Homeಮುಖಪುಟ‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ರೌಡಿಸಂ ಕಥೆಗಳು ಕನ್ನಡ ಚಿತ್ರರಂಗದಿಂದ ಸ್ವಲ್ಪ ಹಿಂದಕ್ಕೆ ಸರಿದಂತೆ ಕಾಣುತ್ತಿದ್ದವು. ದುನಿಯಾ ಸೂರಿ ನಿರ್ದೇಶನದ ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’, ‘ಕೆಜಿಎಫ್‌’ ನಂತರದಲ್ಲಿ ರೌಡಿಸಂ ಸಿನಿಮಾಗಳು ಇಳಿಮುಖವಾದಂತೆ ಕಾಣುತ್ತಿದ್ದವು. ಆದರೆ ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಇಂತಹ ಸಿನಿಮಾಗಳಿಗೆ ಮರುಜೀವ ನೀಡಿದೆ.

‘ಆ ದಿನಗಳು’, ‘ಎದೆಗಾರಿಕೆ’, ‘ತಮಸ್ಸು’, ‘ಕಳ್ಳರ ಸಂತೆ’ ಸಿನಿಮಾಗಳ ಮೂಲಕ ರಾಜಕೀಯ, ರೌಡಿಸಂ ಆಧಾರಿತ ಚಿತ್ರಕಥೆಗಳಿಗೆ ಬೇರೊಂದು ಆಯಾಮ ನೀಡಿದವರು ಅಗ್ನಿ ಶ್ರೀಧರ್‌. ಅವರ ‘ದಾದಾಗಿರಿಯ ದಿನಗಳು’ ಕೃತಿಯು ರಾಜ್ಯ ಕಂಡ ಭೂಗತ ಜಗತ್ತಿನ ದಾಖಲೆಯಾಗಿಯೂ ಗುರುತಿಸಿಕೊಂಡಿದೆ. ಈ ಕೃತಿಯನ್ನು ಆಧಾರಿಸಿಯೇ ‘ಆ ದಿನಗಳು’ ತೆರೆಗೆ ಬಂದಿತ್ತು. ಇದೇ ಪುಸ್ತಕವನ್ನು ಆಧರಿಸಿ ‘ಹೆಡ್‌ ಬುಷ್‌’ ನಿರ್ದೇಶಿಸಿದ್ದಾರೆ ‘ಶೂನ್ಯ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರಿನ ಭೂಗತ ಪಾತಕಿ ಡಾನ್ ಜಯರಾಜ್‌ ಜೀವನದ ಸುತ್ತ ಸಾಗುವ ಶ್ರೀಧರ್‌ ಅವರ ಚಿತ್ರಕಥೆಯು, ಆ ಕಾಲದ ರಾಜಕಾರಣ, ರೌಡಿಸಂ, ಪಾತಕಿಗಳ ಪುಂಡಾಟ, ಪುಡಾರಿಗಳ ಒಳರಾಜಕಾರಣ, ಜನಜೀವನ ಒಂದರೊಳಗೊಂದು ಬೆಸೆದುಕೊಂಡಿರುವುದನ್ನು ಸರಳು ಸರಳಾಗಿ ಬಿಚ್ಚುತ್ತಾ ಹೋಗುತ್ತದೆ.

ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿನ ಬೆಂಗಳೂರು, ರಾಷ್ಟ್ರ ರಾಜಕಾರಣದ ಬಿಕ್ಕಟ್ಟುಗಳ ನಡುವೆ ಇಂದಿರಾ ಕಾಂಗ್ರೆಸ್‌ನ ಭಾಗವಾಗಿ ಹುಟ್ಟಿಕೊಂಡ ಇಂದಿರಾ ಬ್ರಿಗೇಡ್‌, ಅರಸು ಅವರ ಅಳಿಯ ಎಂ.ಡಿ.ನಟರಾಜ್‌ ಹಾಗೂ ಮಗಳಾದ ನಾಗರತ್ನ (ಸಿನಿಮಾದಲ್ಲಿ ರತ್ನಪ್ರಭಾ) ಅವರ ಒಡನಾಟಕ್ಕೆ ಬಂದ ಡಾನ್ ಜಯರಾಜ್‌, ರೌಡಿಗಳಿಗೆ ಸಿಕ್ಕ ಪ್ರಭುತ್ವದ ಪೋಷಣೆ, ಆ ಕಾಲದ ಬಡ್ಡಿ ದಂಧೆ, ಸೇಟುಗಳ ವ್ಯವಹಾರ, ಕಾಂಗ್ರೆಸ್‌ನೊಳಗಿನ ಒಳರಾಜಕಾರಣ ಇತ್ಯಾದಿಗಳೆಲ್ಲ ಕಥೆಯೊಳಗೆ ಬರುತ್ತವೆ. ಪಾತಕಿಗಳಿಗೆ ಪ್ರಭುತ್ವದ ಪೋಷಣೆ ಸಿಕ್ಕರೆ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.

“ರಾಜಕೀಯ ಅಂದರೆ ಉಪಾಯವಾಗಿ ಇರೋರ್‌ ಅತ್ರ ತಗೊಂಡು ಇಲ್ಲದೆ ಇರೋರಿಗೆ ಕೊಡೋದು” ಎನ್ನುತ್ತಾರೆ ಅರಸು. ಈ ಪಾಲಿಸಿಯನ್ನು ಪಾಲಿಸುವ ಜಯರಾಜ್‌ ಗ್ಯಾಂಗ್‌ನ ಗೂಂಡಾಗಿರಿಗೆ ಮಾನವೀಯ ಸ್ಪರ್ಶ ನೀಡಲು ಯತ್ನಿಸಲಾಗಿದೆ. ರೌಡಿಗಳ ಅಟ್ಟಹಾಸದ ಹಿಂದೆ ಬಡವರ ಪರ ಕಾಳಜಿಯೂ ಇತ್ತು ಎಂಬ ನಿರೂಪಣೆಯನ್ನು ಆರಂಭದಲ್ಲಿ ನೀಡಲಾಗಿದೆ. ಆದರೆ ಭೂಗತ ಸಾಮ್ರಾಜ್ಯದಲ್ಲಿ ಮೇಲುಗೈ ಸಾಧಿಸಬೇಕೆಂದು ನಡೆಸುವ ಗ್ಯಾಂಗ್‌ವಾರ್‌, ಅದರೊಳಗಿನ ಪಿತೂರಿಗಳು, ಸನ್ನಿವೇಶಗಳು ಉಂಟು ಮಾಡುವ ವೈಷಮ್ಯ, ಪಾತಕಿಗಳಿಗೆ ಪ್ರಭುತ್ವದ ಬೆಂ‘ಬಲ’ ಸಿಕ್ಕರೆ ಆಗಬಹುದಾದ ಅನಾಹುತಗಳೆಲ್ಲ ಕಥೆಯೊಳಗೆ ಮುಖ್ಯಸ್ಥಾನ ಪಡೆದಿವೆ. ರೌಡಿಗಳ ವೈಯಕ್ತಿಕ ದ್ವೇಷ, ಅಸೂಯೆ, ಸೇಡು ತೀರಿಸಿಕೊಳ್ಳುವ ಹಪಾಹಪಿ, ರಾಜಕೀಯ, ಪೊಲೀಸ್ ವ್ಯವಸ್ಥೆ- ಇವುಗಳೇ ಮುಖ್ಯವಾಗುವುದನ್ನು ‘ಹೆಡ್‌ ಬುಷ್‌’ನಲ್ಲಿ ಕಾಣಬಹುದು.

‘ಹೆಡ್‌ಬುಷ್‌’ ಎಂಬ ಟೈಟಲ್‌ ಇಟ್ಟು, ಅದಕ್ಕೆ ಸಮರ್ಥನೆ ನೀಡಲೆಂದೇ ಎರಡು ದೃಶ್ಯಗಳನ್ನು ತರುಕಿದಂತಿದೆ. ಜಯರಾಜ್‌, ಗಂಗಾ ಹಾಗೂ ಇತರ ಸ್ನೇಹಿತರ ಬಾಲ್ಯವನ್ನು ತೋರಿಸುವಾಗ ‘ಹೆಡ್‌- ಬುಷ್‌’ (ಹೆಡ್‌ ಅಥವಾ ಟೈಲ್‌) ಜೂಜಿನ ಒಂದು ದೃಶ್ಯ ಬರುತ್ತದೆ. ಜಯರಾಜ್ ಗ್ಯಾಂಗ್ ಬಾರ್‌ನಲ್ಲಿ ಹೆಡ್‌ ಬುಷ್‌ ಆಡುತ್ತಿರುವ ಮತ್ತೊಂದು ದೃಶ್ಯ ಬರುತ್ತದೆ. ಈ ಸಂದರ್ಭದಲ್ಲಿ ಬರುವ ಪ್ರೊಫೆಸರ್‌ (ವಿ.ರವಿಚಂದ್ರನ್‌) ಹೆಡ್‌- ಬುಷ್‌ ಬಗ್ಗೆ ತತ್ವಜ್ಞಾನ ಹೊಡೆದು ಹೋಗುತ್ತಾರೆ. ಆ ಮೂಲಕ ಟೈಟಲ್‌ಗೊಂದು ಮಾನ್ಯತೆ ಕೊಡಲು ಶ್ರೀಧರ್‌ ಯತ್ನಿಸಿದ್ದಾರೆ.

ಅರಸು, ಎಂ.ಡಿ.ನಟರಾಜ್‌, ಜಯರಾ‌ಜ್‌, ಗಂಗಾ, ಖಾನ್‌, ಅರಸು, ರತ್ನಪ್ರಭಾ, ಕೊತ್ವಾಲ್‌ ರಾಮಚಂದ್ರ ರಾವ್, ಸಾಮ್ಸನ್‌, ಪೊಲೀಸ್ ಅಧಿಕಾರಿ ಗರುಡಾಚಾರ್‌ ಮೊದಲಾದ ಪಾತ್ರಗಳ ಸುತ್ತ ಸಾಗುವ ಹೆಡ್‌ಬುಷ್‌- ದಾದಾಗಿರಿಯ ದಿನಗಳನ್ನು ಢಾಳಾಗಿ ಚಿತ್ರಿಸಿದೆ.

ಈವರೆಗೆ ಬಂದಿರುವ ರೌಡಿಸಂ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿನ ಕಾಸ್ಟ್ಯೂಮ್‌, ಮೇಕಿಂಗ್‌ ವಿಶಿಷ್ಟವಾಗಿದೆ. ಚರಣ್‌ ರಾಜ್‌ ಸಂಗೀತ ಇಷ್ಟವಾಗುತ್ತದೆ. ಆ ದಿನಗಳು, ಎದೆಗಾರಿಕೆಗಿಂತ ಹೆಚ್ಚಿನ ಸಿನಿಮೀಯತೆ ಹೆಡ್‌ಬುಷ್‌ನಲ್ಲಿದೆ. ಜಯರಾಜ್‌ನನ್ನು ವೈಭವೀಕರಿಸುವ ಹೊಡೆದಾಟದ ದೃಶ್ಯಗಳಿವೆ. ಎಪ್ಪತ್ತರ ದಶಕದ ಪಾತಕ ಲೋಕವನ್ನು ತೆರೆದಿಡಲಾಗಿದೆ. ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿದೆ. ಆದರೆ ‘ಎದೆಗಾರಿಕೆ’, ‘ಆ ದಿನಗಳು’ ಸಿನಿಮಾ ಕಥೆಯಲ್ಲಿ ಕಾಣುವಷ್ಟು ಕಲಾತ್ಮಕತೆ, ತೀವ್ರತೆ ಈ ಸಿನಿಮಾದಲ್ಲಿ ಇಲ್ಲ. ಮೊದಲೆರಡು ಸಿನಿಮಾಗಳಲ್ಲಿ ಪಾತಕ ಲೋಕದೊಳಗಿನ ತಲ್ಲಣಗಳಿಗೆ ಮಾನವೀಯ ಸ್ಪರ್ಶವನ್ನು ನೀಡಲಾಗಿದೆ. ಆದರೆ ಇಲ್ಲಿ ಗಂಡಸರ ತೋಳ್ಬಲ ಪ್ರದರ್ಶನ ರಾರಾಜಿಸಿದೆ.

ಇದನ್ನೂ ಓದಿರಿ: ‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

‘ಎ’ ಸರ್ಟಿಫಿಕೇಟ್‌ ಪಡೆದಿರುವ ಈ ಸಿನಿಮಾದಲ್ಲಿ ರೌಡಿಗಳ ಭಾಷೆಯನ್ನು ಹಸಿಹಸಿಯಾಗಿ ಬಳಸಲಾಗಿದೆ. ಗತಕಾಲದ ಕತೆಯ ನೆಪದಲ್ಲಿ ಲಿಂಗ ಸೂಕ್ಷ್ಮತೆಗಳನ್ನು ಅಣಕಿಸುವ ಸಂಭಾಷಣೆಗಳು ಸೇರಿಕೊಂಡಿವೆ. ಮೊದಲಾರ್ಧ ಜಯರಾಜ್ ಗ್ಯಾಂಗ್‌ನ ಪಾತಕಗಳ ವೈಭವೀಕರಣಕ್ಕೆ ಮೀಸಲಾದರೆ, ದ್ವಿತೀಯಾರ್ಧ ರೌಡಿಸಂ ಜಗತ್ತಿನ ಒಳ ಹೂರಣವನ್ನು ತೆರೆದಿಡುತ್ತದೆ.

ಭೂಗತ ಜಗತ್ತಿಗೆ ಇದ್ದವರಿಗೆ ಬಡವರ ಪರ ಕಾಳಜಿಯೂ ಇತ್ತು ಎಂದು ತೋರಿಸಲು ಯತ್ನಿಸಿರುವುದು ಅಸ್ವೀಕೃತ ಸಂಗತಿ. ಜಯರಾಜ್‌ ಥರದ ರೌಡಿಗಳು ಬಡವರಿಗೆ ತೊಂದರೆ ಕೊಡುತ್ತಿರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಇಂತಹ ನಿರೂಪಣೆಯು ರೌಡಿಸಂಗೆ ಜನಪ್ರಿಯತೆಯನ್ನು ತಂದುಕೊಡುವ ಅಪಾಯವಿರುತ್ತದೆ. ಹೀಗಾಗಿ ನಾಯಕ ಪಾತ್ರವನ್ನು ವೈಭವೀಕರಿಸುವ ಭರದಲ್ಲಿ ಯಾವ ವಿಚಾರಕ್ಕೆ ಒತ್ತು ನೀಡುತ್ತಿದ್ದೇವೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

‘ಹಿಂದಿ ಹೇರಿಕೆ’ಯನ್ನು ಪ್ರಶ್ನಿಸುವ ಈ ಕಾಲದ ತುರ್ತಿನ ಭಾಗವಾಗಿ ದೃಶ್ಯವೊಂದನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಹಿಂದಿಯನ್ನು ಗೌರವಿಸುತ್ತೇವೆ, ಆದರೆ ಕನ್ನಡ ನಮ್ಮ ಹೃದಯದ ಭಾಷೆ. ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಹೆಡ್‌ಬುಷ್ ಚಿತ್ರ ತಂಡ ನೀಡಿದೆ.

ಜಯರಾಜ್‌ ಹೆಂಡತಿಯ ಪಾತ್ರದಲ್ಲಿ ಪಾಯಲ್‌ ರಜಪೂತ್ ಅಭಿನಯಿಸಿದ್ದಾರೆ. ಆದರೆ ಈ ಪಾತ್ರದ ಮಹತ್ವ ಅರ್ಥವಾಗುವುದಿಲ್ಲ. ಹೀಗೆ ಬಂದು, ಹಾಗೆ ಹೋದದಷ್ಟೇ ಎನಿಸುತ್ತದೆ.

ದಾದಾಗಿರಿಯ ದಿನಗಳನ್ನು ದೃಶ್ಯರೂಪದಲ್ಲಿ ನೋಡಬೇಕೆಂದು ಬಯಸುವವರಿಗೆ, ಡಾಲಿ ಧನಂಜಯ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಹೆಡ್‌ ಬುಷ್‌ ಇಷ್ಟವಾಗಬಹುದು.

ದೇವರಾಜ್ (ದೇವರಾಜ ಅರಸು), ಪ್ರಕಾಶ್ ಬೆಳವಾಡಿ (ಗರುಡಾಚಾರ್‌), ಧನಂಜಯ (ಜಯರಾಜ್‌), ಶ್ರುತಿ ಹರಿಹರನ್‌ (ಅರಸು ಅವರ ಮಗಳಾದ ನಾಗರತ್ನ), ಲೂಸ್‌ ಮಾದ ಯೋಗಿ (ಗಂಗಾ), ವಶಿಷ್ಟ ಸಿಂಹ (ಕೊಲ್ವಾಲ್ ರಾಮಚಂದ್ರ), ಬಾಲನಾಗೇಂದ್ರ (ಸಾಮ್ಸನ್‌), ರಘು ಮುಖರ್ಜಿ (ನಟರಾಜ್‌), ಪಯಲ್ ರಜಪೂತ್‌ (ಜಯರಾಜ್ ಹೆಂಡತಿ) ಅವರು ಅಭಿನಯದಲ್ಲಿ ಮಿಂಚಿದ್ದಾರೆ. ಬಾದಲ್ ನಂಜುಂಡಸ್ವಾಮಿಯವರ ಕಲಾ ನಿರ್ದೇಶನ ಆ ಕಾಲವನ್ನು ಮರುಸೃಷ್ಟಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...