Homeಕರ್ನಾಟಕಎಸ್.ಬಂಗಾರಪ್ಪನವರ 87ನೇ ಜನ್ಮದಿನ: ಆತ್ಮವಿಶ್ವಾಸದ ಪ್ರತೀಕ...

ಎಸ್.ಬಂಗಾರಪ್ಪನವರ 87ನೇ ಜನ್ಮದಿನ: ಆತ್ಮವಿಶ್ವಾಸದ ಪ್ರತೀಕ…

ಇದೆಲ್ಲಾ ನೋಡಿದ ದಾರಿಹೋಕನೊಬ್ಬನ ಬಾಯಿಂದ ಹೊರಬಿದ್ದ ಮಾತೆಂದೆರೆ... "ಬದುಕಿದ್ದಾಗ್ಲೇ ಬಂಗಾರಪ್ಪನ್ನ ಸಮಾಧಿ ಮಾಡಿ ಈಗ ಅವ್ರ ಸ್ಮಾರಕ ಮಾಡೋಕೆ ಕಾಸು ಕೊಟ್ಟವ್ರೆ" ! ಥೂ.....!

- Advertisement -
- Advertisement -

2009 ರ ಲೋಕಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಸ್.ಬಂಗಾರಪ್ಪ ಅವರ ಪಾಲಿಗೆ ಈ ಚುನಾವಣೆ “ಮಾಡು ಇಲ್ಲ ಮಡಿ” ಎಂಬ ವಿರೋಚಿತ ಹೋರಾಟವೇ ಆಗಿತ್ತು.

ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ತಮ್ಮ ಮಗ ಬಿ.ವೈ ರಾಘವೇಂದ್ರ ನನ್ನು ಕಣಕ್ಕಿಳಿಸಿದ್ದರು. ದೈತ ಅಧಿಕಾರ ಬಲ, ಹಣ ಬಲ, ಜಾತಿ ಬಲದ ಉತ್ತುಂಗದಲ್ಲಿದ್ದ ಯಡಿಯೂರಪ್ಪ ಅವರ ವಿರುದ್ಧ ಕುಸಿದ ಆರೋಗ್ಯ, ತಮ್ಮವರದ್ದೇ ವಿದ್ರೋಹಗಳಿಗೆ ಸಿಕ್ಕು ಬರಿಗೈ ಆದ ಬಂಗಾರಪ್ಪ ಅವರ ಬಳಿ ಉಳಿದದ್ದು ಅವರು ಜನರ ಮೇಲಿಟ್ಟಿದ್ದ ಅದಮ್ಯ ವಿಶ್ವಾಸ ಮತ್ತು ತಮ್ಮ ಎಂದಿನಂತೆ ಜನ್ಮಜಾತ ಛಲಗುಣ ಮಾತ್ರ.

ಇಡೀ ರಾಜ್ಯ ಇತರೆ ಲೋಕಸಭಾ ಕ್ಷೇತ್ರಗಳ ಚುನಾವಣೆಯೇ ಒಂದು ತೂಕವಾದರೆ, ಶಿವಮೊಗ್ಗ ಕ್ಷೇತ್ರದ ಚುನಾವಣೆಯೇ ಅವುಗಳಿಗೆ ಸರಿಸಮ ತೂಗುವ ಚುನಾವಣೆ ಆಗಿತ್ತು.

ಮತದಾನಕ್ಕೆ ಇನ್ನೂ ಆರು ದಿನ ಉಳಿದಿತ್ತು. ಶಿವಮೊಗ್ಗದ ಬಾಡಿಗೆ ಮನೆಯೊಂದರಲ್ಲಿ ಸೋಪಾ ಮೇಲೆ ದಿವ್ಯ ಮೌನ ಧರಿಸಿ ಕುಳಿತಿದ್ದರು ಬಂಗಾರಪ್ಪ.

ಕಾಗೋಡು ತಿಮ್ಮಪ್ಪ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಪ್ರಮುಖ ಮುಖಂಡರು ಬಂಗಾರಪ್ಪ ಅವರ ಮುಂದೆ ಕುಳಿತು  ‘ಸರ್ ಚುನಾವಣೆ ಗೆ ಸ್ವಲ್ಪ ದುಡ್ಡು ಬೇಕು. ಒಂದೆರೆಡು ಕೋಟಿ ಆದರೆ ಗೆಲುವು ನಮ್ಮದೆ’ ಎಂದು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚುನಾವಣೆಯ “ತಂತ್ರ” ಗಳಿಗೆ ಮತದಾನಕ್ಕೆ ಮುಂಚೆಯೇ ಕಾಂಗ್ರೆಸ್‌ ಧೂಳಿಪಟವಾಗಿತ್ತು. ಮೌನ ಮುರಿದ ಬಂಗಾರಪ್ಪ ” ನೋ…. ನನ್ನತ್ರ ದುಡ್ಡಿಲ್ಲ, ಇಷ್ಟ‌ಇದ್ರೆ ಪಕ್ಷದಿಂದ ಕೆಲ್ಸ ಮಾಡಿ‌ ಇಲ್ಲವಾದರೆ ಬಿಟ್ಟೋಗಿ” ಎಂದು ಗುಡುಗಿಬಿಟ್ಟರು.

ಹಣ ವ್ಯವಸ್ಥೆಗೆ ಕಾಗೋಡು ತಿಮ್ಮಪ್ಪ ಮಾಡಿದ ಪ್ರಯತ್ನಗಳೆಲ್ಲಾ ಬಂಗಾರಪ್ಪನವರ ಮುಂದೆ ಫಲ ಕೊಡಲಿಲ್ಲ.
ಬಂಗಾರಪ್ಪ ಅಕ್ಷರಶಃ ಬರಿಗೈ ಆಗಿ ಕುಳಿತಿದ್ದರು. ಮಗ ಕುಮಾರ ಬಂಗಾರಪ್ಪ ಅವರಿಂದ ಹಣಸಹಾಯ ಪಡೆಯುವ ಕಾಂಗ್ರೆಸ್‌ ಮುಖಂಡರ ಪ್ರಯತ್ನವು ನೆಗೆದುಬಿತ್ತು. ಕಾಗೋಡು ತಿಮ್ಮಪ್ಪಾದಿಯಾಗಿ ದಿಕ್ಕು ತೋಚದೆ ಎಲ್ಲರೂ ಮನೆಯಿಂದ ಹೊರಬಿದ್ದರು.

ಅದುವರೆಗೂ ಮೂಕಪ್ರೇಕ್ಷಕನಂತೆ ಸಂದರ್ಶನಕ್ಕಾಗಿ‌ ಕಾದು ಕುಳಿತಿದ್ದ ನನ್ನ ಕಡೆ ನೋಡಿದ ಬಂಗಾರಪ್ಪನವರು
ಮಾತು ಶುರುವಿಟ್ಟುಕೊಂಡರು.

ಸಂದರ್ಶನದ ಮುಗಿದ ನಂತರದ ಆಫ್ ದಿ ರೆಕಾರ್ಡ್ ನಲ್ಲಿ…

“ಸರ್, ಚುನಾವಣೆಯ ಕೊನೆಯ ಘಳಿಗೆಯಲ್ಲಿ ದುಡ್ಡಿಲ್ಲ ಅಂದ್ರೆ ಚುನಾವಣೆ ನಿಮಗೆ ಕಷ್ಟ ಆಗೋಲ್ವ”? ಎಂದೆ.

“ಸೀ ಮಿಸ್ಟರ್ ರವಿಕುಮಾರ್, (ಅವರು ವಯಸ್ಸಿನಲ್ಲಿ ಚಿಕ್ಕವರನ್ನೂ ಬಹುವಚನದಿಂದಲೆ ಮಾತಾಡಿಸುವ ವಿವೇಕ ಇಟ್ಟುಕೊಂಡವರು) ನಾನು ಮನಸ್ಸು ಮಾಡಿದರೆ ಒಂದೆರಡು ಕೋಟಿ ತರೋದು ಕಷ್ಟ ಅಲ್ಲ, ಆದರೆ ಈ ಯಡಿಯೂರಪನ ಹಡಬೆ ದುಡ್ಡಿನ ಮುಂದೆ ನನ್ನ ದುಡ್ಡು ನಡೆಯೋಲ್ಲ”

ಒಂದು‌ ಲೋಟ ಮಜ್ಜಿಗೆ ಕುಡಿದು ಸಾವಾರಿಸಿಕೊಂಡು ಮಾತು ಮುಂದುವರೆಸಿದರು…

” ರವಿಕುಮಾರ್, ಈ ಚುನಾವಣೆ ದುಡ್ಡಿನ ಮೇಲೆ ನಡೀತಿದೆ. ಯಡಿಯೂರಪ್ಪನತ್ರ ಅಧಿಕಾರ, ಹಣ, ಸಿಸ್ಟಮ್ ಇದೆ. ನಾನು ಒಂದು ಓಟಿಗೆ 500 ಕೊಟ್ರೆ ಈ ಯಡಿಯೂರಪ್ಪ ಸಾವ್ರ ಕೊಡ್ತಾರೆ, ನಾನು ಸಾವ್ರ ಕೊಟ್ರೆ, ಅವ್ರು ಎರಡ್ಸಾವ್ರ ಕೊಡ್ತಾರೆ, ಒಂದು ಬೂತ್ ಗೆ ನಾನು ಐದು ಸಾವ್ರ ಕೊಟ್ರೆ, ಅವ್ರು ಹತ್ತು‌ಕೊಡ್ತಾರೆ. ಯಡಿಯೂರಪ್ಪನ ದುಡ್ಡಿನ ಮುಂದೆ ನನ್ನ ದುಡ್ಡು ಓಡೋಲ್ಲ. ದುಡ್ಡಿನ ಮೂಲಕ ಯಡಿಯೂರಪ್ಪನನ್ನು ಈಗ ಸೋಲಿಸೋಕೆ ಆಗೋಲ್ಲ,

ಅದ್ಕೆ ನಾನು ದುಡ್ಡಿಲ್ಲದೆ ಜನರ ಮುಂದೆ ಹೋಗ್ತಿನಿ. ಜನ ದುಡ್ಡಿಗೆ ಓಟಾಕ್ತಾರೋ, ನಾನು ಜನರ ಮೇಲಿಟ್ಟಿರುವ ನಂಬಿಕೆಗೆ ಕೈ ಹಿಡಿತಾರೋ ನೋಡೇ ಬಿಡ್ತಿನಿ. It’s one experiment in my life… Mr.Ravikumar ” ನಾನು ಇಂತಹ experiment ಗಳನ್ನೆ ಮಾಡ್ಕೊಂಡ್ ಬಂದಿದಿನಿ. ಈ ಬಂಗಾರಪ್ಪ ಸೋತಿದ್ದೇ ಇಲ್ಲ.

ಈ ಜನಕ್ಕೆ ನಾನು ಬೇಕಾ? ಯಡಿಯೂರಪ್ಪನ ಹಡಬೆ ದುಡ್ಡು ಬೇಕಾ? ನೋಡೋಣ”

ಬಂಗಾರಪ್ಪ ಅವರ ಈ ಆತ್ಮವಿಶ್ವಾಸ ಕಂಡು ನನಗೆ ವಿಸ್ಮಯ ಅನಿಸಿತು. !

ಯಡಿಯೂರಪ್ಪನವರ ಅಬ್ಬರದ ಮುಂದೆ ಚುನಾವಣೆಯನ್ನು ಕಾಂಗ್ರೆಸ್‌ ಕೈ ಚೆಲ್ಲಿತ್ತು. ಅನಾರೋಗ್ಯದ ದೈಹಿಕ ನೋವು ನುಂಗಿಕೊಳ್ಳುತ್ತಲೆ ಬಂಗಾರಪ್ಪ ಏಕಾಂಗಿಯಾಗಿ ಹಳ್ಳಿ ಹಳ್ಳಿ ತಿರುಗಿದರು.

ಬಿ ವೈ ರಾಘವೇಂದ್ರ ಪರ ನಿಂತ ಮಠಗಳ ಜನ್ಮ‌ಜಾಲಾಡಿದರು. ನಾಕು ಗೊಡ್ಡೆಮ್ಮೆ ಸಾಕಿದ ಮಾತ್ರಕ್ಕೆ ಗೋ ರಕ್ಷಕನಾಗೋಲ್ಲ. ನಮ್ಮಂಗೆ ಸಗಣಿ, ಗಂಜಲ ಬಾಚಿ ಬಳಿ ಬೇಕು ಎಂದು ಈ ಭಾಗದ ಸ್ವಾಮಿಯನ್ನು ಬಹಿರಂಗವಾಗಿ ಈಡಾಡಿದರು.

ಮತದಾನದ ದಿನ ಶೇ.90 ರಷ್ಟು ಬೂತ್ ಗಳಲ್ಲಿ ಬಂಗಾರಪ್ಪ ಪರ ಹ್ಯಾಂಡ್ ಬಿಲ್ ಹಿಡಿಯಲು ಒಬ್ಬ ಕಾರ್ಯಕರ್ತ ಕಾಣಲಿಲ್ಲ. ಅವರೇ ಸೃಷ್ಟಿದ ಹಾಲಪ್ಪ, ಗೋಪಾಲಕೃಷ್ಣ ಅವರೆಲ್ಲಾ ಬೆನ್ನಿಗೆ ಇರಿದಿದ್ದರು.

ಯಡಿಯೂರಪ್ಪ ಅವರ “ಪ್ರಭಾವ” ಕ್ಕೆ ಮರುಳಾದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ತನ್ನ ಬೆಂಬಲಿಗರಿಂದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ದಾಂಧಲೆ ನಡೆಸಿದರು. ಬೀಸಿ ಬಂದ ಕಲ್ಲಿಗೆ ಎದ್ದು ನಿಂತು ಎದೆ ಕೊಟ್ಟ ಬಂಗಾರಪ್ಪ ಅವರು ತೋಳೇರಿಸಿ ಅಬ್ಬರಿಸಿದರು.

ಫಲಿತಾಂಶ ಹೊರಬಿದ್ದಾಗ ಯಡಿಯೂರಪ್ಪ ಅವರ ಪುತ್ರರತ್ನ ರಾಘವೇಂದ್ರ ಕೇವಲ 52.893 ಮತಗಳಿಂದ ಗೆಲುವು ಸಾಧಿಸಿದರು.

ಬಂಗಾರಪ್ಪ ಅವರನ್ನು ಠೇವಣಿ ಕಳೆದು ಹೀನಾಯ ಸೋಲಿಗೆ ದೂಡಬೇಕೆಂದು ಸಕಲ ಸಂಪತ್ತು, ದಂಡು- ದಳ, ತಂತ್ರ, ಮಂತ್ರಗಳೊಂದಿಗೆ ಹಠಕ್ಕಿಳಿದಿದ್ದ ಯಡಿಯೂರಪ್ಪ ಫಲಿತಾಂಶದ ಲೀಡ್ ಕೇಳಿ ಕೆರಳಿ‌ ಕೆಂಡವಾದರು. ತಮ್ಮದೇ ಸಂಪುಟ ಸಚಿವ ಈಶ್ವರಪ್ಪ ನವರ ಮೇಲೆ ಹರಿಹಾಯ್ದರು ಕೂಡ. ಮಗನ ವಿಜಯೋತ್ಸವ ಅವರಿಗೆ ಅಪಥ್ಯವಾಗಿತ್ತು.

ಅಕ್ಷರಶಃ ಬರಿಗೈ ನಿರ್ಗತಿಕನಾಗಿ ನಿಂತಿದ್ದ ಬಂಗಾರಪ್ಪ ಅವರು ಕೇವಲ 52 ಸಾವಿರ ಮತಗಳ ಅಂತರದಲ್ಲಿ ತಾಂತ್ರಿಕವಾಗಿ ಸೋತಿದ್ದರು. ಆದರೆ ಜನರ ಮೇಲಿಟ್ಟಿದ್ದ ಅವರ ವಿಶ್ವಾಸ ಯಾವ ಖರೀದಿಗೂ ಒಳಗಾಗದೆ ಅವರನ್ನು ನೈತಿಕವಾಗಿ ಗೆಲ್ಲಿಸಿತ್ತು.

ಈ ಸೋಲು, ತಮ್ಮವರೇ ಎಸಗಿದ ವಿದ್ರೋಹಗಳು ಬಂಗಾರಪ್ಪ ಅವರನ್ನು ಇನ್ನಿಲ್ಲದೆ ಬಾಧಿಸಿಬಿಟ್ಟಿತು…

ಈ ನೋವನ್ನು ನುಂಗಿಕೊಂಡೆ ಅವರು ವಿರೋಚಿತವಾಗಿ ನಿರ್ಗಮಿಸಿದರು.

ಇವತ್ತು ಸೊರಬದಲ್ಲಿ ಬಂಗಾರಪ್ಪ ಅವರ 87 ನೇ ಜನ್ಮದಿನೋತ್ಸವ ಸಮಾರಂಭವನ್ನು ಪುತ್ರ ‌ಕುಮಾರ್ ಬಂಗಾರಪ್ಪ ಆಯೋಜಿಸಿದ್ದು ಇದನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬಂಗಾರಪ್ಪ ಅವರನ್ನು ಕೊಂಡಾಡಿದರು. ಅವರ ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಬದುಕಿದ್ದಾಗ ತನಗೆ ರಾಜಕೀಯ ಅಸ್ತಿತ್ವ ಕೊಟ್ಟ ತನ್ನ ಅಪ್ಪನನ್ನು ಕೌಟುಂಬಿಕವಾಗಿ, ರಾಜಕೀಯವಾಗಿ ಕಾಡಿದ ಕುಮಾರ ಬಂಗಾರಪ್ಪ ಇದ್ದಕ್ಕಿದ್ದಂತೆ ಅಪ್ಪನ ಜನ್ಮದಿನವನ್ನು ಅದ್ಧೂರಿಯಾಗಿ ನಡೆಸಿದರು. ಅದನ್ನು ಯಡಿಯೂರಪ್ಪ ಉದ್ಘಾಟಿಸಿದರು. ಎಂತಹ ವೈರುಧ್ಯ ನೋಡಿ!

ಇದೆಲ್ಲಾ ನೋಡಿದ ದಾರಿಹೋಕನೊಬ್ಬನ ಬಾಯಿಂದ ಹೊರಬಿದ್ದ ಮಾತೆಂದೆರೆ…

“ಬದುಕಿದ್ದಾಗ್ಲೇ ಬಂಗಾರಪ್ಪನ್ನ ಸಮಾಧಿ ಮಾಡಿ ಈಗ ಅವ್ರ ಸ್ಮಾರಕ ಮಾಡೋಕೆ ಕಾಸು ಕೊಟ್ಟವ್ರೆ” ! ಥೂ…..!

ಅದೇನೆ ಇರಲಿ, ಬಂಗಾರಪ್ಪ ಸರ್ ನಿಮಗೆ‌ ಜನ್ಮದಿನದ ಶುಭಾಶಯಗಳು.

  • ಎನ್.ರವಿಕುಮಾರ್ ಟೆಲೆಕ್ಸ್

(ರವಿಕುಮಾರ್ ಪತ್ರಕರ್ತರು ಮತ್ತು ಯುವ ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...