Homeಅಂಕಣಗಳುಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

ಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

- Advertisement -
- Advertisement -

ಮೊನ್ನೆ ಹರಿದ್ವಾರದಲ್ಲಿ ಜರುಗಿದ ಸಾಧು ಸಂತರ ಧರ್ಮಸಂಸತ್ತು ದೇಶವಾಸಿ ಮುಸಲ್ಮಾನರನ್ನು ಕೊಂದು ಹಿಂದೂ ರಾಷ್ಟ್ರ ಸ್ಥಾಪಿಸಬೇಕೆಂಬುದಾಗಿ ಕರೆ ನೀಡಿದ್ದು ಮತ್ತು ಮಾಜಿ ಪ್ರಧಾನಿಗೆ ಸಂಸತ್ತಿನಲ್ಲೇ ಗೋಡ್ಸೆಯಂತೆ ಗುಂಡಿಕ್ಕಿ ಕೊಲ್ಲುವ ಮಾತುಗಳು ಅತ್ಯಂತ ಆಘಾತಕಾರಿ ವಿದ್ಯಮಾನ. ನರಮೇಧಕ್ಕೆ ನೀಡಿದ ನೇರ ಆಹ್ವಾನ. ಭವಿಷ್ಯದ ಭಯಾನಕ ಚಿತ್ರ. ವ್ಯಾಧಿ ಉಲ್ಬಣಿಸಿದ ಸಂಕೇತ.

ಸ್ವಚ್ಛಭಾರತದ ಆಂದೋಲನದ ಗೂಢಾರ್ಥ ಅಲ್ಪಸಂಖ್ಯಾತರು- ಆನಂತರ ದಲಿತ, ಆದಿವಾಸಿಗಳನ್ನು ಗುಡಿಸಿ ಹಾಕುವ ಆಂದೋಲನ ಎಂಬ ಗುಮಾನಿ ನೂರಕ್ಕೆ ನೂರು ನಿಜರೂಪ ಧರಿಸತೊಡಗಿದೆ.
ಹಿಂದೂ ರಾಷ್ಟ್ರ ನಿರ್ಮಿಸಲು ಹೋರಾಡಬೇಕು, ಸಾಯಬೇಕು ಅಗತ್ಯ ಬಿದ್ದರೆ ಕೊಲ್ಲಬೇಕು ಎಂಬುದಾಗಿ ನವದೆಹಲಿಯಲ್ಲಿ ನಡೆದ ಹಿಂದೂ ಯುವವಾಹಿನಿಯ ಸಮಾವೇಶ ಪಣ ತೊಟ್ಟಿತು.

ಮುಸಲರ ಹತ್ಯೆಗೆ ಕೇವಲ ಖಡ್ಗವನ್ನು ಬಳಸಿದರೆ ಸಾಲದು. ಅವರ ಬಳಿ ಅತ್ಯಾಧುನಿಕ ಹತಾರುಗಳಿವೆ. ಹೀಗಾಗಿ ತಾಂತ್ರಿಕವಾಗಿ ನಾವು ಮೇಲ್ದರ್ಜೆಗೇರಬೇಕಿದೆ ಎಂದು ಸರಸ್ವತಿಯವರು ಸಾರುವ ವಿಡಿಯೋ ವೈರಲ್ ಆಗಿದೆ. ’ಹೆಚ್ಚು ಹೆಚ್ಚು ಮಕ್ಕಳ ಹುಟ್ಟಿಸಿರಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಅತ್ಯುತ್ತಮ ಹತಾರುಗಳನ್ನು ಹೊಂದಿಸಿ ಇಟ್ಟುಕೊಳ್ಳಿರಿ’ ಎಂದು ಯತಿ ನರಸಿಂಘಾನಂದ ಸರಸ್ವತಿ ಎಂಬಾತ ಹೇಳುತ್ತಿದ್ದಾನೆ.

ಸಾಧು ಧರ್ಮದಾಸ್ ಮಹಾರಾಜ್ ಮಾತುಗಳು ಹೀಗಿವೆ: ’ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರದು ಎಂದು ನಮ್ಮ ಅಂದಿನ ಪ್ರಧಾನಮಂತ್ರಿ (ಮನಮೋಹನ ಸಿಂಗ್) ಹೇಳಿದ್ದು ಕೇಳಿದೆ. ನಾನೊಬ್ಬ ಸಂಸದನಾಗಿದ್ದು ನನ್ನ ಬಳಿ ರಿವಾಲ್ವರ್ ಇದ್ದಿದ್ದರೆ ನಾಥುರಾಮ್ ಗೋಡ್ಸೆಯಾಗಿ ಮನಮೋಹನ್ ಸಿಂಗ್ ಎದೆಗೆ ಆರು ಕಾಡತೂಸುಗಳನ್ನು ಸಿಡಿಸುತ್ತಿದ್ದೆ’. (ಆದರೆ ಮನಮೋಹನ ಸಿಂಗ್ ಇಂತಹ ಹೇಳಿಕೆ ನೀಡಿರುವ ಯಾವುದೇ ದಾಖಲೆಗಳಿಲ್ಲ. 2006ರಲ್ಲಿ ಜರುಗಿದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯನ್ನು ಉದ್ದೇಶಿಸಿ ಅವರು ಹೇಳಿದ್ದಿಷ್ಟೇ: ’ಅಭಿವೃದ್ಧಿಯ ಫಲಗಳನ್ನು ನ್ಯಾಯಯುತವಾಗಿ ಹಂಚಿಕೊಳ್ಳುವಂತೆ ಮುಸಲ್ಮಾನರಿಗೆ ಚೈತನ್ಯ ನೀಡುವ ನವೀನ ದಾರಿಗಳನ್ನು ಸರ್ಕಾರ ರೂಪಿಸಬೇಕಿದೆ’ ಎಂದು).

ಛತ್ತೀಸಗಢದಲ್ಲಿ ಜರುಗಿದ ಮತ್ತೊಂದು ಅಧರ್ಮಸಂಸತ್ತಿನ ವೇದಿಕೆಯಲ್ಲಿ ಗಾಂಧೀ ಹಂತಕ ನಾಥೂರಾಮ ಗೋಡ್ಸೆಗೆ ಕೈಯೆತ್ತಿ ಮುಗಿದು, ದೇಶದ ಸತ್ಯನಾಶ ಮಾಡಿದ ಹರಾಮಖೋರ ಎಂದು ಗಾಂಧೀಜಿಯನ್ನು ನಿಂದಿಸಲಾಯಿತು.

ಗಾಂಧೀಜಿಯ ಘೋರನಿಂದನೆ ಮಾಡಿದ ಕುರಿತು ತನಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದು ಕಾಳೀಚರಣ ಮಹಾರಾಜ ಎಂಬ ತಥಾಕಥಿತ ಸಂತ ಸಾರಿದ್ದಾನೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಢ ಸರ್ಕಾರ ಮತ್ತು ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ. ಸಮ್ಮಿಶ್ರ ಆಡಳಿತವಿರುವ ಮಹಾರಾಷ್ಟ್ರ ಸರ್ಕಾರ ಈ ಸಂತನ ವಿರುದ್ಧ ಕಾನೂನು ಕ್ರಮ ಜರುಗಿಸಿವೆ.

ಆದರೆ ಹರಿದ್ವಾರದಲ್ಲಿ ಕೋಮುವಾದಿ ವಿಷಕಾರಿದ ಕಾರ್ಕೋಟಕ ಸಂತರ ಕೂದಲೂ ಕೊಂಕಿಲ್ಲ. ಬಿಜೆಪಿ ಆಡಳಿತವಿರುವ ಉತ್ತರಾಖಂಡ ಸರ್ಕಾರವಾಗಲೀ, ಮೋದಿ ಸರ್ಕಾರವಾಗಲಿ, ಮುಸಲ್ಮಾನರ ನರಮೇಧದ ಕರೆ ಕುರಿತು ತುಟಿ ಬಿಚ್ಚಿಲ್ಲ.

“ಧರ್ಮಗಳು ಬೇರೆಬೇರೆಯಾದರೂ ಎಲ್ಲ ಭಾರತೀಯರದು ಒಂದೇ ರಕ್ತ, ಒಂದೇ ಡಿ.ಎನ್.ಎ. ಹೀಗಾಗಿ ಮುಸಲ್ಮಾನರು ಭಯದ ಆವರ್ತದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಪೂಜೆ ಪ್ರಾರ್ಥನೆಯ ಆಧಾರದ ಮೇಲೆ ಜನರ ನಡುವೆ ಭೇದಭಾವ ಎಣಿಸುವುದು ಸಲ್ಲದು. ಗುಂಪಾಗಿ ಬಡಿದು ಕೊಲ್ಲುವವರು ಹಿಂದುತ್ವದ ವಿರೋಧಿಗಳು. ಹಿಂದು-ಮುಸ್ಲಿಮ್ ಘರ್ಷಣೆಗಳಿಗೆ ಪರಿಹಾರ ಮಾತುಕತೆಯೇ ವಿನಾ ವೈಮನಸ್ಯ ಅಲ್ಲ” ಎಂಬ ಆರೆಸ್ಸೆಸ್ ಮುಖ್ಯಸ್ಥರ ಮಾತುಗಳಿಗೆ ಅರ್ಥವೇನು ಎಂದು ಜಗ್ಗಿಸಿ ಕೇಳಬೇಕಿದೆ.

ಮುಸಲ್ಮಾನರ ಸಂಹಾರಕ್ಕೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ನೀಡಿರುವ ಕರೆ ಹಿಂಸಾತ್ಮಕ ಮತ್ತು ಜನಾಂಗೀಯ ಹತ್ಯೆಗೆ ಆಹ್ವಾನ. ಉಳಿದೆಲ್ಲ ಧರ್ಮೀಯರಿಗೆ ಸಮಾನತೆಯನ್ನು ನಿರಾಕರಿಸಿ ಅಡಿಯಾಳುಗಳನ್ನಾಗಿಸುವ ಹಿಂದುರಾಷ್ಟ್ರದ ಪರಿಕಲ್ಪನೆ ಇದು. ನಮ್ಮ ಸಂವಿಧಾನದ ಸಹಬಾಳುವೆಯ ಆಶಯಕ್ಕೆ ಎಸೆದ ನೇರ ಸವಾಲು. ಕೋಮುವಾದಿ ಕಾರ್ಕೋಟಕ ವಿಷವನ್ನು ಕಾರುವ ಈ ಉನ್ಮಾದಕಾರಿ ಕೃತ್ಯಕ್ಕೆ ದೇಶವನ್ನು ಆಳುವವರು ಪ್ರತ್ಯಕ್ಷ ಪರೋಕ್ಷ ಕುಮ್ಮುಕ್ಕು ನೀಡತೊಡಗಿದ್ದಾರೆ. ರಕ್ಷಣೆಯನ್ನೂ ಒದಗಿಸುತ್ತಿದ್ದಾರೆ. ಹೀಗಾಗಿಯೇ ಈ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ. ಏನು ಮಹಾ ಆದೀತು, ಹೆಚ್ಚೆಂದರೆ ಒಂದು ಎಫ್.ಐ.ಆರ್ ಎಂಬ ಉಡಾಫೆ ಮೂಡಿದೆ.

’ದೇಶ್ ಕೇ ಗದ್ದಾರೋಂ ಕೋ ಗೋಲಿ ಮಾರೋ ಸಾಲೋಂಕೋ’ ಎಂಬುದಾಗಿ ದೆಹಲಿಯ ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಿದ ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಎಂಬ ಕಿರಿಯ ಮಂತ್ರಿಯ ಮೇಲೆ ಕ್ರಮ ಜರುಗಲಿಲ್ಲ. ಬದಲಿಗೆ ಮೋದಿಯವರ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಿ ಸಮ್ಮಾನಿಸಲಾಯಿತು.

ನೆರೆಹೊರೆಯ ಉತ್ತರಪ್ರದೇಶ, ಹಿಮಾಚಲಪ್ರದೇಶ ಹಾಗೂ ಪಂಜಾಬಿನ ಜೊತೆಗೆ ಉತ್ತರಾಖಂಡವೂ ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಮೂರೂ ರಾಜ್ಯಗಳಲ್ಲಿ ಕೋಮುವಾದಿ ಧ್ರುವೀಕರಣ ರಾಜಕಾರಣದ ವಿಷಸರ್ಪ ಭುಸುಗುಟ್ಟಿ ಫೂತ್ಕರಿಸಿದೆ. ಮುಸಲ್ಮಾನರ ನರಮೇಧಕ್ಕೆ ನೀಡಿದ ಕರೆಯು ಮುಸಲ್ಮಾನರಿಂದಲೂ ಇಂತಹುದೇ ವಿಪರೀತ ಪ್ರತಿಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಬಯಸಿದೆ.

2013ರಲ್ಲಿ ಯುಪಿ ಬಿಹಾರದ ಉದ್ದಗಲಕ್ಕೆ ಬೀಸಿದ ಕೋಮುವಾದಿ ವಿಷಗಾಳಿ 2014ರ ಚುನಾವಣೆಗಳನ್ನು ಭರ್ಜರಿಯಾಗಿ ಬಿಜೆಪಿಗೆ ಗೆಲ್ಲಿಸಿಕೊಟ್ಟಿತ್ತಲ್ಲ. ಈ ಭೂಕಂಪನದ ಕಂಪನಕೇಂದ್ರ ಪಶ್ಚಿಮೀ ಉತ್ತರಪ್ರದೇಶವೇ ಆಗಿತ್ತು. ಈ ಸೀಮೆಯ ರೈತಶಕ್ತಿ ಇದೀಗ ಆಳುವವರ ಮಗ್ಗುಲ ಮುಳ್ಳಾಗಿ ಅವರ ಚಿಂತೆಗೆ ಕಾರಣವಾಗಿದೆ. ಹರಿದ್ವಾರ ಉತ್ತರಾಖಂಡದ ಭೂಭಾಗವೆನ್ನುವುದು ಹೌದು. ಆದರೆ ಪಶ್ಚಿಮೀ ಉತ್ತರಪ್ರದೇಶವೇ ಅದರ ನೆರೆಹೊರೆ. ಹೀಗಾಗಿ ಮುಸ್ಲಿಮ್ ನರಮೇಧದ ಕರೆ ಪಶ್ಚಿಮೀ ಉತ್ತರಪ್ರದೇಶದಲ್ಲಿ ಧ್ರುವೀಕರಣ ಬಿತ್ತುವ ನಿಚ್ಚಳ ಪ್ರಯತ್ನ.

ಮನೆಗಳನ್ನು ಮನಸುಗಳನ್ನು ಒಡೆಯುವ ಇಂತಹ ಅಪಾಯಕಾರಿ ಧ್ರುವೀಕರಣದ ರಾಜಕಾರಣದಿಂದ ಕೊಂಚ ಕಾಲ ಬಿಜೆಪಿ ಬಲಗೊಳ್ಳಬಹುದು. ಆದರೆ ದೇಶ ದುರ್ಬಲವಾಗುತ್ತದೆ. ಸಾಮರಸ್ಯದ ಸಾಮಾಜಿಕ ಹಂದರ ಚಿಂದಿಯಾಗುತ್ತದೆ. ದೇಶ ಮೊದಲು ಎಂದು ಸಾರುವವರು ಆಡಿದ ಮಾತನ್ನು ನಡೆಸಿಕೊಡಬೇಕು.

ರಾಜಕಾರಣದ ಹಿಂದೂಕರಣ ಮತ್ತು ಹಿಂದೂಕರಣದ ಸೈನ್ಯೀಕರಣ ಎಂಬುದೇ ಅತ್ಯುತ್ತಮ ಮತ್ತು ದೂರದರ್ಶಿತ್ವದ ಹಿಂದೂ ರಾಷ್ಟ್ರರಾಜಕಾರಣ ಎಂಬುದು ಸಾವರ್ಕರ್ ಪ್ರಣೀತ ಸಿದ್ಧಾಂತ. ದೇಶದಲ್ಲಿಂದು ಇದೇ ಸಿದ್ಧಾಂತವನ್ನು ಜಾರಿಗೆ ತರಲಾಗುತ್ತಿದೆ.

ಧರ್ಮದ ಹೆಸರಿನ ಧರ್ಮಾಂಧತೆ ಪ್ರತ್ಯೇಕವಾದಕ್ಕೆ ದಾರಿ ಮಾಡುತ್ತದೆ. ಪ್ರತ್ಯೇಕವಾದವು ಭಯೋತ್ಪಾದನೆಯನ್ನು ಹುಟ್ಟಿಹಾಕೀತು. ತಾಲೀಬಾನಿ, ಲಷ್ಕರ್ ಎ ತೊಯ್ಬಾ, ಐ.ಎಸ್.ಐ.ಎಸ್ ಮುಂತಾದ ಮತಾಂಧ ಮುಸ್ಲಿಮ್ ಸಂಘಟನೆಗಳೇ ಈ ಮಾತಿಗೆ ಉದಾಹರಣೆ.

ಅನುರಾಗ್ ಠಾಕೂರ್

ಕಡು ದ್ವೇಷವನ್ನು ಬಿತ್ತಿ ಕೋಮುಗಲಭೆಗಳಿಗೆ ಕಿಡಿ ಹೊತ್ತಿಸಿ ಚುನಾವಣೆ ಬೇಳೆ ಬೇಯಿಸಿಕೊಳ್ಳುವುದು ನಿಜ ಅರ್ಥದಲ್ಲಿ ದೇಶದ್ರೋಹದ ಕೃತ್ಯ. ಇದರ ವಿರುದ್ಧ ಗಣ್ಯ ವ್ಯಕ್ತಿಗಳು- ಪೌರಸಮಾಜ ಗಟ್ಟಿ ದನಿಯೆತ್ತಬೇಕಿದೆ.

ಹಿಂದಿಯ ಬಹುಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದ ಸರ್ವೇಶ್ವರ ದಯಾಳ ಸಕ್ಸೇನಾ ಅವರ ಈ ಕವಿತೆ ದಶಕಗಳ ಹಿಂದೆ ಬರೆದದ್ದು. ನನ್ನ ಅನುವಾದ ತೆಳುವೆನಿಸಿದರೆ ಕ್ಷಮಿಸಿ.

ದೇಶವೆಂಬುದು ಕಾಗದದ ಮೇಲೆ ಬಿಡಿಸಿದ ನಕ್ಷೆಯಲ್ಲ
ನಿಮ್ಮ ಮನೆಯ
ಒಂದು ಕೋಣೆಗೆ ಬೆಂಕಿ ಬಿದ್ದಿದೆಯಾದರೆ
ಮತ್ತೊಂದು ಕೋಣೆಯಲಿ
ಮಲಗಿ ನಿದ್ರಿಸಬಲ್ಲಿರಾ ನೀವು?

ನಿಮ್ಮ ಮನೆಯ ಒಂದು ಕೋಣೆಯಲಿ
ಹೆಣ ಬಿದ್ದು ಕೊಳೆಯುತ್ತಿದ್ದರೆ
ಇನ್ನೊಂದು ಕೋಣೆಯಲಿ ಪ್ರಾರ್ಥಿಸಬಲ್ಲಿರಾ
ನೀವು?

ಹೌದು ಎಂಬುದೇ ನಿಮ್ಮ ಉತ್ತರವಾಗಿದ್ದರೆ
ನಿಮ್ಮೊಡನೆ ಮಾತಾಡುವುದು
ಏನೂ ಉಳಿದಿಲ್ಲ ನನಗೆ.

ದೇಶವೆಂಬುದು ಬರಿದೇ ಕಾಗದದ ಮೇಲೆ
ಬರೆದ ನಕ್ಷೆಯಲ್ಲ
ಒಂದು ಹಿಸ್ಸೆ ಹರಿದುಹೋದರೆ
ಬಾಕಿ ಹಿಸ್ಸೆಯು ಬಾಧಿತವಾಗದೆ ಉಳಿದು
ಹೋಗುವುದಿಲ್ಲ ಮತ್ತು
ನದಿಗಳು ಪರ್ವತ ಶಹರು ಹಳ್ಳಿ
ತಮ್ಮ ತಮ್ಮ ಜಾಗೆಗಳಲ್ಲಿ ಹಾಗೇ
ಇಡಿಯಾಗಿ ಕಂಡು ಉದಾಸೀನ
ಉಳಿಯುವುದಿಲ್ಲ.

ಮಾನವ ಜೀವಕಿಂತ ಮಿಗಿಲೆನಿಸಿದ್ದು
ಇನ್ನೇನೂ ಇಲ್ಲ ಈ ಇಳೆಯೊಳಗೆ
ಈಶ್ವರ
ಜ್ಞಾನ
ಚುನಾವಣೆ
ಯಾವುದೂ ಅಲ್ಲ

ಕಾಗದದ ಮೇಲೆ ಗೀಚಿದ ಯಾವುದೇ ಅನುಲೇಖವ
ಹರಿದು ಒಗೆಯಲುಬಹುದು
ಮತ್ತು ನೆಲದಾಳದ ಏಳು ಪದರಗಳಡಿಯಲಿ
ಹುಗಿಯಲೂಬಹುದು ಅದನು.

ಕಣ್ಣಿಲ್ಲದ ಕಪೋತವದು
ಕಳೇಬರಗಳ ಮೇಲೆ ಕಾಲೂರಿ
ನಿಂತ ವಿವೇಕ
ಕೊಲೆಗಡುಕರ ದಂಧೆಯದು

ನೆನಪಿನಲಿಡಯ್ಯಾ
ಒಂದು ಕಂದನ ಹತ್ಯೆ
ಒಬ್ಬ ಮಹಿಳೆಯ ಮರಣ
ಕಾಡತೂಸುಗಳು ಚಿಂದಿಹೊಡೆದ
ಮನುಷ್ಯನೊಬ್ಬನ ಮೃತದೇಹ
ಸಂಪೂರ್ಣ ರಾಷ್ಟ್ರದ ಪತನವೇ
ವಿನಾ ಕೇವಲ
ಯಾವುದೊಂದು ಆಡಳಿತ ಮಾತ್ರದ್ದಲ್ಲ

ಇಂತಹ ನೆತ್ತರು ಹರಿದು
ಇಳೆಗಿಳಿದು ತೋಯಿಸಿ ಹಿಂಗುವುದಿಲ್ಲ
ಬದಲಿಗೆ

ಆಗಸದಲಿ ಪಟಪಟಿಸುವ ಪತಾಕೆಗಳ

ಮೆತ್ತಲಿದೆ ಕಪ್ಪಾಗಿ
ಫೌಜು ಬೂಟುಗಳ ನಿಶಾನೆ ಬಿದ್ದ ನೆಲ

ಮತ್ತು ಅದರ ಮೇಲೆ ಹೆಣಗಳು ಉರುಳುತಿರುವ
ಆ ಅದೇ ನೆಲ
ಬೆಂಕಿಯಾಗಿ ನಿಮ್ಮ ನೆತ್ತರ ಸೇರಿ ಬೆರೆತು ಓಡದಿದ್ದರೆ
ಇಕೋ ತಿಳಿದುಕೊಳ್ಳಿರಿ
ನೀವು ಬಂಜರು ಬಿದ್ದಿರುವಿರಿ
ಉಸಿರಾಡುವ ಅಧಿಕಾರವೂ ಇಲ್ಲ ನಿಮಗೆ ಇಲ್ಲಿ
ಸತ್ತೇ ಹೋಗಿದೆ ನಿಮ್ಮ ಪಾಲಿನ ಇಹದ ವ್ಯಾಪಾರ

ಕಟ್ಟಕಡೇ ಮಾತು
ಅಗದೀ ನೇರ ನಿಚ್ಚಳ
ಎಂದೆಂದಿಗೂ ಕ್ಷಮಿಸಿದಿರಿ
ಯಾವನೇ ಹಂತಕನನ್ನು
ಆಗಿರವಲ್ಲನ್ಯಾಕೆ ಅವನು
ನಿಮ್ಮ ಜಿಗರೀ ದೋಸ್ತ
ದುರಂಧರ ಧರ್ಮದ ಗುತ್ತಿಗೆದಾರ,
ಲೋಕತಂತ್ರದ
ಸ್ವನಾಮಧನ್ಯ ಪಹರೆದಾರ


ಇದನ್ನೂ ಓದಿ: ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dr. ಆನಂದ್ ರಂಗನಾಥನ್ ಎಂಬ ಲೇಖಕ, ವಿಜ್ಞಾನಿ ಈ ಕಾಲಿಚರಣ್ ಎಂಬಾತನ ಹೇಳಿಕೆಯನ್ನು ಸಮರ್ಥಿಸುತ್ತಾ Dr. B R ಅಂಬೇಡ್ಕರ್ ಅವರು ಮರಾಠಿ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕಕ್ಕೆ ಬರೆದ ಲೇಖನವನ್ನು ಉಲ್ಲೇಖಸಿ, ಅಂಬೇಡ್ಕರ್ ರವರು ಗಾಂಧೀಜಿಯವರನ್ನು ಅವಹೇಳನಕಾರಿ ಆಗಿ ಟೀಕಿಸಿರುವ ಸಾಲುಗಳನ್ನು tag ಮಾಡಿ “ಗಾಂಧಿ ಭಕ್ತರಿಗೆ ” ಸವಾಲೆಸಿದಿರುತ್ತಾರೆ.

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...