Homeಮುಖಪುಟವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

ವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

- Advertisement -
- Advertisement -

| ಲೋಕೇಶ್ ಮಾಲ್ತಿ ಪ್ರಕಾಶ್ |
ಅನುವಾದ: ನಿಖಿಲ್ ಕೋಲ್ಪೆ

ಸತ್ತವರ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನೇ ಆಡುವುದು ನಮ್ಮ ದೇಶದ ಸಂಪ್ರದಾಯ. ನಾವು ದೈವಭಯ ಇರುವ ಜನರು ಮತ್ತು ನಮಗಿಂತ ಸತ್ತವರು ದೇವರಿಗೆ ಹೆಚ್ಚು ಹತ್ತಿರವಾದವರು ಎಂದು ನಂಬುವವರಾದುದರಿಂದ ನಾವು ಸತ್ತವರ ಬಗ್ಗೆ ಒಳ್ಳೆಯದನ್ನೇ ಮಾತನಾಡುತ್ತೇವೆ. ಸತ್ತವರು ನಮಗೆ ಭಾರತದ ನ್ಯಾಯಾಲಯದಲ್ಲಿಯ ಬೆಳಗ್ಗಿನ ದೇಖಾವೆಗೆ ಪಕ್ಕಾ ಟಿಕೆಟ್ ದೊರಕಿಸಿಕೊಡಬಲ್ಲ ಖಾನ್ ಮಾರ್ಕೆಟ್ ಗ್ಯಾಂಗ್ ಇದ್ದಂತೆ. ಕೆಲವೊಮ್ಮೆ ನಾವು ಹಿಟ್ಲರ್ ನಮ್ಮಲ್ಲಿ ಹುಟ್ಟಲಿಲ್ಲವಲ್ಲ ಎಂದು ಸ್ವಲ್ಪ ಸಮಾಧಾನಪಡುವುದುಂಟು! ಖಂಡಿತವಾಗಿಯೂ ಆತನಿಗೆ ಸ್ಪರ್ಧೆ ನೀಡಬಲ್ಲ ದೇಸಿ ತಳಿಗಳು ನಮ್ಮಲ್ಲಿವೆಯದರೂ….

ಆದುದರಿಂದ, ಮೊನ್ನೆ ಸುಪ್ರೀಂಕೋರ್ಟ್ ಸ್ವಾತಂತ್ರ್ಯವು ಪವಿತ್ರವಾದುದು, ಅದರಲ್ಲಿ ಚೌಕಾಸಿ ಮಾಡುವಂತಿಲ್ಲ ಎಂದಿತ್ಯಾದಿಯಾಗಿ ಮೂಲಭೂತ ಹಕ್ಕುಗಳ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನು ಆಡಿದಾಗ ನನಗೆ ಸ್ವಲ್ಪ ಗಲಿಬಿಲಿಯಾಯಿತು. ಹೌದೇ? ಇದು ನಿಜವೇ? “ಏ ಇಲ್ಲ! ಇದು ಹಸಿಸುಳ್ಳು” ಎಂದು ಗಟ್ಟಿಯಾಗಿ ಕಿರುಚಿಕೊಳ್ಳುವುದರಿಂದ ನಾನು ಸ್ವಲ್ಪ ಪ್ರಯತ್ನದ ಬಳಿಕವಷ್ಟೇ ತಡೆದುಕೊಂಡೆ! ಸ್ವಾತಂತ್ರ್ಯದ ಹಕ್ಕು ಸತ್ತಿದೆಯೇ? ಸಾವು ಮತ್ತು ವಂಚನೆಯ ಈ ಭವದಲ್ಲಿ ಬಿಟ್ಟು ಅದು ಸ್ವರ್ಗವಾಸಿಯಾಗಿದೆಯೆ? (ಅದಕ್ಕಾಗಿಯೇ ಹೊಗಳುತ್ತಿದ್ದಾರೆಯೆ?)

ಈ ದೇಶದಲ್ಲಿ ಮೂಲಭೂತ ಹಕ್ಕುಗಳು ಸತ್ತು ಬಹಳ ಕಾಲವಾಗಿಹೋಗಿದೆ ಎಂದು ಟೀಕಾಕಾರರು ಖಂಡಿತಾ ಹೇಳಬಹುದು. ಇವರಲ್ಲಿ ಕಟು ಟೀಕಾಕಾರರು, ಇಲ್ಲಪ್ಪಾ, ಅದು ಇನ್ನೂ ಹುಟ್ಟಿಯೇ ಇಲ್ಲವಾದುದರಿಂದ ಸಾಯುವ ಪ್ರಶ್ನೆ ಶುದ್ಧ ಸುಳ್ಳೆಂದು ತಗಾದೆ ಎತ್ತಬಹುದು.

ಈ ವಿಷಯಕ್ಕೆ ಬಂದಾಗ, ನಾನೊಬ್ಬ ದೇಶಭಕ್ತ ಮತ್ತು ಈ ತಳಿಯ ಇತರ ಪ್ರಭೇದಗಳಂತೆ. ಮತ್ತು ಅವರಷ್ಟೇ ನಾನು ಕೂಡಾ ವಾಕ್ ಸ್ವಾತಂತ್ರ್ಯದ ಸಂಪೂರ್ಣ ಬೆಂಬಲಿಗ ಎಂದು ಮೊದಲಿಗೇ ಹೇಳಿಬಿಡುತ್ತೇನೆ. ನಮ್ಮ ಸರಕಾರಗಳು ಸಂವಿಧಾನವನ್ನು ಅಕ್ಷರಶಃ ಅನುಸರಿಸುತ್ತವೆ. ಮತ್ತು ಸರಕಾರವೂ ದೇಶಭಕ್ತವಾಗಿದ್ದಲ್ಲಿ ಸಂವಿಧಾನದ ಕುರಿತು ಅದರ ನಿಷ್ಟೆಯನ್ನು ಯಾರೂ ಸಂಶಯಿಸಬಾರದು. ಮೊನ್ನೆಯಷ್ಟೇ ಮೋದೀಜಿ ಸಂವಿಧಾನಕ್ಕೆ ಹೇಗೆ ಕೈಮುಗಿದು ತಲೆಬಾಗಿದರೆಂದು ನೀವು ನೋಡಿಲ್ಲವೆ? ಸಂವಿಧಾನ ಮತ್ತು ಕಾನೂನು ಯಾವತ್ತೂ ಇದಕ್ಕಿಂತ ಸುರಕ್ಷಿತ ಕೈಗಳಲ್ಲಿ ಇರಲಿಲ್ಲ; ಇರುವುದು ಸಾಧ್ಯವೂ ಇಲ್ಲ.

ಹೀಗಿದ್ದರೂ, ಈ ಖಾನ್ ಮಾರ್ಕೆಟ್ ಗ್ಯಾಂಗ್ ಒಂದು ದೇಶಭಕ್ತ ಸರಕಾರ ಮತ್ತದರ ವೀರ ಪೊಲೀಸರನ್ನು ಮೇಲೆ ಕೆಸರೆರಚುವ ಕಿಂಚಿತ್ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಬಗೆಗಿನ ಕೆಲವು ಜುಜುಬಿ ವಿಷಯಗಳ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿಯೋ, ಅದಾವುದೋ ನ್ಯೂಸ್ ಚಾನೆಲಿನಲ್ಲಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿಯೋ ಕೆಲವು ಪತ್ರಕರ್ತರನ್ನು ಬಂಧಿಸಿದ ಚಿಕ್ಕ ವಿಷಯದ ಬಗ್ಗೆ ಸುಮ್ಮಸುಮ್ಮನೆ ಗದ್ದಲ ಎಬ್ಬಿಸಲಾಗುತ್ತಿದೆ. ಅವರು ಮಾಧ್ಯಮ ವೃತ್ತಿಯ ಮರ್ಯಾದೆಯನ್ನು ಮೀರಿದ್ದಾರೆ. ಅವರಿಗೆ ಟ್ವೀಟ್ ಮಾಡಲು ಬೇರೆಷ್ಟೋ ವಿಷಯಗಳಿದ್ದವು. ಅವರು ಬೇಕಾದರೆ ಯೋಗಿ ಸರಕಾರ ಮತ್ತೆ ಜೀವನೀಡುತ್ತಿರುವ ಏಂಟಿರೋಮಿಯೋ ಸ್ಕ್ವಾಡ್ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದು ಬೇಡವೆಂದರೆ ಬೆಂಕಿಹಚ್ಚುವ ಭಾಷಣಗಳ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದೂ ಬೇಡ ಎಂದಾದರೆ, ಹದಗೆಡುತ್ತಿರುವ ಸಾರ್ವಜನಿಕ ಆರೋಗ್ಯ ಸೇವೆಗಳು, ಸರಕಾರಿ ಶಾಲಾ ಸೌಲಭ್ಯಗಳ ಬಗ್ಗೆ, ನಿರುದ್ಯೋಗದ ಬಗ್ಗೆ, ಗೋರಕ್ಷಕ ಗ್ಯಾಂಗುಗಳ ಬಗ್ಗೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಮಾತಾಡಬಹುದಿತ್ತು. ಮಾತಾಡಲು ಮತ್ತು ಟ್ವೀಟ್ ಮಾಡಲು ಎಷ್ಟೊಂದು ವಿಷಯಗಳಿವೆ! ಇಷ್ಟಿದ್ದರೂ ಅವರು ಸುಮ್ಮಸುಮ್ಮನೇ ಗಾಸಿಪ್‌ಗಳ ಹಿಂದೆಬಿದ್ದರು! ಯೋಗಿ ಸಾರ್ವಜನಿಕ ನೈತಿಕತೆಯ ಟೇಕೇದಾರನಾಗಿರುವುದರಿಂದ ಕ್ರಮ ಕೈಗೊಳ್ಳಲೇಬೇಕಾಗಿತ್ತು, ಅವರಿಗೆಲ್ಲಾ ಒಂದು ಪಾಠ ಕಲಿಸಲೇಬೇಕಾಗಿತ್ತು.. ಅವರ ಪೊಲೀಸರು ಆ ಕೆಲಸ ಮಾಡಿದರು ಅಷ್ಟೇ.

ನೈತಿಕ ಶಿಕ್ಷಣಕ್ಕೆ ಹೊರತಾಗಿ ಯುಪಿ ಪೊಲೀಸರು ಕಾನೂನು ಮತ್ತು ಶಿಸ್ತು ಅಥವಾ ನಿಖರವಾಗಿ ಹೇಳಬೇಕೆಂದರೆ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವ ಕೆಲಸವನ್ನು ಕೈಗೆತ್ತಿಕೊಂಡರು. ಪೊಲೀಸರು ಏನು ಮಾಡಬೇಕೋ ಯುಪಿ ಪೊಲೀಸರು ಅದನ್ನೇ ಮಾಡಿದರು. ಕೆಲ ಸಮಯದ ಹಿಂದೆ ಬಂಗಾಳದಲ್ಲಿ, ಕರ್ನಾಟಕದಲ್ಲಿ, ಮತ್ತೇ ಅನೇಕ ಕಡೆಗಳಲ್ಲಿ ಮಾಡಿದ್ದನ್ನೇ ಅವರು ಮಾಡಿದ್ದು. ಪೋಲೀಸರು ಇಲ್ಲದಿದ್ದರೆ, ಈ ದೇಶದಲ್ಲಿ ಕಾನೂನು ಮತ್ತು ಶಿಸ್ತು ಎಂಬುದೊಂದು ಇದೆ ಎಂದು ಈ ಜನಸಾಮಾನ್ಯರು ಮರೆತೇಬಿಡುತ್ತಾರೆ. ಇದರಿಂದ ವಿನಾಯಿತಿ ಇರುವುದು ನೀರವ್ ಮೋದಿಯಂತಹ ಜನರಿಗೆ ಮಾತ್ರ. ಅದನ್ನು ಇತರರಿಗೆ ನೀಡುವಂತಿಲ್ಲ. ಅದೂ ಕೂಡಾ ರಾಮರಾಜ್ಯ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವಾಗ ಅದನ್ನು ಕೊಡಲಾದೀತೆ? ಪೊಲೀಸರ ತ್ವರಿತ ಕ್ರಮಕ್ಕಾಗಿ ಅವರಿಗೆ ಶಹಬ್ಬಾಷ್‌ಗಿರಿ ನೀಡಬೇಕಾದಲ್ಲಿ ಈ ಖಾನ್ ಮಾರ್ಕೆಟ್ ಗ್ಯಾಂಗ್ ಪೊಲೀಸರ ಮಾನಹಾನಿ ಮಾಡಿ ಅವರ ನೈತಿಕ ಸ್ಥೈರ್ಯವನ್ನು ಕೆಡಿಸಲು ಎದ್ದುನಿಂತಿದೆ.

ಬಾಲಿವುಡ್ ಚಿತ್ರಗಳಲ್ಲಿ ಕೂಡ ಸಮಯಕ್ಕೆ ಸರಿಯಾಗಿ ತಲುಪಿ ಅಪರಾಧವನ್ನು ತಡೆಗಟ್ಟಲಾಗದ ಪೋಲಿಸರು ನಿಜ ಜೀವನದಲ್ಲಿ ಹಿಂದೆಂದೂ ಕಾಣದ ತ್ವರಿತತೆಯಿಂದ ಕ್ರಮ ಕೈಗೊಂಡಿದ್ದಾರೆ. ಇದು ಅತ್ಯಂತ ಜನಭರಿತ ರಾಜ್ಯವನ್ನು ಭಾರೀ ಕಾನೂನು ಮತ್ತು ಶಿಸ್ತಿನ ಮಹಾ ಬಿಕ್ಕಟ್ಟಿನಿಂದ ಬಚಾವು ಮಾಡಿದೆ. ಅದು ಸಾರ್ವಜನಿಕ ಶಾಂತಿಯನ್ನು ಯಾರಾದರೂ ಕದಡುವ ಮುನ್ನವೇ ಕಾಪಾಡಿದೆ. ಇದು ಮಹಾ ಗಟ್ಟಿಗ ನಾಯಕನ ನಾಯಕತ್ವದಲ್ಲಿ ಮಾತ್ರ ಸಾಧ್ಯ. ಅವರ ಕಾರ್ಯದಕ್ಷತೆಯನ್ನು ಕೊಂಡಾಡುವ ಬದಲು ಟೀಕಾಕಾರರು ಪೊಲೀಸರು ಮತ್ತು ಯೋಗಿಯ ಮೇಲೆ ಎಗರಿಬಿದ್ದಿದ್ದಾರೆ

ಒಬ್ಬ ಮಹಿಳೆ ಮುಖ್ಯಮಂತ್ರಿ ಯೋಗಿಯ ಮೇಲೆ (ಪರಸ್ಪರ) ಪ್ರೇಮ ತೋರುವ ವಿಡಿಯೊ ಯೋಗಿ ಭಕ್ತರನ್ನು ರೊಚ್ಚಿಗೆಬ್ಬಿಸುತ್ತದೆ ಎಂದು ಯುಪಿಯ ಪೊಲೀಸ್‌ವಾಲರಿಗೆ ಗೊತ್ತು. ಭಾವನೆ ಘಾಸಿಗೊಂಡ ಭಕ್ತರು ಸಾಮೂಹಿಕ ವಿನಾಶದ ಅಸ್ತ್ರಗಳಿಗಿಂತಲೂ ಅಪಾಯಕಾರಿ ಎಂಬುದೂ ಅವರಿಗೆ ಗೊತ್ತು.

ಆದುದರಿಂದ, ಸಾರ್ವಜನಿಕ ಶಾಂತಿಗೆ ಭಾರೀ ಬಿಕ್ಕಟ್ಟು ಕವಿದಿರುವುದನ್ನು ಪೊಲೀಸರು ಸರಿಯಾಗಿಯೇ ಗ್ರಹಿಸಿದ್ದಾರೆ. ತ್ವರಿತ ಕಾರ್ಯಾಚರಣೆಯ ಮೂಲಕ ಇಂತಹ ಒಂದು ಸ್ಫೋಟಕ ಮಾಹಿತಿಯನ್ನು ಪ್ರಸಾರ ಮಾಡಿದ ಜನರನ್ನು ಬಂಧಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಮ್ಮ ನೆಚ್ಚಿನ ಸ್ವಾತಂತ್ರ್ಯದ ಹಕ್ಕಿಗೆ ಏನಾದರೂ ಆದರೆ, ಯಾರು ತಾನೇ ಲೆಕ್ಕಿಸುತ್ತಾರೆ! ಬಹುಶಃ ಅದು ಬಹಳ ಹಿಂದೆಯೇ ಸತ್ತಿದೆ. ಬಹುಶಃ ನಾವೀಗ ಕೊನೆಯ ಸುತ್ತಿನ ಶ್ರದ್ಧಾಂಜಲಿಯನ್ನು ಓದುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...