Homeಕರ್ನಾಟಕಈ ದೇಶದಲ್ಲಿ ಆ್ಯಬುಲೆನ್ಸ್‌ಗೂ ಜಾಗವಿಲ್ಲವೇ? : ಒಂದು ಪತ್ರ

ಈ ದೇಶದಲ್ಲಿ ಆ್ಯಬುಲೆನ್ಸ್‌ಗೂ ಜಾಗವಿಲ್ಲವೇ? : ಒಂದು ಪತ್ರ

- Advertisement -
- Advertisement -

‘ಈ ದೇಶದಲ್ಲಿ ಆ್ಯಂಬುಲೆನ್ಸ್‌ಗೂ ಜಾಗವಿಲ್ಲ’ ಎಂಬ ಮಾತು ಎಂತಹ ಗಟ್ಟಿ ಮನಸ್ಸಿನವರನ್ನೂ ಒಮ್ಮೆ ಕಾಡಿಸದೆ ಬಿಡದು. ಇದು ಕವಲುದಾರಿ ಸಿನಿಮಾದ ಒಂದು ದೃಶ್ಯ. ಅನಂತನಾಗ್‌ಗೆ ಗುಂಡೇಟು ಬಿದ್ದು, ಅವರನ್ನು ಉಳಿಸಬೇಕೆಂದು ಟ್ರಾಫಿಕ್ ಪೊಲೀಸ್‌ ಆದ ಹೀರೋ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಾನೆ. ಆದರೆ ರಸ್ತೆಯುದ್ದಕ್ಕೂ ಟ್ರಾಫಿಕ್. ಸೈರನ್ ಹಾಕಿದ್ದರೂ ಜಾಗಬಿಡುವವರಿಲ್ಲ. ಅನಂತ್‌ನಾಗ್ ರಸ್ತೆ ಮಧ್ಯದಲ್ಲೇ ಕೊನೆಯುಸಿರೆಳೆಯುತ್ತಾರೆ.
ಈ ದೃಶ್ಯವನ್ನು ನೋಡಿದ ಮೇಲೆ ಎಲ್ಲೇ ಆ್ಯಬುಂಲೆನ್ಸ್ ಶಬ್ದ ಕೇಳಿದರೂ ತಕ್ಷಣವೇ ಗಮನ ರಸ್ತೆಯೆಡೆಗೆ ಕೇಂದ್ರೀಕರಿಸುವಂತಾಗಿದೆ. ಇಂದು ಬೆಳಗ್ಗೆ ನಾನು ಕೆ.ಆರ್.ಮಾರ್ಕೆಟ್ ಬಳಿ ಬಸ್ಸಿನಲ್ಲಿ ಬರುತ್ತಿದ್ದಾಗ ಹಿಂದಿನಿಂದ ಆ್ಯಂಬುಲೆನ್ಸ್ ಶಬ್ದ ಬಂತು. ತಕ್ಷವೇ ತಿರುಗಿ ನೋಡಿದೆ. ನಾಕುಳಿತಿದ್ದ ಬಸ್ಸಿನಿಂದ ಸ್ವಲ್ಪವೇ ದೂರದಲ್ಲಿತ್ತು. ಅದರ ಮುಂದೆ ಒಂದೆರಡು ಕಾರುಗಳು ಬೈಕುಗಳು ಬರುತ್ತಿದ್ದವು. ಅವರಾರೂ ಆ್ಯಂಬುಲೆನ್ಸ್‌ಗೆ ಸೈಡ್ ಕೊಡಲಿಲ್ಲ. ಬದಲಾಗಿ ಮತ್ತೊಂದೆರಡು ಬೈಕುಗಳು ಆ್ಯಬುಲೆನ್ಸ್‌ಗೆ ಸೈಡ್‌ ಹೊಡೆದು ಮುಂದೆಬರುತ್ತಿದ್ದವು. ದುರದೃಷ್ಟವೆಂದರೆ ನಾನು ಕುಳಿತಿದ್ದ ಬಸ್ಸು ಕೂಡ ಜಾಗಬಿಡಲಿಲ್ಲ, ಹಾಗೇ ಮುಂದೆ ಬಂತು. ಅಲ್ಲಿದ್ದ ಟ್ರಾಫಿಕ್ ಪೋಲಿಸ್ ಕೂಡ ಒಂದು ಹೆಜ್ಜೆ ಅಲುಗಾಡದೆ ನಿಂತಲ್ಲೇ ನಿಂತು, ಅಲ್ಲಿಯ ಸನ್ನಿವೇಶವನ್ನು ನೋಡುತ್ತಿದ್ದರು ಬಿಟ್ಟರೆ, ಆ್ಯಂಬುಲೆನ್ಸ್‌ಗೆ ಜಾಗ ಬಿಡಿಸುವ ಕೆಲಸ ಮಾಡಲೇ ಇಲ್ಲ.

ಇದು ಒಂದು ಉದಾಹರಣೆಯಷ್ಟೇ ಇಂತಹವು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಟ್ರಾಫಿಕ್ ಇಲ್ಲದ ರಸ್ತೆಗಳಲ್ಲೂ ಆ್ಯಬುಲೆನ್ಸ್‌ಗೆ ಸೈಡ್ ಕೊಡದೆ ಮಧ್ಯ ರಸ್ತೆಯಲ್ಲಿ ಹೋಗುವವರೂ ಇದ್ದಾರೆ. ಆ್ಯಬುಲೆನ್ಸ್ ಜೊತೆಗೆ ರೇಸ್‌ಗೆ ಬಿದ್ದವರಂತೆ ಅದರ ಜೊತೆಗೇ ರೇಸ್ ಹೋಗುವವರೂ ಇದ್ದಾರೆ. ಇವರೆಲ್ಲರ ನಡುವೆ ಟ್ರಾಫಿಕ್ ನಿಯಂತ್ರಿಸಿ ಆ್ಯಬುಲೆನ್ಸ್‌ಗೆ ಜಾಗಮಾಡಿಕೊಡುವ ಸಹನೆಯನ್ನೂ ನಮ್ಮ ಟ್ರಾಫಿಕ್ ಪೊಲೀಸರು ಕಳೆದುಕೊಂಡಿದ್ದಾರೆ. ಎಂತಹ ವಿಪರ್ಯಾಸವೆಂದರೆ ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯದ್ವಾರದ ಮುಂದೆಯೇ ಬಿಎಂಟಿಸಿ ಬಸ್ಸುಗಳ ಮತ್ತು ಆಟೋ ನಿಲ್ದಾಣಗಳಿದ್ದು ಆ್ಯಬುಲೆನ್ಸ್ ಅಲ್ಲಿ ನಿಲ್ಲುವ ಬಸ್ಸುಗಳನ್ನು ದಾಟಿ ಆಸ್ಪತ್ರೆಯೊಳಗೆ ಹೋಗಬೇಕಾದರೆ ಅದೇ ಒಂದು ದೊಡ್ಡ ಸಾಹಸವಾಗಿರುತ್ತದೆ.

ಇಂತಹ ಎಷ್ಟೋ ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ವಾಹನ ಸವಾರರು ಆ್ಯಂಬುಲೆನ್ಸ್‌ಗೆ ಜಾಗ ಕೊಡದೆ ತಡವಾಗುವುದರಿಂದ ಬದುಕುಳಿಯಬಹುದಾದ ಎಷ್ಟೋ ಜೀವಗಳು ದಾರಿ ಮಧ್ಯದಲ್ಲೇ ಅಸುನೀಗುತ್ತವೆ. ಆದರೂ ನಮ್ಮ ಅಂತಃಕರಣ ಕಲಕುವುದೇ ಇಲ್ಲ, ನಾವೆಷ್ಟು ಅಸೂಕ್ಷ್ಮರಾಗಿದ್ದೇವೆ ಎಂದು ಪ್ರತಿಯೊಬ್ಬನೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಇವು ಕವಲುದಾರಿ ಸಿನಿಮಾದ ಆ ಮಾತನ್ನು ಮತ್ತೆ ಮತ್ತೆ ನನಪಿಸುತ್ತವೆ.

ಅಲ್ಲದೆ ರಸ್ತೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದವರನ್ನು ರಕ್ಷಿಸದೆ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾ ನಿಲ್ಲುವ, ಬಟ್ಟೆ ನೋಡಿ ಕಳ್ಳನೆಂದು ಹೊಡೆದು ಕೊಲ್ಲುವ, ಒಂಬತ್ತು ತಿಂಗಳ ಕಂದಮ್ಮಳನ್ನು ಅತ್ಯಾಚಾರಕ್ಕೆ ಯತ್ನಸುವ ಕ್ರೂರ ಮನಸ್ಸುಗಳ ಮಧ್ಯೆ ಆ್ಯಂಬುಲೆನ್ಸ್‌ ಒಳಗೆ ಸಾವು-ಬದುಕಿನಲ್ಲಿ ಹೋರಾಟ ಮಾಡುವವರ ನೋವು ಹೇಗೆ ತಾನೇ ಅರ್ಥವಾದೀತು ಎಂದು ನಮಗೆ ನಾವೇ ಕೇಳಿಕೊಳ್ಳಬೇಕು, ನಮ್ಮಿಂದಾಗುವ ಮಾನವೀಯ ಕೆಲಸಗಳನ್ನು ಮಾಡಬೇಕು.

ಅಂದರೆ ಎಲ್ಲರೂ ಹೀಗೆ ಇದ್ದಾರೆ ಎಂದರ್ಥವಲ್ಲ. ಆದರೂ ಒಳ್ಳೆಯ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆಯೇ ಎಂಬ ಭಯಕ್ಕೆ ಈ ಪತ್ರ ಬರೆದೆ. ಇದೆಲ್ಲದರ ನಡುವೆ ಮೊನ್ನೆ ಒಬ್ಬ ಟ್ರಾಫಿಕ್ ಪೋಲಿಸ್ ಬಟ್ಟೆರಹಿತನಾಗಿ ಬಿದ್ದಿದ್ದ ಬುದ್ದಮಾಂದ್ಯನಿಗೆ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದರು ಇಂತಹವರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ.

ಸೋಮಶೇಖರ್ ಚಲ್ಯ, ಮಂಡ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...