HomeUncategorizedಹೊಸ ಮುಖ್ಯಮಂತ್ರಿ ಒಕ್ಕೂಟ ತತ್ವದ ಆದರ್ಶಕ್ಕೆ ಆಗ್ರಹಿಸಿ ನಿಲ್ಲಲಿ

ಹೊಸ ಮುಖ್ಯಮಂತ್ರಿ ಒಕ್ಕೂಟ ತತ್ವದ ಆದರ್ಶಕ್ಕೆ ಆಗ್ರಹಿಸಿ ನಿಲ್ಲಲಿ

- Advertisement -
- Advertisement -

ಕರ್ನಾಟಕವು ಏಕೀಕರಣಗೊಂಡ ನಂತರ 19 ಮುಖ್ಯಮಂತ್ರಿಗಳನ್ನು ಕಂಡಿದೆ. ಈಗ 20ನೇ ಮುಖ್ಯಮಂತ್ರಿಯಾಗಿ ಕರ್ನಾಟಕ ಸರ್ಕಾರವನ್ನು ಮುನ್ನಡೆಸಲು ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯಾಗಲು ಇದೇನು ಹಿತಕರ ಕಾಲಘಟ್ಟವಲ್ಲ. ಒಂದು ಕಡೆ ದೇಶ ಮತ್ತು ರಾಜ್ಯಗಳೆರಡರ ಆರ್ಥಿಕತೆ ಗಣನೀಯವಾಗಿ ಕುಸಿದಿದೆ. ಕೊರೊನಾ ಸಾಂಕ್ರಾಮಿಕ ಮಧ್ಯಮ ಮತ್ತು ಬಡಮಧ್ಯಮ ವರ್ಗದ ಜನರನ್ನು ಕಂಗೆಡಿಸಿದೆ. ಇಷ್ಟು ಸಾಲದು ಎಂಬಂತೆ ’ಭಿನ್ನ’ವಾದ ಬಿಜೆಪಿ ಪಕ್ಷದಲ್ಲಿ ಇರುವ ಆಂತರಿಕ ಭಿನ್ನಮತ ಹೊಸ ಮುಖ್ಯಮಂತ್ರಿಯವರ ಆಯ್ಕೆಯಿಂದ ಶಮನವಾಗುತ್ತದೆ ಎಂಬ ಯಾವ ಭರವಸೆಗಳೂ ಗೋಚರಿಸುತ್ತಿಲ್ಲ. ’ಹಳೆಯ’ ಆರ್‌ಎಸ್‌ಎಸ್ ಕಟ್ಟಾಳು ಯಡಿಯೂರಪ್ಪನವರನ್ನೇ ಇಳಿಸಲು ಪ್ರಯತ್ನಿಸಿದ ’ಹೊಸ’ ನಮೂನೆಯ ಆರ್‌ಎಸ್‌ಎಸ್‌ಗಳು, ಆರ್‌ಎಸ್‌ಎಸ್ ಮೂಲದವರಲ್ಲದ ವಲಸಿಗ ಬೊಮ್ಮಾಯಿ ಅವರನ್ನು ಎಷ್ಟು ಸುಸೂತ್ರವಾಗಿ ಕೆಲಸ ಮಾಡಲು ಬಿಡುತ್ತಾರೆ ಎಂದು ನೋಡುವಷ್ಟರಲ್ಲಿಯೇ ಬಹುಶಃ ಉಳಿದ ಒಂದೂ ಮುಕ್ಕಾಲು ವರ್ಷ ಕಳೆದುಹೋಗಬಹುದು. ಅಷ್ಟು ಹೊತ್ತಿಗೆ ಕರ್ನಾಟಕದ ಪಾಡೇನು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಹಾಗಾಗದೆ ಇರಲಿ ಎಂದು ಸದ್ಯಕ್ಕೆ ಪ್ರಾರ್ಥಿಸೋಣ.

ಎಸ್ ಆರ್ ಬೊಮ್ಮಾಯಿ ಪ್ರಕರಣ ನೀಡಿದ ಕೊಡುಗೆ ನೆನಪಿರಲಿ

ಇಂದಿನ ಸಂದರ್ಭದಲ್ಲಿ ಒಕ್ಕೂಟ ಸರ್ಕಾರದ ಜೊತೆಗೆ ಸೆಣೆಸಿ ರಾಜ್ಯದ ಹಿತ ಕಾಯ್ದುಕೊಳ್ಳುವ ಧೈರ್ಯವನ್ನು ಮಾಡುವ ಯಾವುದೇ ಬಿಜೆಪಿ ರಾಜ್ಯ ಸರ್ಕಾರ ಇರುವುದಕ್ಕೆ ಸಾಧ್ಯವಿಲ್ಲ. ಅದು ತಮಗೆ ನ್ಯಾಯಬದ್ಧವಾಗಿ ಸಿಗಬೇಕಿರುವ ಜಿಎಸ್‌ಟಿ ಬಾಕಿ ಕೇಳುವುದಕ್ಕೆ ಇರಲಿ ಅಥವಾ ಸದ್ಯದ ಕೊರೊನಾ ಸನ್ನಿವೇಶದಲ್ಲಿ ತುರ್ತಾಗಿ ಸಿಗಬೇಕಿರುವ ಲಸಿಕೆಗೆ ಆಗ್ರಹ ಮಾಡುವುದಕ್ಕಾದರೂ ಇರಲಿ. ಆದರೆ ಬಸವರಾಜ ಬೊಮ್ಮಾಯಿಯವರ ತಂದೆ ಎಸ್ ಆರ್ ಬೊಮ್ಮಾಯಿಯವರ ಸರ್ಕಾರವನ್ನು ಅಂದಿನ ಕಾಂಗ್ರೆಸ್ ಆಡಳಿತದ ಒಕ್ಕೂಟ ಸರ್ಕಾರ ವಜಾ ಮಾಡಿದ ನಂತರ, ಎಸ್ ಆರ್ ಬೊಮ್ಮಾಯಿಯವರು ಸುಪ್ರೀಂ ಕೋರ್ಟ್‌ಗೆ ತೆರಳಿ, ಒಕ್ಕೂಟ ತತ್ವದ ವ್ಯಾಖ್ಯಾನವನ್ನು ನೆನಪಿಸುವುದಕ್ಕೆ ಕಾರಣೀಭೂತರಾದವರು. ಇದು ಬಸವರಾಜ್ ಬೊಮ್ಮಾಯಿಯವರಿಗೆ ಹೆಚ್ಚು ನೆನಪಿರುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಕ್ಕೂಟ ಸರ್ಕಾರದ ಅಡಿಯಾಳಲ್ಲ, ಬದಲಿಗೆ ರಾಜ್ಯ ಒಕ್ಕೂಟ ತತ್ವದಲ್ಲಿ ಸರ್ವ ಸ್ವತಂತ್ರ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಂಡು ಆಡಳಿತ ನಡೆಸಲಿ ಎಂಬುದು ಕೂಡ ಆರು ಕೋಟಿಗೂ ಮೀರಿದ ಕರ್ನಾಟಕದ ನಾಗರಿಕರ ಆಗ್ರಹ.

ಕೌಬೆಲ್ಟ್ ಹಿಂದುತ್ವ ರಾಜ್ಯದಲ್ಲಿ ನಡೆಯುವುದಿಲ್ಲ ಎಂಬ ಎಚ್ಚರಿಕೆ ಜಾಗೃತವಾಗಿರಲಿ

ಬಸವರಾಜ್ ಬೊಮ್ಮಾಯಿಯವರ ಆಯ್ಕೆಗೂ ಮುನ್ನ ಅತಿ ಹೆಚ್ಚು ಚರ್ಚೆಯಲ್ಲಿದ್ದ ಸಂಗತಿ ಕರ್ನಾಟಕದಲ್ಲಿ ಹಿಂದುತ್ವವನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸುವ ಹಾರ್ಡ್‌ಕೋರ್ ಹಿಂದುತ್ವವಾದಿಗೆ ಮುಖ್ಯಮಂತ್ರಿ ಗಾದಿ ಒಲಿಯಲಿದೆ ಎಂಬ ಸುದ್ದಿ. ಹಿಂದುತ್ವ ಹಾರ್ಡ್ ಆಗಿರಲಿ ಅಥವಾ ಮೆತ್ತಗೆ ಮೃದುವಾಗಿರಲಿ ಅದು ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಕರ್ನಾಟಕದ ಮಟ್ಟಿಗೆ, ಇನ್ನೆಲ್ಲಾ ಬಿಟ್ಟು ದಿನಾಲು ೨೪ ಗಂಟೆ ಕೋಮು ವಿಷ ಕಾರಲು ಶಕ್ತಿ ಇದ್ದ ಹತ್ತಾರು ಸಚಿವರು ಹಿಂದಕ್ಕೆ ಸರಿದಿದ್ದಾರೆ ಎಂದರೆ ಬಿಜೆಪಿಯ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್ ಥಿಂಕ್ ಟ್ಯಾಂಕ್‌ಗೆ ಕರ್ನಾಟಕದಲ್ಲಿರುವ ಪ್ರತಿರೋಧ ತುಸುವಾದರೂ ಅರ್ಥವಾಗಿರಲಿಕ್ಕೆ ಸಾಕು. ಇಲ್ಲಿ ಜಾತಿ ಐಡೆಂಟಿಟಿ ಸಂಘ ಪರಿವಾರ ಪ್ರತಿಪಾದಿಸುವ ’ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು’ ಹಿಂದುತ್ವ ಸಿದ್ಧಾಂತಕ್ಕಿಂತ ಬಲಶಾಲಿಯಾಗಿದೆ ಎಂಬುದು ಒಂದು ಮಟ್ಟಿಗಿನ ನಿಜ ಸಂಗತಿಯಾದರೂ, ಅದನ್ನು ಮೀರಿದ ಒಂದು ಪ್ರಜ್ಞೆಯೂ ಕನ್ನಡಿಗರಲ್ಲಿ ಇದೆ ಅನ್ನುವುದೂ ನಿಜ. ಬಸವಣ್ಣ, ನಾಲ್ವಡಿ, ಕುವೆಂಪು, ಬಿ ಕೃಷ್ಣಪ್ಪ, ಬಿ ಬಸವಲಿಂಗಪ್ಪ ಆದಿಯಾಗಿ ಹಲವು ಧೀಮಂತರು ಕಟ್ಟಿಕೊಟ್ಟಿರುವ ಸಾಂಸ್ಕೃತಿಕ-ರಾಜಕೀಯ ಎಚ್ಚರಿಕೆಯ ಪರಂಪರೆಯೂ ಜನರ ಸ್ಮೃತಿಯಲ್ಲಿ ಎಲ್ಲೋ ಅಡಕವಾಗಿದೆ. ಅದು ಆಗಾಗ ಜಾಗೃತವಾಗುವುದಕ್ಕೂ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆ ಹೊಸ ಮುಖ್ಯಮಂತ್ರಿಗಳಿಗೆ ಇರಲಿ. ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಬಹುತ್ವದ ರಾಜಕಾರಣವನ್ನು ಅವರು ಮರೆಯದಿರಲಿ.

PC: Mangalorean.com

ಭ್ರಷ್ಟಾಚಾರ ತಗ್ಗಲಿ; ಆಡಳಿತದಲ್ಲಿ ಹೊಸ ಹುರುಪು, ಪಾರದರ್ಶಕತೆ ಮತ್ತು ಚಾಕಚಕ್ಯತೆ ಇರಲಿ

ಭ್ರಷ್ಟಾಚಾರ ಕೊನೆಗೊಳಿಸುವ ಸರ್ಕಾರ ನೋಡಲು ಕರ್ನಾಟಕ ಜನತೆಗೆ ಯೋಗ ಯಾವಾಗ ಕೂಡಿಬರುತ್ತದೋ ತಿಳಿದಿಲ್ಲ. ಆದರೆ ಹಿಂದಿನ ಸರ್ಕಾರಕ್ಕಿಂತಲೂ ಉತ್ತಮ ಆಡಳಿತ ನಡೆಸಿ ಎಂದು ಹೊಸ ಸರ್ಕಾರ ಬಂದಾಗ ಕೇಳಿಕೊಳ್ಳುವುದನ್ನಾದರೂ ಮಾಡಬಹುದೇನೋ! ಉದಾಹರಣೆಗೆ ಶಿಕ್ಷಣ ಸಚಿವಾಲಯವನ್ನೇ ನೋಡಿ. ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೆಲಸಗಳಿಗೆ ಹೋಗುವಂತಾಗಿದೆ. ಆ ಮಕ್ಕಳ ಶಿಕ್ಷಣಕ್ಕೆ ಪರಿಹಾರ ಸಿಗುವಂತಹ ಒಂದು ಆರೋಗ್ಯಕರ ನೀತಿಯನ್ನು ಸೃಷ್ಟಿಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಪರೀಕ್ಷೆಗಳನ್ನು ನಡೆಸುವುದೇ ಸಾಧನೆ ಎಂಬಂತೆ ನಡೆದುಕೊಳ್ಳುವ ಶಿಕ್ಷಣ ಸಚಿವರು ಹೆಸರಿಗೆ ದಕ್ಷರು ಮತ್ತು ಸಜ್ಜನರು. ಡಿಜಿಟಲ್ ಡಿವೈಡ್‌ನಿಂದ ಬಡಮಕ್ಕಳಿಗೆ ಆಗಿರುವ ಸಮಸ್ಯೆಯ ಬಗ್ಗೆ ಒಂದು ಪರಿಹಾರವನ್ನೂ ಈ ಸಚಿವರು ಸೂಚಿಸಿರುವ ಉದಾಹರಣೆಯಿಲ್ಲ. ಹಲವಾರು ಶಿಕ್ಷಣ ತಜ್ಞರನ್ನು ಒಳಗೊಂಡಿರುವ ಕರ್ನಾಟಕದಲ್ಲಿ ಸಲಹೆಗೇನೂ ಬರವಿರಲಿಲ್ಲ ಅಲ್ಲವೇ?

ಇದು ಒಂದು ಇಲಾಖೆಯ ಉದಾಹರಣೆಯಾದರೆ ಕೃಷಿ, ಕಾರ್ಮಿಕ, ಆರೋಗ್ಯ, ವಸತಿ, ಸಾರಿಗೆ ಹೀಗೆ ಯಾವ ಇಲಾಖೆಯನ್ನೂ ತೆಗೆದುಕೊಂಡರೂ ಸಮಸ್ಯೆಗಳ ಆಗರವಾಗಿದೆ. ಸಾಮಾನ್ಯ ಜನರ ಸಮಸ್ಯೆಗೆ ಮಿಡಿಯುವವರಿಲ್ಲದೆ ಆಡಳಿತ ಕುಂಟುವುದನ್ನೂ ನಿಲ್ಲಿಸಿ ಮಕಾಡೆ ಮಲಗಿದೆ. ಹೊಸ ಸಚಿವ ಸಂಪುಟ ಈ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ತಮಗೆ ಸಿಕ್ಕಿರುವ ಈ ಸಣ್ಣ ಆದರೆ ಸವಾಲಿನ ಸಮಯದಲ್ಲಿ ಕೆಲಸ ಮಾಡುವಂತಾಗಲಿ. ಇದಕ್ಕೆ ನೂತನ ಮುಖ್ಯಮಂತ್ರಿಗಳು ಸ್ಪೂರ್ತಿಯಾಗಿ,
ಆದರ್ಶಪ್ರಾಯವಾಗಿ ಕೆಲಸ ಮಾಡಿ ರಾಜ್ಯವನ್ನು ಮುನ್ನಡೆಸಲಿ.


ಇದನ್ನೂ ಓದಿ: ಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

ಇದನ್ನೂ ಓದಿ: ಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...