Homeಅಂಕಣಗಳುಗಾಂಧೀಜಿ ಪೋಟೊ ಜೊತೆಗೆ ಸಾವರ್ಕರ್ ಇರುವುದು ಸರಿ!

ಗಾಂಧೀಜಿ ಪೋಟೊ ಜೊತೆಗೆ ಸಾವರ್ಕರ್ ಇರುವುದು ಸರಿ!

- Advertisement -
- Advertisement -

ಸರಕಾರದ ಸಾಧನೆಯ ಪಟ್ಟಿ ಮುಂದಿಟ್ಟು ಮತ ಕೇಳಿ ಎಂದು ಜೆ.ಪಿ ನಡ್ಡಾ ಬಿಜೆಪಿ ಕಾರ್ಯಕರ್ತರಿಗೆ ತಾಕೀತು ಮಾಡಿದರಂತಲ್ಲಾ. ಆ ಕೂಡಲೇ ಬಿಜೆಪಿಯ ಉಗ್ರ ಕಾರ್ಯಕರ್ತರಿಗೆ ಕಾಣಿಸಿದ ಸಾಧನೆಗಳಾವುವೆಂದರೆ ಬೊಮ್ಮಾಯಿ ಮುಖ್ಯಮಂತ್ರಿಯಾದ ಕೂಡಲೇ ಮುಸ್ಲಿಂ ಹುಡುಗಿಯರ ಹಿಜಾಬು ತೆಗೆಸಲು ಹೋರಾಡಿದ್ದು. ನಂತರ ಮುಸ್ಲಿಮರು ಜಾತ್ರೆ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡದಂತೆ ದಾಳಿ ಮಾಡಿ, ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಒಡೆದು ತುಳಿದು ನಾಶಮಾಡಿದ್ದು. ಅಲ್ಲದೆ ಮುಸಲ್ಮಾನರ ಅಂಗಡಿಯಲ್ಲಿ ಮಾಂಸ ತಂದು ತಿನ್ನಬೇಡಿರೆಂದು ಕಾಳಿಸ್ವಾಮಿ ಎಂಬುವವ ಕೋಳಿಸ್ಟಾಲ್ ಮಾಡಿದ್ದು. ಇನ್ನ ಗೋಳವಲಕರ ಅರ್ಥ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹಿಂದುಳಿದ ವರ್ಗದ ಹುಡುಗರ ಹಾಸ್ಟಲು ಫೀಜು ಬಂದ್ ಮಾಡಿದ್ದು. ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದ್ದು. ಕಬ್ಬಿನ ಬೆಂಬಲ ಬೆಲೆ ನೀಡಲಾಗದ ರೈತರ ಕಡೆ ತಿರುಗಿ ನೋಡದೆ ಇದ್ದದ್ದು. ಬೆಂಗಳೂರಲ್ಲಿ ಗುಂಡಿ ಬಿದ್ದ ಗುಂಡಿಗೆ ಬಿದ್ದು ಹಲವು ಜನ ಪ್ರಾಣ ಕಳೆದುಕೊಂಡದ್ದು. ಗುಂಡಿ ಮುಚ್ಚುವ ಪರ್ಸೆಂಟೇಜಿಗಾಗಿ ಜಗಳವಾಡುತ್ತ ಕೂತಿದ್ದು. ಇನ್ನ ನಲವತ್ತು ಪರಸೆಂಟ್ ಗಲಾಟೆಯಲ್ಲಿ ಮಂತ್ರಿಗಿರಿ ಕಳೆದುಕೊಂಡ ಈಶ್ವರಪ್ಪನ ನೇತೃತ್ವದಲ್ಲಿ ಮುಸ್ಲಿಮರ ಕೇರಿಗೆ ನುಗ್ಗಿ ಎಸ್ಪಿ, ಡಿ.ಸಿ, ತಹಸೀಲ್ದಾರ, ಎಂ.ಪಿ ನೇತೃತ್ವದಲ್ಲಿ ಅವರ ಜೀವನೋಪಾಯದ ಪದಾರ್ಥಗಳನ್ನು ಬೀದಿಗೆ ಎಸೆದು ಭಯೋತ್ಪಾದನೆ ಮಾಡಿದ್ದು. ಇವೆಲ್ಲಾ ಬಿಜೆಪಿಗಳ ಸಾಧನೆಯಾಗಿ ಇದನ್ನೇ ಹೇಳಿಕೊಂಡು ಮತ ಕೇಳಲು ತಯಾರಾದ ಅವರುಗಳ ತಲೆಗೆ ಒಳ್ಳೆಯ ಕೆಲಸಗಳೇ ಕಾಣಲಿಲ್ಲವಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಎಲ್ಲ ವಿಧಾನಸಭಾ ಸದಸ್ಯರಿಗೆ ಬೆಳಗಾವಿ ಅಧಿವೇಶನವೆಂದರೆ ವಿದ್ಯೆ ಕಲಿಯಲು ಇಷ್ಟವಿಲ್ಲದ ಹುಡುಗರು ಸ್ಕೂಲಿಗೆ ಹೋದ ರೀತಿಯಂತಲ್ಲಾ. ಏಕೆಂದರೆ ಅಧಿವೇಶನಗಳು ಅರ್ಥ ಕಳೆದುಕೊಂಡಿವೆ. ಅಲ್ಲಿ ಯಾರಾದರೂ ಎದ್ದುನಿಂತು ಮಾತನಾಡಿದರೆ ಕೇಳಿಸಿಕೊಳ್ಳಬೇಕಿನಿಸುವುದಿಲ್ಲ; ಗೈರುಹಾಜರಾದರೆ, ಗೋವಾಕ್ಕೆ ಹೋಗಬೇಕಿನಿಸುತ್ತದೆ. ಕೊಠಡಿಯಲ್ಲೇ ಇರಲು ಬೇಜಾರು. ಎಲ್ಲಾದರೂ ಹೋಗೋಣವೆಂದರೆ ತಾಜ್‌ವೆಸ್ಟ್ ಹೋಟಲಿನಂತವೂ ಇಲ್ಲ. ಹೀಗಾಗಿ ಬಿಜೆಪಿಗಳು ಸದನವನ್ನೇ ಗಬ್ಬೆಬ್ಬಿಸುವ ಪ್ಲಾನ್ ಮಾಡಿ ಸಾವರ್ಕರ್‌ನ ಫೋಟೋವನ್ನು ಮುಖ್ಯಮಂತ್ರಿಗೂ ಗೊತ್ತಿಲ್ಲದೆ ಅಳವಡಿಸುವ ಸಂಚು ರೂಪಿಸಿದರಂತಲ್ಲಾ. ಅಲ್ಲಿಗೆ ಇದು ಆರೆಸ್ಸೆಸ್ ಕಾರ್ಯಕ್ರಮದಂತೆ ಕಂಡು ಕಾಂಗೈಗಳು ಸಾವರ್ಕರ್‌ನ ಜೊತೆಗೆ ಅಥವ ಬದಲಿಗೆ ಇನ್ನಿತರ ಕನ್ನಡದ ಸಾಂಸ್ಕೃತಿಕ ನಾಯಕರ ಫೋಟೋನೂ ಮಡಗಿ ಎಂದು ಸುವರ್ಣಸೌಧದ ಮೆಟ್ಟಿಲ ಮೇಲೆ ಕುಳಿತರಂತಲ್ಲಾ. ಇದನ್ನ ಕಂಡ ಬಿಜೆಪಿಗಳು ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಕರಿನೀರ ಶಿಕ್ಷೆಗೆ ಗುರಿಯಾದವರು. ಗಾಂಧಿ ಕೊಂದವರೆಂದು ನೀವೇ ಆಪಾದಿಸುತ್ತಿದ್ದೀರಿ; ಗಾಂಧಿ ಕೊಲ್ಲಲು ಪಿಸ್ತೂಲು ಕೊಟ್ಟವರು ಸಾವರ್ಕರ್ ಎಂದು ಇತ್ತೀಚೆಗೆ ಗಾಂಧೀಜಿ ಮರಿಮಗ ಹೇಳಿದ್ದಾರೆ. ನಮ್ಮ ಪುರಾಣದಲ್ಲಿ ಕೊಂದವರು ಕೊಲ್ಲಿಸಿಕೊಂಡವರನ್ನು ನೆನೆಸುತ್ತ ಬಂದಿದ್ದೇವೆ. ಉದಾಹರಣೆ ಬೇಕಾದಷ್ಟಿವೆ. ರಾಮ-ರಾವಣ, ಕೃಷ್ಣ-ಕಂಸ, ನರಸಿಂಹ-ಹಿರಣ್ಯಕಶಿಪು ಹೀಗೆ. ಆದ್ದರಿಂದ ಗಾಂಧಿ ಫೋಟೋ ಸುವರ್ಣ ಸೌಧದಲ್ಲಿರುವುದಾದರೆ ಪಕ್ಕದಲ್ಲಿ ಸಾವರ್ಕರ್ ಫೋಟೋ ಇರುವುದು ಸತ್ಯ. ಓಂ ಶಾಂತಿ ಶಾಂತಿ ಶಾಂತಿ ಎಂದವಂತಲ್ಲಾ, ಥೂತ್ತೇರಿ.

*****

ಹದಿನೈದು ಲಕ್ಷ ಮತದಾರರನ್ನು ಡಿಲೀಟ್ ಮಾಡಿಸಿದ ಆರೋಪ ಎದುರಿಸುತ್ತಿರುವ ಸರಕಾರ ಈ ಕೃತ್ಯ ವ್ಯಾಪಕವಾಗಿ ಪ್ರಚಾರವಾಗದಂತೆ ತಡೆಯಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಬ್ಲಾಸ್ಟು ಮಾಡಿ ಎಂದು ಟಿವಿಯವರಿಗೆ ಸೂಚನೆ ಕೊಟ್ಟ ಕೂಡಲೇ ಮಾರಿಕೊಂಡ ಮಾಧ್ಯಮದವರು ಮತದಾರರು ಕಾಣೆಯಾಗಿರುವ ಪ್ರಕರಣವನ್ನೇ ಮರೆಯಾಗುವಂತೆ ಮಾಡಿದರು ಎಂದು ಡಿ.ಕೆ.ಶಿ ಆಪಾದನೆ ಮಾಡಿದರಂತಲ್ಲ. ಹಾಗಂದ ಕೂಡಲೇ ಅವರ ಮೇಲೆ ಇ.ಡಿ ದಾಳಿ ನಡೆಯಿತು. ಈಗ ಸರಕಾರದ ಸಂಪೂರ್ಣ ವೈಫಲ್ಯ ಮುಚ್ಚಲು ಸಾವರ್ಕರ್‌ನ ಮೊರೆ ಹೋಗಿರುವ ಸರಕಾರ ಆರೆಸ್ಸೆಸ್ ಸೂಚನೆಯಂತೆ ಆತನ ಭಾವಚಿತ್ರವನ್ನು ಸುವರ್ಣಸೌಧದದಲ್ಲಿ ಅಳವಡಿಸಲು ಸಂಚು ರೂಪಿಸಿದೆಯಂತಲ್ಲಾ. ಇದರಲ್ಲಿ ಅವರು ಗೆದ್ದರೆ ಮುಂದಿನ ಅಧಿವೇಶನಕ್ಕೆ ಸಾವರ್ಕರ್‌ನ ಪಕ್ಕಕ್ಕೆ ಗೋಳವಲಕರನ ಫೋಟೋ ಬರುತ್ತೆ ನಂತರ ಹೆಡಗೆವಾರನ ಚಿತ್ರ ತೂಗುಬೀಳುತ್ತೆ. ಆ ನಂತರ ರೈಲ್ವೆ ಭೋಗಿ ಮೇಲಿರುವ ದೀನದಯಾಳರ ಭಾವಚಿತ್ರ ವಿರಾಜಮಾನವಾಗುತ್ತೆ. ಹಾಲಿ ಸದಸ್ಯರೆಲ್ಲಾ ಅಸ್ತಂಗತರಾದ ಮೇಲೆ ಸುವರ್ಣಸೌಧದ ಗೋಡೆ ಮೇಲೆ ಎಡೂರಪ್ಪ, ಜೋಷಿ, ಸಿ.ಟಿ ರವಿ, ರೇಣುಕಾಚಾರ್ಯ, ಈಶ್ವರಪ್ಪ ಸರದಿಯೂ ಬರಬಹುದು. ಅಷ್ಟಕ್ಕೂ ಸಾವರ್ಕರ್ ಸುವರ್ಣ ಸಂಸ್ಕೃತಿ ಭವನ ಹೊಕ್ಕಿದ್ದು ಈಶ್ವರಪ್ಪರ ಸಾಧನೆಯಿಂದ. ಶಿವಮೊಗ್ಗದ ಮಾರ್ಕೆಟ್‌ನಲ್ಲಿ ನಿಲ್ಲಿಸಿದ್ದ ಸಾವರ್ಕರ್‌ನ ಫೋಟೋವನ್ನು ಯಾರೋ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಕಿತ್ತೆಸೆದ. ಅಷ್ಟು ಸಾಕಿತ್ತು ಮಂತ್ರಿಗಿರಿ ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಈಶ್ವರಪ್ಪರಿಗೆ. ಕೂಡಲೇ ತರತರದ ಕಾರ್ಯಕ್ರಮಗಳನ್ನು ಮಾಡಿ ಸಾವರ್ಕರ್‌ನನ್ನು ಮೆರೆಸಿದರು. ಅಂತಹ ವ್ಯಕ್ತಿ ಈಗ ಸದನಕ್ಕೆ ಹೋಗದೆ ಜಾರಕಿಹೊಳಿ ಮನೆಯಲ್ಲಿ ಜಾಲಿಯಾಗಿ ಕಾಲ ಕಳೆದದ್ದು ಇತಿಹಾಸದ ವ್ಯಂಗ್ಯವಂತಲ್ಲಾ, ಥೂತ್ತೇರಿ.

*****

ನಮ್ಮ ಹಿರಿಯ ಚೇತನಗಳಾದ ಶ್ರೀನಿವಾಸ್ ಪ್ರಸಾದ್ ಮತ್ತು ವಿಶ್ವನಾಥ್ ಹರಿಯ ಮುರಿಯ ಜಗಳಕ್ಕೆ ಬಿದ್ದಿದ್ದಾರಲ್ಲಾ. ಹಳ್ಳಿಯ ಕಡೆ ಒಂದು ಗಾದೆಯಿದೆ. ’ತಿರಿಯಲು ಬಂದು ಕೇರಿಯಲ್ಲಿ ಜಗಳಕ್ಕೆ ಬಿದ್ದರು’ ಅಂತ. ಪ್ರಸಾದ್ ಮತ್ತು ವಿಶ್ವನಾಥ್ ತಿರಿಯಲು ಬಂದಿದ್ದು ಬಿಜೆಪಿ ಕೇರಿಯಲ್ಲಿ. ಅದವರ ಕೇರಿಯಲ್ಲ. ಅವರು ಬಂದಿದ್ದು ಕಾಂಗ್ರೆಸ್ ಕೇರಿಯಿಂದ. ಅವರಿಬ್ಬರೂ ಬಿಜೆಪಿಗೆ ಬಂದಿದ್ದು ಒಂದೇ ಕಾರಣದಿಂದ. ಪ್ರಸಾದ್ ಸಿದ್ದರಾಮಯ್ಯಗೆ ತಾಕೀತು ಮಾಡಿ ರೆವಿನ್ಯೂ ಮಂತ್ರಿಯಾದ ಕೂಡಲೇ ವೀಕ್ ಆದರು. ವಿಶ್ವನಾಥ್ ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂದು ಸೋನಿಯಾಗಾಂಧಿಗೆ ’ಸಿದ್ದು ಭ್ರಷ್ಟ, ಬದಲಾಯಿಸಿ’ ಎಂದು ದೂರು ಬರೆಯುತ್ತ ಕುಳಿತರು. ಈ ಇಬ್ಬರ ಚಟುವಟಿಕೆಯನ್ನು ನೋಡಿದ ಸಿದ್ದು ಇಬ್ಬರೂ ಕಾಂಗ್ರೆಸ್ ಬಿಟ್ಟುಹೋಗುವಂತೆ ಮಾಡಿದರು. ಸಮಾನ ಸಂತ್ರಸ್ತರಾದ ಇಬ್ಬರಿಗೂ ಬಿಜೆಪಿ ಅನ್ಯಾಯ ಮಾಡಲಿಲ್ಲ. ಒಬ್ಬರನ್ನು ಸಂಸದರನ್ನಾಗಿಸಿತು, ಮತ್ತೊಬ್ಬರನ್ನು ಎಮ್ಮೆಲ್ಸಿ ಮಾಡಿತು. ರಾಜಕಾರಣದ ಅಂಚಿಗೆ ಸರಿದಿರುವ ಶ್ರೀನಿವಾಸ ಪ್ರಸಾದ್ ನಿವೃತ್ತಿ ಅಂಚಿನಲ್ಲಿದ್ದರೆ, ವಿಶ್ವನಾಥ್ ಕಾಂಗ್ರೆಸ್ ಕೇರಿಗೆ ಬಂದು ಇನ್ನೊಂದು ಚಾನ್ಸಿಗೆ ಅಡಿಪಾಯ ಹಾಕುತ್ತಿದ್ದಾರೆ. ಪ್ರಸಾದ್, ವಿಶ್ವನಾಥರನ್ನ ಮೂದಲಿಸಿ ಅಲೆಮಾರಿ ಎಂದುಬಿಟ್ಟಿದ್ದಾರಲ್ಲಾ. ಸಾಮಾನ್ಯವಾಗಿ ಪಕ್ಷದಿಂದ ಪಕ್ಷಕ್ಕೆ ಅಲೆಯುವ ಒಬ್ಬ ಅಲೆಮಾರಿಯನ್ನು ಕಂಡ ಇನ್ನೊಬ್ಬ ಅಲೆಮಾರಿಗೆ ಆಗುವುದಿಲ್ಲವಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...