Homeಕರ್ನಾಟಕಎಸ್.ಬಂಗಾರಪ್ಪನವರ 87ನೇ ಜನ್ಮದಿನ: ಆತ್ಮವಿಶ್ವಾಸದ ಪ್ರತೀಕ...

ಎಸ್.ಬಂಗಾರಪ್ಪನವರ 87ನೇ ಜನ್ಮದಿನ: ಆತ್ಮವಿಶ್ವಾಸದ ಪ್ರತೀಕ…

ಇದೆಲ್ಲಾ ನೋಡಿದ ದಾರಿಹೋಕನೊಬ್ಬನ ಬಾಯಿಂದ ಹೊರಬಿದ್ದ ಮಾತೆಂದೆರೆ... "ಬದುಕಿದ್ದಾಗ್ಲೇ ಬಂಗಾರಪ್ಪನ್ನ ಸಮಾಧಿ ಮಾಡಿ ಈಗ ಅವ್ರ ಸ್ಮಾರಕ ಮಾಡೋಕೆ ಕಾಸು ಕೊಟ್ಟವ್ರೆ" ! ಥೂ.....!

- Advertisement -
- Advertisement -

2009 ರ ಲೋಕಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಸ್.ಬಂಗಾರಪ್ಪ ಅವರ ಪಾಲಿಗೆ ಈ ಚುನಾವಣೆ “ಮಾಡು ಇಲ್ಲ ಮಡಿ” ಎಂಬ ವಿರೋಚಿತ ಹೋರಾಟವೇ ಆಗಿತ್ತು.

ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ತಮ್ಮ ಮಗ ಬಿ.ವೈ ರಾಘವೇಂದ್ರ ನನ್ನು ಕಣಕ್ಕಿಳಿಸಿದ್ದರು. ದೈತ ಅಧಿಕಾರ ಬಲ, ಹಣ ಬಲ, ಜಾತಿ ಬಲದ ಉತ್ತುಂಗದಲ್ಲಿದ್ದ ಯಡಿಯೂರಪ್ಪ ಅವರ ವಿರುದ್ಧ ಕುಸಿದ ಆರೋಗ್ಯ, ತಮ್ಮವರದ್ದೇ ವಿದ್ರೋಹಗಳಿಗೆ ಸಿಕ್ಕು ಬರಿಗೈ ಆದ ಬಂಗಾರಪ್ಪ ಅವರ ಬಳಿ ಉಳಿದದ್ದು ಅವರು ಜನರ ಮೇಲಿಟ್ಟಿದ್ದ ಅದಮ್ಯ ವಿಶ್ವಾಸ ಮತ್ತು ತಮ್ಮ ಎಂದಿನಂತೆ ಜನ್ಮಜಾತ ಛಲಗುಣ ಮಾತ್ರ.

ಇಡೀ ರಾಜ್ಯ ಇತರೆ ಲೋಕಸಭಾ ಕ್ಷೇತ್ರಗಳ ಚುನಾವಣೆಯೇ ಒಂದು ತೂಕವಾದರೆ, ಶಿವಮೊಗ್ಗ ಕ್ಷೇತ್ರದ ಚುನಾವಣೆಯೇ ಅವುಗಳಿಗೆ ಸರಿಸಮ ತೂಗುವ ಚುನಾವಣೆ ಆಗಿತ್ತು.

ಮತದಾನಕ್ಕೆ ಇನ್ನೂ ಆರು ದಿನ ಉಳಿದಿತ್ತು. ಶಿವಮೊಗ್ಗದ ಬಾಡಿಗೆ ಮನೆಯೊಂದರಲ್ಲಿ ಸೋಪಾ ಮೇಲೆ ದಿವ್ಯ ಮೌನ ಧರಿಸಿ ಕುಳಿತಿದ್ದರು ಬಂಗಾರಪ್ಪ.

ಕಾಗೋಡು ತಿಮ್ಮಪ್ಪ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಪ್ರಮುಖ ಮುಖಂಡರು ಬಂಗಾರಪ್ಪ ಅವರ ಮುಂದೆ ಕುಳಿತು  ‘ಸರ್ ಚುನಾವಣೆ ಗೆ ಸ್ವಲ್ಪ ದುಡ್ಡು ಬೇಕು. ಒಂದೆರೆಡು ಕೋಟಿ ಆದರೆ ಗೆಲುವು ನಮ್ಮದೆ’ ಎಂದು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚುನಾವಣೆಯ “ತಂತ್ರ” ಗಳಿಗೆ ಮತದಾನಕ್ಕೆ ಮುಂಚೆಯೇ ಕಾಂಗ್ರೆಸ್‌ ಧೂಳಿಪಟವಾಗಿತ್ತು. ಮೌನ ಮುರಿದ ಬಂಗಾರಪ್ಪ ” ನೋ…. ನನ್ನತ್ರ ದುಡ್ಡಿಲ್ಲ, ಇಷ್ಟ‌ಇದ್ರೆ ಪಕ್ಷದಿಂದ ಕೆಲ್ಸ ಮಾಡಿ‌ ಇಲ್ಲವಾದರೆ ಬಿಟ್ಟೋಗಿ” ಎಂದು ಗುಡುಗಿಬಿಟ್ಟರು.

ಹಣ ವ್ಯವಸ್ಥೆಗೆ ಕಾಗೋಡು ತಿಮ್ಮಪ್ಪ ಮಾಡಿದ ಪ್ರಯತ್ನಗಳೆಲ್ಲಾ ಬಂಗಾರಪ್ಪನವರ ಮುಂದೆ ಫಲ ಕೊಡಲಿಲ್ಲ.
ಬಂಗಾರಪ್ಪ ಅಕ್ಷರಶಃ ಬರಿಗೈ ಆಗಿ ಕುಳಿತಿದ್ದರು. ಮಗ ಕುಮಾರ ಬಂಗಾರಪ್ಪ ಅವರಿಂದ ಹಣಸಹಾಯ ಪಡೆಯುವ ಕಾಂಗ್ರೆಸ್‌ ಮುಖಂಡರ ಪ್ರಯತ್ನವು ನೆಗೆದುಬಿತ್ತು. ಕಾಗೋಡು ತಿಮ್ಮಪ್ಪಾದಿಯಾಗಿ ದಿಕ್ಕು ತೋಚದೆ ಎಲ್ಲರೂ ಮನೆಯಿಂದ ಹೊರಬಿದ್ದರು.

ಅದುವರೆಗೂ ಮೂಕಪ್ರೇಕ್ಷಕನಂತೆ ಸಂದರ್ಶನಕ್ಕಾಗಿ‌ ಕಾದು ಕುಳಿತಿದ್ದ ನನ್ನ ಕಡೆ ನೋಡಿದ ಬಂಗಾರಪ್ಪನವರು
ಮಾತು ಶುರುವಿಟ್ಟುಕೊಂಡರು.

ಸಂದರ್ಶನದ ಮುಗಿದ ನಂತರದ ಆಫ್ ದಿ ರೆಕಾರ್ಡ್ ನಲ್ಲಿ…

“ಸರ್, ಚುನಾವಣೆಯ ಕೊನೆಯ ಘಳಿಗೆಯಲ್ಲಿ ದುಡ್ಡಿಲ್ಲ ಅಂದ್ರೆ ಚುನಾವಣೆ ನಿಮಗೆ ಕಷ್ಟ ಆಗೋಲ್ವ”? ಎಂದೆ.

“ಸೀ ಮಿಸ್ಟರ್ ರವಿಕುಮಾರ್, (ಅವರು ವಯಸ್ಸಿನಲ್ಲಿ ಚಿಕ್ಕವರನ್ನೂ ಬಹುವಚನದಿಂದಲೆ ಮಾತಾಡಿಸುವ ವಿವೇಕ ಇಟ್ಟುಕೊಂಡವರು) ನಾನು ಮನಸ್ಸು ಮಾಡಿದರೆ ಒಂದೆರಡು ಕೋಟಿ ತರೋದು ಕಷ್ಟ ಅಲ್ಲ, ಆದರೆ ಈ ಯಡಿಯೂರಪನ ಹಡಬೆ ದುಡ್ಡಿನ ಮುಂದೆ ನನ್ನ ದುಡ್ಡು ನಡೆಯೋಲ್ಲ”

ಒಂದು‌ ಲೋಟ ಮಜ್ಜಿಗೆ ಕುಡಿದು ಸಾವಾರಿಸಿಕೊಂಡು ಮಾತು ಮುಂದುವರೆಸಿದರು…

” ರವಿಕುಮಾರ್, ಈ ಚುನಾವಣೆ ದುಡ್ಡಿನ ಮೇಲೆ ನಡೀತಿದೆ. ಯಡಿಯೂರಪ್ಪನತ್ರ ಅಧಿಕಾರ, ಹಣ, ಸಿಸ್ಟಮ್ ಇದೆ. ನಾನು ಒಂದು ಓಟಿಗೆ 500 ಕೊಟ್ರೆ ಈ ಯಡಿಯೂರಪ್ಪ ಸಾವ್ರ ಕೊಡ್ತಾರೆ, ನಾನು ಸಾವ್ರ ಕೊಟ್ರೆ, ಅವ್ರು ಎರಡ್ಸಾವ್ರ ಕೊಡ್ತಾರೆ, ಒಂದು ಬೂತ್ ಗೆ ನಾನು ಐದು ಸಾವ್ರ ಕೊಟ್ರೆ, ಅವ್ರು ಹತ್ತು‌ಕೊಡ್ತಾರೆ. ಯಡಿಯೂರಪ್ಪನ ದುಡ್ಡಿನ ಮುಂದೆ ನನ್ನ ದುಡ್ಡು ಓಡೋಲ್ಲ. ದುಡ್ಡಿನ ಮೂಲಕ ಯಡಿಯೂರಪ್ಪನನ್ನು ಈಗ ಸೋಲಿಸೋಕೆ ಆಗೋಲ್ಲ,

ಅದ್ಕೆ ನಾನು ದುಡ್ಡಿಲ್ಲದೆ ಜನರ ಮುಂದೆ ಹೋಗ್ತಿನಿ. ಜನ ದುಡ್ಡಿಗೆ ಓಟಾಕ್ತಾರೋ, ನಾನು ಜನರ ಮೇಲಿಟ್ಟಿರುವ ನಂಬಿಕೆಗೆ ಕೈ ಹಿಡಿತಾರೋ ನೋಡೇ ಬಿಡ್ತಿನಿ. It’s one experiment in my life… Mr.Ravikumar ” ನಾನು ಇಂತಹ experiment ಗಳನ್ನೆ ಮಾಡ್ಕೊಂಡ್ ಬಂದಿದಿನಿ. ಈ ಬಂಗಾರಪ್ಪ ಸೋತಿದ್ದೇ ಇಲ್ಲ.

ಈ ಜನಕ್ಕೆ ನಾನು ಬೇಕಾ? ಯಡಿಯೂರಪ್ಪನ ಹಡಬೆ ದುಡ್ಡು ಬೇಕಾ? ನೋಡೋಣ”

ಬಂಗಾರಪ್ಪ ಅವರ ಈ ಆತ್ಮವಿಶ್ವಾಸ ಕಂಡು ನನಗೆ ವಿಸ್ಮಯ ಅನಿಸಿತು. !

ಯಡಿಯೂರಪ್ಪನವರ ಅಬ್ಬರದ ಮುಂದೆ ಚುನಾವಣೆಯನ್ನು ಕಾಂಗ್ರೆಸ್‌ ಕೈ ಚೆಲ್ಲಿತ್ತು. ಅನಾರೋಗ್ಯದ ದೈಹಿಕ ನೋವು ನುಂಗಿಕೊಳ್ಳುತ್ತಲೆ ಬಂಗಾರಪ್ಪ ಏಕಾಂಗಿಯಾಗಿ ಹಳ್ಳಿ ಹಳ್ಳಿ ತಿರುಗಿದರು.

ಬಿ ವೈ ರಾಘವೇಂದ್ರ ಪರ ನಿಂತ ಮಠಗಳ ಜನ್ಮ‌ಜಾಲಾಡಿದರು. ನಾಕು ಗೊಡ್ಡೆಮ್ಮೆ ಸಾಕಿದ ಮಾತ್ರಕ್ಕೆ ಗೋ ರಕ್ಷಕನಾಗೋಲ್ಲ. ನಮ್ಮಂಗೆ ಸಗಣಿ, ಗಂಜಲ ಬಾಚಿ ಬಳಿ ಬೇಕು ಎಂದು ಈ ಭಾಗದ ಸ್ವಾಮಿಯನ್ನು ಬಹಿರಂಗವಾಗಿ ಈಡಾಡಿದರು.

ಮತದಾನದ ದಿನ ಶೇ.90 ರಷ್ಟು ಬೂತ್ ಗಳಲ್ಲಿ ಬಂಗಾರಪ್ಪ ಪರ ಹ್ಯಾಂಡ್ ಬಿಲ್ ಹಿಡಿಯಲು ಒಬ್ಬ ಕಾರ್ಯಕರ್ತ ಕಾಣಲಿಲ್ಲ. ಅವರೇ ಸೃಷ್ಟಿದ ಹಾಲಪ್ಪ, ಗೋಪಾಲಕೃಷ್ಣ ಅವರೆಲ್ಲಾ ಬೆನ್ನಿಗೆ ಇರಿದಿದ್ದರು.

ಯಡಿಯೂರಪ್ಪ ಅವರ “ಪ್ರಭಾವ” ಕ್ಕೆ ಮರುಳಾದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ತನ್ನ ಬೆಂಬಲಿಗರಿಂದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ದಾಂಧಲೆ ನಡೆಸಿದರು. ಬೀಸಿ ಬಂದ ಕಲ್ಲಿಗೆ ಎದ್ದು ನಿಂತು ಎದೆ ಕೊಟ್ಟ ಬಂಗಾರಪ್ಪ ಅವರು ತೋಳೇರಿಸಿ ಅಬ್ಬರಿಸಿದರು.

ಫಲಿತಾಂಶ ಹೊರಬಿದ್ದಾಗ ಯಡಿಯೂರಪ್ಪ ಅವರ ಪುತ್ರರತ್ನ ರಾಘವೇಂದ್ರ ಕೇವಲ 52.893 ಮತಗಳಿಂದ ಗೆಲುವು ಸಾಧಿಸಿದರು.

ಬಂಗಾರಪ್ಪ ಅವರನ್ನು ಠೇವಣಿ ಕಳೆದು ಹೀನಾಯ ಸೋಲಿಗೆ ದೂಡಬೇಕೆಂದು ಸಕಲ ಸಂಪತ್ತು, ದಂಡು- ದಳ, ತಂತ್ರ, ಮಂತ್ರಗಳೊಂದಿಗೆ ಹಠಕ್ಕಿಳಿದಿದ್ದ ಯಡಿಯೂರಪ್ಪ ಫಲಿತಾಂಶದ ಲೀಡ್ ಕೇಳಿ ಕೆರಳಿ‌ ಕೆಂಡವಾದರು. ತಮ್ಮದೇ ಸಂಪುಟ ಸಚಿವ ಈಶ್ವರಪ್ಪ ನವರ ಮೇಲೆ ಹರಿಹಾಯ್ದರು ಕೂಡ. ಮಗನ ವಿಜಯೋತ್ಸವ ಅವರಿಗೆ ಅಪಥ್ಯವಾಗಿತ್ತು.

ಅಕ್ಷರಶಃ ಬರಿಗೈ ನಿರ್ಗತಿಕನಾಗಿ ನಿಂತಿದ್ದ ಬಂಗಾರಪ್ಪ ಅವರು ಕೇವಲ 52 ಸಾವಿರ ಮತಗಳ ಅಂತರದಲ್ಲಿ ತಾಂತ್ರಿಕವಾಗಿ ಸೋತಿದ್ದರು. ಆದರೆ ಜನರ ಮೇಲಿಟ್ಟಿದ್ದ ಅವರ ವಿಶ್ವಾಸ ಯಾವ ಖರೀದಿಗೂ ಒಳಗಾಗದೆ ಅವರನ್ನು ನೈತಿಕವಾಗಿ ಗೆಲ್ಲಿಸಿತ್ತು.

ಈ ಸೋಲು, ತಮ್ಮವರೇ ಎಸಗಿದ ವಿದ್ರೋಹಗಳು ಬಂಗಾರಪ್ಪ ಅವರನ್ನು ಇನ್ನಿಲ್ಲದೆ ಬಾಧಿಸಿಬಿಟ್ಟಿತು…

ಈ ನೋವನ್ನು ನುಂಗಿಕೊಂಡೆ ಅವರು ವಿರೋಚಿತವಾಗಿ ನಿರ್ಗಮಿಸಿದರು.

ಇವತ್ತು ಸೊರಬದಲ್ಲಿ ಬಂಗಾರಪ್ಪ ಅವರ 87 ನೇ ಜನ್ಮದಿನೋತ್ಸವ ಸಮಾರಂಭವನ್ನು ಪುತ್ರ ‌ಕುಮಾರ್ ಬಂಗಾರಪ್ಪ ಆಯೋಜಿಸಿದ್ದು ಇದನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬಂಗಾರಪ್ಪ ಅವರನ್ನು ಕೊಂಡಾಡಿದರು. ಅವರ ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಬದುಕಿದ್ದಾಗ ತನಗೆ ರಾಜಕೀಯ ಅಸ್ತಿತ್ವ ಕೊಟ್ಟ ತನ್ನ ಅಪ್ಪನನ್ನು ಕೌಟುಂಬಿಕವಾಗಿ, ರಾಜಕೀಯವಾಗಿ ಕಾಡಿದ ಕುಮಾರ ಬಂಗಾರಪ್ಪ ಇದ್ದಕ್ಕಿದ್ದಂತೆ ಅಪ್ಪನ ಜನ್ಮದಿನವನ್ನು ಅದ್ಧೂರಿಯಾಗಿ ನಡೆಸಿದರು. ಅದನ್ನು ಯಡಿಯೂರಪ್ಪ ಉದ್ಘಾಟಿಸಿದರು. ಎಂತಹ ವೈರುಧ್ಯ ನೋಡಿ!

ಇದೆಲ್ಲಾ ನೋಡಿದ ದಾರಿಹೋಕನೊಬ್ಬನ ಬಾಯಿಂದ ಹೊರಬಿದ್ದ ಮಾತೆಂದೆರೆ…

“ಬದುಕಿದ್ದಾಗ್ಲೇ ಬಂಗಾರಪ್ಪನ್ನ ಸಮಾಧಿ ಮಾಡಿ ಈಗ ಅವ್ರ ಸ್ಮಾರಕ ಮಾಡೋಕೆ ಕಾಸು ಕೊಟ್ಟವ್ರೆ” ! ಥೂ…..!

ಅದೇನೆ ಇರಲಿ, ಬಂಗಾರಪ್ಪ ಸರ್ ನಿಮಗೆ‌ ಜನ್ಮದಿನದ ಶುಭಾಶಯಗಳು.

  • ಎನ್.ರವಿಕುಮಾರ್ ಟೆಲೆಕ್ಸ್

(ರವಿಕುಮಾರ್ ಪತ್ರಕರ್ತರು ಮತ್ತು ಯುವ ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....