಲ. ಬದಲಾಗಿ, ತಮ್ಮ ಅವಕಾಶಗಳನ್ನು ಮರೆತು ಅಥವಾ ನಿಜವಾದ ಸಮಸ್ಯೆಗಳನ್ನು ಮರೆತು ಧರ್ಮದ ಅಮಲಿನಲ್ಲಿ ಮುಳುಗಬೇಡಿ, ನಿಮ್ಮ ಅವಕಾಶ ಇನ್ನೊಬ್ಬರ ಪಾಲಾಗುತ್ತಿದೆ ಎಚ್ಚೆತ್ತುಕೊಳ್ಳಿ ಎಂದು ದಲಿತರು ಮತ್ತು ಆದಿವಾಸಿಗಳಿಗೆ ಹೇಳಿರುವುದಾಗಿದೆ.

ಇದನ್ನೂ ಓದಿ: Fact Check: ನಮಾಝ್‌ಗಾಗಿ ಹಮೀದ್ ಅನ್ಸಾರಿ ರಾಜ್ಯಸಭೆ ಕಲಾಪ ಮುಂದೂಡುತ್ತಿದ್ದರು ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...