Homeಕರ್ನಾಟಕಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

ಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

- Advertisement -
- Advertisement -

Tಹಳಿಯಾಳದ ಸಕ್ಕರೆ ಕಾರ್ಖಾನೆ ತಮ್ಮ ಭಾಗ್ಯದ ಬಾಗಿಲನ್ನೇ ತೆರೆಯಲಿದೆಯೆಂದು ಸ್ಥಳೀಯ ಕಬ್ಬು ಬೆಳೆಗಾರರು ಕನಸು ಕಂಡಿದ್ದರು. ಆದರೆ ಹಳಿಯಾಳ, ದಾಂಡೇಲಿ, ಮುಂಡಗೋಡ ಸೀಮೆಯಲ್ಲಿ ಕಬ್ಬು ಬೆಳೆಯುವ ರೈತರ ಪಾಲಿಗೆ ಈ ಸಕ್ಕರೆ ಕಾರ್ಖಾನೆ ಘೋರ ಶಾಪವಾಗಿ ಈಗ ಪರಿಣಮಿಸಿದೆ! ಒಂದು ದಶಕದ ಹಿಂದೆ ಹಳಿಯಾಳದಲ್ಲಿ ಶುರುವಾದ ಸಕ್ಕರೆ ಕಾರ್ಖಾನೆಯ ಹಿಂದೆ ರೈತರ ಬಹುದೊಡ್ಡ ಹೋರಾಟದ ಇತಿಹಾಸವೇ ಇದೆ. ಸಹಕಾರ ತತ್ವದ ಒಂದು ಸಕ್ಕರೆ ಕಾರ್ಖಾನೆ ತಮ್ಮೂರಲ್ಲಿ ಸ್ಥಾಪನೆ ಆಗಬೇಕೆಂಬುದು ರೈತರ ಬೇಡಿಕೆಯಾಗಿತ್ತು. ಆದರೆ ದೀರ್ಘ ಕಾಲದಿಂದ ಹಳಿಯಾಳವನ್ನು ಆಳುತ್ತಿದ್ದ ಬಲಾಢ್ಯ ರಾಜಕಾರಣಿಯ ತಂಡಕ್ಕದು ಬೇಡವಾಗಿತ್ತು. ಸಹಕಾರಿ ರಂಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾದರೆ ರೈತರು ರಾಜಕೀಯ ಮತ್ತು ಆರ್ಥಿಕವಾಗಿ ಸಬಲರಾಗಿ ತಮ್ಮ ಮಂಕು ಬೂದಿ ರಾಜಕಾರಣಕ್ಕೆ ಸವಾಲಾಗುತ್ತಾರೆಂಬ ದೂ(ದು)ರಾಲೋಚನೆ ಪಟ್ಟಭದ್ರರದಾಗಿತ್ತು.

PC : Public TV, (ಆರ್.ವಿ ದೇಶಪಾಂಡೆ)

ಚುನಾವಣೆ ಎದುರಾದಾಗ ಸ್ಥಳೀಯ ಶಾಸಕ ಕಮ್ ರಾಜ್ಯದ ಪ್ರಭಾವಿ ರಾಜಕಾರಣಿ ಪಟು ಆರ್.ವಿ ದೇಶಪಾಂಡೆ ಸಕ್ಕರೆ ಕಾರ್ಖಾನೆ ತೆರೆಯುವ ಮಾತಾಡುತ್ತಿದ್ದರು; ಫ್ಯಾಕ್ಟರಿಗೆ ಅಡಿಗಲ್ಲನ್ನು ಯಾವ್ಯಾವುದೋ ಸ್ವಾಮಿ ಮುಖಂಡರ ಕರೆತಂದು ಹಾಕಿಸುತ್ತಿದ್ದರು. ಎಲೆಕ್ಷನ್ ಮುಗಿದ ಮೇಲೆ ಸಕ್ಕರೆ ಕಾರ್ಖಾನೆ ಕೆಲಸ ಕಾಮಗಾರಿ ಮುಂದಕ್ಕೆ ಹೋಗುತ್ತಿರಲಿಲ್ಲ! ಈ ನಾಟಕದ ಹಿಂದಿನ ಹಿಕಮತ್ತು ರೈತರಿಗೆ ಅರ್ಥವಾದಾಗ ರೋಚಕ ಹೋರಾಟ ಚಳವಳಿಗಳೇ ಆಗಿಹೋದವು. ಅನಿವಾರ್ಯವಾಗಿ ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕಾಗಿ ಬಂತು. ಆದರದು ರೈತರ ಇಚ್ಛೆಯ ಸಹಕಾರಿ ಕಾರ್ಖಾನೆ ಆಗಿರಲಿಲ್ಲ ಬದಲಿಗೆ ಬಂಡವಾಳಶಾಹಿಗಳ ಖಾಸಗಿ ಫ್ಯಾಕ್ಟರಿಯಾಗಿತ್ತು. ಜೆಎಂಆರ್ ಗ್ರೂಪ್ ಹುಲ್ಲಟ್ಟಿ ಗ್ರಾಮದಲ್ಲಿ ಬರೋಬ್ಬರಿ 250 ಎಕರೆ ಭೂಮಿಯನ್ನು 60 ರೈತರಿಂದ ತೀರಾ ಅಗ್ಗಕ್ಕೆ ಖರೀದಿಸಿ ಕಾರ್ಖಾನೆ ನಿರ್ಮಿಸಿತ್ತು.

ಅಂದು ಬಲಾಢ್ಯ ಬೃಹತ್ ಕೈಗಾರಿಕಾ ಮಂತ್ರಿಯಾಗಿದ್ದ ದೇಶಪಾಂಡೆ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ನೋಡಿಕೊಂಡಿದ್ದರೆಂಬ ಪುಕಾರು ಇವತ್ತಿಗೂ ರೈತ ಸಮುದಾಯದಲ್ಲಿದೆ. ಬಡ ರೈತರಿಂದ ದುಗ್ಗಾಣಿ ಕಾಸಿಗೆ ಅಮೂಲ್ಯ ಜಾಗವನ್ನು ಜೆಎಂಆರ್ ಕಂಪನಿಗೆ ಕೊಡಿಸಿದ್ದ ರಾಜಕಾರಣಿ ತಾವೂ ಸಕ್ಕರೆ ಕಾರ್ಖಾನೆಯ ರಹಸ್ಯ ಪಾಲುದಾರಿಕೆ ಪಡೆದುಕೊಂಡಿದ್ದರು! ಭೂಮಿ ಕೊಟ್ಟ ರೈತ ಪರಿವಾರಕ್ಕೆ ಕಾರ್ಖಾನೆಯಲ್ಲಿ ನೌಕರಿ ಕೊಡಿಸುವ ಆಸೆಯೂ ತೋರಿಸಲಾಗಿತ್ತು. ಅದು ಇವತ್ತಿಗೂ ಈಡೇರಿಲ್ಲ! ಈ ಒಳ ಮಸಲತ್ತುಗಳೇನೇ ಇರಲಿ, ಸ್ಥಳೀಯ ಕಬ್ಬು ಬೆಳೆಗಾರರು ಮಾತ್ರ ಕಾರ್ಖಾನೆಯಿಂದ ತಮ್ಮ ಕಷ್ಟ ಕರಗಬಹುದೆಂದೇ ನಂಬಿಕೊಂಡಿದ್ದರು. ಆರಂಭದಲ್ಲಿ ಜೆಎಂಆರ್ ಕಂಪನಿಯೂ ರೈತರಿಗೆ ಅನುಕೂಲಕರವಾದ ಒಂದಿಷ್ಟು ಕಾರ್ಯಕ್ರಮ ಹಾಕಿಕೊಂಡಿತ್ತು.

ಆದರೆ ಬರಬರುತ್ತ ಜೆಎಂಆರ್ ಕಂಪನಿ ಕಾರ್ಖಾನೆ ನಡೆಸುವ ಆಸಕ್ತಿ ಕಳೆದುಕೊಂಡಿತ್ತು. ಸ್ಥಳೀಯ ಪ್ರಚಂಡ ಪುಢಾರಿಗಳು ಕಾರ್ಖಾನೆ ಆಡಳಿತದಲ್ಲಿ ಕೈಯ್ಯಾಡಿಸುತ್ತಿದ್ದುದು ಜೆಎಂಆರ್ ಕಂಪನಿಯವರಲ್ಲಿ ಜಿಗುಪ್ಸೆ ಮೂಡಿಸಿತ್ತು. ಬಚಾವಾಗಲು ಜೆಎಂಆರ್ ಪಾಲುದಾರ ಕಂಪನಿಗಾಗಿ ಹುಡುಕಾಡತೊಡಗಿತು. ಈ ಐಡಿ ಪ್ಯಾರಿ ಶುಗರ್ ಲಿಮಿಟೆಡ್ ಪಾಲುದಾರಿಕೆಗೆ ಸೇರಿಕೊಂಡಿತು. ಕೊನೆಗೊಂದು ದಿನ ಜೆಎಂಆರ್ ಕಂಪನಿಯವರು ಪ್ಯಾರಿ ಶುಗರ್ಸ್‌ಗೆ ಕಾರ್ಖಾನೆ ಮಾರಾಟಮಾಡಿ ಹೋದರು! ಆಗ ಆರಂಭವಾದ ರೈತರ ಗೋಳು ಇನ್ನೂ ಮುಗಿದಿಲ್ಲ. ಪ್ಯಾರಿ ಕಂಪನಿಯವರದು ಪಕ್ಕಾ ಲಾಭಬಡುಕ ನೀತಿ-ನಿಯಮ! ರೈತರನ್ನು ಶೋಷಿಸುವುದು ಮತ್ತು ವಂಚಿಸುವುದು ನಡೆಯುತ್ತಲೇ ಇದೆ ಎಂಬ ಆರೋಪಗಳಿಗೆ ಕೊನೆಯೇ ಇಲ್ಲ. ಪ್ಯಾರಿ ಕಂಪನಿಯ ಕರಾಮತ್ತಿನ ಆಡಳಿತದಿಂದ ರೋಸತ್ತು ಹೋಗಿರುವ ರೈತರು ಆರೋಪಿಸುತ್ತಲೇ ಹೇಳುತ್ತಿದ್ದಾರೆ.

ದುರಂತ ಎಂದರೆ, ಸುದೀರ್ಘ ಕಾಲದ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ, ಎಂಎಲ್‌ಸಿ ಎಸ್.ಎಲ್ ಘೋಟನೇಕರ್ ಮತ್ತು ಮಾಜಿ ಶಾಸಕ ಬಿಜೆಪಿಯ ಸುನಿಲ್ ಹೆಗಡೆಯಂಥ ಘಟಾನುಘಟಿಗಳು ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ರೈತರು ತಮಗಾಗುತ್ತಿರುವ ಅನ್ಯಾಯ ಪ್ರತಿಭಟಿಸಿ ಬಂದ್, ರ್‍ಯಾಲಿ, ಸಭೆ, ಹೋರಾಟ ನಡೆಸುತ್ತಿದ್ದರೂ ಇವರ್‍ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ರೈತ ಪರ ಪೋಸು ಕೊಡುತ್ತಾರೆಯೇ ಹೊರತು ಪ್ಯಾರಿ ಶುಗರ್ಸ್ ಸರದಾರರಿಗೆ ಮೂಗುದಾರ ಹಾಕಲು ಯೋಚಿಸುತ್ತಿಲ್ಲ. ಸಕ್ಕರೆ ಧಣಿಗಳು ಎಲೆಕ್ಷನ್ ಫಂಡ್ ಪುಷ್ಕಳವಾಗಿ ಕೊಡುವುದೇ ಇದಕ್ಕೆಲ್ಲ ಕಾರಣವೆಂಬ ವಾದವೂ ಬಲವಾಗಿದೆ. ಬೇಡಿಕೆ ಈಡೇರಿಕೆಗೆ ರೈತರು ಸೊಲ್ಲೆತ್ತಿದ್ದರೆ ಕ್ರಿಮಿನಲ್ ಕೇಸ್ ಹಾಕಿ ಹಣಿಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ! ಕಷ್ಟ-ನಷ್ಟಕ್ಕೆ ಎದೆಯೊಡ್ಡಿ ರೈತರು ಹೋರಾಡುತ್ತಲೇ ಇದ್ದಾರೆ.

ಪ್ಯಾರಿ ಶುಗರ್ಸ್‌ನ ಪ್ರತಿ ನೀತಿ ನಿಯಮವೂ ಕಬ್ಬು ಬೆಳೆಗಾರರಿಗೆ ಕಂಟಕಕಾರಿಯಾಗಿದೆ. 2017ರಿಂದ ರೈತರಿಗೆ ಪ್ಯಾರಿಯವರು 20 ಕೋಟಿಯಷ್ಟು ಪ್ರೋತ್ಸಾಹಧನ ಕೊಡದೆ ಕಾಡುತ್ತಿದ್ದಾರೆ! ಪ್ರತಿ ವರ್ಷ ಕಬ್ಬು ನುರಿಯುವ ಹಂಗಾಮಿನ ಶುರುವಿನಲ್ಲಿ ಕಬ್ಬಿಗೆ ಬೆಲೆ ಕಾರ್ಖಾನೆಯವರು ನಿರ್ಧರಿಸಬೇಕೆಂಬ ಕಟ್ಟು ನಿಟ್ಟಿನ ನಿಯಮವಿದೆ. ಆದರೆ ಪ್ಯಾರಿ ಆಡಳಿತಗಾರರು ಬೇಕಂತಲೇ ಕಬ್ಬಿನ ಬೆಲೆ ನಿಗದಿಸದೇ ರೈತರಿಗೆ ಮೋಸ ಮಾಡಲು ಹವಣಿಸುತ್ತಾರೆ. ರಾಜ್ಯದ ಬೇರೆ ಬೇರೆ ಸಕ್ಕರೆ ಫ್ಯಾಕ್ಟರಿಯವರು ಪ್ರತಿ ಟನ್ ಕಬ್ಬಿಗೆ ಕಟ್ಟುವ ದರಕ್ಕೆ ಹೋಲಿಸಿದರೆ ಪ್ಯಾರಿಯವರದ್ದು ತೀರಾ ಕಮ್ಮಿ. ಮೊದಲ ಆದ್ಯತೆಯ ಮೇರೆಗೆ ಸ್ಥಳೀಯರ ಕಬ್ಬನ್ನು ಪ್ಯಾರಿ ಕೊಳ್ಳಬೇಕೆಂಬುದು ಕರಾರಿನ ಷರತ್ತು. ಆದರೆ ಪ್ಯಾರಿ ಸ್ಥಳೀಯ ರೈತರಿಗೆ ವಂಚನೆ ಮಾಡಿ ಪಕ್ಕದ ಧಾರವಾಡ, ಕಲಘಟಗಿ, ಅಳ್ನಾವರ, ಖಾನಾಪುರ ಮತ್ತು ಬೈಲಹೊಂಗಲದಿಂದ ಕಬ್ಬನ್ನು ಪ್ರಥಮ ಆದ್ಯತೆಯಲ್ಲಿ ತರಿಸಿಕೊಳ್ಳುತ್ತಿದೆ. ಹಳಿಯಾಳ ಸುತ್ತಮುತ್ತಲಿನಲ್ಲಿ ಸಾಕಷ್ಟು ಕಬ್ಬು ಇಳುವರಿ ಇದ್ದರೂ ಬೇರೆಡೆಯಿಂದ ಕಬ್ಬು ಖರೀದಿಸಿ ಸ್ಥಳೀಯ ರೈತರಿಗೆ ನಷ್ಟವುಂಟು ಮಾಡುತ್ತಿದೆ.

PC : The Hindu, (ಶಿವರಾಮ ಹೆಬ್ಬಾರ್)

ಸ್ಥಳೀಯ ಕಬ್ಬು ಕಟಾವುದಾರರಿಗೆ (ತೋಡ್ನಿ) ಅವಕಾಶ ಕೊಡದೆ, ಪ್ಯಾರಿ ಆಡಳಿತಗಾರರು ಮಹಾರಾಷ್ಟ್ರದ ಬೀಡ, ಸತಾರ ಮತ್ತು ರಾಜ್ಯದ ಬಳ್ಳಾರಿ ಕಡೆಯಿಂದ ಕೂಲಿಗಳನ್ನು ಕರೆಸಿಕೊಳ್ಳುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ “ನೀವ್ಯಾರು ಕೇಳೋದಕ್ಕೆ. ಫ್ಯಾಕ್ಟರಿ ನಮ್ದು. ನಮ್ಮ ಖುಷಿ” ಎಂಬ ಅಧಿಕ ಪ್ರಸಂಗದ ಉತ್ತರ! ತಾಲ್ಲೂಕಿನ ರೈತರ ಕಬ್ಬು ಸಾಗಿಸುವ ವಾಹನಗಳಿಗೆ ದಿನದಲ್ಲಷ್ಟೇ ಫ್ಯಾಕ್ಟರಿ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತಿದೆ. ಇದರಿಂದ ಹಳಿಯಾಳ ಪಟ್ಟಣದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಪ್ರತಿ ದಿನ ಕಬ್ಬು ತುಂಬಿದ ವಾಹನಗಳು ಸಾಲುಗಟ್ಟಿ ಪ್ಯಾರಿ ಪ್ರವೇಶಕ್ಕೆ ಕಾದು ನಿಲ್ಲುವಂತಾಗಿದೆ. ಈ ಎಡವಟ್ಟಿನಿಂದ ಹಳಿಯಾಳದಲ್ಲಿ ಸಂಚಾರ ಸಮಸ್ಯೆ ಬಿಗಡಾಯಿಸಿದೆ. ಪ್ಯಾರಿಯಿಂದ ಪರಿಸರ ಮಾಲಿನ್ಯವೂ ನಿರಂತರವಾಗಿ ಆಗುತ್ತಿದೆ. ಕಾರ್ಖಾನೆಯಿಂದ ಹೊರಬರುವ ಅಪಾಯಕಾರಿ ಹೊಗೆಯಿಂದ ವಾಯುಮಾಲಿನ್ಯ ಉಂಟಾಗಿ ಹಳಿಯಾಳ ಸುತ್ತಲಿನ ಹಲವು ಹಳ್ಳಿಗಳ ಆರೋಗ್ಯ ಹಾಳಾಗುತ್ತಿದೆ. ಫ್ಯಾಕ್ಟರಿಯ ಸಾಮಾಜಿಕ ಹೊಣೆಗಾರಿಕಾ ನಿಧಿಯನ್ನು ತಾಲ್ಲೂಕಿನ ಮೂಲಸೌಕರ್ಯ ಅಭಿವೃದ್ಧಿ ಪರಿಸರ ನಿರ್ವಹಣೆಗೆಗೂ ಬಳಸದ ಪ್ಯಾರಿ ಆಡಳಿತಗಾರರು ಸ್ಥಳೀಯರಿಗೆ ಉದ್ಯೋಗವನ್ನೂ ಕೊಡುತ್ತಿಲ್ಲ ಎಂಬ ಆರೋಪ ಇದೆ.

ಪ್ಯಾರಿ ಕಂಪನಿಯಿಂದ ಎದುರಾಗಿರುವ ಸಂಕಷ್ಟದ ಬಗ್ಗೆ ಮೊನ್ನೆಮೊನ್ನೆವರೆಗೂ ಸಕ್ಕರೆ ಸಚಿವರಾಗಿದ್ದ ಹಳಿಯಾಳದ ಪಕ್ಕದ ಕ್ಷೇತ್ರ ಶಾಸಕರೂ ಆಗಿರುವ ಶಿವರಾಮ ಹೆಬ್ಬಾರ್‌ಗೆ ರೈತರು ದೂರಿದ್ದರು. ಹೆಬ್ಬಾರ್ ಅದ್ಯಾಕೋ ಇದೆಲ್ಲ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಸಾರಾಸಗಟಾಗಿ ಕಡೆಗಣಿಸಿ ಕೂತಿದ್ದರು! ನ್ಯಾಯಕ್ಕಾಗಿ ಹೋರಾಟ ಪ್ರತಿಭಟನೆ ವರ್ಷಾನುಗಟ್ಟಲೆಯಿಂದ ಮುಂದುವರೆಸುತ್ತಲೇ ಇರುವ ಕಬ್ಬು ಬೆಳೆಗಾರರು ಸಹನೆಗೆಡುವ ಮೊದಲೇ ಸಂಬಂಧಿಸಿದವರು ಎಚ್ಚತ್ತುಕೊಳ್ಳಬೇಕಿದೆ. ಅಭೂತಪೂರ್ವ ಚಳವಳಿಯಿಂದ ಸಕ್ಕರೆ ಕಾರ್ಖಾನೆ ಪಡೆದಿದ್ದ ಹಳಿಯಾಳದ ರೈತರಿಗೆ ಅದೇ ಕಾರ್ಖಾನೆ ನೆಮ್ಮದಿಗೆಡಿಸಿರುವುದು ದುರಂತ!


ಇದನ್ನೂ ಓದಿ: ಯೋಗೇಂದ್ರ ಯಾದವ್ ಸೇರಿ 20 ರೈತ ಮುಖಂಡರಿಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...