Homeಮುಖಪುಟ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

ನಾನು ಅರೆಬಿಯನ್‍ ಆತಂಕವಾದಿಗಳ ವಿರುದ್ಧ ಯುದ್ಧ ಮಾಡಬೇಕಿದೆ. ನನಗೆ ಯೋಧರು ಅಥವಾ ನೇತಾಗಳ ಅಗತ್ಯವಿಲ್ಲ. ಕೈಯಲ್ಲಿ ಹತ್ಯಾರ್ (ಆಯುಧ) ಹಿಡಿದಿರುವವರು ನನ್ನ ಸಹಚರರಾಗಬಹುದು.

- Advertisement -
- Advertisement -

ದೆಹಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಯತಿ ನರಸಿಂಗಾನಂದರು ಮತ್ತೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವರು ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’ ಎಂಬ ಹೇಳಿಕೆ ನೀಡಿರುವುದು ಬಹಿರಂಗ ಭಯೋತ್ಪಾದನೆಗೆ ಕರೆಯಲ್ಲವೇ ಎಂದು ಹಲವಾರು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಯತಿ ನರಸಿಂಗಾನಂದರು ಪ್ರಚೋದನಾಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಅವರ ಖಾತೆಯನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಮತ್ತೊಂದು ಖಾತೆಯಲ್ಲಿ ಅವರು ಮತ್ತೆ ಹಿಂಸೆಗೆ ಪ್ರಚೋದನೆ ನೀಡುವು ಹೇಳಿಕೆ ನೀಡಿದ್ದಾರೆ.

ಹಿಂದಿಯಲ್ಲಿರುವ ಆತನ ಟ್ವೀಟ್‍ ಸಾರಾಂಶ ಇಲ್ಲಿದೆ:

ಹರಹರ ಮಹಾದೇವ, ನಾನು ಅರೆಬಿಯನ್‍ ಆತಂಕವಾದಿಗಳ ವಿರುದ್ಧ ಯುದ್ಧ ಮಾಡಬೇಕಿದೆ. ನನಗೆ ಯೋಧರು ಅಥವಾ ನೇತಾಗಳ ಅಗತ್ಯವಿಲ್ಲ. ಕೈಯಲ್ಲಿ ಹತ್ಯಾರ್ (ಆಯುಧ) ಹಿಡಿದಿರುವವರು ನನ್ನ ಸಹಚರರಾಗಬಹುದು. ನಮ್ಮ ಧರ್ಮವನ್ನು ಕೊಲ್ಲುವವರನ್ನು ನಾಶ ಮಾಡಲು ಬಯಸುವವರು ನನ್ನ ಸಹಚರರಾಗಬಹುದು…

ನನಗೆ ರಾಜಕೀಯ ಬೇಕಿಲ್ಲ. ನಾನು ನನ್ನ ಜನರನ್ನು ರಕ್ಷಿಸಬೇಕಿದೆ. ನನ್ನ ಮಕ್ಕಳು, ಹೆಣ್ಣು ಮಕ್ಕಳಿಗಾಗಿ ಯುದ್ಧ ಮಾಡಬೇಕಿದೆ… ಸನಾತನಕ್ಕಾಗಿ, ಹಿಂದೂ ಧರ್ಮ‍ಕ್ಕಾಗಿ ಕೆಲಸ ಮಾಡುವವರನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ. ಹಿಂದೂ ಧರ್ಮಕ್ಕೆ ದ್ರೋಹ ಬಗೆಯುವವರನ್ನು ಪ್ರಶ್ನಿಸುತ್ತೇನೆ ಮತ್ತು ವಿರೋಧಿಸುತ್ತೇನೆ…

ಇದಿಷ್ಟು ಈತನ ಕರೆ! ಅಂದರೆ, ಈತ ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧ ಹಿಂಸೆಗೆ ಪ್ರಚೋದಿಸುವ ತನ್ನ ಕಸುಬನ್ನು ಇಲ್ಲೂ ಮುಂದುವರೆಸಿದ್ದಾನೆ. ಹತ್ಯಾರ ಹಿಡಿದ ಯುವಕರು ಈತನಿಗೆ ಬೇಕಂತೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಇದನ್ನು ಉಪೇಕ್ಷಿಸುವಂತಿಲ್ಲ. ಈತನ ವಿಡಿಯೋ ನೋಡಿ, ಈತನ ಪ್ರಭಾವಕ್ಕೆ ಒಳಗಾದ ಎಷ್ಟೋ ಯುವಕರು 2020ರ ಫೆಬ್ರುವರಿಯ ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದಾರೆ. ಹಿಂಸೆಗೆ ಈತ ಪ್ರಚೋದನೆ ನೀಡಿದ ವಿಡಿಯೋಗಳು ಸಾರ್ವಜನಿಕವಾಗಿ ಲಭ್ಯವಿದ್ದಾಗಲೂ ದೆಹಲಿ ಪೊಲೀಸರು ಒಂದು ದೂರು ದಾಖಲಿಸುವುದಿರಲಿ, ಈತನನ್ನು ಪ್ರಶ್ನಿಸಲೂ ಇಲ್ಲ. ದೆಹಲಿ ಗಲಭೆಯಲ್ಲಿ 53 ಜನ ಸಾವಿಗೀಡಾದರು ಮತ್ತು ಅಪಾರ ಆಸ್ತಿ ನಾಶವಾಗಿತು. ಇಲ್ಲಿ ಜೀವ ನಷ್ಟ ಮತ್ತು ಆಸ್ತಿ ನಷ್ಟ ಅನುಭವಿಸಿದವರು ಮುಸ್ಲಿಮರು. ಈ ಗಲಭೆಯ ಟಾರ್ಗೆಟ್‍ ಅವರೇ ಆಗಿದ್ದರು.

ನರಸಿಂಗಾನಂದನಿಗೆ ರಾಜಕೀಯದಲ್ಲಿರುವ ಹಿಂದೂತ್ವವಾದಿ ಉನ್ನತ ನಾಯಕರ ಬೆಂಬಲವೂ ಇದೆ ಎಂಬುದು ‘ ‘ದಿ ವೈರ್’’ ಪ್ರಕಟಿಸಿದ ತನಿಖಾ ವರದಿಯಲ್ಲಿ ಸಾಬೀತಾಗಿತ್ತು.

ಗಾಜಿಯಾಬಾದ್‌ನ ದೇವಮಾನವ!

ಯತಿ ನರಸಿಂಗಾನಂದ್ ಉಗ್ರ ಹಿಂದೂತ್ವ ನಾಯಕರಾಗಿದ್ದು, ಅವರ ಪ್ರಧಾನ ಕಚೇರಿ ಉತ್ತರಪ್ರದೇಶದ ಗಾಜಿಯಾಬಾದ್‌ನ ದಾಸ್ನಾದಲ್ಲಿದೆ. ಅವರ ದೇವಸ್ಥಾನವೊಂದರಲ್ಲಿ ಮುಸ್ಲಿಂ ಬಾಲಕ ನೀರು ಕುಡಿದಿದ್ದದಕ್ಕಾಗಿ ಆ ಬಾಲಕನ ಮೇಲೆ ಅಮಾನು‍ಷ ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿ, ತೀವ್ರ ಖಂಡನೆಗೆ ಒಳಗಾಗಿತ್ತು. ಕಪಿಲ್ ಮಿಶ್ರಾ ಅವರಂತಹ ಭಾರತೀಯ ಜನತಾ ಪಕ್ಷದ ಉನ್ನತ ನಾಯಕರೊಂದಿಗಿನ ಒಡನಾಟದಿಂದಾಗಿ ದೆಹಲಿಯ ಭೂಗತ ಹಿಂದುತ್ವ ಜಾಲಗಳಲ್ಲಿ ನರಸಿಂಗಾನಂದನ ಪ್ರಭಾವವು ಮಹತ್ತರವಾಗಿ ಬೆಳೆದಿದೆ.

ಉದಾಹರಣೆಗೆ,  2020ರ ಫೆಬ್ರುವರಿ ದೆಹಲಿ ಗಲಭೆಗೆ ಎರಡು ತಿಂಗಳ ಮೊದಲು, ನರಸಿಂಗಾನಂದ ಮುಸ್ಲಿಮರನ್ನು ರಾಕ್ಷಸರು ಎಂದು ಬಣ್ಣಿಸಿದ್ದ. “ನಮ್ಮ ಪ್ರಸ್ತುತ ಯುಗದಲ್ಲಿ ನಾವು ಮುಸ್ಲಿಮರು ಎಂದು ಕರೆಯುವವರನ್ನು ಹಿಂದಿನ ಯುಗಗಳಲ್ಲಿ ರಾಕ್ಷಸರು ಎಂದು ಕರೆಯಲಾಗುತ್ತಿತ್ತು”  ಎಂದು ಭಾಷಣ ಮಾಡುತ್ತಿದ್ದರು.

ನರಸಿಂಹಾನಂದ್ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅಭಿಮಾನಿ: ‘ನಾಥುರಾಮ್ ಗೋಡ್ಸೆ ಜಿ, ವೀರ್ ಸಾವರ್ಕರ್ ಜಿ ನನ್ನ ದೊಡ್ಡ ನಾಯಕರು ಎಂದು ನಾನು ಪರಿಗಣಿಸುತ್ತೇನೆ’ ಎಂದು ವೇದಿಕೆಗಳಲ್ಲಿ ಹೇಳುತ್ತ ಬಂದಿದ್ದಾರೆ.

ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ನರಸಿಂಗಾನಂದನ ಕರೆಗಳು ವಾಸ್ತವವಾಗಿ ಸಿಎಎ ಮತ್ತು ಅದರ ವಿರುದ್ಧದ ಪ್ರತಿಭಟನೆಗಳಿಗೆ ಮುಂಚೆಯೇ ಆರಂಭವಾಗಿದ್ದವು.  2019 ರ ಅಕ್ಟೋಬರ್‌ನಲ್ಲಿ ಲಖನೌದಲ್ಲಿ ಉಗ್ರಗಾಮಿ ಹಿಂದುತ್ವ ನಾಯಕ ಕಮಲೇಶ್ ತಿವಾರಿ ಇರಿತಕ್ಕೊಳಗಾದ ನಂತರ, “ಹಿಂದೂ ಸಿಂಹವನ್ನು ಕೊಲ್ಲಲಾಗಿದೆ ಮತ್ತು ನಮ್ಮ ಎಲ್ಲಾ ಮನೆಗಳು ಶೋಕದಲ್ಲಿರುವುದರಿಂದ ವಿಶ್ವದಾದ್ಯಂತ ಮುಸ್ಲಿಮರು ಸಂಭ್ರಮ ಆಚರಿಸುತ್ತಿದ್ದಾರೆ. ನಾನು ಆ ಎಲ್ಲ ಕಿಡಿಗೇಡಿಗಳಿಗೆ ಹೇಳುತ್ತಿದ್ದೇನೆ, ಮುಸ್ಲಿಮರಿಗೆ ಹೇಳುತ್ತಿದ್ದೇನೆ, ಕಮಲೇಶ್ ತಿವಾರಿ ಅವರ ಮನೆ ಇಂದು ಶೋಕಿಸುತ್ತಿರುವ ರೀತಿಯಲ್ಲಿ ನಾನು ನಿಮ್ಮನ್ನು ಶೋಕಿಸದಿದ್ದರೆ, ನಾನು ನನ್ನ ತಂದೆಯ ಮಗನಲ್ಲ. ನಾನು ಬದುಕಿರುವವರೆಗೂ ಶಸ್ತ್ರಾಸ್ತ್ರಗಳನ್ನು ಬಳಸುತ್ತೇನೆ. ನಾನು ಪ್ರತಿಯೊಬ್ಬ ಮುಸ್ಲಿಮರಿಗೂ ಹೇಳುತ್ತಿದ್ದೇನೆ, ನಾವು ಒಂದು ದಿನ ಇಸ್ಲಾಂ ಧರ್ಮವನ್ನು ದೇಶದಿಂದ ನಿರ್ಮೂಲನೆ ಮಾಡುತ್ತೇವೆ’ ಎಂದು ಇವರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು.

ನರಸಿಂಗಾನಂದನ ಸಹಚರನಾಗಿರುವ  ಹಿಂದುತ್ವ ನಾಯಕ ದೀಪಕ್ ಸಿಂಗ್ ಹಿಂದೂ, ದೆಹಲಿಯ ಮೌಜ್‌ಪುರ್ ಚೌಕ್‌ನಲ್ಲಿ ಗಲಭೆ ಶುರುವಾದ ದಿನದ ಮಧ್ಯಾಹ್ನ 2.30ಕ್ಕೆ ಜನಸಮೂಹವನ್ನು ಒಟ್ಟುಗೂಡಿಸಲು ಕರೆ ನೀಡಿದ್ದ.. ನಂತರ ದೆಹಲಿ ಗಲಭೆ ಶೀಘ್ರದಲ್ಲೇ ಪ್ರಾರಂಭವಾಯಿತು.

ಫೆಬ್ರವರಿ 2020ರ  ದೆಹಲಿ ಗಲಭೆಗೆ ವಾರಗಳು ಮತ್ತು ತಿಂಗಳುಗಳ ಮೊದಲಿನಿಂದ  ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಯತಿ ನರಸಿಂಗಾನಂದನ ಸಾರ್ವಜನಿಕ ಮಾತುಗಳು  ಪ್ರಚೋದನಾಕಾರಿ ಆಗಿದ್ದವು. ಮುಸ್ಲಿಮರಿಗೆ ಪಾಠ ಕಲಿಸಲು, ಗಲಭೆ ಉಂಟಾಗುವಂತೆ ಹಿಂದೂಗಳನ್ನು ಶಸ್ತ್ರಾಸ್ತ್ರಗಳೊಂದಿಗೆ ಬೀದಿಗೆ ತರುವುದು ಅವರ ಉದ್ದೇಶವಾಗಿತ್ತು.

ನರಸಿಂಗಾನಂದನ  ಪ್ರಚೋದನೆಗೆ ನೆರವಾಗಿದ್ದು ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಬಳಕೆ. ನ್ಯೂಸ್ ನೇಷನ್, ಸುದರ್ಶನ್ ಟಿವಿ ಮತ್ತು ಆಜ್‌ತಕ್‌ನಂತಹ ಪ್ರಮುಖ ಹಿಂದಿ ಸುದ್ದಿ ವಾಹಿನಿಗಳ ಚರ್ಚಾ ಪ್ಯಾನೆಲ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದ ಮತ್ತು ಈಗಲೂ ಕಾಣಿಸಿಕೊಳ್ಳುತ್ತಾನೆ. ಯೂಟ್ಯೂಬ್‌ನಲ್ಲಿ ಹಲವಾರು ಉಗ್ರಗಾಮಿ ಹಿಂದುತ್ವ ಜಾಲಗಳಿಗೆ ಯತಿ ಹೀರೋ ಆಗಿದ್ದಾನೆ. ಹಿಂಸಾಚಾರದ ಕರೆಗಳು ಲಕ್ಷಾಂತರ ಜನರನ್ನು ತಲುಪುವಂತೆ ನರಸಿಂಗಾನಂದ ನೋಡಿಕೊಳ್ಳುತ್ತಾರೆ ಎಂದು ಆತನ ಬಗ್ಗೆ  ಹಿಂದೂತ್ವ ಕಾರ್ಯಕರ್ತರಿಗೆ ಅಭಿಮಾನವಿದೆ.

2019 ರ ಡಿಸೆಂಬರ್‌ನಲ್ಲಿ ಮತ್ತು ನಂತರ ಜನವರಿ ಮತ್ತು ಫೆಬ್ರವರಿ 2020 ರಲ್ಲಿ ಆತನ ಭಾಷಣಗಳು ದ್ವೇಷ ಭಾಷಣಗಳೇ ಆಗಿದ್ದವು. ಆದರೆ ಅಂತಿಮವಾಗಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಹಿನ್ನೆಲೆಯಲ್ಲಿ ನೋಡಿದಾಗ, ಆತನ ಭಾಷಣಗಳು ಹಿಂಸಾಚಾರಕ್ಕೆ ನೂರಾರು ಮತ್ತು ಸಾವಿರಾರು ಜನರನ್ನು ಆಮೂಲಾಗ್ರಗೊಳಿಸಲು ಮತ್ತು ಸಜ್ಜುಗೊಳಿಸಲು ಒಂದು ಪ್ರಮುಖ ಸಾಧನವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಯತಿ ನರಸಿಂಗಾನಂದ್ ಸರಸ್ವತಿಯನ್ನು ಗಲಭೆಯ ಪ್ರಮುಖ ಸಂಚುಕೋರ ಎಂದು ಪೊಲೀಸರು ಪರಿಗಣಿಸುವುದಿಲ್ಲ ಎಂಬುದು ವಿಚಿತ್ರ.

ನರಸಿಂಗಾನಂದ ಮುಸ್ಲಿಮರಿಗೆ ‘ಸುವ್ವರ್’ ಮತ್ತು ‘ಕಟುವಾಸ್‍ನಂತಹ ನಿಂದನೀಯ ಪದಗಳನ್ನು ಬಳಸುತ್ತಾರೆ ಮತ್ತು ನಂತರ ಅವರ ಕಣ್ಣುಗಳನ್ನು ಕಿತ್ತುವಂತೆ ಕರೆ ನೀಡುತ್ತಾನೆ.

ದೆಹಲಿ ಗಲಭೆಗೆ ಎಂಟು ವಾರಗಳ ಮೊದಲು ಆತ ಡಿಸೆಂಬರ್ 25, 2019ರಂದು ಹೀಗೆ ಹೇಳಿದ್ದರು:

“ನಾನು ಮತ್ತೊಮ್ಮೆ ಹಿಂದೂಗಳಿಗೆ ಮನವಿ ಮಾಡುತ್ತಿದ್ದೇನೆ, ಇಂದು ಸಮಯ ಬಂದಿದೆ, ಇಂದಿಗೂ ನಾವು ಎದ್ದು ನಿಲ್ಲದಿದ್ದರೆ ನಾವು ಬದುಕುಳಿಯುವುದಿಲ್ಲ. ಇದು ಅಂತಿಮ ಯುದ್ಧ ಎಂದು ನಾನು ಹಿಂದೂಗಳಿಗೆ ಹೇಳಲು ಬಯಸುತ್ತೇನೆ, ನೀವು ಈ ಯುದ್ಧವನ್ನು ಕಳೆದುಕೊಂಡರೆ ಏನೂ ಉಳಿಯುವುದಿಲ್ಲ. ”

“ಈ ಮುಸ್ಲಿಮರು ದೇಶದ ಶತ್ರುಗಳು, ಅವರನ್ನು ಜೈಲಿಗೆ ಹಾಕಬೇಕು. ಮತ್ತು ಜೈಲಿನಲ್ಲಿದ್ದ ನಂತರ ಅವರು ಸುಧಾರಣೆ ಆಗದಿದ್ದರೆ, ಅವರಿಗೆ ಮರಣದಂಡನೆ ವಿಧಿಸಬೇಕು’ ಎಂದೂ ಯುಟ್ಯೂಬ್‍ ಚಾನೆಲ್‍ಗಳಿಗೆ ಸಂದರ್ಶನ ನೀಡುತ್ತಿದ್ದ ಇವರನ್ನು ದೆಹಲಿ ಪೊಲೀಸರು ಬಂಧಿಸಿದ್ದರೆ ದೆಹಲಿ ಗಲಭೆಗಳೇ ನಡೆಯುತ್ತಿರಲಿಲ್ಲವೇನೋ?

ಈಗ ಮತ್ತೆ ಟ್ವೀಟ್‍ ಮೂಲಕ ಹಿಂಸೆಯನ್ನು ಉತ್ತೇಜಿಸುವ ಮಾತುಗಳನ್ನು ಬಹಿರಂಗವಾಗಿ ಆಡಿದ್ದಾನೆ. ಗಾಜಿಯಾಬಾದ್‍ ಅಥವಾ ದೆಹಲಿ ಪೊಲೀಸರು ಈಗಲಾದರೂ ಸ್ವಯಂಪ್ರೇರಿತ ದೂರು ದಾಖಲಿಸುವರೇ?

ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....