Homeಅಂತರಾಷ್ಟ್ರೀಯಗಾಝಾ ಕದನ ವಿರಾಮ ಜಾರಿಯಾದರೂ ಆಕ್ರಮಣ ಮುಂದುವರಿಸಿದ ಇಸ್ರೇಲ್ : ಪ್ಯಾಲೆಸ್ತೀನಿಯರ ಹತ್ಯೆ, ಬಂಧನ

ಗಾಝಾ ಕದನ ವಿರಾಮ ಜಾರಿಯಾದರೂ ಆಕ್ರಮಣ ಮುಂದುವರಿಸಿದ ಇಸ್ರೇಲ್ : ಪ್ಯಾಲೆಸ್ತೀನಿಯರ ಹತ್ಯೆ, ಬಂಧನ

- Advertisement -
- Advertisement -

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿದೆ ಎಂದು ಇಡೀ ಜಗತ್ತು ಮಾತನಾಡಿಕೊಳ್ಳುತ್ತಿದೆ. ತಾನೇ ಬಾಂಬ್ ಕೊಟ್ಟು ಕಂದಮ್ಮಗಳ ಸಾವಿಗೆ ಕಾರಣರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಯುದ್ಧ ನಿಲ್ಲಿಸಿದ ಶಾಂತಿಯ ರಾಯಭಾರಿಯಾಗಿ ಹೊರ ಹೊಮ್ಮಿದ್ದಾರೆ. ಮುಂದೆ ನಿಂತು ಕಂದಮ್ಮಗಳ ರಕ್ತ ಹರಿಸಿದ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ನಿರಪರಾಧಿ ಎಂಬಂತೆ ಜಾಗತಿಕ ನಾಯಕರು ಕೈ ಕುಲುಕುತ್ತಿದ್ದಾರೆ.

ಈ ನಡುವೆ ಕದನ ವಿರಾಮದಿಂದ ಪ್ಯಾಲೆಸ್ತೀನಿಯರಿಗೆ ಕನಿಷ್ಠ ಬದುಕುವ ಅವಕಾಶ ಸಿಕ್ಕಿತಾ? ಎಂದು ನೋಡಿದರೆ, ಇಲ್ಲ ಎನ್ನುತ್ತವೆ ವರದಿಗಳು.

ಆಕ್ರಮಿತ ಜೆರುಸಲೆಮ್‌ನ ಉತ್ತರದಲ್ಲಿ ಓರ್ವ ಪ್ಯಾಲೆಸ್ತೀನಿಯ ಹತ್ಯೆ 

ಇತ್ತೀಚಿನ ವರದಿಗಳ ಪ್ರಕಾರ, ಆಕ್ರಮಿತ ಜೆರುಸಲೆಮ್‌ನ ಉತ್ತರಕ್ಕೆ ಇರುವ ಅರ್ರಾಮ್ ಪಟ್ಟಣದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಒಬ್ಬರು ಪ್ಯಾಲೆಸ್ತೀನಿ ವ್ಯಕ್ತಿ ಸಾವನ್ನಪ್ಪಿದ್ದಾರೆ. 57 ವರ್ಷದ ವ್ಯಕ್ತಿಯನ್ನು ಇಸ್ರೇಲಿ ಸೈನಿಕರು ಹೊಡೆದು ಕೊಂದಿದ್ದಾರೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಪ್ಯಾಲೆಸ್ತೀನಿ ಸುದ್ದಿ ಸಂಸ್ಥೆ ವಫಾ ವರದಿ ಮಾಡಿದೆ.

ನಮ್ಮ ಸಿಬ್ಬಂದಿ ಮೃತ ವ್ಯಕ್ತಿಯ ದೇಹವನ್ನು ಕಲಾಂಡಿಯಾ ಚೆಕ್‌ಪಾಯಿಂಟ್‌ನಲ್ಲಿ ಸ್ವೀಕರಿಸಿ ಪ್ಯಾಲೆಸ್ತೀನ್ ವೈದ್ಯಕೀಯ ಸಂಕೀರ್ಣಕ್ಕೆ ಸಾಗಿಸಿದ್ದಾರೆ ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಖಚಿತಪಡಿಸಿದೆ.

ಇಸ್ರೇಲಿ ಪಡೆಗಳು ಇಂದು (ಅ.15) ಬೆಳಿಗ್ಗೆಯಿಂದ ಆಕ್ರಮಿತ ಪಶ್ಚಿಮ ದಂಡೆಯ ವಿವಿಧ ಪ್ರದೇಶಗಳ ಮೇಲೆ ಸರಣಿ ದಾಳಿ ಮತ್ತು ಅತಿಕ್ರಮಣಗಳನ್ನು ನಡೆಸಿವೆ. ಸೈನಿಕರು ಬಿಡುಗಡೆಯಾದ ಕೈದಿಗಳ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ ಮತ್ತು ಇಸ್ರೇಲಿ ಜೈಲುಗಳಿಂದ ಬಿಡುಗಡೆಯಾದ ಕೈದಿಗಳನ್ನು ಬೆಂಬಲಿಸಿ ಯಾವುದೇ ಸಂಭ್ರಮಾಚರಣೆ ನಡೆಸದಂತೆ ಅವರ ಕುಟುಂಬಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಬೆತ್ಲಹೆಮ್ ಗವರ್ನರೇಟ್‌ನಲ್ಲಿ ನಾಲ್ವರು ಬಂಧಿಸಿದ ಇಸ್ರೇಲಿ ಪಡೆಗಳು

ಬೆತ್ಲಹೆಮ್ ಗವರ್ನರೇಟ್‌ನಲ್ಲಿ ಪ್ಯಾಲೆಸ್ತೀನಿಯರ ಮನೆಗಳ ಮೇಲೆ ದಾಳಿ ನಡೆಸಿದ ಇಸ್ರೇಲಿ ಪಡೆಗಳು ಶೋಧ ಕಾರ್ಯ ಕೈಗೊಂಡಿವೆ. ಕನಿಷ್ಠ ನಾಲ್ವರನ್ನು ಬಂಧಿಸಿವೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವಫಾ ವರದಿ ಮಾಡಿದೆ.

ಜಬಲ್ ಅಲ್-ಮವಾಲೆಹ್ ಪ್ರದೇಶದಿಂದ ಕರೆದೊಯ್ಯಲ್ಪಟ್ಟ ಮುಸ್ತಫಾ ಮೂಸಾ ನವವ್ರಾ, ಅಲ್-ಕರ್ಕಫಾದ ಮುಹಮ್ಮದ್ ರಈದ್ ಜವಾಹರಾ, ಕ್ಯಾರಿಟಾಸ್ ಪ್ರದೇಶದ ರಈದ್ ಅಬ್ದುಲ್ ಕರೀಮ್ ಅಲ್-ಮದ್ಬೌಹ್ ಮತ್ತು ಬೆತ್ಲೆಹೆಮ್ ನಗರದ ಪೂರ್ವದಲ್ಲಿರುವ ಹಿಂಡಾಜಾದ ಝಕಾರಿಯಾ ಜಮಾಲ್ ಅವಿದಾ ಬಂಧಿತರು ಎಂದು ತಿಳಿದು ಬಂದಿದೆ.

ಗವರ್ನರೇಟ್‌ನ ವಿವಿಧ ಪ್ರದೇಶಗಳಲ್ಲಿ ಅನೇಕ ಮನೆಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿವೆ. ಆದರೆ, ನಾಲ್ವರು ಹೊರತು ಇತರ ಯಾವುದೇ ಬಂಧನಗಳು ವರದಿಯಾಗಿಲ್ಲ ಎಂದು ವರದಿಗಳು ಹೇಳಿವೆ.

ಪಶ್ಚಿಮ ದಂಡೆಯ ಅಲ್-ಮುಗಯೀರ್ ಗ್ರಾಮದ ಪ್ರವೇಶದ್ವಾರ ಮುಚ್ಚಿದ ಇಸ್ರೇಲಿ ಸೈನಿಕರು

ಇಸ್ರೇಲಿ ಸೈನಿಕರು ಆಕ್ರಮಿತ ಪಶ್ಚಿಮ ದಂಡೆಯ ಅಲ್-ಮುಗಯೀರ್ ಗ್ರಾಮದ ಪಶ್ಚಿಮ ದ್ವಾರವನ್ನು ಮುಚ್ಚಿ ಪ್ಯಾಲೆಸ್ತೀನಿರು ಗ್ರಾಮ ಪ್ರವೇಶಿಸದಂತೆ ಮತ್ತು ಹೊರ ಹೋಗದಂತೆ ತಡೆಯುತ್ತಿದ್ದಾರೆ ಎಂದು ಅಲ್-ಮುಘಯ್ಯಿರ್ ಗ್ರಾಮ ಮಂಡಳಿಯ ಮುಖ್ಯಸ್ಥ ಅಮೀನ್ ಅಬು ಅಲಿಯಾ ಅವರನ್ನು ಉಲ್ಲೇಖಿಸಿ ವಫಾ ವರದಿ ಮಾಡಿದೆ.

ಅಕ್ಟೋಬರ್ 7, 2023ರಂದು ಗಾಝಾದಲ್ಲಿ ಆಕ್ರಮಣ ಪ್ರಾರಂಭವಾದಾಗಿನಿಂದ ಇಸ್ರೇಲಿ ಪಡೆಗಳು ಗ್ರಾಮದ ಪೂರ್ವ ದ್ವಾರವನ್ನು ಮುಚ್ಚಿತ್ತು. ಹಾಗಾಗಿ, ಪಶ್ಚಿಮ ದ್ವಾರ ಗ್ರಾಮದ ಏಕೈಕ ಪ್ರವೇಶ ಮಾರ್ಗವಾಗಿತ್ತು.

ಇಸ್ರೇಲಿ ಸೈನಿಕರು ಪ್ರವೇಶದ್ವಾರವನ್ನು ಮುಚ್ಚುತ್ತಿರುವ ದೃಶ್ಯಗಳನ್ನು ಸುದ್ದಿ ಸಂಸ್ಥೆ ಅಲ್ ಜಝೀರಾ ಪ್ರಕಟಿಸಿದೆ.

ಒತ್ತೆಯಾಳುಗಳ ಮೃತದೇಹ ಹಸ್ತಾಂತರಿಸಿದ ಹಮಾಸ್ 

ಅಲ್‌-ಜಝೀರಾ ವರದಿಯ ಪ್ರಕಾರ, ಬುಧವಾರ ಹಮಾಸ್ ನಾಲ್ವರು ಇಸ್ರೇಲಿ ಒತ್ತೆಯಾಳುಗಳ ಮೃತದೇಹವನ್ನು ಹಸ್ತಾಂತರಿಸಿದೆ. ಈ ಮೂಲಕ ಕದನ ವಿರಾಮದ ಬಳಿಕ ಹಸ್ತಾಂತರಿಸಿದ ಮೃತದೇಹಗಳ ಸಂಖ್ಯೆ 8ಕ್ಕೆ ಏರಿದೆ. ಇನ್ನೂ 20 ಒತ್ತೆಯಾಳುಗಳ ಮೃತದೇಹ ಹಮಾಸ್ ಬಳಿ ಇವೆ.

ಒಪ್ಪಂದ ಮುರಿದ ಇಸ್ರೇಲ್

ವರದಿಗಳ ಪ್ರಕಾರ, ಇಸ್ರೇಲ್ ಒಪ್ಪಿಕೊಂಡ ಸಂಖ್ಯೆಯ ಅರ್ಧದಷ್ಟು ನೆರವು ಟ್ರಕ್‌ಗಳನ್ನು ಗಾಝಾಕ್ಕೆ ಅನುಮತಿಸುವುದಾಗಿ ಹೇಳುತ್ತಿದೆ. ಒತ್ತೆಯಾಳುಗಳ ಮೃತದೇಹ ಹಸ್ತಾಂತರಿಸುವಲ್ಲಿ ವಿಳಂಬವನ್ನು ಉಲ್ಲೇಖಿಸಿ ರಫಾ ಕ್ರಾಸಿಂಗ್ ತೆರೆಯುವುದನ್ನು ತಡ ಮಾಡಿದೆ.

ಕದನ ವಿರಾಮ ಒಪ್ಪಂದದಲ್ಲಿ ಹೇಳಿದಷ್ಟು ನೆರವು ಟ್ರಕ್‌ಗಳನ್ನು ಮೊದಲ ದಿನ ಇಸ್ರೇಲ್‌ ಗಾಝದೊಳಗೆ ಬಿಟ್ಟಿಲ್ಲ. ವಿಶ್ವ ಆಹಾರ ಕಾರ್ಯಕ್ರಮದ ಮೂಲಕ 137 ನೆರವು ಟ್ರಕ್‌ಗಳು ಗಾಝಾ ಪಟ್ಟಿ ತಲುಪಿವೆ. ಆ ಟ್ರಕ್‌ಗಳಲ್ಲಿ ಹೆಚ್ಚಿನವು ಹಿಟ್ಟು ಮತ್ತು ಅತ್ಯಂತ ಅಗತ್ಯವಾದ ಸಾಮಗ್ರಿಗಳಿಂದ ತುಂಬಿದ್ದವು. ಇದರಿಂದ ಕನಿಷ್ಠ ಮೂರು ತಿಂಗಳ ಕಾಲ ಪ್ಯಾಲೆಸ್ತೀನಿಯರು ಜೀವಿಸಬಹುದು ಎಂದು ವರದಿಗಳು ಹೇಳಿವೆ.

ಪ್ರಸ್ತುತ, ಗಾಝಾದ ನೆಲದ ಮೇಲಿನ ಪರಿಸ್ಥಿತಿ ಶಾಂತವಾಗಿದೆ. ಒಪ್ಪಂದಂತೆ ಇಸ್ರೇಲ್ ಎಲ್ಲಾ ನೆರವು ಟ್ರಕ್‌ಗಳನ್ನು ಗಾಝಾದ ಒಳಗೆ ಬಿಡಬೇಕು ಎಂದು ಪ್ಯಾಲೆಸ್ತೀನಿಯರು ನಿರೀಕ್ಷಿಸುತ್ತಿದ್ದಾರೆ. ಆದರೆ, ಒತ್ತೆಯಾಳುಗಳ ಎಲ್ಲಾ ಮೃತದೇಹಗಳನ್ನು ಹಸ್ತಾಂತರಿಸಿದ ಬಳಿಕ ಇಸ್ರೇಲ್ ಬದ್ದತೆ ಬದಲಾಯಿಸುವ ಆತಂಕವಿದೆ.

ಹಮಾಸ್‌ಗೆ ಎಚ್ಚರಿಕೆ ಕೊಟ್ಟ ಟ್ರಂಪ್ 

ಶಸ್ತ್ರಾಸ್ತ್ರ ತ್ಯಜಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್ ಕರೆ ಕೊಟ್ಟಿದ್ದಾರೆ. ನೀವು ತ್ಯಜಿಸದಿದ್ದರೆ, ನಾನು ತ್ಯಜಿಸುವಂತೆ ಮಾಡುತ್ತೇವೆ, ಅದೂ ಕೂಡ ತ್ವರಿತವಾಗಿ, ಬಹುಶಃ ಹಿಂಸಾತ್ಮಕವಾಗಿ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

9 ಜನರನ್ನು ಹತ್ಯೆಗೈದ ಇಸ್ರೇಲ್ 

ಕದನ ವಿರಾಮ ಸಂಪೂರ್ಣ ಜಾರಿಯಾಗಿ ಒತ್ತೆಯಾಳುಗಳು, ಬಂಧಿತರ ಹಸ್ತಾಂತರ ಬಹುತೇಕ ಪೂರ್ಣಗೊಳ್ಳುತ್ತಿದ್ದರೂ, ಇಸ್ರೇಲ್ ಮಂಗಳವಾರ 9 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ವರದಿಗಳು ಹೇಳಿವೆ. ಹಾಗಾಗಿ, ಇಸ್ರೇಲ್ ಮತ್ತೆ ಕದನ ವಿರಾಮ ಮುರಿದಿದೆ ಎನ್ನಲಾಗಿದೆ. ಹಮಾಸ್ ಒತ್ತೆಯಾಳುಗಳ ಮೃತದೇಹಗಳನ್ನು ಸಂಪೂರ್ಣವಾಗಿ ಹಸ್ತಾಂತರಿಸಿದ ಬಳಿಕ ಇಸ್ರೇಲ್ ಕದನ ವಿರಾಮ ಒಪ್ಪಂದಕ್ಕೆ ಬದ್ದವಾಗಿ ಇರುತ್ತದೆಯೇ? ಎಂಬ ಪ್ರಶ್ನೆ ಈಗ ಮೂಡಿದೆ.

ಗಾಝಾ ಕದನ ವಿರಾಮ: ಚಿವುಟಿ ತೊಟ್ಟಿಲು ತೂಗಿದ ಟ್ರಂಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...