Homeಕರ್ನಾಟಕಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

ಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

- Advertisement -
- Advertisement -

ಪುಟ್ಟ ಪುಟ್ಟ ಅಲಕ್ಷಿತ ಸಮುದಾಯಗಳು ಈಗಲೂ ಈ ಸಂವಿಧಾನವೇ ಒದಗಿಸಿದ ಮೀಸಲು ಸೌಲಭ್ಯದಿಂದ ವಂಚಿತರಾಗುತ್ತಿವೆ. ಜನಪ್ರತಿನಿಧಿಗಳನ್ನು ಯಾಮಾರಿಸಬಲ್ಲ ಕೆಲವು ಆಧಿಕಾರಿಗಳು ಯಾವುದೋ ತಾಂತ್ರಿಕ ನೆಪ ಒಡ್ಡುತ್ತ ಇಂತಹ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಅಂತಹುದೇ ಘಟನೆ ಗದಗ ಜಿಲ್ಲೆಯಲ್ಲಿಯೂ ನಡೆದಿದೆ.

ಶತಮಾನಗಳ ಕಾಲ ಹೊಟ್ಟೆಪಾಡಿಗಾಗಿ ಕಳ್ಳತನವನ್ನೇ ಕಾಯಕವಾಗಿ ಮಾಡಿಕೊಂಡಿದ್ದ ಗಂಟಿಚೋರ್ ಸಮುದಾಯ ಕ್ರಮೇಣ ಸಮಾಜದ ಭಾಗವಾಗಿ ಶ್ರಮದ ಕಾಯಕದಲ್ಲಿ ನಿರತವಾಗಿದೆ. ಈಗಲೂ ಅಧಿಕಾರಸ್ಥರು ಮತ್ತು ಪೊಲೀಸ್ ವ್ಯವಸ್ಥೆ, ಇದೆಲ್ಲದಕ್ಕೂ ಮುಖ್ಯವಾಗಿ ಮೇಲ್ಜಾತಿಯ ಸಮುದಾಯಗಳು ಈ ಸಮುದಾಯವನ್ನು ಅಪರಾಧಿಗಳು ಎಂಬಂತೆ ಚಿತ್ರಿಸುತ್ತಿವೆ. ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಈ ಸಣ್ಣ ಸಮುದಾಯ ಎಸ್‍ಸಿ ಸಮುದಾಯ ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆಹೊಸೂರು ಗ್ರಾಮದ ಗಂಟಿಚೋರ್ ಸಮುದಾಯಕ್ಕೆ 2015ರಿಂದ ಎಸ್‍ಸಿ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತ ಸತಾಯಿಸುತ್ತಿದೆ. ಇದರ ಮೂಲ ಹುಡುಕುತ್ತ ಹೋದರೆ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಯವರ ಸೇಡಿನ ಆಟಕ್ಕೆ ಈ ಸಮುದಾಯ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.

ಗಂಟಿಚೋರ್ ಸಮುದಾಯಕ್ಕೆ ಎಸ್‍ಸಿ ಮೀಸಲು ಇದೆ, ಅದು ಅವರ ಹಕ್ಕು, ಅದನ್ನು ಸಂವಿಧಾನದ ಅನುಸಾರವೇ ಅವರಿಗೆ ನೀಡಲಾಗಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗಂಟಿಚೋರರಿಗೆ 2015ರಿಂದ ಎಸ್‍ಸಿ ಜಾತಿ ಪ್ರಮಾಣವನ್ನು ನೀಡಲು ಶಿರಹಟ್ಟಿ ತಾಲೂಕಾ ಆಡಳಿತ ನಿರಾಕರಿಸತೊಡಗಿದೆ. ಸತತ ಐದು ವರ್ಷಗಳಿಂದ ತಮ್ಮ ಹಕ್ಕಿಗಾಗಿ ಹೋರಾಡುತ್ತ ಬಂದಿದ್ದರೂ ತಾವುದೋ ತಾಂತ್ರಿಕ ನೆಪ ಒಡ್ಡುವ ತಾಲೂಕಾ ಆಡಳಿತ ಜಿಲ್ಲಾಡಳಿತದತ್ತ ಕೈ ತೋರಿಸುತ್ತಿದೆ.

ಜಿಲ್ಲಾಡಳಿತಕ್ಕೆ ಕೇಳಿದರೆ, ಜಾತಿ ಪರಿಶೀಲನಾ ಸಮಿತಿಗೆ ಈ ವಿಷಯವನ್ನು ವರ್ಗಾಯಿಸುತ್ತೇವೆ, ಸದ್ಯದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತದೆ. ಸಾಕು ಸಾಕಾದ ಗಂಟಿಚೋರ್ ಸಮುದಾಯದ ಜನ ಎರಡು ದಿನಗಳ ಕಾಲ ಶಿರಹಟ್ಟಿ ತಹಶೀಲ್ದಾರ್ ಕಚೇರಿ ಮುಂದೆ ಟೆಂಟು ಹಾಕಿ ಪ್ರತಿಭಟನೆ ನಡೆಸಿದರು. ಮೊನ್ನೆ (ಬುಧವಾರ) ಧರಣಿನಿರತರನ್ನು ಭೇಟಿಯಾದ ತಹಶಿಲ್ದಾರ್ ಕೋರಿಶೆಟ್ಟರು, ಖಂಡಿತ ಸದ್ಯದಲ್ಲೇ ಎಲ್ಲ ಸರಿ ಹೋಗುತ್ತೆ. ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು. ಪ್ರತಿಭಟನಾಕಾರರು ಜಗ್ಗದೇ ಇದ್ದಾಗ ನೇರವಾಗಿ ಜಿಲ್ಲಾಧಿಕಾರಿ ಹಿರೇಮಠರಿಗೆ ಫೋನ್ ಮಾಡಿ, ಸ್ಪೀಕರ್ ಆನ್ ಮಾಡಿ ಮಾತಾಡಿದರು. ಜಿಲ್ಲಾಧಿಕಾರಿ ಕೂಡ ಪರಿಶೀಲಿಸಿ ನ್ಯಾಯ ಒದಗಿಸುತ್ತೇವೆ ಎಂದರು.

ಆಗಿನ ಜಿಲ್ಲಾಧಿಕಾರಿ ನೀಡಿದ್ದ ಪತ್ರ

ಇಲ್ಲಿ ನಿಜಕ್ಕೂ ತಾಂತ್ರಿಕ ಸಮಸ್ಯೆ ಇದೆಯೇ? ಇಲ್ಲವೇ ಇಲ್ಲ. ಹಾಗಂತ ಒಂದು ಹಂತದಲ್ಲಿ 2014ರಲ್ಲಿ ಅದನ್ನು ಹುಟ್ಟು ಹಾಕಲಾಗಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರ ಬಹಿರಂಗ ಸೂಚನೆಯಂತೆ ಅಂದಿನ ಜಿಲ್ಲಾಧಿಕಾರಿ ಅಧ್ಯಯನ ಕೈಗೊಂಡು, ಗಂಟಿಚೋರರಿಗೆ ಮತ್ತು ಅದೇ ಸಮುದಾಯದವರಾಗಿದ್ದು ಗಿರಣಿ ವಡ್ಡರ್, ಗಂಟಿಚೋರ್ ಇಂತಹ ಅಡ್ಡಹೆಸರು ಇರುವವರಿಗೆಲ್ಲ ಎಸ್‍ಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಮಾಡಿದ್ದರು. ನಂತರ ಜಿಲ್ಲಾಧಿಕಾರಿಯಾಗಿ ಬಂದ ದರ್ಪಣ್ ಜೈನ್ ಮೇಲೆ ಶಿರಹಟ್ಟಿ ತಾಲೂಕಿನ ಲಿಂಗಾಯತ ಮಠದ ಭಕ್ತರು ಕೆಲವು ರಾಜಕಾರಣಿಗಳಿಂದ ಒತ್ತಡ ಹಾಕಿಸಿದರು. ಜಿಲ್ಲಾಧಿಕಾರಿ ಇದನ್ನು ಆಯುಕ್ತರ ಕಚೇರಿಗೆ ವರ್ಗಾಯಿಸಿದರು. ಜಾತಿ ಪರಿಶೀಲನಾ ಸಮಿತಿಯ ಸದಸ್ರೆಲ್ಲರೂ ಸಹಿ ಹಾಕಿರಲಿಲ್ಲ ಎಂಬ ನೆಪ ಒಡ್ಡಿ ಮತ್ತೆ ಈ ವಿಷಯವನ್ನು ಜಾತಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಯಿತು.

ಪ್ರತಿವರ್ಷ ಕಾಲೇಜು ಪ್ರವೇಶ, ನೇಮಕಾತಿ ಅಧಿಸೂಚನೆ ಬಂದಾಗ ಯುವಕರು ಪರದಾಡುವುದೇ ಆಗಿತು. ಶಿರಹಟ್ಟಿಯ ಹಿಂದಿನ ತಹಶೀಲ್ದಾರ್ ವೆಂಕಟೇಶ ನಾಯ್ಕ್ ಅಂತೂ ತಮ್ಮ ಲಂಬಾಣಿ ಸಮುದಾಯಕ್ಕೆ ಅವಕಾಶ ಕಡಿಮೆ ಆಗಬಹುದು ಎಂಬ ಭ್ರಮೆಯಿಂದ ಇನ್ನಷ್ಟು ವ್ಯತಿರಿಕ್ತವಾಗಿ ವರ್ತಿಸಿದರು. ಈ ಸಲ ಗಟ್ಟಿ ನಿರ್ಧಾರ ಮಾಡಿದ ಶಿರಹಟ್ಟಿಯ ಗಂಟಿಚೋರ್ ಸಮುದಾಯ ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ತಹಶಿಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲೆಯ ಗಮನ ಸೆಳೆದ ಮೇಲಷ್ಟೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೂಡಲೇ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿ ಕೊಡುವುದಾಗಿ ಭರವಸೆ ನೀಡಿದೆ.

ಆದರೆ, ಈಗಲೂ ಗಂಟಿಚೋರ್ ಸಮುದಾಯಕ್ಕೆ ಈ ಭರವಸೆ ಬಗ್ಗೆ ನಂಬಿಕೆ ಇಲ್ಲ. ಅವರೀಗ ಇಂಥದ್ದೇ ಸಮಸ್ಯೆ ಎದುರಿಸುತ್ತಿರುವ ನರಗುಂದ ತಾಲೂಕಿನ ಗಂಟಿಚೋರ್ ಸಮುದಾಯದವರನ್ನು ಜೊತೆಗೆ ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡಲು ಅಣಿಯಾಗುತ್ತಿದ್ದಾರೆ.

ಈ ಸಮಸ್ಯೆಯ ಮೂಲ ದಿಂಗಾಲೇಶ್ವರ ಎಂಬ ಸ್ವಾಮೀಜಿ!
ಗದಗ ಜಿಲ್ಲೆಯ ಇತರ ತಾಲೂಕುಗಳಲ್ಲಿರುವ ಗಂಟಿಚೋರ್ ಸಮುದಾಯದವರಿಗೆ ಎಸ್‍ಸಿ ಪ್ರಮಾಣ ಪತ್ರ ಪಡೆಯವ ಯಾವುದೇ ತಾಂತ್ರಿಕ ಅಡೆತಡೆ ಆಗಿಲ್ಲ. ಗೋಕಾಕ್, ಬಾಗಲಕೋಟೆ, ಕೊಪ್ಪಳ ಮತ್ತು ಹುಬ್ಬಳ್ಳಿ ಸುತ್ತಮುತ್ತ ಇರುವ ಗಂಟಿಚೋರರಿಗೂ ಈ ಸಮಸ್ಯೆ ಕಾಡಿಲ್ಲ. ಆದರೆ ಶಿರಹಟ್ಟಿಯ ಅದರಲ್ಲೂ ಬಾಲೆಹೊಸೂರು ಗ್ರಾಮದ ಗಂಟಿಚೊರರಿಗಷ್ಟೇ 2015ರಿಂದ ಈ ಸಮಸ್ಯೆ ಕಾಡಲು ಶುರುವಾಗಿದೆ. ಅದಕ್ಕೆ ಮೂಲ ಕಾರಣ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ.

ದಿಂಗಾಲೇಶ್ವರ ಸ್ವಾಮಿ

2014ರಲ್ಲಿ ಲಿಂಗಾಯತ ಸ್ವಾಮಿ ದಿಂಗಾಲೇಶ್ವರರ ಮಠ ತನ್ನ ವ್ಯಾಪ್ತಿಯನ್ನು ಬೆಳೆಸಲು ಬಾಲೆಹೊಸೂರಿನ ಕೆರೆಯೊಂದನ್ನು ಇಡಿಯಾಗಿ ಆಕ್ರಮಿಸಿಕೊಳ್ಳುತ್ತದೆ. ಸಂಖ್ಯೆ ಮತ್ತು ಜಾತಿ ಸ್ಥಾನದಲ್ಲಿ ಪ್ರಬಲರಾಗಿರುವ ಲಿಂಗಾಯತ ಸಮುದಾಯದ ಕೆಲವು ಪುಡಾರಿಗಳ ಬೆಂಬಲ, ಆ ಮೂಲಕ ಕೆಲವು ಲಿಂಗಾಯತ ರಾಜಕಾರಣಿಗಳ ಬೆಂಬಲ ಹೊಂದಿದ ದಿಂಗಾಲೇಶ್ವರ ಸ್ವಾಮೀಜಿಯ ಈ ಒತ್ತುವರಿಯನ್ನು ಪಂಚಾಯತಿ ಮತ್ತು ತಾಲೂಕಾ ಆಡಳಿತ ಪ್ರಶ್ನಿಸಲೇ ಇಲ್ಲ. ಮಠದ ತೇರಿನ ಮೆರವಣಿಗೆಯನ್ನು ವಿಸ್ತರಿಸಲು ಮತ್ತು ಮಠದ ಮುಂಭಾಗ ಇನ್ನಷ್ಟು ಭವ್ಯವಾಗಿ ಕಾಣಲು ಯೋಜನೆ ರೂಪಿಸಿದ ಸ್ವಾಮೀಜಿ ಅದಕ್ಕೆ ಅಡ್ಡಿಯಾಗಿದ್ದ ಸಾರ್ವಜನಿಕ ರಸ್ತೆಯನ್ನೇ ಆಕ್ರಮಿಸಲು ಹೊರಟರು. ಈ ಒತ್ತುವರಿಯಿಂದ ಹಲವಾರು ಬಡ ಗಂಟಿಚೋರರ ಕುಟುಂಬಗಳ ಮನೆಗಳೇ ವಿನಾಶದ ಭಿತಿಗೆ ಒಳಗಾದಾಗ ಗಂಟಿಚೋರ್ ಸಮುದಾಯ ಇದರ ಧ್ವನಿ ಎತ್ತಿ ಕಾನೂನು ಹೋರಾಟಕ್ಕೆ ಮುಂದಾಗಿತು. ಕೋರ್ಟಿನಲ್ಲಿ ತಮ್ಮ ಅತಿಕ್ರಮಣಕ್ಕೆ ಅವಕಾಶ ಸಿಗದು ಎಂದು ಅರಿತ ಸ್ವಾಮೀಜಿ ಕೆಲವು ಹುಂಬ ಲಿಂಗಾಯತ, ಕುರುಬ ಮತ್ತು ಇತರೆ ದಲಿತ ಪುಡಾರಿಗಳ ಮೂಲಕ ಜನರನ್ನು ಗಂಟಿಚೋರರ ವಿರುದ್ಧ ಎತ್ತಿ ಕಟ್ಟಿದರು.

ಇದರ ಪರಿಣಾಮವಾಗಿ ಗಂಟಿಚೋರರ ಮೇಲೆ ಹಲ್ಲೆಗಳಾಗಲು ಶುರುವಾದವು. 2015ರಲ್ಲಿ ಸ್ವಾಮಿಯ ಪ್ರಚೋದನೆಯಿಂದ ದೊಡ್ಡ ಗುಂಪೊಂದು ರಾತ್ರೋ ರಾತ್ರಿ ಗಂಟಿಚೋರರ ಮನೆ ಹೊಕ್ಕು ಮಹಿಳೆ ಮಕ್ಕಳೆನ್ನದೇ ಥಳಿಸುತ್ತ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತ ಸಾಗಿತು. ಏನಾಗುತ್ತಿದೆ ಎಂದು ನೋಡಲು ಹೊರಬಂದ ವೃದ್ಧ ಮಾಂತಪ್ಪ ಗುಡಗೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಆಯಿತು. ಮರುದಿನ ಇಡೀ ಬಾಲೆಹೊಸೂರು ಪ್ರಕ್ಷುಬ್ದತೆಗೆ ಒಳಗಾಗಿತು.

ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ಗಂಟಿಚೋರ್ ಸಮುದಾಯದ ಹಿರಿಯರು ಮತ್ತು ಯುವಕರು ಸ್ವಾಮಿ ವಿರುದ್ಧ ಕೊಲೆಪ್ರಯತ್ನ ದೂರು ದಾಖಲಿಸಿದರು. ಸ್ವಾಮಿ ರಾತ್ರೋರಾತ್ರಿ ಪರಾರಿಯಾದರು. ಬಂಧನದ ಭೀತಿಯಿಂದ ಭೂಗತರಾದರು. ಆಗಲೇ ಸ್ವಾಮಿಗೆ ಯಾವನೋ ಒಬ್ಬ ಕ್ರಿಮಿನಲ್ ಐಡಿಯಾ ಕೊಟ್ಟ. ಬಾಲೆಹೊಸುರಿನಲ್ಲಿ ಇರುವ ಗಂಟಿಚೋರರೆಲ್ಲ ನಿಜವಾಗಿಯೂ ಗಂಟಿಚೋರರಲ್ಲ. ಗಿರಣಿ ವಡ್ಡರ್ ಎಂಬ ಸರ್‍ನೇಮ್ ( ಅಡ್ಡ ಹೆಸರು) ಇರುವವರೆಲ್ಲಾ ನಕಲಿ ಗಂಟಿಚೋರರಾಗಿದ್ದು, ಇವರೆಲ್ಲ ಎಸ್‍ಸಿ ಸಮುದಾಯದ ಸವಲತ್ತನ್ನು ಬಾಚಿಕೊಳ್ಳುತ್ತಿದ್ದಾರೆ ಎಂದು ಕೆಲವರನ್ನು ಮುಂದೆ ಕಳಿಸಿ ಕೋರ್ಟಿಗೆ ಅರ್ಜಿ ಹಾಕಿಸಿದ. ಇದನ್ನೇ ನೆಪ ಮಾಡಿಕೊಂಡ ಜಿಲ್ಲಾಡಳಿತ ತಟಸ್ಥ ಸ್ಥಿತಿಗೆ ಬಂದಿತು. ಆದರೆ ಇದರ ವಿರುದ್ದ ಗಂಟಿಚೋರರು ಪ್ರಗತಿಪರರ ನೇತೃತ್ವದಲ್ಲಿ ಅನಿರತ ಹೋರಾಟ ಮಾಡಿದಾಗ ಎಚ್‍ಕೆ ಪಾಟೀಲರು ಮತ್ತು ಅಂದಿನ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಕಾಳಜಿ ವಹಿಸಿದ್ದರಿಂದ ಗಿರಣಿ ವಡ್ಡರ್ ಸೇರಿದಂತೆ ಹಾಗೆ ಹೋಲುವ ಅಡ್ಡ ಹೆಸರಿನ ಎಲ್ಲರಿಗೂ ಎಸ್‍ಸಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಹೊರಬಿತ್ತು. ಮುಂದೆ ಪ್ರಸನ್ನಕುಮಾರ್ ವರ್ಗಾ ಆಗಿ ಹೋದರು. ನಂತರ ಬಂದ ಡಿಸಿಗಳ ಮೇಲೆ ದಿಂಗಾಲೇಶ್ವರ ಸ್ವಾಮಿಯ ಪುಡಾರಿ ಭಕ್ತರು ಒತ್ತಡ ಹಾಕಿ ಈ ವಿಷಯ ನೆನೆಗುದಿಗೆ ಬರುವಂತೆ ಮಾಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣಕುಮಾರ್ ಜೋಳದಕೂಡ್ಲಿಗಿ ಅವರಿಂದ ನಡೆಸಿದ ಸಂಶೋಧನೆಯಲ್ಲೂ ಈ ವಿಷಯದ ಬಗ್ಗೆ ಸಾಕಷ್ಟು ದಾಖಲೆಗಳನ್ನು ಒದಗಿಸಿದ್ದು, ಗಿರಣಿ ವಡ್ಡರ್ ಸೇರಿದಂತೆ ಇತರ ಹೆಸರಿನ ಎಲ್ಲ ಗಂಟಿಚೋರರೂ ಎಸ್‍ಸಿ ಸಮುದಾಯಕ್ಕೆ ಸೇರಿದವರು, ಇದಕ್ಕೆ ಸಂವಿಧಾನದ ಆಸರೆಯಿದೆ ಎಂದು ಸಾಬೀತು ಮಾಡಲಾಗಿದೆ.

ಆದರೂ, ಈಗಲೂ ಜಿಲ್ಲಾಡಳಿತ ಗಂಟಿಚೋರ್ ಎಂಬ ಸಣ್ಣ ಜನಸಂಖ್ಯೆ ಸಮುದಾಯಕ್ಕೆ. ಅದೂ ಮುಖ್ಯವಾಗಿ ಬಾಲೆ ಹೊಸೂರಿನ ಸಮುದಾಯಕ್ಕೆ ಕಾಟ ಕೊಡುತ್ತಿದೆ ಎಂದರೆ ಏನರ್ಥ? ಕೊಲೆ ಆರೋಪಿ ದಿಂಗಾಲೇಶ್ವರ ಸ್ವಾಮಿಯ ಒತ್ತಡವೇ ಅಲ್ಲವೇ?

ಜಿಲ್ಲಾಧಿಕಾರಿ ಹಿರೇಮಠರು ಇಂತಹ ಒತ್ತಡಕ್ಕೆ ಒಳಗಾಗಿರುವ ಸಂಶಯ ಕಾಣುತ್ತಿದೆ. ಗಂಟಿಚೋರರಿಗೆಲ್ಲ ಎಸ್‍ಸಿ ಪ್ರಮಾಣಪತ್ರ ಕೊಡಬೇಕು ಎಂಬ ಆದೇಶ ಬರಲು ಕಾರಣವಾಗಿದ್ದ ಎಚ್‍ಕೆ ಪಾಟೀಲರು ಈ ಬಗೆ ಕೂಡಲೇ ಗಮನ ಹರಿಸಬೇಕಾಗಿದೆ. ಶಿರಹಟ್ಟಿಯ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕೂಡ ಸ್ವಾಮಿಯ ಬೆಂಬಲಕ್ಕೆ ಇದ್ದಾರೆ ಎಂಬ ಮಾತೂ ಇದೆ.

ಆದಷ್ಟು ಬೇಗ ಈ ವಿಷಯದಲ್ಲಿ ಗಂಟಿಚೋರರಿಗೆ ನ್ಯಾಯ ಸಿಗಲೇಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರ ಹೋರಾಟ ನಡೆಸಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...