Homeಮುಖಪುಟ'ನನಗೀಗ ಕಾಶ್ಮೀರದಲ್ಲಿ ಇಬ್ಬರು ಸಹೋದರಿದ್ದಾರೆ; ಅಲ್ಲಾಹು ಅವರನ್ನು ಅನುಗ್ರಹಿಸಲಿ': ದಾಳಿಯ ವೇಳೆ ಸಹಾಯ ಮಾಡಿದ ಸ್ಥಳೀಯ...

‘ನನಗೀಗ ಕಾಶ್ಮೀರದಲ್ಲಿ ಇಬ್ಬರು ಸಹೋದರಿದ್ದಾರೆ; ಅಲ್ಲಾಹು ಅವರನ್ನು ಅನುಗ್ರಹಿಸಲಿ’: ದಾಳಿಯ ವೇಳೆ ಸಹಾಯ ಮಾಡಿದ ಸ್ಥಳೀಯ ಮುಸ್ಲಿಮರಿಗೆ ಪ್ರಾರ್ಥಿಸಿದ ಸಂತ್ರಸ್ತೆ

- Advertisement -
- Advertisement -

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ಕೊಚ್ಚಿ ಮೂಲದ ಆರತಿ ಆರ್ ಮೆನನ್‌ಗೆ ಅವರು ಘಟನೆಯ ಬಗ್ಗೆ ಮಾತನಾಡುತ್ತಾ, ಇಬ್ಬರು ಕಾಶ್ಮೀರಿ ಮುಸ್ಲಿಮರು ನನ್ನನ್ನು ಸಹೋದರಿಯಂತೆ ನೋಡಿಕೊಂಡು ನನಗೆ ಎಲ್ಲಾ ಸಹಾಯ ಮಾಡಿದರು, ಈಗ ನನಗೆ ಕಾಶ್ಮೀರದಲ್ಲಿ ಇಬ್ಬರು ಸಹೋದರರು ಇದ್ದಾರೆ, ಅಲ್ಲಾಹನು ಅವರಿಬ್ಬರನ್ನೂ ರಕ್ಷಿಸಲಿ ಎಂದು ಭಾವುಕರಾಗಿ ಹೇಳಿದ್ದಾರೆ. ನನಗೀಗ ಕಾಶ್ಮೀರದಲ್ಲಿ

ತನ್ನ ಕುಟುಂಬದೊಂದಿಗೆ ಕಾಶ್ಮೀರಕ್ಕೆ ತೆರಳಿದ್ದ ಆರತಿ ಅವರ ಪ್ರವಾಸವೂ ದುರಂತ ಅಂತ್ಯ ಕಂಡಿದೆ. ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಗುಂಡಿಕ್ಕಿ ಕೊಂದ 26 ಜನರಲ್ಲಿ ಆರತಿ ಅವರ ತಂದೆ, 65 ವರ್ಷದ ಎನ್. ರಾಮಚಂದ್ರನ್ ಕೂಡ ಒಬ್ಬರು.

ಘಟನೆ ಬಗ್ಗೆ ಮಾತನಾಡಿದ ಆರತಿ ಅವರು,”ಮೊದಲಿಗೆ ಅದು ಪಟಾಕಿ ಎಂದು ನಾವು ಭಾವಿಸಿದ್ದೆವು… ಆದರೆ ಮುಂದಿನ ಗುಂಡೇಟಿನೊಂದಿಗೆ, ಅದು ಭಯೋತ್ಪಾದಕ ದಾಳಿ ಎಂದು ನನಗೆ ತಿಳಿದು ಬಂತು…” ಎಂದು ಆರತಿ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರತಿ ಅವರ ತಂದೆ ಮತ್ತು ಅವರ ಆರು ವರ್ಷದ ಅವಳಿ ಪುತ್ರರು ಬೈಸರನ್‌ನ ಹುಲ್ಲುಗಾವಲಿನ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಉಗ್ರರು ಅವರ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಆರತಿ ಅವರ ತಾಯಿ ಶೀಲಾ ಕಾರಿನಲ್ಲೇ ಇದ್ದರು ಎಂದು ವರದಿಯಾಗಿದೆ.

“ನಾವು ತಪ್ಪಿಸಿಕೊಳ್ಳಲು ಬೇಲಿಯ ಕೆಳಗೆ ತೆವಳಿದೆವು. ಜನರು ಎಲ್ಲಾ ದಿಕ್ಕುಗಳಲ್ಲಿಯೂ ಚದುರಿಹೋದರು. ನಾವು ಚಲಿಸುತ್ತಿರುವಾಗ, ಕಾಡಿನಿಂದ ಒಬ್ಬ ವ್ಯಕ್ತಿ ಹೊರಬಂದನು. ಅವನು ನಮ್ಮತ್ತ ನೇರವಾಗಿ ನೋಡಿದನು” ಎಂದು ಅವರು ಹೇಳಿದ್ದಾರೆ.

“ಈ ಅಪರಿಚಿತ ವ್ಯಕ್ತಿ ನಮಗೆ ಅರ್ಥವಾಗದ ಮಾತುಗಳನ್ನು ಹೇಳಿದರು. ನಮಗೆ ಗೊತ್ತಿಲ್ಲ ಎಂದು ನಾವು ಉತ್ತರಿಸಿದೆವು. ಮರುಕ್ಷಣವೇ ಅವನು ಗುಂಡು ಹಾರಿಸಿದ, ಈ ವೇಳೆ ನನ್ನ ತಂದೆ ನಮ್ಮ ಪಕ್ಕದಲ್ಲಿ ಕುಸಿದುಬಿದ್ದರು,” ಎಂದು ಆರತಿ ಹೇಳಿದ್ದಾರೆ.

“ನಾನು ಇಬ್ಬರು ವ್ಯಕ್ತಿಗಳನ್ನು ನೋಡಿದೆ, ಆದರೆ ಅವರು ಯಾವುದೇ ಸೈನಿಕನ ಸಮವಸ್ತ್ರವನ್ನು ಧರಿಸಿರಲಿಲ್ಲ,” ಅವರು ನೆನಪಿಸಿಕೊಂಡಿದ್ದಾರೆ.

“ನನ್ನ ಮಕ್ಕಳು ಕಿರುಚಲು ಪ್ರಾರಂಭಿಸಿದರು, ಮತ್ತು ಆ ವ್ಯಕ್ತಿ ಹೊರಟುಹೋದನು. ನನ್ನ ತಂದೆ ಹೋಗಿದ್ದಾರೆಂದು ನನಗೆ ತಿಳಿದಿತ್ತು. ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ತಿಳಿಯದೆ, ನನ್ನ ಅವಳಿ ಮಕ್ಕಳನ್ನು ಹಿಡಿದುಕೊಂಡು ಕಾಡಿಗೆ ಓಡಿಹೋದೆ” ಎಂದು ಆರತಿ ಹೇಳಿದ್ದಾರೆ. ಈ ವೇಳೆ ತಾನು ಸುಮಾರು ಒಂದು ಗಂಟೆಗಳ ಕಾಲ ಅರಣ್ಯದ ಮೂಲಕ ಅಲೆದಾಡಿದ್ದಾಗಿ ಅವರು ವಿವರಿಸಿದ್ದಾರೆ.

ಕೊನೆಗೆ ಫೋನ್‌ಗೆ ಸಿಗ್ನಲ್ ಅನ್ನು ಸಿಕ್ಕಾಗ ತಾನು ಚಾಲಕ ಮುಸಾಫಿರ್‌ಗೆ ಕರೆ ಮಾಡಿದ್ದಾಗಿ ಅವರು ಹೇಳಿದ್ದಾರೆ. “ಕುದುರೆಗಳು ಸಹ ಓಡಲು ಪ್ರಾರಂಭಿಸಿದ್ದವು ಮತ್ತು ನಾನು ಅವುಗಳ ಹೆಜ್ಜೆಗುರುತುಗಳನ್ನು ಅನುಸರಿಸಿದೆ.” ಎಂದು ಆರತಿ ಹೇಳಿದ್ದಾರೆ. ಅದಾಗ್ಯೂ, ಇಂತಹ ಭಯಾನಕತೆಯ ನಡುವೆ ಸಹ ತಾನು ಸಹಾನುಭೂತಿಯನ್ನು ಕಂಡುಕೊಂಡಿದ್ದಾಗಿ ಅವರು ಹೇಳಿದ್ದು, ಅಪರಿಚಿತರು ತನ್ನನ್ನು ಕುಟುಂಬದವರಂತೆ ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

“ನನ್ನ ಚಾಲಕ ಮುಸಾಫಿರ್ ಮತ್ತು ಇನ್ನೊಬ್ಬ ವ್ಯಕ್ತಿ, ಸಮೀರ್ – ಅವರು ನನ್ನ ಸಹೋದರರಾದರು. ಅವರು ಎಲ್ಲದರಲ್ಲೂ ನನ್ನೊಂದಿಗೆ ನಿಂತರು. ನನ್ನನ್ನು ಶವಾಗಾರಕ್ಕೆ ಕರೆದೊಯ್ದರು, ಔಪಚಾರಿಕತೆಗಳಿಗೆ ಸಹಾಯ ಮಾಡಿದರು… ನಾನು ಬೆಳಿಗ್ಗೆ 3 ಗಂಟೆಯವರೆಗೆ ಅಲ್ಲಿ ಕಾಯುತ್ತಿದ್ದೆ. ಅವರು ನನ್ನನ್ನು ಸಹೋದರಿಯಂತೆ ನೋಡಿಕೊಂಡರು” ಎಂದು ಅವರು ನೆನಪಿಸಿಕೊಂಡಿದ್ದಾರೆ.

“ಶ್ರೀನಗರದಿಂದ ಹೊರಡುವಾಗ, ನನಗೆ ಈಗ ಕಾಶ್ಮೀರದಲ್ಲಿ ಇಬ್ಬರು ಸಹೋದರರಿದ್ದಾರೆ. ಅಲ್ಲಾಹನು ನಿಮ್ಮಿಬ್ಬರನ್ನೂ ರಕ್ಷಿಸಲಿ.” ಎಂದು ಅವರಿಗೆ ಹೇಳಿದ್ದಾಗಿ ಹೇಳಿದ್ದಾರೆ.

ತನ್ನ ತಂದೆ ರಾಮಚಂದ್ರನ್ ಅವರ ಜೀವವನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ನಂತರ ತನ್ನ ತಂದೆಯ ದೇಹವನ್ನು ಕೊಚ್ಚಿಗೆ ಮರಳಿ ತರುವ ಜವಾಬ್ದಾರಿಯನ್ನು ಅರತಿ ವಹಿಸಿಕೊಂಡರು. ಆದರೆ ಅವರ ತಾಯಿಗೆ ಈ ದುರಂತದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. “ನಾನು ಬಲಶಾಲಿಯಂತೆ ನಟಿಸಬೇಕಾಗಿತ್ತು” ಎಂದು ಅವರು ಹೇಳಿದ್ದಾರೆ.

“ನನ್ನ ತಾಯಿ ಮತ್ತು ಮಕ್ಕಳನ್ನು ನಾನು ನಿರ್ವಹಿಸಬೇಕಾಗಿರುವುದರಿಂದ ನಾನು ಕುಸಿದು ಹೋಗಲು ಸಾಧ್ಯವಾಗಲಿಲ್ಲ.” ಎಂದು ಅವರು ಹೇಳಿದ್ದಾರೆ. ರಾಮಚಂದ್ರನ್ ಗಾಯಗೊಂಡಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಮ್ಮ ತಾಯಿಗೆ ಹೇಳಿದ್ದಾಗಿ ಅವರು ಹೇಳಿದ್ದಾರೆ. “ಬುಧವಾರ ಸಂಜೆ ನಾವು ಕೊಚ್ಚಿಯಲ್ಲಿ ಇಳಿದ ನಂತರವೇ ನಾನು ಅವರಿಗೆ ಸತ್ಯವನ್ನು ಹೇಳಿದೆ” ಎಂದು ಅವರು ಹೇಳಿದ್ದಾರೆ.

ದುಬೈನಲ್ಲಿ ಕೆಲಸ ಮಾಡುತ್ತಿರುವ ಮತ್ತು ಪ್ರಸ್ತುತ ಭಾರತದಲ್ಲಿ ಅಲ್ಪಾವಧಿಗೆ ನೆಲೆಸಿರುವ ಆರತಿ ಅವರು ತಮ್ಮ ಕುಟುಂಬದ ಜೊತೆಗೆ ಕಾಶ್ಮೀರಕ್ಕೆ ರಜೆಯನ್ನು ಕಳೆಯಲು ಯೋಜಿಸಿದ್ದರು. ಅವರು ಏಪ್ರಿಲ್ 21 ರ ಸಂಜೆ ಕಣಿವೆಗೆ ಬಂದಿದ್ದರು. “ನಾನು ಆಗಾಗ್ಗೆ ಪ್ರವಾಸಗಳಿಗೆ ಹೋಗುತ್ತೇನೆ. ಆದರೆ ಕಾಶ್ಮೀರಕ್ಕೆ ಭೇಟಿ ನೀಡಿದ್ದು ಇದೇ ಮೊದಲು” ಎಂದು ಅವರು ಹೇಳಿದ್ದಾರೆ.

ಕೊಚ್ಚಿಯ ಎಡಪ್ಪಳ್ಳಿಯ ರಾಮಚಂದ್ರನ್ ಅವರ ಪಾರ್ಥೀವ ಶರೀರವನ್ನು ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ತರಲಾಯಿತು. ರಾಮಚಂದ್ರನ್ ಅವರ ಅಂತಿಮ ವಿಧಿವಿಧಾನಗಳನ್ನು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಎಡಪ್ಪಳ್ಳಿಯ ಸಾರ್ವಜನಿಕ ಸ್ಮಶಾನದಲ್ಲಿ ನಡೆಸಲಾಗುವುದು, ನಂತರ ಬೆಳಿಗ್ಗೆ 7.30 ರಿಂದ ಬೆಳಿಗ್ಗೆ 9.30 ರವರೆಗೆ ಎಡಪ್ಪಳ್ಳಿಯ ಚಂಗಂಪುಳ ಪಾರ್ಕ್‌ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುತ್ತದೆ. ನನಗೀಗ ಕಾಶ್ಮೀರದಲ್ಲಿ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಮಾನನಷ್ಟ ಪ್ರಕರಣ: ಮೇಧಾ ಪಾಟ್ಕರ್ ವಿರುದ್ಧ ದೆಹಲಿ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್

ಮಾನನಷ್ಟ ಪ್ರಕರಣ: ಮೇಧಾ ಪಾಟ್ಕರ್ ವಿರುದ್ಧ ದೆಹಲಿ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...