Homeಅಂಕಣಗಳುಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

ಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

- Advertisement -
- Advertisement -

| ಡಾ. ವಾಸು ಎಚ್.ವಿ |

‘ಮುಖ್ಯವಾಹಿನಿ’ ಮಾಧ್ಯಮಗಳ ಕೊಳಕುತನವನ್ನು ನೋಡಿ ಅಪಹಾಸ್ಯ ಮಾಡಿಕೊಂಡು ನಗುವುದು ಒಮ್ಮೊಮ್ಮೆ ಅಪಾಯಕಾರಿಯಾದುದು. ಏಕೆಂದರೆ ಇಂತಹ ಮಾಧ್ಯಮಗಳು ಜೀವವಿರೋಧಿಯಾಗಿದ್ದು ಪ್ರಜಾತಂತ್ರದ ಬುಡಕ್ಕೆ ಕೊಳ್ಳಿಯಿಡುತ್ತಿವೆ. ಆದರೆ ಅವನ್ನು ಬಯ್ದುಕೊಳ್ಳುತ್ತಾ, ಆತಂಕ ಪಡುತ್ತಾ, ವ್ಯಕ್ತಿಗತವಾಗಿ ಯಾರನ್ನೋ ಗುರಿ ಮಾಡುತ್ತಾ ಕಾಲವ್ಯಯ ಮಾಡುವುದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪರ್ಯಾಯದ ನಿರ್ಮಾಣ ಮಾತ್ರ ಈ ವಿಷವ್ಯೂಹದಿಂದ ನಮ್ಮೆಲ್ಲರನ್ನು ಮೇಲೆತ್ತಬಹುದು.

ಇದರಲ್ಲಿ ಒಂದು ತೊಡಕಿದೆ. ಪರ್ಯಾಯದ ಮಾತಾಡುವವರು ಸಮಾಜದ ಮುಖ್ಯವಾಹಿನಿಯಲ್ಲಿ ಅಂತಹ ದೊಡ್ಡ ಪರಿಣಾಮ ಬೀರದ, ಶುದ್ಧ ಮತ್ತು ರ್ಯಾಡಿಕಲ್ ಕಂಟೆಂಟ್ ಹೊಂದಿರುವ ಪುಟ್ಟ ಪ್ರಯತ್ನದ ಕಡೆಗೆ ಒತ್ತು ಕೊಡುತ್ತಾರೆ. ಮೊದಲೇ ಅಂಚಿನಲ್ಲಿರುವುದನ್ನು, ಪರ್ಯಾಯದ ಹೆಸರಿನಲ್ಲಿ ಅಂಚಿನಲ್ಲೇ ಉಳಿಸುವುದು ಪರ್ಯಾಯವಾಗಲಾರದು. ಮುಖ್ಯವಾಹಿನಿಯ ಘಾತುಕ ಗಾತ್ರವನ್ನು ಹಿಮ್ಮೆಟ್ಟಿಸಿ, ಅದೇ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಳ್ಳುವ ಸೃಜನಶೀಲ ಮಾರ್ಗವನ್ನು ಶೋಧಿಸಿ, ಸಾಕಾರಗೊಳಿಸಿ ಜಯಿಸುವುದೇ ನಿಜವಾದ ಪರ್ಯಾಯ.

ಈವರೆಗಿನ ಪರಿಭಾಷೆಯು ತಪ್ಪು ಅರ್ಥ ಕೊಡುವುದೆಂಬ ಕಾರಣಕ್ಕೆ, ಪರ್ಯಾಯ ಮಾಧ್ಯಮದ ಬದಲಿಗೆ ಹೊಸ ಮಾಧ್ಯಮ ಎಂಬ ಪದವನ್ನು ಶೀರ್ಷಿಕೆಯಲ್ಲಿ ಬಳಸಲಾಗಿದೆ. ಮಾಧ್ಯಮಗಳು ಉಳ್ಳವರ ಕಪಿಮುಷ್ಟಿಯಲ್ಲಿ ಸೇರುವುದು ಮತ್ತು ಹಳತಾಗುವುದು ಒಟ್ಟಿಗೇ ನಡೆಯುತ್ತಿರುತ್ತದೆ. ಆ ನಂತರ ಹೊಸ ಮಾಧ್ಯಮ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳನ್ನು ಹೊಸ ಮಾಧ್ಯಮಗಳೆಂದು ಕರೆಯಲಾಗುತ್ತದಾದರೂ, ಅಲ್ಲೊಂದು ವಿಪರ್ಯಾಸವಿದೆ. Social media is not so social ಎಂಬ ಮಾತಿದೆ. ಏಕೆಂದರೆ, ಅದೂ ಸಹಾ ಕಾರ್ಪೋರೇಟ್ ಲಾಭವನ್ನು ಹಿಗ್ಗಿಸಲೆಂದೇ ಹೆಚ್ಚೆಚ್ಚು ಪುನರ್ರೂಪಿತಗೊಳ್ಳುತ್ತಿದೆ.

ಅಂದರೆ, ಹೊಸ ಮಾಧ್ಯಮವು ಬಹುಬೇಗ ಹಳತಾಗುತ್ತಿರುವ ಕಾಲದಲ್ಲಿ ನಾವು ನವನವೀನ ದಾರಿಯನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಲಂಕೇಶರು 90ರ ದಶಕದ ಮಧ್ಯಭಾಗದಲ್ಲೇ ‘ಪತ್ರಿಕೆ’ಯ ಬರಹದಲ್ಲಿ ಅದನ್ನು ಹೇಳಿದ್ದರು. ಆಗಿಂದಾಗ್ಗೆ ಪೊರೆ ಕಳಚದೇ ಮಾಧ್ಯಮವು ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅವರ ಮಾತಾಗಿತ್ತು. ಲಂಕೇಶರು ರಾಜಕೀಯ ಮತ್ತು ಸಾಹಿತ್ಯಗಳನ್ನು ಪತ್ರಿಕೆಯ ಪ್ರಮುಖ ಭಾಗಗಳನ್ನಾಗಿಸಿ ಜಾಣ ಜಾಣೆಯರನ್ನು ಓರಿಯೆಂಟ್ ಮಾಡಲು ಟ್ಯಾಬ್ಲಾಯ್ಡ್ ವಾರಪತ್ರಿಕೆಯನ್ನು ಪ್ರಭಾವೀ ಹತಾರವಾಗಿ ಬಳಸಿದರು.

ಟ್ಯಾಬ್ಲಾಯ್ಡ್ ಪತ್ರಿಕೆಗಳು ತಳಮುಟ್ಟಿ, ಮುದ್ರಣ ಮಾಧ್ಯಮ ತನ್ನ ಬಿರುಸು ಕಳೆದುಕೊಳ್ಳುತ್ತಿರುವ ಯುಗದಲ್ಲಿ ‘ನ್ಯಾಯಪಥ’ ಆರಂಭವಾಗಿದೆ. ಹಾಗಾದರೆ, ಇದು ಕೇವಲ ಒಂದು ಸಾಂಕೇತಿಕ ಪ್ರಯತ್ನವಾಗಿ ಮುಂದುವರೆಯಬೇಕೆಂಬುದೇ ನಮ್ಮ ಯೋಜನೆಯೇ? ಖಂಡಿತಾ ಅಲ್ಲ. ನಷ್ಟದಲ್ಲೇ ನಡೆಯುತ್ತಿರುವ ಬಹುಪಾಲು ಟಿವಿ ಚಾನೆಲ್‍ಗಳು ಮುಂದೆಂದೋ ಕ್ಲಿಕ್ ಆಗುತ್ತೇವೆಂಬ ಭ್ರಾಂತಿಯಲ್ಲಿ ಕಾಲು ಎಳೆದುಕೊಂಡು ನಡೆಯುತ್ತವಲ್ಲಾ ಹಾಗೆ ಇದನ್ನು ನಡೆಸಲಾಗುತ್ತಿದೆಯೇ? ಇಲ್ಲವೇ ಇಲ್ಲ. ನ್ಯಾಯಪಥ ಪತ್ರಿಕೆ ಅಥವಾ ಈಗ ಚುರುಕು ಹಾಗೂ ವ್ಯಾಪಕತೆ ಪಡೆದುಕೊಳ್ಳುತ್ತಿರುವ ವೆಬ್ ಪೋರ್ಟಲ್‍ಗಳು ಹೊಸ ಮಾಧ್ಯಮ ರೂಪಿಸಲು ಬೇಕಾದ ಜನರನ್ನು ಒಟ್ಟುಗೂಡಿಸುವ ವೇದಿಕೆಗಳಷ್ಟೇ.

ಎಲ್ಲಾ ಕಾಲದಲ್ಲೂ ಅತ್ಯಂತ ಪ್ರಬಲವಾದ ಮಾಧ್ಯಮ ಯಾವುದು? ಅದು ಜನರೇ ವಾಹಕರಾಗಿ ಪ್ರಸಾರ ಮಾಡುವ ಮಾಧ್ಯಮ. ಜನರೇ ತಮಗೆ ಬೇಕಾದ ಕಥನವನ್ನೂ ಕಟ್ಟಿಕೊಳ್ಳುವಂತಾದರೆ? ಅಂತಹ ಮಾಧ್ಯಮವನ್ನು ಯಾವುದೂ ಸರಿಗಟ್ಟಲಾರದು. ವಿವಿಧ ದೇಶಗಳಲ್ಲಿ ತಮ್ಮ ಸ್ಥಾವರಗಳನ್ನು ಹೊಂದಿ, ವಚ್ರ್ಯುಯಲ್ ಜಗತ್ತಿನಲ್ಲಿ ಜಂಗಮವಾಗಿರುವ ಸಾಮಾಜಿಕ ಜಾಲತಾಣಗಳು ಜನರ ಆಲೋಚನೆಗಳು ಹರಳುಗಟ್ಟಿ ಪ್ರಸಾರಗೊಳ್ಳಲು ವೇದಿಕೆಯನ್ನು ಒದಗಿಸಿವೆ. ಮೇಲೆ ಹೇಳಿದಂತೆ ಇದಕ್ಕೆ ಮಿತಿಗಳಿವೆಯಾದರೂ, ಈ ಸದ್ಯ ಅವು ಇನ್ನೂ ವಿಸ್ತಾರಗೊಳ್ಳುವ ಹಂತದಲ್ಲೇ ಇವೆ. ಮುಂದೊಂದು ದಿನ (ಇಂದು ಕಾಶ್ಮೀರದಲ್ಲಿ ಆಗಿರುವಂತೆ) ಸ್ಥಗಿತಗೊಳ್ಳುವ ಅಥವಾ ಸಂಪೂರ್ಣ ಸೆಲೆಕ್ಟಿವ್ ಆಗುವುದಕ್ಕೆ ಮುಂಚೆ ಬದಲೀ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದಾದರೂ, ಅಲ್ಲಿಯವರೆಗೆ ಅವು ನಮಗೆ ಕೆಲವು ಸಾಧ್ಯತೆಗಳನ್ನು ಒದಗಿಸುತ್ತವೆ.

ಬಲವಾದ ಹೊಸ ಮುಖ್ಯವಾಹಿನಿ ರೂಪಿಸಲು ಮೊದಲು ನಾವು ಓದುಗರ ಅಂದರೆ ಸಾಮಾನ್ಯ ಜನರ ಮುಂಚೂಣಿ ವಿಭಾಗದ ಹಿತಾಸಕ್ತಿಯನ್ನು ರೂಪಿಸುವುದು ಮುಖ್ಯ. ಆಗ ಅವರೇ ಸುದ್ದಿಯನ್ನು ರೂಪಿಸುತ್ತಾರೆ ಮತ್ತು ಅದರ ಪ್ರಸಾರಕ್ಕೂ ಕಾರಣರಾಗುತ್ತಾರೆ. ಎಲ್ಲಾ ಕಾಲದಲ್ಲೂ ಇವರೇ, ಅಂದರೆ ಈ ಸಾಮಾನ್ಯ ಜನರೇ, ಭಾರೀ ಬಹುಸಂಖ್ಯಾತರಾದ್ದರಿಂದ (overwhelming majority) ಅವರು ಸುದ್ದಿಯನ್ನು ರೂಪಿಸುವುದು ಮತ್ತು ಪ್ರಸಾರ ಮಾಡುವುದಕ್ಕೆ ಇಳಿದರೆ ಅದನ್ನು ಯಾರಾದರೂ ಹೇಗೆ ಸರಿಗಟ್ಟಬಲ್ಲರು. ಅವರೇ ಅದಕ್ಕೆ ಬೇಕಾದ ಸಂಪನ್ಮೂಲವನ್ನೂ ರೂಢಿಸಿಕೊಳ್ಳುತ್ತಾರೆ. ಅಂದರೆ ಬಹಳ ಹೆಚ್ಚಿನ ಜನರು ಅದನ್ನು ಓದಿದರೆ ಜಾಹೀರಾತಿನ ಮೂಲಕ ಅಥವಾ ನೇರವಾಗಿ ಹಣ ನೀಡುವ ಮೂಲಕ.

ಈ ಬಹುಸಂಖ್ಯಾತ ಜನರನ್ನು ಅವರ ಹಿತಾಸಕ್ತಿಗೆ ಪೂರಕವಾಗಿ ಚಿಂತಿಸಲು, ಕಥನ ರೂಪಿಸಲು, ಸುದ್ದಿ ಕಟ್ಟಲು ಓರಿಯೆಂಟ್ ಮಾಡುವುದೆಂದರೆ, ಅದು ಹೊಸ ಮಾಧ್ಯಮ ಕಟ್ಟಲು ಬೇಕಾದ ಸೃಜನಶೀಲ ದಾರಿಗಳನ್ನು ಕಂಡುಕೊಳ್ಳುವ ಕೆಲಸ. ಆ ಸವಾಲನ್ನು ನಾವೀಗ ಕೈಗೆತ್ತಿಕೊಳ್ಳಬೇಕಿದೆ.

ದೇಶದ ಬಹುಸಂಖ್ಯೆಯ ಜನರು ಪರ್ಯಾಯ ಚಿಂತನೆ, ಪ್ರಜ್ಞೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಅವರೇ ಪಾಲ್ಗೊಳ್ಳುವ ಗುದ್ದಾಟದಿಂದ ಪಡೆಯುವ ಅನುಭವದ ಮೂಲಕವೇ. ಆ ರೀತಿಯಲ್ಲಿ ಬಹುಸಂಖ್ಯೆಯ ಜನರೆಲ್ಲರೂ ಒಂದಾಗಿ ನಿರ್ಮಿಸಹೊರಡುವ ಪರ್ಯಾಯ ಬೆಳೆಯದೇ, ಮಾಧ್ಯಮ ಮಾತ್ರ ಬೆಳೆದುಬಿಡುತ್ತದೆಯೇ ಎಂಬ ಪ್ರಶ್ನೆಯನ್ನು ಕೆಲವು ಶಾಶ್ವತ ಸಿನಿಕರು ಕೇಳಬಹುದು. ಹೌದು, ಬೆಳೆಯುತ್ತದೆ ಎಂಬ ವಿಶ್ವಾಸ ನಮ್ಮದು. ಅದು ಇಂದಿನ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳನ್ನು ಗಾತ್ರದಲ್ಲಿ ಮೀರದಿದ್ದರೂ, ಪರಿಣಾಮದಲ್ಲಿ ಬೀರುತ್ತದೆ. ಏಕೆಂದರೆ

ಮಾಧ್ಯಮವೆನ್ನುವುದು ಸಮಾಜದಲ್ಲಿ ವೇಗವರ್ಧಕದ ಕೆಲಸ ಮಾಡುತ್ತದೆಯೇ ಹೊರತು, ತಾನೇ ಸಮಾಜವಲ್ಲ.
ಅಂತಹ ‘ಮುಖ್ಯವಾಹಿನಿ’ ಮಾಧ್ಯಮವನ್ನು ಕಟ್ಟಿ ನಿಲ್ಲಿಸುವ ಯೋಚನೆಯನ್ನು ನಾವು ಹೊಂದಿದ್ದೇವೆ. ಹೇಗೆ ಎಂಬ ಯೋಜನೆಯನ್ನು ಜೊತೆಗೂಡಿ ರೂಪಿಸೋಣ. ಈ ನಿಟ್ಟಿನಲ್ಲಿ ನೀವೇನು ಜವಾಬ್ದಾರಿ ತೆಗೆದುಕೊಳ್ಳಬಹುದು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...