Homeಮುಖಪುಟಮದರ್‌ ತೆರೇಸಾರ ಮಿಷನರೀಸ್‌ ಬ್ಯಾಂಕ್‌ ಖಾತೆಗಳ ಸ್ಥಗಿತ: ಮಮತಾ ಬ್ಯಾನರ್ಜಿ ಆರೋಪ

ಮದರ್‌ ತೆರೇಸಾರ ಮಿಷನರೀಸ್‌ ಬ್ಯಾಂಕ್‌ ಖಾತೆಗಳ ಸ್ಥಗಿತ: ಮಮತಾ ಬ್ಯಾನರ್ಜಿ ಆರೋಪ

- Advertisement -
- Advertisement -

ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮಾಡಿದ್ದಾರೆ.

“ಕೇಂದ್ರ ಸಚಿವಾಲಯವು ಭಾರತದಲ್ಲಿನ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಕ್ರಿಸ್‌ಮಸ್‌ನಲ್ಲಿ ಸ್ಥಗಿತಗೊಳಿಸಿದೆ ಎಂದು ಕೇಳಿ ಆಘಾತವಾಯಿತು!” ಎಂದು ಟ್ವೀಟ್‌ ಮಾಡಿರುವ ಅವರು, “ಕಾನೂನು ಅತ್ಯುನ್ನತವಾಗಿದ್ದರೂ, ಮಾನವೀಯ ಪ್ರಯತ್ನಗಳಲ್ಲಿ ರಾಜಿ ಮಾಡಿಕೊಳ್ಳಬಾರದು” ಎಂದು ತಿಳಿಸಿದ್ದಾರೆ.

ಕಲ್ಕತ್ತಾದ ಆರ್ಚ್‌ಡಯಾಸಿಸ್‌ನ ಫಾದರ್ ಡೊಮಿನಿಕ್ ಗೋಮ್ಸ್ ಅವರು ಹೇಳಿಕೆ ನೀಡಿದ್ದು, “ಬಡವರಿಗೆ ಕ್ರೂರ ಕ್ರಿಸ್ಮಸ್ ಉಡುಗೊರೆ ಇದು” ಎಂದು ಹೇಳಿದ್ದಾರೆ.

ಸಂಸ್ಥೆಯ ಚಟುವಟಿಕೆಗಳ ಫಲಾನುಭವಿಗಳು ಸೇರಿದಂತೆ 22,000 ಜನರ ಮೇಲೆ ಸರ್ಕಾರದ ನಿರ್ಧಾರ ಪರಿಣಾಮ ಬೀರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಮಿಷನರೀಸ್ ಆಫ್ ಚಾರಿಟಿ ಹೇಳಿಕೆ ನೀಡಿದ್ದು, “ಕ್ರಿಶ್ಚಿಯನ್ ಸಮುದಾಯ ಮತ್ತು ಅವರ ಸಾಮಾಜಿಕ ಪ್ರಭಾವದ ಮೇಲಿನ ಈ ಇತ್ತೀಚಿನ ದಾಳಿಯು ಭಾರತದ ಬಡ ಬಡವರ ಮೇಲಿನ ದಾಳಿಗಿಂತ ಹೆಚ್ಚು ಭೀಕರವಾಗಿದೆ” ಎಂದು ಹೇಳಿದೆ.

“ಕ್ರಿಶ್ಚಿಯನ್ ಸಂಘಟನೆಗಳು ಅನ್ಯಧರ್ಮಿಯರನ್ನು ಮತಾಂತರ ಮಾಡುತ್ತವೆ ಎಂದು ಆರೋಪಿಸಿ ಇಂತಹ ಘಟನೆಗಳನ್ನು ಸಮರ್ಥಿಸಿಕೊಳ್ಳಲಾಗುತ್ತದೆ. ಈ ಆರೋಪವು ಸುಳ್ಳಾಗಿದೆ. ಮತಾಂತರ ನಿಜವಾಗಿದ್ದರೆ, ಪ್ರಸ್ತುತ ಭಾರತದಲ್ಲಿ ಶೇ. 2.3ಕ್ಕಿಂತ ಹೆಚ್ಚು ಕ್ರಿಶ್ಚಿಯನ್ನರು ಇರುತ್ತಿದ್ದರು” ಎಂದು ತಿಳಿಸಿದ್ದಾರೆ.

ಗುಜರಾತ್‌ನ ವಡೋದರಾ ನಗರದಲ್ಲಿ ಬಾಲಕಿಯರ ಚಾರಿಟಿ ಹೋಮ್‌ನಲ್ಲಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಈ ತಿಂಗಳ ಆರಂಭದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಹುಡುಗಿಯರಿಗೆ ಬೈಬಲ್ ಓದಲು ಹೇಳಲಾಗುತ್ತಿದೆ. ಇತರ ಸಮುದಾಯಗಳಿಗೆ ಸೇರಿದವರ ಕೆಲವು ವಿವಾಹಗಳನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಸಲಾಗುತ್ತಿದೆ ಎಂಬ ಆರೋಪಗಳನ್ನು ಪೊಲೀಸರು ಮಾಡಿದ್ದರು. ಆದರೆ, ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿರುವ ಸನ್ಯಾಸಿನಿಯೊಬ್ಬರು ಆರೋಪಳನ್ನು ಅಲ್ಲಗಳೆದಿದ್ದರು.

ಸ್ಥಗಿತ ಮಾಡಿಲ್ಲ: ಗೃಹ ಸಚಿವಾಲಯ ಸ್ಪಷ್ಟನೆ

“ಮಿಷನರೀಸ್ ಆಫ್ ಚಾರಿಟಿಯ ಯಾವುದೇ ಖಾತೆಗಳನ್ನು ಸ್ಥಗಿತ ಮಾಡಿಲ್ಲ. ಮಿಷನರೀಸ್ ಆಫ್ ಚಾರಿಟಿ ಸ್ವತಃ ತನ್ನ ಖಾತೆಗಳನ್ನು ಸ್ಥಗಿತ ಮಾಡಲು ಎಸ್‌ಬಿಐಗೆ ವಿನಂತಿಯನ್ನು ಕಳುಹಿಸಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ” ಎಂದು ಹೇಳಿಕೆ ಗೃಹ ಸಚಿವಾಲಯ ಹೇಳಿದೆ.

“ಮಿಷನರೀಸ್ ಆಫ್ ಚಾರಿಟಿಯ ನವೀಕರಣ ಅರ್ಜಿಯನ್ನು ಅನುಮೋದಿಸಲಾಗಿಲ್ಲ. ಮಿಷನರೀಸ್ ಆಫ್ ಚಾರಿಟಿಯ ನೋಂದಣಿಯು ಡಿಸೆಂಬರ್ 31, 2021 ರವರೆಗೆ ಮಾನ್ಯವಾಗಿದೆ” ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.


ಇದನ್ನೂ ಓದಿರಿ: ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಮತಾಂತರ ನಿಷೇಧ ಕಾಯ್ದೆ ರದ್ದು: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read