Homeನ್ಯಾಯ ಪಥಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-1)

- Advertisement -
- Advertisement -

ಜನರಲ್ ಎಪಾಂಚಿನ್‌ನ ಹೆಂಡತಿ ಸ್ವಭಾವತಃ ಸ್ವಾಭಿಮಾನಿ ಮತ್ತು ಹೆಮ್ಮೆಯ ಹೆಂಗಸು. ಅವಳ ವಂಶಾವಳಿಯ ಕಟ್ಟಕಡೆಯು ಕುಡಿ ಎನ್ನಲಾದ ಮೂಯಿಶ್ಕಿನ್ ಎಂಬುವವನೊಬ್ಬ ದರಿದ್ರನಾದ ಮೂರ್ಖ, ಮತ್ತು ಒಬ್ಬ ಭಿಕ್ಷಾಟನೆ ಮಾಡುವವನು ಎಂಬುದನ್ನ ತಿಳಿದಾಗ ಅವಳ ಭಾವನೆಗಳು ಯಾವ ರೀತಿಯದ್ದಾಗಿದ್ದಿರಬಹುದು? ಅವಳಲ್ಲಿ ಹೆಚ್ಚಿನ ಪರಿಣಾಮವನ್ನ ಉಂಟುಮಾಡಲಿ ಎಂದು ಆಶಿಸಿ ಈ ಎಲ್ಲಾ ವಿವರಗಳನ್ನೂ ಜನರಲ್ ಹೇಳಿದ್ದ! ಅವಳ ಗಮನವನ್ನ ಒಂದೇ ಏಟಿಗೆ ಬೇರೆ ಕಡೆಗೆ ತಿರುಗಿಸುವುದು ಅವನ ಉದ್ದೇಶವಾಗಿತ್ತು; ಅವಳ ಆಲೋಚನೆಗಳನ್ನ ಪ್ರಸಕ್ತ ಕೌಟುಂಬಿಕ ವಿಷಯಗಳಿಂದ ಬದಲಾಯಿಸುವುದೇ ಅವನಿಗೆ ಮುಖ್ಯವಾಗಿತ್ತು.

ಎಪಾಂಚಿನ್‌ನ ಹೆಂಡತಿ ಉತ್ಸಾಹಭರಿತಳಾದಾಗ ಏನನ್ನೂ ಮಾತನಾಡದೆ ನೆಟ್ಟಗೆ ನಿಂತುಕೊಂಡು, ತನ್ನ ಮುಂದಿರುವುದನ್ನು ದಿಟ್ಟಿಸಿ ನೋಡುವುದು ಅವಳ ಅಭ್ಯಾಸ.

ಅವಳೊಬ್ಬಳು ತನ್ನ ಗಂಡನಷ್ಟೇ ವಯಸ್ಸಿನ ಅತ್ಯುತ್ತಮವಾದ ಹೆಂಗಸು, ಅವಳ ಮೂಗು ಸ್ವಲ್ಪ ಗಿಣಿಯ ಮೂಗಿನಂತಿತ್ತು, ಎತ್ತರವಾಗಿದ್ದಳು, ಕಿರಿದಾದ ಹಣೆಯನ್ನ ಹೊಂದಿದ್ದಳು, ದಟ್ಟವಾದ ನರೆಯುತ್ತಿದ್ದ ಕೂದಲು, ಮತ್ತು ಸ್ವಲ್ಪ ಹಳದಿ ಮಿಶ್ರಿತ ಕಂದು ಮೈಬಣ್ಣ. ಅವಳ ಕಣ್ಣುಗಳು ಬೂದುಬಣ್ಣದ್ದಾಗಿದ್ದವು, ಮತ್ತು ಅವುಗಳಲ್ಲಿ ಕೆಲವು ಬಾರಿ ಕುತೂಹಲಕರವಾದ ಭಾವ ಮೂಡುತ್ತಿತ್ತು. ಅದು ಬಹಳ ಪರಿಣಾಮಕಾರಿ ಎಂದು ಅವಳು ನಂಬಿದ್ದಳು ಮತ್ತು ಆ ನಂಬಿಕೆಯನ್ನೂ ಯಾವುದರಿಂದಲೂ ಬದಲಿಸಲು ಸಾಧ್ಯವಿರಲಿಲ್ಲ.

“ಏನು, ಅವನನ್ನ ಬರಮಾಡಿಕೊ! ತಕ್ಷಣ ಬರಮಾಡಿಕೊಳ್ಳಬೆಕೇ?” ತನ್ನ ಮುಂದೆ ಚಡಪಡಿಸುತ್ತಾ ನಿಂತಿದ್ದ ತನ್ನ ಗಂಡನ ಕಡೆಗೆ ಅಸ್ಪಷ್ಟತೆಯಿಂದ ನೋಡುತ್ತಾ ಎಪಾಂಚಿನ್‌ನ ಹೆಂಡತಿ ಕೇಳಿದಳು.

“ಓ ನನ್ನ ಪ್ರೀತಿ ಪಾತ್ರಳೆ ಅವನ ಜೊತೆಯಲ್ಲಿ ನೀನು ಯಾವುದೇ ರೀತಿಯ ಔಪಚಾರಿಕತೆಯನ್ನ ತೋರಬೇಕಾಗಿಲ್ಲ. ಜನರಲ್ ಆತುರದಿಂದ ವಿವರಿಸಿದ. “ಅವನಿನ್ನೂ ಮಗುವಿನಂತೆಯೇ, ಒಬ್ಬ ಕರುಣಾಜನಕವಾಗಿ ಕಾಣುವ ಜೀವಿ ಎಂದು ವಿಶೇಷವಾಗಿ ಹೇಳಲೇಬೇಕಿಲ್ಲ. ಅವನಿಗೆ ಯಾವುದೋ ರೀತಿಯ ಮೂರ್ಛೆರೋಗವಿದೆ; ಈಗತಾನೆ ಸ್ವಿಟ್ಜರ್ಲೆಂಡಿನಿಂದ ಬಂದಿಳಿದಿದ್ದಾನೆ; ರೈಲ್ವೆ ನಿಲ್ದಾಣದಿಂದ ನೇರವಾಗಿ ಇಲ್ಲಿಗೆ ಬಂದಿದ್ದಾನೆ, ಒಬ್ಬ ಜರ್ಮನ್‌ನಂತೆ ಉಡುಗೆತೊಡುಗೆಯನ್ನ ಧರಿಸಿಕೊಂಡು ಜೇಬಿನಲ್ಲಿ ಒಂದು ಕಾಸೂ ಕೂಡ ಇಲ್ಲದೇ. ನಾನೇ ಅವನಿಗೆ ಇಪ್ಪತ್ತೈದು ರೂಬಲ್ಲುಗಳನ್ನ ಸದ್ಯದ ಖರ್ಚಿಗೆ ಕೊಟ್ಟೆ ಮತ್ತು ಅವನಿಗೆ ಸರ್ಕಾರಿ ಕಚೇರಿಯೊಂದರಲ್ಲಿ ಒಂದು ಸುಲಭವಾದ ಕೆಲಸವನ್ನ ಕೊಡಿಸುತ್ತೇನೆ. ಅವನಿಗೆ ಈಗ ನೀನು ಹೊಟ್ಟೆಗೆ ಆಹಾರವನ್ನ ಕೊಡಬೇಕು; ಪ್ರೀತಿ ಪಾತ್ರರುಗಳೇ, ನನಗನ್ನಿಸುತ್ತದೆ ಅವನು ಬಹಳವಾಗಿ ಹಸಿದಿದ್ದಾನೆ ಎಂದು.”

“ನೀನು ನನ್ನನ್ನು ಅಚ್ಚರಿಗೊಳಿಸುತ್ತೀಯ”, ಹೆಂಡತಿ ಹೇಳಿದಳು, “ಮೂಛರೋಗ ಮತ್ತು ಹಸಿವು, ಯಾವ ರೀತಿಯ ಮೂಛೆರೋಗ?”

ಇದನ್ನೂ ಓದಿ: ಮುಷ್ಕರ ವಾಪಸ್‌ ಪಡೆದ ಸರ್ಕಾರಿ ನೌಕರರ ಸಂಘ; 17% ವೇತನ ಹೆಚ್ಚಿಸುವುದಾಗಿ ತೆರಿಗೆ ಭಾರ ಹೊರಿಸಿದ ಗೌರ್ಮೆಂಟ್!

“ಓ, ಅದೇನೂ ಪದೇಪದೆ ಬರುವಂತಹದ್ದಲ್ಲ; ಜೊತೆಗೆ, ಅವನು ಸಾಕಷ್ಟು ವಿದ್ಯಾವಂತನಾಗಿದ್ದರೂ ಕೂಡ ಅವನೊಬ್ಬ ನಿಜವಾದ ಮಗುವೇ. ನನ್ನ ಪ್ರೀತಿಪಾತ್ರರೇ, ನಾನು ನಿಮ್ಮನ್ನು ಕೇಳುವುದು” ಬಾಗಿಲಿನಿಂದ ಆಚೆಗೆ ಮೆಲ್ಲಗೆ ಹೋಗಲು ಪ್ರಯತ್ನಿಸುತ್ತಾ ಜನರಲ್ ಹೇಳಿದ, “ಅವನಿಗೆ ನೀವು ಪರೀಕ್ಷೆಯನ್ನ ಒಡ್ಡಿ, ಅವನ ಆಸಕ್ತಿ ಯಾವುದರಲ್ಲಿದೆ ಅನ್ನುವುದನ್ನ ಕಂಡುಹಿಡಿಯಿರಿ. ನೀವು ಅವನ ಬಗ್ಗೆ ಕರುಣೆಯಿಂದ ನಡೆದುಕೊಳ್ಳಿ; ಅದೊಂದು ಒಳ್ಳೆಯ ಕೆಲಸ, ನಿಮಗೆ ಗೊತ್ತಿದೆಯಲ್ಲಾ; ಏನೇ ಆದರೂ ನಿಮಗೇನಿಷ್ಟವೊ ಅದನ್ನ ಮಾಡಿ, ಅವನು ಒಂದು ರೀತಿಯಲ್ಲಿ ಸಂಬಂಧಿ ಎನ್ನುವುದನ್ನ ನೆನಪಿನಲ್ಲಿಟ್ಟುಕೊಳ್ಳಿ, ಇದನ್ನ ಗಮನದಲ್ಲಿಟ್ಟುಕೊಂಡರೆ ಈ ಯುವಕ ನನ್ನ ಪ್ರಕಾರ ನಿಮ್ಮಲ್ಲೆಲ್ಲಾ ಆಸಕ್ತಿಯನ್ನ ಹುಟ್ಟಿಸಬಹುದು.”

“ಓ ಖಂಡಿತ ಅಮ್ಮ, ಅವನ ಜೊತೆಯಲ್ಲಿ ಯಾವುದೇ ರೀತಿಯ ಔಪಚಾರಿಕತೆಯನ್ನ ಅನುಸರಿಸಬೇಕಾಗಿಲ್ಲದಿದ್ದರೆ, ನಾವು ಆ ಪಾಪದ ಹುಡುಗನಿಗೆ ಅವನ ಪ್ರಯಾಣದ ನಂತರ ಏನನ್ನಾದರೂ ತಿನ್ನಲು ಕೊಡಬೇಕು; ಅದರಲ್ಲೂ ಅವನಿಗಿನ್ನೂ ಮುಂದೆಲ್ಲಿಗೆ ಹೋಗಬೇಕು ಅನ್ನುವುದರ ಬಗ್ಗೆ ಯಾವುದೇ ಕಲ್ಪನೆಯೂ ಕೂಡ ಇಲ್ಲದ್ದರಿಂದ” ಎಂದು ಎಲ್ಲರಿಗಿಂತಲೂ ಹಿರಿಯಳಾದ ಅಲೆಕ್ಸಾಂಡ್ರ ಹೇಳಿದಳು.

ಇದನ್ನೂ ಓದಿ: ಒಬಿಸಿ ಸಚಿವಾಲಯ, ಜಾತಿಗಣತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ: ಕಾಂಗ್ರೆಸ್ ನಿರ್ಣಯಗಳಿವು


“ಅದಲ್ಲದೇ ಅವನೊಬ್ಬ ಸಮಚಿತ್ತತೆಯ ಮಗುವಿನಂತಹ ಮನುಷ್ಯ; ಬೇಕಾದಾಗ ನಾನವನನ್ನು ಸ್ವಲ್ಪ ಕಣ್ಣಾ ಮುಚ್ಚಾಲೆ ಆಡಿಸಿ ಮಜ ತೆಗೆದುಕೊಳ್ಳಬಹುದು”, ಅಡಲೈಡ್ ಹೇಳಿದಳು.

“ಕಣ್ಣಾ ಮುಚ್ಚಾಲೆ? ಏನು ನೀನು ಹೇಳುತ್ತಿರುವುದರ ಅರ್ಥ?” ಎಪಾಂಚಿನ್‌ನ ಹೆಂಡತಿ ಕೇಳಿದಳು.
“ಓ ಅಮ್ಮ, ನಾಟಕ ಆಡಬೇಡ” ಅಗ್ಲಾಯ ಸಿಡಿಮಿಡಿಗೊಂಡು ಕಿರುಚಿದಳು. “ಅವನನ್ನ ಮೇಲಕ್ಕೆ ಕಳುಹಿಸಿ ಅಪ್ಪ, ಅಮ್ಮಳ ಸಮ್ಮತಿ ಇದೆ.” ಜನರಲ್ ಗಂಟೆ ಬಾರಿಸಿ ಪ್ರಿನ್ಸ್‌ನನ್ನು ಒಳಗೆ ಕಳುಹಿಸುವಂತೆ ಹೇಳಿದ.

“ಹಾಗಾದರೆ, ಒಂದೇ ಒಂದು ಷರತ್ತಿನ ಮೇರೆಗೆ; ಊಟ ಮಾಡುವಾಗ ಅವನು ತನ್ನ ಗಲ್ಲದ ಕೆಳಗಡೆಗೆ ಕರವಸ್ತ್ರವನ್ನ ಧರಿಸಬೇಕು” ಎಪಾಂಚಿನ್‌ನ ಹೆಂಡತಿ ಹೇಳಿದಳು. ಅವನು ಊಟ ಮಾಡುವಾಗ ಅವನ ಪಕ್ಕದಲ್ಲಿ ಸೇವಕರುಗಳಾದ ಫೆಡರ್ ಅಥವ ಮಾವ್ರ ನಿಂತಿರಬೇಕು. ಅವನಿಗೆ ಈ ಮೂರ್ಛೆರೋಗ ಬಂದಾಗ ಗಲಾಟೆ ಮಾಡದೇ ಇರುತ್ತಾನ? ಯಾವುದೇ ರೀತಿಯಲ್ಲಿ ಹಿಂಸಾತ್ಮಕವಾಗಿ ನಡೆದುಕೊಳ್ಳುವುದಿಲ್ಲವಾ?”

“ಅದಕ್ಕೆ ತದ್ವಿರುದ್ಧವಾಗಿ ಅವನು ಬಹಳ ಒಳ್ಳೆಯ ಹಿನ್ನೆಲೆಯಿಂದ ಬೆಳೆದುಬಂದವನು. ಅವನ ನಡವಳಿಕೆಗಳು ಅತ್ಯುತ್ತಮವಾಗಿವೆ. ಇಗೋ ಅವನೇ ಇಲ್ಲಿಗೆ ಬಂದ ನೋಡಿ. ನನ್ನ ಪ್ರೀತಿ ಪಾತ್ರನೆ, ಬಾ ಇಲ್ಲಿ ಪ್ರಿನ್ಸ್, ನಿನ್ನನ್ನು ಮೂಯುಶ್ಕಿನ್ ವಂಶದ ಕೊನೆಯ ಕುಡಿಗಳಿಗೆ ಪರಿಚಯಿಸುತ್ತೇನೆ, ಅದೂ ನಿನ್ನ ಸ್ವಂತ ಸಂಬಂಧಿಗಳಗೆ, ಅಥವ ನಿನ್ನದೇ ಹೆಸರಿರುವ ವ್ಯಕ್ತಿಗಳಿಗೆ. ಅವನನ್ನು ಪ್ರೀತಿ ಪೂರ್ವಕವಾಗಿ ಬರಮಾಡಿಕೊ, ದಯವಿಟ್ಟು. ಅವರು ಊಟವನ್ನ ಸೀದ ತರುತ್ತಿದ್ದಾರೆ ಪ್ರಿನ್ಸ್. ನೀನಿಲ್ಲಿ ಊಟ ಮಾಡಿಯೇ ಹೋಗಬೇಕು. ಆದರೆ ಈಗ ನೀನು ನನ್ನನ್ನು ಕ್ಷಮಿಸಬೇಕು. ನಾನೀಗ ಆತುರದಲ್ಲಿದ್ದೇನೆ, ಈ ತಕ್ಷಣದಲ್ಲಿ ನಾನು ಹೋಗಬೇಕು.”

“ನಮಗೆಲ್ಲಾ ಗೊತ್ತು ನೀನು ಎಲ್ಲಿಗೆ ಆತುರದಿಂದ ಹೋಗಬೇಕೆಂದು!” ಎಪಾಂಚಿನ್‌ನ ಹೆಂಡತಿ ತಾನು ಉದ್ದೇಶಿಸಿದ ಅರ್ಥ ಬರುವ ಧ್ವನಿಯಲ್ಲಿ ಹೇಳಿದಳು.

“ಹೌದು, ಹೌದು, ನಾನೀಗ ತಕ್ಷಣ ಹೋಗಲೇಬೇಕು. ಈಗಲೇ ನನಗೆ ತಡವಾಗಿದೆ! ಇಲ್ಲಿ ನೋಡಿ ಪ್ರೀತಿಪಾತ್ರರುಗಳೇ, ನಿಮ್ಮ ಆಲ್ಬಮ್ಮುಗಳ ಮೇಲೆ ಅವನು ಬೇಕಾದರೆ ಸುಂದರವಾಗಿ ಬರೆದುಕೊಡುತ್ತಾನೆ; ನಿಮಗೆ ಗೊತ್ತಿಲ್ಲ ಅವನೆಂತಹ ಒಳ್ಳೆಯ ಕ್ಯಾಲಿಗ್ರಾಫಿಸ್ಟ್ ಅಂತ, ಆಶ್ಚರ್ಯ ಪಡುವಂತಹ ಕೌಶಲ್ಯವನ್ನ ಹೊಂದಿದ್ದಾನೆ! ಅವನು ಈಗತಾನೆ ನನಗೆ ಬರೆದುಕೊಟ್ಟಿದ್ದು, ’ಅಬ್ಬಾಟ್ ಪಾಫ್ನೂಟ್ ಇಲ್ಲಿ ಸಹಿ ಹಾಕಿದ್ದಾನೆ’, ‘Abbot pafnute signed this’ ಎಂದು. ಸರಿ, ನಿಮಗೀಗ ವಿದಾಯ ಹೇಳುತ್ತಿದ್ದೇನೆ.”

“ಸ್ವಲ್ಪ ಸಮಯ ನಿಲ್ಲು; ನೀನೆಲ್ಲಿಗೆ ಹೊರಟುಹೋಗುತ್ತಿದ್ದೀಯ? ಯಾರೀ ಅಬ್ಬಾಟ್?” ಎಪಾಂಚಿನ್‌ನ ಹೆಂಡತಿ ಹೊರಟುಹೋಗಲು ಪ್ರಯತ್ನಿಸುತ್ತಿದ್ದ ಗಂಡನ ಕಡೆಗೆ ಕೆರಳಿದ ಅಸಮಾಧಾನದಿಂದ ಕೂಗಿಕೊಂಡಳು.

“ಹೌದು ಪ್ರೀತಿಪಾತ್ರಳೆ, ಅವನೊಬ್ಬ ಹಿಂದಿನ ಕಾಲದ ಆ ಹೆಸರಿನ ಅಬ್ಬಾಟ್, ನಾನೀಗ ಕೌಂಟ್‌ನನ್ನು ನೋಡಲು ಹೋಗಬೇಕಾಗಿದೆ, ಅವನು ನನಗೋಸ್ಕರ ಕಾಯುತ್ತಿದ್ದಾನೆ, ಆಗಲೇ ತಡವಾಗಿಬಿಟ್ಟಿದೆ, ಗುಡ್ ಬೈ, ಗುಡ್ ಬೈ ಪ್ರಿನ್ಸ್!”, ಜನರಲ್ ಬೇಗನೆ ಆಚೆ ಹೋಗಿ ಬಾಗಿಲನ್ನು ಮುಚ್ಚಿ ಚಿಲಕ ಹಾಕಿಕೊಂಡ.

“ಓ ಸರಿ, ನನಗೆ ಗೊತ್ತು ನೀನು ಯಾವ ಕೌಂಟ್‌ಅನ್ನು ನೋಡಲು ಹೋಗುತ್ತಿದ್ದೀಯ ಎಂದು”, ಅವನ ಹೆಂಡತಿ ಕಡ್ಡಿ ತುಂಡಾಗುವಂತೆ ಹೇಳಿದಳು ಮತ್ತು ಈಗ ಅವಳ ಕೋಪೋದ್ರಿಕ್ತ ಕಣ್ಣುಗಳನ್ನ ಪ್ರಿನ್ಸ್‌ನ ಕಡೆಗೆ ತಿರುಗಿಸಿದಳು. “ಈಗ ಹೇಳು ಇವೆಲ್ಲಾ ಏನೆಂದು? ಯಾವ ಅಬ್ಬಾಟ್? ಪಾಫ್ನೂಟ್ ಅಂದರೆ ಯಾರು?” ಅವಳೊಂದು ರೀತಿಯಲ್ಲಿ ಒರಟಾಗಿ ಕೇಳಿದಳು.

“ಅಮ್ಮ!” ಅಲೆಕ್ಸಾಂಡ್ರ ಅವಳ ಅಮ್ಮನ ಈ ಒರಟುತನದಿಂದ ಜರ್ಜರಿತಳಾಗಿ ಕೂಗಿದಳು.

ಅಗ್ಲಾಯ ತನ್ನ ಪಾದವನ್ನ ನೆಲಕ್ಕೆ ಜೋರಾಗಿ ಅಪ್ಪಳಿಸಿದಳು.
 (ಮುಂದುವರಿಯುತ್ತದೆ..)

ಕನ್ನಡಕ್ಕೆ: ಕೆ.ಶ್ರೀನಾಥ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಗೇಂದ್ರ ರಾಜೀನಾಮೆ: ಬಡಿಗೆ ಕೊಟ್ಟು ಹೊಡೆಸಿಕೊಂಡಂತಾಯ್ತು ಕಾಂಗ್ರೆಸ್ ಪರಿಸ್ಥಿತಿ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ '40% ಸರ್ಕಾರ' ಮತ್ತು 'ಪೇ ಸಿಎಂ' ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್‌ಗೆ,...

SIR ಕುತಂತ್ರ: 43.81 ಲಕ್ಷ ಜನರ ಮನೆ ಬಾಗಿಲಿಗೆ ನೋಟಿಸ್‌ ಬಿಸಿ, ಪೌರತ್ವ ಸಾಬೀತುಪಡಿಸಲು ನಾಗರಿಕರು ಅಲೆಯಬೇಕೇ ?

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ಲಕ್ಷಾಂತರ ನಾಗರಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.ಚುನಾವಣಾ ಆಯೋಗವು ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ ಸುಮಾರು 1.08...

ದಿಮಾಗಿ ನಕ್ಸಲ್: ರೈತ, ವಿದ್ಯಾರ್ಥಿ ಹೋರಾಟಗಳೂ ದೇಶದ್ರೋಹವೇ? RSS ಪತ್ರಿಕೆಯ ವಿವಾದಾತ್ಮಕ ಪ್ರತಿಪಾದನೆ

ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿ ಮಾದರಿಗೆ ತೀವ್ರ ಸ್ವರೂಪದ ಸುಧಾರಣೆಗಳ ಅಗತ್ಯವಿದೆ. ಆದರೆ ಈ ಸಮಸ್ಯೆಗಳು ಕಳೆದ ಹನ್ನೆರಡು ವರ್ಷಗಳಲ್ಲಿ ಹುಟ್ಟಿಕೊಂಡಿದ್ದಲ್ಲ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ. ಹಿಂದುತ್ವವನ್ನು ದಮನಕಾರಿ...

ಅಹಮದಾಬಾದ್‌ನಲ್ಲಿ ಪುಸ್ತಕ ಓದುಗರ ಮೇಲೆ ಭಜರಂಗದಳ ದೌರ್ಜನ್ಯ: ಮಲಾಲಾ, ಆನ್ ಫ್ರಾಂಕ್ ಕೃತಿಗಳಿಗೆ ವಿರೋಧಿಸಿ ಬೆದರಿಕೆ!

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾಹಿತ್ಯಾಭಿಮಾನಿಗಳ ಮೇಲೆ ಭಜರಂಗದಳ ಕಾರ್ಯಕರ್ತರು ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಗರದ ಸಾರ್ವಜನಿಕ ಉದ್ಯಾನವನವೊಂದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜೈ ಹಾಗೂ ವಿಶ್ವಪ್ರಸಿದ್ಧ ಲೇಖಕಿ ಆನ್...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಹಿಂದಿನ ಪ್ರಮುಖ ಸಂಚುಕೋರರು ಎಂದು ಆರೋಪಿಸಿರುವ ದೆಹಲಿ ಪೊಲೀಸರು, ಕಾರಾಗೃಹದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ...

‘ಆರ್‌ಎಸ್‌ಎಸ್-ಬಿಜೆಪಿಯ ರಕ್ತನಾಳಗಳಲ್ಲಿ ತಾರತಮ್ಯ ಹರಿಯುತ್ತಿದೆ’: ಖರ್ಗೆ ರ್ಯಾಲಿ ಸ್ಥಳದ ‘ಶುದ್ಧೀಕರಣ’ ಸಮರ್ಥಿಸಿಕೊಂಡ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ಕಾಂಗ್ರೆಸ್ ಕಿಡಿ

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಸ್ಥಳೀಯ ‘ಶುದ್ಧೀಕರಣ’ ಸಮಾರಂಭದ ಸುತ್ತಲಿನ ರಾಜಕೀಯ ವಿವಾದವು ತೀವ್ರ ಸ್ವರೂಪ...

ಯುಜಿಸಿಇಟಿ ಸೀಟು ರದ್ದುಗೊಳಿಸಲು ರೂ.5,000 ಶುಲ್ಕ; ಕೆಇಎ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಯುಜಿಸಿಇಟಿ 2026ರ ಎರಡನೇ ಹಂತದ ಕೌನ್ಸಿಲಿಂಗ್‌ನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಗೊಳಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ರೂ.5,000 ದಂಡ ವಿಧಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಮಲ್ಲೇಶ್ವರದಲ್ಲಿರುವ ಕೆಇಎ...

162 ವರ್ಷಗಳ ಇತಿಹಾಸದಲ್ಲೇ ಪ್ರಥಮ: ಬಾಂಬೆ ಹೈಕೋರ್ಟ್ ವಕೀಲರ ಸಂಘಕ್ಕೆ ಮಹಿಳಾ ಅಧ್ಯಕ್ಷೆ! 

ಮುಂಬೈ: ಭಾರತೀಯ ನ್ಯಾಯಾಂಗ ರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ನಿರ್ಧಾರವೊಂದನ್ನು ಬಾಂಬೆ ಹೈಕೋರ್ಟ್‌ನ ಪ್ರತಿಷ್ಠಿತ ವಕೀಲರ ಸಂಘಟನೆಯಾದ 'ಅಸೋಸಿಯೇಷನ್‌ ಆಫ್‌ ಅಡ್ವೊಕೇಟ್ಸ್‌ ಆಫ್‌ ವೆಸ್ಟರ್ನ್ ಇಂಡಿಯಾ' (AAWI) ಕೈಗೊಂಡಿದೆ ಎಂದು...

ಫ್ರೀಡಂ ಪಾರ್ಕ್‌: ಧರಣಿಗೆ 1 ಲಕ್ಷ ರೂ. ಶುಲ್ಕ? ಜಿಬಿಎ ನಡೆಗೆ ಹೋರಾಟಗಾರರ ಆಕ್ರೋಶ

ಬೆಂಗಳೂರಿನ ಐತಿಹಾಸಿಕ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಾಗೂ ಧರಣಿ ನಡೆಸಲು ದಿನಕ್ಕೆ 1 ಲಕ್ಷ ರೂ. ಶುಲ್ಕ ಮತ್ತು 10,000 ರೂ. ಮುಂಗಡ ಠೇವಣಿ ವಿಧಿಸಲಾಗುತ್ತಿದೆ ಎಂಬ ಸುದ್ದಿ ಸಾರ್ವಜನಿಕ ಹಾಗೂ ಹೋರಾಟಗಾರರ...

ಅಧಿಕಾರದಲ್ಲಿರುವವರ ವಿರುದ್ಧ ಮಾತನಾಡುವ ಭಯವನ್ನು ನೀಟ್ ಚಳವಳಿ ಹೋಗಲಾಡಿಸಿದೆ: ನೇಹಾ ಬೋರಾ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ 'ಜೆನ್ ಜಿ' ಚಳವಳಿಯು ಜನರಲ್ಲಿದ್ದ ಭಯವನ್ನು ಹೋಗಲಾಡಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಆರ್‌ಎಸ್‌ಎಸ್‌ನವರು ವಿದ್ಯಾರ್ಥಿ ಮತ್ತು ಯುವಜನರನ್ನು ತಲುಪುವಂತೆ ಮಾಡಿದೆ ಎಂದು ಆಲ್...