Homeಮುಖಪುಟಮಹಾರಾಷ್ಟ್ರ: ಆದಿವಾಸಿ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ದೌರ್ಜನ್ಯ

ಮಹಾರಾಷ್ಟ್ರ: ಆದಿವಾಸಿ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ದೌರ್ಜನ್ಯ

- Advertisement -
- Advertisement -

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸುರ್ಜಗಢ್ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ದೌರ್ಜನ್ಯ ನಡೆಸಿರುವ ಆರೋಪಗಳು ಕೇಳಿ ಬಂದಿದೆ.

ಪ್ರತಿಭಟನಾಕಾರರ ಪ್ರಕಾರ, ಪೊಲೀಸರು ಎಲ್ಲಾ ಪ್ರಮುಖ ನಾಯಕರನ್ನು ಬಂಧಿಸಿದ್ದಾರೆ. ಅವರಿಂದ ಚೀಲ, ವಸ್ತುಗಳನ್ನು ಬಲವಂತವಾಗಿ ಪಡೆದು ಶೋಧಿಸಿದ್ದಾರೆ. 8 ಜನ ಚಳವಳಿಯ ಮುಖಂಡರನ್ನು ಹೆಲಿಕಾಪ್ಟರ್ ಮೂಲಕ ಬಲವಂತವಾಗಿ ಕರೆದೊಯ್ಯಲಾಗಿದೆ ಅವರ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.

ಬಂಧಿತ 8 ಮಂದಿ ಚಳುವಳಿಯ ನಾಯಕರಲ್ಲಿ ಮಂಗೇಶ್ ನರೋಟಿ, ಪ್ರದೀಪ್ ಹೆಡೊ, ಸಾಯಿ ಕಾವ್ಡೊ, ಗಿಲ್ಲು ಕೌಡೊ, ಲಕ್ಷ್ಮಣ್ ಜೆಟ್ಟಿ, ಮಹದು ಕೌಡೊ, ನಿಕೇಶ್ ನರೋಟಿ ಮತ್ತು ಗಣೇಶ್ ಕೊರಿಯಾ ಅವರು ಸೇರಿದ್ದಾರೆ.

ಪೊಲೀಸರು ಗ್ರಾಮದಲ್ಲಿ ಗುಡಿಸಲುಗಳನ್ನು ಧ್ವಂಸಗೊಳಿಸಿ ಸುಟ್ಟು ಹಾಕಿದ್ದು, ಕೆಲವು ಪ್ರತಿಭಟನಾಕಾರರ ಬಳಿಯಿದ್ದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಲಾಠಿ ಚಾರ್ಜ್‌ ಮಾಡಲಾಗಿದೆ.  ಈ ವೇಳೆ ಹಲವರು ಗಾಯಗೊಂಡಿದ್ದಾರೆ. ತಲೆಗೆ ಗಾಯವಾಗಿ ಕೆಲವರು ಪ್ರಜ್ಞೆ ಕಳೆದುಕೊಂಡಿದ್ದಾರೆ. 8 ಮುಖಂಡರಲ್ಲದೆ, ಸುಮಾರು 25 ಪ್ರತಿಭಟನಾಕಾರರನ್ನು ಬಂಧಿಸಿ ಟ್ರಕ್‌ಗಳಲ್ಲಿ ಕರೆದೊಯ್ಯಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ದಾಮ್ಕೊಂಡ್ವಾಹಿ ಬಚಾವೋ ಸಂಘರ್ಷ ಸಮಿತಿಯು ಪ್ರತಿಭಟನಾಕಾರರನ್ನು ಗಡ್ಚಿರೋಲಿ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಿದೆ. 8 ನಾಯಕರು ಸೇರಿ ವಶಕ್ಕೆ ಪಡೆದುಕೊಂಡ ಇತರ ಪ್ರತಿಭಟನಾಕಾರರನ್ನು ಎತ್ತಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಇರಿಸಲಾಗಿದೆ ಮತ್ತು ಭಾರತೀಯರ ಸೆಕ್ಷನ್ 353ರಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು 8 ದಿನಗಳ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅವರನ್ನು ಚಂದ್ರಾಪುರ ಜೈಲಿಗೆ ಹಾಕಲಾಗುತ್ತದೆ ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ತಿಳಿದಿಲ್ಲ ಎಂದು ಹೇಳಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಬಂಧಿತರ ಯೋಗಕ್ಷೇಮದ ಬಗ್ಗೆ ನಮಗೆ ಭಯವಿದೆ ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಗಳು ಲಾಠಿಗಳನ್ನು ಬಳಸಿ ಜನರನ್ನು ಬೆದರಿಸುತ್ತಿರುವುದು ಮತ್ತು ಯಾವುದೇ ವೀಡಿಯೊ ಅಥವಾ ಪೋಟೋಗಳನ್ನು ಚಿತ್ರೀಕರಿಸದಂತೆ ತಡೆಯುತ್ತಿರುವುದು ಕಂಡು ಬಂದಿದೆ.

ಈ ಮಧ್ಯೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಕೂಡ ಆರೋಪವನ್ನು ಮಾಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಕೊಲೆಗೆ ಪ್ರಯತ್ನಿಸಿದರು. ಅವರ ಬಳಿ ಸ್ಫೋಟಕಗಳಿತ್ತು ಮತ್ತು ಮಾವೋವಾದಿಗಳಿಂದ ಹಣ ಪಡೆದಿದ್ದಾರೆ. ಮಾವೋವಾದಿ ಪ್ರಭಾವದಿಂದ ಪ್ರತಿಭಟನೆ ನಡೆಸುತ್ತಿದ್ದವರು ತೊಡಗಟ್ಟಾ ಮೂಲಕ ವಾಂಗೆಟೂರಿಗೆ ತೆರಳುತ್ತಿದ್ದ ಭದ್ರತಾ ಸಿಬ್ಬಂದಿಗಳನ್ನು ತಡೆದಿದ್ದಾರೆ ಎಂದು ಹೇಳಿದ್ದಾರೆ.

ಇದಲ್ಲದೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳಲು ತಮಗೆ ಬಲವಂತ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಾವೋವಾದಿಗಳ ನೇತೃತ್ವದ ಪ್ರತಿಭಟನೆಯಿಂದ ಬೇಸತ್ತ ಕಾರಣ ಗ್ರಾಮಸ್ಥರೇ ಪ್ರತಿಭಟನಾ ಸ್ಥಳದಲ್ಲಿ ಗುಡಿಸಲುಗಳನ್ನು ತೆಗೆದುಹಾಕಿದ್ದೇವೆ ಎಂದು ನಮಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಯಾವುದೇ ಗುಡಿಸಲುಗಳನ್ನು ಧ್ವಂಸ ಗೊಳಿಸಿಲ್ಲ ಎಂದು ಹೇಳಿದ್ದಾರೆ.

ಗಡ್ಚಿರೋಲಿಯಲ್ಲಿ ದಬ್ಬಾಳಿಕೆ ಕುರಿತ ಪ್ರಜಾಸತ್ತಾತ್ಮಕ ಹಕ್ಕುಗಳ ಸಂಘಟನೆಯ 2018ರ ಸತ್ಯಶೋಧನೆಯ ವರದಿಯು ಎಟಪಲ್ಲಿಯಲ್ಲಿ ಗಣಿಗಾರಿಕೆ ಕಂಪನಿ, ಸ್ಥಳೀಯ ಆಡಳಿತ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಒಟ್ಟಾಗಿ ಕೆಲಸ ಮಾಡುತ್ತದೆ ಎಂದು ಗಮನಿಸಿದೆ ಎಂದು ಸೆಪ್ಟೆಂಬರ್‌ನಲ್ಲಿ Scroll.in.ವರದಿ ಮಾಡಿದೆ ಎಂದು ವೈರ್‌ ಉಲ್ಲೇಖಿಸಿದೆ.

ಗಣಿಗಾರಿಕೆಯಿಂದ ಕೃಷಿ, ಪರಿಸರ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದಲ್ಲದೆ ಮತ್ತು ಸುರ್ಜಗರ್ ನಿವಾಸಿಗಳ ಆರೋಗ್ಯದ ಮೇಲೆ ಭಾರಿ ಪ್ರಭಾವವನ್ನು ಬೀರಿದೆ. ಈ ಪ್ರದೇಶವು ರೆಡ್ ಐರನ್ ಆಕ್ಸೈಡ್ ವಿಸರ್ಜನೆ, ರಾಸಾಯನಿಕ ಹೊರಸೂಸುವಿಕೆ ಮತ್ತು ದೊಡ್ಡ ಪ್ರಮಾಣದ ಶಿಲಾಖಂಡರಾಶಿಗಳಿಂದ ಕಲುಷಿತಗೊಂಡಿದೆ. ಈ ಭಾಗದ ಶುದ್ಧ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ ಮತ್ತು ಕೃಷಿ ಗದ್ದೆಗಳು ಹೂಳು ತುಂಬಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

 

ಇದನ್ನು ಓದಿ; ಮಧ್ಯಪ್ರದೇಶ: ಘರ್ಷಣೆ ವೇಳೆ ಕೈ ಕಾರ್ಯಕರ್ತ ಸಾವು: ಬಿಜೆಪಿ ಅಭ್ಯರ್ಥಿಯ ಬಂಧನಕ್ಕೆ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read