Homeಸಿನಿಮಾಕ್ರೀಡೆಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್

ಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್

- Advertisement -
- Advertisement -

ಪ್ರತಿ ನಾಲ್ಕು ವರ್ಷಗಳಿಗೊಮ್ಮ ಬರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಸಾಧನೆ ಯಾವುದೇ ಕ್ರೀಡಾಪಟುವಿನ ಜೀವಮಾನಕ್ಕೆ ಜೊತೆಯಾಗಿ ಉಳಿಯುವ ಬೆವರು. ಅಲ್ಲಿ ಕೇವಲ ಆಟಗಾರನೊಬ್ಬನಲ್ಲ ಆತನನ್ನು/ಆಕೆಯನ್ನು ಪ್ರೋತ್ಸಾಹಿಸುವ, ಪೋಷಿಸುವ, ಮಾರ್ಗದರ್ಶನ ನೀಡುವ, ಚಪ್ಪಾಳೆ ಹೊಡೆದು ಹುರಿದುಂಬಿಸುವ, ಬಿರುದು ಬಾವಲಿ ನೀಡಿ ಅಭಿನಂದಿಸುವ ಸಾವಿರಾರು ಮನಸ್ಸುಗಳಿರುತ್ತವೆ. ಹಾಗೆ ನೋಡಿದರೆ ಒಂದಿಡೀ ಸಮುದಾಯ/ದೇಶವೇ ಆಕೆ/ಆತನ ಹಿಂದಿರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಒಲಿಂಪಿಕ್ಸ್‌ಅನ್ನು ರಾಜಕೀಯರಹಿತ ರಾಷ್ಟ್ರೀಯತೆಯಿಂದ ಬೇರ್ಪಡಿಸುವುದು ಕಷ್ಟ.

ಈ ಕ್ರೀಡಾಜಾತ್ರೆಗೆ ಆಟಗಾರರನ್ನು ಅಣಿಗೊಳಿಸುವುದು, ಅವರ ಬೆಂಬಲಕ್ಕೆ ನಿಲ್ಲುವುದು ಹಾಗೂ ಅವರ ಸಾಧನೆಗೆ ಪೂರಕ ಒತ್ತಾಸೆ ನೀಡುವ ವ್ಯವಸ್ಥೆ ಸಹ ಒಂದಿಲ್ಲೊಂದು ಚೌಕಟ್ಟಿನ ಬಂಧಿಯಾಗಿರುತ್ತದೆ. ಓರ್ವ ಕ್ರೀಡಾಪಟುವಿನ ಯಶಸ್ಸಿನ ಮೇಲೆ ಆ ಇಡೀ ವ್ಯವಸ್ಥೆಯ ಯಶಸ್ಸು ಕೂಡ ಅವಲಂಬಿತವಾಗಿರುತ್ತದೆ.

ಈ ದೃಷ್ಟಿಯಿಂದ ನೋಡಿದಾಗ ಶತಮಾನಗಳಷ್ಟು ಇತಿಹಾಸವಿರುವ ಈ ಕೂಟಗಳಲ್ಲಿ ಅನೇಕ ಉದಾಹರಣೆಗಳು ದೇಶಿಯತೆಯ ಛಾಪು ಮೂಡಿಸಿರುವುದನ್ನು ನೋಡಬಹುದಾಗಿದೆ. ಅಷ್ಟೇ ಏಕೆ, ಪದಕ ಗೆದ್ದ ಕ್ರೀಡಾಳು ತನ್ನ ದೇಶದ ಧ್ವಜವನ್ನು ಮೈಗೆ ಸುತ್ತಿಕೊಂಡು ಸಂಭ್ರಮಿಸುವಾಗ, ಗೆಲುವನ್ನು ತನ್ನ ಜನರಿಗೆ ಸಮರ್ಪಿಸುವಾಗ ಸಹ ಈ ದೇಶೀಯತೆ ಸಾಕಾರಗೊಳ್ಳುತ್ತದೆ.

ಸಹಜವಾಗಿಯೇ ಅಥ್ಲೀಟ್‌ಗಳು ತಮ್ಮ ನಾಲ್ಕು ವರ್ಷಗಳ ಕಠಿಣ ಪರಿಶ್ರಮವನ್ನು ಪಣಕ್ಕಿಡುತ್ತಾರೆ. ಇಲ್ಲಿ ವೈಯಕ್ತಿಕ ಸಾಧನೆಯ ಪರಾಕಾಷ್ಠೆ ತಲುಪುವ ಹಂಬಲದಲ್ಲಿರುತ್ತಾರೆ. ಅವರ ಸಾಧನೆಯ ಮೇರಿನಲ್ಲಿಯೇ ಅವರು ಪ್ರತಿನಿಧಿಸುವ ಸಮುದಾಯದ ಸಂಭ್ರಮ ಕೂಡ ಬೆಸುಗೆ ಹಾಕಿಕೊಂಡಿರುತ್ತದೆ.

ಒಲಿಂಪಿಕ್ಸ್‌ನಲ್ಲಿ ದೇಶದ ಎಲ್ಲೆಗಳನ್ನು ಮೀರಿ ಕ್ರೀಡಾಪಟುಗಳು ಸ್ವತಂತ್ರರಾಗಿ ಸ್ಪರ್ಧಿಸಲು ಸಹ ಅವಕಾಶ ಇರುತ್ತದೆ. ಯಾವುದೇ ಒಂದು ದೇಶ ರಾಜಕೀಯ ಮತ್ತು ತುಮುಲದ ಕಾರಣಗಳಿಂದಾಗಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಾದಾಗ ಆಯ್ದ ಕ್ರೀಡಾಪಟುಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಐಒಸಿ ಅವಕಾಶ ಮಾಡಿಕೊಡುತ್ತದೆ. ಆದರೆ ಅಂತಹವರ ಸಂಖ್ಯೆ ವಿರಳ ಎಂದೇ ಹೇಳಬೇಕು.

17 ವರ್ಷಗಳ ಹಿಂದೆ…

ಆಧುನಿಕ ಒಲಿಂಪಿಕ್ಸ್ ತವರು ಎನ್ನಲಾಗುವ ಅಥೆನ್ಸ್‌ನಲ್ಲಿ 17 ವರ್ಷಗಳ ಹಿಂದೆ ಒಲಿಂಪಿಕ್ಸ್ ಕ್ರೀಡಾಕೂಟ ಏರ್ಪಟ್ಟಿತ್ತು. ಧಾರವಾಡದ ಹೆಮ್ಮೆಯ ಕುವರಿ ಜೆಜೆ ಶೋಭಾ ಆ ಕೂಟದಲ್ಲಿ ತೋರಿದ ಛಲ, ಧೈರ್ಯ, ಸಂಕಲ್ಪದ ಹಿಂದೆ ಸಹ ತನ್ನ, ತನ್ನ ದೇಶದ ಗೌರವವನ್ನು ಎತ್ತಿಹಿಡಿಯಬೇಕು ಎಂಬ ಭಾವನೆ ಎದ್ದು ಕಾಣುತ್ತದೆ.

ಏಳು ಆಟಗಳ ಗೊಂಚಲಾಗಿರುವ ಹೆಪ್ಟಾಥ್ಲಾನಿನಲ್ಲಿ ಪದಕದಾಸೆಯೊಂದಿಗೆ ಕಣಕ್ಕಿಳಿದಿದ್ದ ಶೋಭಾ ಕಡೆಯ ಓಟದ ವೇಳೆ ತೀವ್ರ ಗಾಯಗೊಂಡು ನಡೆದಾಡಲೂ ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲಿದ್ದರು. ಇಡೀ ಮೈದಾನವೇ ನಿಬ್ಬೆರಗಾಗುವಂತೆ 800 ಮೀಟರ್ ಓಟದ ಆರಂಭ ಗೆರೆ ಸಮೀಪ ಬಂದ ಶೋಭಾ ಅಪಾರ ನೋವಿನ ನಡುವೆಯೂ ಓಡಿದ್ದು, ಇಡೀ ಭಾರತೀಯರು ಎದೆಯುಬ್ಬಿಸುವಂತೆ ಮಾಡಿತ್ತು ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಇಂತಹ ಅನೇಕ ಉದಾಹರಣೆಗಳು ಓಲಿಂಪಿಕ್ಸ್ ಇತಿಹಾಸದ ಗರ್ಭದಲ್ಲಿ ಅಡಗಿವೆ. ಭಾರತ ಮಾತ್ರವಲ್ಲದೇ ವಿವಿಧ ದೇಶಗಳ ಅಥ್ಲೀಟ್‌ಗಳು ತಮ್ಮ ದೇಶದ ಘನತೆ ಹೆಚ್ಚಿಸುವ ಸಲುವಾಗಿ ಅಪಾರ ನೋವು ನುಂಗಿ ಸ್ಪರ್ಧಿಸಿದ ನಿದರ್ಶನಗಳು ಹಲವಿವೆ.

ನಿಜ, ಓಲಿಂಪಿಕ್ಸ್ ಎಂಬುದು ಸಮಾನತೆಯ ಸಂಕೇತ. ಸಾಧನೆಯೊಂದೇ ಇಲ್ಲಿ ಎದ್ದು ಕಾಣುವ ಕಸುಬಾದರೂ ಎಲ್ಲರೂ ಸಮಾನ ಸಾಮರ್ಥ್ಯದ ಅಭ್ಯರ್ಥಿಗಳೇ! ಇಷ್ಟಾದರೂ ಇದನ್ನು ನಾವು, ನಮ್ಮವರು, ನಮ್ಮ ದೇಶ ಎಂಬ ಭಾವನೆಗಳಿಂದ ದೂರ ಇಡಲು ಸಾಧ್ಯವಿಲ್ಲ. ಆದರೆ ಇಲ್ಲಿ ಎದೆ ಬಡಿದುಕೊಳ್ಳುವ ರಾಷ್ಟ್ರೀಯತೆ ಎಂಬ ರಾಜಕೀಯ ಷಡ್ಯಂತ್ರ ಇಲ್ಲ. ಇಲ್ಲಿರುವುದು ಒಂದಿಡೀ ಸಮುದಾಯ-ದೇಶ ಎದೆಯುಬ್ಬಿಸಿ ನಡೆಯುವಂತೆ ಮಾಡುವ, ಒಳಗೊಳ್ಳುವ, ಪ್ರಾತಿನಿಧ್ಯಕ್ಕೆ ಮಹತ್ವ ನೀಡುವ, ಕ್ರೀಡಾಸ್ಪೂರ್ತಿಯ ರಾಷ್ಟ್ರೀಯತೆಯಷ್ಟೇ.

ಈಗ ಟೋಕಿಯೋದಲ್ಲಿ ಈ ಜಾತ್ರೆ ನಡೆಯುತ್ತಿದೆ. ಭಾರತ ಈ ಬಾರಿ 120ಕ್ಕೂ ಹೆಚ್ಚು ಸ್ಪರ್ಧಾಳುಗಳನ್ನು ಕಳುಹಿಸಿಕೊಟ್ಟಿದೆ.  ಈ ಹೊತ್ತಿಗೆ ಮೀರಾಬಾಯಿ ಚಾನು ವೇಯ್ಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಈ ಒಲಿಂಪಿಕ್ಸ್ ನ ಬೆಳ್ಳಿ ಪದಕ ಗಳಿಸಿಕೊಟ್ಟಿದ್ದರೆ. ಇನ್ನೂ ಹಲವು ಪದಕಗಳ ಭರವಸೆ ಇದೆ. ಅದೇನೇ ಇರಲಿ ನೂರು ಕೋಟಿ ಕನಸನ್ನು ಹೊತ್ತು ಟೋಕಿಯೋಗೆ ಹೋಗಿರುವ ಎಲ್ಲ ಕ್ರೀಡಾಪಟುಗಳಿಗೆ ಶುಭಮಸ್ತು.

ಕೆ ಬಿ ಎಸ್ ಜಗನ್ನಾಥ್

ಕೆ ಬಿ ಎಸ್ ಜಗನ್ನಾಥ್
ಹಲವು ಕನ್ನಡ ಪತ್ರಿಕೆಗಳಲ್ಲಿ ಕ್ರೀಡಾ ವಿಭಾಗದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಮಾಜಿ ಸಂಪಾದಕರು.


ಇದನ್ನೂ ಓದಿ: ಒಲಂಪಿಯಾದಿಂದ ಟೋಕಿಯೋದವರೆಗೆ; ಇತಿಹಾಸದ ಕಣ್ಣೋಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...