Homeಮುಖಪುಟವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

ವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

- Advertisement -
- Advertisement -

| ಲೋಕೇಶ್ ಮಾಲ್ತಿ ಪ್ರಕಾಶ್ |
ಅನುವಾದ: ನಿಖಿಲ್ ಕೋಲ್ಪೆ

ಸತ್ತವರ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನೇ ಆಡುವುದು ನಮ್ಮ ದೇಶದ ಸಂಪ್ರದಾಯ. ನಾವು ದೈವಭಯ ಇರುವ ಜನರು ಮತ್ತು ನಮಗಿಂತ ಸತ್ತವರು ದೇವರಿಗೆ ಹೆಚ್ಚು ಹತ್ತಿರವಾದವರು ಎಂದು ನಂಬುವವರಾದುದರಿಂದ ನಾವು ಸತ್ತವರ ಬಗ್ಗೆ ಒಳ್ಳೆಯದನ್ನೇ ಮಾತನಾಡುತ್ತೇವೆ. ಸತ್ತವರು ನಮಗೆ ಭಾರತದ ನ್ಯಾಯಾಲಯದಲ್ಲಿಯ ಬೆಳಗ್ಗಿನ ದೇಖಾವೆಗೆ ಪಕ್ಕಾ ಟಿಕೆಟ್ ದೊರಕಿಸಿಕೊಡಬಲ್ಲ ಖಾನ್ ಮಾರ್ಕೆಟ್ ಗ್ಯಾಂಗ್ ಇದ್ದಂತೆ. ಕೆಲವೊಮ್ಮೆ ನಾವು ಹಿಟ್ಲರ್ ನಮ್ಮಲ್ಲಿ ಹುಟ್ಟಲಿಲ್ಲವಲ್ಲ ಎಂದು ಸ್ವಲ್ಪ ಸಮಾಧಾನಪಡುವುದುಂಟು! ಖಂಡಿತವಾಗಿಯೂ ಆತನಿಗೆ ಸ್ಪರ್ಧೆ ನೀಡಬಲ್ಲ ದೇಸಿ ತಳಿಗಳು ನಮ್ಮಲ್ಲಿವೆಯದರೂ….

ಆದುದರಿಂದ, ಮೊನ್ನೆ ಸುಪ್ರೀಂಕೋರ್ಟ್ ಸ್ವಾತಂತ್ರ್ಯವು ಪವಿತ್ರವಾದುದು, ಅದರಲ್ಲಿ ಚೌಕಾಸಿ ಮಾಡುವಂತಿಲ್ಲ ಎಂದಿತ್ಯಾದಿಯಾಗಿ ಮೂಲಭೂತ ಹಕ್ಕುಗಳ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನು ಆಡಿದಾಗ ನನಗೆ ಸ್ವಲ್ಪ ಗಲಿಬಿಲಿಯಾಯಿತು. ಹೌದೇ? ಇದು ನಿಜವೇ? “ಏ ಇಲ್ಲ! ಇದು ಹಸಿಸುಳ್ಳು” ಎಂದು ಗಟ್ಟಿಯಾಗಿ ಕಿರುಚಿಕೊಳ್ಳುವುದರಿಂದ ನಾನು ಸ್ವಲ್ಪ ಪ್ರಯತ್ನದ ಬಳಿಕವಷ್ಟೇ ತಡೆದುಕೊಂಡೆ! ಸ್ವಾತಂತ್ರ್ಯದ ಹಕ್ಕು ಸತ್ತಿದೆಯೇ? ಸಾವು ಮತ್ತು ವಂಚನೆಯ ಈ ಭವದಲ್ಲಿ ಬಿಟ್ಟು ಅದು ಸ್ವರ್ಗವಾಸಿಯಾಗಿದೆಯೆ? (ಅದಕ್ಕಾಗಿಯೇ ಹೊಗಳುತ್ತಿದ್ದಾರೆಯೆ?)

ಈ ದೇಶದಲ್ಲಿ ಮೂಲಭೂತ ಹಕ್ಕುಗಳು ಸತ್ತು ಬಹಳ ಕಾಲವಾಗಿಹೋಗಿದೆ ಎಂದು ಟೀಕಾಕಾರರು ಖಂಡಿತಾ ಹೇಳಬಹುದು. ಇವರಲ್ಲಿ ಕಟು ಟೀಕಾಕಾರರು, ಇಲ್ಲಪ್ಪಾ, ಅದು ಇನ್ನೂ ಹುಟ್ಟಿಯೇ ಇಲ್ಲವಾದುದರಿಂದ ಸಾಯುವ ಪ್ರಶ್ನೆ ಶುದ್ಧ ಸುಳ್ಳೆಂದು ತಗಾದೆ ಎತ್ತಬಹುದು.

ಈ ವಿಷಯಕ್ಕೆ ಬಂದಾಗ, ನಾನೊಬ್ಬ ದೇಶಭಕ್ತ ಮತ್ತು ಈ ತಳಿಯ ಇತರ ಪ್ರಭೇದಗಳಂತೆ. ಮತ್ತು ಅವರಷ್ಟೇ ನಾನು ಕೂಡಾ ವಾಕ್ ಸ್ವಾತಂತ್ರ್ಯದ ಸಂಪೂರ್ಣ ಬೆಂಬಲಿಗ ಎಂದು ಮೊದಲಿಗೇ ಹೇಳಿಬಿಡುತ್ತೇನೆ. ನಮ್ಮ ಸರಕಾರಗಳು ಸಂವಿಧಾನವನ್ನು ಅಕ್ಷರಶಃ ಅನುಸರಿಸುತ್ತವೆ. ಮತ್ತು ಸರಕಾರವೂ ದೇಶಭಕ್ತವಾಗಿದ್ದಲ್ಲಿ ಸಂವಿಧಾನದ ಕುರಿತು ಅದರ ನಿಷ್ಟೆಯನ್ನು ಯಾರೂ ಸಂಶಯಿಸಬಾರದು. ಮೊನ್ನೆಯಷ್ಟೇ ಮೋದೀಜಿ ಸಂವಿಧಾನಕ್ಕೆ ಹೇಗೆ ಕೈಮುಗಿದು ತಲೆಬಾಗಿದರೆಂದು ನೀವು ನೋಡಿಲ್ಲವೆ? ಸಂವಿಧಾನ ಮತ್ತು ಕಾನೂನು ಯಾವತ್ತೂ ಇದಕ್ಕಿಂತ ಸುರಕ್ಷಿತ ಕೈಗಳಲ್ಲಿ ಇರಲಿಲ್ಲ; ಇರುವುದು ಸಾಧ್ಯವೂ ಇಲ್ಲ.

ಹೀಗಿದ್ದರೂ, ಈ ಖಾನ್ ಮಾರ್ಕೆಟ್ ಗ್ಯಾಂಗ್ ಒಂದು ದೇಶಭಕ್ತ ಸರಕಾರ ಮತ್ತದರ ವೀರ ಪೊಲೀಸರನ್ನು ಮೇಲೆ ಕೆಸರೆರಚುವ ಕಿಂಚಿತ್ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಬಗೆಗಿನ ಕೆಲವು ಜುಜುಬಿ ವಿಷಯಗಳ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿಯೋ, ಅದಾವುದೋ ನ್ಯೂಸ್ ಚಾನೆಲಿನಲ್ಲಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿಯೋ ಕೆಲವು ಪತ್ರಕರ್ತರನ್ನು ಬಂಧಿಸಿದ ಚಿಕ್ಕ ವಿಷಯದ ಬಗ್ಗೆ ಸುಮ್ಮಸುಮ್ಮನೆ ಗದ್ದಲ ಎಬ್ಬಿಸಲಾಗುತ್ತಿದೆ. ಅವರು ಮಾಧ್ಯಮ ವೃತ್ತಿಯ ಮರ್ಯಾದೆಯನ್ನು ಮೀರಿದ್ದಾರೆ. ಅವರಿಗೆ ಟ್ವೀಟ್ ಮಾಡಲು ಬೇರೆಷ್ಟೋ ವಿಷಯಗಳಿದ್ದವು. ಅವರು ಬೇಕಾದರೆ ಯೋಗಿ ಸರಕಾರ ಮತ್ತೆ ಜೀವನೀಡುತ್ತಿರುವ ಏಂಟಿರೋಮಿಯೋ ಸ್ಕ್ವಾಡ್ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದು ಬೇಡವೆಂದರೆ ಬೆಂಕಿಹಚ್ಚುವ ಭಾಷಣಗಳ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದೂ ಬೇಡ ಎಂದಾದರೆ, ಹದಗೆಡುತ್ತಿರುವ ಸಾರ್ವಜನಿಕ ಆರೋಗ್ಯ ಸೇವೆಗಳು, ಸರಕಾರಿ ಶಾಲಾ ಸೌಲಭ್ಯಗಳ ಬಗ್ಗೆ, ನಿರುದ್ಯೋಗದ ಬಗ್ಗೆ, ಗೋರಕ್ಷಕ ಗ್ಯಾಂಗುಗಳ ಬಗ್ಗೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಮಾತಾಡಬಹುದಿತ್ತು. ಮಾತಾಡಲು ಮತ್ತು ಟ್ವೀಟ್ ಮಾಡಲು ಎಷ್ಟೊಂದು ವಿಷಯಗಳಿವೆ! ಇಷ್ಟಿದ್ದರೂ ಅವರು ಸುಮ್ಮಸುಮ್ಮನೇ ಗಾಸಿಪ್‌ಗಳ ಹಿಂದೆಬಿದ್ದರು! ಯೋಗಿ ಸಾರ್ವಜನಿಕ ನೈತಿಕತೆಯ ಟೇಕೇದಾರನಾಗಿರುವುದರಿಂದ ಕ್ರಮ ಕೈಗೊಳ್ಳಲೇಬೇಕಾಗಿತ್ತು, ಅವರಿಗೆಲ್ಲಾ ಒಂದು ಪಾಠ ಕಲಿಸಲೇಬೇಕಾಗಿತ್ತು.. ಅವರ ಪೊಲೀಸರು ಆ ಕೆಲಸ ಮಾಡಿದರು ಅಷ್ಟೇ.

ನೈತಿಕ ಶಿಕ್ಷಣಕ್ಕೆ ಹೊರತಾಗಿ ಯುಪಿ ಪೊಲೀಸರು ಕಾನೂನು ಮತ್ತು ಶಿಸ್ತು ಅಥವಾ ನಿಖರವಾಗಿ ಹೇಳಬೇಕೆಂದರೆ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವ ಕೆಲಸವನ್ನು ಕೈಗೆತ್ತಿಕೊಂಡರು. ಪೊಲೀಸರು ಏನು ಮಾಡಬೇಕೋ ಯುಪಿ ಪೊಲೀಸರು ಅದನ್ನೇ ಮಾಡಿದರು. ಕೆಲ ಸಮಯದ ಹಿಂದೆ ಬಂಗಾಳದಲ್ಲಿ, ಕರ್ನಾಟಕದಲ್ಲಿ, ಮತ್ತೇ ಅನೇಕ ಕಡೆಗಳಲ್ಲಿ ಮಾಡಿದ್ದನ್ನೇ ಅವರು ಮಾಡಿದ್ದು. ಪೋಲೀಸರು ಇಲ್ಲದಿದ್ದರೆ, ಈ ದೇಶದಲ್ಲಿ ಕಾನೂನು ಮತ್ತು ಶಿಸ್ತು ಎಂಬುದೊಂದು ಇದೆ ಎಂದು ಈ ಜನಸಾಮಾನ್ಯರು ಮರೆತೇಬಿಡುತ್ತಾರೆ. ಇದರಿಂದ ವಿನಾಯಿತಿ ಇರುವುದು ನೀರವ್ ಮೋದಿಯಂತಹ ಜನರಿಗೆ ಮಾತ್ರ. ಅದನ್ನು ಇತರರಿಗೆ ನೀಡುವಂತಿಲ್ಲ. ಅದೂ ಕೂಡಾ ರಾಮರಾಜ್ಯ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವಾಗ ಅದನ್ನು ಕೊಡಲಾದೀತೆ? ಪೊಲೀಸರ ತ್ವರಿತ ಕ್ರಮಕ್ಕಾಗಿ ಅವರಿಗೆ ಶಹಬ್ಬಾಷ್‌ಗಿರಿ ನೀಡಬೇಕಾದಲ್ಲಿ ಈ ಖಾನ್ ಮಾರ್ಕೆಟ್ ಗ್ಯಾಂಗ್ ಪೊಲೀಸರ ಮಾನಹಾನಿ ಮಾಡಿ ಅವರ ನೈತಿಕ ಸ್ಥೈರ್ಯವನ್ನು ಕೆಡಿಸಲು ಎದ್ದುನಿಂತಿದೆ.

ಬಾಲಿವುಡ್ ಚಿತ್ರಗಳಲ್ಲಿ ಕೂಡ ಸಮಯಕ್ಕೆ ಸರಿಯಾಗಿ ತಲುಪಿ ಅಪರಾಧವನ್ನು ತಡೆಗಟ್ಟಲಾಗದ ಪೋಲಿಸರು ನಿಜ ಜೀವನದಲ್ಲಿ ಹಿಂದೆಂದೂ ಕಾಣದ ತ್ವರಿತತೆಯಿಂದ ಕ್ರಮ ಕೈಗೊಂಡಿದ್ದಾರೆ. ಇದು ಅತ್ಯಂತ ಜನಭರಿತ ರಾಜ್ಯವನ್ನು ಭಾರೀ ಕಾನೂನು ಮತ್ತು ಶಿಸ್ತಿನ ಮಹಾ ಬಿಕ್ಕಟ್ಟಿನಿಂದ ಬಚಾವು ಮಾಡಿದೆ. ಅದು ಸಾರ್ವಜನಿಕ ಶಾಂತಿಯನ್ನು ಯಾರಾದರೂ ಕದಡುವ ಮುನ್ನವೇ ಕಾಪಾಡಿದೆ. ಇದು ಮಹಾ ಗಟ್ಟಿಗ ನಾಯಕನ ನಾಯಕತ್ವದಲ್ಲಿ ಮಾತ್ರ ಸಾಧ್ಯ. ಅವರ ಕಾರ್ಯದಕ್ಷತೆಯನ್ನು ಕೊಂಡಾಡುವ ಬದಲು ಟೀಕಾಕಾರರು ಪೊಲೀಸರು ಮತ್ತು ಯೋಗಿಯ ಮೇಲೆ ಎಗರಿಬಿದ್ದಿದ್ದಾರೆ

ಒಬ್ಬ ಮಹಿಳೆ ಮುಖ್ಯಮಂತ್ರಿ ಯೋಗಿಯ ಮೇಲೆ (ಪರಸ್ಪರ) ಪ್ರೇಮ ತೋರುವ ವಿಡಿಯೊ ಯೋಗಿ ಭಕ್ತರನ್ನು ರೊಚ್ಚಿಗೆಬ್ಬಿಸುತ್ತದೆ ಎಂದು ಯುಪಿಯ ಪೊಲೀಸ್‌ವಾಲರಿಗೆ ಗೊತ್ತು. ಭಾವನೆ ಘಾಸಿಗೊಂಡ ಭಕ್ತರು ಸಾಮೂಹಿಕ ವಿನಾಶದ ಅಸ್ತ್ರಗಳಿಗಿಂತಲೂ ಅಪಾಯಕಾರಿ ಎಂಬುದೂ ಅವರಿಗೆ ಗೊತ್ತು.

ಆದುದರಿಂದ, ಸಾರ್ವಜನಿಕ ಶಾಂತಿಗೆ ಭಾರೀ ಬಿಕ್ಕಟ್ಟು ಕವಿದಿರುವುದನ್ನು ಪೊಲೀಸರು ಸರಿಯಾಗಿಯೇ ಗ್ರಹಿಸಿದ್ದಾರೆ. ತ್ವರಿತ ಕಾರ್ಯಾಚರಣೆಯ ಮೂಲಕ ಇಂತಹ ಒಂದು ಸ್ಫೋಟಕ ಮಾಹಿತಿಯನ್ನು ಪ್ರಸಾರ ಮಾಡಿದ ಜನರನ್ನು ಬಂಧಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಮ್ಮ ನೆಚ್ಚಿನ ಸ್ವಾತಂತ್ರ್ಯದ ಹಕ್ಕಿಗೆ ಏನಾದರೂ ಆದರೆ, ಯಾರು ತಾನೇ ಲೆಕ್ಕಿಸುತ್ತಾರೆ! ಬಹುಶಃ ಅದು ಬಹಳ ಹಿಂದೆಯೇ ಸತ್ತಿದೆ. ಬಹುಶಃ ನಾವೀಗ ಕೊನೆಯ ಸುತ್ತಿನ ಶ್ರದ್ಧಾಂಜಲಿಯನ್ನು ಓದುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...