Homeಅಂಕಣಗಳುಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

ಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

- Advertisement -
- Advertisement -

ಕಡು ಕೋಮುವಾದಿ ರಾಜಕಾರಣದ ವಿಜೃಂಭಣೆಯ ನಡುವೆ ಪ್ರತಿಪಕ್ಷಗಳು ನಿಸ್ತೇಜವಾಗಿ ಅಡ್ಡ ಮಲಗಿರುವ ದಿನಗಳಿವು. ನಿರಾಶೆ ನಿಸ್ತತ್ವಗಳ ಈ ಕಾಲಮಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊನ್ನೆ ಲೋಕಸಭೆಯಲ್ಲಿ ಮಾಡಿದ ವಿರಳ ಹೊಳಪಿನ ಭಾಷಣ ಜನಮನದ ಗಮನ ಸೆಳೆದಿದೆ.

ರಾಹುಲ್ ಅವರ ತೀವ್ರ ತೇಜೋವಧೆ ಮಾಡಿ, ಪಪ್ಪು ಎಂಬ ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯವಾಗಿಸುವ ಗೊಬೆಲ್ಸ್ ಪ್ರಚಾರ ತಂತ್ರ ಬಹುತೇಕ ಫಲ ನೀಡಿದೆ. ಈ ತೇಜೋವಧೆ ತಮ್ಮನ್ನು ತಾಕಿಯೇ ಇಲ್ಲವೆಂಬ ಮಾನಸಿಕ ಗಟ್ಟಿತನ ತೋರಿ ನೆಲಕಚ್ಚಿ ನಿಂತಿರುವ ಕಾಂಗ್ರೆಸ್ ತಲೆಯಾಳು ಸುಲಭವಾಗಿ ಸೋಲೊಪ್ಪುತ್ತಿಲ್ಲ.

ಮೊನ್ನೆ ಲೋಕಸಭೆ ಮತ್ತು ದೇಶ ರಾಹುಲ್ ಗಾಂಧಿ ಅವರಲ್ಲಿ ತುಳುಕಿದ್ದ ಹೊಸ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಟೆಲಿಪ್ರಾಂಪ್ಟರ್ ನೆರವಿಲ್ಲದೆ ಅವರ ಸಹಜಸ್ವಾಭಾವಿಕ ಲೀಲಾಜಾಲ ಮಾತುಗಾರಿಕೆ ಬಿಜೆಪಿಯನ್ನೂ ದಂಗು ಬಡಿಸಿರುವುದುಂಟು.

ಒಂದೊಮ್ಮೆ ಹದಿನೆಂಟು ತಿಂಗಳುಗಳ ಕಾಲ ನಾಗರಿಕ ಹಕ್ಕುಗಳನ್ನು ತುಳಿದಿಟ್ಟ ಪಕ್ಷವೊಂದರ ನಾಯಕನಾಗಿ ರಾಹುಲ್ ಗಾಂಧಿ ಈ ಮಾತುಗಳ ಆಡತೊಡಗಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ.

ಇಂದಿರಾಗಾಂಧಿ ಅವರ ಘೋಷಿತ ತುರ್ತುಪರಿಸ್ಥಿತಿ ಹದಿನೆಂಟು ತಿಂಗಳ ಅವಧಿಗೆ ಸೀಮಿತವಾಗಿತ್ತು. ಆದರೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನೆಲೆಸಿ ಏಳು ವರ್ಷಗಳೇ ಉರುಳಿವೆ. ಜನತಂತ್ರದ ಆರೋಗ್ಯ ತುರ್ತುಪರಿಸ್ಥಿತಿಗಿಂತ ಸಾವಿರ ಪಾಲು ಹದಗೆಟ್ಟಿದೆ. ಬಲಿಷ್ಠ ರಾಜ್ಯಗಳು- ಬಲಿಷ್ಠ ಕೇಂದ್ರ ಎಂಬ ತತ್ವವನ್ನು ಬಿಜೆಪಿ ಆರಂಭದಲ್ಲಿ ಸಾರಿತ್ತು. ಸಹಕಾರಿ ಒಕ್ಕೂಟ ವ್ಯವಸ್ಥೆಯ ಮಾತುಗಳನ್ನೂ ಆಡಿದ್ದರು ಮೋದಿ. ಆದರೆ ತತ್ವಗಳನ್ನು ಗಾಳಿಗೆ ತೂರಿ ಬಹಳ ಕಾಲವಾಗಿದೆ.

ಬಿಜೆಪಿ ಆಡಳಿತದಡಿ ದೇಶ ಹಿಡಿದಿರುವ ದುರ್ಗತಿಯ ಪಕ್ಷಿನೋಟವನ್ನು ರಾಹುಲ್ ಹೀಗೆ ಸಮರ್ಥವಾಗಿಯೇ ಬಿಡಿಸಿಟ್ಟರು.

ಭಾರತವೊಂದು ರಾಜ್ಯಗಳ ಒಕ್ಕೂಟ. ಇದೊಂದು ಅನುಸಂಧಾನ, ಸಂವಾದ, ಪಾಲುದಾರಿಕೆಯೇ ವಿನಾ ಅರಸೊತ್ತಿಗೆಯಲ್ಲ ಎಂಬುದನ್ನು ನೆನಪಿಡಿ. ಕೇಂದ್ರೀಕೃತ ನೋಟವು ಅರಸನ ನೋಟ. ಈ ಅರಸೊತ್ತಿಗೆಯ, ಪಾಳೇಗಾರಿಕೆಯ ನೋಟವನ್ನು ಕಾಂಗ್ರೆಸ್ 1947ರಲ್ಲೇ ಕಿತ್ತೆಸೆಯಿತು. ಅರಸೊತ್ತಿಗೆಯ, ಚಕ್ರವರ್ತಿಯ, ಶಹನಶಹಾ, ಗಂಡರ ಗಂಡನ, ಒಡೆಯರ ಒಡೆಯನ ಧೋರಣೆ ಇದೀಗ ಮತ್ತೆ ತಲೆಯೆತ್ತಿದೆ. ನಿರ್ದಿಷ್ಟ ವಿಚಾರ ಮತ್ತು ನಿರ್ದಿಷ್ಟ ಸಂಘಟನೆಯೊಂದು ಈ ದೇಶದ ಸಾಂಸ್ಥಿಕ ಸಂರಚನೆಯನ್ನು ಸೆರೆಹಿಡಿದು ಕೆಡವಿಕೊಂಡಿದೆ. ಮತ್ತು ಅದು ದೇಶದ ರಾಜ್ಯಗಳ ದನಿಗಳ ಮೇಲೆ ಆಕ್ರಮಣ ನಡೆಸಿ ಅಡಗಿಸಲು ತೊಡಗಿದೆ. ಈ ದನಿಗಳು ಪ್ರತಿಭಟಿಸಿ ಪ್ರತಿಕ್ರಿಯಿಸುವುದು ಖಚಿತ ಎಂಬುದು ನನ್ನ ಆತಂಕ. ತಮಿಳುನಾಡಿನಂತಹ ವಿಚಾರಕ್ಕೆ, ಅಸ್ಮಿತೆಗೆ, ಪಂಜಾಬಿನ ರೈತರ ದನಿಗೆ ನಿಮ್ಮ ಚೌಕಟ್ಟಿನಲ್ಲಿ ಜಾಗವೇ ಇಲ್ಲ. ರೈತರು ಕೊರೊನಾ ಕಾಲದಲ್ಲಿ ಬಯಲಿನಲ್ಲಿ ಕುಳಿತು ಸತ್ತರೂ ಅರಸನಿಗೆ ದರಕಾರಿಲ್ಲ. ರಾಜ ಹೇಳಿದ್ದೇ ಕಡೆಯ ಮಾತು. ಆತನದು ಮಾತ್ರವೇ ಗಟ್ಟಿ ದನಿ.

ತುಳಿದು ಆಳುವ ಬಣ್ಣದ ಕನಸುಗಳನ್ನು ಕಾಣಬೇಡಿ. ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಇಂತಹ ಪ್ರಯತ್ನಗಳು ಎಂದೂ ಸಫಲವಾಗಿಲ್ಲ. ದೇಶವನ್ನು ಆಳಿದ ಅಶೋಕ, ಮೌರ್ಯ, ಗುಪ್ತ ವಂಶಗಳ ಅರಸರು ತುಳಿದದ್ದು ಕೂಡ ಸಂವಾದ- ಸಂಭಾಷಣೆ, ಅನುಸಂಧಾನಗಳ ದಾರಿಯನ್ನು ಎಂಬುದ ಮರೆಯದಿರಿ. ಬಡಿಗೆ ಹಿಡಿದು ಆಳಲು ಬರುವುದಿಲ್ಲ. ಅಂತಹ ಪ್ರಯತ್ನಗಳು ನಡೆದಾಗಲೆಲ್ಲ ರಾಜ್ಯಶಕ್ತಿಯ ದೊಣ್ಣೆಯನ್ನು ಮುರಿದು ಬಿಸುಡಿದೆ ಜನಶಕ್ತಿ.

ಈ ದುಸ್ಸಾಹಸ ಕೈಬಿಡಿ. ಬಿಡದಿದ್ದರೆ ಸಮಸ್ಯೆ ಹುಟ್ಟಿಹಾಕುತ್ತೀರಿ. ಈಶಾನ್ಯ, ತಮಿಳುನಾಡು, ಜಮ್ಮು-ಕಾಶ್ಮೀರದಲ್ಲಿ ಈಗಾಗಲೆ ಸಮಸ್ಯೆಗಳು ತಲೆದೋರತೊಡಗಿವೆ. ನಿಮ್ಮ ಕಣ್ಣುಗಳು ಅವುಗಳನ್ನು ಕಾಣದಾಗಿವೆ. ಅಶೋಕ ಸಾಮ್ರಾಟ ಎಲ್ಲರನ್ನೂ ಗೌರವಿಸಿದ. ನೀವು ಅಗೌರವಿಸತೊಡಗಿದ್ದೀರಿ.

ಭಿನ್ನ ಭಾಷೆ, ಇತಿಹಾಸ, ಸಂಸ್ಕೃತಿಗಳ ಅದುಮಿಡಲು ಹೊರಟಿದ್ದೀರಿ. ತಮಿಳು ಭಾಷೆ, ತಮಿಳು ಸಂಸ್ಕೃತಿ, ತಮಿಳು ಅಸ್ಮಿತೆಯು ಭಾರತದ ಸಂಸ್ಕೃತಿ, ಭಾರತದ ಅಸ್ಮಿತೆಯೂ ಹೌದು. ರಾಜ್ಯಗಳ ಅಸ್ಮಿತೆಯೇ ಭಾರತದ ಅಸ್ಮಿತೆ. ಭಿನ್ನ ಭಾಷೆ ಸಂಸ್ಕೃತಿ ಅಸ್ಮಿತೆಗಳ ಸುಂದರ ಹೂಗುಚ್ಛ ನಮ್ಮ ದೇಶ. ವಿಶ್ವದ ಯಾವ ಶಕ್ತಿಗೂ ಸವಾಲೆಸೆಯಬಲ್ಲದು. ನಿಮ್ಮ ಇಡೀ ಜೀವಮಾನದಲ್ಲಿ ತಮಿಳುನಾಡಿನ ಜನರನ್ನು ಆಳಲಾರರಿ ನೀವು.

ನನ್ನ ಮುತ್ತಾತ ಸ್ವಾತಂತ್ರ್ಯ ಹೋರಾಟದಲ್ಲಿ 15 ವರ್ಷಗಳ ಕಾಲ ಜೈಲಲ್ಲಿದ್ದರು. ಅಜ್ಜಿಯ ಮೈಯನ್ನು 32 ಗುಂಡುಗಳು ಸೀಳಿದವು, ತಂದೆಯ ದೇಹ ಛಿದ್ರಛಿದ್ರವಾಯಿತು. ದೇಶಕ್ಕಾಗಿ ತ್ಯಾಗ ಮಾಡಿದ ಮನೆತನ ನನ್ನದು. ಆರೆಸ್ಸೆಸ್ ಮತ್ತು ಬಿಜೆಪಿ ನಮ್ಮ ದೇಶದ ತಳಪಾಯದ ಜೊತೆ ಆಟವಾಡುತ್ತಿದೆ, ಅದನ್ನು ದುರ್ಬಲಗೊಳಿಸುತ್ತಿದೆ. ದೇಶ ದುರ್ಬಲವಾಗಿದೆ. ಸಂವಾದ ಸತ್ತಿದೆ. ಸಂಸ್ಥೆಗಳು ಸತ್ವ ಕಳೆದುಕೊಂಡಿವೆ. ನೆರೆಯ ದೇಶಗಳು ನಮ್ಮನ್ನು ಮುತ್ತತೊಡಗಿವೆ. ಚೀನಾ-ಪಾಕಿಸ್ತಾನವನ್ನು ಇನ್ನಷ್ಟು ಒಟ್ಟುಗೂಡಿಸುವ ಅವಿವೇಕದ ವಿದೇಶನೀತಿಯನ್ನು ಅನುಸರಿಸಲಾಗಿದೆ.

ಎರಡು ಭಾರತಗಳನ್ನು ಹುಟ್ಟುಹಾಕಿದ್ದೀರಿ. ಅನಂತ ಅಧಿಕಾರ ಅಸೀಮಿತ ಸಂಪತ್ತು ಹೊಂದಿರುವ ಭಾರತ. ಮತ್ತೊಂದು ಬಡವರ ಭಾರತ. ಎರಡರ ನಡುವಣ ಕಂದಕ ಹೆಚ್ಚುತ್ತಲೇ ಇದೆ. ಬಡವರ ಭಾರತದಲ್ಲಿ ಉದ್ಯೋಗಗಳಿಲ್ಲ. ಭಾರತದಲ್ಲಿ ಐವತ್ತು ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಇಂದು ಭಾರತದಲ್ಲಿ ನೆಲೆಸಿದೆ. 2021ರ ಒಂದೇ ವರ್ಷದಲ್ಲಿ ಮೂರು ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಕ್ಕಾಗಿ ಹಾಹಾಕಾರ ನೆಲೆಸಿದೆ. ರಾಷ್ಟ್ರಪತಿ ಭಾಷಣದಲ್ಲಿ ಈ ಕುರಿತ ಚಕಾರವೂ ಇಲ್ಲ.

ಲಕ್ಷಾಂತರ ಕೋಟಿ ರುಪಾಯಿಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಅಸಂಘಟಿತ ವಲಯಗಳಿಂದ ಕಿತ್ತುಕೊಂಡು ಶತಕೋಟ್ಯಾಧಿಪತಿ ಉದ್ಯಮಿಗಳಿಗೆ ನೀಡಲಾಗಿದೆ. ಕನಿಷ್ಠ ಪಕ್ಷ ಸಂಘಟಿತ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದರೆ ಎರಡು ಭಾರತಗಳು ಆಗುತ್ತಿರಲಿಲ್ಲ.

ಶೇ.84ರಷ್ಟು ಭಾರತೀಯರ ಆದಾಯ ಕುಸಿದಿದ್ದು, ಬಡತನಕ್ಕೆ ಕುಸಿಯುತ್ತಿದ್ದಾರೆ. 27 ಕೋಟಿ ಜನರನ್ನು ನಾವು ಬಡತನದಿಂದ ಮೇಲೆತ್ತಿದ್ದೆವು. ನೀವು 23 ಕೋಟಿ ಜನರನ್ನು ಬಡತನಕ್ಕೆ ಇಳಿಸಿದ್ದೀರಿ. ಗರೀಬ ಹಿಂದುಸ್ತಾನ ಇದೆಲ್ಲವನ್ನೂ ನೋಡುತ್ತಿದೆ. ಅದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ದೇಶದ ಶೇ.55ರಷ್ಟು ಜನರು ಹೊಂದಿರುವುದಕ್ಕಿಂತ ಹೆಚ್ಚಿನ ಸಂಪತ್ತು ಕೇವಲ 100 ಮಂದಿ ಧನಿಕರ ಸಂದೂಕಗಳಲ್ಲಿದೆ.

ರಾಹುಲ್ ಆಡಿರುವ ಈ ಮಾತುಗಳು ಸಕಾಲಿಕ ಮತ್ತು ಸ್ವಾಗತಾರ್ಹವೆಂದು ಜನತಂತ್ರವಾದಿಗಳು ಪ್ರತಿಕ್ರಿಯಿಸಿದ್ದಾರೆ. ಸಂವಿಧಾನಿಕ ಸಂಸ್ಥೆಗಳನ್ನು ಬುಡಮೇಲು ಮಾಡಿರುವ ಮತ್ತು ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಮುರಿದು ಕೆಡವಿ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿರುವ ಕುರಿತು ರಾಹುಲ್ ಮಾಡಿರುವ ಆಪಾದನೆಗಳು ಸತ್ಯದೂರವಲ್ಲ.

ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ರಾಜ್ಯಗಳು ಹೆಚ್ಚು ಸ್ವಾಯತ್ತತೆ ಕೇಳಿದರೆ ಅದು ಅವುಗಳ ಹಕ್ಕು. ಸಹಕಾರಿ ಒಕ್ಕೂಟ ವ್ಯವಸ್ಥೆಯು ಘನವಾಗಿ ಕೆಲಸ ಮಾಡಿದ್ದು, ಈ ಮಾತಿಗೆ ರಾಜ್ಯ ಸರ್ಕಾರಗಳು ಮತ್ತು ಒಕ್ಕೂಟ ಸರ್ಕಾರ ಒಟ್ಟಾಗಿ ಕೋವಿಡ್ ಸಂಕಟವನ್ನು ಎದುರಿಸಿದ ಉದಾಹರಣೆ ನೀಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಲಸಿಕೆಗಳನ್ನು ಮತ್ತು ಟೆಸ್ಟ್ ಕಿಟ್‌ಗಳನ್ನು ತಾವೇ ತರಿಸಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನಿರಾಕರಿಸಲಾಗಿತ್ತು. ಈ ಧೋರಣೆ ಉಂಟು ಮಾಡಿದ ನಷ್ಟವನ್ನು, ಹೆಚ್ಚಿಸಿದ ಸಂಕಟವನ್ನು ಮರೆಯುವಂತಿಲ್ಲ.

ಬ್ರಿಟಿಷ್ ವಸಾಹತುವಾದಿಗಳು ಭಾರತವು ಒಂದು ಒಕ್ಕೂಟ ರಚನೆಯೆಂದು ಒಪ್ಪಿಕೊಂಡಿದ್ದರು. ಒಂದು ಮೂಲೆಯಲ್ಲಿ ಕುಳಿತು ಕೈಯಲ್ಲಿ ಬಡಿಗೆ ಹಿಡಿದು, ತಾನು ಹೇಳಿದ್ದೇ ವೇದವಾಕ್ಯವೆಂದು ಈ ದೇಶವನ್ನು ಆಳುವುದು ಸಾಧ್ಯವಿಲ್ಲ. ಸಮಸ್ಯೆಯೆಂದರೆ ಕೇಂದ್ರದಲ್ಲಿ ಅಧಿಕಾರ ಹಿಡಿದವರು ಈ ಪರಿಕಲ್ಪನೆಯನ್ನು ಮರೆತೇಬಿಡುತ್ತಾರೆ ಎಂಬುವು ಖುದ್ದು ಮೋದಿಯವರೇ ಆಡಿದ್ದ ಮಾತುಗಳು. ಆಗ ಅವರು ಪ್ರಧಾನಿಯಾಗಿರಲಿಲ್ಲ, ಬದಲಿಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿ ತಾವೇ ಆಡಿದ್ದ ಇನ್ನೂ ಎಷ್ಟೋ ವಿಚಾರಗಳನ್ನು ಪ್ರಧಾನಮಂತ್ರಿಯಾಗಿ ಅವರು ವಿರೋಧಿಸಿದ್ದಾರೆ. ರಾಜ್ಯಗಳ ಸ್ವಾಯತ್ತತೆಯನ್ನು ತುಳಿದುಹಾಕಿದ್ದಾರೆ. ಈ ಮಾತಿನ ಸಮರ್ಥನೆಗೆ ನೂರಾರು ನಿದರ್ಶನಗಳನ್ನು ಪಟ್ಟಿ ಮಾಡಬಹುದು.

ರಾಜ್ಯಗಳ ಹಕ್ಕುಗಳು ಮತ್ತು ಸ್ವಾಯತ್ತತೆ ಕುರಿತು ರಾಹುಲ್ ಇನ್ನಷ್ಟು ನೇರ ಮತ್ತು ಖಚಿತ ನಿಲುವು ತಳೆಯಬೇಕಿದೆ. ಅದು ಇನ್ನಷ್ಟು ಮಾಗಿ ಹರಳುಗಟ್ಟಬೇಕಿದೆ. ಆಚರಣೆಗೆ ಇಳಿಯಬೇಕಿದೆ.


ಇದನ್ನೂ ಓದಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Why are you gloryfying congress only you are ony around the Sonia Gandhi& her family what they did to this country.even they are not Indian origin. But you people are adhoring them is it journalism in your view

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....