Homeಮುಖಪುಟವಕೀಲರ ನಡುವಿನ ಹೋರಾಟದ ಕಣವಾಗಿ ಬದಲಾದ ಮೈಸೂರಿನ ಫ್ರಿ ಕಾಶ್ಮಿರ ಫಲಕ ವಿವಾದ..

ವಕೀಲರ ನಡುವಿನ ಹೋರಾಟದ ಕಣವಾಗಿ ಬದಲಾದ ಮೈಸೂರಿನ ಫ್ರಿ ಕಾಶ್ಮಿರ ಫಲಕ ವಿವಾದ..

- Advertisement -
- Advertisement -

ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ‌‌ ಸೂಚಿಸಿ ನಡೆಸಲಾದ‌‌ ಪ್ರತಿಭಟನೆಯಲ್ಲಿ ನಳಿನಿ ಬಾಲಕುಮಾರ್ ಎಂಬ ವಿದ್ಯಾರ್ಥಿನಿ ‘ಫ್ರಿ ಕಾಶ್ಮಿರ’ ಎಂಬ ಭಿತ್ತಿ ಫಲಕ ಪ್ರದರ್ಶಿಸಿದರು ಎಂಬುವ ವಿಚಾರ ಈಗ ವಕೀಲರ ನಡುವಿನ ಹೋರಾಟದ ಕಣವಾಗಿ ಬದಲಾಗಿದೆ.

ನಳಿನಿ ಬಾಲಕುಮಾರ್ ವಿರುದ್ದ ಮೈಸೂರಿನ ಜಯಲಕ್ಷ್ಮಿಪುರಂ ಠಾಣೆಯಲ್ಲಿ ರಾಜದ್ರೋಹದ ಪ್ರಕರಣ ದಾಖಲಾದ‌ ಕೂಡಲೇ ಪ್ರೀ ಕಾಶ್ಮಿರ ಫಲಕದ ಅರ್ಥ ಕಾಶ್ಮೀರವನ್ನು ಸ್ವತಂತ್ರಗೊಳಿಸುವುದು ಎಂದು ಅರ್ಥೈಸಿಕೊಂಡ ಬಲಪಂಥೀಯ, ಬಿಜೆಪಿ ಒಲವಿನ ವಕೀಲರು ಮೈಸೂರು ವಕೀಲರ ಸಂಘದ ಮೇಲೆ ಒತ್ತಡ ತಂದು ನಳಿನಿ ಬಾಲಕುಮಾರ್ ಅವರಿಗೆ ಪ್ರಕರಣದಲ್ಲಿ ವಕಾಲತ್ತು ವಹಿಸದಂತೆ ನಿರ್ಣಯ ಕೈಗೊಂಡಿತು. ಈ ನಡೆಯನ್ನು ರಾಜ್ಯದ ಹಲವರು ಪ್ರಜಾಪ್ರಭುತ್ವವಾದಿಗಳು ಟೀಕಿಸಿದ್ದರು.

ಈ ನಡುವೆ ಕಾಶ್ಮಿರದಲ್ಲಿ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇಟ್ಟಿದ್ದು, ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ ಇಂತಹ ಪರಿಸ್ಥಿತಿಯಲ್ಲಿ‌ ಕಾಶ್ಮೀರದ ಸಾಮಾನ್ಯ ಜನರಿಗೆ ಬಂಧನದಿಂದ ಸ್ವಾತಂತ್ರ್ಯ ನೀಡಿ ಎಂಬ ಅರ್ಥದಲ್ಲಿ ತಾನು ಫ್ರಿ ಕಾಶ್ಮೀರ ಫಲಕ ಹಿಡಿದುದ್ದಾಗಿ ವಿದ್ಯಾರ್ಥಿನಿ ಸ್ಪಷ್ಟಪಡಿಸಿದ್ದಾರೆ.

ಜನರ ಪರವಾಗಿ ಧ್ವನಿ ಎತ್ತಿ ಸರ್ಕಾರವನ್ನು ಟೀಕಿಸುವುದು ಪ್ರಜೆಗಳಿಗೆ ಇರುವ ಸಂವಿಧಾನಿಕ ಸ್ವತಂತ್ರ ಅದನ್ನು ಯಾರು ರಾಜದ್ರೋಹದಂತಹ ಗಂಭೀರ ಪ್ರಕರಣವನ್ನು ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವುದು ಸರಿಯಲ್ಲ ಎಂದು ವಾದಿಸಿರುವ ಹಲವಾರು ಜನಪರ ನಿಲುವಿರುವ, ಪ್ರಜಾಸತ್ತಾತ್ಮಕ ಅಲೋಚನೆಯ, ಜಾತ್ಯಾತೀತ ವಕೀಲರುಗಳು ನಳಿನಿ‌ ಬಾಲಕುಮಾರ್ ಪರವಾಗಿ ವಕಾಲತ್ತು ವಹಿಸಿದ್ದರು. ರಾಜ್ಯದ ಹಲವು ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ವಕೀಲರು ಮೈಸೂರಿಗೆ ಆಗಮಿಸಿ ವಿದ್ಯಾರ್ಥಿನಿಗೆ ಧೈರ್‍ಯ ತುಂಬಿದ್ದರು. ಅವರಲ್ಲಿ ರವಿವರ್ಮ ಕುಮಾರ್, ಸಿ.ಎಸ್.ದ್ವಾರಕನಾಥ್, ಎಸ್.ಶಂಕರಪ್ಪ,‌ ಬಿ.ಟಿ.ವೆಂಕಟೇಶ್‌ ಪ್ರಮುಖರಾಗಿದ್ದಾರೆ.

ಆದರೆ ಮೈಸೂರು ವಕೀಲರ ಸಂಘ ಮತ್ತು ಬಲಪಂಥೀಯ ಅಲೋಚನೆಯ ವಕೀಲರು ಯಾವುದೇ ಬೆಲೆ ತೆತ್ತದಾರೂ ಸರಿ‌ ನಳಿನಿ‌ ಬಾಲಕುಮಾರ್ ಪರ ವಾದಿಸಲು ಸಿದ್ದವಿರುವ ವಕೀಲರನ್ನು ವಕಾಲತ್ತಿನಿಂದ ವಾಪಸ್ಸು ‌ತೆಗೆಸಲು‌ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ನಳಿನಿ ಪರವಾಗಿ ವಾದ ಮಾಡಲು ಮುಂದಾದ ಪಿ.ಪಿ.ಬಾಬುರಾಜ್ ಎಂಬ‌‌ ಪ್ರಗತಿಪರ ವಕೀಲರನ್ನು ಮೈಸೂರು ವಕೀಲರ ಸಂಘದಿಂದ ಉಚ್ಚಾಟನೆ ಮಾಡಿದ್ದಾರೆ.

ಪಿ.ಪಿ.ಬಾಬುರಾಜ್

ಈಗಾಗಲೇ ಒಂದು ಸುತ್ತಿನ ನೀರಿಕ್ಷಿಣಾ ಜಾಮೀನು ಸಂಭವಿಸಿದ ವಾದ ಮಂಡನೆಯಾಗಿದ್ದು ದಿನಾಂಕ‌ 24/01/2020 ಕ್ಕೆ ಮತ್ತೊಂದು‌ ಸುತ್ತಿನ‌ ವಾದ ಮಂಡನೆ‌ ಮೈಸೂರಿನ‌ ನ್ಯಾಯಾಲಯದಲ್ಲಿ‌‌ ಮಂಡನೆ ಆಗಲಿದ್ದು ಇದಕ್ಕೆ ಎರಡು ಬಣಗಳು ಭಾರಿ‌ ಸಿದ್ದತೆ ನಡೆಸಿವೆ. ಶುಕ್ರವಾರದಂದು ಮೈಸೂರು ನ್ಯಾಯಾಲಯದ ಅವರಣ ಕೇವಲ ವಾದ, ವಿವಾದಕ್ಕಷ್ಟೆ ಅಲ್ಲದೆ ಘೋಷಣೆ, ಧಿಕ್ಕಾರ,‌ ಪ್ರತಿಧಿಕ್ಕಾರ,‌ ಹಲ್ಲೆ, ಪ್ರತಿ‌ಹಲ್ಲೆ, ಜಗಳಗಳಿಗೆ ಕಾರಣವಾದರು ಆಶ್ಚರ್ಯ‌ಪಡಬೇಕಿಲ್ಲ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ಶಂಕಿತ ಮೂವರು ಭಾರತೀಯರ ಬಂಧನ

0
ಸಿಖ್‌ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು,...