Homeಕರ್ನಾಟಕಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

ಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

- Advertisement -
- Advertisement -

ಮುಕ್ಕಾಲುಪಾಲು ಅರಣ್ಯದಿಂದ ಆವೃತವಾಗಿರುವ ಉತ್ತರ ಕನ್ನಡ ವಿಸ್ತೀರ್ಣದಲ್ಲಿ ಮೂರು ಗೋವಾ ರಾಜ್ಯಕ್ಕೆ ಸಮನಾಗಿದೆ. ಕರಾವಳಿ, ಮಲೆನಾಡು ಮತ್ತು ಅರೆ ಬಯಲುಸೀಮೆ ಒಳಗೊಂಡ ಈ ಜಿಲ್ಲೆ 10291 ಚ.ಕಿ.ಮೀ ನಷ್ಟು ದೊಡ್ಡದು. ವಾಸ್ತವ್ಯ ಹಾಗೂ ಸಾಗುವಳಿಗೆ ಯೋಗ್ಯವಾದ ಪ್ರದೇಶವಿರುವುದು ಶೇ.10 ರಷ್ಟು ಮಾತ್ರ. ಈ ವಿಶಾಲವಾದ ಜಿಲ್ಲೆಯನ್ನು ಎರಡಾಗಿ ವಿಭಾಗಿಸುವುದು ಆಡಳಿತಾತ್ಮಕವಾಗಿ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ನೈಸರ್ಗಿಕ ನ್ಯಾಯತತ್ವದಂತೆ ಸರಿಯಾದ ಕ್ರಮವೆಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಘಟ್ಟದ ಮೇಲಿನ ಘಟಾನುಘಟಿ ರಾಜಕೀಯ ಪಟುಗಳ ಇಚ್ಛಾಶಕ್ತಿಯ ಕೊರತೆ ಮತ್ತು ಪೆದ್ದುತನದಿಂದ ಜನರು ತೊಂದರೆಗೀಡಾಗಿ ಪರದಾಡುತ್ತಿದ್ದಾರೆ.

ಘಟ್ಟದ ಮೇಲಿನ ಆರು ತಾಲ್ಲೂಕುಗಳನ್ನು ಒಳಗೊಂಡ ’ಕದಂಬ’ ಜಿಲ್ಲೆ ಮತ್ತು ಕರಾವಳಿಯ ಐದು ತಾಲ್ಲೂಕುಗಳ ಜೊತೆ ಜೋಯಿಡ ಸೇರಿಸಿ ಉತ್ತರ ಕನ್ನಡ ಜಿಲ್ಲೆ ರಚನೆ ಮಾಡುವ ಅನಿವಾರ್ಯತೆ ಎದುರಾಗಿ ದಶಕಗಳೇ ಉರುಳಿಹೋಗಿವೆ. ಹಾಗೆ ನೋಡಿದರೆ ಶಿರಸಿಯನ್ನು ಜಿಲ್ಲಾ ಕೇಂದ್ರವಾಗಿಸಿ ಶಿರಸಿ ಜಿಲ್ಲೆ ಮಾಡಬೇಕೆಂಬ ಕೂಗು ಮೂರು ದಶಕಗಳ ಹಿಂದಿನದು. ಭಾವನೆಗಳ ಬಂಧನ, ಅನುಕೂಲತೆ ಸಹಿಸಿಕೊಳ್ಳುವ ಮೂಗರ್ಜಿ ಸ್ವಭಾವ, ಹೋರಾಟದ ಹಠ ಮಾಡದಿರುವುದು ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಶಾಸಕ, ಸಂಸದ, ಸಚಿವರ ಉದಾಸೀನತೆಯಿಂದಾಗಿ ಜಿಲ್ಲೆಯ ಕನಸು ನನಸಾಗಲೇ ಇಲ್ಲ.

ಮೂರ್ನಾಲ್ಕು ತಾಲ್ಲೂಕುಗಳುಳ್ಳ ಉಡುಪಿ, ಹಾವೇರಿ, ಯಾದಗಿರಿಯಂತಹ ಜಿಲ್ಲೆಗಳನ್ನು ಹಿಂದೆ ರಚಿಸಲಾಗಿತ್ತು. ವಿವೇಚನೆ, ವಿವೇಕದಿಂದ ಉತ್ತರ ಕನ್ನಡ ವಿಭಾಗಿಸಿದರೆ ಆರಾರು ತಾಲ್ಲೂಕುಗಳ ಎರಡು ಜಿಲ್ಲೆ ಹುಟ್ಟುಹಾಕಬಹುದು. ಜೋಯಿಡ ಘಟ್ಟದ ಪ್ರದೇಶದಲ್ಲಿದ್ದರೂ, ಅದೂ ಕಾರವಾರಕ್ಕೆ ಹತ್ತಿರದಲ್ಲಿದೆ. ಅದನ್ನು ಶಿರಸಿ ಜಿಲ್ಲೆಗೆ ಸೇರಿಸಿದರೆ ಪ್ರಸ್ತಾವಿತ ಜಿಲ್ಲಾ ಕೇಂದ್ರ ಶಿರಸಿಯಿಂದ ನೂರೈವತ್ತು ಕಿ.ಮೀ ಅಂತರದಲ್ಲಿರುತ್ತದೆ. ಜೊತೆಗೆ ಜೋಯಿಡದ ಸಾಂಸ್ಕೃತಿಕ, ವ್ಯಾವಹಾರಿಕ, ಕೌಟುಂಬಿಕ ಭಾಷಾ ಬಾಂಧವ್ಯ ಹೆಚ್ಚಾಗಿ ಕಾರವಾರದೊಂದಿಗಿದೆ. ಜೋಯಿಡದಲ್ಲಿ ಕೊಂಕಣಿ ಮಾತನಾಡುವ ಮಂದಿಯೇ ಜಾಸ್ತಿ. ಹೀಗಾಗಿ ಕನ್ನಡ ಮಾತನಾಡುವ ಶಿರಸಿ ಸೀಮೆ ಜೊತೆ ಜೋಯಿಡಕ್ಕೆ ಹೊಂದಾಣಿಕೆ ಹಲವು ಕಾರಣದಿಂದ ಸಾಧ್ಯವಾಗದು. ಹಾಗಾಗಿ ಅದನ್ನು ಕರಾವಳಿಯ ಉತ್ತರ ಕನ್ನಡದ ಜೊತೆ ಇಡುವುದೇ ಸೂಕ್ತ.

ಈಚೆಗೆ ದಾಂಡೇಲಿ ತಾಲ್ಲೂಕು ರಚನೆಯಾಗಿದೆ. ಕನ್ನಡದ ಮೊದಲ ರಾಜಧಾನಿ ಎಂಬ ಹೆಗ್ಗಳಿಕೆಯ ಬನವಾಸಿ ತಾಲ್ಲೂಕು ರಚನೆಯ ಹೋರಾಟ ಜೋರಾಗಿದೆ. ಕರಾವಳಿಯ ಗೋಕರ್ಣ ತಾಲ್ಲೂಕು ಮಾಡುವ ಪ್ರಸ್ತಾಪವೂ ಇದೆ. ಈ ಎರಡೂ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದರೆ ಒಟ್ಟು 14 ತಾಲ್ಲೂಕುಗಳಾಗಿ ಎರಡೂ ಜಿಲ್ಲೆಗೆ ತಲಾ ಏಳೇಳು ತಾಲ್ಲೂಕುಗಳು ಸೇರುತ್ತವೆ. ಈ ಭೌಗೋಳಿಕ ಕಾರಣ ಹೊಸ ಜಿಲ್ಲೆಗೆ ಒತ್ತಾಸೆಯಾಗಿ ನಿಂತಿದೆ. ಶಿರಸಿ, ಸಿದ್ಧಾಪುರ, ಮುಂಡಗೋಡ, ಯಲ್ಲಾಪುರ, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕುಗಳಿರುವ ಶಿರಸಿ ಜಿಲ್ಲೆ ಮತ್ತು ಜೋಯಿಡ, ಕಾರವಾರ, ಅಂಕೋಲಾ, ಕುಮುಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ಉತ್ತರ ಕನ್ನಡ (ಕರಾವಳಿ) ಜಿಲ್ಲೆ ರಚನೆ ಮಾಡುವುದರಿಂದ ಅಭಿವೃದ್ಧಿಯೂ ವೇಗ ಪಡೆದುಕೊಳ್ಳುತ್ತದೆ. ಆಡಳಿತಾತ್ಮಕವಾಗಿ ಅಧಿಕಾರಿಗಳ ಕಾರ್ಯಕ್ಷಮತೆ ಎಚ್ಚರ ತಪ್ಪದಂತೆ ನಿಗಾ ವಹಿಸುತ್ತದೆ. ಅವಳಿ ಜಿಲ್ಲಾ ರಚನೆಯಿಂದ ವೈವಿಧ್ಯತೆ, ವೈಶಿಷ್ಟ್ಯತೆ, ಪ್ರಾಕೃತಿಕ ಸೊಬಗಿಗೂ ಭಂಗ ಬರದು. ಉಡುಪಿ ದಕ್ಷಿಣ ಕನ್ನಡದ ಸಂಬಂಧದಂತೆ ಕಾರವಾರ-ಶಿರಸಿ ಜಿಲ್ಲೆಗಳ ನಂಟು ಅನ್ಯೋನ್ಯವಾಗೇ ಇರುತ್ತದೆ.

ಈಗಿನ ಜಿಲ್ಲಾ ಕೇಂದ್ರ ಕಾರವಾರದಿಂದ ಘಟ್ಟದ ಮೇಲಿನ ಎಲ್ಲಾ ತಾಲ್ಲೂಕುಗಳು ತುಂಬಾ ದೂರದಲ್ಲಿದೆ. ಮುಂಡಗೋಡದವರು ಸರ್ಕಾರಿ ಕೆಲಸ, ಕಾರ್ಯಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರಬೇಕೆಂದರೆ ಬರೋಬ್ಬರಿ 140 ಕಿ.ಮೀ ಕ್ರಮಿಸಬೇಕು. ಅವರು ಜಿಲ್ಲಾ ಕೇಂದ್ರ ತಲುಪುವಾಗಲೇ ಅರ್ಧ ದಿನ ಕಳೆದಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಸಿಕ್ಕರೆ ಪುಣ್ಯ. ಮರಳಿ ಮನೆ ಸೇರುವಾಗ ನಡುರಾತ್ರಿ ಆಗಿರುತ್ತದೆ. ಅಧಿಕಾರಿಗಳಿಗೂ ಅಷ್ಟೆ. ಸಭೆ, ಸಮಾಲೋಚನೆ, ತರಬೇತಿ ಎಂದು ಜಿಲ್ಲಾ ಕೇಂದ್ರಕ್ಕೆ ಓಡಾಡಿ ಸ್ಥಳೀಯ ಕೆಲಸ ಕರ್ತವ್ಯ ನಿಭಾಯಿಸಲು ಸಾಧ್ಯವಾಗುವುದಿಲ್ಲ. ವ್ಯರ್ಥ ತಿರುಗಾಟ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಶಾಪದಂತೆ ಕಾಡುತ್ತಲೇ ಇದೆ. ಹೀಗಾಗಿ ವಿಭಜನೆ ಎರಡು ಜಿಲ್ಲೆಗಳ ಪ್ರಗತಿಗೂ ಪೂರಕ. ಎರಡೆರಡು ಆಡಳಿತ ವ್ಯವಸ್ಥೆ, ಎರಡೆರಡು ಅನುದಾನದಿಂದ ಅವಳಿ ಜಿಲ್ಲೆಗಳ ಅಭಿವೃದ್ಧಿ ನಕ್ಷೆಯೇ ಬದಲಾಗಲಿದೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಶಿರಸಿ ಜಿಲ್ಲೆ ಮಾಡುವ ಪ್ರಯತ್ನ ಪಡದಿದ್ದರೂ ಹಲವು ಪ್ರತ್ಯೇಕ ಜಿಲ್ಲಾ ಮಟ್ಟದ ಕಚೇರಿ ಶಿರಸಿಗೆ ತಂದಿದ್ದರು. ಆಗ ಶಿಕ್ಷಣ ಮಂತ್ರಿಯಾಗಿದ್ದರಿಂದ ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಯಾಗಿಸಿ ಉತ್ತರ ಕನ್ನಡದಿಂದ ಬೇರ್ಪಡಿಸಿದ್ದರು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಕಚೇರಿಗಳು ಶಿರಸಿಯಲ್ಲಿದೆ. ಶಿರಸಿಗೆ ಜಿಲ್ಲಾ ಕೇಂದ್ರವಾಗುವ ಅರ್ಹತೆ, ಅನುಕೂಲತೆ ಎರಡೂ ಇದೆ. ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರವಾದರೂ ವಾಣಿಜ್ಯ, ಆರ್ಥಿಕ ಮತ್ತು ರಾಜಕೀಯ ಆಡಂಬೋಲ ಶಿರಸಿಯೇ. ವಾಣಿಜ್ಯ, ಕೃಷಿ, ಸಹಕಾರಿ ಕ್ಷೇತ್ರದ ಬೃಹತ್ ಸಂಸ್ಥೆಗಳು ಶಿರಸಿಯಲ್ಲಿವೆ. ತೋಟಗಾರಿಕೆ, ಅರಣ್ಯ, ಕಾನೂನು ಮಹಾವಿದ್ಯಾಲಯಗಳಿವೆ. ಜಿಲ್ಲಾ ಮಟ್ಟದ ನ್ಯಾಯಾಲಯ, ಕೃಷಿ ಸಂಶೋಧನಾ ಕೇಂದ್ರ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಭಾಗೀಯ ಕಚೇರಿಗಳಿವೆ.

ಜಿಲ್ಲಾ ಕೇಂದ್ರಕ್ಕೆ ಬೇಕಾದ ಹಲವು ಅನುಕೂಲಗಳು, ಸೌಲಭ್ಯಗಳು ಕಟ್ಟಡ ಇನ್ನಿತರ ಸೌಕರ್ಯ ಶಿರಸಿಯಲ್ಲಿದೆ. ಸರ್ಕಾರದ ಅಂಕಿಅಂಶಗಳು ಶಿರಸಿ ಪ್ರತ್ಯೇಕ ಜಿಲ್ಲೆಯ ಪ್ರಸ್ತುತತೆಯನ್ನು ಮನದಟ್ಟು ಮಾಡುತ್ತದೆ. ಹಾಗಂತ ಶಿರಸಿಯ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ದೀರ್ಘ ಕಾಲ ಉತ್ತರ ಕನ್ನಡ ಆಳಿದ ಆರ್.ವಿ. ದೇಶಪಾಂಡೆಯಾಗಲಿ ಈಗ ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಠಾಕುಠೀಕಿಂದ ಓಡಾಡುತ್ತಿರುವ ಶಿವರಾಮ ಹೆಬ್ಬಾರರಾಗಲಿ, ಸಂಸದ ಅನಂತ್ ಕುಮಾರ್ ಹೆಗಡೆಯಾಗಲಿ ಶಿರಸಿ ಜಿಲ್ಲಾ ರಚನೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳ ತ್ರಿಕೋನ ಒಣಪ್ರತಿಷ್ಠೆಯ ಮೋಗಮ್ ಕಾಳದಲ್ಲಿ ಶಿರಸಿ ಜಿಲ್ಲಾ ರಚನೆ ಬೇಡಿಕೆಗೆ ಮಹತ್ವ ಬರುತ್ತಿಲ್ಲ.

ಹೀಗಿದ್ದರೂ ಶಿರಸಿಯಲ್ಲಿ ಜಿಲ್ಲಾ ರಚನೆಯ ಹೋರಾಟ ನಡೆಯುತ್ತಲೇ ಇದೆ. ಕೆಲವು ದಿನಗಳ ಹಿಂದೆ ಕಂದಾಯ ಮಂತ್ರಿಯನ್ನು ಹೋರಾಟ ಸಮಿತಿಯ ನಿಯೋಗ ಭೇಟಿಯಾಗಿ ಇದೇ ಬಜೆಟ್‌ನಲ್ಲಿ ಶಿರಸಿ ಜಿಲ್ಲೆ ರಚನೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸರಣಿ ಪ್ರತಿಭಟನೆಗಳು ಘಟ್ಟದ ಮೇಲೆ ನಡೆಯುತ್ತಿದೆ. ನಿಧಾನಕ್ಕೆ ಜಿಲ್ಲಾ ಬೇಡಿಕೆಯ ಹೋರಾಟ ಹುರಿಗಟ್ಟುತ್ತಿದೆ. ಈ ವರದಿ ಬರೆಯುವ ಹೊತ್ತಿಗೆ ಶಿರಸಿ ಬಾರ್ ಅಸೋಸಿಯೇಶನ್ ಮೂಲಕ ಜಿಲ್ಲಾ ಬೇಡಿಕೆ ಮಂಡಿಸಲು ನಿರ್ಧರಿಸಲಾಗಿದೆ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳಿಗೆ ತಮ್ಮನ್ನು ಆರಿಸಿ ಕಳಿಸಿದವರ ಕೂಗು ಕೇಳಿಸುವುದೇ?


ಇದನ್ನೂ ಓದಿ: ಕುರುಬ ಸಮುದಾಯ ಒಡೆಯುವುದೇ RSS, BJPಯವರ ಉದ್ದೇಶ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಭಿವೃದ್ಧಿಯ ಹೆಸರಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ.
    ಇವತ್ತು, ಉತ್ತರಕನ್ನಡ ವಿಭಿನ್ನವಾಗಿ ನಿಲ್ಲುವುದೇ ಅದರ ವಿಸ್ತಾರ ಮತ್ತು ಎಲ್ಲ ತರಹದ ಭೂ ಪ್ರದೇಶದಿಂದ. ಜಿಲ್ಲೆಯ ವಿಭಜನೆಯಿಂದ ಇನ್ನಷ್ಟು ಕಾಡು ನಾಶ ಮಾಡ್ತಾರೆಯೇ ಹೊರತೂ ಇನ್ನೇನು ಆಗಲ್ಲ…

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...