Homeಎಲೆಮರೆಜೀತಕ್ಕಿದ್ದ ಜೇನುಕುರುಬರ ಸೋಮಣ್ಣರ ಪಾರಂಪರಿಕ ಜ್ಞಾನದ ಕಣಜ ಕಂಡರೆ ಬೆರಗಾಗುತ್ತೀರಿ!

ಜೀತಕ್ಕಿದ್ದ ಜೇನುಕುರುಬರ ಸೋಮಣ್ಣರ ಪಾರಂಪರಿಕ ಜ್ಞಾನದ ಕಣಜ ಕಂಡರೆ ಬೆರಗಾಗುತ್ತೀರಿ!

ಸೋಮಣ್ಣನಿಗೆ 2016 ರಲ್ಲಿ ಮೊದಲಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ರಿ ಘೋಷಣೆಯಾಗಿ, ಎರಡನೆ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಹೀಗಾಗಿ ಜನಪರ ಚಿಂತಕರು ಸೋಮಣ್ಣನ ಹಾಡಿಗೆ ಹೋಗಿ `ಜನರಾಜ್ಯೋತ್ಸವ’ಪ್ರಶಸ್ತಿ ಪ್ರದಾನ ಮಾಡಿದ್ದರು.

- Advertisement -
- Advertisement -

ಎಲೆಮರೆ – 9

ಅರುಣ್ ಜೋಳದಕೂಡ್ಲಿಗಿ

ಹೆಗ್ಗಡದೇವನಕೋಟೆ ಸಮೀಪದ ಮೊತ್ತಹಾಡಿ ಜೇನುಕುರುಬರ ಹಾಡಿ. ಅಲ್ಲಿ ತನ್ನದೇ ಸಮುದಾಯಕ್ಕಾಗಿ ಹೋರಾಟ ರೂಪಿಸಿದ, ಬುಡಕಟ್ಟು ಪರಂಪರೆಯ ಅಪಾರ ಜ್ಞಾನ ಹೊಂದಿದ ಸೋಮಣ್ಣ ಇಂದಿಗೂ ತನ್ನ ಸಮುದಾಯದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಜೇನುಕುರುಬರ ಸೋಮಣ್ಣನ ಬದುಕಿನ ಪಯಣ ತ್ರಾಸದಾಯಕವಾದದ್ದು. 1957 ರಲ್ಲಿ ಜನಿಸಿದ ಸೋಮಣ್ಣ ಸಾಂಪ್ರದಾಯಕ ಶಿಕ್ಷಣ ಪಡೆಯದೆ, ಮನೆಯನ್ನು ಮುತ್ತಿದ್ದ ಬಡತನದ ಬೆಂಕಿಯಲ್ಲಿ ಅರಳಿ ಬಂದದ್ದೇ ಒಂದು ಸಾಹಸ. ತಂದೆ ಕುನ್ನಯ್ಯನಿಗಿದ್ದ ಪಾರಂಪರಿಕ ಜ್ಞಾನವನ್ನು ಜತನದಿಂದ ಕಲಿತ ಸೋಮಣ್ಣ ಕಾಡುಬದುಕಿನ ಎಲ್ಲಾ ಬಗೆಯ ತಿಳಿವು, ಅರಿವುಗಳನ್ನು ಪಡೆಯುತ್ತಲೇ ಪಾರಂಪರಿಕ ಜ್ಞಾನದ ಕಣಜವಾದದ್ದೊಂದು ಸಾಹಸದ ಪಯಣ. ಬಡತನದ ಕಾರಣಕ್ಕೆ ಸ್ಥಳೀಯ ಜಮೀನ್ದಾರರಲ್ಲಿ ಜೀತಕ್ಕಿದ್ದ ಸೋಮಣ್ಣ 1976ರಲ್ಲಿ ಜೀತಕಾರ್ಮಿಕ ವ್ಯವಸ್ಥೆ (ನಿಷೇಧ) ಕಾಯ್ದೆ ಜಾರಿಗೆ ಬಂದಾಗ ಇದರಿಂದ ಮುಕ್ತಿ ಪಡೆದರು. ಆಗ ಸೋಮಣ್ಣಗೆ 19 ವರ್ಷ. ಸೋಮಣ್ಣನಿಗೆ ಸಿಕ್ಕ ಈ ಬಗೆಯ ವೈಯಕ್ತಿಕ ಮುಕ್ತಿಯು ಸಮುದಾಯದ ಮುಕ್ತಿಯೆಡೆಗೆ ಸೆಳೆಯಿತು. ತನ್ನ ಒಡನಾಡಿ ಬಂಧುಗಳಾದ ಬುಡಕಟ್ಟು ಸಮುದಾಯದ ಅಸಂಖ್ಯಾತ ಜನ ಸಂಕಷ್ಟದಲ್ಲಿರುವುದು ಅರಿವಿಗೆ ಬಂತು.

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಾಗ, ತಮ್ಮ ಸುತ್ತಮುತ್ತಲಿನ ನೂರಾರು ಬುಡಕಟ್ಟು ಕಾಲನಿಗಳು ಸ್ಥಳಾಂತರಗೊಂಡು ಅನಾಥಪ್ರಜ್ಞೆಯಲ್ಲಿ ಬದುಕಿದ್ದನ್ನೂ, 1974ರಲ್ಲಿ ಕಬಿನಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ, ದೊಡ್ಡ ಪ್ರಮಾಣದಲ್ಲಿ ಅರಣ್ಯಭೂಮಿ ನಾಶವಾದದ್ದನ್ನೂ ಸೋಮಣ್ಣ ಸ್ವತಃ ನೋಡಿದ್ದರು. ಇದರಿಂದ ಕೇವಲ ನೈಸರ್ಗಿಕ ಅರಣ್ಯ ಮಾತ್ರ ನಾಶವಾಗುವುದಲ್ಲ; ಬದಲಾಗಿ ಬುಡಕಟ್ಟು ಜನರ ಜೀವನ, ಸಂಸ್ಕೃತಿ ಹಾಗೂ ಜ್ಞಾನವೂ ನಾಶವಾಗುತ್ತದೆ ಎನ್ನುವುದನ್ನು ತನ್ನ ಸಮುದಾಯಕ್ಕೆ ಸೋಮಣ್ಣ ಮನವರಿಕೆ ಮಾಡಿಕೊಡತೊಡಗಿದರು.

ಇಂತಹ ಹಾದಿಯಲ್ಲಿ ಸೋಮಣ್ಣನಿಗೆ ತನ್ನವರಿಗೆ ಭೂಮಿ ಸಿಕ್ಕರೆ ಇನ್ನೊಬ್ಬರ ಆಶ್ರಯವಿಲ್ಲದೆ ಬದುಕುತ್ತಾರೆ ಎಂಬ ಕನಸು ಚಿಗುರೊಡೆಯಿತು. ಈ ಕನಸಿನ ಜಾಡುಹಿಡಿದು ಕಳೆದ ಮೂರ್ನಾಲ್ಕು ದಶಕಗಳಿಂದ ಸೋಮಣ್ಣ ಭೂರಹಿತ ಆದಿವಾಸಿಗಳನ್ನು ಒಗ್ಗೂಡಿಸಿದ್ದಾರೆ. ಅಂತೆಯೇ ಸ್ಥಳೀಯ ಚಳವಳಿಗಳ ಸಂಗಾತಿಗಳ ಜೊತೆಗೂಡಿ ಕೂಡುಹೋರಾಟ ಕಟ್ಟಿದ್ದಾರೆ. ಇದರ ಫಲವಾಗಿ ಕಟ್ಟಿದ ರಾಜ್ಯ ಮೂಲನಿವಾಸಿ ವೇದಿಕೆಯ ಅಧ್ಯಕ್ಷನಾಗಿ ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ನಿರಂತರ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸರಿಸುಮಾರು ಆರು ಸಾವಿರ ಎಕರೆ ಕೃಷಿ ಭೂಮಿ ಸಿಗುವಂತೆ ಮಾಡಿದ್ದಾರೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆದ್ದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳವಳಿಗಳನ್ನು ರೂಪಿಸಿದ್ದಾರೆ. ಹೀಗಾಗಿ ಆದಿವಾಸಿಗಳು ಆತಂಕಕ್ಕೆ ಒಳಗಾದಾಗಲೆಲ್ಲಾ ಅವರುಗಳು ಎದೆಗುಂದಿ ತತ್ತರಿಸಿದಾಗಲೆಲ್ಲಾ ಸೋಮಣ್ಣ ಆದಿವಾಸಿಗಳ ಎಂದೂ ಜತೆಗಾರನಾಗಿ ಶಕ್ತಿ ತುಂಬಿದ್ದಾರೆ.

`ಸೋಮಣ್ಣ ಆದಿವಾಸಿಗಳ ಅಖಂಡ ಪ್ರಜ್ಞೆ, ಹರಿತ ಮುನ್ನೋಟ, ಜಟಿಲ ಮನಸ್ಥಿತಿ ಮತ್ತು ತಪ್ತ ಅಂತರಾಳಗಳನ್ನು ಏಕೀಭವಿಸಿದಂತಿದ್ದಾನೆ. ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಇವರನ್ನು ದಿಕ್ಕಾಪಾಲಾಗಿಸಿವೆ. ಸ್ಥಳೀಯ ಅಧಿಕಾರಸ್ಥ ಸಮುದಾಯಗಳು, ಯಾವ ಒಳನೋಟಗಳು ಇಲ್ಲದ ಸರಕಾರಗಳು, ಎನ್‍ಜಿಓಗಳು ಯಾವೂ ಸೋಮಣ್ಣನ ತಾಯ್ನೆಲವನ್ನು ಆತನಿಗೆ ಉಳಿಸಿಕೊಟ್ಟಿಲ್ಲ’ ಎಂದು ಪ್ರೊ. ಎ.ಎಸ್.ಪ್ರಭಾಕರ್ ಅವರು ಹೇಳುತ್ತಾರೆ.

ಕಾಡುಬದುಕಿನ ಬಗ್ಗೆ ಸೋಮಣ್ಣನ ಮಾತುಗಳನ್ನು ಕೇಳಿಸಿಕೊಂಡರೆ, ಆತ ಆದಿವಾಸಿಗಳ ವಿಷಾದ ಮತ್ತು ಚಿಂತನೆಗಳ ಫಲವಾಗಿ ರೂಪುಗೊಂಡ ಅನುಭಾವಿಯಂತೆ ಕಾಣುತ್ತಾನೆ. ಸರಿಸುಮಾರು ಅರ್ಧ ಶತಮಾನದಿಂದ ಅರಣ್ಯ ಮತ್ತು ಆದಿವಾಸಿಗಳ ಮೇಲೆ ಕಣ್ಣೆದುರು ನಡೆದ ಮತ್ತು ನಡೆಯುತ್ತಲೇ ಇರುವ ‘ನಾಗರಿಕ’ ಜಗತ್ತಿನ ಕ್ರೌರ್ಯವನ್ನು ಆತ ತನ್ನ ಮುಗುಳ್ನಗೆಯಿಂದಲೇ ಎದುರಿಸಿದ್ದಾನೆ. ತನ್ನ ಮೂಲ ನೆಲೆ, ದೈವ, ತನ್ನ ಹಿರೀಕರ ಆತ್ಮಗಳು, ಒಡನಾಡಿದ್ದ ಮರ ಗಿಡ ಹೂವುಗಳು, ಸಹಜೀವನ ನಡೆಸಿದ್ದ ಕಾಡುಪ್ರಾಣಿಗಳು ಇವ್ಯಾವು ಈಗ ಸೋಮಣ್ಣನ ಜೊತೆಗಿಲ್ಲ. ಪ್ರಭುತ್ವ ಈತನನ್ನು ವಂಚಿಸಿದೆ. ದಿಕ್ಕಾಪಾಲಾದ ಆದಿವಾಸಿಗಳು ಕಾಡಂಚಿನ ಪುಟ್ಟ ಜಾಗಗಳಲ್ಲಿ, ನಗರಗಳ ಕೊಳಗೇರಿಗಳಲ್ಲಿ ಬದುಕುತ್ತಿದ್ದಾರೆ. ಒಕ್ಕಲೇಳುವಾಗ ಪ್ರಭುತ್ವ ಕೊಟ್ಟ ಭರವಸೆಗಳು ಭ್ರಮೆಗಳಾಗಿ ಹೋಗಿವೆ. ಪ್ರಾಣಿಗಳೂ ವಾಸಿಸಲು ಯೋಗ್ಯವಾಗಿಲ್ಲದ ಸ್ಥಳಗಳಲ್ಲಿ ಆದಿವಾಸಿಗಳು ಬದುಕುತ್ತಿದ್ದಾರೆ. ಆದಿವಾಸಿಗಳಿಂದ ಎಲ್ಲವನ್ನೂ ಕಿತ್ತುಕೊಂಡು ಪ್ರಭುತ್ವ ಈ ಸಮುದಾಯಗಳನ್ನು ವಂಚಿಸುತ್ತಲೇ ಬಂದಿದೆ. ಇಂದೂ ಸಹ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಂತೆ ಮಾಡಿ ಸೋಮಣ್ಣನಿಗೆ ವಂಚನೆ ಮಾಡಲಾಗಿದೆ. ಇದು ಕೇವಲ ಸೋಮಣ್ಣನಿಗೆ ಆದ ವಂಚನೆಯಲ್ಲ. ಕರ್ನಾಟಕದ ಆದಿವಾಸಿ ಸಮುದಾಯಗಳಿಗೆ ಆದ ವಂಚನೆಯೇ ಆಗಿದೆ.

ಸೋಮಣ್ಣನಿಗೆ 2016 ರಲ್ಲಿ ಮೊದಲಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ರಿ ಘೋಷಣೆಯಾಗಿ, ಎರಡನೆ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಹೀಗಾಗಿ ಜನಪರ ಚಿಂತಕರು ಸೋಮಣ್ಣನ ಹಾಡಿಗೆ ಹೋಗಿ `ಜನರಾಜ್ಯೋತ್ಸವ’ಪ್ರಶಸ್ತಿ ಪ್ರದಾನ ಮಾಡಿದ್ದರು. ಆಗ ಪ್ರಶಸ್ತಿ ಪ್ರದಾನ ಮಾಡಿದ ದೇವನೂರ ಮಹಾದೇವ `ಇವತ್ತು ಅಂತಃಕರಣದ ಧ್ವನಿ ಮಾತಾಗಿದೆ, ಕರುಳಬಳ್ಳಿ ಸ್ಪಂದಿಸಿದೆ, ಅಂತಃಕರಣದ ಮಿಡಿತಕ್ಕೆ ಬೆಲೆ ಕಟ್ಟಲಾಗದು. ಮೂಲನಿವಾಸಿಗಳ ಉಸಿರಲ್ಲಿ ಮನುಕುಲದ ಉಸಿರಾಟ ಇದೆ, ಇಂತಹ ಬದುಕು ನಾಗರಿಕ ಜಗತ್ತಿನ ದಬ್ಬಾಳಿಕೆಗೆ ನಲುಗಿ ತತ್ತರಿಸಿದೆ. ಮೂಲನಿವಾಸಿಗಳು ಈ ನೆಲದ ಮಾಜಿ ಒಡೆಯರು. ಆದ್ದರಿಂದ ಆದಿವಾಸಿಗಳ ಇಂತಹ ಸಂಗತಿಗಳನ್ನು ಹುಡುಕಿ ಮತ್ತೆ ಬೀಜ ಬಿತ್ತಬೇಕಾಗಿದೆ. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಅಂತಃಕರಣದ ಸ್ನೇಹಿತರಂತ ನೂರು ಜನ ಈ ರಾಜ್ಯದಲ್ಕಿ ಸಿಕ್ಕಿದರೆ ಸಾಕು ನಾವು ನಮ್ಮ ಕನಸುಗಳನ್ನು ನನಸು ಮಾಡಬಹುದು’ ಎಂದಿದ್ದರು.

ಪ್ರಶಸ್ತಿ ಸ್ವೀಕರಿಸಿದ ಸೋಮಣ್ಣ `ವಿಶಾಲ ಮನಸಿನ ಜನರು ಇವತ್ತು ನನಗೆ ಪ್ರಶಸ್ತಿ ಕೊಟ್ಟಿದ್ದೀರ, ಸರ್ಕಾರ ಪ್ರಶಸ್ತಿ ಕೊಟ್ಟಿದ್ರೂ ಕೂಡ ಇಷ್ಟೊಂದು ಸಂತೋಷ ಆಗ್ತಿರ್ಲಿಲ್ಲ. ನೀವು ಕೊಟ್ಟಿರೋ ಪ್ರಶಸ್ತಿ ಸುಪ್ರೀಂಕೋರ್ಟ್ ತೀರ್ಪಿಗಿಂತಲೂ ದೊಡ್ಡದು. ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ, ರಾಜ್ಯದ ಮೂಲೆಮೂಲೆಯ ಜನರು ಬಂದು ಜಾತಿಧರ್ಮದ ಭೇದವಿಲ್ಲದೆ ನನ್ನನ್ನು ಕಂಡಿದಿರಲ್ವಾ ಇದಕ್ಕಿಂತ ಹೆಚ್ಚು ನನಗೇನು ಬೇಕು? ಎನ್ನುತ್ತಾ ಭಾವುಕರಾದರು. ಸೋಮಣ್ಣನಂತಹವರ ಹಕ್ಕೊತ್ತಾಯದ ಹೋರಾಟಗಳಿಗೆ ಜನಪರ ಚಳವಳಿಗಾರರು, ಅಧ್ಯಯನಕಾರರು, ಪತ್ರಕರ್ತರು, ಚಿಂತಕರು ಜೊತೆಯಾಗಿ ಬೆಂಬಲಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...