Homeಮುಖಪುಟಝೀ ನ್ಯೂಸ್‌ನಿಂದ 18 ಕೋಟಿ ರೂ. ಪರಿಹಾರ ಕೇಳಿದ ಫೋಟೋಗ್ರಾಫರ್...ಕಾರಣ?

ಝೀ ನ್ಯೂಸ್‌ನಿಂದ 18 ಕೋಟಿ ರೂ. ಪರಿಹಾರ ಕೇಳಿದ ಫೋಟೋಗ್ರಾಫರ್…ಕಾರಣ?

- Advertisement -
- Advertisement -

ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳ ಸಾಗಣೆಯನ್ನು ದಾಖಲಿಸಿರುವ ತನ್ನ ಅತ್ಯಮೂಲ್ಯ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕೆ ಝೀ ನ್ಯೂಸ್‌ ಚಾನೆಲ್‌ ವಿರುದ್ದ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶಿತರಾದ ಚಲನಚಿತ್ರ ನಿರ್ಮಾಪಕ ಮತ್ತು ಛಾಯಾಗ್ರಾಹಕ ರೋನಿ ಸೇನ್ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮ್ಮೆ ಹೂಡಿದ್ದು, ಬರೋಬ್ಬರಿ 18 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.

ಝೀ ನ್ಯೂಸ್ ಮತ್ತು ಅದರ ಮಾತೃ ಕಂಪನಿ ಝೀ ಮೀಡಿಯಾ ಕಾರ್ಪೊರೇಷನ್ ಅನ್ನು ಈ ಪ್ರಕರಣದಲ್ಲಿ ಪ್ರಮುಖ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಜೂನ್ 2022ರಲ್ಲಿ ತಾನು ಸೆರೆ ಹಿಡಿದ ವಿಡಿಯೋ ಬಳಸಿಕೊಂಡಿದ್ದಕ್ಕೆ ಸೇನ್ ಮೊಕದ್ದಮೆ ಹೂಡಿದ್ದಾರೆ. ಜೂನ್ 3 ಮತ್ತು 10ರ ನಡುವೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದ ಸೇನ್, ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದ ಚಿರತೆಗಳನ್ನು ಸೆರೆಹಿಡಿದು ಸಾಗಿಸುವುದನ್ನು ದಾಖಲಿಸಿದ್ದರು.

ವಿಶ್ವದ ಮೊದಲ ಅಂತರಖಂಡ ವನ್ಯಜೀವಿ ಸ್ಥಳಾಂತರದಲ್ಲಿ, ಭಾರತವು 2022 ಮತ್ತು 2023ರಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಆಫ್ರಿಕನ್ ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದಿದೆ. ಈ ಚಿರತೆಗಳು 1952ರಲ್ಲಿ ಭಾರತದಲ್ಲಿ ನಿರ್ನಾಮವಾಗಿದೆ ಎಂದು ಘೋಷಿಸಲಾಗಿದೆ.

ತಾನು ಚಿತ್ರೀಕರಿಸಿದ ವಿಡಿಯೋದ 12 ಸೆಕೆಂಡ್‌ಗಳ ಕಿರು ತುಣುಕನ್ನು ಝೀ ನ್ಯೂಸ್ ಹಿಂದಿ ಚಾನೆಲ್‌ನ ಪ್ರೈಮ್‌ಟೈಮ್ ಕಾರ್ಯಕ್ರಮವಾದ ಡಿಎನ್‌ಎಯಲ್ಲಿ ಪ್ರಸಾರ ಮಾಡಲಾಗಿದೆ ಎಂದು ಸೇನ್ ಆರೋಪಿಸಿದ್ದಾರೆ. 2022ರ ಸೆಪ್ಟೆಂಬರ್ 16 ಮತ್ತು 17ರಂದು ವಿಡಿಯೋ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಆ ಸಮಯದಲ್ಲಿ ರೋಹಿತ್ ರಂಜನ್ ಅವರು ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ತಾನು ಚಿತ್ರೀಕರಿಸಿದ 12 ಸೆಕೆಂಡ್‌ಗಳ ವಿಡಿಯೋ ಅತ್ಯಂತ ಅಪರೂಪದ್ದು. ಪ್ರಾಣಿಗಳ ಛಾಯಾಚಿತ್ರಣಲ್ಲಿ ಇಂಥದ್ದು ಕಾಣ ಸಿಗುವುದು ಬಹಳ ಕಡಿಮೆ. ಅದಕ್ಕಿಂತ ಮುಖ್ಯವಾಗಿ, ಈ ವಿಡಿಯೋಗೆ ಸಂಬಂಧಿಸಿದ ಚಿರತೆಗಳ ಸ್ಥಳಾಂತರ ಯೋಜನೆ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ. ಯಾವ ದೊಡ್ಡ ಬೆಕ್ಕು ಪ್ರಭೇದವನ್ನೂ (ಚಿರತೆ, ಸಿಂಹ, ಹುಲಿ ಇತ್ಯಾದಿ) ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಸಾಗಿಸಿ ಬಿಡುಗಡೆ ಮಾಡಿದ ಯೋಜನೆ ಇದುವರೆಗೆ ಎಂದೂ ನಡೆದಿರಲಿಲ್ಲ ಎಂದು ಸೇನ್ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.

ಪ್ರಸಾರದ ವೇಳೆ ಝೀ ನ್ಯೂಸ್ ಚಾನೆಲ್‌ ವಿಡಿಯೋ ತನ್ನದೇ ‘ಸೂಪರ್ ಎಕ್ಸ್‌ಕ್ಲೂಸಿವ್’ ಎಂದು ಹೇಳಿಕೊಂಡಿತ್ತು. ವಾಟರ್‌ಮಾರ್ಕ್‌ಗಳು, ಟಿಕ್ಕರ್‌ಗಳು ಮತ್ತು ಆನ್-ಸ್ಕ್ರೀನ್ ಟೆಕ್ಸ್‌ ಅನ್ನೂ ಹಾಕಿಕೊಂಡಿತ್ತು. ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳನ್ನು ಸಾಗಿಸುವ ವಿಮಾನದೊಳಗೆ ಪ್ರವೇಶಿಸುವ ಅಪರೂಪದ ಅವಕಾಶ ತನಗೆ ದೊರೆತಿದೆ ಎಂಬಂತೆ ಬಿಂಬಿಸಿತ್ತು ಎಂದು ಸೇನ್ ಆರೋಪಿಸಿದ್ದಾರೆ.

ಝೀ ನ್ಯೂಸ್ ನನ್ನ ವಿಡಿಯೋವನ್ನು ಕದ್ದು ತನ್ನದು ಎಂದು ಹೇಳಿಕೊಂಡಿದೆ. ಇದರಿಂದ ವಿಡಿಯೋ ತೆಗೆದ ತನಗೆ ಸಿಗಬೇಕಿದ್ದ ಖ್ಯಾತಿ ಮತ್ತು ಹಣ ಎರಡೂ ನಷ್ಟವಾಗಿದೆ ಎಂದು ಸೇನ್ ಹೇಳಿದ್ದಾರೆ.

ಝೀ ನ್ಯೂಸ್ ವಿರುದ್ದ ಕಾನೂನು ಕ್ರಮ ಅಗತ್ಯವಾಗಿದೆ. ಏಕೆಂದರೆ, ಝೀ ನ್ಯೂಸ್ ಮೊದಲ ಬಾರಿಗೆ ಈ ರೀತಿ ಮಾಡುತ್ತಿಲ್ಲ. ಭಾರತೀಯ ಟಿವಿ ಚಾನೆಲ್‌ಗಳಲ್ಲಿ ಇದೊಂದು ದೊಡ್ಡ ರೋಗವೇ ಆಗಿದೆ. ಕ್ಯಾಮರಾಮ್ಯಾನ್‌ಗಳು ಕಷ್ಟಪಟ್ಟು ಸೆರೆ ಹಿಡಿದ ವಿಡಿಯೋಗಳನ್ನು ಹಣ ಅಥವಾ ಕನಿಷ್ಠ ಕ್ರೆಡಿಟ್ ಕೂಡ ಕೊಡದೆ ಚಾನೆಲ್‌ಗಳು ತಮ್ಮ ಸ್ವಂತದ್ದು ಎಂಬಂತೆ ಬಳಸಿಕೊಳ್ಳುತ್ತಿವೆ. ಇದಕ್ಕೆ ಅವರು ‘ಫೇರ್ ಯೂಸ್’ (fair use) ಎಂಬ ಹೆಸರು ಕೊಟ್ಟು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ, ಇದು ನಿಜವಾಗಿಯೂ ಫೇರ್ ಯೂಸ್ ಅಲ್ಲ, ಇದು ಸ್ಪಷ್ಟ ಕಳ್ಳತನ” ಎಂದು ಸೇನ್ ಹೇಳಿಕೊಂಡಿದ್ದಾರೆ.

ತನ್ನ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಕದ್ದು ಬಳಸಿಕೊಳ್ಳುವ ಮೂಲಕ ಝೀ ನ್ಯೂಸ್ ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಮಾತ್ರ ಮಾಡಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಕಾಯ್ದೆಗಳನ್ನೂ ಉಲ್ಲಂಘಿಸಿದೆ ಎಂದು ಸೇನ್ ತಿಳಿಸಿದ್ದಾರೆ.

ಝೀ ನ್ಯೂಸ್ ನನ್ನ ಕೆಲಸವನ್ನು ಬಳಸಿಕೊಂಡಿದ್ದು ಇದೇ ಮೊದಲಲ್ಲ. 2014ರಲ್ಲಿ ಝೀ ನ್ಯೂಸ್ (ಬಂಗಾಳಿ) ಜಾದವ್‌ಪುರ ವಿಶ್ವವಿದ್ಯಾಲಯದ ಪ್ರತಿಭಟನೆಗಳ ಕುರಿತಾದ ಒಂದು ವರದಿಯಲ್ಲಿ ನನ್ನ ಒಂದು ಫೋಟೋವನ್ನು ಅನುಮತಿಯಿಲ್ಲದೆ ಪ್ರಕಟಿಸಿದೆ ಎಂದು ಹೇಳಿದ್ದಾರೆ.

ಝೀ ನ್ಯೂಸ್ ನನ್ನ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿಕೊಂಡಿದೆ. ಈ ಬಗ್ಗೆ ಪರಿಹಾರ ಕೋರಿ ನಾನು ಅವರನ್ನು ಹಲವು ಬಾರಿ ಸಂಪರ್ಕಿಸಿದ್ದೇನೆ. ಎರಡು ಬಾರಿ ಅವರ ಕಚೇರಿ ತೆರಳಿ ಮಾತುಕತೆಯೂ ನಡೆಸಿದ್ದೇನೆ. ಕೊನೆಗೆ ಅವರು ಬಿಲ್ ಹಾಕು ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ 18 ಕೋಟಿ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದೇನೆ ಎಂದು ಸೇನ್ ತಿಳಿಸಿದ್ದಾರೆ.

ತಮ್ಮ ಮೊಕದ್ದಮೆಯಲ್ಲಿ, ಸೇನ್ ಅವರು ಝೀ ನ್ಯೂಸ್ ಅನುಮತಿಯಿಲ್ಲದೆ ತಮ್ಮ ವಿಶೇಷ ಚಿರತೆ ಸ್ಥಳಾಂತರ ದೃಶ್ಯಗಳನ್ನು ಪ್ರಸಾರ ಮಾಡಿದ್ದರಿಂದ ಉಂಟಾದ ಆರ್ಥಿಕ ಮತ್ತು ವೃತ್ತಿಪರ ನಷ್ಟಗಳ ಪಟ್ಟಿಯನ್ನು ವಿವರಿಸಿದ್ದಾರೆ.

ತಾನು ಸೆರೆಹಿಡಿದ ವಿಶೇಷ ವಿಡಿಯೋವನ್ನು ಮಾರಾಟ ಮಾಡುವ ಮೊದಲೇ ಝೀ ನ್ಯೂಸ್ ಸೂಪರ್ ಎಕ್ಸ್‌ಕ್ಲೂಸಿವ್ ಎಂದು ಪ್ರಸಾರ ಮಾಡಿದೆ. ಇದರಿಂದ ನನಗೆ ತುಂಬಾ ನಷ್ಟವಾಗಿದೆ. ಝೀ ನ್ಯೂಸ್ ವಿಡಿಯೋ ಪ್ರಸಾರ ಮಾಡುವ ಮೊದಲು ನಾನು ಎನ್‌ಡಿಟಿವಿಗೆ ವಿಡಿಯೋ ಮಾರಾಟ ಸಂಬಂಧ ರೂ. 1.25 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೆ. ನಂತರ ಅದು ಕೈ ತಪ್ಪಿ ಹೋಯಿತು. ಇತರ ಚಾನೆಲ್‌ಗಳೂ ನನ್ನ ವಿಡಿಯೋ ಖರೀದಿಸುತ್ತಿತ್ತು. ಆದರೆ, ಝೀ ಪ್ರಸಾರ ಮಾಡಿದ್ದರಿಂದ ಯಾರೂ ನನ್ನ ವಿಡಿಯೋ ಖರೀದಿಸಲು ಮುಂದೆ ಬರಲಿಲ್ಲ ಎಂದು ಸೇನ್ ಹೇಳಿಕೊಂಡಿದ್ದಾರೆ.

ಕೋಲ್ಕತ್ತಾದ ವಾಣಿಜ್ಯ ನ್ಯಾಯಾಲಯವು ಈ ಮೊಕದ್ದಮೆಯನ್ನು ಒಪ್ಪಿಕೊಂಡಿದ್ದು, ಜನವರಿ 16ರಂದು ವಿಚಾರಣೆ ನಡೆಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...