ದಕ್ಷಿಣ ಕೋಲ್ಕತ್ತಾದಲ್ಲಿ ಹಿಂದೂ ಮಹಾಸಭಾ ಆಯೋಜಿಸಿರುವ ದುರ್ಗಾ ಪೂಜೆಯಲ್ಲಿ ಮಹಿಷಾಸುರನ ಬದಲಿಗೆ ಮಹಾತ್ಮಗಾಂಧಿಯ ಮೂರ್ತಿಯನ್ನು ರಚಿಸಿ ಅವರನ್ನು ರಾಕ್ಷಸ ಎಂಬಂತೆ ಹೋಲಿಸಿರುವ ಘಟನೆ ನಡೆದಿದೆ. ದೇವಿಯು ಮಹಿಷಾಸುರನ ಬದಲಿಗೆ ಮಹಾತ್ಮಾಗಾಂಧಿಯನ್ನು ವಧಿಸುತ್ತಿರುವಂತೆ ಮೂರ್ತಿಯನ್ನು ರಚಿಸಲಾಗಿದೆ. ಆದರೆ ಸಂಘಟನೆಯು ಈ ಸಾಮ್ಯತೆ ಕಾಕತಾಳೀಯ ಎಂದು ಹೇಳಿಕೊಂಡಿದೆ.
ಸಾಂಪ್ರದಾಯಿಕವಾಗಿ ದುರ್ಗಾಪೂಜಾ ಪೆಂಡಾಲ್ಗಳಲ್ಲಿನ ವಿಗ್ರಹಗಳಲ್ಲಿ ದೇವಿಯ ಈಟಿಯು ಮಹಿಷಾಸುರನಿಗೆ ಚುಚ್ಚುತ್ತಿರುವಂತೆ ಇರುತ್ತವೆ. ಜೊತೆಗೆ ಮಹಿಷಾಸುರನನ್ನು ಸಾಮಾನ್ಯವಾಗಿ ದಪ್ಪ ಕೂದಲು, ದೊಡ್ಡ ಕಣ್ಣುಗಳು ಮತ್ತು ಸ್ನಾಯುಗಳ ರಚನೆಯೊಂದಿಗೆ ತೋರಿಸಲಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿಂದೂ ಮಹಾಸಭಾದ ಈ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಲಾಗಿದೆ. ಚಿತ್ರವನ್ನು ಮೊದಲಿಗೆ ಪತ್ರಕರ್ತ ಇಂದ್ರದೀಪ್ ಭಟ್ಟಾಚಾರ್ಯ ಅವರು ಟ್ವೀಟ್ ಮಾಡಿದ್ದರು. ಇದರ ನಂತರ ಅವರು ಅದನ್ನು ಡಿಲೀಟ್ ಮಾಡಿದ್ದರು. ಚಿತ್ರವು ಹಬ್ಬದ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಬಹುದು ಎಂದು ಕೋಲ್ಕತ್ತಾ ಪೊಲೀಸರು ಅದನ್ನು ಡಿಲೀಟ್ ಮಾಡಲು ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
I have been requested by @KolkataPolice cyber cell @DCCyberKP to delete my tweet on a particular puja in Kolkata as they think it might create tension amid the festivities. As a responsible citizen I abide by their request. SI Abhijit Datta told me they were looking into it.
— Indradeep Bhattacharyya (@Indra_Calcutta) October 2, 2022
ಇದಾದ ಕೆಲವೇ ದಿನಗಳಲ್ಲಿ, ಬಂಗಾಳಿ ಸುದ್ದಿ ವಾಹಿನಿಗಳು ಪೆಂಡಾಲ್ ಮತ್ತು ವಿಗ್ರಹವನ್ನು ತೋರಿಸಲಾರಂಭಿಸಿವೆ. ಕೊನೆಗೆ ಹಿಂದೂ ಮಹಾಸಭಾ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..
“ಇಲ್ಲಿ ಪೂಜಿಸಲ್ಪಟ್ಟ ದುರ್ಗಾ ವಿಗ್ರಹದ ಪಕ್ಕದಲ್ಲಿ ಇರುವ ಮುಖವು ಮಹಾತ್ಮ ಗಾಂಧಿಯವರಂತೆಯೇ ಕಾಣುತ್ತದೆ. ಆದರೆ ಸಾಮ್ಯತೆಗಳು ಕೇವಲ ಕಾಕತಾಳೀಯ. ಅದರ ಫೋಟೋಗಳು ವೈರಲ್ ಆದ ನಂತರ, ಪೊಲೀಸ್ ತಂಡವು ಭೇಟಿ ನೀಡಿ ಮುಖವನ್ನು ಬದಲಾಯಿಸುವಂತೆ ನಮ್ಮನ್ನು ಕೇಳಿದೆ” ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ಹೇಳಿದ್ದಾರೆ.
ಪೊಲೀಸರು ಅದನ್ನು ಬದಲಾಯಿಸಲು ಕೇಳಿದ ನಂತರ ಅವರು ಮಹಿಷಾಸುರನ ವಿಗ್ರಹಕ್ಕೆ ಮೀಸೆ ಮತ್ತು ಕೂದಲು ಹಾಕಿದ್ದಾಗಿ ಅವರು ಹೇಳಿದ್ದು, ಜೊತಗೆ “ಗಾಂಧಿಯನ್ನು ಟೀಕಿಸುವ ಅಗತ್ಯವಿದೆ” ಎಂದೂ ಹೇಳಿದ್ದಾರೆ.
ಬಿಜೆಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಮತ್ತು ಹಿಂದೂ ಮಹಾಸಭಾದ ಬಂಗಾಳ ವಿಭಾಗವು ಘಟನೆಯನ್ನು ಖಂಡಿಸಿವೆ.
“ಅಖಿಲ ಭಾರತೀಯ ಹಿಂದೂ ಮಹಾಸಭಾ ಮಾಡಿದ್ದನ್ನು ನಾವು ಬೆಂಬಲಿಸುವುದಿಲ್ಲ. ನಾವು ಅದನ್ನು ಖಂಡಿಸುತ್ತೇವೆ. ಗಾಂಧೀಜಿಯವರ ಅಭಿಪ್ರಾಯಗಳೊಂದಿಗೆ ನಮಗೂ ಭಿನ್ನಾಭಿಪ್ರಾಯಗಳಿವೆ, ಆದರೆ ಇದು ಅದರ ವಿರುದ್ಧ ಪ್ರತಿಭಟಿಸುವ ಮಾರ್ಗವಲ್ಲ” ಎಂದು ಬಂಗಾಳ ಪರಿಷತ್ ಹಿಂದೂ ಮಹಾಸಭಾದ ಅಧ್ಯಕ್ಷ ಸಂದೀಪ್ ಮುಖರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಗಾಂಧಿ ಸ್ಮರಣೆಯ ಕೆಲವು ವೈರುಧ್ಯಗಳು
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ರಾಜ್ಯ ವಕ್ತಾರ ಕುನಾಲ್ ಘೋಷ್, “ಇದನ್ನು ನಿಜವಾಗಿಯೂ ಮಾಡಿದ್ದರೆ, ಅದು ಅಪರಾಧವಲ್ಲದೇ ಬೇರೇನೂ ಅಲ್ಲ. ಇದು ರಾಷ್ಟ್ರಪಿತನಿಗೆ ಮಾಡಿದ ಅವಮಾನ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಮಾಡಿದ ಅವಮಾನ. ಇಂತಹ ಅವಮಾನದ ಬಗ್ಗೆ ಬಿಜೆಪಿ ಏನು ಹೇಳುತ್ತದೆ? ಗಾಂಧೀಜಿಯ ಹಂತಕ ಯಾವ ಸೈದ್ಧಾಂತಿಕ ಸಂಘಕ್ಕೆ ಸೇರಿದವನು ಎಂದು ನಮಗೆ ತಿಳಿದಿದೆ” ಎಂದು ಅವರು ಹೇಳಿದ್ದಾರೆ.
“ಇದು ದುರದೃಷ್ಟಕರ ನಡೆ. ನಾವು ಅದನ್ನು ಖಂಡಿಸುತ್ತೇವೆ. ಇದು ಕಳಪೆ ಅಭಿರುಚಿಯಲ್ಲಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಸುದ್ದಿಗಾರರಿಗೆ ತಿಳಿಸಿದರು.
“ಇದಾಗಿದೆ ಬಿಜೆಪಿ ಮತ್ತು ಸಂಘಪರಿವಾರ. ಅವರಿಗೆ ರಾಷ್ಟ್ರವನ್ನು ವಿಭಜಿಸುವುದು ಮಾತ್ರ ಗೊತ್ತು. ಅವರು ಬ್ರಿಟಿಷ್ ವಿರೋಧಿ ಶಕ್ತಿಗಳನ್ನು ‘ಅಸುರ’ ಮತ್ತು ಬ್ರಿಟಿಷರನ್ನು (ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ ವಸಾಹತುಶಾಹಿ ಬ್ರಿಟಿಷರು) ದುರ್ಗೆ ಎಂದು ಪರಿಗಣಿಸುತ್ತಾರೆ” ಎಂದು ಸಿಪಿಐ(ಎಂ) ಕೇಂದ್ರ ಸಮಿತಿಯ ಸದಸ್ಯ ಸಮಿಕ್ ಲಾಹಿರಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಈ ವರ್ಷ, ಜನವರಿ 31 ರಂದು, ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು, ಹಿಂದೂ ಮಹಾಸಭಾವು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಅವರ ಹಂತಕ ನಾಥೂರಾಂ ಗೋಡ್ಸೆ ಮತ್ತು ಗಾಂಧಿ ಹತ್ಯೆಯ ಪ್ರಕರಣದ ಸಹ ಆರೋಪಿ ನಾರಾಯಣ ಆಪ್ಟೆಗೆ ಶ್ರದ್ಧಾಂಜಲಿ ಸಲ್ಲಿಸಿ “ಸ್ಮೃತಿ ದಿವಸ್” ಆಚರಿಸಿತ್ತು.
ಇದನ್ನೂ ಓದಿ: ಗೋಡ್ಸೆ ವಿಜೃಂಭಿಸುವ ಕಾಲದಲ್ಲಿ ಗಾಂಧಿವಾದದ ಕನವರಿಕೆ..
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿ, ಅವರ ಗೌರವವಾಗಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸಲು ಎಲ್ಲರಿಗೂ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ‘‘ಗಾಂಧಿ ಅವರನ್ನು ಕೊಂದ ಸಿದ್ಧಾಂತವು ಕಳೆದ ಎಂಟು ವರ್ಷಗಳಲ್ಲಿ ಅಸಮಾನತೆ, ವಿಭಜನೆ ಮತ್ತು ಕಷ್ಟಪಟ್ಟು ಗೆದ್ದ ಸ್ವಾತಂತ್ರ್ಯವನ್ನು ಮಣ್ಣುಪಾಲು ಮಾಡಿದೆ ಎಂದು ಹೇಳಿದ್ದಾರೆ.