Homeಮುಖಪುಟಜಯ ಮಹಾಭಾರತದ ಮರುಕಥನ

ಜಯ ಮಹಾಭಾರತದ ಮರುಕಥನ

- Advertisement -
- Advertisement -

ಭಾರತದ ಮಹಾ ಕಾವ್ಯವಾದ ಮಹಾಭಾರತದ ಮೂಲಕೃತಿ “ಜಯ”. ಅದೇನೂ ಈಗ ನಾವು ಕಾಣುತ್ತಿರುವ ಮಹಾಭಾರತದಷ್ಟು ದೊಡ್ಡದಾಗಿರಲಿಲ್ಲ. ಕುಟುಂಬವೆರಡರ ದಾಯಾದಿ ಕಲಹದ ಕತೆಯು ಬಾಯಿಂದಬಾಯಿಗೆ ಹರಡಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸಿತು. ಪೀಳಿಗೆಗಳಿಂದ ಪೀಳಿಗೆಗಳಿಗೆ ದಾಟಿತು. ಹಾಗೆ ಹರಡುತ್ತಾ, ಸಂಚರಿಸುತ್ತಾ, ದಾಟುತ್ತಾ ವಿವಿಧ ಪ್ರದೇಶಗಳ ವಿವಿಧ ಸಂಸ್ಕೃತಿಗಳನ್ನು ತನ್ನದಾಗಿಸಿಕೊಳ್ಳುತ್ತಾ, ವಿವಿಧ ರೀತಿನೀತಿಗಳನ್ನು ಒಳಗೊಳ್ಳುತ್ತಾ, ವಿವಿಧ ಮಾದರಿಗಳ ಪಾತ್ರಗಳೆಲ್ಲಾ ಭಾಗವಹಿಸುತ್ತಾ ಬೃಹತ್ತಾಗಿ ಬೆಳೆದು ಮಹಾಭಾರತವಾಯಿತು.

ಮಹಾಭಾರತವೆಂಬ ಗೊಂಡಾರಣ್ಯವನ್ನು ಹೊಕ್ಕು ನೋಡಿದರೆ ನಾವು ದೇಶವೆಂದು ಈಗ ಕರೆಯುವ ಈ ಭೂಭಾಗದಲ್ಲಿ ಎಂತೆಂತಹ ಸಂಸ್ಕೃತಿಗಳಿದ್ದವು, ಸಾಮಾಜಿಕ ಪದ್ಧತಿಗಳಿದ್ದವು, ಜನರಿದ್ದರು, ಎಂತೆಂತಹ ಘನತೆ ಗೌರವಗಳಿದ್ದವು, ಯಾವ್ಯಾವ ಕಾರಣಗಳಿಂದ ಸಾಮಾಜಿಕ ಮತ್ತು ವ್ಯಕ್ತಿಗತ ಅಪಮಾನಗಳು ಮತ್ತು ಸನ್ಮಾನಗಳಾಗುತ್ತಿದ್ದವು? ಎಂತೆಂತಹ ನಮೂನೆಯ ಮನಸ್ಥಿತಿಗಳಿದ್ದವು; ಹೀಗೆ ಬಲು ಸೂಕ್ಷ್ಮ ಮತ್ತು ಸ್ಥೂಲ ವಿಚಾರಗಳೆಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತವೆ.

ರಾಜಕಾರಣ, ಧರ್ಮಕಾರಣ, ಮಾನುಷಕಾರಣ, ದ್ವೇಷಕಾರಣ, ಮೋಹಕಾರಣ, ಅಹಂಕಾರಕಾರಣ, ದೌರ್ಬಲ್ಯಕಾರಣ. ಹೀಗೆ ನಾನಾ ಕಾರಣಗಳು ಮನುಷ್ಯನಲ್ಲಿ ಮತ್ತು ಮಾನುಷ ಸಮಾಜದಲ್ಲಿ ಉಂಟುಮಾಡುವ ಪರಿಣಾಮಗಳನ್ನು ವಿವರಿಸುತ್ತದೆ ಈ ಮಹಾಭಾರತ. ಚಾತುರ್ವರ್ಣ ವ್ಯವಸ್ಥೆಯು, ಪ್ರಭುತ್ವದ ದಬ್ಬಾಳಿಕೆಯು, ಸ್ವಜನಾಸಕ್ತಿ, ಸ್ವಪರಿವಾರ ಮೋಹವು ಏನೆಲ್ಲಾ ಶೋಷಣೆಗಳನ್ನು ಮಾಡಿತು, ಎಂತೆಂತಹ ದುರಂತಗಳನ್ನು ಕಂಡಿತು ಎಂದು ಕಂಡಹಾಗೇ ವಿವರಿಸುತ್ತದೆ. ಒಳ್ಳೆಯ ಅಥವಾ ಕೆಟ್ಟ ಎಂಬ ಗೆರೆ ಎಳೆದಂತಹ ಸಿದ್ಧ ಮಾದರಿಗಳನ್ನು ಮುಂದಿಡದೇ, ಒಳ್ಳೆಯತನದ ಹಿಂದಿನ ಕರಾಳ ಮುಖವನ್ನು, ಕೆಟ್ಟದೆನ್ನುವುದರ ಹಿಂದಿನ ನೈಜತೆ ಮತ್ತು ಪ್ರಾಮಾಣಿಕತೆಯ ಗುಣವನ್ನು ಗುರುತಿಸುತ್ತದೆ.

ನಿಷ್ಪಕ್ಷಪಾತ ನಿರೂಪಣೆಯೇ ಮಹಾಭಾರತದ ಶಕ್ತಿ ಮತ್ತು ಮೌಲ್ಯ. ಪಕ್ಷಪಾತ ಮಾಡುವ ಕೃಷ್ಣನು ಕೂಡ ಶಾಪಕ್ಕೆ, ದುರ್ವಿಧಿಯ ಸಾವಿಗೆ ಬಲಿಯಾಗುತ್ತಾನೆ. ಒಳ್ಳೆಯವರೆಂದು ಕೃಷ್ಣನಿಂದ ಮತ್ತು ಭೀಷ್ಮಾದಿಗಳಿಂದ ಪ್ರಾಮಾಣೀಕರಿಸಲ್ಪಡುವ ಪಾಂಡವರು ಹಾದಿಯಲ್ಲಿ ಹೆಣಗಳಾಗಿ ಬೀಳುತ್ತಾರೆ. ಇನ್ನು ಪಾತ್ರಗಳೆಂದರೆ ಅವು ಬರಿಯ ವ್ಯಕ್ತಿಗಳಲ್ಲ. ವ್ಯಕ್ತಿತ್ವದ ಮಾದರಿಗಳು. ಶಂತನುವಿನಿಂದ ಹಿಡಿದು ಪರೀಕ್ಷಿತನವರೆಗೂ ಈಗಲೂ ನಾವು ನಮ್ಮನಮ್ಮಲ್ಲಿ ಕಾಣುತ್ತಲೇ ಇರುವ ಹಲವು ಮನಸ್ಥಿತಿಗಳ, ಹಲವು ವ್ಯಕ್ತಿತ್ವಗಳ ಮಾದರಿಗಳು.

ಹಾಗಾಗಿಯೇ ಇದು ಒಂದು ಧಾರ್ಮಿಕ ಗ್ರಂಥವಲ್ಲ. ಈ ನೆಲದ ನಿವಾಸಿಗಳಿಗೆಲ್ಲಾ, ಅವರು ಯಾವುದೇ ಧರ್ಮದವರಾಗಲಿ, ತಮ್ಮತಮ್ಮಲ್ಲಿ ಕಾಣುತ್ತಿರುವ ವ್ಯಕ್ತಿತ್ವಗಳ, ಸಂಘರ್ಷಗಳ, ಬದುಕಿನ ನೋವುನಲಿವುಗಳ ಕಾರಣ ಮತ್ತು ಪರಿಣಾಮಗಳ ಸಮಾಜೋಸಾಂಸ್ಕೃತಿಕ ಕಥನವಿದು. ನಿರಂತರವಾಗಿ ಪ್ರಯೋಗಗಳಿಗೆ ಮತ್ತು ಪರಿವರ್ತನೆಗಳಿಗೆ ಒಳಪಡುತ್ತಿದ್ದ ತಾತ್ವಿಕತೆಗಳ ವಿಶ್ಲೇಷಣೆ ಇದು. ವಿಶಾಲ ಭೂಭಾಗದ ಸಂಕೀರ್ಣ ಸಂಸ್ಕೃತಿಗೆ ಇದೊಂದು ರೂಪಕ ಇತಿಹಾಸ. ಯಾರೂ ಅಮುಖ್ಯರಲ್ಲದೇ ಸಮಾಜದ ಮತ್ತು ವ್ಯಕ್ತಿಗಳ ಆಗುಹೋಗುಗಳಿಗೆ ಕಾರಣ ಕರ್ತೃಗಳಾದವರ ಒಂದು ಮಹಾಕಾವ್ಯ.

ಈ ಮಹಾಕಾವ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ದಾರಿ ತೋರುವ ಕೃತಿ ದೇವದತ್ತ ಪಟ್ನಾಯಕರವರ ಜಯ. ಗಿರಡ್ಡಿ ಗೋವಿಂದರಾಜ ಇದನ್ನು ಕನ್ನಡಕ್ಕೆ ತಂದಿದ್ದಾರೆ.

ಈಗ ನಾವು ತಿಳಿದಿರುವ ರಿಲೀಜಿಯನ್ ಎಂಬ ಧರ್ಮದ ಪರಿಕಲ್ಪನೆಯೇ ಇಲ್ಲದಿದ್ದ ಮಹಾಭಾರತದ ಕಾಲದಲ್ಲಿಯೂ ಧರ್ಮದ ಬಗ್ಗೆ ಮಾತಾಡುತ್ತಾರೆ. ಅದನ್ನು ಎತ್ತಿ ಹಿಡಿಯುತ್ತಾರೆ. ಅದನ್ನು ಪಾಲಿಸುತ್ತಾರೆ. ಅದಕ್ಕಾಗಿ ಬದುಕುತ್ತಾರೆ. ಅದಕ್ಕಾಗಿ ಸಾಯುತ್ತಾರೆ. ಆದರೆ ಆ ಧರ್ಮವೆಂಬುದು ಅಲ್ಲಿ ಸ್ವಧರ್ಮ ಎಂಬ ಒಬ್ಬರ ಅಥವಾ ಒಂದರ ಅಥವಾ ಒಂದು ವ್ಯವಸ್ಥೆಯ ಮೂಲ ಗುಣಸ್ವಭಾವ, ರೀತಿ ಮತ್ತು ನೀತಿ. ಅದೊಂದು ಜೈವಿಕ, ಆಧ್ಯಾತ್ಮಿಕ, ತಾತ್ವಿಕ ಮತ್ತು ಸಾಮಾಜಿಕ ಅಸ್ತಿತ್ವಗಳ ಸೂಕ್ಷ್ಮ ವಿಚಾರ.

ಮಹಾಭಾರತ ಭಾರತದ ಒಂದು ಹೆಮ್ಮೆಯ ಕಾವ್ಯ. ಆದರೆ ನಿಷ್ಪಕ್ಷಪಾತವಾದ ಈ ಮಹಾಭಾರತವನ್ನು ಪರ ಅಥವಾ ವಿರೋಧದ ನೆಲೆಗಟ್ಟುಗಳಿಂದ ನೋಡದೇ ರೂಪಕ ಇತಿಹಾಸವನ್ನು ಅಭ್ಯಾಸ ಮಾಡುವಂತೆ ದೇವದತ್ತ ಜಯವನ್ನು ಬರೆದು ಮಹದುಪಕಾರ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...