Homeಮುಖಪುಟಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಅಂದು ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ರಾಜಸ್ತಾನಕ್ಕೆ ತರುವ ಬಗ್ಗೆ ಮಾತನಾಡಿದ್ದರು. ಆಗ ಮತ್ತೆ ನನ್ನ ಹೊಲ ಹಸಿರಿನಿಂದ ಕಂಗೊಳಿಸುವ ಕನಸು ಕಂಡಿದ್ದೆ. ಅದು ಮತ್ತೆ ನಿರಾಸೆಯಾಯಿತು...

- Advertisement -
- Advertisement -

“ಕಾಂಗ್ರೆಸ್ ಪಕ್ಷದ ನಾಯಕರು ಶ್ರೀಮಂತರ ಮನೆಯಲ್ಲಿ ಬೆಳೆದವರು. ಅವರಿಗೆ ಬಡವರು ಹೇಗಿರುತ್ತಾರೆ ಎಂದು ತಿಳಿದಿರುವುದಿಲ್ಲ. ಪ್ರಧಾನಿ ಮೋದಿ ಚುನಾವಣಾ ಪ್ರಚಾರಗಳಲ್ಲಿ ನಾನು ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದೆ ಎಂದು ಹೇಳಿದಾಗ, ಅವರು ಮಾರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮನಸ್ಸು ಕಾಂಗ್ರೆಸ್‌ನಿಂದ ಮೋದಿ ಕಡೆಗೆ ವಾಲಿತ್ತು. ಬಡತನದಲ್ಲಿ ಬಂದವನಿಗೆ ಬಡವರ ಕಷ್ಟ ತಿಳಿದಿರುತ್ತದೆ. ನಮಗಾಗಿ ಕೆಲಸ ಮಾಡುತ್ತಾರೆ ಎಂದು ಮತ ನೀಡಿದ್ದೆ. ಆದರೆ, ಇಂದು ಅವರೇ ನಮ್ಮ ಜೀವನಕ್ಕೆ ಕೊಳ್ಳಿ ಇಡುತ್ತಿದ್ದಾರೆ”  ಹೀಗೆ ನೋವಿನಲ್ಲಿ ಮನದ ಮಾತುಗಳನ್ನು ಹೊರಹಾಕಿದವರು ರಾಜಸ್ತಾನದ ರೈತ ರೇಖಾರಾಮ್ ಗೋಟಿಯಾ.

61 ವರ್ಷದ , ರಾಜಸ್ತಾನದ ನಾಗೋರ್ ಜಿಲ್ಲೆಯವರು. 12ನೇ ತರಗತಿವರೆಗೆ (ದ್ವಿತೀಯ ಪಿಯುಸಿ) ಶಿಕ್ಷಣ ಪಡೆದಿರುವ ಇವರು ಸರ್ಕಾರಿ ಉದ್ಯೋಗದ ಬದಲು ಆಯ್ಕೆ ಮಾಡಿಕೊಂಡಿದ್ದು ಕೃಷಿ.

“ ನಾನು ಶಿಕ್ಷಣ ಮುಗಿಸಿದಾಗ ಸರ್ಕಾರಿ ಉದ್ಯೋಗದ ಅವಕಾಶ ಹೆಚ್ಚಾಗಿತ್ತು. ಆದರೆ, ಸರ್ಕಾರಿ ಉದ್ಯೋಗಕ್ಕಿಂತ ಕೃಷಿಯಲ್ಲಿ ಅಧಿಕ ಲಾಭವಿತ್ತು. ಹಾಗಾಗಿ ಇರುವ ಎರಡು ಎಕರೆ ಜಮೀನಿನಲ್ಲೇ ಉತ್ತಮ ಕೃಷಿಯನ್ನು ಮಾಡುವ ಪಣತೊಟ್ಟು ಸರ್ಕಾರಿ ಉದ್ಯೋಗ ನಿರಾಕರಿಸಿದೆ. ಅಂದು ಸರಿ ಅನಿಸಿದ ನಿರ್ಧಾರ ಈಗ ನನ್ನ ಮಕ್ಕಳನ್ನು ಕಾರ್ಮಿಕರನ್ನಾಗಿಸಿದೆ” ಎಂದು ಅಳಲು ತೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

ಡಿಸೆಂಬರ್ 13 ರಿಂದ ದೆಹಲಿ- ರಾಜಸ್ತಾನದ ಹೆದ್ದಾರಿ ಶಹಜಾನ್‌ಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ ರೇಖಾರಾಮ್ ಗೋಟಿಯಾ, ಸುಮಾರು 2 ತಿಂಗಳುಗಳಾದರೂ ಒಂದು ದಿನವೂ ಮನೆಗೆ ಹೋಗಿ ಬಂದಿಲ್ಲ. ಬದಲಿಗೆ ತಮ್ಮ ಹೆಂಡತಿ, ಮೂವರು ಮಕ್ಕಳು, 5 ಮೊಮ್ಮಕ್ಕಳನ್ನು ಇಲ್ಲಿಗೆ ಕರೆಸಿಕೊಂಡು ಹೋರಾಟದಲ್ಲಿ ಪಾಲುದಾರರಾಗುವಂತೆ ಮಾಡಿದ್ದಾರೆ.

ಇರುವ 2 ಎಕರೆ ಜಮೀನಿನಲ್ಲಿ ಬಾಜ್ರಾ (ಜೋಳದ ರೀತಿಯ ಧಾನ್ಯ), ಹೆಸರುಕಾಳು, ಪಶು ಆಹಾರವನ್ನು ಬೆಳೆಯುತ್ತಾರೆ. ಮೂವರು ಮಕ್ಕಳು ಗ್ರಾಮದಲ್ಲಿ, ಪಕ್ಕದ ನಗರಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರು ಮಾತ್ರ ಕೃಷಿ ಭೂಮಿಯನ್ನೇ ನಂಬಿಕೊಂಡಿದ್ದೇನೆ ಎನ್ನುತ್ತಾರೆ.

“ಪಂಜಾಬ್, ಹರಿಯಾಣದ ರೈತರಿಗೆ ಉತ್ತಮ ಎಂಎಸ್‌ಪಿ(MSP) ಸಿಗುತ್ತಿದೆ. ಅವರ ಬೆಳೆಗಳಿಗೆ ಕಾಲುವೆಗಳ ಮೂಲಕ ನೀರು ಸಿಗುತ್ತಿದೆ. ಆದರೆ ರಾಜಸ್ತಾನದಲ್ಲಿ ಎಷ್ಟು ಆಳಕ್ಕೆ ಬೋರ್‌ವೇಲ್ ಹಾಕಿದರೂ ನೀರು ಬರುತ್ತಿಲ್ಲ. ಬರುವ ನೀರು ನಮ್ಮ ಪಶುಗಳಿಗೆ ಸಾಕಾಗುತ್ತಿಲ್ಲ. ಹರಿಯಾಣದ ಗಡಿಯಲ್ಲಿ ಇಷ್ಟು ದಿನಗಳಿಂದ ಕುಳಿತಿರುವ ನನಗೆ ಇಲ್ಲಿನ ಹಸಿರು ಕಂಡು ನೋವಾಗುತ್ತಿದೆ. ನಾನು ಮೊದ ಮೊದಲು ಇದೆ ರೀತಿಯಲ್ಲಿ ಬೆಳೆ ಬೆಳೆದಿದ್ದೆ. ಆದರೆ ಈಗ ಅದ್ಯಾವುದು ಸಾಧ್ಯವಾಗುತ್ತಿಲ್ಲ” ಎಂದು ಕಂಬನಿ ಹರಿಸುತ್ತಾರೆ.

ಇದನ್ನೂ ಓದಿ:ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

“ಅಂದು ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ರಾಜಸ್ತಾನಕ್ಕೆ ತರುವ ಬಗ್ಗೆ ಮಾತನಾಡಿದ್ದರು. ಆಗ ಮತ್ತೆ ನನ್ನ ಹೊಲ ಹಸಿರಿನಿಂದ ಕಂಗೊಳಿಸುವ ಕನಸು ಕಂಡಿದ್ದೆ. ಅದು ಮತ್ತೆ ನಿರಾಸೆಯಾಯಿತು. ಇಲ್ಲಿನ ರೈತರು (ಪಂಜಾಬ್, ಹರಿಯಾಣ) ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ಆದರೆ ನಮ್ಮ ರಾಜಸ್ತಾನದ ರೈತರು 2 ಬೆಳೆ ಬೆಳೆಯಲು ಹರಸಾಹಸ ಪಡುತ್ತಿದ್ದೇವೆ.”

“ಇನ್ನೊಂದು ವಿಷಯ ಗೊತ್ತಾ, ಮೋದಿಯವರ ಮಾತನ್ನು ಅದೆಷ್ಟು ನಿಷ್ಠೆಯಿಂದ ಪಾಲಿಸಿದ್ದೆ ಎಂದರೆ, 15 ಲಕ್ಷ ಹಾಕುವುದಾಗಿ ಅವರು ಹೇಳಿದಾಗ, ಅವರ ಮಾತು ನಂಬಿ ಹೊಸ ಅಕೌಂಟ್ ಮಾಡಿಸಿ, ಅದರಲ್ಲಿ ಯಾರಿಂದಲೂ ಒಂದು ರೂಪಾಯಿ ಹಾಕದಂತೆ ಎಚ್ಚರ ವಹಿಸಿದ್ದೆ. ಅದರಲ್ಲಿ ಮೋದಿಯವರೇ ಹಣ ಹಾಕಬೇಕು ಅದನ್ನು ಎಲ್ಲರಿಗೂ ಹೇಳಬೇಕು ಎಂದುಕೊಂಡಿದ್ದೆ. ಅದು ಕೂಡ ಸುಳ್ಳಾಯಿತು”.

“ಈ ಕೃಷಿ ಕಾನೂನುಗಳ ಮೂಲಕ ಇರುವ ಎಲ್ಲಾ ಆದಾಯವನ್ನು, ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮನ್ನು ದೊಡ್ಡ ದೊಡ್ಡ ಖಾಸಗಿ ಕಂಪನಿಗಳ ಗುಲಾಮರನ್ನಾಗಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಇರುವ ಎಂಎಸ್‌ಪಿ ಸರಿಯಾಗಿ ನೀಡದೆ ಸರ್ಕಾರ ನಮ್ಮನ್ನು ಆಟ ಆಡಿಸುತ್ತಿದೆ. ಅಂತಹದರಲ್ಲಿ ಈ ಕಾನೂನುಗಳು ನಮ್ಮ ಜೀವನವನ್ನೇ ಬಲಿ ತೆಗೆದುಕೊಳ್ಳಲು ಹೊರಟಿವೆ. ಇವು ರದ್ದಾಗುವವರೆಗೆ ನಾವು ಹೋರಾಟ ಮುಂದುವರೆಸುತ್ತವೇ ಇರುತ್ತೇವೆ. ಮನೆಯಲ್ಲಿ ಈಗಾಗಲೇ ಹೇಳಿ ಬಂದಿದ್ದೇನೆ. ನನ್ನನ್ನು ಮನೆಗೆ ಕರೆಯಬೇಡಿ ನಾನು ಸತ್ತು ಹೋದೆ ಎಂದು ಭಾವಿಸಿಕೊಳ್ಳಿ. ಗೆದ್ದ ಮೇಲೆ ಮಾತ್ರ ಇಲ್ಲಿಂದ ಮನೆಗೆ ಬರುತ್ತೇನೆ ಎಂದಿದ್ದೇನೆ. ಇರುವ ಜಮೀನು ಹೋದರೆ, ಇನ್ನೊಬ್ಬರ ಗುಲಾಮನಾಗಲಾರೆ” ಎಂದು ರೇಖಾರಾಮ್ ಗೋಟಿಯಾ ಹೇಳುತ್ತಾರೆ.

ಇದನ್ನೂ ಓದಿ: ಆರ್ಥಿಕ ಸ್ವಾತಂತ್ರ್ಯ & ಸಂವಿಧಾನ ರಕ್ಷಣೆಗಾಗಿ ಮತ್ತೊಂದು ಬೃಹತ್ ಹೋರಾಟದತ್ತ ದೇಶ ಸಾಗುತ್ತಿದೆ

“ಅಂದು ರೈತರು ಎಂದರೆ ಸಂತೋಷದಿಂದ ಹೆಣ್ಣು ಕೊಡುತ್ತಿದ್ದರು. ಈಗ ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಕೃಷಿ ಕ್ಷೇತ್ರವನ್ನು ಲಾಭದಾಯಕವನ್ನಾಗಿಸಿದರೇ ಬೇರೆ ಉದ್ಯೋಗಕ್ಕೆ ಜನ ಯಾಕೆ ಹೋಗುತ್ತಾರೆ..? ಇದರಿಂದ ನಿರುದ್ಯೋಗ ಕೂಡ ಕಡಿಮೆಯಾಗಲಿದೆ. ಆದರೆ ಸರ್ಕಾರ ಇರುವ ಕೃಷಿ ಕ್ಷೇತ್ರವನ್ನು ಖಾಸಗಿಯವರಿಗೆ ನೀಡಲು ಹೊರಟಿದೆ. ನಾವು ಇನ್ನೆಷ್ಟು ವರ್ಷ ಬದುಕಬಲ್ಲವು..? ಸರ್ಕಾರದ ಈ ಕಾನುನೂಗಳ ಪ್ರಭಾವ ಬೀರುವುದು ಈಗಿನ ಯುವಜನತೆ ಮೇಲೆ’ ಎನ್ನುತ್ತಾರೆ ರೇಖಾರಾಮ್.

ಮಾಸ್ಟರ್‌ಸ್ಟ್ರೋಕ್

ರಾಜಸ್ತಾನದಲ್ಲಿ ಬೆಳೆಗಳಿಗಿರುವ ಎಂಎಸ್‌ಪಿ ಬಗ್ಗೆ ಮಾತನಾಡುತ್ತಾ, ನಮ್ಮ ರಾಜ್ಯದಲ್ಲೂ ಉತ್ತಮ ಎಂಎಸ್‌ಪಿ ಇದೆ. ಆದರೆ ಅವುಗಳೆಲ್ಲ ಕಾಗದದಲ್ಲಿ ಮಾತ್ರ ಎನ್ನುತ್ತಾರೆ. ಹೆಸರುಕಾಳಿಗೆ ಪ್ರತಿ ಕ್ವಿಂಟಾಲ್‌ಗೆ 7,300 ರೂಪಾಯಿ ಸರ್ಕಾರಿ ಎಂಎಸ್‌ಪಿ ಇದೆ ಆದರೆ ಸರ್ಕಾರಿ ಮಂಡಿಗಳಲ್ಲಿ ನಮ್ಮ ಬೆಳೆಯನ್ನು ಖರೀದಿಸುತ್ತಿಲ್ಲ. 5 ಸಾವಿರ ರೈತರು ಸರ್ಕಾ‌ರಿ ಮಂಡಿಗೆ ಹೋದರೆ ಅದರಲ್ಲಿ ಕೇವಲ 20 ರೈತರ ಮಾಲನ್ನು ಮಾತ್ರ ಖರೀದಿಸಲಾಗುತ್ತಿದೆ. ಅನಿವಾರ್ಯವಾಗಿ ನಾವು ಖಾಸಗಿ ಮಂಡಿಗೆ ಹೋಗಬೇಕಾಗಿದೆ, ಅಲ್ಲಿ ನಮಗೆ 5,000 ರೂಪಾಯಿ ದೊರೆಯುತ್ತದೆ. ಹಾಗೆ ಬಾಜ್ರಾ ಬೆಳೆಗೆ ಸರ್ಕಾರಿ ಎಂಎಸ್‌ಪಿ 2,160 ರೂಪಾಯಿ ಇದೆ. ಅದು ಕೂಡ ನಮಗೆ ಸಿಗುತ್ತಿಲ್ಲ, ಖಾಸಗಿ ಮಂಡಿಯಲ್ಲಿ 1,200 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇನ್ನೂ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ನಮ್ಮನ್ನು ಮಾರಾಟ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ

ಮೋದಿಯವರಲ್ಲಿ ಒಂದು ಪ್ರಶ್ನೆ ಕೇಳಬೇಕು. ಟೀ ಮಾರುತ್ತಿದ್ದೆ ಎನ್ನುವ ನೀವು ಬಡವರು ಎಂದು ಕೊಂಡಿದ್ದೆ. ನೀವು ಹೇಳಿದ ಎಲ್ಲಾ ಮಾತುಗಳನ್ನು ನಾನು ನಂಬಿಕೊಂಡಿದ್ದೆ. ಆದರೆ ನಿಮ್ಮ ಮಾತುಗಳನ್ನು, ವಾಗ್ದಾನಗಳನ್ನು ಹೇಗೆ ಮರೆತಿರಿ..? ನಾವು ಕಾಂಗ್ರೆಸ್ ಅವರನ್ನು ಶ್ರೀಮಂತರು ಎಂದುಕೊಂಡಿದ್ದೇವು. ಆದರೆ ನೀವು ಬಡವರಲ್ಲ. ನಿಮಗೆ ಬಡತನದ ಬಗ್ಗೆ ಕೊಂಚವು ಅರಿವಿಲ್ಲ. ನೀವು ಶ್ರೀಮಂತರ ಹಿಂದೆ ಬಿದ್ದಿರಿ. ಅಂದು ಸಿಹಿ ಸಿಹಿ ಮಾತನಾಡಿ ಮತ ಪಡೆದ ಮೋದಿ ಬೇರೆ. ಇಂದಿನ ಮೋದಿಯೇ ಬೇರೆ.  ನಮ್ಮ (ರೈತರ) ಆದಾಯವನ್ನು ದ್ವಿಗುಣಗಿಳಿಸುವ ಮಾತನಾಡಿದ್ದಿರಿ. ಈಗ ಪಶು ಆಹಾರವನ್ನು ಕೊಳ್ಳುವುದನ್ನು ಬಂದ್ ಮಾಡಿಸಿದ್ದೀರ. ಬಿಜೆಪಿಯ ಬೈರೋಗ್ ಸಿಂಗ್ ಸರ್ಕಾರ ನಮ್ಮ ಬೆಳೆ ತೆಗೆದುಕೊಳ್ಳುವುದನ್ನು ನಿಲ್ಲಿಸಿತು. ಇಂತಹದರಲ್ಲಿ ನಮ್ಮ ಆದಾಯ ಹೇಗೆ ದ್ವಿಗುಣಗೊಳಿಸುವಿರಿ….?” ಎಂದು ಪ್ರಶ್ನಿಸಿದ್ದಾರೆ.

“ಇದು ಸರ್ವಾಧಿಕಾರಿ ಸರ್ಕಾರವಾಗಿದೆ. ಇದೇನು ರಾಜರಿಂದ ಬಂದ ಸರ್ಕಾರವಲ್ಲ. ಇದು ನಾವು ಮತ ನೀಡಿ ಹುಟ್ಟು ಹಾಕಿದ ಸರ್ಕಾರ. ಆದರೆ ನಮ್ಮನ್ನೇ ಆತಂಕವಾದಿ ಎನ್ನುತ್ತಾರೆ. ದೇಶದ್ರೋಹಿ ಎನ್ನುತ್ತಾರೆ. ನಮಗೆ ತುಂಬಾ ನೋವಾಗುತ್ತದೆ ನಮ್ಮನ್ನು ದೇಶದ್ರೋಹಿ ಎಂದಾಗ. ಇವರು ದೇಶದ್ರೋಹಿಗಳು, ದೇಶದ ಬಾವುಟವನ್ನು ಅವಮಾನ ಮಾಡಿದ ಇವರ ಚೇಲಾಗಳು ದೇಶದ್ರೋಹಿಗಳು. ನಮ್ಮ ರೈತರನ್ನು ದೇಶದ್ರೋಹಿಗಳು ಎನ್ನುತ್ತಾರೆ ಇವರನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ. ನಾವು ನಮ್ಮ ಊರಿನಲ್ಲಿ ಮನೆ ಮನೆಗೆ ತೆರಳಿ ಹೇಳಿದ್ದೇವೆ ಬಿಜೆಪಿಗೆ ಎಂದಿಗೂ ಮತ ನೀಡಬೇಡಿ ಎಂದ್ದಿದ್ದೇವೆ” ಎಂದು ರೈತ ರೇಖಾರಾಮ್ ಗೋಟಿಯಾ ಹೇಳುತ್ತಾರೆ.

ಮಮತ.ಎಂ


ಇದನ್ನೂ ಓದಿ; 3 ತಿಂಗಳಿನಿಂದ ಒಂದು ದಿನವೂ ರಜೆಯಿಲ್ಲ: ಪ್ರತಿದಿನವೂ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿರುವ ಯುವಕ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...