Homeಸಿನಿಮಾಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

ಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

- Advertisement -
- Advertisement -

ಸೋಮಶೇಖರ್ ಚಲ್ಯ |

ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ಅಹಂ ಇವಮ್ ನಾತಿಚರಾಮಿ, ಈ ಪದಗಳು ಭಾರತೀಯ ಸಮಾಜದಲ್ಲಿ ಹೆಣ್ಣಿನ ಮನಸ್ಸಿನಲ್ಲಿ ಎಂದೆಂದಿಗೂ ತಲ್ಲಣವನ್ನುಂಟು ಮಾಡುವಂತಹವು. ಹೆಣ್ಣು ದಾಂಪತ್ಯ ಜೀವನಕ್ಕೆ ಕಾಲಿರಿಸುವ ಗಳಿಗೆಯಿಂದ ಆಕೆ ಧರ್ಮ, ಹಣ, ಕಾಮ ಮತ್ತು ಮೋಕ್ಷದವರೆಗೂ ಆತ್ಮಾರ್ಥವಾಗಿ ತನ್ನ ಗಂಡನಿಗೆ ಅಧೀನಳು ಎಂದು ಈ ಸಾಲುಗಳು ಹೇಳುತ್ತವೆ. ಇದೆಲ್ಲದಕ್ಕೂ ಉತ್ತರ ಹುಡುಕುವ ಹಾಗೂ ಹೆಣ್ಣಿನ ಮನಸ್ಸಿನ ತೊಳಲಾಟವನ್ನು ಬಿಚ್ಚಿಡುವ ಪ್ರಯತ್ನವನ್ನು ನಾತಿಚರಾಮಿ ಚಿತ್ರ ತಂಡ ಮಾಡಿದೆ.
ಭಾರತದ ಸಂಸ್ಕøತಿ, ಸಂಪ್ರದಾಯ, ಕಟ್ಟುಪಾಡುಗಳೆಲ್ಲವೂ ನಾನಾರೀತಿಯಲ್ಲಿ ಹೆಣ್ಣಿನ ಮೇಲೆ ಹೇರಲ್ಪಟ್ಟಿವೆ. ಗಂಡಿಗಿರುವ ಸ್ವಾತಂತ್ರ್ಯ ಹೆಣ್ಣಿಗಿಲ್ಲ. ಹೆಣ್ಣು ಗಂಡಿನ ಗುಲಾಮಳಾಗಿಯೇ ಬದುಕಬೇಕು, ಇಂತಹ ಕಟ್ಟಲೆಗಳು ಮೀರಿ ಬದುಕ ಬಯಸುವ, ಪ್ರಯತ್ನಿಸುವ ಹೆಣ್ಣು ಸಮಾಜದಿಂದ ದೂಷಿಸಲ್ಪಡುತ್ತಾಳೆ. ಮಹಿಳೆ ತನ್ನ ಗಂಡನನ್ನು ಕಳೆದುಕೊಂಡರೆ ಆಕೆ ತನ್ನ ಉಳಿದ ಬದುಕನ್ನು ಆತನ ನೆನಪಿನಲ್ಲಿಯೇ ಒಂಟಿಯಾಗಿ ಕಳೆಯಬೇಕು, ಮತ್ತೊಂದು ಮದುವೆಯಾಗಬಾರದು. ಹೆಣ್ಣು ತಾನೆ ಒಂಟಿ ಜೀವನವನ್ನು ಆಯ್ಕೆ ಮಾಡಿಕೊಂಡರೆ ಸರಿ, ಅದರೆ ಅದೂ ಹೇರಲ್ಪಡುವ ವಿಚಾರವೇ. ವಿಧವೆ ತನ್ನ ಅಗತ್ಯಗಳನ್ನು ಹೇಳಿಕೊಳ್ಳುವಂತಿಲ್ಲ, ಹೇಳಿ ಪೂರೈಸಿಕೊಳ್ಳುವಂತಿಲ್ಲ. ಹಾಗೇನಾದರು ತನ್ನ ಆಸೆಗಳನ್ನು ಹೊರಹಾಕಿದರೆ ಆಕೆ ನಡತೆಗೆಟ್ಟವಳೆಂದು ಹಣೆಪಟ್ಟಿ ಕಟ್ಟಿಕೊಳ್ಳುತ್ತಾಳೆ.
ನಾತಿಚರಾಮಿ ಚಿತ್ರದ ಮೂಲಕ ನಿರ್ದೇಶಕ ಮಂಸೋರೆ, ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಬದುಕುತ್ತಿರುವ ಗೌರಿ ಹಾಗೂ ವಿವಾಹವಾಗಿ ಐದು ವರ್ಷ ಕಳೆದರೂ ಹೊಂದಾಣಿಕೆಯಿಲ್ಲದ ಸುರೇಶನ ಸಂಸಾರವನ್ನು ಕಥೆಯಾಗಿ ಇಟ್ಟುಕೊಂಡು ಬದುಕಿನೊಳಗಿನ ತಲ್ಲಣಗಳು, ಸಮಸ್ಯೆ ಮತ್ತು ಸಂಬಂಧಗಳ ನಡುವಿನ ವೈರುಧ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಒಂದೆಡೆ ಮದುವೆಯಾಗಿ ಕೆಲ ವರ್ಷಗಳಲ್ಲೇ ಜೀವವೇ ಆಗಿದ್ದ ಗಂಡನನ್ನು ಕಳೆದುಕೊಂಡ ಗೌರಿಗೆ ಮತ್ತೊಂದು ಮದುವೆ ಮಾಡುವ ಅವಸರದಲ್ಲ್ಲಿರುವ ಗೌರಿಯ ತಂದೆತಾಯಿ, ಗಂಡನ ನೆನಪಲ್ಲೇ ಬದುಕ ಬಯಸುವ ಗೌರಿ. ಮತ್ತೊಂದೆಡೆ ಸಂಸಾರದಲ್ಲಿ ಹೊಂದಾಣಿಕೆ ಕಾಣದೆ, ತಮ್ಮ ದೈಹಿಕ ಸುಖದಿಂದಾಚೆಗಿನ ಬಯಕೆಗಳು, ಪ್ರೀತಿ-ಸಂಬಂಧಗಳ ಅನುಬಂಧವಿಲ್ಲದೆ ಪೇಚಾಡುವ ಯುವ ದಂಪತಿಗಳು ಬದುಕಿನ ವೈರುಧ್ಯಕ್ಕೆ ಮುಖಾಮುಖಿಯಾಗಿವೆ.
ಪ್ರೀತಿಸಿ ಮದುವೆಯಾದ ಗಂಡನನ್ನು ಮರೆಯಲಾಗದೇ ಆತ ಬದುಕಿದ್ದ ದಿನಗಳಲ್ಲಿದ್ದಂತೆಯೇ ತನ್ನ ಮನೆಯನ್ನೂ, ಮನವನ್ನೂ ಹೊಂದಿಸಿಕೊಂಡು ಒಂಟಿ ಬದುಕನ್ನು ಆತನ ಪ್ರೀತಿಯ ನೆನಪಿನಲ್ಲೇ ಮುಂದುವರೆಸುವ ಗೌರಿಗೆ ಮತ್ತೊಬ್ಬ ಗಂಡನೊಂದಿಗೆ ಬದುಕುವ ಮನಸ್ಸಿಲ್ಲ. ಆದರೆ ಆಕೆಯ ಮನಸ್ಸಿನ ತಳಮಳ ಅದರಾಚೆಗೆ ಅವಳನ್ನು ಕಾಡುತ್ತಿದೆ, ಅ ತಳಮಳಕ್ಕೆ ಕಾರಣ ಹುಡುವುದರಲ್ಲಿ ಆಕೆಯ ಒದ್ದಾಟ. ವಿಧವೆಯೆಂಬ ಕಾರಣಕ್ಕೆ ಅಡ್ವಾಂಟೇಜ್ ಪಡೆಯಲು ಯತ್ನಿಸುವ ಸಹೋದ್ಯೋಗಿಗಳ ಕಾಮಾಂಧ ಮನಸ್ಥಿತಿಯನ್ನು ಎದುರಿಸಿ ಬದುಕುವ ದಿನನಿತ್ಯದ ಪರಿತಾಪ.
ಮದುವೆಯಾಗಿ ಗಂಡನೊಂದಿಗೆ ಪ್ರೀತಿಯಿಲ್ಲದ ಸಿಡುಕು ಮಾತಿನಿಂದ ಬೇಸತ್ತ ಸುರೇಶನ ಹೆಂಡತಿ ಗಂಡನ ಪ್ರೀತಿಯ ಅಪ್ಪುಗೆಗಾಗಿ, ಸಾಂಗತ್ಯದ ಭಾವನೆಯ ಮಾತುಗಳಿಗಾಗಿ ತವಕಿಸುತ್ತಾ ಕಾಯುವ ಹೆಣ್ಣು. ಹಳ್ಳಿ ಹುಡುಗಿಯನ್ನು ಮದುವೆಯಗಿಬಿಟ್ಟಿದ್ದೇನೆಂಬ ಕಾರಣಕ್ಕೆ ಅವಳನ್ನು ಕೀಳರಿಮೆಯಿಂದ ಕಸದಂತೆ ನೋಡುವ ಗಂಡ. ಈ ಎರಡು ವೈರುಧ್ಯಗಳು ಹೆಣ್ಣಿನ ಬದುಕಿನ ಒಟ್ಟು ಸಾರವನ್ನು ಬಿಂಬಿಸಿವೆ. ಆಕೆಯ ಪ್ರೀತಿಗೆ ಬೆಲೆಕೊಡದ ಗಂಡ ಆಕೆಯೊಂದಿಗೆ ದೈಹಿಕ ಸುಖವನ್ನು ಮಾತ್ರ ಪಡೆಯುತ್ತಾನೆ. ಆದರೆ ಪ್ರೀತಿಯ ಆಸರೆಯೇ ಇಲ್ಲದ ಆ ಸುಖ ಹೆಣ್ಣಿಗೆ ಅನಗತ್ಯ. ಇದೂ ಕೂಡ ಲೀಗಲ್ ದೌರ್ಜನ್ಯವೇ ಆಗಿದೆ. ಇಂದಿಗೂ ಎಷ್ಟೋ ಸಂಸಾರಗಳು ಇರುವುದೂ ಹೀಗೆಯೇ, ಈ ವ್ಯವಸ್ಥೆಯೊಳಗೆ ಹೇಳಿಕೊಳ್ಳಲಾಗುತ್ತಿಲ್ಲವಷ್ಟೇ. ‘ನನ್ನನ್ನೇನು ಟಿವಿ ಅಂದುಕೊಂಡಿದ್ದೀರಾ ಬೇಕಾದಾಗ ಆನ್ ಮಾಡಿ, ಬೇಡವಾದಾಗ ಆಫ್ ಮಾಡೋಕೆ’ ಎನ್ನುವ ಆ ಹೆಣ್ಣಿನ ಮಾತು ಈ ಸಮಾಜಕ್ಕೆ ಸವಾಲೊಡ್ಡಿದಂತೆ ತೋರುತ್ತದೆ.
ಒಬ್ಬ ವಿಧವೆ ತನ್ನ ಅವಶ್ಯಕತೆಗಳನ್ನು, ನೋವು ಸಂಕಟಗಳನ್ನು ವ್ಯಕ್ತಪಡಿಸಿದರೆ ಆಗುವ ಕಷ್ಟಗಳನ್ನು ಈ ಚಿತ್ರ ತೆರೆದಿಡುವುದರ ಜೊತೆಗೆ ಆಕೆ ಇನ್ನುಳಿದ ಬದುಕಿನ ಪಯಣದಲ್ಲಿ ತನ್ನ ಕಷ್ಟಗಳನ್ನು ಯಾರಿಗೆ ಹೇಳಿಕೊಳ್ಳಬೇಕು, ಯಾರಿಂದ ಸಹಾಯ ಪಡೆಯಬೇಕು, ಆಕೆಯ ನೋವಿಗೆ ಸ್ಪಂದಿಸುವವರಾರು, ಆಕೆಯ ಅಗತ್ಯಗಳನ್ನು ಪೂರೈಸುವವರಾರು ಎಂಬ ನೂರಾರು ಪ್ರಶ್ನೆಗಳನ್ನು ಮುಂದಿಡುತ್ತದೆ. ಗಂಡು ತನ್ನ ಬಯಕೆಗಳನ್ನು ತೀರಿಸಿಕೊಳ್ಳಲು ಮುಂದಾಗುವ ರೀತಿಯಲ್ಲಿ ಹೆಣ್ಣಿಗೆ ಸಾಧ್ಯವಿಲ್ಲ.
ಸ್ನೇಹಿತರ ಒತ್ತಾಯದ ಮೇರೆಗೆ ಆಪ್ತ ಸಮಾಲೋಚನೆ ಪಡೆಯುವ ಗೌರಿಗೆ ತನಗೆ ಬೇಕಿರುವುದೇನು ಎಂಬುದರ ಅರಿವಾಗುತ್ತದೆ. ಆದರೆ ತನ್ನ ಗಂಡನನ್ನು ಮರೆಯಲಾಗದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪರಿಚಯವಾಗುವ ಸುರೇಶ ಅಗತ್ಯವೆನಿಸುತ್ತಾನೆ. ತನ್ನ ಬಯಕೆಯನ್ನು ಹೇಳಿಕೊಂಡ ಕ್ಷಣವೇ ಪ್ರತಿಕ್ರಿಯೆಯಾಗಿ ಬರುವ ಮಾತು ‘ನೀನು ಒಳ್ಳೆ ಸಂಸ್ಕಾರವುಳ್ಳ ಮನೆತನದಿಂದ ಬಂದ ಹೆಣ್ಣು ಅಂದುಕೊಂಡಿದ್ದೆ ಆದರೆ ನೀನು ಛೀ’ ಎಂಬುದು. ಇಲ್ಲಿ ಆಕೆ ಬಲವಂತವನ್ನೇನು ಮಾಡಿಲ್ಲ, ಆಕೆಯ ಬಯಕೆಯನ್ನಷ್ಟೇ ಹೇಳಿಕೊಂಡಿದ್ದಾಳೆ. ಅಷ್ಟಕ್ಕೇ ಅವಳ ಸಂಸ್ಕಾರ, ಸಂಸ್ಕøತಿ, ಮನೆತನವೆಲ್ಲವೂ ಕೀಳಾಗಿಹೋಗುತ್ತವೆ. ‘ನಮ್ ದೇಹದ ಬಯಕೆನಾ ಡೈರೆಕ್ಟ್ ಆಗಿ, ಇನ್‍ಡೈರೆಕ್ಟ್ ಆಗಿ ಎಷ್ಟೇ ಸೂಕ್ಷ್ಮವಾಗಿ ಹೇಳಿದ್ರು ನಾವ್ ಚೀಪ್ ಆಗ್ತಿವಿ ಅಲ್ವಾ?’ ಎನ್ನುವ ಡೈಲಾಗ್ ಸಮಾಜದ ಅಂತಃಸಾಕ್ಷಿಯನ್ನೂ, ನಮ್ಮ ಮನಃಸಾಕ್ಷಿಯನ್ನೂ ಪ್ರಶ್ನಿಸುತ್ತದೆ.
ತನ್ನ ಸಂಗಾತಿಯ ಬಯಕೆಯೇನೆಂಬುದನ್ನು ಅರಿಯುವುದರಲ್ಲಿ ವಿಫಲನಾಗಿದ್ದ, ತನ್ನ ಹೆಂಡತಿಗೆ ಪ್ರೀತಿ ಕೊಡಲಾಗದ ಸುರೇಶ, ಗೌರಿಯ ಬಯಕೆಯನ್ನು ಪೂರೈಸುತ್ತಾನೆಯಾದರೂ, ‘ಹೆಂಗಸ್ರೂ ಕೂಡ ಮನುಷ್ಯರು ಅನ್ನೋದ ಅರ್ಥ ಮಾಡ್ಕೋಳಿ’ ಎಂದು ತನ್ನ ಪತ್ನಿ ಹೇಳಿದ್ದ ಮಾತಿಗೆ ಪುರುಷಾಧಿಪತ್ಯವೇ ಮೈವೆತ್ತಂತೆ ವರ್ತಿಸಿದ್ದ ಸುರೇಶನಿಗೆ ಆ ಮಾತು ನಿಜವಾಗಿಯೂ ಅರ್ಥವಾಗುವುದು ಗೌರಿಯ ಸಾಂಗತ್ಯ, ಸಂಬಂಧ ಮತ್ತು ಆಕೆಯ ನೋವಿನ ಪರಿಯಾಪದಿಂದ. ತನ್ನ ಬಾಳಸಂಗಾತಿ ಪ್ರೀತಿಯ ತವಕವನ್ನು ಅರಿತು ಬದಲಾಗುತ್ತಾನೆ. ತನ್ನ ಹೆಂಡತಿಯ ಪ್ರೀತಿಯನ್ನು ಅರಿತು ಆಕೆಯೊಂದಿಗೆ ಹೊಸ ಪ್ರೀತಿಯ ಬದುಕಿಗೇ ಮುಂದಾಗುತ್ತಾನೆ. ಗೌರಿ ತನ್ನ ದೈಹಿಕ ಬಯಕೆ ಪೂರೈಕೆಯಾದ ನಂತರ ಆಕೆಯೂ ಬದಲಾಗುತ್ತಾಳೆ, ಆದರೆ ಈ ಬದಲಾವಣೆ ಒಳ್ಳೆಯ ಪರಿಣಾಮಕಾರಿಯಾದ್ದಲ್ಲ, ಅದು ಕಾಮಕ್ಕೆ ಶರಣಾದಂತೆ ಕಾಣುತ್ತದೆ. ಗೌರಿ ಮನೆಯಲ್ಲಿ ಗಂಡನ ನೆನಪುಗಳನ್ನು ಹಾಗೆಯೇ ಉಳಿಸಿಕೊಂಡಿದ್ದ ಆಕೆ ಆ ನೆನಪುಗಳನ್ನು ನೆನಪಿಸದಂತೆ ವಾತಾವರಣವನ್ನೇ ಬದಲಾಯಿಸುತ್ತಾಳೆ. ಅಂದರೆ ದೈಹಿಕ ಬಯಕೆ ಪ್ರೀತಿಯನ್ನು ಮರೆಮಾಚುತ್ತದೆಯೇ? ಅಥವಾ ಕಾಮ ಎಂಬುದು ಪ್ರೀತಿಯನ್ನೂ ಮೀರಿದ್ದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಕಾಮಕ್ಕಾಗಿ ಪ್ರೀತಿ ನಶಿಸಬಾರದು, ಎಲ್ಲವನ್ನೂ ಮೀರಿ ಬೆಳೆಯುವುದು ಪ್ರೀತಿ. ಅಂತಹ ಪ್ರೀತಿ ಕಾಮಕ್ಕೆ ಶರಣಾಗಬಾರದು. ಅದಷ್ಟೇ ಅಲ್ಲದೆ ಇಂತಹ ಬದಲಾವಣೆಗಳನ್ನೇ ಗುರಿಮಾಡಿ ಕೆಲವು ಮನಸ್ಥಿತಿಗಳು ಹೆಣ್ಣು ಅಗತ್ಯಕ್ಕೆ ತಕ್ಕಂತೆ ಬದಲಾಗಿಬಿಡುತ್ತಾಳೆ ಎಂದು ಬಿಂಬಿಸಿಬಿಡುವ ಅಪಾಯವೂ ಇದೆ.
ಇಡೀ ಸಿನಿಮಾ ಒಂಟಿ ಹೆಣ್ಣಿನ ಬದುಕು ಮತ್ತು ದೈಹಿಕ ಬಯಕೆಯ ಮೇಲೆಯೇ ಸಾಗುತ್ತದೆ. ಅದರಾಚೆಗೂ ಗಮನಿಸಬೇಕಾದ ಹಲವಾರು ವಿಚಾರಗಳು ಅದರೊಳಗಿವೆ. ಹೆಣ್ಣುತನ, ಕನ್ಯೆಯೆಂದು ಹೆಣ್ಣಿನ ಮೇಲೆ ಹೇರಲ್ಪಟ್ಟಿರುವ ಶೀಲವೆಂಬ ಹೆಮ್ಮರವನ್ನು ಎದುರಿಸುವ ಪ್ರಯತ್ನ ಈ ಚಿತ್ರದ್ದು. ಜೊತೆಗೆ ಹೆಣ್ಣು ಬಯಸುವ ಪ್ರೀತಿ, ಅಭಿವ್ಯಕ್ತಿ, ತಾನು ಕೆಲಸ ಮಾಡುವ ಸ್ಥಳಗಳಲ್ಲಿನ ಭದ್ರತೆ, ಒಂಟಿ ಹೆಣ್ಣಿಗೆ ಸಮಾಜದಲ್ಲಿ ಸಿಗುವ ಸ್ಥಾನಮಾನ, ವಿವಾಹ, ಸಂಬಂಧಗಳು, ಬದ್ಧತೆ ಹಾಗೂ ಹೆಣ್ಣಿಗೂ ಗಂಡಿನಂತೆಯೇ ಆಸೆ, ಆಕಾಂಕ್ಷೆ, ಆಲೋಚನೆಗಳಿವೆ ಎಂಬುದನ್ನು ಗುರುತಿಸಲೇಬೇಕು. ಕೆಲವು ದೃಶ್ಯಗಳ ಅಗತ್ಯವಿಲ್ಲದಿದ್ದರೂ ಗೌರಿ, ಸುರೇಶ, ಆತನ ಹೆಂಡತಿ. ಈ ಮೂರು ಪಾತ್ರಗಳು ಹೆಣ್ಣಿನ ಮನಸ್ಸಿನೊಳಗಿನ ತೊಳಲಾಟವನ್ನು ಈ ಚಿತ್ರದಲ್ಲಿ ಬಿಚ್ಚಿಟ್ಟಿವೆ. ಇಂದಿನ ಸಮಾಜಕ್ಕೆ ಅವಶ್ಯಕವಾದ ಸಿನಿಮಾ ನಾತಿಚರಾಮಿ. ಈ ಚಿತ್ರದ ಸೋಲು ಗೆಲುವು ನಿಂತಿರುವುದು ಬಾಕ್ಸ್ ಆಫೀಸಿನ ಕಲೆಕ್ಷನ್ ಮೇಲಲ್ಲ. ಸಿನಿಮಾ ನೋಡಿದ ಪ್ರತಿ ಗಂಡಸಿನ ಆತ್ಮವಿಮರ್ಶೆಯ ಮೇಲೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...

ತಮಿಳುನಾಡು| ಮರ್ಯಾದೆಗೇಡು ಹತ್ಯೆ ಶಂಕೆ; 25 ವರ್ಷದ ದಲಿತ ಯುವಕನ ಭೀಕರ ಕೊಲೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ...

44 ಲಕ್ಷ ಮತದಾರರಿಗೆ ನೋಟಿಸ್: BLA ಗಳಿಗೆ ಪಟ್ಟಿ ನೀಡಿ, ಪಾರದರ್ಶಕತೆ ಕಾಯ್ದುಕೊಳ್ಳಲು ‘ಜಾಗೃತ ಕರ್ನಾಟಕ’ ಒತ್ತಾಯ

ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಗೊಳ್ಳುತ್ತಿರುವ ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಹಾಗೂ ನೋಟಿಸ್ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಜಾಗೃತ...

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...

ಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಆಗಸ್ಟ್ 24 ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಎಸ್‌ಐಆರ್‌ ಕರಡು ಪಟ್ಟಿಯನ್ನು ಕರ್ನಾಟಕದ ನಾಗರಿಕ ಸಂಘಟನೆಗಳು ತಿರಸ್ಕರಿಸಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ...

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ...

ಪತ್ರಕರ್ತ ಅಭಿಷೇಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಆದೇಶ

ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು,...

2027ರ ಜನಗಣತಿಯಲ್ಲಿ ಪೋಷಕರ ಧರ್ಮ, ಜನ್ಮಸ್ಥಳದ ವಿವರ ಏಕೆ? ಕೇಂದ್ರದ ವಿರುದ್ಧ ಸಿಪಿಐ(ಎಂ) ಆಕ್ರೋಶ

2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ...

ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಶಾಕ್: 20 ಎಂಪಿಗಳಿಗೆ ನೋಟಿಸ್ ಜಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಟಿಎಂಸಿ ಪ್ರಧಾನ...