“ಮಹಿಳಾ ಮೀಸಲಾತಿಯನ್ನು ಪ್ರಸ್ತುತ ಲೋಕಸಭೆಯ 543 ಸದಸ್ಯರ ಬಲದ ಮೇಲೆ ಜಾರಿಗೆ ತರಬೇಕು, ಅದನ್ನು ಡಿಲಿಮಿಟೇಷನ್ (ಕ್ಷೇತ್ರ ಪುನರ್ ವಿಂಗಡಣೆ) ಸೀಮಿತಗೊಳಿಸಬಾರದು” ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದರು.
“ಸರ್ಕಾರವು ಮಸೂದೆಗಳನ್ನು ಬಳಸಿಕೊಂಡು ಡಿಲಿಮಿಟೇಷನ್ ಹಿಂಬಾಗಿಲಿನ ಮೂಲಕ ತಳ್ಳುತ್ತಿದೆ. ಕೇಂದ್ರ ಸರ್ಕಾರ ಜಾತಿ ಜನಗಣತಿಯನ್ನು ಬೆಂಬಲಿಸುತ್ತಿಲ್ಲ. ಈ ಕ್ರಮವು ಮಹಿಳಾ ಕೋಟಾದ ಹೆಸರಿನಲ್ಲಿ ಡಿಲಿಮೇಟಷನ್ ಮಾಡುವುದಕ್ಕೆ ಸಮನಾಗಿರುತ್ತದೆ, ಮಹಿಳಾ ಮೀಸಲಾತಿ ನಿಜವಾದ ಅನುಷ್ಠಾನಕ್ಕೆ ಅಡೆತಡೆಗಳನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂನ ಉದಾಹರಣೆಗಳನ್ನು ಉಲ್ಲೇಖಿಸಿ ಗೌರವ್, “ಮಹಿಳಾ ಕೋಟಾವನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ಮರುರೂಪಿಸಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆ” ಎಂದು ಅವರು ಆರೋಪಿಸಿದರು.
“ಸರ್ಕಾರದ ಉದ್ದೇಶದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಜನಗಣತಿ 2024 ರ ನಂತರ ನಡೆಯಲಿದೆ ಎಂದು ಸರ್ಕಾರ ಈ ಹಿಂದೆ ಸೂಚಿಸಿತ್ತು, ಆದರೆ ಈಗ ಅವುಗಳನ್ನು ಕೋಟಾ ಜಾರಿಗೆ ತರುತ್ತಿದೆ” ಎಂದು ಅವರು ಹೇಳಿದರು.
ಜನಗಣತಿ ನಡೆಸುವಲ್ಲಿನ ವಿಳಂಬವನ್ನು ಟೀಕಿಸಿ, “ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿಯನ್ನು ಬೆಂಬಲಿಸಿದೆ” ಎಂದು ಅವರು ಹೇಳಿದರು.
ಕ್ಷೇತ್ರ ಪುನರ್ವಿಂಗಡಣೆ ಬಳಿಕ ಮಹಿಳಾ ಮೀಸಲಾತಿ
“2023 ರಲ್ಲಿ ಅಂಗೀಕರಿಸಲ್ಪಟ್ಟ ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನಂತರ ಜಾರಿಗೆ ತರಲಾಗುವುದು” ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.
“ಲೋಕಸಭೆಯ ಬಲದಲ್ಲಿ 815 ಸ್ಥಾನಗಳಿಗೆ ಶೇ.50 ಹೆಚ್ಚಳವನ್ನು ಪ್ರಸ್ತಾಪಿಸಲಾಗುವುದು. ಒಟ್ಟು ಸ್ಥಾನಗಳ ಮೂರನೇ ಒಂದು ಭಾಗದಷ್ಟು 272 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಯಾವುದೇ ರಾಜ್ಯವು ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ಬಲಗಳನ್ನು ರಕ್ಷಿಸಲಾಗುವುದು” ಎಂದು ಪ್ರತಿಪಾದಿಸಿದರು.
ಬದ್ಧತೆ ಮರೆತ ಕೇಂದ್ರ ಸರ್ಕಾರ: ಡಿಂಪಲ್ ಯಾದವ್
“ಜಾತಿ ಗಣತಿ ಸೇರಿದಂತೆ ಸರಿಯಾದ ಜನಗಣತಿಯು ಮಹಿಳಾ ಮೀಸಲಾತಿ ಮಸೂದೆಯಿಂದ ಕಾಣೆಯಾದ ನಿರ್ಣಾಯಕ ಮೊದಲ ಹೆಜ್ಜೆಯಾಗಿದೆ” ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಹೇಳಿದರು.
“ಸರ್ಕಾರವು ತನ್ನ ಹಿಂದಿನ ಬದ್ಧತೆಯನ್ನು ಮರೆಯುತ್ತಿದೆ. ಕೇಂದ್ರದ ಅನುಕೂಲಕ್ಕೆ ತಕ್ಕಂತೆ ಮಸೂದೆಯನ್ನು ರೂಪಿಸಲಾಗಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಮಹಿಳೆಯರಿಗೆ ಅಸ್ತಿತ್ವದಲ್ಲಿರುವ ಮೀಸಲಾತಿಗಳು ಬಿ ಆರ್ ಅಂಬೇಡ್ಕರ್ ರೂಪಿಸಿದ ಚೌಕಟ್ಟಿನಲ್ಲೇ ಇರುತ್ತವೆ” ಎಂದು ಒತ್ತಿ ಹೇಳಿದರು.
ಡಿಲಿಮಿಟೇಷನ್ ಪಿತೂರಿ ಬಯಲಾಗಿದೆ: ಡೆರೆಕ್ ಒ’ಬ್ರೇನ್
ಬಿಜೆಪಿ ನೇತೃತ್ವದ ಎನ್ಡಿಎ ದುಷ್ಟ ಡಿಲಿಮಿಟೇಷನ್ ಕಾರ್ಯಸೂಚಿಯನ್ನು ಮುಂದಿಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಆರೋಪಿಸಿದರು. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಆಡಳಿತ ಒಕ್ಕೂಟವು ತನ್ನ ಪ್ರಯತ್ನದಲ್ಲಿ ವಿಫಲಗೊಳ್ಳುತ್ತದೆ. ವಿರೋಧ ಪಕ್ಷವು ಈ ಕ್ರಮವನ್ನು ಸೋಲಿಸುತ್ತದೆ” ಎಂದು ಅವರು ಪ್ರತಿಪಾದಿಸಿದರು.


