ಉತ್ತರ ಪ್ರದೇಶದ ಘಾಜಿಯಾಬಾದ್ ಆಡಳಿತವು ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರಿಗೆ ಜೂನ್ 17 ರಂದು ಜಾಮಾ ಮಸೀದಿಗೆ ಭೇಟಿ ನೀಡುವುದನ್ನು ರದ್ದುಗೊಳಿಸುವಂತೆ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಾದಿತ ಹೇಳಿಕೆಗಳು ಮತ್ತು ದ್ವೇಷ ಭಾಷಣಗಳಿಗೆ ಹೆಸರಾಗಿರುವ ಯತಿ ನರಸಿಂಗಾನಂದ ಭೇಟಿ ಕೋಮು ಸೌಹಾರ್ದತೆಗೆ ಭಂಗ ತರಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಪ್ರವಾದಿ ಮುಹಮ್ಮದ್ ಬಗ್ಗೆ ಮುಸ್ಲಿಮರು ಏನು ಹೇಳುತ್ತಾರೆಂದು ತೋರಿಸಲು ಕುರಾನ್ ಮತ್ತು ಇಸ್ಲಾಮಿಕ್ ಇತಿಹಾಸದ ಪುಸ್ತಕಗಳೊಂದಿಗೆ ಜೂನ್ 17 ರಂದು ಜಾಮಾ ಮಸೀದಿಗೆ ಭೇಟಿ ನೀಡುವುದಾಗಿ ನರಸಿಂಹಾನಂದ ಸೋಮವಾರ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ದ್ವೇಷ ಭಾಷಣ: ಬಲಪಂಥೀಯ ನಾಯಕಿ ಸಾಧ್ವಿ ಅನ್ನಪೂರ್ಣ ವಿರುದ್ಧ ಪ್ರಕರಣ ದಾಖಲು
“ಕುರಾನ್ ಮತ್ತು ಇಸ್ಲಾಮಿಕ್ ಇತಿಹಾಸದ ಪುಸ್ತಕಗಳೊಂದಿಗೆ ಜಾಮಾ ಮಸೀದಿಗೆ ಭೇಟಿ ನೀಡುವುದಾಗಿ ನರಸಿಂಹಾನಂದ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಂದೇಶವು ಕೋಮು ಸೌಹಾರ್ದತೆಗೆ ಭಂಗ ತರಬಹುದು ಎಂಬ ಕಾರಣಕ್ಕೆ ಜೂನ್ 7 ರಂದು ದಾಸ್ನಾ ದೇವಿ ಮಂದಿರದಲ್ಲಿರುವ ಅವರ ನಿವಾಸದಲ್ಲಿ ನರಸಿಂಹಾನಂದರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನಾವು ಸ್ವೀಕರಿಸಿಲ್ಲ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ನರಸಿಂಗಾನಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಂಡವರು “ಇಸ್ಲಾಮಿಕ್ ಜಿಹಾದ್ಗೆ ಹೆದರುತ್ತಾರೆ” ಎಂದು ಹೇಳಿದ್ದರು.
ಇದರ ನಡುವೆ ಕೋಮು ಸೌಹಾರ್ದತೆ ಕದಡುವ ಹೇಳಿಕೆ ನೀಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಘಾಜಿಯಾಬಾದ್ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಹರಿದ್ವಾರದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದ ನರಸಿಂಗಾನಂದರನ್ನು ಜನವರಿ 15 ರಂದು ಬಂಧಿಸಲಾಗಿತ್ತು. “ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಉದ್ದೇಶದಿಂದ” ಯಾವುದೇ ಸಭೆದಲ್ಲಿ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇಲೆ ಫೆಬ್ರವರಿ 7 ರಂದು ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು.
ಆದರೂ, ಏಪ್ರಿಲ್ 17 ರಂದು, ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮತ್ತೊಂದು ದ್ವೇಷಪುರಿತ ಭಾಷಣ ಮಾಡಿದ್ದರು. ಭಾರತವು ಇಸ್ಲಾಮಿಕ್ ರಾಷ್ಟ್ರವಾಗದಂತೆ ನೋಡಿಕೊಳ್ಳಲು ಹಿಂದೂಗಳು ಹೆಚ್ಚಿನ ಮಕ್ಕಳನ್ನು ಪಡೆಯಬೇಕೆಂದು ಹೇಳಿದ್ದರು.