Homeಮುಖಪುಟಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಅಂದು ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ರಾಜಸ್ತಾನಕ್ಕೆ ತರುವ ಬಗ್ಗೆ ಮಾತನಾಡಿದ್ದರು. ಆಗ ಮತ್ತೆ ನನ್ನ ಹೊಲ ಹಸಿರಿನಿಂದ ಕಂಗೊಳಿಸುವ ಕನಸು ಕಂಡಿದ್ದೆ. ಅದು ಮತ್ತೆ ನಿರಾಸೆಯಾಯಿತು...

- Advertisement -
- Advertisement -

“ಕಾಂಗ್ರೆಸ್ ಪಕ್ಷದ ನಾಯಕರು ಶ್ರೀಮಂತರ ಮನೆಯಲ್ಲಿ ಬೆಳೆದವರು. ಅವರಿಗೆ ಬಡವರು ಹೇಗಿರುತ್ತಾರೆ ಎಂದು ತಿಳಿದಿರುವುದಿಲ್ಲ. ಪ್ರಧಾನಿ ಮೋದಿ ಚುನಾವಣಾ ಪ್ರಚಾರಗಳಲ್ಲಿ ನಾನು ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದೆ ಎಂದು ಹೇಳಿದಾಗ, ಅವರು ಮಾರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮನಸ್ಸು ಕಾಂಗ್ರೆಸ್‌ನಿಂದ ಮೋದಿ ಕಡೆಗೆ ವಾಲಿತ್ತು. ಬಡತನದಲ್ಲಿ ಬಂದವನಿಗೆ ಬಡವರ ಕಷ್ಟ ತಿಳಿದಿರುತ್ತದೆ. ನಮಗಾಗಿ ಕೆಲಸ ಮಾಡುತ್ತಾರೆ ಎಂದು ಮತ ನೀಡಿದ್ದೆ. ಆದರೆ, ಇಂದು ಅವರೇ ನಮ್ಮ ಜೀವನಕ್ಕೆ ಕೊಳ್ಳಿ ಇಡುತ್ತಿದ್ದಾರೆ”  ಹೀಗೆ ನೋವಿನಲ್ಲಿ ಮನದ ಮಾತುಗಳನ್ನು ಹೊರಹಾಕಿದವರು ರಾಜಸ್ತಾನದ ರೈತ ರೇಖಾರಾಮ್ ಗೋಟಿಯಾ.

61 ವರ್ಷದ , ರಾಜಸ್ತಾನದ ನಾಗೋರ್ ಜಿಲ್ಲೆಯವರು. 12ನೇ ತರಗತಿವರೆಗೆ (ದ್ವಿತೀಯ ಪಿಯುಸಿ) ಶಿಕ್ಷಣ ಪಡೆದಿರುವ ಇವರು ಸರ್ಕಾರಿ ಉದ್ಯೋಗದ ಬದಲು ಆಯ್ಕೆ ಮಾಡಿಕೊಂಡಿದ್ದು ಕೃಷಿ.

“ ನಾನು ಶಿಕ್ಷಣ ಮುಗಿಸಿದಾಗ ಸರ್ಕಾರಿ ಉದ್ಯೋಗದ ಅವಕಾಶ ಹೆಚ್ಚಾಗಿತ್ತು. ಆದರೆ, ಸರ್ಕಾರಿ ಉದ್ಯೋಗಕ್ಕಿಂತ ಕೃಷಿಯಲ್ಲಿ ಅಧಿಕ ಲಾಭವಿತ್ತು. ಹಾಗಾಗಿ ಇರುವ ಎರಡು ಎಕರೆ ಜಮೀನಿನಲ್ಲೇ ಉತ್ತಮ ಕೃಷಿಯನ್ನು ಮಾಡುವ ಪಣತೊಟ್ಟು ಸರ್ಕಾರಿ ಉದ್ಯೋಗ ನಿರಾಕರಿಸಿದೆ. ಅಂದು ಸರಿ ಅನಿಸಿದ ನಿರ್ಧಾರ ಈಗ ನನ್ನ ಮಕ್ಕಳನ್ನು ಕಾರ್ಮಿಕರನ್ನಾಗಿಸಿದೆ” ಎಂದು ಅಳಲು ತೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

ಡಿಸೆಂಬರ್ 13 ರಿಂದ ದೆಹಲಿ- ರಾಜಸ್ತಾನದ ಹೆದ್ದಾರಿ ಶಹಜಾನ್‌ಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ ರೇಖಾರಾಮ್ ಗೋಟಿಯಾ, ಸುಮಾರು 2 ತಿಂಗಳುಗಳಾದರೂ ಒಂದು ದಿನವೂ ಮನೆಗೆ ಹೋಗಿ ಬಂದಿಲ್ಲ. ಬದಲಿಗೆ ತಮ್ಮ ಹೆಂಡತಿ, ಮೂವರು ಮಕ್ಕಳು, 5 ಮೊಮ್ಮಕ್ಕಳನ್ನು ಇಲ್ಲಿಗೆ ಕರೆಸಿಕೊಂಡು ಹೋರಾಟದಲ್ಲಿ ಪಾಲುದಾರರಾಗುವಂತೆ ಮಾಡಿದ್ದಾರೆ.

ಇರುವ 2 ಎಕರೆ ಜಮೀನಿನಲ್ಲಿ ಬಾಜ್ರಾ (ಜೋಳದ ರೀತಿಯ ಧಾನ್ಯ), ಹೆಸರುಕಾಳು, ಪಶು ಆಹಾರವನ್ನು ಬೆಳೆಯುತ್ತಾರೆ. ಮೂವರು ಮಕ್ಕಳು ಗ್ರಾಮದಲ್ಲಿ, ಪಕ್ಕದ ನಗರಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರು ಮಾತ್ರ ಕೃಷಿ ಭೂಮಿಯನ್ನೇ ನಂಬಿಕೊಂಡಿದ್ದೇನೆ ಎನ್ನುತ್ತಾರೆ.

“ಪಂಜಾಬ್, ಹರಿಯಾಣದ ರೈತರಿಗೆ ಉತ್ತಮ ಎಂಎಸ್‌ಪಿ(MSP) ಸಿಗುತ್ತಿದೆ. ಅವರ ಬೆಳೆಗಳಿಗೆ ಕಾಲುವೆಗಳ ಮೂಲಕ ನೀರು ಸಿಗುತ್ತಿದೆ. ಆದರೆ ರಾಜಸ್ತಾನದಲ್ಲಿ ಎಷ್ಟು ಆಳಕ್ಕೆ ಬೋರ್‌ವೇಲ್ ಹಾಕಿದರೂ ನೀರು ಬರುತ್ತಿಲ್ಲ. ಬರುವ ನೀರು ನಮ್ಮ ಪಶುಗಳಿಗೆ ಸಾಕಾಗುತ್ತಿಲ್ಲ. ಹರಿಯಾಣದ ಗಡಿಯಲ್ಲಿ ಇಷ್ಟು ದಿನಗಳಿಂದ ಕುಳಿತಿರುವ ನನಗೆ ಇಲ್ಲಿನ ಹಸಿರು ಕಂಡು ನೋವಾಗುತ್ತಿದೆ. ನಾನು ಮೊದ ಮೊದಲು ಇದೆ ರೀತಿಯಲ್ಲಿ ಬೆಳೆ ಬೆಳೆದಿದ್ದೆ. ಆದರೆ ಈಗ ಅದ್ಯಾವುದು ಸಾಧ್ಯವಾಗುತ್ತಿಲ್ಲ” ಎಂದು ಕಂಬನಿ ಹರಿಸುತ್ತಾರೆ.

ಇದನ್ನೂ ಓದಿ:ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

“ಅಂದು ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ರಾಜಸ್ತಾನಕ್ಕೆ ತರುವ ಬಗ್ಗೆ ಮಾತನಾಡಿದ್ದರು. ಆಗ ಮತ್ತೆ ನನ್ನ ಹೊಲ ಹಸಿರಿನಿಂದ ಕಂಗೊಳಿಸುವ ಕನಸು ಕಂಡಿದ್ದೆ. ಅದು ಮತ್ತೆ ನಿರಾಸೆಯಾಯಿತು. ಇಲ್ಲಿನ ರೈತರು (ಪಂಜಾಬ್, ಹರಿಯಾಣ) ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ಆದರೆ ನಮ್ಮ ರಾಜಸ್ತಾನದ ರೈತರು 2 ಬೆಳೆ ಬೆಳೆಯಲು ಹರಸಾಹಸ ಪಡುತ್ತಿದ್ದೇವೆ.”

“ಇನ್ನೊಂದು ವಿಷಯ ಗೊತ್ತಾ, ಮೋದಿಯವರ ಮಾತನ್ನು ಅದೆಷ್ಟು ನಿಷ್ಠೆಯಿಂದ ಪಾಲಿಸಿದ್ದೆ ಎಂದರೆ, 15 ಲಕ್ಷ ಹಾಕುವುದಾಗಿ ಅವರು ಹೇಳಿದಾಗ, ಅವರ ಮಾತು ನಂಬಿ ಹೊಸ ಅಕೌಂಟ್ ಮಾಡಿಸಿ, ಅದರಲ್ಲಿ ಯಾರಿಂದಲೂ ಒಂದು ರೂಪಾಯಿ ಹಾಕದಂತೆ ಎಚ್ಚರ ವಹಿಸಿದ್ದೆ. ಅದರಲ್ಲಿ ಮೋದಿಯವರೇ ಹಣ ಹಾಕಬೇಕು ಅದನ್ನು ಎಲ್ಲರಿಗೂ ಹೇಳಬೇಕು ಎಂದುಕೊಂಡಿದ್ದೆ. ಅದು ಕೂಡ ಸುಳ್ಳಾಯಿತು”.

“ಈ ಕೃಷಿ ಕಾನೂನುಗಳ ಮೂಲಕ ಇರುವ ಎಲ್ಲಾ ಆದಾಯವನ್ನು, ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮನ್ನು ದೊಡ್ಡ ದೊಡ್ಡ ಖಾಸಗಿ ಕಂಪನಿಗಳ ಗುಲಾಮರನ್ನಾಗಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಇರುವ ಎಂಎಸ್‌ಪಿ ಸರಿಯಾಗಿ ನೀಡದೆ ಸರ್ಕಾರ ನಮ್ಮನ್ನು ಆಟ ಆಡಿಸುತ್ತಿದೆ. ಅಂತಹದರಲ್ಲಿ ಈ ಕಾನೂನುಗಳು ನಮ್ಮ ಜೀವನವನ್ನೇ ಬಲಿ ತೆಗೆದುಕೊಳ್ಳಲು ಹೊರಟಿವೆ. ಇವು ರದ್ದಾಗುವವರೆಗೆ ನಾವು ಹೋರಾಟ ಮುಂದುವರೆಸುತ್ತವೇ ಇರುತ್ತೇವೆ. ಮನೆಯಲ್ಲಿ ಈಗಾಗಲೇ ಹೇಳಿ ಬಂದಿದ್ದೇನೆ. ನನ್ನನ್ನು ಮನೆಗೆ ಕರೆಯಬೇಡಿ ನಾನು ಸತ್ತು ಹೋದೆ ಎಂದು ಭಾವಿಸಿಕೊಳ್ಳಿ. ಗೆದ್ದ ಮೇಲೆ ಮಾತ್ರ ಇಲ್ಲಿಂದ ಮನೆಗೆ ಬರುತ್ತೇನೆ ಎಂದಿದ್ದೇನೆ. ಇರುವ ಜಮೀನು ಹೋದರೆ, ಇನ್ನೊಬ್ಬರ ಗುಲಾಮನಾಗಲಾರೆ” ಎಂದು ರೇಖಾರಾಮ್ ಗೋಟಿಯಾ ಹೇಳುತ್ತಾರೆ.

ಇದನ್ನೂ ಓದಿ: ಆರ್ಥಿಕ ಸ್ವಾತಂತ್ರ್ಯ & ಸಂವಿಧಾನ ರಕ್ಷಣೆಗಾಗಿ ಮತ್ತೊಂದು ಬೃಹತ್ ಹೋರಾಟದತ್ತ ದೇಶ ಸಾಗುತ್ತಿದೆ

“ಅಂದು ರೈತರು ಎಂದರೆ ಸಂತೋಷದಿಂದ ಹೆಣ್ಣು ಕೊಡುತ್ತಿದ್ದರು. ಈಗ ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಕೃಷಿ ಕ್ಷೇತ್ರವನ್ನು ಲಾಭದಾಯಕವನ್ನಾಗಿಸಿದರೇ ಬೇರೆ ಉದ್ಯೋಗಕ್ಕೆ ಜನ ಯಾಕೆ ಹೋಗುತ್ತಾರೆ..? ಇದರಿಂದ ನಿರುದ್ಯೋಗ ಕೂಡ ಕಡಿಮೆಯಾಗಲಿದೆ. ಆದರೆ ಸರ್ಕಾರ ಇರುವ ಕೃಷಿ ಕ್ಷೇತ್ರವನ್ನು ಖಾಸಗಿಯವರಿಗೆ ನೀಡಲು ಹೊರಟಿದೆ. ನಾವು ಇನ್ನೆಷ್ಟು ವರ್ಷ ಬದುಕಬಲ್ಲವು..? ಸರ್ಕಾರದ ಈ ಕಾನುನೂಗಳ ಪ್ರಭಾವ ಬೀರುವುದು ಈಗಿನ ಯುವಜನತೆ ಮೇಲೆ’ ಎನ್ನುತ್ತಾರೆ ರೇಖಾರಾಮ್.

ಮಾಸ್ಟರ್‌ಸ್ಟ್ರೋಕ್

ರಾಜಸ್ತಾನದಲ್ಲಿ ಬೆಳೆಗಳಿಗಿರುವ ಎಂಎಸ್‌ಪಿ ಬಗ್ಗೆ ಮಾತನಾಡುತ್ತಾ, ನಮ್ಮ ರಾಜ್ಯದಲ್ಲೂ ಉತ್ತಮ ಎಂಎಸ್‌ಪಿ ಇದೆ. ಆದರೆ ಅವುಗಳೆಲ್ಲ ಕಾಗದದಲ್ಲಿ ಮಾತ್ರ ಎನ್ನುತ್ತಾರೆ. ಹೆಸರುಕಾಳಿಗೆ ಪ್ರತಿ ಕ್ವಿಂಟಾಲ್‌ಗೆ 7,300 ರೂಪಾಯಿ ಸರ್ಕಾರಿ ಎಂಎಸ್‌ಪಿ ಇದೆ ಆದರೆ ಸರ್ಕಾರಿ ಮಂಡಿಗಳಲ್ಲಿ ನಮ್ಮ ಬೆಳೆಯನ್ನು ಖರೀದಿಸುತ್ತಿಲ್ಲ. 5 ಸಾವಿರ ರೈತರು ಸರ್ಕಾ‌ರಿ ಮಂಡಿಗೆ ಹೋದರೆ ಅದರಲ್ಲಿ ಕೇವಲ 20 ರೈತರ ಮಾಲನ್ನು ಮಾತ್ರ ಖರೀದಿಸಲಾಗುತ್ತಿದೆ. ಅನಿವಾರ್ಯವಾಗಿ ನಾವು ಖಾಸಗಿ ಮಂಡಿಗೆ ಹೋಗಬೇಕಾಗಿದೆ, ಅಲ್ಲಿ ನಮಗೆ 5,000 ರೂಪಾಯಿ ದೊರೆಯುತ್ತದೆ. ಹಾಗೆ ಬಾಜ್ರಾ ಬೆಳೆಗೆ ಸರ್ಕಾರಿ ಎಂಎಸ್‌ಪಿ 2,160 ರೂಪಾಯಿ ಇದೆ. ಅದು ಕೂಡ ನಮಗೆ ಸಿಗುತ್ತಿಲ್ಲ, ಖಾಸಗಿ ಮಂಡಿಯಲ್ಲಿ 1,200 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇನ್ನೂ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ನಮ್ಮನ್ನು ಮಾರಾಟ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ

ಮೋದಿಯವರಲ್ಲಿ ಒಂದು ಪ್ರಶ್ನೆ ಕೇಳಬೇಕು. ಟೀ ಮಾರುತ್ತಿದ್ದೆ ಎನ್ನುವ ನೀವು ಬಡವರು ಎಂದು ಕೊಂಡಿದ್ದೆ. ನೀವು ಹೇಳಿದ ಎಲ್ಲಾ ಮಾತುಗಳನ್ನು ನಾನು ನಂಬಿಕೊಂಡಿದ್ದೆ. ಆದರೆ ನಿಮ್ಮ ಮಾತುಗಳನ್ನು, ವಾಗ್ದಾನಗಳನ್ನು ಹೇಗೆ ಮರೆತಿರಿ..? ನಾವು ಕಾಂಗ್ರೆಸ್ ಅವರನ್ನು ಶ್ರೀಮಂತರು ಎಂದುಕೊಂಡಿದ್ದೇವು. ಆದರೆ ನೀವು ಬಡವರಲ್ಲ. ನಿಮಗೆ ಬಡತನದ ಬಗ್ಗೆ ಕೊಂಚವು ಅರಿವಿಲ್ಲ. ನೀವು ಶ್ರೀಮಂತರ ಹಿಂದೆ ಬಿದ್ದಿರಿ. ಅಂದು ಸಿಹಿ ಸಿಹಿ ಮಾತನಾಡಿ ಮತ ಪಡೆದ ಮೋದಿ ಬೇರೆ. ಇಂದಿನ ಮೋದಿಯೇ ಬೇರೆ.  ನಮ್ಮ (ರೈತರ) ಆದಾಯವನ್ನು ದ್ವಿಗುಣಗಿಳಿಸುವ ಮಾತನಾಡಿದ್ದಿರಿ. ಈಗ ಪಶು ಆಹಾರವನ್ನು ಕೊಳ್ಳುವುದನ್ನು ಬಂದ್ ಮಾಡಿಸಿದ್ದೀರ. ಬಿಜೆಪಿಯ ಬೈರೋಗ್ ಸಿಂಗ್ ಸರ್ಕಾರ ನಮ್ಮ ಬೆಳೆ ತೆಗೆದುಕೊಳ್ಳುವುದನ್ನು ನಿಲ್ಲಿಸಿತು. ಇಂತಹದರಲ್ಲಿ ನಮ್ಮ ಆದಾಯ ಹೇಗೆ ದ್ವಿಗುಣಗೊಳಿಸುವಿರಿ….?” ಎಂದು ಪ್ರಶ್ನಿಸಿದ್ದಾರೆ.

“ಇದು ಸರ್ವಾಧಿಕಾರಿ ಸರ್ಕಾರವಾಗಿದೆ. ಇದೇನು ರಾಜರಿಂದ ಬಂದ ಸರ್ಕಾರವಲ್ಲ. ಇದು ನಾವು ಮತ ನೀಡಿ ಹುಟ್ಟು ಹಾಕಿದ ಸರ್ಕಾರ. ಆದರೆ ನಮ್ಮನ್ನೇ ಆತಂಕವಾದಿ ಎನ್ನುತ್ತಾರೆ. ದೇಶದ್ರೋಹಿ ಎನ್ನುತ್ತಾರೆ. ನಮಗೆ ತುಂಬಾ ನೋವಾಗುತ್ತದೆ ನಮ್ಮನ್ನು ದೇಶದ್ರೋಹಿ ಎಂದಾಗ. ಇವರು ದೇಶದ್ರೋಹಿಗಳು, ದೇಶದ ಬಾವುಟವನ್ನು ಅವಮಾನ ಮಾಡಿದ ಇವರ ಚೇಲಾಗಳು ದೇಶದ್ರೋಹಿಗಳು. ನಮ್ಮ ರೈತರನ್ನು ದೇಶದ್ರೋಹಿಗಳು ಎನ್ನುತ್ತಾರೆ ಇವರನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ. ನಾವು ನಮ್ಮ ಊರಿನಲ್ಲಿ ಮನೆ ಮನೆಗೆ ತೆರಳಿ ಹೇಳಿದ್ದೇವೆ ಬಿಜೆಪಿಗೆ ಎಂದಿಗೂ ಮತ ನೀಡಬೇಡಿ ಎಂದ್ದಿದ್ದೇವೆ” ಎಂದು ರೈತ ರೇಖಾರಾಮ್ ಗೋಟಿಯಾ ಹೇಳುತ್ತಾರೆ.

ಮಮತ.ಎಂ


ಇದನ್ನೂ ಓದಿ; 3 ತಿಂಗಳಿನಿಂದ ಒಂದು ದಿನವೂ ರಜೆಯಿಲ್ಲ: ಪ್ರತಿದಿನವೂ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿರುವ ಯುವಕ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...