Homeಕರ್ನಾಟಕಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ರಾಜೀನಾಮೆ ಅಂಗೀಕಾರವಾಗುವವರೆಗೆ ಮುಂಬೈ ಹೋಟೆಲ್‍ಗೆ ಹೋಗಿ ಕೂತಿದ್ದು ಅನೈತಿಕತೆಯ ವಾಸನೆ ಹೊಡಿಸ್ತು

- Advertisement -
- Advertisement -

15ಕ್ಕೂ ಹೆಚ್ಚು ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈಗೆ ಹಾರಿಹೋದಾಗಿನಿಂದ ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಂಡು ಅಸಹ್ಯ ಹುಟ್ಟಿಸುತ್ತಿದೆ. ಇದನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಡಿನ ಹಿರಿಯ ಸಾಕ್ಷಿಪ್ರಜ್ಞೆಗಳಾದ ದೇವನೂರು ಮಹಾದೇವ ಮತ್ತು ಎಚ್.ಎಸ್ ದೊರೆಸ್ವಾಮಿಯವರು ಸ್ಪೀಕರ್ ರಮೇಶ್ ಕುಮಾರ್ ರವರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾನುಗೌರಿ.ಕಾಂ ವತಿಯಿಂದ ದೇವನೂರು ಮಹಾದೇವರನ್ನು ಸಂದರ್ಶಿಸಲಾಯಿತು.

ಪತ್ರಿಕೆ: ನೀವು ಸ್ಪೀಕರ್‍ರಿಗೆ ಪತ್ರ ಬರೆಯಬೇಕೆಂದುಕೊಂಡಿದ್ದು ಯಾಕೆ ಸಾರ್?
ದೇವನೂರ ಮಹಾದೇವ: ರಾಜ್ಯದ ಶಾಸಕರ ನಾಪತ್ತೆ ರಾಜಕಾರಣವನ್ನು ಮಾಧ್ಯಮಗಳೆಲ್ಲವೂ ಹೈಡ್ರಾಮಾ ಎಂದು ಬಿಂಬಿಸುತ್ತಿವೆ. ಆದರೆ ನಡೀತಿರೋದು ಕೊಳಕು ಡ್ರಾಮಾ. ಈಗ ಏನು ನಡೀತಿದೆ ಗೊತ್ತೇ? ಇದು ಪಕ್ಷಾಂತರ ನಿಷೇಧ ಕಾಯ್ದೆಯ ಜೀವ ತೆಗೀತಿರೋದು. ಇದಕ್ಕೆ ನಮ್ಮ ನ್ಯಾಯಾಂಗ, ರಾಜ್ಯಪಾಲರು ಹಾಗೂ ರಾಜಕಾರಣಿಗಳು ಒಂದಲ್ಲಾ ಒಂದು ರೀತಿ ಕಾರಣರಾಗಿದ್ದಾರೆ. ಮೇಲ್ಕಂಡವರಿಗೆ ಸಂವಿಧಾನದ ಬಗ್ಗೆ, ನ್ಯಾಯಾಲಯದ ಬಗ್ಗೆ ನಂಬಿಕೆ ಗೌರವ ಇದೆಯಾ ಎನ್ನೋ ಅನುಮಾನ ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಸುಮ್ಮನಿರಬಾರ್ದು ಅನ್ನಿಸ್ತು.

ಪತ್ರಿಕೆ: ಸ್ಪೀಕರ್‍ರಿಗೇ ಯಾಕೆ ಬರೆದ್ರಿ?
ದೇ.ಮ: ನೋಡಿ, ಇಲ್ಲಿ ಕೆಲವ್ರು ಆಪರೇಷನ್ ಮಾಡ್ತಾ ಇದಾರೆ. ಕೆಲವ್ರು ಆಪರೇಷನ್ ಮಾಡಿಸ್ಕತಾ ಇದಾರೆ. ಕೊನೇಗೆ ಇದು ನಮ್ಮನ್ನ ಎಲ್ಲಿಗೆ ಕರೆದೊಯ್ತದೆ? ಈ ರೆಸಾರ್ಟ್ ರಾಜಕಾರಣದಿಂದ ನಾವೂ ತಲೆ ತಗ್ಗಿಸೋಂಗಾಗಿದೆ. ಸ್ಪೀಕರ್ ನಡೆ ನುಡಿ ನೋಡಿದರೆ ಅವ್ರು ಸಾಕ್ಷಿಪ್ರಜ್ಞೆ ಇಟ್ಟುಕೊಂಡು ಸೂಕ್ತವಾಗಿ ನಿರ್ವಹಿಸಬಹುದು ಅಂತ ಅನ್ನಿಸ್ತು. ಹಾಗಾಗಿ ಅವ್ರಲ್ಲಿ ಪ್ರಾರ್ಥನೆ ಮಾಡ್ಕೊಂಡ್ವಿ. ಅದಕ್ಕಿಂತ ಮುಖ್ಯವಾಗಿ ಸ್ಪೀಕರ್ ಶಾಸಕಾಂಗದ, ಶಾಸಕರ ಕಸ್ಟೋಡಿಯನ್ ಎಂಬ ಭಾವನೆ ಇದೆ. ಈ ಮಾತು ಅನೇಕ ಸಲ ಶಾಸನ ಸಭೆಯ ಚರ್ಚೆಯಲ್ಲೂ ಬಂದಿದೆ. ಅವ್ರು ಪ್ರತ್ಯಕ್ಷವಾಗಿ ಶಾಸಕರ ಕಸ್ಟೋಡಿಯನ್ ಆಗಿರುವುದಾದರೆ, ಪರೋಕ್ಷವಾಗಿ ಆ ಶಾಸಕರನ್ನು ಆರಿಸಿದ ಮತದಾರರ ಆಯ್ಕೆಯ ಹಕ್ಕಿನ ಕಸ್ಟೋಡಿಯನ್ ಸಹಾ ಆಗ್ಬೇಕು. ಆದ್ರಿಂದ ಅವ್ರಿಗೆ ಪತ್ರ ಬರೆದೆವು.

ಪತ್ರಿಕೆ: ಶಾಸಕರಿಗೆ ರಾಜೀನಾಮೆ ನೀಡೋ ಹಕ್ಕೇ ಇಲ್ಲ ಅಂತ ಹೇಳೋಕಾಗುತ್ತಾ?
ದೇ.ಮ: ಖಂಡಿತವಾಗ್ಲೂ ಇಲ್ಲ. ನಾವು ಯಾರಿಗೂ ರಾಜೀನಾಮೆ ಕೊಡೋದು ಬೇಡ ಅಂತ ಹೇಳಲ್ಲ. ಆದರೆ ಆ ಶಾಸಕರು ರಾಜೀನಾಮೆ ಊರ್ಜಿತವಾಗೋ ತನಕವಾದರೂ ಆ ಕಾಲವಧಿಯಲ್ಲಿ ಜನರ ಜೊತೆ ಇರಬೇಕೆಂದು ಕೇಳುವುದು ನ್ಯಾಯ ತಾನೇ? ಅದು ನೈತಿಕವಾಗಿ ಸರಿ ತಾನೇ? ತಮ್ಮದೇ ನಿರ್ಧಾರದ ಬಗ್ಗೆ ಗ್ಯಾರಂಟಿ ಇಲ್ಲದೇ ಬೇರೆ ರಾಜ್ಯದ ರೆಸಾರ್ಟ್‍ನಲ್ಲಿ ಕೂರೋದು ಕೊಡೋ ಸಂದೇಶ ಏನಂದ್ರೆ ಅದ್ರಲ್ಲಿ ಒಂದೋ ಬೇರೆ ಅನೈತಿಕ ಹಿತಾಸಕ್ತಿ ಇದೆ, ಇಲ್ಲವೇ ಯಾರೋ ಇವ್ರನ್ನ ಹಿಡ್ಕೊಂಡು ಕೂರಿಸ್ಕೊಂಡಿದಾರೆ ಅಂತ.

ಪತ್ರಿಕೆ: ಇದನ್ನ ತಡೆಯೋಕೆ ಏನು ಮಾಡಬೇಕು ಅನಿಸುತ್ತೆ ಸಾರ್?
ದೇ.ಮ: ರಾಜೀನಾಮೆ ಕೊಡೋರು ತಮ್ಮ ಮತದಾರರ ಜೊತೆಗೇ ಇರಬೇಕು ಅಂತ ಮಾಡ್ಬೇಕು. ಇಂತಹ ಹೊಸದೊಂದು ಪರಂಪರೆಯನ್ನು ನಮ್ಮ ಸ್ಪೀಕರ್ ರವರು ಹುಟ್ಟು ಹಾಕುತ್ತಾರೆಂಬ ನಂಬಿಕೆ ನಮಗಿದೆ. ಅಂತಹ ಕಾನೂನು ಸಹಾ ಇಲ್ಲ ನಿಜ. ಇವೆಲ್ಲವನ್ನ ಕೇವಲ ಕಾನೂನಿನ ನಿಯಮಗಳ ಪುಸ್ತಕ ಇಟ್ಕೊಂಡೇ ಬದಲಾಯಿಸಕ್ಕೆ ಆಗಲ್ಲ. ಆದ್ರೆ, ಇವತ್ತಿನ ಸಂದರ್ಭದಲ್ಲಿ ರೆಸಾರ್ಟ್ ರಾಜಕಾರಣದಂತಹ ಚೆಂಗಲು, ಎಂಜಲು ಮತ್ತು ಅಹಂನ ಮದದ ರಾಜಕಾರಣಿಗಳಿಗೆ ಮಾನ ಮರ್ಯಾದೆಗೆ ಹೆದರೋ ಥರದ ಒಂದು ತೀರ್ಮಾನ ಸ್ಪೀಕರ್ ಕಡೆಯಿಂದ ಆಗ್ಲೇಬೇಕು ಅಂತ ನನಗೆ ಅನ್ನಿಸುತ್ತೆ.

ಇದನ್ನೂ ಓದಿ: ದೇವನೂರು ಮತ್ತು ದೊರೆಸ್ವಾಮಿಯವರಿಂದ ಸ್ಪೀಕರ್ ರಿಗೆ ದೂರು ಸಲ್ಲಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...