HomeUncategorizedಹೊಸ ಮುಖ್ಯಮಂತ್ರಿ ಒಕ್ಕೂಟ ತತ್ವದ ಆದರ್ಶಕ್ಕೆ ಆಗ್ರಹಿಸಿ ನಿಲ್ಲಲಿ

ಹೊಸ ಮುಖ್ಯಮಂತ್ರಿ ಒಕ್ಕೂಟ ತತ್ವದ ಆದರ್ಶಕ್ಕೆ ಆಗ್ರಹಿಸಿ ನಿಲ್ಲಲಿ

- Advertisement -
- Advertisement -

ಕರ್ನಾಟಕವು ಏಕೀಕರಣಗೊಂಡ ನಂತರ 19 ಮುಖ್ಯಮಂತ್ರಿಗಳನ್ನು ಕಂಡಿದೆ. ಈಗ 20ನೇ ಮುಖ್ಯಮಂತ್ರಿಯಾಗಿ ಕರ್ನಾಟಕ ಸರ್ಕಾರವನ್ನು ಮುನ್ನಡೆಸಲು ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯಾಗಲು ಇದೇನು ಹಿತಕರ ಕಾಲಘಟ್ಟವಲ್ಲ. ಒಂದು ಕಡೆ ದೇಶ ಮತ್ತು ರಾಜ್ಯಗಳೆರಡರ ಆರ್ಥಿಕತೆ ಗಣನೀಯವಾಗಿ ಕುಸಿದಿದೆ. ಕೊರೊನಾ ಸಾಂಕ್ರಾಮಿಕ ಮಧ್ಯಮ ಮತ್ತು ಬಡಮಧ್ಯಮ ವರ್ಗದ ಜನರನ್ನು ಕಂಗೆಡಿಸಿದೆ. ಇಷ್ಟು ಸಾಲದು ಎಂಬಂತೆ ’ಭಿನ್ನ’ವಾದ ಬಿಜೆಪಿ ಪಕ್ಷದಲ್ಲಿ ಇರುವ ಆಂತರಿಕ ಭಿನ್ನಮತ ಹೊಸ ಮುಖ್ಯಮಂತ್ರಿಯವರ ಆಯ್ಕೆಯಿಂದ ಶಮನವಾಗುತ್ತದೆ ಎಂಬ ಯಾವ ಭರವಸೆಗಳೂ ಗೋಚರಿಸುತ್ತಿಲ್ಲ. ’ಹಳೆಯ’ ಆರ್‌ಎಸ್‌ಎಸ್ ಕಟ್ಟಾಳು ಯಡಿಯೂರಪ್ಪನವರನ್ನೇ ಇಳಿಸಲು ಪ್ರಯತ್ನಿಸಿದ ’ಹೊಸ’ ನಮೂನೆಯ ಆರ್‌ಎಸ್‌ಎಸ್‌ಗಳು, ಆರ್‌ಎಸ್‌ಎಸ್ ಮೂಲದವರಲ್ಲದ ವಲಸಿಗ ಬೊಮ್ಮಾಯಿ ಅವರನ್ನು ಎಷ್ಟು ಸುಸೂತ್ರವಾಗಿ ಕೆಲಸ ಮಾಡಲು ಬಿಡುತ್ತಾರೆ ಎಂದು ನೋಡುವಷ್ಟರಲ್ಲಿಯೇ ಬಹುಶಃ ಉಳಿದ ಒಂದೂ ಮುಕ್ಕಾಲು ವರ್ಷ ಕಳೆದುಹೋಗಬಹುದು. ಅಷ್ಟು ಹೊತ್ತಿಗೆ ಕರ್ನಾಟಕದ ಪಾಡೇನು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಹಾಗಾಗದೆ ಇರಲಿ ಎಂದು ಸದ್ಯಕ್ಕೆ ಪ್ರಾರ್ಥಿಸೋಣ.

ಎಸ್ ಆರ್ ಬೊಮ್ಮಾಯಿ ಪ್ರಕರಣ ನೀಡಿದ ಕೊಡುಗೆ ನೆನಪಿರಲಿ

ಇಂದಿನ ಸಂದರ್ಭದಲ್ಲಿ ಒಕ್ಕೂಟ ಸರ್ಕಾರದ ಜೊತೆಗೆ ಸೆಣೆಸಿ ರಾಜ್ಯದ ಹಿತ ಕಾಯ್ದುಕೊಳ್ಳುವ ಧೈರ್ಯವನ್ನು ಮಾಡುವ ಯಾವುದೇ ಬಿಜೆಪಿ ರಾಜ್ಯ ಸರ್ಕಾರ ಇರುವುದಕ್ಕೆ ಸಾಧ್ಯವಿಲ್ಲ. ಅದು ತಮಗೆ ನ್ಯಾಯಬದ್ಧವಾಗಿ ಸಿಗಬೇಕಿರುವ ಜಿಎಸ್‌ಟಿ ಬಾಕಿ ಕೇಳುವುದಕ್ಕೆ ಇರಲಿ ಅಥವಾ ಸದ್ಯದ ಕೊರೊನಾ ಸನ್ನಿವೇಶದಲ್ಲಿ ತುರ್ತಾಗಿ ಸಿಗಬೇಕಿರುವ ಲಸಿಕೆಗೆ ಆಗ್ರಹ ಮಾಡುವುದಕ್ಕಾದರೂ ಇರಲಿ. ಆದರೆ ಬಸವರಾಜ ಬೊಮ್ಮಾಯಿಯವರ ತಂದೆ ಎಸ್ ಆರ್ ಬೊಮ್ಮಾಯಿಯವರ ಸರ್ಕಾರವನ್ನು ಅಂದಿನ ಕಾಂಗ್ರೆಸ್ ಆಡಳಿತದ ಒಕ್ಕೂಟ ಸರ್ಕಾರ ವಜಾ ಮಾಡಿದ ನಂತರ, ಎಸ್ ಆರ್ ಬೊಮ್ಮಾಯಿಯವರು ಸುಪ್ರೀಂ ಕೋರ್ಟ್‌ಗೆ ತೆರಳಿ, ಒಕ್ಕೂಟ ತತ್ವದ ವ್ಯಾಖ್ಯಾನವನ್ನು ನೆನಪಿಸುವುದಕ್ಕೆ ಕಾರಣೀಭೂತರಾದವರು. ಇದು ಬಸವರಾಜ್ ಬೊಮ್ಮಾಯಿಯವರಿಗೆ ಹೆಚ್ಚು ನೆನಪಿರುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಕ್ಕೂಟ ಸರ್ಕಾರದ ಅಡಿಯಾಳಲ್ಲ, ಬದಲಿಗೆ ರಾಜ್ಯ ಒಕ್ಕೂಟ ತತ್ವದಲ್ಲಿ ಸರ್ವ ಸ್ವತಂತ್ರ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಂಡು ಆಡಳಿತ ನಡೆಸಲಿ ಎಂಬುದು ಕೂಡ ಆರು ಕೋಟಿಗೂ ಮೀರಿದ ಕರ್ನಾಟಕದ ನಾಗರಿಕರ ಆಗ್ರಹ.

ಕೌಬೆಲ್ಟ್ ಹಿಂದುತ್ವ ರಾಜ್ಯದಲ್ಲಿ ನಡೆಯುವುದಿಲ್ಲ ಎಂಬ ಎಚ್ಚರಿಕೆ ಜಾಗೃತವಾಗಿರಲಿ

ಬಸವರಾಜ್ ಬೊಮ್ಮಾಯಿಯವರ ಆಯ್ಕೆಗೂ ಮುನ್ನ ಅತಿ ಹೆಚ್ಚು ಚರ್ಚೆಯಲ್ಲಿದ್ದ ಸಂಗತಿ ಕರ್ನಾಟಕದಲ್ಲಿ ಹಿಂದುತ್ವವನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸುವ ಹಾರ್ಡ್‌ಕೋರ್ ಹಿಂದುತ್ವವಾದಿಗೆ ಮುಖ್ಯಮಂತ್ರಿ ಗಾದಿ ಒಲಿಯಲಿದೆ ಎಂಬ ಸುದ್ದಿ. ಹಿಂದುತ್ವ ಹಾರ್ಡ್ ಆಗಿರಲಿ ಅಥವಾ ಮೆತ್ತಗೆ ಮೃದುವಾಗಿರಲಿ ಅದು ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಕರ್ನಾಟಕದ ಮಟ್ಟಿಗೆ, ಇನ್ನೆಲ್ಲಾ ಬಿಟ್ಟು ದಿನಾಲು ೨೪ ಗಂಟೆ ಕೋಮು ವಿಷ ಕಾರಲು ಶಕ್ತಿ ಇದ್ದ ಹತ್ತಾರು ಸಚಿವರು ಹಿಂದಕ್ಕೆ ಸರಿದಿದ್ದಾರೆ ಎಂದರೆ ಬಿಜೆಪಿಯ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್ ಥಿಂಕ್ ಟ್ಯಾಂಕ್‌ಗೆ ಕರ್ನಾಟಕದಲ್ಲಿರುವ ಪ್ರತಿರೋಧ ತುಸುವಾದರೂ ಅರ್ಥವಾಗಿರಲಿಕ್ಕೆ ಸಾಕು. ಇಲ್ಲಿ ಜಾತಿ ಐಡೆಂಟಿಟಿ ಸಂಘ ಪರಿವಾರ ಪ್ರತಿಪಾದಿಸುವ ’ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು’ ಹಿಂದುತ್ವ ಸಿದ್ಧಾಂತಕ್ಕಿಂತ ಬಲಶಾಲಿಯಾಗಿದೆ ಎಂಬುದು ಒಂದು ಮಟ್ಟಿಗಿನ ನಿಜ ಸಂಗತಿಯಾದರೂ, ಅದನ್ನು ಮೀರಿದ ಒಂದು ಪ್ರಜ್ಞೆಯೂ ಕನ್ನಡಿಗರಲ್ಲಿ ಇದೆ ಅನ್ನುವುದೂ ನಿಜ. ಬಸವಣ್ಣ, ನಾಲ್ವಡಿ, ಕುವೆಂಪು, ಬಿ ಕೃಷ್ಣಪ್ಪ, ಬಿ ಬಸವಲಿಂಗಪ್ಪ ಆದಿಯಾಗಿ ಹಲವು ಧೀಮಂತರು ಕಟ್ಟಿಕೊಟ್ಟಿರುವ ಸಾಂಸ್ಕೃತಿಕ-ರಾಜಕೀಯ ಎಚ್ಚರಿಕೆಯ ಪರಂಪರೆಯೂ ಜನರ ಸ್ಮೃತಿಯಲ್ಲಿ ಎಲ್ಲೋ ಅಡಕವಾಗಿದೆ. ಅದು ಆಗಾಗ ಜಾಗೃತವಾಗುವುದಕ್ಕೂ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆ ಹೊಸ ಮುಖ್ಯಮಂತ್ರಿಗಳಿಗೆ ಇರಲಿ. ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಬಹುತ್ವದ ರಾಜಕಾರಣವನ್ನು ಅವರು ಮರೆಯದಿರಲಿ.

PC: Mangalorean.com

ಭ್ರಷ್ಟಾಚಾರ ತಗ್ಗಲಿ; ಆಡಳಿತದಲ್ಲಿ ಹೊಸ ಹುರುಪು, ಪಾರದರ್ಶಕತೆ ಮತ್ತು ಚಾಕಚಕ್ಯತೆ ಇರಲಿ

ಭ್ರಷ್ಟಾಚಾರ ಕೊನೆಗೊಳಿಸುವ ಸರ್ಕಾರ ನೋಡಲು ಕರ್ನಾಟಕ ಜನತೆಗೆ ಯೋಗ ಯಾವಾಗ ಕೂಡಿಬರುತ್ತದೋ ತಿಳಿದಿಲ್ಲ. ಆದರೆ ಹಿಂದಿನ ಸರ್ಕಾರಕ್ಕಿಂತಲೂ ಉತ್ತಮ ಆಡಳಿತ ನಡೆಸಿ ಎಂದು ಹೊಸ ಸರ್ಕಾರ ಬಂದಾಗ ಕೇಳಿಕೊಳ್ಳುವುದನ್ನಾದರೂ ಮಾಡಬಹುದೇನೋ! ಉದಾಹರಣೆಗೆ ಶಿಕ್ಷಣ ಸಚಿವಾಲಯವನ್ನೇ ನೋಡಿ. ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೆಲಸಗಳಿಗೆ ಹೋಗುವಂತಾಗಿದೆ. ಆ ಮಕ್ಕಳ ಶಿಕ್ಷಣಕ್ಕೆ ಪರಿಹಾರ ಸಿಗುವಂತಹ ಒಂದು ಆರೋಗ್ಯಕರ ನೀತಿಯನ್ನು ಸೃಷ್ಟಿಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಪರೀಕ್ಷೆಗಳನ್ನು ನಡೆಸುವುದೇ ಸಾಧನೆ ಎಂಬಂತೆ ನಡೆದುಕೊಳ್ಳುವ ಶಿಕ್ಷಣ ಸಚಿವರು ಹೆಸರಿಗೆ ದಕ್ಷರು ಮತ್ತು ಸಜ್ಜನರು. ಡಿಜಿಟಲ್ ಡಿವೈಡ್‌ನಿಂದ ಬಡಮಕ್ಕಳಿಗೆ ಆಗಿರುವ ಸಮಸ್ಯೆಯ ಬಗ್ಗೆ ಒಂದು ಪರಿಹಾರವನ್ನೂ ಈ ಸಚಿವರು ಸೂಚಿಸಿರುವ ಉದಾಹರಣೆಯಿಲ್ಲ. ಹಲವಾರು ಶಿಕ್ಷಣ ತಜ್ಞರನ್ನು ಒಳಗೊಂಡಿರುವ ಕರ್ನಾಟಕದಲ್ಲಿ ಸಲಹೆಗೇನೂ ಬರವಿರಲಿಲ್ಲ ಅಲ್ಲವೇ?

ಇದು ಒಂದು ಇಲಾಖೆಯ ಉದಾಹರಣೆಯಾದರೆ ಕೃಷಿ, ಕಾರ್ಮಿಕ, ಆರೋಗ್ಯ, ವಸತಿ, ಸಾರಿಗೆ ಹೀಗೆ ಯಾವ ಇಲಾಖೆಯನ್ನೂ ತೆಗೆದುಕೊಂಡರೂ ಸಮಸ್ಯೆಗಳ ಆಗರವಾಗಿದೆ. ಸಾಮಾನ್ಯ ಜನರ ಸಮಸ್ಯೆಗೆ ಮಿಡಿಯುವವರಿಲ್ಲದೆ ಆಡಳಿತ ಕುಂಟುವುದನ್ನೂ ನಿಲ್ಲಿಸಿ ಮಕಾಡೆ ಮಲಗಿದೆ. ಹೊಸ ಸಚಿವ ಸಂಪುಟ ಈ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ತಮಗೆ ಸಿಕ್ಕಿರುವ ಈ ಸಣ್ಣ ಆದರೆ ಸವಾಲಿನ ಸಮಯದಲ್ಲಿ ಕೆಲಸ ಮಾಡುವಂತಾಗಲಿ. ಇದಕ್ಕೆ ನೂತನ ಮುಖ್ಯಮಂತ್ರಿಗಳು ಸ್ಪೂರ್ತಿಯಾಗಿ,
ಆದರ್ಶಪ್ರಾಯವಾಗಿ ಕೆಲಸ ಮಾಡಿ ರಾಜ್ಯವನ್ನು ಮುನ್ನಡೆಸಲಿ.


ಇದನ್ನೂ ಓದಿ: ಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

ಇದನ್ನೂ ಓದಿ: ಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...