Homeನ್ಯಾಯ ಪಥಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-1)

- Advertisement -
- Advertisement -

ಜನರಲ್ ಎಪಾಂಚಿನ್‌ನ ಹೆಂಡತಿ ಸ್ವಭಾವತಃ ಸ್ವಾಭಿಮಾನಿ ಮತ್ತು ಹೆಮ್ಮೆಯ ಹೆಂಗಸು. ಅವಳ ವಂಶಾವಳಿಯ ಕಟ್ಟಕಡೆಯು ಕುಡಿ ಎನ್ನಲಾದ ಮೂಯಿಶ್ಕಿನ್ ಎಂಬುವವನೊಬ್ಬ ದರಿದ್ರನಾದ ಮೂರ್ಖ, ಮತ್ತು ಒಬ್ಬ ಭಿಕ್ಷಾಟನೆ ಮಾಡುವವನು ಎಂಬುದನ್ನ ತಿಳಿದಾಗ ಅವಳ ಭಾವನೆಗಳು ಯಾವ ರೀತಿಯದ್ದಾಗಿದ್ದಿರಬಹುದು? ಅವಳಲ್ಲಿ ಹೆಚ್ಚಿನ ಪರಿಣಾಮವನ್ನ ಉಂಟುಮಾಡಲಿ ಎಂದು ಆಶಿಸಿ ಈ ಎಲ್ಲಾ ವಿವರಗಳನ್ನೂ ಜನರಲ್ ಹೇಳಿದ್ದ! ಅವಳ ಗಮನವನ್ನ ಒಂದೇ ಏಟಿಗೆ ಬೇರೆ ಕಡೆಗೆ ತಿರುಗಿಸುವುದು ಅವನ ಉದ್ದೇಶವಾಗಿತ್ತು; ಅವಳ ಆಲೋಚನೆಗಳನ್ನ ಪ್ರಸಕ್ತ ಕೌಟುಂಬಿಕ ವಿಷಯಗಳಿಂದ ಬದಲಾಯಿಸುವುದೇ ಅವನಿಗೆ ಮುಖ್ಯವಾಗಿತ್ತು.

ಎಪಾಂಚಿನ್‌ನ ಹೆಂಡತಿ ಉತ್ಸಾಹಭರಿತಳಾದಾಗ ಏನನ್ನೂ ಮಾತನಾಡದೆ ನೆಟ್ಟಗೆ ನಿಂತುಕೊಂಡು, ತನ್ನ ಮುಂದಿರುವುದನ್ನು ದಿಟ್ಟಿಸಿ ನೋಡುವುದು ಅವಳ ಅಭ್ಯಾಸ.

ಅವಳೊಬ್ಬಳು ತನ್ನ ಗಂಡನಷ್ಟೇ ವಯಸ್ಸಿನ ಅತ್ಯುತ್ತಮವಾದ ಹೆಂಗಸು, ಅವಳ ಮೂಗು ಸ್ವಲ್ಪ ಗಿಣಿಯ ಮೂಗಿನಂತಿತ್ತು, ಎತ್ತರವಾಗಿದ್ದಳು, ಕಿರಿದಾದ ಹಣೆಯನ್ನ ಹೊಂದಿದ್ದಳು, ದಟ್ಟವಾದ ನರೆಯುತ್ತಿದ್ದ ಕೂದಲು, ಮತ್ತು ಸ್ವಲ್ಪ ಹಳದಿ ಮಿಶ್ರಿತ ಕಂದು ಮೈಬಣ್ಣ. ಅವಳ ಕಣ್ಣುಗಳು ಬೂದುಬಣ್ಣದ್ದಾಗಿದ್ದವು, ಮತ್ತು ಅವುಗಳಲ್ಲಿ ಕೆಲವು ಬಾರಿ ಕುತೂಹಲಕರವಾದ ಭಾವ ಮೂಡುತ್ತಿತ್ತು. ಅದು ಬಹಳ ಪರಿಣಾಮಕಾರಿ ಎಂದು ಅವಳು ನಂಬಿದ್ದಳು ಮತ್ತು ಆ ನಂಬಿಕೆಯನ್ನೂ ಯಾವುದರಿಂದಲೂ ಬದಲಿಸಲು ಸಾಧ್ಯವಿರಲಿಲ್ಲ.

“ಏನು, ಅವನನ್ನ ಬರಮಾಡಿಕೊ! ತಕ್ಷಣ ಬರಮಾಡಿಕೊಳ್ಳಬೆಕೇ?” ತನ್ನ ಮುಂದೆ ಚಡಪಡಿಸುತ್ತಾ ನಿಂತಿದ್ದ ತನ್ನ ಗಂಡನ ಕಡೆಗೆ ಅಸ್ಪಷ್ಟತೆಯಿಂದ ನೋಡುತ್ತಾ ಎಪಾಂಚಿನ್‌ನ ಹೆಂಡತಿ ಕೇಳಿದಳು.

“ಓ ನನ್ನ ಪ್ರೀತಿ ಪಾತ್ರಳೆ ಅವನ ಜೊತೆಯಲ್ಲಿ ನೀನು ಯಾವುದೇ ರೀತಿಯ ಔಪಚಾರಿಕತೆಯನ್ನ ತೋರಬೇಕಾಗಿಲ್ಲ. ಜನರಲ್ ಆತುರದಿಂದ ವಿವರಿಸಿದ. “ಅವನಿನ್ನೂ ಮಗುವಿನಂತೆಯೇ, ಒಬ್ಬ ಕರುಣಾಜನಕವಾಗಿ ಕಾಣುವ ಜೀವಿ ಎಂದು ವಿಶೇಷವಾಗಿ ಹೇಳಲೇಬೇಕಿಲ್ಲ. ಅವನಿಗೆ ಯಾವುದೋ ರೀತಿಯ ಮೂರ್ಛೆರೋಗವಿದೆ; ಈಗತಾನೆ ಸ್ವಿಟ್ಜರ್ಲೆಂಡಿನಿಂದ ಬಂದಿಳಿದಿದ್ದಾನೆ; ರೈಲ್ವೆ ನಿಲ್ದಾಣದಿಂದ ನೇರವಾಗಿ ಇಲ್ಲಿಗೆ ಬಂದಿದ್ದಾನೆ, ಒಬ್ಬ ಜರ್ಮನ್‌ನಂತೆ ಉಡುಗೆತೊಡುಗೆಯನ್ನ ಧರಿಸಿಕೊಂಡು ಜೇಬಿನಲ್ಲಿ ಒಂದು ಕಾಸೂ ಕೂಡ ಇಲ್ಲದೇ. ನಾನೇ ಅವನಿಗೆ ಇಪ್ಪತ್ತೈದು ರೂಬಲ್ಲುಗಳನ್ನ ಸದ್ಯದ ಖರ್ಚಿಗೆ ಕೊಟ್ಟೆ ಮತ್ತು ಅವನಿಗೆ ಸರ್ಕಾರಿ ಕಚೇರಿಯೊಂದರಲ್ಲಿ ಒಂದು ಸುಲಭವಾದ ಕೆಲಸವನ್ನ ಕೊಡಿಸುತ್ತೇನೆ. ಅವನಿಗೆ ಈಗ ನೀನು ಹೊಟ್ಟೆಗೆ ಆಹಾರವನ್ನ ಕೊಡಬೇಕು; ಪ್ರೀತಿ ಪಾತ್ರರುಗಳೇ, ನನಗನ್ನಿಸುತ್ತದೆ ಅವನು ಬಹಳವಾಗಿ ಹಸಿದಿದ್ದಾನೆ ಎಂದು.”

“ನೀನು ನನ್ನನ್ನು ಅಚ್ಚರಿಗೊಳಿಸುತ್ತೀಯ”, ಹೆಂಡತಿ ಹೇಳಿದಳು, “ಮೂಛರೋಗ ಮತ್ತು ಹಸಿವು, ಯಾವ ರೀತಿಯ ಮೂಛೆರೋಗ?”

ಇದನ್ನೂ ಓದಿ: ಮುಷ್ಕರ ವಾಪಸ್‌ ಪಡೆದ ಸರ್ಕಾರಿ ನೌಕರರ ಸಂಘ; 17% ವೇತನ ಹೆಚ್ಚಿಸುವುದಾಗಿ ತೆರಿಗೆ ಭಾರ ಹೊರಿಸಿದ ಗೌರ್ಮೆಂಟ್!

“ಓ, ಅದೇನೂ ಪದೇಪದೆ ಬರುವಂತಹದ್ದಲ್ಲ; ಜೊತೆಗೆ, ಅವನು ಸಾಕಷ್ಟು ವಿದ್ಯಾವಂತನಾಗಿದ್ದರೂ ಕೂಡ ಅವನೊಬ್ಬ ನಿಜವಾದ ಮಗುವೇ. ನನ್ನ ಪ್ರೀತಿಪಾತ್ರರೇ, ನಾನು ನಿಮ್ಮನ್ನು ಕೇಳುವುದು” ಬಾಗಿಲಿನಿಂದ ಆಚೆಗೆ ಮೆಲ್ಲಗೆ ಹೋಗಲು ಪ್ರಯತ್ನಿಸುತ್ತಾ ಜನರಲ್ ಹೇಳಿದ, “ಅವನಿಗೆ ನೀವು ಪರೀಕ್ಷೆಯನ್ನ ಒಡ್ಡಿ, ಅವನ ಆಸಕ್ತಿ ಯಾವುದರಲ್ಲಿದೆ ಅನ್ನುವುದನ್ನ ಕಂಡುಹಿಡಿಯಿರಿ. ನೀವು ಅವನ ಬಗ್ಗೆ ಕರುಣೆಯಿಂದ ನಡೆದುಕೊಳ್ಳಿ; ಅದೊಂದು ಒಳ್ಳೆಯ ಕೆಲಸ, ನಿಮಗೆ ಗೊತ್ತಿದೆಯಲ್ಲಾ; ಏನೇ ಆದರೂ ನಿಮಗೇನಿಷ್ಟವೊ ಅದನ್ನ ಮಾಡಿ, ಅವನು ಒಂದು ರೀತಿಯಲ್ಲಿ ಸಂಬಂಧಿ ಎನ್ನುವುದನ್ನ ನೆನಪಿನಲ್ಲಿಟ್ಟುಕೊಳ್ಳಿ, ಇದನ್ನ ಗಮನದಲ್ಲಿಟ್ಟುಕೊಂಡರೆ ಈ ಯುವಕ ನನ್ನ ಪ್ರಕಾರ ನಿಮ್ಮಲ್ಲೆಲ್ಲಾ ಆಸಕ್ತಿಯನ್ನ ಹುಟ್ಟಿಸಬಹುದು.”

“ಓ ಖಂಡಿತ ಅಮ್ಮ, ಅವನ ಜೊತೆಯಲ್ಲಿ ಯಾವುದೇ ರೀತಿಯ ಔಪಚಾರಿಕತೆಯನ್ನ ಅನುಸರಿಸಬೇಕಾಗಿಲ್ಲದಿದ್ದರೆ, ನಾವು ಆ ಪಾಪದ ಹುಡುಗನಿಗೆ ಅವನ ಪ್ರಯಾಣದ ನಂತರ ಏನನ್ನಾದರೂ ತಿನ್ನಲು ಕೊಡಬೇಕು; ಅದರಲ್ಲೂ ಅವನಿಗಿನ್ನೂ ಮುಂದೆಲ್ಲಿಗೆ ಹೋಗಬೇಕು ಅನ್ನುವುದರ ಬಗ್ಗೆ ಯಾವುದೇ ಕಲ್ಪನೆಯೂ ಕೂಡ ಇಲ್ಲದ್ದರಿಂದ” ಎಂದು ಎಲ್ಲರಿಗಿಂತಲೂ ಹಿರಿಯಳಾದ ಅಲೆಕ್ಸಾಂಡ್ರ ಹೇಳಿದಳು.

ಇದನ್ನೂ ಓದಿ: ಒಬಿಸಿ ಸಚಿವಾಲಯ, ಜಾತಿಗಣತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ: ಕಾಂಗ್ರೆಸ್ ನಿರ್ಣಯಗಳಿವು


“ಅದಲ್ಲದೇ ಅವನೊಬ್ಬ ಸಮಚಿತ್ತತೆಯ ಮಗುವಿನಂತಹ ಮನುಷ್ಯ; ಬೇಕಾದಾಗ ನಾನವನನ್ನು ಸ್ವಲ್ಪ ಕಣ್ಣಾ ಮುಚ್ಚಾಲೆ ಆಡಿಸಿ ಮಜ ತೆಗೆದುಕೊಳ್ಳಬಹುದು”, ಅಡಲೈಡ್ ಹೇಳಿದಳು.

“ಕಣ್ಣಾ ಮುಚ್ಚಾಲೆ? ಏನು ನೀನು ಹೇಳುತ್ತಿರುವುದರ ಅರ್ಥ?” ಎಪಾಂಚಿನ್‌ನ ಹೆಂಡತಿ ಕೇಳಿದಳು.
“ಓ ಅಮ್ಮ, ನಾಟಕ ಆಡಬೇಡ” ಅಗ್ಲಾಯ ಸಿಡಿಮಿಡಿಗೊಂಡು ಕಿರುಚಿದಳು. “ಅವನನ್ನ ಮೇಲಕ್ಕೆ ಕಳುಹಿಸಿ ಅಪ್ಪ, ಅಮ್ಮಳ ಸಮ್ಮತಿ ಇದೆ.” ಜನರಲ್ ಗಂಟೆ ಬಾರಿಸಿ ಪ್ರಿನ್ಸ್‌ನನ್ನು ಒಳಗೆ ಕಳುಹಿಸುವಂತೆ ಹೇಳಿದ.

“ಹಾಗಾದರೆ, ಒಂದೇ ಒಂದು ಷರತ್ತಿನ ಮೇರೆಗೆ; ಊಟ ಮಾಡುವಾಗ ಅವನು ತನ್ನ ಗಲ್ಲದ ಕೆಳಗಡೆಗೆ ಕರವಸ್ತ್ರವನ್ನ ಧರಿಸಬೇಕು” ಎಪಾಂಚಿನ್‌ನ ಹೆಂಡತಿ ಹೇಳಿದಳು. ಅವನು ಊಟ ಮಾಡುವಾಗ ಅವನ ಪಕ್ಕದಲ್ಲಿ ಸೇವಕರುಗಳಾದ ಫೆಡರ್ ಅಥವ ಮಾವ್ರ ನಿಂತಿರಬೇಕು. ಅವನಿಗೆ ಈ ಮೂರ್ಛೆರೋಗ ಬಂದಾಗ ಗಲಾಟೆ ಮಾಡದೇ ಇರುತ್ತಾನ? ಯಾವುದೇ ರೀತಿಯಲ್ಲಿ ಹಿಂಸಾತ್ಮಕವಾಗಿ ನಡೆದುಕೊಳ್ಳುವುದಿಲ್ಲವಾ?”

“ಅದಕ್ಕೆ ತದ್ವಿರುದ್ಧವಾಗಿ ಅವನು ಬಹಳ ಒಳ್ಳೆಯ ಹಿನ್ನೆಲೆಯಿಂದ ಬೆಳೆದುಬಂದವನು. ಅವನ ನಡವಳಿಕೆಗಳು ಅತ್ಯುತ್ತಮವಾಗಿವೆ. ಇಗೋ ಅವನೇ ಇಲ್ಲಿಗೆ ಬಂದ ನೋಡಿ. ನನ್ನ ಪ್ರೀತಿ ಪಾತ್ರನೆ, ಬಾ ಇಲ್ಲಿ ಪ್ರಿನ್ಸ್, ನಿನ್ನನ್ನು ಮೂಯುಶ್ಕಿನ್ ವಂಶದ ಕೊನೆಯ ಕುಡಿಗಳಿಗೆ ಪರಿಚಯಿಸುತ್ತೇನೆ, ಅದೂ ನಿನ್ನ ಸ್ವಂತ ಸಂಬಂಧಿಗಳಗೆ, ಅಥವ ನಿನ್ನದೇ ಹೆಸರಿರುವ ವ್ಯಕ್ತಿಗಳಿಗೆ. ಅವನನ್ನು ಪ್ರೀತಿ ಪೂರ್ವಕವಾಗಿ ಬರಮಾಡಿಕೊ, ದಯವಿಟ್ಟು. ಅವರು ಊಟವನ್ನ ಸೀದ ತರುತ್ತಿದ್ದಾರೆ ಪ್ರಿನ್ಸ್. ನೀನಿಲ್ಲಿ ಊಟ ಮಾಡಿಯೇ ಹೋಗಬೇಕು. ಆದರೆ ಈಗ ನೀನು ನನ್ನನ್ನು ಕ್ಷಮಿಸಬೇಕು. ನಾನೀಗ ಆತುರದಲ್ಲಿದ್ದೇನೆ, ಈ ತಕ್ಷಣದಲ್ಲಿ ನಾನು ಹೋಗಬೇಕು.”

“ನಮಗೆಲ್ಲಾ ಗೊತ್ತು ನೀನು ಎಲ್ಲಿಗೆ ಆತುರದಿಂದ ಹೋಗಬೇಕೆಂದು!” ಎಪಾಂಚಿನ್‌ನ ಹೆಂಡತಿ ತಾನು ಉದ್ದೇಶಿಸಿದ ಅರ್ಥ ಬರುವ ಧ್ವನಿಯಲ್ಲಿ ಹೇಳಿದಳು.

“ಹೌದು, ಹೌದು, ನಾನೀಗ ತಕ್ಷಣ ಹೋಗಲೇಬೇಕು. ಈಗಲೇ ನನಗೆ ತಡವಾಗಿದೆ! ಇಲ್ಲಿ ನೋಡಿ ಪ್ರೀತಿಪಾತ್ರರುಗಳೇ, ನಿಮ್ಮ ಆಲ್ಬಮ್ಮುಗಳ ಮೇಲೆ ಅವನು ಬೇಕಾದರೆ ಸುಂದರವಾಗಿ ಬರೆದುಕೊಡುತ್ತಾನೆ; ನಿಮಗೆ ಗೊತ್ತಿಲ್ಲ ಅವನೆಂತಹ ಒಳ್ಳೆಯ ಕ್ಯಾಲಿಗ್ರಾಫಿಸ್ಟ್ ಅಂತ, ಆಶ್ಚರ್ಯ ಪಡುವಂತಹ ಕೌಶಲ್ಯವನ್ನ ಹೊಂದಿದ್ದಾನೆ! ಅವನು ಈಗತಾನೆ ನನಗೆ ಬರೆದುಕೊಟ್ಟಿದ್ದು, ’ಅಬ್ಬಾಟ್ ಪಾಫ್ನೂಟ್ ಇಲ್ಲಿ ಸಹಿ ಹಾಕಿದ್ದಾನೆ’, ‘Abbot pafnute signed this’ ಎಂದು. ಸರಿ, ನಿಮಗೀಗ ವಿದಾಯ ಹೇಳುತ್ತಿದ್ದೇನೆ.”

“ಸ್ವಲ್ಪ ಸಮಯ ನಿಲ್ಲು; ನೀನೆಲ್ಲಿಗೆ ಹೊರಟುಹೋಗುತ್ತಿದ್ದೀಯ? ಯಾರೀ ಅಬ್ಬಾಟ್?” ಎಪಾಂಚಿನ್‌ನ ಹೆಂಡತಿ ಹೊರಟುಹೋಗಲು ಪ್ರಯತ್ನಿಸುತ್ತಿದ್ದ ಗಂಡನ ಕಡೆಗೆ ಕೆರಳಿದ ಅಸಮಾಧಾನದಿಂದ ಕೂಗಿಕೊಂಡಳು.

“ಹೌದು ಪ್ರೀತಿಪಾತ್ರಳೆ, ಅವನೊಬ್ಬ ಹಿಂದಿನ ಕಾಲದ ಆ ಹೆಸರಿನ ಅಬ್ಬಾಟ್, ನಾನೀಗ ಕೌಂಟ್‌ನನ್ನು ನೋಡಲು ಹೋಗಬೇಕಾಗಿದೆ, ಅವನು ನನಗೋಸ್ಕರ ಕಾಯುತ್ತಿದ್ದಾನೆ, ಆಗಲೇ ತಡವಾಗಿಬಿಟ್ಟಿದೆ, ಗುಡ್ ಬೈ, ಗುಡ್ ಬೈ ಪ್ರಿನ್ಸ್!”, ಜನರಲ್ ಬೇಗನೆ ಆಚೆ ಹೋಗಿ ಬಾಗಿಲನ್ನು ಮುಚ್ಚಿ ಚಿಲಕ ಹಾಕಿಕೊಂಡ.

“ಓ ಸರಿ, ನನಗೆ ಗೊತ್ತು ನೀನು ಯಾವ ಕೌಂಟ್‌ಅನ್ನು ನೋಡಲು ಹೋಗುತ್ತಿದ್ದೀಯ ಎಂದು”, ಅವನ ಹೆಂಡತಿ ಕಡ್ಡಿ ತುಂಡಾಗುವಂತೆ ಹೇಳಿದಳು ಮತ್ತು ಈಗ ಅವಳ ಕೋಪೋದ್ರಿಕ್ತ ಕಣ್ಣುಗಳನ್ನ ಪ್ರಿನ್ಸ್‌ನ ಕಡೆಗೆ ತಿರುಗಿಸಿದಳು. “ಈಗ ಹೇಳು ಇವೆಲ್ಲಾ ಏನೆಂದು? ಯಾವ ಅಬ್ಬಾಟ್? ಪಾಫ್ನೂಟ್ ಅಂದರೆ ಯಾರು?” ಅವಳೊಂದು ರೀತಿಯಲ್ಲಿ ಒರಟಾಗಿ ಕೇಳಿದಳು.

“ಅಮ್ಮ!” ಅಲೆಕ್ಸಾಂಡ್ರ ಅವಳ ಅಮ್ಮನ ಈ ಒರಟುತನದಿಂದ ಜರ್ಜರಿತಳಾಗಿ ಕೂಗಿದಳು.

ಅಗ್ಲಾಯ ತನ್ನ ಪಾದವನ್ನ ನೆಲಕ್ಕೆ ಜೋರಾಗಿ ಅಪ್ಪಳಿಸಿದಳು.
 (ಮುಂದುವರಿಯುತ್ತದೆ..)

ಕನ್ನಡಕ್ಕೆ: ಕೆ.ಶ್ರೀನಾಥ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...