Homeಕರ್ನಾಟಕಬೆಂಗಳೂರಿಗರ ತ್ಯಾಜ್ಯದ ದುರ್ವಾಸನೆ ನೆರೆಯ ಹಳ್ಳಿಗರು ಸಹಿಸಬೇಕು

ಬೆಂಗಳೂರಿಗರ ತ್ಯಾಜ್ಯದ ದುರ್ವಾಸನೆ ನೆರೆಯ ಹಳ್ಳಿಗರು ಸಹಿಸಬೇಕು

2017 ರ ವರೆಗೂ ಅತ್ಯಂತ ಸುಂದರವಾಗಿದ್ದ ಗ್ರಾಮವೂ ಬಿಬಿಎಂಪಿ ತ್ಯಾಜ್ಯ ತುಂಬಿಸುವ ತಾಣವಾಗಿ ಆಯ್ಕೆ ಮಾಡಿದ ನಂತರ ದುರ್ವಾಸನೆಯ ಊರಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

- Advertisement -
- Advertisement -

ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರಿಗರ 6,000 ಟನ್‌ಗಿಂತಲೂ ಹೆಚ್ಚಿರುವ ದೈನದಿಂನ ತ್ಯಾಜ್ಯದ ದುರ್ವಾಸನೆಯನ್ನು ನೆರೆಯ ಹಳ್ಳಿಗಳಾದ ಮಂಡೂರು, ಮಾವಲ್ಲಿಪುರ, ಬೆಲ್ಲಹಳ್ಳಿ ಮುಂತಾದ ಹಳ್ಳಿಯ ನಿವಾಸಿಗಳು ಅನಿವಾರ್ಯವಾಗಿ ಸಹಿಸುವಂತಾಗಿದೆ.

2017 ರವರೆಗೂ ಅತ್ಯಂತ ಸುಂದರವಾಗಿದ್ದ ಮಂಡೂರು ಗ್ರಾಮವೂ ಬಿಬಿಎಂಪಿ ಇದನ್ನು ತ್ಯಾಜ್ಯ ತುಂಬಿಸುವ ತಾಣವಾಗಿ ಆಯ್ಕೆ ಮಾಡಿದ ನಂತರ ದುರ್ವಾಸನೆಯ ಊರಾಗಿದೆ ಎಂದು ಹೇಳುವ ಸಿಲ್ಲಾವಲಿ, ಪ್ರತಿದಿನ ನೂರಾರು ಟ್ರಕ್‌ಗಳು ​​ಈ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದರಿಂದ ರೋಗಗಳು ಬರುತ್ತಿದೆ ಎಂದು ಹೇಳುತ್ತಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಯಾರೂ ಇಲ್ಲದ ಬಂಜರು ಭೂಮಿಯಲ್ಲಿ ತ್ಯಾಜ್ಯವನ್ನು ಹಾಕಬೇಕು ಎಂದು ಹೇಳುತ್ತದೆ. ತ್ಯಾಜ್ಯ ಹಾಕಲು ದೊಡ್ಡ ಜಾಗ ಅಗತ್ಯವಿದೆಯಲ್ಲದೆ, ರೋಗಕಾರಕಗಳು, ನೊಣಗಳು ಅಲ್ಲಿ ಉತ್ಪತ್ತಿಯಾಗುವುದಲ್ಲದೆ, ಅದು ಹಸಿರುಮನೆ ಅನಿಲಗಳ ಉತ್ಪಾದನೆಗೆ ಸಹಕಾರಿಯಾಗುತ್ತದೆ ಹಾಗೂ ಬೆಂಕಿಯ ಅಪಾಯ ಕೂಡಾ ಉಂಟು ಮಾಡುತ್ತದೆ.

ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಮಾರ್ಗಸೂಚಿಗಳ ಪ್ರಕಾರ, ತ್ಯಾಜ್ಯ ವಿಲೇವಾರಿ ತಾಣವು ಅಧಿಸೂಚಿತ ಜನವಸತಿ ಪ್ರದೇಶದಿಂದ ಕನಿಷ್ಠ 500 ಮೀಟರ್ ದೂರದಲ್ಲಿರಬೇಕು ಮತ್ತು ತಮ್ಮ ಗಡಿಯ ಸುತ್ತ 500 ಮೀಟರ್ ವಲಯವನ್ನು ‘ಅಭಿವೃದ್ಧಿಯಿಲ್ಲದ ಬಫರ್ ವಲಯ’ ಎಂದು ಘೋಷಿಸಬೇಕು ಎಂದು ಹೇಳುತ್ತದೆ.

2014 ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ತೀರ್ಮಾನಿಸಿದ್ದ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ತಾಣಗಳು ಬೆಂಗಳೂರಿನ ಬಫರ್ ವಲಯಗಳ ಒಳಗೆ ಇವೆ ಮತ್ತು ಆ ಪ್ರದೇಶಗಳ ಜನರು ಎದುರಿಸುತ್ತಿರುವ ದುರ್ವಸನೆಯ ರಗಳೆಯ ಬಗ್ಗೆ ದೂರುಗಳಿವೆ.

ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ತ್ಯಾಜ್ಯ ವಿಲೇವಾರಿ ತಾಣಗಳು ಬಫರ್ ವಲಯದೊಳಗೆ ಇರಬಾರದು ಎಂದು ಕೆಎಸ್‌ಪಿಸಿಬಿ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು ಆದರೆ ಬಿಬಿಎಂಪಿ ಇದಕ್ಕಾಗಿ ಯಾವುದೇ ಕ್ರಮಗಳನ್ನು ಇದುವರೆಗೂ ತೆಗೆದುಕೊಂಡಿಲ್ಲ.

ವಿಶ್ವಬ್ಯಾಂಕ್ ಅಧ್ಯಯನವೊಂದರ ಪ್ರಕಾರ, 90% ಕ್ಕಿಂತಲೂ ಹೆಚ್ಚು ತ್ಯಾಜ್ಯವನ್ನು ಅನಿಯಂತ್ರಿತ ಡಂಪ್‌ಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ ಅಥವಾ ಭಾರತದಂತಹ ದೇಶಗಳಲ್ಲಿ ಬಹಿರಂಗವಾಗಿ ಸುಡಲಾಗುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಅಧ್ಯಕ್ಷೆ ಮತ್ತು ಪ್ರಾಧ್ಯಾಪಕಿಯಾದ ಪ್ರೊ.ನಂದಿನಿ ಎನ್ ಅವರು ಹೇಳುವ ಪ್ರಕಾರ, ಈ ತ್ಯಾಜ್ಯದ ತಾಣಗಳು ಇ. ಕೋಲಿ ಹಾಗೂ ಫೆಕಲ್ ಸ್ಟ್ರೆಪ್ಟೋಕೊಕಿ (ಬಯೋ-ಏರೋಸಾಲ್) ನಂತಹ ಸೂಕ್ಷ್ಮಜೀವಿಗಳನ್ನು ಹೆಚ್ಚಿಸುತ್ತವೆ. ಇದು ಗಾಳಿಯಿಂದ ಹತ್ತಿರದಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಹರಡುತ್ತದೆ. ಈ ಬಯೋಎರೋಸೋಲ್‌ಗಳು ಒಡ್ಡಿಕೊಳ್ಳುವುದರಿಂದ ವೈರಸ್‌ಗಳು, ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಆಸ್ತಮಾ, ಅಲರ್ಜಿಕ್ ರಿನಿಟಿಸ್ ಮತ್ತು ಕ್ಯಾನ್ಸರ್ ನಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳುತ್ತಾರೆ.

ಮೆಡಿಕಲ್ ತ್ಯಾಜ್ಯದ ಕಳಪೆ ನಿರ್ವಹಣೆಯು ಆರೋಗ್ಯ ಕಾರ್ಯಕರ್ತರು, ತ್ಯಾಜ್ಯ ನಿರ್ವಹಿಸುವವರು, ರೋಗಿಗಳು ಮತ್ತು ಸಮುದಾಯವನ್ನು ಸೋಂಕಿಗೆ ಒಡ್ಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳುತ್ತದೆ.

ಲೇಕ್‌ಸೈಡ್ ಸೆಂಟರ್ ಫಾರ್ ಹೆಲ್ತ್ ಪ್ರಮೋಷನ್‌ನ ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಡಾ.ಎಚ್. ​​ಪರಮೇಶ್ ಅವರ ಪ್ರಕಾರ, ಮಾಲಿನ್ಯಕಾರಕಗಳಾದ ಮೀಥೇನ್, ಸಾರಜನಕ, ಇಂಗಾಲ ಮತ್ತು ಡಯಾಕ್ಸಿನ್‌ಗಳು ಆಸ್ತಮಾ, ಚರ್ಮರೋಗ ಮತ್ತು ಬ್ಲಡ್ಡ‍ರ್‌ ಕ್ಯಾನ್ಸರ್ ನಂತಹ ಉಸಿರಾಟದ ತೊಂದರೆ ಹಾಗೂ ಸಂತಾನೋತ್ಪತ್ತಿ ಮತ್ತು ಬೆಳವಣಿಗೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ  ಎಂದು ಹೇಳುತ್ತಾರೆ.

ನಗರ ತ್ಯಾಜ್ಯದ ಸುಧಾರಿತ ಸಂಗ್ರಹಣೆ, ನಿರ್ವಹಣೆ ಮತ್ತು ವಿಲೇವಾರಿಯು ಹವಾಮಾನ ಮತ್ತು ಆರೋಗ್ಯ ಎರಡಕ್ಕೂ ಉಪಯುಕ್ತವಾದ ಪ್ರಮುಖ ತಂತ್ರವಾಗಿದೆ. ಮೀಥೇನ್ ಹೊರಸೂಸುವಿಕೆಯನ್ನು ಒಳಚರಂಡಿ, ಜಾನುವಾರು ಗೊಬ್ಬರ ಮತ್ತು ಘನತ್ಯಾಜ್ಯದಿಂದ ಪಡೆದು ಜೈವಿಕ ಅನಿಲವಾಗಿ ಬಳಸಬಹುದು ಎಂದು ಅಧ್ಯಯನ ಹೇಳಿದೆ.

ಭಾರತದ ಪರಿಸರ ಭದ್ರತಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಡಾ.ಯೆಲ್ಲಪ ರೆಡ್ಡಿ, ತ್ಯಾಜ್ಯ ಉತ್ಪಾದನೆಯೇ ಪ್ರಮುಖ ಸಮಸ್ಯೆ ಎಂದು ಪ್ರಸ್ತಾಪಿಸಿದ ಅವರು ತ್ಯಾಜ್ಯವನ್ನು ಹೆಚ್ಚಿಸುವ ಪ್ಲಾಸ್ಟಿಕನು ಕಡಿಮೆ ಬಳಸುವಂತೆ ಹಾಗೂ ಜೈವಿಕ ವಿಘಟನೀಯ ವಸ್ತುಗಳನ್ನು ಬಳಸುವಂತೆ ಅವರು ಸಲಹೆ ನೀಡಿದರು. ವಿತರಣಾ ಕಂಪನಿಗಳು ಸಹ ತಮ್ಮ ಪ್ಯಾಕೇಜಿಂಗ್ ಅನ್ನು ಜೈವಿಕ ವಿಘಟನೀಯವಾಗಿಸಬೇಕು ಎಂದರು.

ಕೃಪೆ: ಡೆಕ್ಕನ್ ಹೆರಾಲ್ಡ್


ಓದಿ: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್; ಬೆಂಗಳೂರು ಭೇಲ್


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...