Homeಚಳವಳಿಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ...

ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ…

- Advertisement -
- Advertisement -

ಭಾರತದ ಹಲವು ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರವು ತಾಳ ತಪ್ಪುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮ ಹಾಗೂ ಸ್ವಜನಪಕ್ಷಪಾತದ ಕಪಟ ರಾಜಕೀಯವು ನಡೆಸುತ್ತಿರುವ ಅತಿಕ್ರಮವನ್ನು ನೋಡುವಾಗ, ಉನ್ನತ ಶಿಕ್ಷಣ ಕ್ಷೇತ್ರವು ವೈಚಾರಿಕವಾಗಿ ಮತ್ತು ಸೈದ್ಧಾಂತಿಕವಾಗಿ ನಿರ್ನಾಮವಾಗಲು ಅಧಿಕ ಸಮಯವೇನೂ ಬೇಕಾಗಿಲ್ಲ ಎಂಬ ಕಳವಳ ಶಕ್ತಿ ಪಡೆದುಕೊಳ್ಳುತ್ತದೆ. ಮುಕ್ತ ಆಲೋಚನೆಗಳ ಹಾಗೂ ವಿಶ್ಲೇಷಣೆಗಳ ಕ್ಷೇತ್ರವಾಗಿ ವಿಶ್ವವಿದ್ಯಾಲಯಗಳು ಮಾರ್ಪಾಡುಗೊಳ್ಳುವ ಬದಲು, ನಿಯಂತ್ರಣಗಳ ಹೇರಿಕೆ ಮತ್ತು ಭಯಭೀತಿ ಹರಡುವ, ಗುಲಾಮ ಮನಸ್ಥಿತಿಯ ರೀತಿಗಳು ಇಲ್ಲಿ ಅನುವರ್ತಿಸುತ್ತಿರುವುದು ಯಾರಿಗೂ ಒಳಿತಲ್ಲ. ಬೌದ್ಧಿಕ ಕಾರ್ಯಗಳ ಮೂಲಕ ಸಮಾಜದ ಬದಲಾವಣೆಗೆ ಬೇಕಾದ ವಿಚಾರಗಳನ್ನು ಪ್ರಚುರಪಡಿಸುತ್ತಾ ನೆಲೆಗೊಳ್ಳಬೇಕಾದ ಸಂಸ್ಥೆಗಳು, ಗತಿಸಿ ಹೋಗುವುದೆಂದರೆ ಅದು ಯಾವ ಪ್ರದೇಶಕ್ಕೂ ಭೂಷಣವಲ್ಲ. ಮಾನವ ಜೀವನದಲ್ಲಿ ಸಾಮಾಜಿಕ – ರಾಜಕೀಯ ವ್ಯವಸ್ಥೆಗಳಲ್ಲಿ ಅನಿವಾರ್ಯ ಬದಲಾವಣೆಗಳನ್ನು ತರಲು ಬೇಕಾದಂತಹ ಮಾದರಿಗಳು, ವಿಚಾರಗಳು, ಸಂಶೋಧನೆಗಳು ನಡೆಯಬೇಕಾಗಿದ್ದ ಉನ್ನತ ಶಿಕ್ಷಣ ಕ್ಷೇತ್ರವು ಇದೀಗ ಸಂಕುಚಿತ ಮನೋಭಾವ ಮತ್ತು ಗುಲಾಮಗಿರಿಯ ಕಡೆಗೆ ವಾಲುತ್ತಿದೆ.

ಜಾತಿ, ಮತ ಸಂಘರ್ಷ

ಪ್ರಸಿದ್ಧವಾದ ಜವಾಹರ್ ಲಾಲ್ ನೆಹರೂ ಯೂನಿವರ್ಸಿಟಿ ಎಂಬ ಶೈಕ್ಷಣಿಕ ಕೇಂದ್ರವನ್ನು ತನ್ನದೇ ಆದ ಸ್ವತಂತ್ರ ಬೌದ್ಧಿಕ ಶೈಲಿಯಿಂದ, ಎಳೆದೆಳೆದು ಕಾಲಬುಡಕ್ಕೆ ತರುವಂತಹ ಶ್ರಮಗಳು ಕೆಲವು ವರ್ಷಗಳಿಂದ ನಡೆಯುತ್ತಿದೆ. ವಿನಾಕಾರಣ ವಿದ್ಯಾರ್ಥಿಗಳನ್ನು ರಾಜಕೀಯ ಹೆಸರಿನಲ್ಲಿ ದೇಶದ್ರೋಹಿಗಳನ್ನಾಗಿಸಿ ಬಂಧಿಸಲಾಗುತ್ತಿದೆ. ಒಬ್ಬ ಮುಸ್ಲಿಂ ವಿದ್ಯಾರ್ಥಿ ಕಾಣೆಯಾದಾಗ, ಪತ್ತೆಗಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಯಿತು. ಹಾಸ್ಟೆಲ್ ಸಮಯದ ವಿಷಯದಲ್ಲಿ ಹಾಗೂ ವಸ್ತ್ರಧಾರಣೆಯ ಸ್ವಾತಂತ್ರ್ಯದಲ್ಲೂ ಕೂಡಾ ಹಸ್ತಕ್ಷೇಪ ನಡೆಸುವ ಪ್ರಕರಣಗಳೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಮುಸುಕುಧಾರಿ ಗೂಂಡಾಗಳಿಂದ ಅಲ್ಲಿನ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೇಲೆ ಹಲ್ಲೆ ನಡೆದಿದೆ. ಇದೀಗ ಬಾಪು ಹತ್ಯೆ ದಿನದಂದೇ, ಗೋಡ್ಸಾನುಯಾಯಿಗಳಿಂದ ಸಾರ್ವಜನಿಕವಾಗಿ, ಪೊಲೀಸರ ಸರ್ಪಗಾವಲಿನಲ್ಲಿಯೇ ಗುಂಡು ಹಾರಿಸುವವರೆಗೆ ಪರಿಸ್ಥಿತಿ ಬಂದು ತಲುಪಿದೆ. ದೇಶದ ರಾಜಧಾನಿಯಲ್ಲಿ ಶೈಕ್ಷಣಿಕವಾದ ಬೌದ್ಧಿಕ ಸ್ವಾಧೀನಗಳು ಜನರ ಮೇಲೆ ಪ್ರಭಾವ ಬೀರಿದೆ ಎಂಬುದು ಮನದಟ್ಟಾದಾಗ, ಆಡಳಿತದ ಚುಕ್ಕಾಣಿ ಹಿಡಿದವರಿಗೆ ಅವು ರುಚಿಸುವುದಿಲ್ಲವಾದರೆ ಅದನ್ನು ಬಲಪ್ರಯೋಗದ ಮೂಲಕ ದಮನಿಸುವ ಅಥವಾ ಸೈದ್ಧಾಂತಿಕವಾಗಿ ನಿಯಂತ್ರಣ ಹೇರುವಂತಹ ಆತಂಕಕಾರಿ ಬೆಳವಣಿಗೆ ಇಂದು ನಡೆಯುತ್ತಿದೆ.

ಇಂತಹ ಸಿದ್ಧಾಂತಗಳ ಹಸ್ತಕ್ಷೇಪಗಳು ಹಲವು ಕಡೆ ಗುಪ್ತವಾಗಿ ಮತ್ತು ಬಹಿರಂಗವಾಗಿಯೂ ನಡೆಯುತ್ತಿವೆ. ರಾಜಕೀಯ ಅಧಿಕಾರದ ಶಕ್ತಿ ಪ್ರಯೋಗಗಳು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಅವಕಾಶಗಳನ್ನು ತಡೆಯುವಂತಹ ದೃಶ್ಯಗಳಾಗಿವೆ ಜೆ.ಎನ್.ಯು ನಲ್ಲಿ ಬಹಿರಂಗವಾಗಿ ನಾವು ಕಂಡಿದ್ದು. ಇತ್ತೀಚೆಗೆ ಜಾಮಿಯ ಮಿಲಿಯಾದಲ್ಲೂ ನಡೆದಿರುವುದೂ ಅದರ ಮುಂದುವರಿದ ಭಾಗವಷ್ಟೇ. ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದೊಳಗೆ ನುಗ್ಗಿ, ಆಳುವ ಸರಕಾರದ ಪೊಲೀಸರು ಹಲ್ಲೆ ನಡೆಸಿ, ವಿದ್ಯಾರ್ಥಿನಿಯರ ಮೇಲೆ ಅತಿಕ್ರೂರವಾದ ರೀತಿಯಲ್ಲಿ ದೌರ್ಜನ್ಯವೆಸಗಲು ಪ್ರಯತ್ನಿಸಿದರು.

ಇಂತಹ ದೌರ್ಜನ್ಯಗಳ ಹೊರತಾಗಿ, ನಿಕೃಷ್ಟವಾದ ರಾಜಕೀಯ ಆಟಗಳು ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತಿವೆ. ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ಸಂಸ್ಕೃತ ಪಾಠ ಹೇಳಿಕೊಡಲು ಬಂದ ಮುಸ್ಲಿಂ ಅಧ್ಯಾಪಕನನ್ನು ಅಂಗೀಕರಿಸಲು ಮುಂದಾಗದೆ ಪ್ರತಿಭಟಿಸಿದ ವಿದ್ಯಾರ್ಥಿಗಳು, ಮತೀಯ ಮೂಲಭೂತವಾದದ ವಕ್ತಾರರೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಧ್ಯಾಪಕನ ಧರ್ಮವು ಅವರನ್ನು ಜ್ಞಾನಾರ್ಜನೆಗೆ ಅನುವು ಮಾಡಿಕೊಡುವುದಿಲ್ಲವೆಂದರೆ, ಅವರು ವಿದ್ಯಾರ್ಥಿಗಳಲ್ಲ. ಕೊಳಕು ಮನಸ್ಥಿತಿಯ ಕಪಟ ರಾಜಕೀಯದವರು ಮಾತ್ರ.

ಪ್ರಾಥಮಿಕ ವಿದ್ಯಾಭ್ಯಾಸದ ನಂತರ, ಹೆಚ್ಚಿನ ಚಿಂತನೆ ಹಾಗೂ ತಿಳಿವಳಿಕೆಗೆ ದಾರಿ ತೋರುವ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಮತೀಯ ಅಡೆತಡೆಗಳಿಲ್ಲದೆ ಭಾಷೆ ಹಾಗೂ ವಿಷಯಗಳನ್ನು ಕಲಿಯುವುದು ಮತ್ತು ಕಲಿಸುವುದು ಅನ್ನುವಂತದ್ದು ಸರ್ವಾಂಗೀಕೃತವಾಗಬೇಕಿದ್ದ ವಿಷಯವಾಗಿತ್ತು. ಬನಾರಸ್‌ನ ವಿಷಯ ಈ ಸಮಸ್ಯೆಯೊಳಗಿನ ಆಕಾಂಕ್ಷೆಯನ್ನು ಇಮ್ಮಡಿಗೊಳಿಸುವಂತಿದೆ. ಜಾತಿಮತದ ಹೆಸರಿನಲ್ಲಿ ಮನುಷ್ಯರನ್ನು ಶಿಕ್ಷಣ ಕ್ಷೇತ್ರದಿಂದ ದೂರ ತಳ್ಳುವ ರೀತಿ ಭಾರತದಲ್ಲಿ ವಿರಳವೇನಲ್ಲ. ದೇಶದಾದ್ಯಂತ ಗ್ರಾಮ ಹಾಗೂ ನಗರಗಳಲ್ಲಿ ಇಂತಹ ಸಾವಿರಾರು ಸಮಸ್ಯೆಗಳಿದ್ದವು. ಸೂಕ್ತವಾದ ಸಾಮಾಜಿಕ ರಾಜಕೀಯ ಅವಲೋಕನ, ಸ್ಪಷ್ಟವಾದ ತಾತ್ವಿಕ ನೆಲೆಗಟ್ಟು ಹಾಗೂ ಆಡಳಿತ ನಿಯಮಗಳ ಪರಿಷ್ಕರಣೆಯ ಮೂಲಕ ಮಾತ್ರವಾಗಿದೆ ಅವುಗಳಲ್ಲಿ ಬದಲಾವಣೆ ತರಲು ಸಾಧ್ಯವಾಗಿರೋದು.

ಧರ್ಮದ ಹೆಸರಿನಲ್ಲಿ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ತೋರುವ ಸಂಕುಚಿತ ಚಿಂತನೆಗಳಿಗೆ, ವಿವೇಚನೆ, ದೌರ್ಜನ್ಯ, ಪೀಡನೆಗಳಿಗೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ. ಮದ್ರಾಸ್ ಐಐಟಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೈಯ್ಯಲು ಕಾರಣ, ಸ್ಪಷ್ಟವಾಗಿಯೂ ಮತೀಯ ವಿವೇಚನೆಯ ಕಾರಣದಿಂದಲೇ ಎಂದು ಆಕೆಯ ಹೆತ್ತವರು ಹೇಳುತ್ತಿದ್ದಾರೆ. ಅತಿ ಹೆಚ್ಚು ಬುದ್ಧಿಜೀವಿಗಳು ಕಲಿಯುವ ಮತ್ತು ಕಲಿಸುವ ಕೇಂದ್ರಗಳೆಂದು ನಮ್ಮ ನಾಡಿನಲ್ಲಿ ಗುರುತಿಸಲ್ಪಡುವ ಇಂತಹ ಶಿಕ್ಷಣ ಕೇಂದ್ರಗಳಲ್ಲಿನ ಮತೀಯ ವಿವೇಚನೆಗಳನ್ನು ತುರ್ತು ಕಾನೂನು ಕ್ರಮಕ್ಕೆ ವಿಧೇಯಪಡಿಸಬೇಕಾಗಿದೆ. ಜಾತಿಸಂಘರ್ಷದ ಅತ್ಯಂತ ವಿಕೃತ ಅಟ್ಟಹಾಸವನ್ನು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನೋಡಿರಬಹುದು. ದಲಿತರ ಮಕ್ಕಳ ವಿರುದ್ಧ ಸವರ್ಣರು ನಡೆಸುವ ಪೀಡನೆಗಳ ಕಾರಣದಿಂದಾಗಿ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು, ಕೊಲೆಗೈಯ್ಯಲ್ಪಡುತ್ತಿರುವುದು ಶೋಚನೀಯವಾಗಿದೆ. ಕೇವಲ ಭಾರತದ ಸಾಮಾಜಿಕ ಸಮಸ್ಯೆಯಾಗಿರುವ ಜಾತಿ ಮತ್ತು ಅಸ್ಪೃಶ್ಯತೆಯು, ಅದೆಷ್ಟೋ ಕಾಲದಿಂದ ನಿರ್ಮೂಲನೆಗೊಳಪಡದೆ ಇಂದಿಗೂ ಜೀವಂತವಾಗಿದೆ. ಯಾವುದೇ ರೀತಿಯ ಸಾಮಾಜಿಕ ಬದಲಾವಣೆಗಳು ಬಂದರೂ, ಜಾತಿಮತಗಳ ವಿವೇಚನೆಯನ್ನು ದಾಟಿ ಮುಂದೆ ಸಾಗಲು, ಯಾವ ಉನ್ನತ ಶಿಕ್ಷಣವೂ ಬೆಳೆದಿಲ್ಲ ಎಂಬುದಾಗಿದೆ ಸದ್ಯದ ಪರಿಸ್ಥಿತಿ.

ಸ್ವಜನಪಕ್ಷಪಾತದ ರಾಜಕೀಯ

ಜಾತಿಮತಗಳು ಮಾತ್ರವಲ್ಲ, ರಾಜಕೀಯ ಪಕ್ಷಗಳ ಹಾಗೂ ಇತರ ಭಾವನಾತ್ಮಕ, ವೈಯಕ್ತಿಕ ಕಾರ್ಯಗಳ ಮೂಲದಲ್ಲಿರುವ ಸ್ವಜನಪಕ್ಷಪಾತವು, ಉನ್ನತ ಶಿಕ್ಷಣ ಕ್ಷೇತ್ರದ ಮೌಲ್ಯವನ್ನು ಕಸಿದುಕೊಂಡು, ನಾಶಕ್ಕೆ ಹೇತುವಾಗುತ್ತದೆ. ಏನೇ ತಪ್ಪೆಸಗಿದರೂ ತನ್ನ ಪಕ್ಷದವನನ್ನು ರಕ್ಷಿಸುವ ರೀತಿ ಸಮಾಜದ ಇತರ ಕ್ಷೇತ್ರಗಳಲ್ಲಿ ಇರುವಂತೆಯೇ, ಶಿಕ್ಷಣ ಕ್ಷೇತ್ರದಲ್ಲಿಯೂ ಎಗ್ಗಿಲ್ಲದೆ ನಡೆಯುತ್ತಿದೆ. ಉನ್ನತರೆಂದು ನಟಿಸುವ ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ಇರುವ ಹಲವರು, ಜ್ಞಾನ ವಿಕಸನದ ಮತ್ತು ಸಾಮಾಜಿಕ ಪ್ರಜ್ಞೆಯ ಹೆಸರಿನಲ್ಲಿ ನಡೆಸುವ ವಂಚನೆಗಳನ್ನು ಕೂಡಾ ಸಮರ್ಥಿಸಿಕೊಳ್ಳುವಂತಹ ದುರವಸ್ಥೆಯಾಗಿದೆ ಇಂದಿನದ್ದು.

ವಿಚಾರಗಳ ಹಾಗೂ ಪದವಿಗಳ ಸೋರಿಕೆಗಳು, ಅನಧಿಕೃತ ನೇಮಕಾತಿಗಳು, ಪರೀಕ್ಷಾ ವಂಚನೆ, ಪ್ರಶ್ನೆ ಪತ್ರಿಕೆ ಸೋರಿಕೆ ಮುಂತಾದ ಅನೇಕಾನೇಕ ಅನ್ಯಾಯಗಳು ಇತ್ತೀಚೆಗಿನ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ. ಪ್ರಾಮಾಣಿಕರಾಗಿ ಕಲಿತು, ಉದ್ಯೋಗ ಮಾಡುವವರನ್ನು ನಿರ್ದಾಕ್ಷಿಣ್ಯ ಎಳೆದು ಕೆಳ ಹಾಕಿ, ಮೆಟ್ಟಿ ನಿಲ್ಲುವಂತಹ ಕುತಂತ್ರಗಳನ್ನು ಹೆಣೆದು, ಜಾರಿಗೆ ತರುವಂತದ್ದೆಲ್ಲವೂ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡಮಟ್ಟದ ತಲೆನೋವಾಗಿ ಪರಿಣಮಿಸಿದೆ. ಅನ್ಯಾಯ, ವಂಚನೆಗಳ ವಿರುದ್ಧ ಪ್ರತಿಭಟಿಸುವವರ ವಿರುದ್ಧ ಮಾತ್ರವಲ್ಲದೆ, ಯಾರನ್ನೂ ತೃಪ್ತಿಪಡಿಸಲು ನಿಲ್ಲದೆ, ಪ್ರಾಮಾಣಿಕ ಕಲಿಕೆ, ಅಧ್ಯಾಪನಾ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡವರ ವಿರುದ್ಧವೂ ಏಕಾಏಕಿ ದೂರುಗಳು ಮತ್ತು ಪ್ರಕರಣಗಳನ್ನು ದಾಖಲಿಸುತ್ತಿರುವ ರೀತಿಯೂ ಹೊಸತಲ್ಲ.

ಉನ್ನತ ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಅವನತಿಗೆ ಕೊಂಡೊಯ್ಯುವತ್ತ, ಇದಕ್ಕೆ ಸಂಬಂಧಿಸಿದ ಕಚೇರಿಗಳಲ್ಲಿ ಗುಮಾಸ್ತರಾಗಿ ಕೆಲಸ ಮಾಡುವವರೂ, ಅಧಿಕಾರದ ಗದ್ದುಗೆಯಲ್ಲಿರುವ ಹಲವರೂ ಕಾರಣರಾಗುತ್ತಿದ್ದಾರೆ. ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಅವರ ಔದ್ಯೋಗಿಕ ಪೇಪರ್‌ಗಳು ಮತ್ತು ಫೈಲ್‌ಗಳನ್ನು ಸರಿಪಡಿಸಿ ನೀಡದೆ, ವಿನಾಕಾರಣ ದಿನದೂಡುತ್ತಿರುವುದು, ಅವರನ್ನು ಕಲಿಕೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡದಿರುವುದು ಇನ್ನೂ ದೊಡ್ಡ ಸಮಸ್ಯೆಯಾಗಿದೆ. ಇದು ಹೆಚ್ಚಾಗಿ ಹಲವು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಬಹಳ ಪ್ರಚಾರದಲ್ಲಿರುವುದರಿಂದ, ಮಧ್ಯಪ್ರವೇಶಿಸಿ ಬದಲಾವಣೆ ತರದೇಹೋದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರವು, ಇತರ ಕೈಗಾರಿಕೋದ್ಯಮ ಸಂಸ್ಥೆಗಳಂತೆಯೇ, ಅಧ್ಯಾಪಕ ನೌಕರರ ಸಂಘದ ಕೇಂದ್ರ ಮಾತ್ರವಾಗಿ ಬಿಡುತ್ತದೆ.

ಜಾತಿಸಂಘರ್ಷ ಹಾಗೂ ಸ್ವಜನಪಕ್ಷಪಾತವನ್ನು ಪ್ರಶ್ನಿಸಿ, ನ್ಯಾಯಯುತ ಹಕ್ಕುಗಳಿಗಾಗಿ ಕ್ರಮ ಕೈಗೊಂಡು, ಉನ್ನತ ಶಿಕ್ಷಣ ವಲಯದಲ್ಲಿ ನೆಲೆಗೊಳ್ಳುವುದು ಅಸಾಧ್ಯವೆನಿಸಿದೆ. ಈ ವಿಷಯದಲ್ಲಿ ಪ್ರತಿಕ್ರಿಯಿಸಲು ಬೋಧಕರ ಸಂಘಗಳು ಇವೆಯಾದರೂ, ಅವುಗಳು ಇತರೆ ಕಾರ್ಮಿಕ ಸಂಘಗಳಂತೆ ವರ್ತಿಸುತ್ತಾ, ಅವರವರ ಪಕ್ಷಗಳ ಅಧ್ಯಾಪಕರನ್ನು ಸಂರಕ್ಷಿಸುವ, ಇತರರನ್ನು ಸಮಸ್ಯೆಗಳ ಸುಳಿಯಲ್ಲಿ ತಂದೊಡ್ಡುವ ಪ್ರವೃತ್ತಿ ಮುಂದುವರಿಯುತ್ತಾ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಅದು ಶಿಕ್ಷಣ ಕ್ಷೇತ್ರವನ್ನೇ ಬಲಿ ಪಡೆದುಕೊಳ್ಳುತ್ತದೆ. ಇಂತಹ ಬಹುಮುಖಿ ಸಮಸ್ಯೆಗಳಿಗೆ ಸೂಕ್ತಪರಿಹಾರ ದೊರಕದಿದ್ದಲ್ಲಿ, ಉನ್ನತ ಶಿಕ್ಷಣವು ಸಂಪೂರ್ಣವಾಗಿ ಬರೀ ಉದ್ಯಮವಾಗುವುದಂತೂ ನಿಶ್ಚಿತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...